Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಪರಿವರ್ತನ ರಂಗ ಸಮಾಜ ಇದರ ವತಿಯಿಂದ ಆಯೋಜಿಸಿದ್ದ ‘ರಂಗವಿಮರ್ಶೆ ಸದ್ಯದ ಸ್ಥಿತಿ ಸಾಧ್ಯತೆ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮವು ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾವೇದಿಕೆಯಲ್ಲಿ ದಿನಾಂಕ 08 ನವೆಂಬರ್ 2025ರಂದು ನಡೆಯಿತು. ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಮರ್ಶಕ ಶಶಿಕಾಂತ ಯಡಹಳ್ಳಿ “ವಿಮರ್ಶೆ ಮತ್ತು ಚರ್ಚೆ ಇಲ್ಲದೆ ನಾಟಕಗಳು ಜೀವಂತವಾಗಿರುವುದಿಲ್ಲ. ನಾಟಕ ಪ್ರಯೋಗದ ಪರಿಪೂರ್ಣತೆ ಅರಿಯಲು ವಿಮರ್ಶೆ ಅತ್ಯಗತ್ಯವಾಗಿದೆ. ಆದರೆ ವಿಮರ್ಶಕರ ಸ್ಥಿತಿ ಶೋಚನೀಯವಾಗಿದೆ. ನಾಟಕ ವಿಮರ್ಶಕರಿಗೆ ಇಂದಿನ ದಿನಗಳಲ್ಲಿ ಯಾವುದೇ ಮೌಲ್ಯವಿಲ್ಲ. ವಿಮರ್ಶಕರನ್ನು ಮುಟ್ಟಿಸಿಕೊಳ್ಳದವರ ರೀತಿಯಲ್ಲಿ ಕಾಣುತ್ತಿದ್ದಾರೆ. ಇದರಿಂದ ವಿಮರ್ಶಕರಿಗೆ ಪೀಕಲಾಟ ಆಗುತ್ತಿದೆ. ನಾಟಕಗಳಲ್ಲಿ ಟಿಆರ್ಪಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಮಾಧ್ಯಮಗಳು ಕೂಡ ಮುಖ ತಿರುಗಿಸಿವೆ. ರಂಗಭೂಮಿ ಹರಿಯುವ ನದಿ ಇದ್ದಾಗೆ. ಎಷ್ಟೇ ಕಟ್ಟೆ ಕಟ್ಟಿದರು ಹರಿಯುವ ದಿಕ್ಕನ್ನು ಬದಲಿಸಿಕೊಂಡು ಮುಂದುವರಿಯುತ್ತವೆ. ಇದೇ ರೀತಿ ವಿಮರ್ಶೆ ಕೂಡ ಸಾಗಬೇಕಿದೆ” ಎಂದು ಹೇಳಿದರು. ಕುಸುಮ ಆಯರಹಳ್ಳಿ ಮಾತನಾಡಿ, “ವಿಮರ್ಶೆಯೆಂಬುದು ಹೊಗಳು ಭಟ್ಟರ ಆಶ್ರಯತಾಣವಾಗಿದೆ. ಪೂರ್ವಾಗ್ರಹ ಪೀಡಿತವಾಗಿ…
ಮಂಗಳೂರು : ದಿ ಇನ್ಸ್ಟಿ ಟ್ಯೂಶನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮತ್ತು ಇನ್ಸ್ಟಿ ಟ್ಯೂಶನ್ ಆಫ್ ವ್ಯಾಲೂವರ್ಸ್ ಮತ್ತು ಕೊಡಗು ದಕ್ಷಿಣ ಕನ್ನಡ ಮತ್ತು ಉಡುಪಿ ಇಂಜಿನಿಯರ್ಸ್ ಅಸೋಸಿಯೇಷನ್ ಇವರ ವತಿಯಿಂದ ಕನ್ನಡ ರಾಜ್ಯೋತ್ಸವದ ಬಗ್ಗೆ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 11 ನವೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟಲ್ ರಸ್ತೆಯಲ್ಲಿರುವ ಹೊಟೇಲ್ ವುಡ್ ಲ್ಯಾಂಡ್ಸ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕಲ್ಲಚ್ಚು ಪ್ರಕಾಶನದ ಪ್ರಕಾಶಕರು ಸಾಹಿತಿ ಮಹೇಶ ಆರ್. ನಾಯಕ್ ಇವರು ‘ಕನ್ನಡದ ಬಳಕೆ ಒಂದು ನೋಟ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಕೋಝಿಕ್ಕೋಡು : ಕೋಝಿಕ್ಕೋಡಿನ ಗೋಕುಲ ಗ್ರ್ಯಾಂಡ್ ನಲ್ಲಿ ದಿನಾಂಕ 08 ನವೆಂಬರ್ 2025ರಂದು ವರ್ಲ್ಡ್ ಮಲೆಯಾಳಿ ಕೌನ್ಸಿಲ್ ಏರ್ಪಡಿಸಿದ ಸಮಾರಂಭದಲ್ಲಿ ಕನ್ನಡ-ಮಲೆಯಾಳಗಳ ನಡುವೆ 38 ಮಹತ್ವದ ಕೃತಿಗಳನ್ನು ಅನುವಾದಿಸಿದ ಡಾ. ಪಾರ್ವತಿ ಜಿ. ಐತಾಳ್ ಇವರಿಗೆ ‘ಮಲೆಯಾಳ ಮಿತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಕೇರಳ ವಿಧಾನಸಭೆಯ ಕೋಝಿಕ್ಕೋಡು ಶಾಸಕರಾದ ತೋಟತ್ತಿಲ್ ರವೀಂದ್ರನ್ ಮಾತನಾಡಿ “ಯಾವುದೇ ಭಾಷೆಯ ಸಾಹಿತ್ಯವು ಬೆಳೆಯಬೇಕಾದರೆ ಇತರ ಭಾಷೆಗಳ ಸಾಹಿತ್ಯದೊಂದಿಗೆ ಸಂಪರ್ಕ ಬೆಳೆಸುವುದು ಅತ್ಯಗತ್ಯ. ಒಂದು ಭಾಷೆಗೆ ಹೊಸ ಗಾಳಿ-ಹೊಸ ಬೆಳಕುಗಳನ್ನು ಕೊಡಲು ಸಾಧ್ಯವಾಗುವುದು ಅನುವಾದದ ಮೂಲಕ ಮಾತ್ರ. ಇಂಥ ಭಾಷಾ ಸೌಹಾರ್ದವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜಗತ್ತಿನಾದ್ಯಂತ 600 ಶಾಖೆಗಳಿರುವ ಮಲೆಯಾಳಿ ಕೌನ್ಸಿಲ್ ಅತ್ಯಂತ ಶ್ಲಾಘನೀಯವಾದ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ವೇದಿಕೆಯಲ್ಲಿ ವರ್ಲ್ಡ್ ಮಲೆಯಾಳಿ ಕೌನ್ಸಿಲ್ನ ಇಂಡಿಯಾ ರೀಜನಲ್ ಚೇರ್ ಮನ್ ಮೋಹನ್ ಬಿ. ನಾಯರ್, ಪ್ರೆಸಿಡೆಂಟ್ ಪದ್ಮ ಕುಮಾರ್, ಕಾರ್ಯದರ್ಶಿ ರಾಮಚಂದ್ರನ್ ಪೇರಂಬ್ರಾ, ಉಪಾಧ್ಯಕ್ಷೆ ಸಂಜಿತಾ ಕಮಾಲ್, ವಿಜಯಚಂದ್ರನ್ ಮತ್ತು ಆತಿಥೇಯರಾದ…
ಮಂಗಳೂರು : ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬಂದಿಗಳ ಒಕ್ಕೂಟ ಗಿಳಿವಿಂಡು (ರಿ ) ಇದರ ವತಿಯಿಂದ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ದಿನಾಂಕ 09 ನವೆಂಬರ್ 2025ರಂದು ಆಯೋಜಿಸಿದ್ದ ಗಿಳಿವಿಂಡು ನಾಲ್ಕನೇ ಮಹಾ ಸಮಾವೇಶ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಪ ಪ್ರಶಸ್ತಿ ಪುರಸ್ಕೃತರು ಮತ್ತು ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ “ಕನ್ನಡ ನಮ್ಮ ಭಾವ ವಿನಿಮಯದ ಭಾಷೆಯಾಗಿದೆ. ನಮ್ಮ ಸಹಜ ಜ್ಞಾನ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಕೃತಕ ಜ್ಞಾನ ತಂತ್ರ ಜ್ಞಾನಗಳನ್ನು ಬಳಸಿಕೊಳ್ಳಬೇಕಾಗಿದೆ. ನಾವು ಸಂಘಟಿತರಾಗಿ ಕಾರ್ಯನಿರ್ವಹಿಸಿದಾಗ ಕನ್ನಡ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ. 1968ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಇವರ ನಿರ್ದೇಶಕತ್ವದಲ್ಲಿ ಪ್ರಾರಂಭಗೊಂಡ ಕನ್ನಡ ವಿಭಾಗ ಇಂದು ವಿಶಾಲವಾಗಿ ಬೆಳೆದಿದ್ದು ಕನ್ನಡವನ್ನು ಕಟ್ಟುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನಿಸ್ವಾರ್ಥ ಸೇವೆಯ ಮನೋಭಾವದಿಂದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಪ್ರಸಾರ ಮಾಡಿದ ಕನ್ನಡ ಅನುದಾನಿತ…
ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಪ್ರಜ್ಞಾಜಿಜ್ಞಾಸಾವೇದಿಹಿ ವೇದಿಕೆಯ ಸಹಯೋಗದಲ್ಲಿ ದಿನಾಂಕ 08 ನವೆಂಬರ್ 2025ರಂದು ಮಹಾಭಾರತ ಕಾರ್ಯಾಗಾರ ಹಾಗೂ ರಾಮಾಯಣ-ಮಹಾಭಾರತ ಪರೀಕ್ಷೆಗಳ ಪ್ರಮಾಣಪತ್ರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಯಿತು. ಖ್ಯಾತ ಸಂಶೋಧಕ ಪ್ರೊ. ಗೋಪಾಲಕೃಷ್ಣ ನಾರಾಯಣ ಭಟ್ ಮಹಾಭಾರತದ ಆಳವಾದ ಅಂಶಗಳನ್ನು ವಿಶ್ಲೇಷಿಸಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. “ಮಹಾಭಾರತವು ಕೇವಲ ಪೌರಾಣಿಕ ಕಾವ್ಯವಲ್ಲ, ಅದು ಮಾನವ ಜೀವನದ ಮಾರ್ಗದರ್ಶಕ ಗ್ರಂಥವಾಗಿದ್ದು, ಆತ್ಮಜ್ಞಾನ, ಧರ್ಮಾಚರಣೆ ಮತ್ತು ಸೌಹಾರ್ದಯುತ ಸಹಜೀವನದ ಪಾಠಗಳನ್ನು ನೀಡುತ್ತದೆ. ರಾಮಾಯಣ ಮತ್ತು ಮಹಾಭಾರತದಂತಹ ಪವಿತ್ರ ಗ್ರಂಥಗಳು ಮಾನವೀಯ ಮೌಲ್ಯಗಳನ್ನು ಬೆಳೆಸುವ ಜೀವಂತ ಪಾಠಶಾಲೆಗಳು” ಎಂದು ಉಲ್ಲೇಖಿಸಿದರು. ಆಳ್ವಾಸ್ ಪ್ರೌಢಶಾಲೆಯ ಒಟ್ಟು 143 ವಿದ್ಯಾರ್ಥಿಗಳಿಗೆ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ ನಡೆಸಿ, ಎಲ್ಲರೂ ಉತ್ತೀರ್ಣರಾಗಿ, 100% ಫಲಿತಾಂಶ ದಾಖಲಾಯಿತು. ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ಪ್ರೀತಂ ಕುಂದರ್ ದೀಪ ಪ್ರಜ್ವಲನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ…
ಇಸ್ರೇಲ್ : ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಯಕ್ಷಗಾನವು ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಯಕ್ಷದೇಗುಲ ತಂಡವು ಇಸ್ರೇಲ್ನಲ್ಲಿ ತನ್ನ ರೋಮಾಂಚಕ ಮತ್ತು ವರ್ಣಮಯ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಿತು. ಕಂಸವಧೆ ಮತ್ತು ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ ನೀಡಿತು. ದಿನಾಂಕ 02 ನವೆಂಬರ್ 2025ರಂದು ಪೆಟಾಕ್ಟಿಕ್ವಾ ನಗರದಲ್ಲಿ ನಡೆದ ಹಡೋಫೆನ್ ಫ್ರಿಂಜ್ ರಂಗಭೂಮಿ ಉತ್ಸವದಲ್ಲಿ ಉದ್ಘಾಟನಾ ಪ್ರದರ್ಶನವನ್ನು ಪ್ರದರ್ಶಿಸಿತು. ಈ ಪ್ರದರ್ಶನದ ಯಶಸ್ವಿ ಮತ್ತು ಅಪಾರ ಜನರ ಪ್ರಶಂಸೆಗೆ ಕಾರಣವಾಯಿತು. ಈ ಸುದ್ಧಿ ಹರಡುತ್ತಿದ್ದಂತೆ ದಿನಾಂಕ 03 ನವೆಂಬರ್ 2025ರಂದು ಹೈಪಾ ನಗರ ಮತ್ತು 04 ನವೆಂಬರ್ 2025ರಂದು ಅಶ್ಕೆಲೋನ್ನಲ್ಲಿ ನಡೆದ ಪ್ರದರ್ಶನದಲ್ಲಿ ಪ್ರೇಕ್ಷಕರು ಬಹಳವಾಗಿ ಸೇರಿ ಹೆಚ್ಚಿನವರು ನಿಂತು ನೋಡಬೇಕಾಯಿತು. ಭಾರತದ ಯಕ್ಷಗಾನ ತಂಡವು ಹಡೋಫೆನ್ ಫ್ರಿಂಜ್ ಉತ್ಸವದ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ ಏಕೈಕ ಅಂತರರಾಷ್ಟ್ರೀಯ ತಂಡವಾಗಿದೆ. ಇದರಿಂದ ಇಸ್ರೇಲಿ ಪ್ರೇಕ್ಷಕರಲ್ಲಿ ಭಾರತೀಯ ಸಂಸ್ಕೃತಿಯ ಬೆಳೆಯುತ್ತಿರುವ ಅನುರಣನವನ್ನು ಒತ್ತಿ ಹೇಳುತ್ತದೆ. ಇಸ್ರೇಲ್ ನಗರಗಳ ಪುರಸಭೆಗಳು ಮತ್ತು ಹಡೋಫೆನ್ ರಂಗಮಂದಿರದ ಸಹಯೋಗದೊಂದಿಗೆ ಇಸ್ರೇಲ್ನಲ್ಲಿರುವ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯು ದಿನಾಂಕ 08 ನವೆಂಬರ್ 2025ರಂದು ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಶ್ರೀ ರಾಮ ಪಾದುಕಾ ಪ್ರದಾನ’ ಪ್ರಸಂಗದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಪರೀಕ್ಷಿತ್ ಹಂದ್ರಟ್ಟ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಭಾಸ್ಕರ್ ಬಾರ್ಯ, ಭಾಸ್ಕರ್ ಶೆಟ್ಟಿ ಸಾಲ್ಮರ ಹಾಗೂ ಹರಿಣಾಕ್ಷಿ ಜೆ. ಶೆಟ್ಟಿ), ಭರತ (ಗುಡ್ಡಪ್ಪ ಬಲ್ಯ ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು), ವಸಿಷ್ಠ (ದುಗ್ಗಪ್ಪ ನಡುಗಲ್ಲು), ಲಕ್ಷ್ಮಣ (ಲಕ್ಷ್ಮೀಕಾಂತ ಹೆಗ್ಡೆ ಪರ್ಲಡ್ಕ), ಗುಹ (ಪರೀಕ್ಷಿತ್ ಹಂದ್ರಟ್ಟ) ಸಹಕರಿಸಿದರು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ದೈವಾಧೀನರಾದ ಯಕ್ಷಛಾಂದಸ ಗಣೇಶ್ ಕೊಲೆಕಾಡಿಯವರಿಗೆ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿರು. ಹರ್ಷ ಪುಣಚ ಸ್ವಾಗತಿಸಿ, ಪದ್ಮನಾಭ ಹಂದ್ರಟ್ಟ ವಂದಿಸಿದರು.
ವಡ್ಡರ್ಸೆ : ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಇದರ ವತಿಯಿಂದ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ನಾರಾಯಣಗುರು ರೆಸಿಡೆನ್ಸಿಯಲ್ ಸ್ಕೂಲ್ ವಡ್ಡರ್ಸೆಯಲ್ಲಿ ದಿನಾಂಕ 07 ನವೆಂಬರ್ 2025ರ ಸಂಜೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀವಟಿಕೆಗೆ ತೈಲ ಹಾಕುವುದರ ಮೂಲಕ ದೀಪವನ್ನು ಪ್ರಜ್ವಲಿಸಿದ ನಾರಾಯಣಗುರು ರೆಸಿಡೆನ್ಸಿಯಲ್ ಸ್ಕೂಲ್ ವಡ್ಡರ್ಸೆಯ ಪ್ರಾಂಶುಪಾಲರಾದ ಸವಿತಾ ಕೋಲಿ ಮಾತನಾಡಿ “ಬಹಳ ಶಾಸ್ತ್ರೀಯವೆನ್ನಿಸುವ ಯಕ್ಷಗಾನವನ್ನು ಮಕ್ಕಳ ಮೂಲಕ ಮಕ್ಕಳ ಮುಂದೆ ಪ್ರಸ್ತುತ ಪಡಿಸುವ ಯಶಸ್ವೀ ಕಲಾವೃಂದದ ಉದ್ದೇಶ ಯಕ್ಷಗಾನದ ಮೂಲ ಪರಂಪರೆಯನ್ನು ರಂಗದಲ್ಲಿ ಪ್ರಸ್ತುತ ಪಡಿಸಿ ಪರಿಚಯಿಸುವುದಾಗಿದೆ. ರಾಜ್ಯದಾದ್ಯಂತ ಆಗಮಿಸಿದ ಮಕ್ಕಳ ಮುಂದೆ ಪ್ರದರ್ಶಿಸುವ ಯಕ್ಷಗಾನ ಕಲೆ ಅಮೂಲ್ಯವಾದದ್ದಾಗಿದೆ. ದೀಪ ಹಿಡಿದು ರಂಗ ಪ್ರವೇಶ ಮಾಡಿ ದೀಪವನ್ನು ರಂಗದಲ್ಲಿ ಪ್ರತಿಷ್ಠಾಪಿಸಿ ಬೆಳಕನ್ನು ಚೆಲ್ಲುವ ಕೆಲಸ ಶ್ಲಾಘನೀಯ. ದೂರದ ಊರಿಂದ ಬಂದು ಪಾಠದಲ್ಲಿಯೇ ಕಳೆವ ಮಕ್ಕಳಿಗೆ ಮನೋರಂಜನೆ ತಂದಿದೆ. ಹಲವಾರು ಶಾಲೆಗಳಲ್ಲಿ ಯಕ್ಷಗಾನದ ಮೂಲ ಸತ್ವವನ್ನು ಕಾಣಿಸುವ ಇವರ ಕಾರ್ಯ ಪ್ರಶಂಸನೀಯ” ಎಂದು ಹೇಳಿದರು. ಡ್ಯುಯಲ್ ಸ್ಟಾರ್ ಎಜ್ಯುಕೇಷನ್ ಇನ್ಸ್ಟಿಟ್ಯೂಟ್ ಸೆಕ್ರೆಟರಿ ಪ್ರಕಾಶ್…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ‘ಕಾವ್ಯಾಂ ವ್ಹಾಳೊ-8’ ಶೀರ್ಷಿಕೆಯಡಿ ಕವಿಗೋಷ್ಟಿಯು ದಿನಾಂಕ 08 ನವೆಂಬರ್ 2025ರಂದು ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಪ್ರಾಸ್ತಾವಿಕವಾಗಿ ಮಾತಾನಾಡಿ “ಅಕಾಡೆಮಿಯು ಪ್ರತಿ ತಿಂಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಓರ್ವ ಕೊಂಕಣಿ ವ್ಯಕ್ತಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಕವಿಗಳಿಗೆ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಲು ಅವಕಾಶ ಒದಗಿಸುವ ಜೊತೆ ಸಾಹಿತಿಗಳ ಜೊತೆ ಸಂವಾದ ನಡೆಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿದೆ. ಈ ಕವಿಗೋಷ್ಟಿಯು ಪ್ರತಿ ಕವಿಗಳಿಗೆ ವೇದಿಕೆಯನ್ನು ಸೃಷ್ಟಿಸಿ, ಅವರನ್ನು ಪ್ರೋತ್ಸಾಹಿಸುತ್ತಿದೆ” ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸನ್ಮಾನಿಸಿದ ಖ್ಯಾತ ನಾಟಕಕಾರ ಹಾಗೂ ಚಲನಚಿತ್ರ ನಿರ್ಮಾಪಕರಾದ ಶ್ರೀ ಹೆನ್ರಿ ಡಿಸಿಲ್ವರವರು ಮಾತಾನಾಡಿ, “ನಾನು ಮಾಡಿದ ಸಾಧನೆಗಳನ್ನು ಗಮಿನಿಸಿ ಅಕಾಡೆಮಿಯು ನನಗೆ ಗೌರವ ನೀಡಿದ್ದು, ತುಂಬಾ ಸಂತೋಷವಾಗಿದೆ. ನಿಮ್ಮ ಸಹಕಾರದಿಂದ, ನಾನು ಮಾಡಿದ ಸಿನೆಮಾಗಳು ಯಶಸ್ವಿಯಾಗಿದೆ” ಎಂದು ಹೇಳಿ ಕಾರ್ಯಕ್ರಮಕ್ಕೆ…
ಉಡುಪಿ : ಡಾ. ವಿರೂಪಾಕ್ಷ ದೇವರಮನೆಯವರು ರಚಿಸಿರುವ ‘ಮಕ್ಕಳು ಮಕ್ಕಳಾಗಿರಲು ಬಿಡಿ’ ಮತ್ತು ‘ಓ ಮನಸೇ ತುಸು ನಿಧಾನಿಸು’ ಎಂಬ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 14 ನವೆಂಬರ್ 2025ರಂದು ಸಂಜೆ 4-30 ಗಂಟೆಗೆ ಉಡುಪಿ ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಗಿರಿಜಾ ಎ. ಇವರು ವಹಿಸಲಿದ್ದು, ರತ್ನಶೀಲ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಮನು ಹಂದಾಡಿ, ಬ್ರಹ್ಮಾವರ ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಅಭಿಲಾಷಾ ಹಂದೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಶಂಕರ್ ಜೂನಿಯರ್ (ತೇಜಸ್ವಿ) ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಶೇಷ ಪುಸ್ತಕ ಪ್ರದರ್ಶನ, ವಿಶೇಷ ಚಿತ್ರಕಲಾ ಪ್ರದರ್ಶನ ಮತ್ತು ವಿಶೇಷ ಮ್ಯಾಜಿಕ್ ಪ್ರದರ್ಶನ ನಡೆಯಲಿದೆ.