Author: roovari

ದಿನಾಂಕ 22-09-2023ರಂದು ಬೆಂಗಳೂರಿನ ಕಣ್ಣೂರು ಸಮೀಪದ ಭಾರತೀಯ ಮಾಲ್ ನಲ್ಲಿ ನಡೆದ ವ್ಯಾನ್ ಗೋ-360° ಪ್ರದರ್ಶನ ಹಲವು ಕಾರಣಕ್ಕೆ ಮುಖ್ಯವೆನಿಸಿತ್ತು. ಕಲೆ ಮತ್ತು ಕಲಾ ಪ್ರದರ್ಶನ ಅದರದೇ ಆದ ಭಾಷೆಯನ್ನು ಸ್ವಲ್ಪವಾದರೂ ತಿಳಿದಿದ್ದರೆ ಗ್ರಹಿಸುವುದು ಸುಲಭವೆನಿಸುತ್ತದೆ. ಅಲ್ಲಿ ಬಳಸುವ ಗಾಢವಾದ‌ ವರ್ಣ, ತೆಳು ಬಣ್ಣಗಳು ಭಾವಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಶೋಕ, ವ್ಯಥೆ, ನಿರಾಶೆಯಂತಹ ಮೋಡ ಮುಚ್ಚಿದ ಭಾವಗಳನ್ನು ಹೇಳಲು ಕಂದು, ಕಪ್ಪುವಿನಂತಹ ಬಣ್ಣಗಳನ್ನು ಬಳಸಲಾಗುತ್ತದೆ. ಹರ್ಷ, ಉಲ್ಲಾಸಗಳನ್ನು ಬಿಂಬಿಸಲು ಗಾಢವಾದ ಕಣ್ಣಿಗೆ ಆಹ್ಲಾದ ಕೊಡುವ ವರ್ಣಗಳನ್ನು ಬಳಸಲಾಗುತ್ತದೆ. ಬಣ್ಣ ಮತ್ತು ಕುಂಚ ಕಲಾವಿದನ ಕೈಯ ಹತಾರಗಳು. ಅವೆಲ್ಲವನ್ನೂ ಸಂಯೋಜಿಸುವುದು ಅವನ‌ ಬುದ್ಧಿ ಮತ್ತು ಭಾವ. ಈ ಬುದ್ಧಿ ಭಾವಗಳು ಆಯಾ ಸಂದರ್ಭಕ್ಕೆ ಒದಗುವಂತೆ ಮಾಡುವುದು ಅವನು ಕಂಡ, ಉಂಡ, ಕಾಡಿದ ಜಗತ್ತು. ಈ ಜಗತ್ತಿನಲ್ಲಿ ಕಾಡಿದ ಹೋದೋಟಗಳಿವೆ, ದೇವತೆಗಳಿವೆ, ದೆವ್ವಗಳಿವೆ, ಪ್ರೇಯಸಿಯರಿದ್ದಾರೆ, ರೈತನಿದ್ದಾನೆ, ಹಲವು ಪಕ್ಷಿಪ್ರಾಣಿಗಳು, ಹೊಲದಲ್ಲಿ ಅರಳುವ ಸೂರ್ಯಕಾಂತಿ-ಸಾಸಿವೆಯ ಹಳದಿ ಹೂಗಳೂ ಇವೆ.‌ ಬಿಳಿಯ, ನೀಲಿಯ, ಕೆಂಪಿನ ಹಲವು ಹೂಗಳಿವೆ.…

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 10-10-2023 ರಂದು ಡಾ.ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಸಮಾರಂಭವು ನಡೆಯಲಿದೆ. ಇದರ ಸಲುವಾಗಿ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರೌಢಶಾಲೆ, ಕಾಲೇಜು ಹಾಗೂ ಮುಕ್ತ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೂರು ಪುಟಕ್ಕೆ ಮೀರದಂತೆ ಪ್ರಬಂಧವನ್ನು ರಚಿಸಿ ದಿನಾಂಕ 06-10-2023ರ ಒಳಗಾಗಿ ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿರಸ್ತೆ ಕೊಡಿಯಾಲ್‌ಬೈಲ್, ಮಂಗಳೂರು 575003 ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ಪ್ರಬಂಧದ ವಿಷಯ ಪ್ರೌಢಶಾಲೆ ವಿಭಾಗ : ಕಾರಂತರ ವಿಜ್ಞಾನ ಸಾಹಿತ್ಯ ಕಾಲೇಜು ವಿಭಾಗ : ಕಾರಂತರು ಮತ್ತು ಯಕ್ಷಗಾನ ಮುಕ್ತ ವಿಭಾಗ ‘ಮೂಕಜ್ಜಿಯ ಕಸುಗಳು’ – ವೈಚಾರಿಕತೆ, ವಿಶ್ಲೇಷಣೆ

Read More

ಮಂಗಳೂರು : ಡಾ.ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ಅಂಚೆ ಕಾರ್ಡಿನಲ್ಲಿ ಡಾ.ಕೋಟ ಶಿವರಾಮ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಶ್ರೀ ಎಸ್.ಪ್ರದೀಪ ಕುಮಾರ ಕಲ್ಕೂರ ಇವರ ಸಂಯೋಜನೆಯಲ್ಲಿ  ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಯೋಜಿಸುತ್ತಿದೆ. ಎಸ್.ಎಸ್.ಎಲ್.ಸಿ. ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಪೆನ್ಸಿಲ್‌ನಿಂದ ಕಪ್ಪು ಬಿಳುಪು ಚಿತ್ರವನ್ನು ಪೋಸ್ಟ್‌ಕಾರ್ಡ್‌ನಲ್ಲಿ ರಚಿಸಿ, ಸ್ವ-ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಸ್ಪರ್ಧಾ ವಿಭಾಗವನ್ನು ನಮೂದಿಸಿ ದಿನಾಂಕ 06-10-2023ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ರಿಗೆ, ಜಾನ್‌ಚಂದ್ರನ್, ಸಂಚಾಲಕರು, ಅಂಚೆಕಾರ್ಡಿನಲ್ಲಿ ಚಿತ್ರರಚನಾ ಸ್ಪರ್ಧಾ ವಿಭಾಗ ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಮಂಗಳೂರು-575003

Read More

ಮೂಡಬಿದಿರೆ : ಕನ್ನಡ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕ ಮತ್ತು ಜೈನ ಪ.ಪೂ.ಕಾಲೇಜಿನ ಜಂಟಿ ಆಶ್ರಯದಲ್ಲಿ ‘ಕವಿ ನಾಗಚಂದ್ರ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-09-2023ರಂದು ಮೂಡಬಿದಿರೆಯ ಜೈನ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಾಹಿತಿಗಳು ಹಾಗೂ ಉಪನ್ಯಾಸಕರು ಆಗಿರುವ ಶ್ರೀ ಟಿ.ಎ.ಎನ್ ಖಂಡಿಗೆ “ಹಳೆಗನ್ನಡ ಕಾಲದ ಜೈನ ಕವಿಯಾದ ನಾಗಚಂದ್ರನು ತನ್ನ ಕಾವ್ಯಗಳಿಂದಾಗಿ ಅಭಿನವ ಪಂಪನೆಂದೇ ಗುರುತಿಸಿಕೊಂಡವನು. ಕಾವ್ಯಕ್ಕೆ ಮೊತ್ತ ಮೊದಲು ಚೌಕಟ್ಟನ್ನು ನಿರ್ಮಿಸಿಕೊಟ್ಟ ಪಂಪನ ಮಾದರಿಯಲ್ಲಿಯೇ ನಾಗಚಂದ್ರನು ಕೂಡಾ ಅಪೂರ್ವ ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ‘ಮಲ್ಲಿನಾಥ ಪುರಾಣ’ ಹಾಗೂ ‘ರಾಮಚಂದ್ರ ಚರಿತ ಪುರಾಣ’ ಎಂಬೆರಡು ತನ್ನ ಮೇರು ಕೃತಿಗಳೊಂದಿಗೆ ಜಿನೋಪಾಸನೆ ಹಾಗೂ ಕಲೋಪಾಸನೆ ಎರಡನ್ನೂ ಮಾಡಿಕೊಂಡು ಬಂದ ನಾಗಚಂದ್ರನು ಒಂದರಲ್ಲಿ ಧರ್ಮ ಹಾಗೂ ಇನ್ನೊಂದರಲ್ಲಿ ಕಾವ್ಯಧರ್ಮವನ್ನು ಇಟ್ಟುಕೊಂಡು ಪಂಪನ ಮಾದರಿಯಲ್ಲಿಯೇ ಕಾವ್ಯ ರಚಿಸಿದ್ದಾನೆ” ಎಂದರು. ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ.ಕೆ.ವೇಣುಗೋಪಾಲ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿ ಈ…

Read More

ವಿರಾಜಪೇಟೆ : ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ ಹಾಗೂ ಮನೆ ಮನೆ ಕಾವ್ಯಗೋಷ್ಠಿ ಬಳಗದ ವತಿಯಿಂದ ‘ಕವಿಗೋಷ್ಠಿ’ಯು ದಿನಾಂಕ 24-09-2023ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆಯಿತು. ಕೊಡಗಿನ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುಲ್ಲೇಂಗಡ ಮಧೋಶ್ ಪೂವಯ್ಯನವರು ಅಧ್ಯಕ್ಷತೆ ವಹಿಸಿ ಕವಿತೆಗಳನ್ನು ವಿಮರ್ಶಿಸಿ ಕವಿಗಳನ್ನು ಪ್ರೋತ್ಸಾಹಿಸಿದರು. ಕೊಡಗಿನ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತ ಶಯನ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜ್ಹಿರ ಅಯ್ಯಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಗಿರೀಶ್ ಎಸ್. ಕಿಗ್ಗಾಲು, ಮೊಣ್ಣಂಡ ಶೋಭಾ ಸುಬ್ಬಯ್ಯ, ಕಸ್ತೂರಿ ಗೋವಿಂದಮ್ಮಯ್ಯ, ಶಿವದೇವಿ ಅವನೀಶ್ಚಂದ್ರ, ಸಾವಿತ್ರಿ ಹೆಚ್.ಜಿ., ಭಾಗ್ಯವತಿ ಅಣ್ಣಪ್ಪ ಟಿ.ವಿ., ಲವಿನ್ ಲೋಪೆಸ್, ಚಿಮ್ಮಚ್ಚಿರ ಪವಿತಾ ರಜನ್, ಈರಮಂಡ ಹರಿಣಿ ವಿಜಯ್, ಸಿಂಚನ ಜಿ.ಎನ್. ಗೊರಹಳ್ಳಿ, ಅನಂತ ಶಯನ ಬಿ.ಜಿ, ಮುಲ್ಲೇಂಗಡ ಮಧೋಶ್ ಪೂವಯ್ಯ, ಪುಷ್ಪಲತಾ ಶಿವಪ್ಪ, ಸೈಮನ್ ಎಸ್. ಮೇಕೇರಿ, ಮೂಕಳೆರ ಟೈನಿ ಪೂಣಚ್ಚ, ನಳಿನಾಕ್ಷಿ, ಜಗದೀಶ್…

Read More

ಮಂಗಳೂರು : ಸಂಗೀತ ಪರಿಷತ್ತಿನ ತ್ರಿಂಶತ್ ಸಂಭ್ರಮದ ಪ್ರಯುಕ್ತ ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 24-09-2023ರಂದು ‘ಯುವ ಸಂಗೀತೋತ್ಸವ’ ಕೊಡಿಯಾಲ್‌ ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಜರಗಿತು. ಸ್ಥಳೀಯ ಮತ್ತು ಕಾಸರಗೋಡು, ಕಾರ್ಕಳ, ಧರ್ಮಸ್ಥಳ, ಪುತ್ತೂರು, ಸುರತ್ಕಲ್ ಮತ್ತು ಬೆಳ್ಳಾರೆಯ ಹನ್ನೊಂದು ಮಂದಿ ಸಂಗೀತಗಾರರ ಪ್ರತಿಭೆ ಪ್ರದರ್ಶಿಸಲು ಉತ್ಸವ ವೇದಿಕೆಯಾಯಿತು. ಪ್ರತಿ ಒಂದೂವರೆ ಗಂಟೆ ಅವಧಿಯ ಕಛೇರಿಯಲ್ಲಿ ಮೃದಂಗ, ವಯೊಲಿನ್ ವಾದನದಲ್ಲಿ ಗಾಯಕರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದರು. ಪ್ರೇಕ್ಷಕರು ನಾದದ ಅಲೆಯಲ್ಲಿ ಮಿಂದರು. ಸಂಗೀತ ಪರಿಷತ್ತಿನ ಅಧ್ಯಕ್ಷ ಎಂ.ವಿ. ಪ್ರದೀಪ ಮಾತನಾಡಿ “1993ರಲ್ಲಿ ಆರಂಭವಾದ ಸಂಸ್ಥೆಗೆ 30 ವರ್ಷ ತುಂಬಿದ್ದು, ತ್ರಿಂಶತ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನಲ್ಲದೆ ತಿಂಗಳ ಕಾರ್ಯಕ್ರಮ, ಶ್ರಾವಣ ಸಂಗೀತೋತ್ಸವ, ಆರಾಧನಾ ಮಹೋತ್ಸವ, ಐದು ದಿನಗಳ ಸಂಗೀತ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ” ಎಂದರು. ಮ್ಯಾಪ್ಸ್ ಕಾಲೇಜು ವಿದ್ಯಾರ್ಥಿ, ವಯೊಲಿನ್…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುವ ತಿಂಗಳ ಉಪನ್ಯಾಸ ಕಾರ್ಯಕ್ರಮ ‘ಅರಿವು -ತಿಳಿವು’ ದಿನಾಂಕ 23-09-2023 ರಂದು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಇವರು “ಬಿ.ಜಿ.ಎಲ್  ಸ್ವಾಮಿ ಎಂಬ ಗಿಡಮರಗಳ ಒಡನಾಡಿ” ಈ ವಿಷಯದಲ್ಲಿ ಉಪನ್ಯಾಸ ನೀಡುತ್ತಾ “ಕನ್ನಡ ಶಾಸನಗಳಿಂದ ಮೊತ್ತಮೊದಲಿಗೆ ಸಸ್ಯ ಸಂಕುಲಗಳ ಕುರಿತು ಅಧ್ಯಯನ ಮಾಡಿದ ಹೆಗ್ಗಳಿಕೆ ಡಾ.ಬಿ.ಜಿ ಎಲ್. ಸ್ವಾಮಿಯವರಿಗೆ ಸಲ್ಲುತ್ತದೆ. ‘ಹಸಿರು ಹೊನ್ನು’ ಕೃತಿ ಸಾಹಿತ್ಯ ಲೋಕದಲ್ಲಿ ಸಸ್ಯ ಶಾಸ್ತ್ರಗಳ ಕುರಿತಂತೆ ಇರುವ ಪ್ರಸಿದ್ಧ ಮತ್ತು ವೈಶಿಷ್ಯಪೂರ್ಣ ಕೃತಿಯಾಗಿದೆ. ಡಿ.ವಿ.ಜಿ.ಯವರು ಮಾನವ ಜಗತ್ತಿನ ಭಾವಗಳನ್ನು ಕುರಿತು ಬರೆದರೆ ಮಗ ಬಿ.ಜಿ.ಎಲ್ ಸ್ವಾಮಿಯವರು ಸಸ್ಯ ಸಂಕುಲಗಳ ಹೃದಯಗಳ ಹಾಗೂ ಭಾವಗಳ ಜೊತೆ ಬೆರೆತು ಅರಿತರು. ತಂದೆ ಡಿ.ವಿ.ಜಿ.ಯವರಿಂದ ಶಿಸ್ತುಬದ್ಧ ಬದುಕಿನೊಂದಿಗೆ ಹಾಸ್ಯ ವಿನೋದ ಪ್ರವೃತ್ತಿಯಿಂದಲೇ ವಿಡಂಬನೆಗಳನ್ನೂ ಮಾಡಿದವರು. ಅವರು…

Read More

ಬಾಗಲಕೋಟೆ : ನಟರಾಜ ಸಂಗೀತ ನೃತ್ಯ ನಿಕೇತನ ವಿದ್ಯಾಗಿರಿ ಬಾಗಲಕೋಟೆ ಸಂಸ್ಥೆಯು ಆಯೋಜಿಸುವ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಮತ್ತು ಡಾ.ಅನಷ್ಕು ಅವರ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 30-09-2023ರ ಭಾನುವಾರದಂದು ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದ ಜೊತೆಗೆ ಮಂಜುನಾಥ್ ಎನ್ ಪುತ್ತೂರು ಮತ್ತು ಡಾ.ಅನಷ್ಕು ಎರಡು ದಿನಗಳ ನೃತ್ಯ ಕಾರ್ಯಗಾರವನ್ನು ಕೂಡ ನಡೆಸಿಕೊಡಲಿದ್ದಾರೆ.ಇದು ಮಂಜುನಾಥ್ ಅವರ 75ನೇ ಕಾರ್ಯಗಾರವಾಗಿದೆ.

Read More

ಉಪ್ಪಿನಂಗಡಿ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ನೇತೃತ್ವದಲ್ಲಿ ಪುಸ್ತಕ ಹಬ್ಬ, ಪುಸ್ತಕದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 29-09-2023, 30-09-2023 ಮತ್ತು 01-10-2023ರವರೆಗೆ ಮೂರು ದಿನ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಗ್ರಾಮ ಪಂಚಾಯತ್ ಉಪ್ಪಿನಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸತ್ಯಶಾಂತ ಪ್ರತಿಷ್ಠಾನ ನೆಕ್ಕಿಲಾಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಈ ಸಂಘಟನೆಗಳ ಸಹಕಾರದಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ನಡೆಯುತ್ತದೆ.    ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗ್ರಾ.ಪಂ. ಅಧ್ಯಕ್ಷೆ ಲಲಿತಾ ಪುಸ್ತಕ ಮೇಳ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ್‌ ಕುಮಾರ್‌ ಪ್ರಥಮ ಪುಸ್ತಕ ದಾನ…

Read More

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ ಇಲ್ಲಿನ ಯಕ್ಷಗಾನ ಸಂಘದ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ ದಿನಾಂಕ 30-09-2023ನೇ ಶನಿವಾರ ಸಂಜೆ 4-00 ರಿಂದ ನಡೆಯಲಿದೆ. ಸುರತ್ಕಲ್ಲಿನ ವಾಸುದೇವ ರಾವ್ ಇವರ ಸಂಯೋಜನೆಯಲ್ಲಿ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಸದಸ್ಯರು ‘ರುಕ್ಮಿಣಿ ಕಲ್ಯಾಣ’ ಪ್ರಸಂಗವನ್ನು ಪ್ರಸ್ತುತಪಡಿಸಲಿರುವರು. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಶ್ರೀಮತಿಯರಾದ ಸುಲೋಚನಾ ವಿ.ರಾವ್, ಸುಮಿತ್ರ ಶಶಿಕಾಂತ ಕಲ್ಲೂರಾಯ ಹಾಗೂ ಸುಮತಿ ಭಟ್‌ ಕೆ.ಯನ್ ಭಾಗವಹಿಸಲಿರುವರು.

Read More