Subscribe to Updates
Get the latest creative news from FooBar about art, design and business.
Author: roovari
ಕೊಚ್ಚಿ : ಮಾತಂಗಿ ಮತ್ತು ಅಕ್ಬರ್ ಟ್ರಾವೆಲ್ಸ್ ಪ್ರಸ್ತುತಪಡಿಸುವ ‘ಮಾತಂಗಿ ಫೆಸ್ಟಿವಲ್ 2023’ ಕಾರ್ಯಕ್ರಮವು ದಿನಾಂಕ 02-10-2023ರಿಂದ 06-10-2023ರವರೆಗೆ ಕೊಚ್ಚಿಯ ತ್ರಿಪುನಿಥುರ, ಜೆ.ಟಿ.ಪಿ.ಎ.ಸಿ.ಯಲ್ಲಿ ನಡೆಯಲಿದೆ. ದಿನಾಂಕ 02-10-2023ರಂದು ನವ್ಯಾ ನಾಯರ್, ದಿನಾಂಕ 03-10-2023ರಂದು ರಮಾ ವೈದ್ಯನಾಥನ್, ದಿನಾಂಕ 04-10-2023ರಂದು ಮೀನಾಕ್ಷಿ ಶ್ರೀನಿವಾಸನ್, ದಿನಾಂಕ 05-10-2023ರಂದು ಪ್ರಿಯದರ್ಶಿನಿ ಗೋವಿಂದ್ ಮತ್ತು ದಿನಾಂಕ 06-10-2023ರಂದು ಜಾನಕಿ ರಂಗರಾಜನ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ನವ್ಯಾ ನಾಯರ್ : ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಎದ್ದು ಕಾಣುವ ನಟಿಯರಲ್ಲಿ ಒಬ್ಬರಾದ ನವ್ಯಾ ನಾಯರ್ ಭಾರತೀಯ ನೃತ್ಯ ಸಂಪ್ರದಾಯವನ್ನು ಮೀರಿದ ಅಯಸ್ಕಾಂತೀಯ ಆಕರ್ಷಣೆಯನ್ನು ಹೊಂದಿದ್ದಾರೆ. ಅವರ ನೃತ್ಯ ಕೌಶಲ್ಯವು ಭಾವನೆಗಳ ಸ್ವರಮೇಳವಾಗಿದೆ. ಸೊಗಸಾದ ಚಲನೆಗಳು ಮತ್ತು ಅಭಿವ್ಯಕ್ತಿಯು ಸನ್ನೆಗಳ ಮತ್ತು ಭಂಗಿಗಳ ಮೂಲಕ ವ್ಯಕ್ತವಾಗುತ್ತದೆ. ಈ ಭಾವಪೂರ್ಣವಾದ ಪ್ರದರ್ಶಕರು ಕೇರಳ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಂದ ಗೌರವ ಪಡೆದಿದ್ದಾರೆ. ಸಂಸ್ಥಾಪಕಿಯಾಗಿ ‘ಮಾತಂಗಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ನ್ನು ನೃತ್ಯ ಕ್ಷೇತ್ರದ ಪ್ರದರ್ಶನ…
ಸುವರ್ಣ ಕುಮಾರಿ ಹಾಗೂ ಮಧೂರು ಮೋಹನ ಕಲ್ಲೂರಾಯ ಇವರ ಮಗನಾಗಿ 02.02.1996ರಂದು ರಾಮಪ್ರಕಾಶ ಕಲ್ಲೂರಾಯ ಮಧೂರು ಅವರ ಜನನ. M-tech in mechanical engineering ಇವರ ವಿದ್ಯಾಭ್ಯಾಸ. ಮನೆಯ ವಾತಾವರಣ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣಂದಿರು ಹಾಗೂ ಹಿಮ್ಮೇಳದ ಮೇಲಿನ ಆಸಕ್ತಿ ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆಯಾಯಿತು. ಯಕ್ಷಗಾನದ ಚೆಂಡೆ ಮದ್ದಲೆ ಗುರುಗಳು:- ಮುಂಡೃಪ್ಪಾಡಿ ಶ್ರೀಧರ್ ರಾವ್. ಮೋಹನ ಬೈಪಡಿತ್ತಾಯ. ಚಂದ್ರ ಶೇಖರ್ ಆಚಾರ್ಯ ಗುರುವಾಯನಕೆರೆ. ಕೃಷ್ಣ ಪ್ರಕಾಶ ಉಳಿತ್ತಾಯ. ಕನ್ನಡಿಕಟ್ಟೆ, ಬಲಿಪರು, ಪ್ರದೀಪ್ ಕುಮಾರ್ ಗಟ್ಟಿ, ಹೊಳ್ಳ, ತಲಪಾಡಿ ಆಳ್ವ, ಅಮ್ಮಣ್ಣಾಯ, ಗಿರೀಶ್ ಕಕ್ಕೆಪದವು, ಕಾವ್ಯಶ್ರೀ ನೆಚ್ಚಿನ ಭಾಗವತರು. ಶಂಕರನಾರಾಯಣ ಪದ್ಯಾಣ, ದೇಲಂತಮಜಲು ಸುಬ್ರಮಣ್ಯ ಭಟ್ , ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ, ಕೃಷ್ಣ ಪ್ರಕಾಶ ಉಳಿತ್ತಾಯ, ಚೈತನ್ಯ ಪದ್ಯಾಣ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು. ದೇವಿ ಮಹಾತ್ಮೆ, ದುಶ್ಯಾಸನ ವಧೆ, ಸುಧಾಮ, ಇಂದ್ರಜಿತು ಎಲ್ಲಾ ಪುರಾಣ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ…
ಕುಳಾಯಿ : ಕುಳಾಯಿಯ ವಿಷ್ಣುಮೂತಿ೯ದೇವಸ್ಥಾನದಲ್ಲಿ ನಡೆಯುವ ಮಾಸಿಕ ಹುಣ್ಣಿಮೆಯ ಯಕ್ಷಗಾನ ತಾಳಮದ್ದಳೆ ಕಾಯ೯ಕ್ರಮದ ಅಂಗವಾಗಿ ‘ಇಂದ್ರಜಿತು’ ಪ್ರಸಂಗದ ತಾಳಮದ್ದಳೆ ದಿನಾಂಕ 29-09-2023ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಶ್ರೀರಾಮನಾಗಿ ಹಿರಿಯ ಹವ್ಯಾಸಿ ಅರ್ಥದಾರಿ ಶ್ರೀ ರಾಧಾಕೃಷ್ಣ ಭಟ್, ಇಂದ್ರಜಿತು ಪಾತ್ರದಲ್ಲಿ ಉದಯೋನ್ಮುಖ ಪ್ರತಿಭೆ ಶ್ರೀ ಚಂದ್ರಶೇಖರ ಕೊಡಿಪ್ಪಾಡಿ, ಹನುಮಂತನ ಪಾತ್ರದಲ್ಲಿ ಹಿರಿಯ ಹವ್ಯಾಸಿ ಅರ್ಥದಾರಿ ಹಾಗೂ ಪ್ರವಚನಕಾರ, ಶ್ರೀ ಮನೋಹರ ಕುಂದರ್ ಬಡಾ ಎರ್ಮಾಳು, ಲಕ್ಷ್ಮಣನಾಗಿ ಈ ಸಂಘದ ಸಂಚಾಲಕ ಹಾಗೂ ಹಿರಿಯ ಅರ್ಥದಾರಿಗಳಾದ ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಮಾಯಾಸೀತೆ ಪಾತ್ರದಲ್ಲಿ ಮಹಿಳಾ ಯಕ್ಷಗಾನ ಸಂಘದ ಸದಸ್ಯೆ ಹಾಗೂ ನಿವೃತ್ತ ಕಾಲೇಜು ಉಪನ್ಯಾಸಕಿರಾಗಿರುವ ಶ್ರೀಮತಿ ಲಲಿತಾ ಭಟ್ ತಾಳ್ತಜೆ ಹಾಗೂ ವಿಭೀಷಣನ ಪಾತ್ರದಲ್ಲಿ ಯವ ಪ್ರತಿಭೆ ಮತ್ತು ರಂಗಭೂಮಿ ಕಲಾವಿದ ಶ್ರೀ ವೈಶಾಖ್ ಸಹಕರಿಸಿದರು. ಹಿಮ್ಮೇಳದಲ್ಲಿ ಹಿರಿಯ ಭಾಗವತರಾದ ಶ್ರೀ ದಯಾನಂದ ಕೋಡಿಕಲ್, ಚೆಂಡೆಯಲ್ಲಿ ಯುವ ಕಲಾವಿದ ಕಟೀಲು ಮೇಳದ ಮದ್ದಳೆಗಾರರಾದ ಶ್ರೀ ಸೂರಜ್ ಆಚಾರ್ಯ ಮುಲ್ಕಿ,ಮದ್ದಳೆಯಲ್ಲಿ ಶ್ರೀ ಎಸ್.ಎನ್.ಭಟ್…
ಕಾಸರಗೋಡು : ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನೋತ್ಸವದ ಅಂಗವಾಗಿ ‘ಪುರಾತನ ಕಲಾಕೃತಿ ಮತ್ತು ಕರಕುಶಲ ವಸ್ತು ಪ್ರದರ್ಶನ’ವನ್ನು ದಿನಾಂಕ 23-09-2023ರಂದು ಏರ್ಪಡಿಸಲಾಗಿತ್ತು. ಈ ವೇಳೆ ಹಿಂದಿನ ತಲೆಮಾರುಗಳ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ತಾಳೆಗರಿ, ವಾಲುರುಳಿ, ಚಾಪೆ, ಗೆರಸೆ, ತೈಲ ಬಾಂಡಲೆ, ರಾಟೆ, ಪೀಕದಾನಿ, ಬುಡ್ಡಿದೀಪ, ಕುಂಭ, ಕಡೆಗೋಲು, ಭಸ್ಮ ಪೆಟ್ಟಿಗೆ, ಚಿಮಣಿ ದೀಪ, ಗೆರಟೆಯ ವಿವಿಧ ವಸ್ತುಗಳು, ಪೂಜಾ ದೀಪಗಳು, ಟೇಪ್ ರೆಕಾರ್ಡರ್, ಕ್ಯಾಸೆಟ್, ಪ್ರಾಚೀನ ಕಾಲದ ಡಯಲ್ ಗಳು ಇತ್ಯಾದಿ ಗಮನ ಸೆಳೆದವು. ವಸ್ತು ಪ್ರದರ್ಶನವು ಹೊಸ ಪೀಳಿಗೆಗೆ ಆಸಕ್ತಿದಾಯಕವಾಗಿ ಆಕರ್ಷಿಸಿದವು. ಅಲ್ಲದೆ ಗೆರಟೆ, ಹುಲ್ಲು, ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸಿದ ಕರಕುಶಲ ಮತ್ತು ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ವಸ್ತು ಪ್ರದರ್ಶನ ವೀಕ್ಷಿಸಲು ಪರಿಸರದ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರು. ಇದೇ ಸಂದರ್ಭ ನಡೆದ ವಿಜ್ಞಾನ ಮೇಳ, ಸಮಾಜ ವಿಜ್ಞಾನ ಮೇಳ, ಗಣಿತ ಮೇಳ, ಐಟಿ ಮೇಳ ಹಾಗೂ ವೃತ್ತಿ…
ಮಂಗಳೂರಿನ ಹಲವಾರು ರಂಗ ಸಂಘಟನೆಗಳು ಜೊತೆಯಾಗಿ, ಸಂತ ಅಲೋಷಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ‘ಗಾಯಗಳು’ ಎಂಬ ಸುಂದರ ನಾಟಕ ಪ್ರದರ್ಶನವನ್ನು ದಿನಾಂಕ 28-09-2023ರಂದು ಆಯೋಜನೆ ಮಾಡಿದ್ದರು. ಶ್ರೀರಂಗಪಟ್ಟಣದ ‘ನಿರ್ದಿಗಂತ’ ನಾಟಕ ತಂಡ ಅಭಿನಯಿಸಿದ ಈ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಖ್ಯಾತ ರಂಗ ನಿರ್ದೇಶಕರಾದ ಡಾ.ಶ್ರೀಪಾದ ಭಟ್ ಅವರದ್ದು. ಗಾಯಗಳು ರಂಗಪ್ರಯೋಗ ಆಳವಾದ ಅನುಭವ ನೀಡಿದ ನಾಟಕ. ಒಂದೇ ನಾಟಕದೊಳಗೆ ನಾಲ್ಕು ಕತೆಗಳಿವೆ ನಾಲ್ಕೂ ಮನಸ್ಸಿಗಾದ ಗಾಯದ ಕತೆಗಳು. ದೇಶದ ಯುದ್ಧಕ್ಕಾಗಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿ, ಅವರು ಹಿಂದಿರುಗಿ ಬರುತ್ತಾರೋ, ಇಲ್ಲವೋ ಎಂದು ಕಾಯುತ್ತಾ ಪರಿತಪಿಸುವ ತಂದೆ ತಾಯಂದಿರು. ತಮ್ಮ ಮಕ್ಕಳನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದೇವೆ ಎಂದು ಗರ್ವದಿಂದ ಎದೆ ಉಬ್ಬಿಸಿಕೊಳ್ಳುತ್ತಲೇ ಒಳಗೊಳಗೇ ಕೊರಗುವ ನೋವನ್ನು ಅನುಭವಿಸುವ ಪೋಷಕರು. ಮಹಾಭಾರತದ ಸ್ಮಶಾನ ಕುರುಕ್ಷೇತ್ರ ಪ್ರಸಂಗದಲ್ಲಿ ಸತ್ತು ಹೋದ ತಮ್ಮ ಮಕ್ಕಳನ್ನು ಹುಡುಕುತ್ತಿರುವ ಕೌರವ ಮತ್ತು ಪಾಂಡವ ಪಡೆಯ ಪೋಷಕರು ತಮ್ಮ ಮಕ್ಕಳ ಹೆಣವನ್ನು ಕಂಡಾಗ ನೋವಿಗೆ ದುಃಖಕ್ಕೆ ಪಕ್ಷ ಬೇಧ…
ನಿತೀಶ್ ಪಿ. ಬೈಂದೂರು ಇವರ ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ, ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜಿಸಿದ ‘ಕೌಟಿಲ್ಯ ಅವಾರ್ಡ್ಸ್ – 2023’ರ ‘ಯಂಗ್ ಫೋಟೋಗ್ರಾಫರ್ ಆಫ್ ದ ಇಯರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೈಂದೂರಿನ ಶ್ರೀಮತಿ ಕಲಾವತಿ ಮತ್ತು ಪಿ. ಸುಬ್ರಾಯ ದಂಪತಿಯ ಸುಪುತ್ರ. ಪದವಿ ಶಿಕ್ಷಣವನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು ಕೊಂಡಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಪ್ರಸ್ತುತ ಡಾ.ಬಿ.ಶೈಲಶ್ರೀ ಅವರ ಮಾರ್ಗದರ್ಶನದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಸಂಶೋಧನಾ ಅಧ್ಯಯನವನ್ನು ನಡೆಸುತ್ತಿದ್ದಾರೆ. ಛಾಯಚಿತ್ರ ಪ್ರಶಸ್ತಿ: • ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, • ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, • ಮಂಗಳೂರು ವಿಶ್ವವಿದ್ಯಾನಿಲಯದ ಟೂರಿಸಂ…
ಬೆಂಗಳೂರು : ಬೆಂಗಳೂರಿನ ‘ತಿಂಮ ಸೇನೆ’ ತಂಡ ಆಯೋಜಿಸುವ ಸಂವಾದ ಕಾರ್ಯಕ್ರಮವು ದಿನಾಂಕ 28-09-2023ರಂದು ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದ ಜಂಬೂ ಸವಾರಿ ದಿಣ್ಣೆಯ ಟಿ.ಕೆ ದೀಪಕ್ ಲೇಔಟಿನಲ್ಲಿ ನಡೆಯಿತು. ತಿಂಮಸೇನೆಯ ಈ ವಿಶೇಷ ಕಾರ್ಯಕ್ರಮಕ್ಕೆ ಕಳೆ ತಂದವರು ಸಾಹಿತಿ, ಕವಿ, ಗೀತರಚನಕಾರರಾದ ಶ್ರೀ ಜಯಂತ್ ಕಾಯ್ಕಿಣಿ. ಈ ಕಾರ್ಯಕ್ರಮದಲ್ಲಿ 40 ಪದಗಳಿಗೆ ಮೀರದ ಒಂದು ಸಣ್ಣಕತೆಯ ರಚನೆಯನ್ನು ಎಲ್ಲ ಸದಸ್ಯರು ಮಾಡಿ, ಅದನ್ನು ಅಲ್ಲಿ ಓದಿದರು. ಒಬ್ಬೊಬ್ಬರದೂ ಒಂದೊಂದು ರೀತಿಯ ವಿನ್ಯಾಸ, ವಿಷಯ ವೈವಿಧ್ಯ ಮತ್ತು ನಿರೂಪಣಾ ಚಾತುರ್ಯ. ಆ ಕತೆಗಳ ಬಗ್ಗೆ ಮಾತನಾಡುತ್ತಲೇ, ತಮ್ಮ ನೆನಪಿನ ಬುತ್ತಿಯಿಂದ ಅನೇಕ ಸಂಗತಿಗಳನ್ನು ಹೊರ ತೆಗೆದು ಕತೆಗಳ ಬಗ್ಗೆ ವಿಶೇಷ ವ್ಯಾಖ್ಯಾನವನ್ನು ಜಯಂತ ಕಾಯ್ಕಿಣಿಯವರು ಮಾಡಿದರು. ಬಳಿಕ ಮಾತನಾಡಿದ ಅವರು ‘ಕತೆ ಅನುಭವದಿಂದ ಉದ್ಭವಿಸಿದರೂ, ಅದು ಕತೆಗಾರರನ್ನು ಮೀರಿದ್ದು’ ಎಂದರು. ಸಂವೇದನಾ ಭರಿತ ಅವರ ಮಾತುಗಳು, ಕೇಳುಗರ ಮನಸ್ಸು ಸೆಳೆದುದಷ್ಟೇ ಅಲ್ಲದೆ ಕಥೆಯ ರಚನೆಗೆ ಬೇಕಾದ ಅನೇಕ ಸಲಹೆ, ಮಾರ್ಗದರ್ಶನವನ್ನು…
ಬೆಂಗಳೂರು : ಹಿಂದೂಸ್ತಾನಿ ಸಂಗೀತದ ಅಧ್ಯಯನ ಮತ್ತು ಅಧ್ಯಾಪನದಲ್ಲಿ 20 ವರ್ಷಗಳಿಂದ ಕಾರ್ಯನಿರತವಾಗಿರುವ ಸ್ವರ ಗಾಂಧಾರ ಸಂಗೀತ ವಿದ್ಯಾಲಯ ಅರ್ಪಿಸುವ ವಿಂಶತಿ ಗಾನ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮವು ದಿನಾಂಕ 02-10-2023ರ ಸೋಮವಾರದಂದು ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅಖಿಲ ಹವ್ಯಕ ಮಹಾಸಭಾದಲ್ಲಿ ಸಂಜೆ ಘಂಟೆ 5.00 ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ.ಅಹಲ್ಯಾ ಶರ್ಮಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ.ಮಲ್ಲೇಪುರಂ ಜಿ.ವೆಂಕಟೇಶ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಳಗ್ಗೆ ಘಂಟೆ 9.00ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯ ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಪ್ರಸ್ತುತಿ ನಡೆಯಲಿದ್ದು, ತಬಲಾದಲ್ಲಿ ಶ್ರೀ ಪ್ರಕಾಶ ದೇಶಪಾಂಡೆ, ಶ್ರೀ ನಾಗರಾಜ ಹೆಗಡೆ, ಶ್ರೀ ಮಂಜುನಾಥ ಭಟ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀಮತಿ ಪ್ರತಿಭಾ ಹೆಗಡೆ ಸಹಕರಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಸಂಜೆ ಘಂಟೆ 6.00ರಿಂದ ನಡೆಯಲಿರುವ ‘ಗಾನ ಸಂಭ್ರಮ’ದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ವಿದುಷಿ…
ಮುಡಿಪು : ನೃತ್ಯಲಹರಿ ನಾಟ್ಯಾಲಯ ಉಳ್ಳಾಲ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ‘ದಶಾವರಣ -2023’ ಕಾರ್ಯಕ್ರಮವು ದಿನಾಂಕ 24-09-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡುತ್ತಾ “ಸನಾತನ ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಸಮರ್ಥ ಕಲಾಕಾರರ ಅಗತ್ಯವೂ ಇದೆ. ಶಾಸ್ತ್ರೀಯ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿ, ಮುಂದುವರಿಸುವಲ್ಲಿ ರೇಷ್ಮಾ ನಿರ್ಮಲ್ ಭಟ್ ಅವರು ನೃತ್ಯಲಹರಿ ನಾಟ್ಯಾಲಯದ ಮೂಲಕ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ” ಎಂದು ಹೇಳಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ.ಸುವರ್ಣ ಮಾತನಾಡಿದರು. ಶಾರದಾ ಗಣಪತಿ ವಿದ್ಯಾಲಯದ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಪ್ರೊ.ಬಿ.ಕೆ. ಸರೋಜಿನಿ, ಪ್ರಾಧ್ಯಾಪಕ ಧನಂಜಯ ಕುಂಬ್ಳೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಬೋಳಿಯಾರ್, ವಿದ್ಯಾರತ್ನ ವಿದ್ಯಾ ಸಂಸ್ಥೆಯ ಸಂಚಾಲಕ ರವೀಂದ್ರ…
ಕೋಟ : ಕೋಟತಟ್ಟು ಗ್ರಾಮ ಪಂಚಾಯತ್, ಕೋಟತಟ್ಟು, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19ನೇ ವರುಷದ ಸಂಭ್ರಮ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ‘ಇಂಪನ’ ಸಂಗೀತ ಸಂಪುಟದ ಸಂಚಲನ ಕಾರ್ಯಕ್ರಮವು ದಿನಾಂಕ 03-10-2023ರಿಂದ 10-10-2023ರವರೆಗೆ ಕೋಟದ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ನಡೆಯಲಿದೆ. ದಿನಾಂಕ 03-10-2023ರಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಇವರು ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎ. ಕಿರಣ ಕುಮಾರ್ ಕೊಡ್ಗಿಯವರು ಅಧ್ಯಕ್ಷತೆ ವಹಿಸಲಿರುವರು. ದಿನಾಂಕ 04-10-2023ರಿಂದ 08-10-2023ರವರೆಗೆ ಕಾರಂತ ದರ್ಶನ : ಚಲನಚಿತ್ರ ಪ್ರದರ್ಶನಗಳು ಪ್ರತಿದಿನ ಸಂಜೆ 6ರಿಂದ ಪ್ರದರ್ಶನಗೊಳ್ಳಲಿವೆ. ದಿನಾಂಕ 04-10-2023ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿ…