Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದಿನಾಂಕ 05-05-2023ನೇ ಶುಕ್ರವಾರದಂದು ನಗರದ ಬಲ್ಮಠದಲ್ಲಿರುವ ಬಜಾಜ್ ಸುಪ್ರೀಮ್ ಕಛೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ್ ಎಸ್. ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಬಜಾಜ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀ ರಾಘವೇಂದ್ರ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. “ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಇತಿಹಾಸ ಇದೆ, ಚರಿತ್ರೆ ಇದೆ. ಕ.ಸಾ.ಪ. ಎನ್ನುವುದು ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತ ಮತ್ತು ಕನ್ನಡದ ಅಸ್ಮಿತೆಯ ದ್ಯೋತಕ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮನೆಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ಆಂಗ್ಲ ಭಾಷೆಯ ಮೋಹದಿಂದ ನಮ್ಮ ಆಡುಭಾಷೆ ಹಾಗೂ ಮಾತೃ ಭಾಷೆಯಾದ ಕನ್ನಡವನ್ನು ಕೀಳಾಗಿ ಕಾಣಬಾರದು. ತಾವು ಕನ್ನಡದಲ್ಲಿ ವ್ಯವಹರಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ…
ಮುಡಿಪು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ದಿನಾಂಕ 05-05-2023ರಂದು ದೇರಳಕಟ್ಟೆಯ ಕಂಫರ್ಟ್ ಇನ್ ಸಭಾಂಗಣದಲ್ಲಿ ನಡೆಯಿತು. ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ವಿಶ್ರಾಂತ ನಿರ್ದೇಶಕ ಪ್ರೊ ಪಿ. ಶ್ರೀಕೃಷ್ಣ ಭಟ್ ಅವರು ‘ಕನ್ನಡ ನಾಡು ನುಡಿ : ಪರಿಷತ್ತಿನ ಜವಾಬ್ದಾರಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. “ಸಾಹಿತ್ಯ ಪರಿಷತ್ತು ಆರಂಭದಲ್ಲಿ ರಾಜಪ್ರಭುತ್ವದ ನೇತೃತ್ವದಲ್ಲಿದ್ದು ಕಾಸರಗೋಡಿನ ಸಾಹಿತ್ಯ ಸಮ್ನೇಳನದ ಬಳಿಕ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯ ತೆಗೆದುಕೊಂಡಿತು. ಅಂದಿನಿಂದಲೂ ಸಾಹಿತ್ಯ ಪರಿಷತ್ತು ಪ್ರಭುತ್ವದ ಅಡಿಯಾಳಾಗದೇ ಕನ್ನಡ ನಾಡು ನುಡಿ ಸಂವರ್ಧನೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸಿದೆ. ಸಾಹಿತ್ಯ ಪರಿಷತ್ತು ಬೆಳ್ಳಾವೆ, ಮಾಸ್ತಿ, ಡಿವಿಜಿ ಮೊದಲಾದ ಹಲವು ಸಾಹಿತಿಗಳ ಸಮರ್ಥ ಮುಂದಾಳತ್ವದಲ್ಲಿ ನಿಘಂಟು, ಹಳೆಗನ್ನಡ ಸಾಹಿತ್ಯ, ಗದ್ಯಾನುವಾದ ಮುಂತಾದ ಮೌಲಿಕ ಕೃತಿಗಳ ಪ್ರಕಟಣೆಯ ಮೂಲಕ ಅಧ್ಯಯನ ಮತ್ತು ಜ್ಞಾನಕೇಂದ್ರಿತ ಕಾರ್ಯಗಳನ್ನು ಮಾಡಿದೆ. ಈ ಪರಂಪರೆಯ ಅರಿವು ನಮಗಿರಬೇಕು”…
ಬೆಂಗಳೂರು : ‘ಸ್ಟೇಜ್ ಬೆಂಗಳೂರು’ ಪ್ರಸ್ತುತ ಪಡಿಸುವ ಗಿರೀಶ್ ಜಿಂದಪ್ಪ ಪರಿಕಲ್ಪನೆಯ ವಿಶಾಲ್ ಕಶ್ಯಪ್ (ನಿನಾಸಂ) ನಿರ್ದೇಶನದ ‘ನೋನಗಾನ್’ ನಾಟಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 9ನೇ ತಾರೀಖು ಸಂಜೆ 7.15ಕ್ಕೆ ಪ್ರದರ್ಶನಗೊಳ್ಳಲಿದೆ. ನಾಟಕದ ವಿವರಣೆ ನೋನಗನ್ ಒಂದು ವಿಭಿನ್ನವಾದ ಪ್ರಯೋಗಾತ್ಮಕ ನಾಟಕವಾಗಿದೆ. ಈ ನಾಟಕವನ್ನು ರಚಿಸಿದ್ದು ಸ್ವತಃ ಈ ನಾಟಕದ ನಟರು. ಒಬ್ಬೊಬ್ಬ ನಟರು ಒಂದೊಂದು ಪಾತ್ರವನ್ನು ರಚಿಸಿದ್ದಾರೆ. ಒಟ್ಟು 9 ನಟರಿದ್ದು 9 ಪಾತ್ರವನ್ನು ಅವರೇ ಆಯ್ಕೆ ಮಾಡಿ ರಚಿಸಿದ್ದಾರೆ. ಈ ಸಮಾಜದಲ್ಲಿರುವ ಒಡಕು, ಭ್ರಷ್ಟಾಚಾರ ಹಾಗೂ ಸಾಮಾನ್ಯ ಜನರ ಕಷ್ಟವನ್ನು ಆ ಪಾತ್ರವೇ ಹೇಳುತ್ತವೆ. ಒಂದು ವಿಭಿನ್ನಾದ ಪ್ರಯೋಗವನ್ನು ಮಾಡಬೇಕು ಎಂಬ ಹಂಬಲ ನಮ್ಮ ಸ್ಟೇಜ್ ಬೆಂಗಳೂರು ತಂಡದ್ದು. ನಿರ್ದೇಶಕ ವಿಶಾಲ್ ಕಶ್ಯಪ್ ಕೋಲ್ಕತ್ತಾದಲ್ಲಿ ಹುಟ್ಟಿದ ಇವರು ಸುಮಾರು 15 ವರ್ಷದಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿರುಗಾಳಿ, ತುಘಲಕ್, ವಿಜಯನಾರಸಿಂಹ, ಕ್ರಮವಿಕ್ರಮ, ರಾವಿನದಿ ದಂಡೆಯಲ್ಲಿ, ದಿ ಮರ್ಚೆಂಟ್ ಆಫ್ ವೆನಿಸ್ ಹೀಗೆ 20ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.…
ಉಡುಪಿ: ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲ್ಲೂಕು ಘಟಕ ಹಾಗೂ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇವರ ಸಹಕಾರದಲ್ಲಿ ಉಡುಪಿಯ ಪಿಪಿಸಿಯ ಮಿನಿ ಆಡಿಟೋರಿಯಂನಲ್ಲಿ ದಿನಾಂಕ 05-05-2023ರಂದು ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. “ಕನ್ನಡ ಸಾಹಿತ್ಯ ಪರಿಷತ್ತಿಗೆ 109 ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ” ಎಂದು ಸಾಹಿತಿ ಶ್ರೀ ನಾರಾಯಣ ಮಡಿ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ. ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ರವಿರಾಜ್ ಎಚ್.ಪಿ. ವಹಿಸಿದ್ದರು. ಇದೇ ಸಂದರ್ಭದಲ್ಲಿ ಯಕ್ಷ ಪ್ರೇಮಿ ಶ್ರೀ ನಾರಾಯಣ…
ಚೆನ್ನೈ: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ಚೆನ್ನೈಯ ಮಧುರಧ್ವನಿ ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 13-05-2023, ಶನಿವಾರ ಸಂಜೆ ಗಂಟೆ 6ಕ್ಕೆ ಅರ್ಕೆ ಕನ್ವೆಂಷನ್ ಸೆಂಟರ್, ಮೈಲಾಪುರ್, ಚೆನ್ನೈ ಇಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 11 ಕಚೇರಿಗಳು ನಡೆದಿದ್ದು, ಈ 12ನೆಯ ಸಂಗೀತ ಕಚೇರಿಯು ಹೊರ ರಾಜ್ಯದಲ್ಲಿ ನಡೆಯುತ್ತಿರುವ ಪ್ರಪ್ರಥಮ ಕಾರ್ಯಕ್ರಮವಾಗಿರುತ್ತದೆ. ‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಶ್ರುತಿ ಎಸ್. ಭಟ್ ಚೆನ್ನೈ, ಶ್ರೇಯಾ ಕೊಳತ್ತಾಯ ಮಂಗಳೂರು, ಅತ್ರೆಯೀ ಕೃಷ್ಣಾ ಕಾರ್ಕಳ, ಅದಿತಿ ಬಿ. ಪ್ರಹ್ಲಾದ್ ಬೆಂಗಳೂರು, ದಿವ್ಯಶ್ರೀ…
ಕೋಟ : ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ಭಾನುವಾರ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ವತಿಯಿಂದ 15 ದಿನಗಳ ಕಾಲ ನಡೆದ ದಶಮಾನೋತ್ಸವದ ಯಕ್ಷಗಾನ ನೃತ್ಯ, ಅಭಿನಯ ತರಬೇತಿಯು ದಿನಾಂಕ 16-04-2023 ರಂದು ಉದ್ಘಾಟನೆಗೊಂಡು ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 30-04–2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಾಚನಗೈಯುತ್ತಾ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು “ಜೀವನದಲ್ಲಿ ದುಡ್ಡು ಮಾಡುವ ಕಲೆಯನ್ನು ನಮ್ಮ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ. ನಮ್ಮ ಹಿಂದಿನ ಪರಂಪರೆಯ ಆಚಾರ ವಿಚಾರ, ನೀತಿ ನಿಯಮ, ಕಲೆ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡುವತ್ತ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಯಕ್ಷಗಾನ ಕಲಾ ಕೇಂದ್ರದಂತಹ ಸಂಸ್ಥೆಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ” ಎಂದರು. ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಪಾರಂಪಳ್ಳಿಯ ನಿವೃತ್ತ ಅಧ್ಯಾಪಕ ಶ್ರೀನಿವಾಸ ಸೋಮಯಾಜಿ, ಎಲ್.ಐ.ಸಿ. ನಿವೃತ್ತ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಯಕ್ಷಗುರು ಸದಾನಂದ ಐತಾಳ, ರಾಜಶೇಖರ ಹೆಬ್ಬಾರ್, ರಾಮಚಂದ್ರ…
ಮಂಗಳೂರು : ‘ಭರತಾಂಜಲಿ’ (ರಿ.) ಕೊಟ್ಟಾರ ಮಂಗಳೂರು ಇವರು ‘ವಿಪ್ರ ವೇದಿಕೆ’ ಕೋಡಿಕಲ್ (ರಿ) ಇದರ ಸಹಕಾರದಲ್ಲಿ ಪ್ರಸ್ತುತಪಡಿಸುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ‘ನರಕಾಸುರ ವಧೆ’ – ‘ಗರುಡ ಗರ್ವಭಂಗ’ ಪ್ರಸಂಗದ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ದಿನಾಂಕ 07.05.2023ನೇ ಆದಿತ್ಯವಾರ ಸಂಜೆ 5:30ಕ್ಕೆ ಬೆನಕ ಸಭಾಭವನ ಕೋಡಿಕಲ್ ನಲ್ಲಿ ನಡೆಯಲಿದೆ. ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ, ವಿದ್ವಾನ್ ಶ್ರೀಧರ್ ಹೊಳ್ಳ ಇವರ ಘನ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ಮಹಿಳಾ ವಿಭಾಗದ ರಾಜ್ಯ ಸಹ ಸಂಚಾಲಕರಾದ ಶ್ರೀಮತಿ ಚೇತನಾ ಬಿ. ದತ್ತಾತ್ರೇಯ ಇವರು ಉದ್ಘಾಟನೆ ಮಾಡಲಿದ್ದಾರೆ. ವಿಪ್ರವೇದಿಕೆ ಕೋಡಿಕಲ್ ನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ವಿದ್ಯಾರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಟ್ರಸ್ಟಿಗಳು ಭರತಾಂಜಲಿ (ರಿ.) ಕೊಟ್ಟಾರ ಮತ್ತು ವಿಪ್ರ ವೇದಿಕೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವರಿಗೂ ಆದರದ…
ಕಾಸರಗೋಡು : ತಪಸ್ಯ ಕಲಾ ಸಾಹಿತ್ಯ ವೇದಿಕೆ (ರಿ) ಕೇರಳ, ಶಂಪಾ ಪ್ರತಿಷ್ಠಾನ (ರಿ) ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಲೇಖಕರ ಸಂಘ ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಶ್ರೀ ಅಯ್ಯಪ್ಪ ಸೇವಾ ಸಮಿತಿ ಬಾಯಿಕಟ್ಟಿ ಇವರ ಸಹಯೋಗದಲ್ಲಿ ‘ಬೆಳೆಸಿರಿ’ ಎಂಬ ಮಕ್ಕಳಿಗಾಗಿ ಲಲಿತಕಲಾ ಮಿಲನ ಕಾರ್ಯಕ್ರಮವನ್ನು 07.05.2023 ಭಾನುವಾರ ಗಂಟೆ 9.00ರಿಂದ 5.00ರವರೆಗೆ ಬಾಯಿಕಟ್ಟೆಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರ ರಚನೆ, ವ್ಯಂಗ್ಯ ಚಿತ್ರ ಪ್ರದರ್ಶನ, ಕಾರ್ಟೂನು ಪ್ರಾತ್ಯಕ್ಷಿಕೆ, ಚಿತ್ರ ಕಲಾ ಪ್ರದರ್ಶನ, ರಸಪ್ರಶ್ನೆ, ನೃತ್ಯ, ಸಂವಾದ ಸ್ಪರ್ಧೆಗಳು, ವಾಯಲಿನ್ ವಾದನ, ಭಜನೆ, ಹಾಡುಗಳು, ಹೊಸ ಕೃತಿಗಳ ಬಿಡುಗಡೆ, ಹಾಡುವ ಮತ್ತು ಇತರ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶವಿದೆ. ಕಾವ್ಯ ವಾಚನ, ಹಿರಿಯ ಕಲಾವಿದರೊಂದಿಗೆ ಸಂದರ್ಶನ, ಮಾರ್ಗದರ್ಶನ, ತಪಸ್ಯದ ಯುವ ಸದಸ್ಯರಿಂದ ಮನರಂಜನೆ ಹಾಗೂ ಡಾ. ಪ್ರಮೀಳಾ ಮಾಧವ್ ಅವರ ‘ಸ್ಪೂರ್ತಿ ಚೇತಸರು’ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ತಪಸ್ಯ (ಕೇರಳ) ಕಾಸರಗೋಡು ಇದರ…
ಉಡುಪಿ : ಯಕ್ಷ ಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥವಾಗಿ ನೀಡುವ ದತ್ತಿ ಪುರಸ್ಕಾರಕ್ಕೆ ಶ್ರೀ ದೇವದಾಸ್ ರಾವ್ ಕೂಡ್ಲಿಯವರು ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ದಿನಾಂಕ 05-05-2023ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ವಿತರಿಸಲಾಗುವುದು. ಈ ಕಾರ್ಯಕ್ರಮವು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ನಡೆಯಲಿದೆ. ನಾಗಪ್ಪಯ್ಯ ಕೂಡ್ಲಿ ಹಾಗೂ ಗಿರಿಜಮ್ಮ ದಂಪತಿಗಳ ಸುಪುತ್ರರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾರ್ಕೂರು ಮತ್ತು ಉಳ್ತೂರಿನಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಎನ್.ಜೆ.ಸಿ. ಬಾರ್ಕೂರು ಇಲ್ಲಿ ಪಡೆದಿರುತ್ತಾರೆ. ಯಕ್ಷಗಾನ ಶಿಕ್ಷಣವನ್ನು 1975-1976ರಲ್ಲಿ ಯಕ್ಷಗಾನ ಕೇಂದ್ರ ಉಡುಪಿ ಇಲ್ಲಿ ಪಡೆದಿರುತ್ತಾರೆ. ಶ್ರೀಯುತರು ಕಮಲಶಿಲೆ ಮೇಳ, ಮಾರಣಕಟ್ಟೆ ಮೇಳ, ಉಪ್ಪಿನಕುದ್ರು ಶ್ರೀ ಗಣೇಶ ಗೊಂಬೆಯಾಟ ತಂಡದಲ್ಲಿ ಹಲವು ವರ್ಷಗಳಿಂದ ಮದ್ದಲೆಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಹೆಗ್ಗೋಡಿನ ನೀನಾಸಂ ತಿರುಗಾಟದಲ್ಲಿ 2 ವರ್ಷ ಅನುಭವ ಹೊಂದಿದ ಇವರು ಮೈಸೂರಿನ ರಂಗಾಯಣ ತಂಡದಲ್ಲಿ, ಶ್ರೀಮಯ ಯಕ್ಷಗಾನ ಕೇಂದ್ರ ಗುಣವಂತೆಯಲ್ಲಿ, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕನಾಗಿ ಹಾಗೂ ಕೇಂದ್ರದ…
ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ಒಂದು ದಿನದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವವನ್ನು ಮೇ 7ರಂದು ಬೆಳಿಗ್ಗೆ 9.30ಕ್ಕೆ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಧಾರವಾಡದ ಕುಮಾರ್ ಮರಡೂರ್ ಅವರಿಂದ ಹಿಂದುಸ್ತಾನಿ ಗಾಯನ ಕಛೇರಿ ನಡೆಯಲಿದೆ. ಪಂ. ಕೈವಲ್ಯ ಕುಮಾರ್ ಗುರವ್ ರ ಶಿಷ್ಯ ಯುವಕ ಕಲಾವಿದರಾದ ಔರಂಗಾಬಾದ್ ನ ವಿಶಾಲ್ ಭಗವಾನ್ ರಾವ್ ಮಹರಗುಡೆ, ಸಿದ್ಧಾಪುರದ ಮೇಧಾ ಭಟ್, ಪಂ. ಗಣಪತಿ ಭಟ್ ಹಾಸಣಗಿರವರ ಶಿಷ್ಯ ಅಮಿತ್ ಕುಮಾರ್ ಬೆಂಗ್ರೆ ಅವರೂ ಸಹ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ. ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಮತ್ತು ಪ್ರಸಾದ್ ಕಾಮತ್ ಮತ್ತು ತಬಲಾದಲ್ಲಿ ಧಾರವಾಡದ ಶ್ರೀಧರ್ ಮಾಂಡ್ರೆ, ವಿಘ್ನೇಶ್ ಕಾಮತ್ ಸಹಕರಿಸಲಿದ್ದಾರೆ. ಅಕಾಡೆಮಿಯ ವಿದ್ಯಾರ್ಥಿಗಳಿಂದ ಲಘು ಶಾಸ್ತ್ರೀಯ ಸಂಗೀತ ವೈವಿಧ್ಯ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ದೀಪ ಬೆಳಗಿಸುವರು. ಟ್ರಸ್ಟಿನ ಲೋಲಾಕ್ಷಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ಜೆ.…