Subscribe to Updates
Get the latest creative news from FooBar about art, design and business.
Author: roovari
ಉಡುಪಿ : ರಾಷ್ಟ್ರೀಯ ಗ್ರಂಥಪಾಲಕರ ದಿನದ ಅಂಗವಾಗಿ ಭಾರತದ ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಇವರ ದಿನಾಚರಣೆಯ ಕಾರ್ಯಕ್ರಮವು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ದಿನಾಂಕ 12-08-2023ರಂದು ನಡೆಯಿತು. ಎಂ.ಜಿ.ಎಂ.ಕಾಲೇಜಿನ ಗ್ರಂಥಪಾಲಕರಾದ ಶ್ರೀ ಕಿಶೋರ್ ಕುಮಾರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕನ್ನು ಕಲ್ಪಿಸಿಕೊಟ್ಟ ಕೀರ್ತಿ ಡಾ.ಎಸ್.ಆರ್.ರಂಗನಾಥನ್ ಅವರಿಗೆ ಸಲ್ಲುತ್ತದೆ. ಅವರು ಮೂಲತಃ ಗಣಿತಾಸ್ತ್ರದ ಪ್ರಾಧ್ಯಾಪಕರು. ಅವರ ಅದಮ್ಯವಾದ ಪುಸ್ತಕ ಪ್ರೀತಿ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹನನ್ನಾಗಿ ರೂಪಿಸಿದೆ. ಅವರು ಅಂದು ರೂಪಿಸಿದ ವ್ಯವಸ್ಥೆಯಿಂದಾಗಿ ಶಾಲಾ ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಆಧುನಿಕ ವ್ಯವಸ್ಥೆಯೊಂದಿಗೆ ಪರಿವರ್ತನೆಗೊಂಡಿದೆ. ಡಾ.ಎಸ್.ಆರ್.ರಂಗನಾಥನ್ ಅವರು ಆಗೋಸ್ಟ್ 12, 1892ರಲ್ಲಿ ಜನಿಸಿದರು. ಅವರು ಗ್ರಂಥಾಲಯದ ಬಗ್ಗೆ ಮಾಡಿದ ಸಾಧನೆ, ನೀಡಿದ ಕೊಡುಗೆ ಹಾಗೂ ಅವರ ಸೇವೆಗಾಗಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಾಗಿ ಆಚರಿಸಲಾಗುತ್ತದೆ” ಎಂದು ಹೇಳಿದರು. ರಂಗನಾಥನ್ ಗ್ರಂಥಾಲಯಕ್ಕೆ ನೀಡಿದ ಕೊಡುಗೆಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್…
ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನ ಮ್ಯೂಸಿಕ್ ಅಸೋಸಿಯೇಶನ್ ಸಹಯೋಗದಲ್ಲಿ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತ ಪಡಿಸಿದ ‘ಜನಪದ ಗೀತೆ ಹಾಗೂ ರಂಗಸಂಗೀತ’ ಗಾಯನ ಕಾರ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನ ಫಾ. ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ದಿನಾಂಕ 11-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆ.ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಇ.ಸಿ. ಮತ್ತು ಸಿ.ಸಿ. ಸಂಚಾಲಕರಾದ ಶ್ರೀ ಅಶೋಕ್ ಪ್ರಸಾದ್, ಡಾ.ದಿನೇಶ್ ನಾಯಕ್, ವ್ಯವಸ್ಥಾಪನಾ ವಿಭಾಗದ ನಿರ್ದೇಶಕರಾದ ಡಾ.ಚಾರ್ಲ್ಸ್ ಫುರ್ತಾದೋ, ಎಲ್.ಸಿ.ಆರ್.ಐ ವಿಭಾಗದ ನಿರ್ದೇಶಕರಾದ ಡಾ.ರೋನಾಲ್ಡ್ ನಜ್ರತ್, ಹಣಕಾಸು ಅಧಿಕಾರಿಯಾದ ಫಾ.ವಿನ್ಸೆಂಟ್ ಲೋಬೊ, ಮ್ಯೂಸಿಕ್ ಅಸೋಸಿಯೇಶನ್ನಿನ ಅಧ್ಯಕ್ಷರಾದ ಡಾ.ಸ್ಮಿತಾ ಡಿ.ಕೆ. ಮತ್ತು ಡಾ.ಭಾರತಿ ಉಪಸ್ಥಿತರಿದ್ದರು. ರೋಹನ್ ಎಸ್.ಉಚ್ಚಿಲ್, ಭವ್ಯ ಶೆಟ್ಟಿ, ಸುನಿಲ್ ಪಲ್ಲಮಜಲು, ಅರ್ಜುನ್ ಆಚಾರ್ಯ, ಶಶಾಂಕ್ ಐತಾಳ್, ಅರ್ಲ್ ಬ್ರ್ಯಾನ್, ರಾಘವ್ ಸೂರಿ, ಸುಧೀಶ್ ಕೂಡ್ಲು, ಚಿನ್ಮಯಿ ಭಟ್, ಮೇಘನಾ ಕುಂದಾಪುರ, ಸಕೇತಾ ಶೆಟ್ಟಿ, ಶರಣ್ಯಾ ಭಟ್, ಮೇಘಾ ಸುರತ್ಕಲ್, ಗೌತಮ್ ಬಿರ್ವ, ಗೌತಮ್ ಶೆಟ್ಟಿ, ರಾಹುಲ್ ಕುಡುಪು…
ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಆಯೋಜಿಸಿದ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿಯ ‘ರಂಗ ಮಾಲೆ -73’ರ ಕಾರ್ಯಕ್ರಮವು ದಿನಾಂಕ 12-08-2023ರಂದು ನಡೆಯಿತು. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ‘ಸ್ವಾತಂತ್ರ್ಯ ಸಮರ ಕರುನಾಡು ಅಮರ’ ಎಂಬ ನಾಟಕವು ‘ಜನಪದರು ರಂಗಮಂದಿರ’ದಲ್ಲಿ ಪ್ರದರ್ಶನಗೊಂಡಿತು. ಈ ನಾಟಕವು ಡಾ.ಟಿ.ಲಕ್ಷ್ಮೀನಾರಾಯಣ ಇವರ ರಚನೆಯಾಗಿದ್ದು, ಮಾಲೂರು ವಿಜಿ ನಿರ್ದೇಶನದಲ್ಲಿ ಮಾಲೂರಿನ ರಂಗ ವಿಜಯ ತಂಡ ಪ್ರಸ್ತುತ ಪಡಿಸಿತು. ಹೌಸ್ ಫುಲ್ ಪ್ರದರ್ಶನವನ್ನು ಉದ್ಧಾಟಿಸಿದ ವೇದಿಕೆ ಅಧ್ಯಕ್ಷರಾದ ಕೆ.ವಿ. ವೆಂಕಟರಮಣಪ್ಪ ಪಾಪಣ್ಣ ಕಾಟಂ ನಲ್ಲೂರು ಇವರು ಪ್ರೇಕ್ಷಕರಿಂದ ತುಂಬಿದ ಸಭಾಂಗಣವನ್ನು ಅಭಿನಂದಿಸಿ “ರಂಗ ಚಟುವಟಿಕೆಗಳಿಗೆ ನೀಡಿದ ಸಹಕಾರ ಸಂತಸ ತಂದಿದೆ” ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಬೆಂ.ಹಾ.ಉ. ಒಕ್ಕೂಟದ ಮಾಜಿ ನಿರ್ದೇಶಕ ಹುಸ್ಕೂರು ಸುಬ್ಬಣ್ಣನವರನ್ನು ಹಾಗೂ ನಾಟಕಕಾರ ಮತ್ತು ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ನನಸು ಮನೆ, ಸುರೇಶ್ ಎಂ. ಮತ್ತು ಮಮತ ಮುನಿರಾಜು…
ಯಕ್ಷಗಾನದಲ್ಲಿ ಬಣ್ಣದ ವೇಷಗಳು ತಮ್ಮ ಅಟ್ಟಹಾಸ, ಮುಖವರ್ಣಿಕೆ, ಕುಣಿತ, ತೆರೆಕುಣಿತ, ನಡೆ ಇವುಗಳಿಂದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿವೆ. ಒಡ್ಡೋಲಗ ವೈಭವವನ್ನು ನೋಡುವುದೆಂದರೆ ಪ್ರೇಕ್ಷಕರ ಕಣ್ಣುಗಳಿಗೆ, ಕಿವಿಗಳಿಗೆ ಅದೊಂದು ಹಬ್ಬವೇ ಹೌದು. ಪ್ರಸಂಗದ ಕೊನೆಯಲ್ಲಿ ಯಾ ಬೆಳಗಿನ ಹೊತ್ತು ಬಣ್ಣದ ವೇಷಗಳು ರಂಗವೇರಿದರೆ ನೋಟಕರ ನಿದ್ದೆಯನ್ನು ಬಡಿದೆಬ್ಬಿಸಿ ಅವರನ್ನು ರೋಮಾಂಚನಗೊಳಿಸುತ್ತವೆ. ಆದರೂ, ಈಗೀಗ ಈ ವಿಭಾಗವು ಅವಜ್ಞೆಗೊಳಗಾಗುತ್ತಿದೆಯೇ? ಎಂಬ ಸಂಶಯವು ಕಲಾಭಿಮಾನಿಗಳಿಗೆ ಬಾರದಿರದು. ಅದಕ್ಕೆ ಹಲವು ಕಾರಣಗಳೂ ಇರಬಹುದು. ಹಾಗಾಗಬಾರದು. ಬಣ್ಣದ ವೇಷಗಳ ನಿಜಸೌಂದರ್ಯವನ್ನು ಸದಾ ಆಸ್ವಾದಿಸುವ ಅವಕಾಶಗಳು ಕಲಾಭಿಮಾನಿಗಳಿಗೆ ಸಿಗಲೇಬೇಕು. ಕಲಾವಿದರೂ, ಪ್ರೇಕ್ಷಕರೂ ಯಕ್ಷಗಾನಕ್ಕೆ ಬಣ್ಣದ ವೇಷಗಳ ಅನಿವಾರ್ಯತೆ ಮತ್ತು ಮಹತ್ತ್ವಗಳನ್ನು ಅರಿತು ಸ್ಪಂದಿಸಬೇಕಾದುದು ಯೋಚಿಸಬೇಕಾದ ವಿಚಾರ. ಹಿರಿಯ ಕಲಾವಿದರನೇಕರು ರಂಗವೇರಿ ಅಬ್ಬರಿಸಿ ಗಂಡುಕಲೆಯ ‘ಬಣ್ಣ’ ವಿಭಾಗಕ್ಕೆ ನ್ಯಾಯವನ್ನೂ ಶ್ರೀಮಂತಿಕೆಯನ್ನೂ ನೀಡಿದ್ದರು. ಹಳೆಯ ತಲೆಮಾರಿನ ಹಲವು ಕಲಾವಿದರನ್ನು ನಾವು ನೋಡಿಲ್ಲ. ಆದರೆ ಹೆಸರನ್ನು ಕೇಳಿದ್ದೇವೆ. ಯಾಕೆಂದರೆ ಅವರು ಕೀರ್ತಿವಂತರಾಗಿಯೇ ಇಹದ ವ್ಯವಹಾರವನ್ನು ಮುಗಿಸಿದ್ದರು. ಇನ್ನು ಕೆಲವು ಹಿರಿಯ ಕಲಾವಿದರ ವೇಷಗಳನ್ನು ನೋಡಿದ…
ಉಡುಪಿ : ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಖಂಡ ದಕ್ಷಿಣ ಕನ್ನಡ ಜಿಲ್ಲಾ ಕಚುಸಾಪ ಸಮ್ಮೇಳನ, ಪುಸ್ತಕದಾನ ಸಮಾರಂಭ, ಚುಟುಕು ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 13-08-2023ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾಧಿಪತಿ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಯವರು “ಪುಸ್ತಕದಾನ ಕಾರ್ಯಕ್ರಮ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ನಾಡಿನಾದ್ಯಂತ ಹಮ್ಮಿಕೊಂಡಿರುವಂತಹ ವಿಷಯ ಸ್ವಾಗತಾರ್ಹ. ಅದು ಮನೆ ಮನಕೆ ತಲುಪುವ ಕಾರ್ಯವೀಗ ನಡೆಯಬೇಕಿದೆ. ಬವಣೆಯ ಬದುಕಿನ ಜೀವನದಲ್ಲಿ ಸಮಯದ ಅಭಾವವಿರುವ ಕಾರಣ ಚುಟುಕು ಸಾಹಿತ್ಯ ಅಗತ್ಯ ಹಾಗೂ ಅನಿವಾರ್ಯ, ಕಚುಸಾಪ ನಡೆದು ಬಂದ ಸಾಧನೆ ಪ್ರಶಂಸೆ ವ್ಯಕ್ತಪಡಿಸಿ ಸರಕಾರದ ಸಹಾಯ ದೊರೆಯದೇ ಹೋದರೂ ಸಮಾಜ ಕೈಹಿಡಿದು ನಡೆಸುವುದು” ಎಂದು ಹೇಳಿದರು. ಹಿರಿಯ ಚಿಂತಕ ಹಾಗೂ ಉದ್ಯಮಿ ವಿಶ್ವನಾಥ ಶೆಣೈ ಮಾತನಾಡಿ “ಪುಸ್ತಕದಾನ ಮಹತ್ತರ ಕಾರ್ಯ ಅದನ್ನು ಕಚುಸಾಪ ನಡೆಸಿಕೊಂಡು ಬಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಚುಸಾಪ ರಾಜ್ಯ ಸಂಚಾಲಕರಾದ ಲಕ್ಷತ್ರಯ ಪ್ರಶಸ್ತಿ ಪುರಸ್ಕೃತರಾದ…
ಉಳ್ಳಾಲ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದ.ಕ. ಉಡುಪಿ ಜಿಲ್ಲೆ, ಸೈಂಟ್ ಜೋಸೆಫ್ ಜೋಯ್ ಲ್ಯಾಂಡ್ ಹೈಸ್ಕೂಲ್, ಕೊಲ್ಯ, ಸೋಮೇಶ್ವರ ಇವರ ಸಂಯುಕ್ತ ಸಹಯೋಗದೊಂದಿಗೆ ಸೈಂಟ್ ಜೋಸೆಫ್ ಜೋಯ್ ಲ್ಯಾಂಡ್ ಹೈಸ್ಕೂಲ್ ಸಭಾಂಗಣದಲ್ಲಿ ದಿನಾಂಕ 11-08-2023ರಂದು ‘ಕನ್ನಡ ಕಲರವ’ ಕಾರ್ಯಕ್ರಮವನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ನಾಯಕ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಭಾಷಾ ಬಾಂಧವ್ಯ ಮತ್ತು ಸಾಮರಸ್ಯ ಚಿಂತನ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿಯವರು “ಮಾನವನ ವಿಕಾಸಕ್ಕೆ ಭಾಷೆಯೇ ಕೀಲಿಕೈ. ಬಹುಭಾಷೆಗಳ ಕಲಿಕೆ ಮತ್ತು ಭಾಷಿಕರ ನಡುವಿನ ಬಾಂಧವ್ಯ ಹಾಗೂ ಸಾಮರಸ್ಯದ ಬದುಕು ಸಮಾಜದ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಸಾಮರಸ್ಯವನ್ನು ಕದಡುವ ವಿಷಯಗಳನ್ನು ಕೆದಕಬಾರದು. ಭಾಷೆ ಬೆಳೆಯುವುದು ಸಮೂಹದ ಜೊತೆಗಿನ ಸಂವಹನದೊಂದಿಗೆ. ಭಾಷೆಯ ಬಗೆಗಿನ ದುರಭಿಮಾನ ಸಲ್ಲದು. ನಾಡಗೀತೆಯಲ್ಲಿ ಹೇಳಿರುವ ಸೋದರ…
ಮಂಗಳೂರು: ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿ ಮಲೆನಾಡಿನವರೆಗೂ ಹಬ್ಬಿರುವ ಆಕರ್ಷಕ ಕಲೆ. ಕರಾವಳಿಯ ಈ ಗಂಡುಕಲೆ ಕನ್ನಡದ ಕಂಪನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ಬಿತ್ತರಿಸಿದೆ. ಕರಾವಳಿ ತೀರದ ಸಮುದ್ರದ ಅಲೆಗಳಂತೆ ಯಕ್ಷಗಾನಕ್ಕೂ ಸಮುದ್ರದ ಅಲೆಗಳ ನಾದವಿದೆ; ಭೋರ್ಗರೆತವಿದೆ. ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಯಕ್ಷಗಾನದ ಮೊದಲ ಉಲ್ಲೇಖ ಶಾರ್ಣದೇವನ “ಸಂಗೀತ ರತ್ನಾಕರ”ದಲ್ಲಿ (೧೨೧೦ ಕ್ರಿಶ) “ಜಕ್ಕ” ಎಂದು ಆಗಿದ್ದು ಮುಂದೆ “ಯಕ್ಕಲಗಾನ” ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯ. ಕ್ರಿಶ ೧೫೦೦ರ ವೇಳೆಗೆ ವ್ಯವಸ್ಥಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ. ಜಾಗತಿಕ ರಂಗಭೂಮಿಯನ್ನು ಅವಲೋಕಿಸಿದರೆ ಇಷ್ಟು ಸುದೀರ್ಘ ಕಾಲದಲತ್ತ ಬಂದಿರುವ ಕಲೆಗಳಾದ ಕಥಕಳಿ, ಮೋಹನಿ ಅಷ್ಟಂ, ಸದೀರ್ ನೃತ್ಯ, ಷೇಕ್ಸ್ ಫಿಯರ್ ನಾಟಕಗಳಂತೆ ಯಕ್ಷಗಾನವೂ ಒಂದು. ಶುದ್ಧ ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ. ಇದು ಸಮಾಜದಲ್ಲಿ ಪೌರಾಣಿಕ ಪ್ರಜ್ಞೆ ಮೂಡಿಸಿದ…
ನಾನು ಬರೆಯಲು ಆರಂಭಿಸಿದೆ…..! ನಾ ಬರೆಯಲು ಹೊರಟಿರುವುದು ಒಬ್ಬ ವ್ಯಕ್ತಿಯ ಬದುಕಿನ ಹೊಸ ಅಧ್ಯಾಯವಲ್ಲ, ಹಾಗೆಂದು ಇದು ಮುಗಿದ ಅಧ್ಯಾಯವೂ ಅಲ್ಲ, ಬದಲಾಗಿ 1957ರಿಂದ ಮೊದಲ್ಗೊಂಡು ಈವರೆಗೆ ಸುಮಾರು 66 ವರುಷಗಳ ಕಾಲ ಬರವಣಿಗೆಗೆ ನಿಲುಕದೆ ಸಾಗುತ್ತಿರುವ ಒಬ್ಬ ವ್ಯಕ್ತಿಯ ಸಾಧನಾ ಚರಿತ್ರೆ. ಬರೆಯಬೇಕು ಅಂದುಕೊಂಡರೂ ಅದಕ್ಕೊಂದು ಆರಂಭವೇ ಸಿಗುತ್ತಿಲ್ಲ, ಮುಗಿಸೋಣ ಎಂದರೆ ಅಂತ್ಯವೂ ಕಾಣುತ್ತಿಲ್ಲ, ರೋಚಕದ ಆರಂಭದೊಂದಿಗೆ ಮೊದಲ್ಗೊಂಡು ಕೊನೆಯೇ ಇಲ್ಲದ ಸಾಧನೆಗಳೊಂದಿಗೆ ಸಾಗುತ್ತಿರುವ ಬದುಕಿನ ಪರಿಚಯವನ್ನು ನಿಮಗೆ ಮಾಡಿಕೊಡುವ ಪ್ರಯತ್ನ ನನ್ನದು. ಕೆಲ ವ್ಯಕ್ತಿಗಳು ವಿಶಿಷ್ಟತೆಯಿಂದ ಕೂಡಿದ ತನ್ನ ಊರಿನಿಂದಾಗಿ ಹೆಸರು ಮಾಡುತ್ತಾರೆ, ಇನ್ನು ಕೆಲವು ಊರುಗಳು ಒಬ್ಬ ವ್ಯಕ್ತಿಯ ಸಾಧನೆಯಿಂದಾಗಿ ಆತನ ಹೆಸರಿನ ಜೊತೆ ಸೇರಿಕೊಂಡು ವಿಶ್ವಮಾನ್ಯವಾಗುತ್ತದೆ. ಅಂತೆಯೇ ತನ್ನ ಅಪೂರ್ವ ಮತ್ತು ಅನನ್ಯ ಸಾಧನೆಯಿಂದಾಗಿ ಕಲ್ಮಾಡಿ ಎಂಬ ಊರನ್ನು ವಿಶ್ವಮಾನ್ಯಗೊಳಿಸಿದ ಸಾಧಕರು ಇವರು. ಇವರು ವ್ಯಕ್ತಿಯಲ್ಲ, ಜಾನಪದ ಲೋಕದ ಅಶ್ವಶಕ್ತಿ. ನಾನು ಆರಂಭದಲ್ಲಿ ಇವರ ಹೆಸರನ್ನು ಹೇಳಿದ್ದರೆ ಹೋ.. ಇವರಾ ? ಎಂದು ನಿಮ್ಮಲ್ಲೊಂದು ಉದ್ಗಾರ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 18-08-2023 ರಂದು ಸಂಜೆ 5.00 ಗಂಟೆಗೆ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ʻಅಂಕಿತ ಪುಸ್ತಕ ಪುರಸ್ಕಾರʼ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ. ʻಶಿವಮೊಗ್ಗ ಜಿಲ್ಲೆಯ ಸಾಗರದ ರವೀಂದ್ರ ಪುಸ್ತಕಾಲಯಕ್ಕೆʼ 2022ನೆಯ ಸಾಲಿನ ಹಾಗೂ ಬೆಂಗಳೂರಿನ ʻಛಂದ ಪುಸ್ತಕʼ ಸಂಸ್ಥೆಗೆ 2023ನೆಯ ಸಾಲಿನ ಅಂಕಿತ ಪುಸ್ತಕ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ ಕುಮಾರ ಎಸ್.ಹೊಸಮನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಲೇಖಕ ಹಾಗೂ ಪತ್ರಕರ್ತರಾದ ಶ್ರೀ ಗಿರೀಶ್ರಾವ್ ಹತ್ವಾರ್ (ಜೋಗಿ) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದತ್ತಿ ದಾನಿಗಳಾಗಿರುವ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯ ಶ್ರೀ ಪ್ರಕಾಶ ಕಂಬತ್ತಳ್ಳಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಡಿಪು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಹೋಬಳಿ ಘಟಕ ಹಾಗೂ ವಿಶ್ವಮಂಗಳ ಪ್ರೌಢಶಾಲೆ ಕೊಣಾಜೆ ಸಹಯೋಗದೊಂದಿಗೆ ದಿನಾಂಕ 18-08-2023ರಂದು ಬೆಳಗ್ಗೆ ವಿಶ್ವಮಂಗಳ ಪ್ರೌಢಶಾಲೆಯ ಸಭಾಂಗಣದಲ್ಲಿ ಕನ್ನಡ ಸಂಭ್ರಮ : ‘ಕುವೆಂಪು ಕಂಪು’- ಉಪನ್ಯಾಸ, ವಿಮರ್ಶೆ ಹಾಗೂ ಭಾವಗೀತೆ ಕಾರ್ಯಕ್ರಮ ನಡೆಯಲಿದೆ. ಸಮಾರಂಭವನ್ನು ವಿಶ್ವಮಂಗಳ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ, ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗ ಅಧ್ಯಕ್ಷರಾದ ಪ್ರೊ.ವಿನಯ್ ರಜತ್ ಉದ್ಘಾಟಿಸಲಿದ್ದಾರೆ. ‘ಕುವೆಂಪು ನೆನಪು’ ವಿಷಯದ ಬಗ್ಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಇವರಿಂದ ಉಪನ್ಯಾಸ ನಡೆಯಲಿದೆ. ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕಸಾಪ ಉಳ್ಳಾಲ ಹೋಬಳಿ ಘಟಕದ ಅಧ್ಯಕ್ಷೆಯಾದ ವಿಜಯಲಕ್ಷ್ಮಿ ಪ್ರಸಾದ್ ರೈ ವಹಿಸಲಿದ್ದಾರೆ. ವಿಶ್ವಮಂಗಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಿಯಾ ಎನ್, ಕಸಾಪ ಉಳ್ಳಾಲ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೃತಿಯ ಕುರಿತು…