Author: roovari

ದಲಿತೋತ್ತರ ಕಾವ್ಯದ ದಿನಗಳ ಭರವಸೆಯ ಕವಿಯಾಗಿರುವ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ತೀವ್ರಗೊಳ್ಳುತ್ತಿರುವ ಸಾಮಾಜಿಕ ಕೋಲಾಹಲಗಳ ನಡುವೆ ಹೆಚ್ಚು ಅಬ್ಬರಿಸದೆ, ತಮ್ಮೊಳಗಿನ ಪ್ರತಿಭಟನೆಯ ಕಾವನ್ನು ಆರಲೂ ಬಿಡದೆ ಮೆಲುನುಡಿಗಳ ಅಲಗಿನ ಮೇಲೆ ಕವಿತೆಗಳನ್ನು ರಚಿಸುತ್ತಿರುವ ಕವಿ. ಕನಸುಗಾರ ಕವಿಗಳು ಎಚ್ಚರ ತಪ್ಪಿದರೆ ಕವಿತೆಗಳು ಬೀದಿ ಬದಿಯ ಭಾಷಣಗಳಾಗಿಯೋ ಬಣಗು ಕವಿಗಳ ಆತ್ಮಪ್ರತ್ಯಯದ ಕವಿತೆಗಳಾಗುವ ಅಪಾಯವಿರುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಅಸಹನೆಗಳು ಯಾವ ಸಭ್ಯತೆಯೂ ಇಲ್ಲದೆ ಬಹಿರಂಗವಾಗಿ ವ್ಯಕ್ತಗೊಳ್ಳುವ ನಂಜು ಮುಸುಕಿದ ಈ ವಾತಾವರಣದಲ್ಲಿ ಉಗ್ರವಾದಿಗಳಂತೆ ಅಥವಾ ಧರ್ಮಭೀರುಗಳಂತೆ ಎಲ್ಲವನ್ನೂ ಸರಳಗೊಳಿಸಿ ಪರಿಹಾರವನ್ನು ಸೂಚಿಸುವ ಕವಿತೆಗಳನ್ನು ಬರೆಯುವುದು ಸುಲಭ. ಇಂಥ ಕವಿತೆಗಳಲ್ಲಿ ಕನ್ನಡವೂ ಬಳಲುತ್ತಿರುವುದನ್ನು ಕಾಣಬಹುದು. ಅಂತೆಯೇ ಜನಪ್ರಿಯ ಮಾರ್ಗಗಳ ರೂಪನಿಷ್ಠೆಯನ್ನು ಮುರಿದು ಹೊಸ ದಾರಿಯ ಹುಡುಕಾಟದೆಡೆಗೆ ಹೊರಳುವ ಕಾವ್ಯವು ಆಳದಲ್ಲಿ ಕಲಾತ್ಮಕ ಸಿದ್ಧಿಯನ್ನು ಪಡೆದುಕೊಳ್ಳದೆ ಹಾಗೆಯೇ ಮುಂದುವರಿದರೆ ತನ್ನ ರೆಕ್ಕೆಗಳನ್ನು ತಾನೇ ಕಡಿದುಕೊಂಡಂತೆ ಎಂಬುದನ್ನು ಎಂಬತ್ತರ ದಶಕದಲ್ಲಿ ಹೊರಬಂದ ಕಾವ್ಯಗಳ ಅಧ್ಯಯನದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಈ ಎಲ್ಲಾ ತೊಡಕುಗಳ ಬಗ್ಗೆ…

Read More

ಮಂಗಳೂರು : ದ.ಕ. ಜಿಲ್ಲಾ ಕ.ಸಾ.ಪ. ಮಂಗಳೂರು ತಾಲೂಕು ಘಟಕದ ವತಿಯಿಂದ ಪರಿಷತ್ತಿನ ಸಂಸ್ಥಾಪನ ದಿನಾಚರಣಾ ಕಾರ್ಯಕ್ರಮವು ದಿನಾಂಕ 05-05-2024ರ ರವಿವಾರದಂದು ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜು ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆನರಾ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕಿಯಾದ ಶೈಲಜಾ ಪುದುಕೋಳಿ “ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಶಾಲೆ ಕಾಲೇಜುಗಳಲ್ಲಿ ಆಚರಿಸುವಂತಾಗಬೇಕು. ಈ ಮೂಲಕ ಇಂದಿನ ಯುವ ಜನತೆಯಲ್ಲಿ ಕನ್ನಡದ ಅಭಿಮಾನ ಮತ್ತು ಮಮತೆ ತುಂಬಬೇಕು. ಅದ್ಭುತವಾದ ಸಮಾಜಮುಖಿ ಕಾರ್ಯಗಳನ್ನು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯ‌ರ್ ದೇವ ದೂತರಂತೆ ಕಂಡುಬರುತ್ತಾರೆ. ಅವರ ಆಶಯದಂತೆ ಇಂದಿಗೂ ಪರಿಷತ್ತು ಕನ್ನಡದ ಧ್ವನಿಯಾಗಿ ಹತ್ತು ಹಲವು ಮಹತ್ತರ ಕಾರ್ಯಗಳನ್ನೆಸಗುತ್ತಾ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಶಾಲೆ ಹಾಗೂ ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡುವಲ್ಲಿ ಉತ್ಸಾಹ ತೋರುತ್ತಿರುವ ಮಂಗಳೂರು ತಾಲೂಕು ಘಟಕ ಅಭಿನಂದನಾರ್ಹ. ಕ.ಸಾ.ಪ. ಕನ್ನಡಿಗರ ಏಕತೆಯ ಸಂಕೇತ.” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಾಡೋಜ ಕಯ್ಯಾರರ ಪುತ್ರ, ನಿವೃತ್ತ ಪ್ರಾಧ್ಯಾಪಕ ಡಾ.…

Read More

ಉದ್ಯಾವರ : ಉದ್ಯಾವರ ಮಾಡ ಶ್ರೀ ದೈವಗಳ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಹರಿಕಥಾ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ ‘ಹರಿಕಥಾ ಸಪ್ತಾಹ’ದ ಉದ್ಘಾಟನಾ ಸಮಾರಂಭವು ದಿನಾಂಕ 01-05-2024ರಂದು ಉದ್ಯಾವರ ಮಾಡ ಶ್ರೀ ದೈವಗಳ ಕ್ಷೇತ್ರದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅರಸು ಮಂಜಿಸ್ನಾರ್ ಶ್ರೀ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಕಿರಣ್ ಶೆಟ್ಟಿ “ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಸಮಾಜಕ್ಕೆ ಭಕ್ತಿ ಶ್ರದ್ಧೆಗಳ ಸುಸಂಸ್ಕೃತ ಜೀವನ ಸಂದೇಶ ನೀಡುವ ಕಲೆ ಹರಿಕಥೆ ಆಗಿದೆ. ಜಾತ್ರೆಯಲ್ಲಿ ಬಂದು ಭಾಗವಹಿಸುವ ಭಕ್ತರಿಗೆ ಅದರ ಉದ್ದೇಶ ಮತ್ತು ಇನ್ನಷ್ಟು ಆಧ್ಯಾತ್ಮ ಸಂಗತಿಗಳ ತಿಳುವಳಿಕೆಗಾಗಿ ವಿವಿಧ ಹರಿಕಥಾ ಕಲಾವಿದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.” ಎಂದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅರಸು ಮಂಜಿಸ್ನಾರ್ ವ್ಯಾಯಾಮ ಶಾಲೆಯ ಅಧ್ಯಕ್ಷ ಸದಾನಂದ ಮಾಡ, ಶ್ರೀ ದೈವಗಳ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಮಾಡ, ನಿವೃತ್ತ ಅಧ್ಯಾಪಕ ಈಶ್ವರ ಮಾಸ್ಟರ್…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಮಠದ ಸಹಯೋಗದಲ್ಲಿ ‘ಯುವ ಸಂಗೀತೋತ್ಸವ 2024’ ಕಾರ್ಯಕ್ರಮವು ದಿನಾಂಕ 05-05-2024ರ ರವಿವಾರದಂದು ಮಂಗಳೂರಿನ ಮಂಗಳಾದೇವಿಯಲ್ಲಿರುವ ಶ್ರೀ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನೆರವೇರಿತು. ಖ್ಯಾತ ಯುವ ಗಾಯಕಿ ಸೂರ್ಯ ಗಾಯತ್ರಿ ಅವರ ಹಾಡುಗಾರಿಕೆ ಸಂಗೀತೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವರು ಶಾಸ್ತ್ರೀಯವಾದ ಹಲವು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಸುಮಾರು ಮೂರು ಗಂಟೆಗಳ  ಕಾಲ ಸಂಗೀತ ಕಾರ್ಯಕ್ರಮ ನೆರವೇರಿತು. ಸೂರ್ಯ ಗಾಯತ್ರಿಯ ಅಭಿಮಾನಿಗಳು ಹಾಗೂ ಸಂಗೀತ ಪ್ರೇಮಿಗಳು ಸಂಗೀತ ಆಸ್ವಾದಿಸಿದರು. ಸೂರ್ಯ ಗಾಯತ್ರಿ ಅವರಿಗೆ ವಯಲಿನ್ ನಲ್ಲಿ ಗಣರಾಜ ಕಾರ್ಲೆ, ಮೃದಂಗದಲ್ಲಿ ಅನಿಲ್ ಕುಮಾರ್ ವಡಗರ ಮತ್ತು ಘಟಂ ನಲ್ಲಿ ಮಂಜೂರ್ ಉಣ್ಣಿಕೃಷ್ಣನ್ ಸಾಥ್ ನೀಡಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಚಿನ್ಮಯಿ ವಿ. ಭಟ್ ಅವರಿಂದ ನಡೆದ ಹಾಡುಗಾರಿಕೆಗೆ ವಯಲಿನ್‌ನಲ್ಲಿ ಗೌತಮ್…

Read More

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಾಂಸ್ಕೃತಿಕ ಸಮಿತಿ ಹಾಗೂ ಕಲಾಕೇಂದ್ರದ ಸಹಯೋಗದೊಂದಿಗೆ ದಿನಾಂಕ 05-05-2024ರ ಭಾನುವಾರ ಸಂಜೆ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಎಸ್.ಡಿ.ಎಂ. ಕಲಾವೈಭವ ವಿದ್ಯಾರ್ಥಿಗಳ ತಂಡದಿಂದ ‘ಸುಧನ್ವ ಮೋಕ್ಷ’ ಎಂಬ ಒಂದು ಘಂಟೆ ಅವಧಿಯ ಯಕ್ಷಗಾನ ಪ್ರಸಂಗವು ಪ್ರದರ್ಶಿಸಲ್ಪಟ್ಟಿತು. ಹಿಮ್ಮೇಳದಲ್ಲಿ ಭಾಗವತಿಕೆ ಸಿಂಚನ ಮೂಡುಕೋಡಿ, ಚೆಂಡೆ ಆದಿತ್ಯ ಹೊಳ್ಳ ಮತ್ತು ಮದ್ದಳೆಯಲ್ಲಿ ಪುರಂದರ ನಾರಿಯ ಸಹಕರಿಸಿದರು. ಮುಮ್ಮೇಳದಲ್ಲಿ ಸೌರವ್ ಶೆಟ್ಟಿ – ಅರ್ಜುನನಾಗಿ, ಸೌಜನ್ಯ – ವೃಷಕೇತುವಾಗಿ, ಶ್ರುತಿ – ಪ್ರದ್ಯುಮ್ನನಾಗಿ, ಜಿ.ವಿ. ವಿಜೇತ್ – ಅನುಸಾಲ್ವನಾಗಿ, ಅಮೋಘ ಶಂಕರ್ – ದೂತನಾಗಿ, ಕೀರ್ತನ್ ಯು. ಹಂಸಧ್ವಜನಾಗಿ, ಜಿ. ಸುಬ್ರಹ್ಮಣ್ಯ – ಸುಧನ್ವನಾಗಿ, ಸಾಕ್ಷಿ ಎಂ.ಕೆ. – ಸುಗರ್ಭೆಯಾಗಿ, ದೀಪಶ್ರೀ – ಪ್ರಭಾವತಿಯಾಗಿ ಮತ್ತು ಪ್ರಾವಿಣ್ಯ – ಕೃಷ್ಣನಾಗಿ ಸಹಕರಿಸಿದರು. ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಶ್ರೀಮತಿ ಸೋನಿಯಾ ಯಶೋವರ್ಮ ಹಾಗೂ ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎ. ಕುಮಾರ ಹೆಗ್ಡೆ ಆಗಮಿಸಿದ್ದರು. ಊರಿನ ಗಣ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು,…

Read More

ಬಂಟ್ವಾಳ : ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ದಿನಾಂಕ 05-05-2024ರಂದು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ಸಂಘಟಕ, ಕವಿ ಅಬೂಬಕರ್ ಅಮ್ಮುಂಜೆ “ಭಾಷೆಯನ್ನು ಸಮರ್ಪಕವಾಗಿ ಬಳಕೆ ಮಾಡಿ ಉತ್ತಮ ಸಾಹಿತ್ಯ ರಚಿಸಿ ಓದುಗರ ಶೋತೃಗಳ ಮನಸನ್ನು ಗೆದ್ದಾಗ ಉದ್ದೇಶ ಸಾರ್ಥಕ ಆಗುತ್ತದೆ. ಪರಿಷತ್ತಿನ ಹುದ್ದೆಯನ್ನು ವಹಿಸಿಕೊಂಡರಷ್ಟೇ ಸಾಲದು, ಪರಿಷತ್ತಿನ ಉದ್ದೇಶವನ್ನು ಕನ್ನಡಿಗರಿಗೆ ತಿಳಿಸುವಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು ಅನಿವಾರ್ಯ” ಎಂದು ಹೇಳಿದರು. ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಸಾರಥ್ಯವನ್ನು ನೀರ್ಪಾಜೆ ಭೀಮ ಭಟ್ಟರಿಂದ ವಿಶ್ವನಾಥ ಬಂಟ್ವಾಳ ತನಕ ಹಲವರು ಸಮರ್ಥವಾಗಿ ನಿರ್ವಹಿಸಿದ್ದಾರೆ‌‌. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಬಂಟ್ವಾಳ ತಾಲ್ಲೂಕಿನಲ್ಲಿ ಇರುವಷ್ಟು ದತ್ತಿ ಉಪನ್ಯಾಸಗಳು ಇನ್ನೆಲ್ಲೂ ಇಲ್ಲ‌. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಉತ್ತಮ ಸಾಹಿತಿಗಳನ್ನು, ಕಲಾವಿದರನ್ನು…

Read More

ಮಂಗಳೂರು : ಖ್ಯಾತ ಕೊಂಕಣಿ ಸಾಹಿತಿ ಮತ್ತು ಸಂಘಟಕ, ಕೊಂಕಣಿ ಸಾಹಿತಿ ಮತ್ತು ಕಲಾವಿದ ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ ಅಲ್ಪಕಾಲದ ಅನಾರೋಗ್ಯದಿಂದ ದಿನಾಂಕ 06-05-2024ರಂದು ಕಂಕನಾಡಿ ಫಾ. ಮುಲ್ಲರ್ ಆಸ್ಪತ್ರೆಯಲ್ಲಿ ಮುಂಜಾನೆ 3.30ಕ್ಕೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಸಣ್ಣ ಕತೆ ಮತ್ತು ಲಲಿತ ಪ್ರಬಂದ ಸಾಹಿತ್ಯ ಪ್ರಕಾರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ರೊನಾಲ್ಡ್ ಸಿಕ್ವೇರಾ ‘ಶಿಕೇರಾಮ್ ಸುರತ್ಕಲ್’ ಕಾವ್ಯನಾಮದಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಅವರ ‘ಗರ್ಜೆಕ್ ಪಡತ್’ ಕಥಾಸಂಗ್ರಹಕ್ಕೆ ಮಣಿಪಾಲದ ಡಾ. ಟಿ.ಎಮ್.ಎ. ಪೌಂಡೇಶನ್ ವತಿಯಿಂದ ವರ್ಷದ ಉತ್ತಮ ಕೃತಿ ಎಂಬ ಪ್ರಶಂಸಾ ಪುರಸ್ಕಾರ ಲಭಿಸಿತ್ತು. ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷರಾಗಿ ಕೊಂಕಣಿ ಸಾಹಿತಿ ಮತ್ತು ಕಲಾವಿದರ ಹಕ್ಕು ಮತ್ತು ಕ್ಷೇಮಾಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿದ್ದರು. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿದ್ದ ಶ್ರೀಯುತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂದುಮಿತ್ರರನ್ನು ಅಗಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ…

Read More

ಕನ್ನಡ ಸಾಹಿತ್ಯ ಪರಿಷತ್ 1915 ಮೇ 5ರಂದು ಶ್ರೀ ಕೃಷ್ಣ ರಾಜ ಪರಿಷನ್ಮಂದಿರದಲ್ಲಿ ಆಗಿನ ಮೈಸೂರು ಅರಸರಾಗಿದ್ದ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಆರಂಭವಾಗುವಾಗ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ನಾಮಕರಣಗೊಂಡರೂ ಮುಂದೆ 1935ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್’ ಎಂದು ಮರು ನಾಮಕರಣಗೊಂಡಿತ್ತು. ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ನಾಡು- ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುತ್ತದೆ. ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಿ, ಉತ್ತೇಜಿಸಲು ಕಟ್ಟಲಾಗಿರುವ ಈ ಸಂಸ್ಥೆ ಕರ್ನಾಟಕ ರಾಜ್ಯದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತದೆ. ಸಮೃದ್ಧವಾಗಿರುವ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ ನಾಡಿನ ಮೂಲೆ ಮೂಲೆಗೆ ಕನ್ನಡದ ಕಂಪನ್ನು ಪಸರಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ. ನಮ್ಮ ಕನ್ನಡ ನಾಡಿನ ಜನರ ಜೀವನಾಡಿಯಂತೆ ಕೆಲಸ ಮಾಡುವ ಕನ್ನಡ ಸಾಹಿತ್ಯ ಪರಿಷತ್ ಆರಂಭವಾದ ದಿನ ಮೇ 5ರಂದು ರಾಜ್ಯದಾದ್ಯಂತ ಸಂತಸ ಸಡಗರ…

Read More

ಲಾವಣ್ಯ (ರಿ) ಬೈಂದೂರು ಮಕ್ಕಳ ತಂಡದ ಮುದ್ದು ಮಕ್ಕಳು ನಾನು ಬರೆದಿರುವ ‘ನಿದ್ರಾನಗರಿ’ ನಾಟಕವನ್ನು ದಿನಾಂಕ 01-05-2024ರಂದು ಬೈಂದೂರಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದರು. ಲಾವಣ್ಯ ಬೈಂದೂರು ತಂಡದ ಗಣೇಶ್ ಕಾರಂತರ ಸಮರ್ಥ ನಿರ್ದೇಶನದಲ್ಲಿ ಪುಟಾಣಿ ಮಕ್ಕಳು ವಿಶಿಷ್ಟ ಪ್ರತಿಭೆಯಿಂದ ಅಭಿನಯಿಸಿ ಪ್ರೇಕ್ಷಕರ ಮನೆಗೆದ್ದರು. ಪುಟ್ಟ ಚಿಕುಣಿ ಮಗುವಿಂದ ಹಿಡಿದು 13-14 ವರ್ಷದ ಮಕ್ಕಳ ತಂಡ ಇದಾಗಿದ್ದು, ಪ್ರತಿಯೊಂದು ಮಗುವಿನ ಸ್ಪಷ್ಟ ಕನ್ನಡ ಮಾತು, ತುಂಟತನದ ಜೀವಜೀವ ಆಂಗಿಕ ಅಭಿನಯ, ಅತ್ಯುತ್ತಮ ಬೆಳಕನ್ನು ಬಳಸಿಕೊಂಡ ರೀತಿ ವಿಶೇಷವಾದದ್ದು. ನಾಟಕಕ್ಕೆ ಪೂರಕವಾದ ರಂಗಸಂಗೀತ ಹಾಗೂ ಮಕ್ಕಳಿಗೆ ಇಷ್ಟವಾಗುವ ಬಣ್ಣ ಬಣ್ಣದ ವೇಷಭೂಷಣ, ರಂಗಪರಿಕರ ಚಂದಮಾಮದ ಬಣ್ಣದ ಚಿತ್ರಗಳಂತೆ ಅದ್ಭುತ ಮಾಂತ್ರಿಕ ಲೋಕದಲ್ಲಿ ಹಿರಿಯರೂ ಮಕ್ಕಳಾಗಿ ಮೈಮರೆಯುವಂತೆ ಮಾಡಿತು. ಮಾಟಗಾತಿ, ಕಾಕಿ, ಕಿನ್ನರಿಯರು, ರಾಜ-ರಾಣಿ, ರಾಜಕುಮಾರ ಮುಂತಾದ ಕೇಂದ್ರ ಪಾತ್ರಗಳು ಮಾತ್ರವಲ್ಲ ಪ್ರತಿಯೊಂದು ಚಿಕ್ಕ ಪಾತ್ರವೂ ಮನದಲ್ಲಿ ನಿಂತು ನಾಟಕದ ಯಶಸ್ಸಿಗೆ ಕಾರಣವಾಯಿತು. ಸುಮಾರು 14 ವರ್ಷಗಳ ಹಿಂದೆ ನಾನು ಬರೆದ ನಾಟಕ ‘ನಿದ್ರಾನಗರಿ’. ಈ ಮಕ್ಕಳ…

Read More

ಮಂಗಳೂರು : ರಂಗ ಸ್ವರೂಪ ಕುಂಜತ್ತಬೈಲ್ ವತಿಯಿಂದ ನಡೆದ ನಾಲ್ಕು ದಿನಗಳ ‘ರಂಗೋತ್ಸವ ಬೇಸಿಗೆ ಶಿಬಿರ-2024’ದ ಸಮಾರೋಪ, ‘ರಂಗ ಸ್ವರೂಪ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಮರಕಡ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 04-05-2024ರಂದು ನಡೆಯಿತು. ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆ ಉಪನ್ಯಾಸಕ ಡಾ. ಎನ್‌. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ಕ್ರಿಯಾಶೀಲ ಶಿಕ್ಷಕಿ ಎ.ಪಿ. ಸುಮತಿ ಶೆಣೈ ಅವರಿಗೆ ‘ರಂಗಸ್ವರೂಪ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ತುಳು ವಿದ್ವಾಂಸ ಕೆ.ಕೆ. ಪೇಜಾವರ, ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ, ಜ್ಯೋತಿ ಸುಬ್ರಹ್ಮಣ್ಯ, ತಸ್ಲೀಮಾ ಬಾನು, ಹುಸೈನ್ ರಿಜಾಝ್, ರಂಗ ಸ್ವರೂಪದ ಅಧ್ಯಕ್ಷ ರಹಮಾನ್ ಖಾನ್ ಕುಂಜತ್ತಬೈಲ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು, ಕಲಾವಿದರಾದ ಝುಬೇರ್ ಕುಡ್ಲ, ಪ್ರೇಮ್ ನಾಥ್ ಮರ್ಣೆ ಮತ್ತಿತರರಿದ್ದರು. ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನಡೆಯಿತು.

Read More