Author: roovari

ಬೆಂಗಳೂರು : ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕ ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ ಮತ್ತು ಇತರ ನಾಟಕಗಳು’, ಲೇಖಕ ಮೌನೇಶ ಬಡಿಗೇರ ಅವರ ಕಥಾಸಂಕಲನ ‘ಶ್ರೀಗಳ ಅರಣ್ಯಕಾಂಡ’, ಲೇಖಕ ಸಂತೆಕಸಲಗೆರೆ ಪ್ರಕಾಶ್ ಅವರ ಕಥಾಸಂಕಲನ ‘ಪ್ರತಿಮೆ ಇಲ್ಲದ ಊರು’ ಹಾಗೂ ಲೇಖಕ ವಿವೇಕಾನಂದ ಕಾಮತ್ ಅವರ ಕಾದಂಬರಿ ‘ಪದರುಗಳು’ ಕೃತಿಗಳ ಲೋಕಾರ್ಪಣಾ ಸಮಾರಂಭವು ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ದಿನಾಂಕ 17-12-2023ರಂದು ನಡೆಯಿತು. ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬಿ.ಆರ್. ಲಕ್ಷ್ಮಣರಾವ್ “ನಾಟಕಗಳನ್ನು ಓದಿದರೆ ನಮಗೆ ಅದರ ಸ್ವಾರಸ್ಯ ತಿಳಿಯಲಾರದು, ಆದರೆ ರಂಗದಲ್ಲಿ ನೋಡಿದರೆ ಮಾತ್ರ ನಾವು ಅದನ್ನು ಆಸ್ವಾದಿಸಬಹುದು. ಅಂತಹ ರಂಗದ ಗುಣಗಳನ್ನು ಕಟ್ಟಿಕೊಡುವ ಕೃತಿ ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ ಮತ್ತು ಇತರ ನಾಟಕಗಳು’. ಈ ಕೃತಿಯಲ್ಲಿ ಮೂರು ನಾಟಕಗಳು ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಪಾತ್ರಗಳು ಹಾಸ್ಯದ ಜೊತೆ ಜೊತೆಗೆ ಗಂಭೀರವಾದ ಸಮಸ್ಯೆಗಳಿಗೆ ಪರಿಹಾರವನ್ನು…

Read More

ಬೆಂಗಳೂರಿನ ರಂಗಪಯಣ (ರಿ.) ತಂಡವು ನಿರ್ಮಿಸಿದ ನಾಟಕ ‘ಚಂದ್ರಗಿರಿಯ ತೀರದಲ್ಲಿ’ (ನಿರ್ದೇಶನ: ನಯನಾ ಜೆ. ಸೂಡ. ಮೂಲ ಕಥೆ : ಸಾರಾ ಅಬೂಬಕ್ಕರ್). ಉಡುಪಿಯ ರಂಗಭೂಮಿಯು ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಹನ್ನೊಂದನೇ ನಾಟಕವಾಗಿ ರಂಗೇರಿದೆ ನಾಟಕವಿದು. ಮುಸ್ಲಿಂ ಸಮುದಾಯದಲ್ಲಿ ಹೆಣ್ಣಿನ ಬದುಕಿನ ದುರಂತ ಕಥೆಯಿರುವ ಈ ನಾಟಕವು ನೋಡಿದವರ ಕರುಳು ಹಿಂಡುವಂತಿದೆ. ಪುರುಷ ಪ್ರಧಾನ ಸಮಾಜದ ವಿರುದ್ಧ ಆಕ್ರೋಶ ಹುಟ್ಟಿಸುವಂತಿದೆ. ಎಳೆಯ ವಯಸ್ಸಿನಲ್ಲಿಯೇ ತನ್ನ ದುಪ್ಪಟ್ಟು ವಯಸ್ಸಿಗಿಂತಲೂ ದೊಡ್ಡ ಗಂಡಸನ್ನು ಮದುವೆಯಾಗಬೇಕಾಗಿ ಬಂದ ಫಾತಿಮಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಲಿಂಗ ತಾರತಮ್ಯ ತುಂಬಿದ ಸಮಾಜದಲ್ಲಿ ಹೆಜ್ಜೆ ಹೆಜ್ಜೆಗೂ ಅನುಭವಿಸುವ ನರಕ ಯಾತನೆ ವರ್ಣನಾತೀತ. ಅಹಂಕಾರ, ದರ್ಪ, ಕೋಪಗಳ ಪ್ರತಿರೂಪವಾದ ಮನೆಯ ಯಜಮಾನನ ಮುಂದೆ ನಿಲ್ಲಲು ಗಡಗಡ ನಡುಗುವ ಹೆಂಡತಿ ಮಕ್ಕಳು.‌ ಸ್ವಾತಂತ್ರ್ಯವೆಂದರೆ ಏನೆಂದೇ ತಿಳಿಯದ ಮುಗ್ಧ ಜೀವಿಗಳು. ಹಿರಿಯ ಮಗಳು ನಾದಿರಾಗೆ ಅತ್ಯಂತ ಪ್ರಾಮಾಣಿಕವಾಗಿ ಪ್ರೀತಿಸುವ ಒಳ್ಳೆಯ ಹುಡುಗ ರಷೀದ್ ಗಂಡನಾಗಿ ಸಿಕ್ಕಿ ಬದುಕು ಸುಂದರವಾದರೂ, ಕ್ಷುಲ್ಲಕ…

Read More

ಮಂಗಳೂರು : ಶ್ರೀಶ ಯಕ್ಷೋತ್ಸವ ಸಮಿತಿ, ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ತಲಕಳ ಮತ್ತು ಶ್ರೀ ತಲಕಳ ಮೇಳ ಇವರುಗಳ ಸಹಯೋಗದಲ್ಲಿ 15ನೇ ವರ್ಷದ ‘ಶ್ರೀಶ ಯಕ್ಷೋತ್ಸವ -2023’ ಮುರನಗರದಲ್ಲಿ ದಿನಾಂಕ 15-12-2023ರಿಂದ 17-12-2023ರವರೆಗೆ ನಡೆಯಿತು. ಈ ಸಮಾರಂಭವು ದಿನಾಂಕ 15-12-2023ರಂದು ಉದ್ಘಾಟನೆಗೊಂಡು, ಸಭಾ ಕಾರ್ಯಕ್ರಮದ ನಂತರ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಸದಸ್ಯರಿಂದ ‘ಕರ್ಣಾರ್ಜುನ’ ಹಾಗೂ ಶ್ರೀ ತಲಕಳ ಮೇಳದ ಕಲಾವಿದರಿಂದ ‘ಪ್ರದೋಷ ಪೂಜೆ’ ಎಂಬ ಪ್ರಸಂಗ ಪ್ರದರ್ಶನಗೊಂಡಿತು. ದಿನಾಂಕ 16-12-2023ರಂದು ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಧರ್ಮ ದಂಡನೆ’ ಹಾಗೂ ಶ್ರೀ ತಲಕಳ ಮೇಳದ ಕಲಾವಿದರಿಂದ ‘ಕಾರಿಂಜ ಕಾಂಜವೆ’ ತುಳು ಯಕ್ಷಗಾನ ಪ್ರದರ್ಶನ ನಡೆಯಿತು. ದಿನಾಂಕ 17-12-2023ರಂದು ಯಕ್ಷಗಾನ ಗುರುಗಳಾದ ಶ್ರೀಯುತ ಗಣೇಶ್ ಕೊಲೆಕಾಡಿ ಇವರ ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಇಲ್ಲಿರುವ ನಿವಾಸಕ್ಕೆ ತೆರಳಿ ಅವರ ಶಿಷ್ಯ ದಿ. ಶ್ರೀಶ ತಲಕಳ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೇಟ, ಶಾಲು ಸ್ಮರಣಿಕೆ, ಹಾರ ಫಲವಸ್ತು, ಪ್ರಶಸ್ತಿ ಪತ್ರದೊಂದಿಗೆ ನಗದು…

Read More

ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಶಾಸ್ತ್ರೀಯ ಸಂಗೀತ ಸರಣಿ ‘ಉದಯರಾಗ’ ಇದರ 47ನೇ ಸಂಗೀತ ಕಛೇರಿಯು ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ದಿನಾಂಕ 17- 12- 2023 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಭಾಗವಹಿಸಿದ ದೊಡ್ಡಕೊಪ್ಲ ಸ್ವಚ್ಛಸಾಗರ ಅಭಿಯಾನದ ಸಂಯೋಜಕ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಕೃಷ್ಣ.ಕೆ.ಪೂಜಾರಿ ಮಾತನಾಡಿ “ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಸಾರುವ ಶಾಸ್ತ್ರೀಯ ಸಂಗೀತಕ್ಕೆ ಹೃದಯವನ್ನು ಅರಳಿಸುವ ಗುಣವಿದೆ. ಯುವಜನತೆ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.” ಎಂದು ನುಡಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್‌ರಾವ್ ಉಪಸ್ಥಿತರಿದ್ದರು. ಬಳಿಕ ನಡೆದ ಕಛೇರಿಯಲ್ಲಿ ಪ್ರಣವ್ ಅಡಿಗ ಉಡುಪಿ ಅವರಿಂದ ಕೊಳಲು ವಾದನ ನಡೆಯಿತು. ಇವರಿಗೆ ವಯಲಿನ್‌ನಲ್ಲಿ ವಿಜೇತ ಸುಬ್ರಹ್ಮಣ್ಯ ಕಾಬೆಕ್ಕೋಡು ಹಾಗು ಮೃದಂಗದಲ್ಲಿ ಡಿ.ಆರ್ ಹರಿಕೃಷ್ಣ ಪಾವಂಜೆ ಸಹಕರಿಸಿದರು. ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್…

Read More

ಕಾರ್ಕಳ : ಕಾರ್ಕಳದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹೊರತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ “ನಿನಾದ” ಇದರ 5 ನೇ ಸಂಚಿಕೆಯನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕವರ್ಗದವರ ಸಮ್ಮುಖದಲ್ಲಿ ದಿನಾಂಕ 18-12-2023 ರಂದು  ಬಿಡುಗಡೆಗೊಳಿಸಲಾಯಿತು. ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ರತ್ನಾ ಲಿಂಗಪ್ಪ ದಂಪತಿಗಳು ತ್ರೈಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್‌ ಮಾತನಾಡಿ “ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ ಹಾಗೂ ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳನ್ನು ಕಟ್ಟಲು ಕ್ರಿಯೇಟಿವ್‌ ಎಂದಿಗೂ ಸಿದ್ಧವಾಗಿದೆ. ಈಗಾಗಲೇ ನಾಲ್ಕು ಸಂಚಿಕೆಗಳನ್ನು ಪೂರೈಸಿ ಐದನೇ ಸಂಚಿಕೆ ಸಿದ್ಧವಾಗಿ ಲೋಕಮುಖಕ್ಕೆ ಪ್ರಕಟಗೊಳ್ಳುತ್ತಿದೆ. ಹೊಸತನದ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ. ಓದುಗರೂ ಸಾಕಷ್ಟು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯದ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು.” ಎಂದು ಕರೆ ನೀಡಿದರು. ‘ನಿನಾದ’ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು “ಪುಸ್ತಕ” ಬಹುಮಾನದೊಂದಿಗೆ ಗೌರವಿಸಲಾಯಿತು.…

Read More

ಬಂಟ್ವಾಳ ತಾಲೂಕಿನ ಅಡ್ಯನಡ್ಕ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ 1955 ಲಾಗಾಯ್ತು ಶಿಕ್ಷಕರಾಗಿ ಸುದೀರ್ಘ ಸೇವೆ ಗೈದ ಮಹಾಲಿಂಗ ಭಟ್ಟರು ರವರು ನೆರೆಯ ಅಡ್ಕಸ್ಥಳದ ವಾಟೆ ಸುಬ್ರಾಯ ಭಟ್ಟರ ಸುಪುತ್ರರು. ಮುಳಿಯಾಲ ಮನೆತನದ ಮಹಾಲಕ್ಷ್ಮೀ ಎಂಬ ಸಾಧ್ವಿಯ ಪತಿ ಹಾಗೂ ಇಬ್ಬರು ಪುತ್ರಿಯರು ಮತ್ತು ಓರ್ವ ಪದವೀಧರನಾದರೂ ಕೃಷಿ ಕೈಂಕರ್ಯದಲ್ಲಿರುವ ಪುತ್ರನ ಹೆಮ್ಮೆಯ ಪಿತ. ಅಡ್ಯನಡ್ಕ ಹಿರಿಯ ಪ್ರಾಥಮಿಕ‌ ಶಾಲೆಯ ಹಿರಿಯ ಅಧ್ಯಾಪಕರಾಗಿ, ಅದೇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದವರು ಹಾಗೂ ಎಲ್ಲಾ ಪ್ರಕಾರದ ಸಾಹಿತ್ಯದಲ್ಲಿ ನಿಪುಣರಾಗಿದ್ದ ಮಾಲಿಂಗ ಮಾಸ್ತರ್ ಬರೆದ ಬೀಚಿ ತಿಮ್ಮನ ಮಾದರಿಯ ‘ಕಿಟ್ಟನ ಕಟ್ಲೇರಿ’ ನಗೆ ಬರಹ ಅತಿ ಜನಪ್ರಿಯ. ‘ಶ್ರೀಗಂಧ’, ‘ಭಾವ ಕುಸುಮ’, ‘ಗಮಗಮ’, ಪ್ರ’ಸಾದ’ ಹಾಗೂ ‘ಸಂಗಮ’ ಎಂಬ ಮಕ್ಕಳ ಕವನ ಸಂಕಲನಗಳೂ, ‘ಮರ್ಲ್ ಗ್ ಮರ್ದ್’ ಎಂಬ ತುಳು‌ನಾಟಕ, ‘ನಾಮ‌ ನಂದಿನಿ’ ಎಂಬ ಹಲವು ಹೆಸರುಗಳ ಪ್ರಕಟಿತ ಸಂಕಲನವೂ ವಿಶಿಷ್ಡ ವಿಭಿನ್ನ. ‘ರಡ್ಡತ್ತ್ ಒಂಜಿ’, ‘ಬೊಲ್ಪಾಂಡ್’, ‘ಕಲ್ತಿ ಮಗೆ’, ‘ಜಾತಿ ತೂವಡೆ’ ಎಂಬ…

Read More

ಮಂಗಳೂರು : ಕಥಾ ಕೀರ್ತನದ ಮೇರು ನಾಡೋಜ ಸಂತ ಭದ್ರಗಿರಿ ಅಚ್ಯುತದಾಸರು ಹಾಗೂ ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಅವರ ಸ್ಮರಣಾರ್ಥ ಬೆಂಗಳೂರಿನ ಷಡ್ಜ ಕಲಾ ಕೇಂದ್ರ ಹಾಗೂ ರಾಮಕೃಷ್ಣ ಮಠ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಕಥಾ ಕೀರ್ತನ ವೈಭವ -2023’ ಮತ್ತು ‘ಅಚ್ಯುತಶ್ರೀ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಸಮಾರಂಭವು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ದಿನಾಂಕ 17-12-2023ರಂದು ನಡೆಯಿತು. ಪ್ರತಿ ವರ್ಷ ಕಥಾಕೀರ್ತನ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ನೀಡಲಾಗುವ ‘ಅಚ್ಯುತಶ್ರೀ’ ರಾಷ್ಟ್ರೀಯ ಪುರಸ್ಕಾರವನ್ನು ಈ ಬಾರಿ ಮಹಾರಾಷ್ಟ್ರದ ಪುಣೆಯ ಹರಿದಾಸರಾದ ಚಾರುದತ್ತ ಆಫಳೆ ಬುವಾ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ನಾಡಿನ ಖ್ಯಾತ ಹರಿದಾಸರಾದ ಪೊಳಲಿ ಜಗದೀಶದಾಸರು ರಚಿಸಿದ “ಸುವರ್ಣ ಸಿರಿ – ದೃಷ್ಟಾಂತ ಕಥಾಕೀರ್ತನ” ಗ್ರಂಥದ ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಹರಿಕಥಾ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸುತ್ತಿರುವ ಪೊಳಲಿ ಜಗದೀಶದಾಸರು ಹಾಗೂ ಹರಿಕಥಾ ಕಲಾ ಸೇವೆಗೈದ ಶ್ರೀ ಎಂ. ಲಕ್ಷ್ಮೀನಾರಾಯಣ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಅಭಯ ಲಕ್ಷ್ಮೀ ದತ್ತಿ ಪ್ರಶಸ್ತಿ ಸಮಾರಂಭವು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 18-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕನ್ನಡಿಗರೆಲ್ಲರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಹರಿಯುತ್ತಿರುವ ಅಷ್ಟೇ ಅಲ್ಲ ವಿಸ್ತಾರಗೊಳ್ಳುತ್ತಿರುವ ನದಿಯ ಹಾಗೆ. ಅತಿಹೆಚ್ಚು ದತ್ತಿ ಪ್ರಶಸ್ತಿಗಳು ಇಲ್ಲಿ ಸ್ಥಾಪನೆಗೊಂಡಿದ್ದು ಇದರ ಆರ್ಥಿಕ ಮೊತ್ತಕ್ಕಿಂತಲೂ ಅದನ್ನು ಸ್ಥಾಪಿಸಿದವರ ಭಾವನೆಗಳು ಮುಖ್ಯ, ಇಂತಹ ಭಾವನಾತ್ಮಕ ಬೆಂಬಲದಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯುವುದು ಸಾಧ್ಯ” ಎಂದರು. ಶ್ರೀಮತಿ ಪಿ. ಜಯ ಲಕ್ಷ್ಮೀಯವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನದಿಂದ ತಮ್ಮ ಪತಿ ದಿವಂಗತ ಎಸ್.ಎ. ಅಭಯ ಕುಮಾರ್ ಅವರ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರು ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಷ್ಟ್ರಪತಿ ಭವನದ ಸೆಂಟ್ರಲ್…

Read More

ಕುಶಾಲನಗರ : ಕುಶಾಲನಗರ ಗೌಡ ಸಮಾಜ ಆಶ್ರಯದಲ್ಲಿ ಸಮಾಜದ ವಿವಿಧ ಸಂಘಗಳ ಸಹಯೋಗದಲ್ಲಿ ‘ಅರೆಭಾಷೆ ದಿನಾಚರಣೆ’ಯು ದಿನಾಂಕ 15-12-2023ರಂದು ನಡೆಯಿತು. ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಕಡ್ಲೇರ ತುಳಸಿ ಮೋಹನ್ ಮಾತನಾಡಿ “ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾಭಿವೃದ್ಧಿ ಸಾಧ್ಯ. ಅರೆಭಾಷೆಯನ್ನು ನಿರಂತರ ಚಟುವಟಿಕೆಗಳ ಮೂಲಕ ಉಳಿಸಿ ಬೆಳೆಸಿಕೊಳ್ಳಬೇಕು. ಸಮುದಾಯದ ಉಡುಗೆ ತೊಡುಗೆಗಳಲ್ಲಿ ಗೊಂದಲ ಇರಬಾರದು. ಸಮಾಜದ ಸಂಘಟನೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಜಾಗೃತಿ ಮೂಡಿಸಬೇಕು. ಪೂರ್ವಿಕರನ್ನು ಸ್ಮರಿಸಬೇಕು” ಎಂದು ತಿಳಿ ಹೇಳಿದರು. ಕುಶಾಲನಗರ ಗೌಡ ಸಮಾಜದ, ಮಹಿಳಾ ಸಮಾಜಗಳ ಶಿಸ್ತುಬದ್ಧ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸೈನಿಕರಾದ ಕುದುಪಜೆ ಭೋಜಪ್ಪ ಮಾತನಾಡಿ “ಆಚಾರ ವಿಚಾರ ಸಂಸ್ಕೃತಿಗಳು ಮನೆಯಿಂದ ಆರಂಭಗೊಳ್ಳುತ್ತದೆ. ತಾಯಿ ಇದಕ್ಕೆ ಪ್ರಮುಖ ಕಾರಣರಾಗಿರುತ್ತಾರೆ.ಹುಟ್ಟು ಸಾವು ನಡುವೆ ಸಂಸ್ಕೃತಿ…

Read More

ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಜಿಲ್ಲೆಯ ಗೌಡ ಸಮಾಜ-ಸಂಘಟನೆಗಳ ಸಹಯೋಗದಲ್ಲಿ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮವು ದಿನಾಂಕ 15-12-2023ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ ಇವರು ಚಾಲನೆ ನೀಡಿ ಮಾತನಾಡುತ್ತಾ “ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ‘ಅರೆಭಾಷೆ ದಿನಾಚರಣೆ’ಯನ್ನು ಆಯೋಜಿಸುವಂತಾಗಬೇಕು. ಕನ್ನಡ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಗಳಲ್ಲಿ ಅರೆಭಾಷೆಯನ್ನು ಮಾತನಾಡುವಂತಾಗಬೇಕು. ಇದರಿಂದ ಮಕ್ಕಳಿಗೆ ಭಾಷೆ ಕಲಿಸಲು ಸಾಧ್ಯವಾಗಲಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಶೇ.75ಕ್ಕೂ ಹೆಚ್ಚು ಜನರು ಅರೆಭಾಷೆ ಮಾತನಾಡುವವರು ವಾಸಿಸುತ್ತಿದ್ದಾರೆ. ಅರೆಭಾಷೆ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ “ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ…

Read More