Subscribe to Updates
Get the latest creative news from FooBar about art, design and business.
Author: roovari
ಮುಂಬಯಿ : ‘ಕರ್ನಾಟಕ ಸಂಘ ರತ್ನ’ ಪ್ರಶಸ್ತಿ ಪುರಸ್ಕೃತ ಅಭಿನಯ ಮಂಟಪ (ರಿ) ಮುಂಬಯಿ ಇದರ 41ನೇಯ ವಾರ್ಷಿಕೋತ್ಸವದ ಪ್ರಯುಕ್ತ ‘ನೃತ್ಯ ವೈಭವ, ಸನ್ಮಾನ ಮತ್ತು ನಾಟಕ’ ಕಾರ್ಯಕ್ರಮವು ದಿನಾಂಕ 09-09-2023ರ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮನರ೦ಜನೆಯ ಅಂಗವಾಗಿ ಅಭಿನಯ ಮ೦ಟಪದ ಸದಸ್ಯರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ‘ನೃತ್ಯ ವೈಭವ’ ಹಾಗೂ ಅಭಿನಯ ಮಂಟಪದ ಸದಸ್ಯರಿಂದ ದಿ. ಯು.ಆರ್. ಚಂದರ್ ರಚನೆಯ ಹಾಗೂ ಶ್ರೀ ಕರುಣಾಕರ ಕೆ. ಕಾಪು ಇವರ ನಿರ್ದೇಶನದ ‘ಕಲ್ಕುಡ – ಕಲ್ಲುರ್ಟಿ’ ಚಾರಿತ್ರಿಕ ಜಾನಪದ ನಾಟಕದ ಪ್ರದರ್ಶನವಿದೆ. ಅಭಿನಯ ಮಂಟಪ (ರಿ.) ಮುಂಬಯಿ ಇದರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.
ಮೈಸೂರು: ನಗರದ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಅದಮ್ಯ ರಂಗ ಶಾಲೆಯು 30 ದಿನಗಳ ಅವಧಿಯ ರಂಗ ತರಬೇತಿ ಶಿಬಿರ ಆಯೋಜಿಸಿದ್ದು, ಹವ್ಯಾಸಿ ರಂಗಾಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಕೆ.ಜಿ.ಕೊಪ್ಪಲಿನ ಹೊಸನ್ಯಾಯಾಲಯದ ಮುಂಭಾಗದ ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ಸೆಪ್ಟೆಂಬರ್ 1ರಿಂದ ಅಕ್ಟೋಬರ್ 1ರವರೆಗೆ 30 ದಿನಗಳ ಕಾಲ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 9ರವರೆಗೆ ಶಿಸ್ತುಬದ್ಧವಾಗಿ ಶಿಬಿರವು ನಡೆಯಲಿದೆ. 18 ರಿಂದ 60 ವಯೋಮಿತಿಯೊಳಗಿನವರು ಈ ಅಭಿನಯ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದ ಅವಧಿಯಲ್ಲಿ ನಾಟಕವೊಂದನ್ನು ಆಯ್ಕೆ ಮಾಡಿಕೊಂಡು, ಶಿಬಿರಾರ್ಥಿಗಳಿಂದಲೇ ಅಭಿನಯ ಮಾಡಿಸಿ ಸಮಾರೋಪದಲ್ಲಿ ಪ್ರದರ್ಶನ ಮಾಡಲಾಗುವುದು. ಶಿಬಿರ ಪೂರ್ಣಗೊಳಿಸಿದ ಎಲ್ಲರಿಗೂ ಅಧಿಕೃತ ಪ್ರಮಾಣ ಪತ್ರವನ್ನೂ ನೀಡಲಾಗುವುದು, ಅಭಿನಯ ಕಲಿಕೆಯಲ್ಲಿ ಆಸಕ್ತಿ ಇರುವವರು ಆಗಸ್ಟ್ 31ರೊಳಗೆ ರಂಗಶಾಲೆಯ ಕಾರ್ಯದರ್ಶಿಯಾದ ಚಂದ್ರು ಮಂಡ್ಯ ಅವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಗರಿಷ್ಠ 30 ಮಂದಿಗೆ ಮಾತ್ರ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ. 8660103141, 7204034040
ಕಾಸರಗೋಡು : ಕಲಾಕುಂಚ ಗಡಿನಾಡು ಘಟಕ, ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಕೊಂಡವೂರು ಇಲ್ಲಿ ಶ್ರೀಮತಿ ಲಕ್ಷ್ಮೀ ವಿ ಭಟ್ ಇವರ ಭಕ್ತಿಮಂಜರಿ, ಸುಚರಿತರು, ಕಲರವ, ಭಾರತಾಂಬೆಗೆ ನಮನ ಮತ್ತು ಭಾವಸ್ಪರ್ಶ ಎಂಬ ಐದು ಕವನ ಸಂಕಲನಗಳು ಶ್ರೀ ಕ್ಷೇತ್ರದ ಗಾಯತ್ರಿ ಮಂಟಪದಲ್ಲಿ ಲೋಕಾರ್ಪಣೆಗೊಂಡವು. ‘ಭಕ್ತಿ ಮಂಜರಿ’ ಕೃತಿ ಬಿಡುಗಡೆ ಮಾಡಿ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ಮಾಡಿದರು. ಈ ಸಂದರ್ಭದಲ್ಲಿ ಆಶಯ ನುಡಿಗಳನಾಡುತ್ತಾ ಕೃತಿಗಳ ಮುನ್ನುಡಿ, ಬೆನ್ನುಡಿ ಬರೆದು ಸಹಾಯ ಮಾಡಿದವರ ಹೆಸರುಗಳನ್ನು ಕವಯತ್ರಿ ಶ್ರೀಮತಿ ಲಕ್ಷ್ಮೀ ವಿ. ಭಟ್ ಸ್ಮರಿಸಿಕೊಂಡರು. ಶ್ರೀ ನಾರಾಯಣ ಮೂಡಿತ್ತಾಯ ‘ಸುಚರಿತರು’, ಶ್ರೀ ವಿ.ಬಿ.ಕುಳಮರ್ವ ‘ಕಲರವ’, ಶ್ರೀಮತಿ ಮೀನಾಕ್ಷಿ ರಾಮಚಂದ್ರನ್ ‘ಭಾರತಾಂಬೆಗೆ ನಮನ’, ಡಾ. ಸುರೇಶ ನೆಗಳಗುಳಿ ‘ಭಾವಸ್ಪರ್ಶ’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಕೃತಿಯ ಅವಲೋಕನ ಮಾಡಿದರು. ಈ ಎಲ್ಲಾ ಕೃತಿಗಳ ಮುದ್ರಕರಾದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಶುಭ ಹಾರೈಸಿದರು. ಕುಮಾರಿ ಸುಪ್ರಭಾ ರಾವ್, ರಾಧಾಮಣಿ…
ಸುಳ್ಯ : ಸಾಂಸ್ಕೃತಿಕ ರಂಗಕಲೆಗಳ ಕೇಂದ್ರ ರಂಗಮನೆಯಲ್ಲಿ ‘ವನಜ ರಂಗಮನೆ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ‘ಯಕ್ಷ ಸಂಭ್ರಮ’ ದಿನಾಂಕ 27-08-2023ರಂದು ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ, ಸಮಾರಂಭವನ್ನು ಉದ್ಘಾಟಿಸಿದರು. ಶ್ರೀ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಂಗಮನೆಯ ಹಿರಿಯ ಯಕ್ಷಗಾನ ಕಲಾವಿದರಾದ ಸುಜಾನ ಸುಳ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಗುರುಗಳಾದ ವಿಶ್ವವಿನೋದ ಬನಾರಿ ಮತ್ತು ಪ್ರಸಿದ್ಧ ಚೆಂಡೆ ಮದ್ದಳೆ ವಾದಕ ಕುಮಾರ ಸುಬ್ರಹ್ಮಣ್ಯ ಇವರಿಗೆ 2022 ಮತ್ತು 2023ನೇ ವರ್ಷದ ‘ವನಜ ರಂಗಮನೆ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರಂಗಮನೆ ನಿರ್ದೇಶಕ ಜೀವನ್ ರಾಂ ಸುಳ್ಯ ಸ್ವಾಗತಿಸಿದರು. ಆರಂಭದಲ್ಲಿ ಸುಜನ ಯಕ್ಷ ಶಿಕ್ಷಣ ಕೇಂದ್ರದ ಕಲಾವಿದರಿಂದ ಚೆಂಡೆ ಮದ್ದಳೆ ಝೇಂಕಾರ ನಡೆಯಿತು. ಬಳಿಕ ನಿಟ್ಟೆ ಎನ್.ಎಂ.ಎ.ಎಂ. ತಾಂತ್ರಿಕ ಮಹಾ ವಿದ್ಯಾಲಯದ ಪ್ರಶಸ್ತಿ ವಿಜೇತ ತಂಡದಿಂದ ‘ಶರಣ ಸೇವಾ ರತ್ನ’ ಯಕ್ಷಗಾನ ಹಾಗೂ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಮೂಡಬಿದಿರೆ ಇವರಿಂದ ‘ನರ…
ಮಂಗಳೂರು : ನಾಟ್ಯಾಲಯ ಉರ್ವ (ರಿ) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರಂಗಲ್ಪಾಡಿಯ ಸುಬ್ರಮಣ್ಯ ಸಭಾದಲ್ಲಿ ದಿನಾಂಕ 26-08-2023ರಂದು ಆಯೋಜಿಸಿರುವ ‘ಕಿಂಕಿಣಿ ಉತ್ಸವ’ ಸಂಭ್ರಮವನ್ನು ಸುಬ್ರಮಣ್ಯ ಸಭಾ ಸದನದ ಅಧ್ಯಕ್ಷರಾದ ಶ್ರೀ ಹರ್ಷಕುಮಾರ್ ಕೇದಿಗೆಯವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಭರತನಾಟ್ಯ ಕಲೆಯು ಪರಂಪರೆಯ ಕಲೆಯಾಗಿದ್ದು ಶಾಸ್ತ್ರೀಯ ಅಂಶಗಳನ್ನು ಒಳಗೊಂಡ ಕ್ರೀಡೆ. ಈ ಕಲೆಯ ಅಭ್ಯಾಸದಿಂದ ದೇಹದ ಎಲ್ಲಾ ಅಂಗಾಂಗಗಳನ್ನು ಸಕ್ರಿಯೆಗೊಳಿಸಿ ಬುದ್ಧಿಯನ್ನು ಚುರುಕುಗೊಳಿಸಬಲ್ಲದು. ನೃತ್ಯದ ಅಡವುಗಳ ಅಭ್ಯಾಸದಿಂದ ಉಸಿರಾಟದ ನಿಯಂತ್ರಣ, ಶರೀರದ ಧೃಡತೆ ನಿಲುವು ಸರಿಪಡಿಸಲು ಸಾಧ್ಯವಾಗಿ ದೇಹಕ್ಕೆ ಒಂದು ಆಕರ್ಷಕ ರೂಪ ಬರಲು ಸಾಧ್ಯ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಂಗಳೂರು ಸೌಹಾರ್ದ ಸಹಕಾರಿ ಸಂಘ ಜಪ್ಪು ಇದರ ಅಧ್ಯಕ್ಷರಾದ ಶ್ರೀ ಭಾಸ್ಕರ್ ರಾವ್, ವಿದ್ಯಾವರ್ಧಕ ಸಂಘ ಅಶೋಕನಗರ ಇದರ ಅಧ್ಯಕ್ಷ ಪಿ. ಸೀತಾರಾಮ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ನಾಟ್ಯಾಲಯದ ಗುರು ವಿದುಷಿ ಕಮಲ ಭಟ್ ಸ್ವಾಗತಿಸಿ, ವಿ.ವಿನಯ ರಾವ್ ವಂದಿಸಿ, ವಿದ್ವಾನ್ ಎಂ.ವಿ. ಗಣೇಶ್ ರಾಜ್ ನಿರೂಪಿಸಿದರು.…
ಮೂಲ್ಕಿ : ಶ್ರೀ ಕ್ಷೇತ್ರ ಬಪ್ಪನಾಡು ಇಲ್ಲಿನ ಅನ್ನಪೂರ್ಣ ಸಭಾಂಗಣದಲ್ಲಿ ದಿನಾಂಕ 27-08-2023ರಂದು ಸಾಹಿತಿ, ಕಲಾವಿದ, ಪ್ರಿನ್ಸಿಪಾಲ್ ಡಾ.ವಿ.ಕೆ. ಯಾದವ್ ಸಸಿಹಿತ್ಲು ರಚಿಸಿದ ಪ್ರಪ್ರಥಮ ತುಳು ಗ್ರಂಥ ‘ಮೊಗವೀರೆರ್ನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ ಕೃತಿ ಬಿಡುಗಡೆ ವಿಶಿಷ್ಟ ಶೈಲಿಯಲ್ಲಿ ನಡೆಯಿತು. ಮೊಗವೀರ ಮುಂದಾಳು ನಾಡೋಜ ಡಾ.ಜಿ.ಶಂಕರ್ ಕಾರ್ಯಕ್ರಮವನ್ನು ಕಳಸೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಗ್ರಂಥ ಬಿಡುಗಡೆಗೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು “ಮೊಗವೀರ ಸಮಾಜದ ಸಂಘಟನೆಗೆ ಗ್ರಂಥ ಪೂರಕವಾಗಲಿದೆ. ಸರಕಾರದ ಮಟ್ಟದಲ್ಲಿ ಗ್ರಂಥಕ್ಕೆ ಬೆಂಬಲ ಹಾಗೂ ಎಲ್ಲ ವಿವಿಗಳ ಗ್ರಂಥಾಲಯಗಳಲ್ಲಿ ಗ್ರಂಥ ಇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಬರುವ ವರ್ಷ ಶತಮಾನೋತ್ಸವ ಸಮಾರಂಭ ನಡೆಸುವ ಮೊಗವೀರ ಮಹಾಜನ ಸಂಘದ ಕಾರ್ಯಕ್ರಮ ಅವಿಸ್ಮರಣೀಯಗೊಳಿಸಲು ಗ್ರಂಥ ಸಹಕಾರಿಯಾಗಲಿದೆ” ಎಂದರು. ಮೀನುಗಾರರು ಬದುಕು ಕಟ್ಟಿಕೊಂಡ ಸಾಂಪ್ರದಾಯಿಕ ಪಾತಿ ದೋಣಿಯಲ್ಲಿ ಮೀನುಗಾರರು ಐಲೇಸಾ ಸಂಭ್ರಮದೊಂದಿಗೆ ಸಭಿಕರ ನಡುವೆ ಪಾತಿ ದೋಣಿಯನ್ನು ದೂಡಿಕೊಂಡು ಗ್ರಂಥವನ್ನು ವೇದಿಕೆಗೆ ತಂದ ಬಳಿಕ ಜಾನಪದ ವಿದ್ವಾಂಸ ಬನ್ನಂಜೆ…
ಮಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ‘ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ’ ತಲಪಾಡಿಯ ವಿಶ್ವಾಸ ಆಡಿಟೋರಿಯಂನಲ್ಲಿ ದಿನಾಂಕ 26-08-2023ರಂದು ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಕನ್ನಡ ಚಟುವಟಿಕೆಗಳು ನಿರಂತರ ನಡೆಯಬೇಕು. ಗಡಿನಾಡಿನಲ್ಲಿ ಇಂತಹ ಕಾರ್ಯಕ್ರಮ ನಡೆಸುವ ಮೂಲಕ ಕನ್ನಡ ಭಾಷೆ, ಸಂಸ್ಕೃತಿಗೆ ಇನ್ನಷ್ಟು ಶ್ರೀಮಂತಿಕೆ ಬರುತ್ತದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮಾತನಾಡಿ, “ಗಡಿನಾಡಿನ ಕನ್ನಡಿಗರು ಪರಕೀಯರಲ್ಲ, ರಾಜ್ಯ ಬೇರೆಯಾದರೂ ಭಾಷೆ, ಆಚಾರ ವಿಚಾರಗಳಿಂದ ಮಾನಸಿಕವಾಗಿ ಕರ್ನಾಟಕದೊಂದಿಗಿದ್ದಾರೆ. ಇಲ್ಲಿ ಭಾಷಾ ಸಾಮರಸ್ಯ ಕಾಪಾಡಿಕೊಂಡು ಕನ್ನಡ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ” ಎಂದರು. “ಕಾಸರಗೋಡು ಒಳಗೊಂಡಂತೆ ಕರಾವಳಿಯ ಈ ಭಾಗ ವಿದ್ವತ್ ಪರಂಪರೆಗೆ ಅನನ್ಯ ಕೊಡುಗೆ ನೀಡಿದೆ. ಮಂಜೇಶ್ವರ ಗೋವಿಂದ ಪೈಗಳಿಂದ ಮೊದಲ್ಗೊಂಡು ಅನೇಕರು…
ಮಂಗಳೂರು : ಕರ್ನಾಟಕ ಗಾಂಧಿ ಸ್ಮಾರಕನಿಧಿ, ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಕೆದಂಬಾಡಿ ಪುತ್ತೂರು ಸಹಭಾಗಿತ್ವದಲ್ಲಿ ‘ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ’ ಸಮಾರಂಭ ದಿನಾಂಕ 01-09-2023ರಂದು ಪೂರ್ವಾಹ್ನ 10ಕ್ಕೆ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ‘ಸರ್ವ ಸಮಾನತೆ-ಗಾಂಧೀಜಿ ವಿಚಾರಧಾರೆಯ ಪ್ರಸ್ತುತತೆ’ ಹಾಗೂ ‘ನಾಗರಿಕ ಸೇವೆಯಲ್ಲಿ ಸ್ವಚ್ಛತೆ ಮತ್ತು ಪ್ರಾಮಾಣಿಕತೆ’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಇದೇ ವೇದಿಕೆಯಲ್ಲಿ ‘ಸಮಾನತೆಗಾಗಿ ಸಂಘರ್ಷ’ ಮತ್ತು ‘ಮಣ್ಣಿಗೆ ಮರಳುವ ಮುನ್ನ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಎಂ.ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದು, ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಪ್ರಸ್ತಾವನೆ ಮಾಡಲಿದ್ದಾರೆ. ಮಂಗಳೂರು ವಿ.ವಿ.ಉಪಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸುವರು. ಸ್ಪೀಕರ್ ಯು.ಟಿ.ಖಾದರ್, ಕೇರಳ ಮಾಜಿ ಸಚಿವರು ಎಂ.ಎ.ಬೇಬಿ, ಮಾಜಿ ಸಂಸದ ಪಿ.ಕರುಣಾಕರನ್,…
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮ ‘ಲೇಖ ಲೋಕ -9’ ಎರಡು ದಿನಗಳ ಕಾರ್ಯಕ್ರಮವು ದಿನಾಂಕ 29-08-2023ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ “ಮಹಿಳಾ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಪ್ರಯತ್ನದ ಭಾಗವಾಗಿ ಆತ್ಮಕಥನಗಳನ್ನು ಗ್ರಹಿಸಬೇಕಿದೆ. ಮಹಿಳೆ ಎದುರಿಸಿದ ಸವಾಲುಗಳೇನು ?, ಅದು ವೈಯಕ್ತಿಕ, ಸಾಮುದಾಯಿಕ, ದೇಶಕಾಲಗಳ ಪ್ರಭಾವಗಳನ್ನು ಎದುರಿಸಿದ ರೀತಿಯನ್ನು ತೆರೆದು ತೋರಿಸುವುದು ಆತ್ಮಕತೆಗಳ ಉದ್ದೇಶ. ಇದರ ಮೂಲಕ ಮಹಿಳಾ ಆಸ್ಮಿತೆ ಪ್ರಕಟಗೊಳ್ಳುತ್ತಿದೆ. ಒಬ್ಬಳು ಮಹಿಳೆಯ ಬಿಡುಗಡೆಯ ಹಾದಿ ಅನೇಕರಿಗೆ ಹೊರಳುದಾರಿಯಾಗಬಹುದು” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿವಿಯ ಕುಲಪತಿ ಪ್ರೊ.ಜಯರಾಜ್ ಅಮೀನ್ ಮಾತನಾಡಿ “ಸಮಾಜವನ್ನು ಗ್ರಹಿಸುವ ಮತ್ತು ವ್ಯಕ್ತಿ ಅನುಭವಗಳ ವಿಶಿಷ್ಟ ನಿರೂಪಣೆಯೇ ಆತ್ಮವೃತ್ತಾಂತಗಳು. ಕರಾವಳಿಯಲ್ಲಿ ಮಾತೃಮೂಲೀಯ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿ ಎಂ.ಆರ್.ಶ್ರೀನಿವಾಸ ಮೂರ್ತಿಯವರ 131ನೆಯ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ದಿನಾಂಕ 28-08-2023ರಂದು ಆಚರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಇವರು ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ “ಹೊಸ ಗನ್ನಡ ಸಾಹಿತ್ಯಕ್ಕೆ ಸೂಕ್ತ ವೇದಿಕೆ ರೂಪಿಸಿದ ಶ್ರೀ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿಗೂ ಮಹತ್ವದ ಕೊಡುಗೆಯನ್ನು ನೀಡಿದರು. ಎಂ.ಆರ್.ಶ್ರೀಯವರು ಕನ್ನಡ ಸಾಹಿತ್ಯದ ಪರಂಪರೆಯ ಬಗ್ಗೆ ಅದರಲ್ಲಿಯೂ ವೀರಶೈವ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು. ಅವರು ವಿಜ್ಞಾನದ ವಿದ್ಯಾರ್ಥಿಯಾದರೂ ಕನ್ನಡದ ಆಕರ್ಷಣೆಗೆ ಒಳಗಾಗಿ ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು. ವೀರಶೈವ ಸಾಹಿತ್ಯ, ಅದರಲ್ಲೂ ವಚನ ಸಾಹಿತ್ಯಕ್ಕೆ ಎಂ.ಆರ್.ಶ್ರೀ ಅವರದು ಬೆಲೆಯುಳ್ಳ ಕಾಣಿಕೆ. ‘ವಚನಧರ್ಮಸಾರ’ ಅವರ ಆಳವಾದ ವ್ಯಾಸಂಗಕ್ಕೆ, ವಿದ್ವತ್ತಿಗೆ, ಹೊಸದಾದ ಆಲೋಚನೆಗಳಿಗೆ ಸಂಕೇತವಾಗಿದೆ..’ರಂಗಣ್ಣನ ಕನಸಿನ ದಿನಗಳು’ ಶ್ರೀಯುತರ ಮಹತ್ವದ ಕೃತಿ. ಇದನ್ನು ಕುವೆಂಪು ಅವರು ‘ಚಿತ್ರಕಾವ್ಯ’ ಎಂದು ಕರೆದಿದ್ದಾರೆ. ‘ನಾಗರೀಕ’ ‘ಧರ್ಮದುರಂತ’ ‘ಕಂಠೀರವ ವಿಜಯ’ ಅವರ ಪ್ರಮುಖ ನಾಟಕಗಳಾಗಿದ್ದು, ಸಾವಿತ್ರಿ…