Subscribe to Updates
Get the latest creative news from FooBar about art, design and business.
Author: roovari
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ (ಡಾ. ಸುಧಾ ಮೂರ್ತಿ ಹಾಗೂ ಡಾ. ಪಿ. ದಯಾನಂದ ಪೈ ಪ್ರಾಯೋಜಿತ) 2023ರ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಎಂಬ ವಿನೂತನ ಕಾರ್ಯಕ್ರಮ ಸರಣಿಯ ಅಕ್ಟೋಬರ್ ತಿಂಗಳ ಕಾರ್ಯಕ್ರಮವು ದಿನಾಂಕ 08-10-2023ರಂದು ಸಂಜೆ ಗಂಟೆ 4ಕ್ಕೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಮಾರಿ ಭಾವನಾ ಭಟ್ ಹರಿಖಂಡಿಗೆ ಇವರಿಂದ ‘ಪಿಟೀಲು ವಾದನ’ ಹಾಗೂ ಕುಮಾರಿ ಪ್ರಿಯದರ್ಶಿನಿ ಭಟ್ ಹರಿಖಂಡಿಗೆ ಇವರಿಂದ ‘ವೀಣಾ ವಾದನ’ ವಿಶೇಷ ಕಾರ್ಯಕ್ರಮ ನಡೆಯಲಿದೆ. ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ರಾಜ್ಯ ಪ್ರಶಸ್ತಿ ಪುರಸ್ಕೃತರು ಭಾಸ್ಕರ್ ಕೊಗ್ಗ ಕಾಮತ್ ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭ ದಿನಾಂಕ 01-10-2023ನೇ ಭಾನುವಾರ ಬೆಳಿಗ್ಗೆ ಗಂಟೆ 11.00ಕ್ಕೆ ನಡೆಯಲಿದೆ. ಮಂಗಳೂರಿನ ಬಳ್ಳಾಲ್ಬಾಗಿನ ಲೋಕಯ್ಯ ಶೆಟ್ಟಿ ರಸ್ತೆಯಲ್ಲಿರುವ ಶ್ರೀ ದುರ್ಗಾ ಕಾಂಪ್ಲೆಕ್ಸ್ನ 3ನೇ ಮಹಡಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಗೌರವಾನ್ವಿತ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ವಹಿಸಲಿರುವರು. ಮಂಗಳೂರಿನ ಸಿಮ್ ಟೆಕ್ನಾಲಜಿಸ್ ಗ್ರೂಪೀನ ಆಡಳಿತ ನಿರ್ದೇಶಕರಾದ ಶ್ರೀ ನವೀನ್ ಕಿಲ್ಲೆ ದೀಪ ಪ್ರಜ್ವಲನ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಕೆ.ಶೆಟ್ಟಿ, ಮಂಗಳೂರಿನ ಸಿಂಫನಿ ಸಂಗೀತೋಪಕರಣ ಮಳಿಗೆ ಇದರ ಮಾಲಕರಾದ ಶ್ರೀ ಲಾಯ್ ನೊರೊನ್ಹಾ, ಮಂಗಳೂರಿನ ಕರ್ನಾಟಕ ಸಂಗೀತ ಕಲಾವಿದರಾದ ವಿದ್ವಾನ್ ಅನೀಶ್ ವಿ.ಭಟ್ ಭಾಗವಹಿಸಲಿದ್ದಾರೆ. ಇದೇ ಸ್ಥಳದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಗಂಟೆ 11.00 ರಿಂದ 12.00ರ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ನಡೆಯಲಿದೆ. ಜೊತೆಗೆ ಸಂಗೀತ ಕಲಿಕೆಗೆ…
ಕಾಸರಗೋಡು : ಚಿನ್ಮಯ ವಿದ್ಯಾಲಯ, ವಿದ್ಯಾನಗರದ ತೇಜಸ್ ಸಭಾಂಗಣದಲ್ಲಿ ದಿನಾಂಕ 21-09-2023ರಂದು ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಆರುಷಿ ಮುದುಗಲ್ ಪ್ರಸ್ತುತಪಡಿಸಿದ ಒಡಿಸ್ಸಿ ನೃತ್ಯ ಪ್ರದರ್ಶನವು ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು. ಒಡಿಸ್ಸಿ ನೃತ್ಯದ ಆರಂಭಿಕ ಅಧ್ಯಯನ ಹಾಗೂ ತಾಂತ್ರಿಕ ಕೌಶಲಗಳನ್ನು ಇವರು ದೆಹಲಿಯ ಮಹಾವಿದ್ಯಾಲಯದಲ್ಲಿ ಗುರು ಮಾಧವಿ ಮುದಗಲ್ ಅವರಿಂದ ಅಭ್ಯಸಿಸಿ ಭಾರತದ ಶ್ರೇಷ್ಠ ಹತ್ತು ಒಡಿಸ್ಸಿ ಕಲಾವಿದರಲ್ಲಿ ಒಬ್ಬರೆನಿಸಿದ್ದಾರೆ. ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯ, ಯು.ಕೆ., ಬೆಲ್ಜಿಯಂ ಮೊದಲಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯೋತ್ಸವಗಳಲ್ಲಿ ಪ್ರದರ್ಶನ ನೀಡಿದ ಆರುಷಿ ಮುದಗಲ್ ಸ್ಪಿಕ್ ಮೆಕೆ ಸಂಘಟನೆಯ ಭಾಗವಾಗಿದ್ದು, ಯುವ ಜನರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶವನ್ನಿಟ್ಟುಕೊಂಡಿರುವರು. ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲ ಖಾನ್ ಪುರಸ್ಕಾರಕ್ಕೆ ಭಾಜನರಾದ ಇವರು ಎಫ್.ಐ.ಸಿ.ಸಿ.ಯಿಂದ ‘ಯುವ ವನಿತೆಯ ಸಾಧನೆ’, ಗುರು ಕೇಳು ಚರಣ್ ಮಹಾ ಪಾತ್ರರಿಂದ ‘ಯುವ ಪ್ರತಿಭಾ ಸಮ್ಮಾನ್’, ರಾಷ್ಟ್ರಪತಿಯಿಂದ ‘ಬಾಲಶ್ರೀ ಪುರಸ್ಕಾರ’, ರಾಜೀವ್ ಗಾಂಧಿ ಎಕ್ಸಲೆನ್ಸ್ ಪುರಸ್ಕಾರ ಮೊದಲಾದ…
ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಸಂಸ್ಕೃತೋತ್ಸವವನ್ನು ದಿನಾಂಕ 14-09-2023ರಂದು ಕದ್ರಿಯ ಜ್ಯೋತಿಷ ವಿದ್ವಾನ್ ಶ್ರೀರಂಗ ಐತಾಳ ಇವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ವಿದ್ಯಾರ್ಜನೆಯು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಬೌದ್ಧಿಕ ವಿಕಾಸವಾಗಬೇಕು. ಅಧ್ಯಯನದ ಜತೆ ಭಾಷಾಭಿಮಾನ, ದೇಶಾಭಿಮಾನ ಹಾಗೂ ಸ್ವಾಭಿಮಾನವನ್ನು ಬೆಳೆಸಿಕೊಂಡಾಗ ಸಂಸ್ಕೃತ ಭಾಷೆಯ ಆಗಾಧತೆ ಅರಿವಾಗುತ್ತದೆ. ಹಾಗಾಗಿ ಭಾರತೀಯರ ಪ್ರಾಣಸದೃಶವಾದ ಸಂಸ್ಕೃತ ಭಾಷೆಯನ್ನು ಉಳಿಸಿಬೆಳೆಸುವಲ್ಲಿ ವಿದ್ಯಾರ್ಥಿಗಳು ಶ್ರದ್ಧಾವಂತರಾಗಬೇಕು” ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅವರು, “ವಿದ್ಯಾರ್ಥಿಗಳು ಬಾಲ್ಯದಲ್ಲಿ ಭಾಷೆಯನ್ನು ಶ್ರದ್ಧೆಯಿಂದ ಕಲಿತಾಗ ಅದರಲ್ಲಿ ಪ್ರೌಢಿಮೆ ಸಿದ್ಧಿಸುತ್ತದೆ. ಸಂಸ್ಕೃತ ವ್ಯವಹಾರ ಭಾಷೆಯಾಗಿ ಮೂಡಿಬರಬೇಕಾದರೆ ನಮ್ಮ ಇಚ್ಚಾಶಕ್ತಿ ಬಹಳ ಮುಖ್ಯ. ಈ ಭಾಷೆಯ ಮೂಲಕ ವೈದಿಕ ಸಾಹಿತ್ಯ, ರಾಮಾಯಣ ಮಹಾಭಾರತಾದಿ ಮಹಾಕಾವ್ಯಗಳ ರಸಾಸ್ವಾದ ಮಾಡಲು ಸಾಧ್ಯ” ಎಂದರು. ಶಾರದಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ “ಭಾರತೀಯ ಋಷಿಗಳು ಇಂದಿನ…
ಮಂಗಳೂರು : ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಇದರ ಪದಗ್ರಹಣ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ದಿನಾಂಕ 30-09-2023ರಂದು ಜರಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುವೆರೆ ಆಯನೊ ಕೂಟದ ಅಧ್ಯಕ್ಷರಾದ ಶ್ರೀಮತಿ ಶಮಿನ ಆಳ್ವ ಇವರು ವಹಿಸಲಿದ್ದಾರೆ. ವಿಧಾನ ಸಭಾ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಇವರು ಉದಾಟಿಸಲಿದ್ದು, ಕಟೀಲು ದೇವಾಲಯದ ಶ್ರೀ ಹರಿನಾರಾಯಣ ಆಸ್ರಣ್ಣ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಇದೇ ವೇದಿಕೆಯಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಶ್ರೀ ರಮಾನಾಥ ರೈ ಮತ್ತು ಜಾಗತಿಕ ಬಂಟ್ಸ್ ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಇವರುಗಳು ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರಿಗೆ ‘ತುಳುವೆರೆ ಕರ್ಣೆ’ ಬಿರುದು ಪ್ರದಾನ ಮಾಡಲಿರುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಇವರಿಂದ ದೇವದಾಸ್ ಈಶ್ವರಮಂಗಲ ಇವರು ಅನುವಾದ ಮಾಡಿದ ‘ಸಿರಿದೇವಿ ಮಾತ್ಮೆ’ ಎಂಬ ಕೃತಿಯು ಲೋಕಾರ್ಪಣೆಯಾಗಲಿದೆ. ಮಧ್ಯಾಹ್ನ ಗಂಟೆ 2ಕ್ಕೆ ವಾಯ್ಸ್ ಓಫ್ ಆರಾಧನಾ…
ಮುಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದಿಂದ ದಿನಾಂಕ 01-10-2023ರ ಭಾನುವಾರ ಸಂಜೆ ಗಂಟೆ 6ಕ್ಕೆ ಮುಲ್ಕಿ ಬಪ್ಪನಾಡಿನ ಮಾತಾ ಪಂಚದುರ್ಗಾ ರೆಸಿಡೆನ್ಸಿ ಮಾಳಿಗೆಯಲ್ಲಿ ಕಾರ್ಯಕ್ರಮ ‘ಸಾಹಿತ್ಯದ ಬೆಳಕು’. ಈ ಕಾರ್ಯಕ್ರಮದಲ್ಲಿ ಕತ್ತಲಿನಲ್ಲಿ ಬೆಳಕಿನ ಮಾತು ಆಡುತ್ತಾರೆ. ಸಾಹಿತಿ ಕಲಾವಿದ ತಾರಾನಾಥ ವರ್ಕಾಡಿ ಬೆಳಕಿನ ಪದ್ಯಗಳನ್ನು ಹಾಡುತ್ತಾರೆ. ಬೋಳ ವಿನಂತಿ ಕಾಮತ್ ಮತ್ತು ಪ್ರಣವ್ ಶರ್ಮ ಇವರಿಗೆ ಹಿಮ್ಮೇಳದಲ್ಲಿ ಶಶಿ ಹೆಜಮಾಡಿಕೋಡಿ ಬಳಗದವರು ಸಹಕರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.
ಸುರತ್ಕಲ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ, ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜೊತೆಯಾಗಿ ನಡೆಸಿಕೊಂಡು ಬರುತ್ತಿರುವ ‘ಉದಯರಾಗ – 45’ನೇ ಸಂಗೀತ ಕಚೇರಿಯು ಸುರತ್ಕಲ್ ನ ‘ಅನುಪಲ್ಲವಿ’ಯಲ್ಲಿ ದಿನಾಂಕ 01-10-2023 ಭಾನುವಾರ ಬೆಳಿಗ್ಗೆ ಗಂಟೆ 6ಕ್ಕೆ ನಡೆಯಲಿದೆ. ತನ್ಮಯೀ ಉಪ್ಪಂಗಳ ಇವರ ಹಾಡುಗಾರಿಕೆಗೆ ಸುನಾದ ಪಿ.ಎಸ್. ಮಾವೆ ವಯಲಿನ್ ಮತ್ತು ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಂಬೈ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿ. ನಿವೃತ್ತ ಮಹಾ ಪ್ರಬಂಧಕರಾದ ಶ್ರೀ ಯಶವಂತ ಪುತ್ರನ್ ಇವರು ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ತನ್ನ 59ನೇ ವರ್ಷದಲ್ಲಿ, 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ.ಮಲ್ಪೆ ಮಧ್ವರಾಜ್ ಸ್ಮಾರಕ ನಡೆಯಲಿರುವ ಈ ಸ್ಪರ್ಧೆಯು 2023ರ ನವಂಬರ್ ತಿಂಗಳ 4ನೇ ವಾರದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ 1 ಘಂಟೆ 30 ನಿಮಿಷ ಹಾಗೂ ಗರಿಷ್ಠ 2 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಈ ಬಾರಿ ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ. 35,000/-, ರೂ.25,000/- ರೂ.15,000/- ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು.…
ಬೆಂಗಳೂರು : ಕಳೆದ 45ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲ ತಂಡದ “ಕಂಸವಧೆ” ಯಕ್ಷಗಾನ ಪ್ರದರ್ಶನ 500ಕ್ಕೂ ಹೆಚ್ಚು ಪ್ರಯೋಗ ಕಂಡರೂ, ತನ್ನ ತನವನ್ನು ಉಳಿಸಿಕೊಂಡಿದೆ. ಈವರೆಗೆ ನೂರಾರು ಕಲಾವಿದರು ಈ ಕಂಸವಧೆಯಲ್ಲಿ ಪ್ರದರ್ಶನ ನೀಡಿದ್ದಾರೆ. 22-09-2023ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಗಾನ ರೆಸಿಡೆನ್ಸಿಯಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಯಕ್ಷದೇಗುಲದ “ಕಂಸವಧೆ” ಯಕ್ಷಗಾನ ಪ್ರದರ್ಶನ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕೆ.ಮೋಹನ್ ನಿರ್ದೇಶನದಲ್ಲಿ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಈ ಪ್ರದರ್ಶನ ನಡೆದಿದೆ. ಮುಮ್ಮೇಳದಲ್ಲಿ ಕಂಸನಾಗಿ ತಮ್ಮಣ್ಣ ಗಾಂವ್ಕರ್, ಕೃಷ್ಣನಾಗಿ ಮನೋಜ್ ಭಟ್, ಅಕ್ರೂರನಾಗಿ ಬಾಲಕೃಷ್ಣ ಭಟ್, ಬಲರಾಮನಾಗಿ ಶ್ರೀನಿಧಿ ಹೊಳ್ಳ, ರಜಕನಾಗಿ ದೇವರಾಜ್ ಕರಬ, ಚಾಣುರನಾಗಿ ಆದಿತ್ಯ ಹೊಳ್ಳ, ಮುಷ್ಟಿಕನಾಗಿ ಪ್ರಕಾಶ್ ಉಳ್ಳೂರ, ಗೋಪಿಕೆಯರಾಗಿ ಶ್ರೀವಿದ್ಯಾ, ಅನಿಕ ಮತ್ತು ಪ್ರತ್ಯುಷ ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಳೆ ವಾದನದಲ್ಲಿ ಚಿನ್ಮಯಿ, ಚಂಡೆಯಲ್ಲಿ ಶ್ರೀನಿವಾಸ ಪ್ರಭು ಸಹಕರಿಸಿದ್ದಾರೆ. ಪ್ರಸಾದನದಲ್ಲಿ ಪ್ರಿಯಾಂಕ ಕೆ.ಮೋಹನ್ ಸಹಕಾರ ನೀಡಿದರು.
2023 ಸೆಪ್ಟೆಂಬರ್ 27. ನಾಡಿನ ಹಿರಿಯ ವಿದ್ವಾಂಸರಾದ ಡಾ. ಅಮೃತ ಸೋಮೇಶ್ವರರಿಗೆ 88. ತಮ್ಮ ತಾರುಣ್ಯದ ಕಾಲದಲ್ಲೇ ಅಮೃತರ ತುಳುಗೀತೆಗಳನ್ನು ಗುನುಗುನುಗಿಸುತ್ತಿದ್ದ ನೆರೆಕೂದಲ ಹಿರಿಯರನೇಕರಿಗೆ ‘ನಾವು ಅಂದೇ ಅಮೃತರನ್ನು ಓದಿದ್ದೆವು. ಈಗವರಿಗೆ ಎಂಬತ್ತೆಂಟು ಆಗುವುದಷ್ಟೆನಾ?’ ಎಂಬ ಸಂಶಯಾಶ್ಚರ್ಯ. ಇಂದಿನ ತರುಣ ವಿದ್ಯಾರ್ಥಿಗಳಿಗಂತೂ ‘ ನನ್ನ ಅಜ್ಜನೇ ಅಮೃತರ ನಾಟಕದ ಬಗ್ಗೆ ಹೇಳುತ್ತಿದ್ದರು’ ಎಂಬ ತಲೆಮಾರುಗಳ ನೆನಪು. ಅಂದಿನವರಿಗೂ ಬೇಕಿರುವವರಾಗಿ ಇಂದಿನವರಿಗೂ ಪ್ರಸ್ತುತರಾಗಿ ಬದುಕುವುದೆಂದರೆ ಅದೆಂತಹ ಸಾರ್ಥಕತೆ! ತಿಳಿದ ವಿಚಾರಗಳ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಂದಿನವರಿಗೆ ತಕ್ಷಣ ಗೂಗಲ್ ನೆನಪಾಗುತ್ತದೆ. ಆದರೆ ಕೆಲವು ದಶಕಗಳ ಹಿಂದೆ ವಿಚಾರ ಹುಡುಕಾಡುವವರಿಗೆ ಗೂಗಲ್ನಂತಿದ್ದವರು ಅಮೃತರು. ಹೌದು, ಅಮೃತ ಸೋಮೇಶ್ವರರು ಮಾನವತೆಯ ನೆಟ್ವರ್ಕ್ ಮೂಲಕ ಆಂತರ್ಯವನ್ನು ಬೆಸೆದ ಅಂತರ್ಜಾಲ. ಸದಾಸಮೃದ್ಧ ಅವಿಚ್ಛಿನ್ನ ಜ್ಞಾನ ಸಂಪುಟ. ಅನೇಕರಿಗೆ ಅಮೃತ ಸೋಮೇಶ್ವರರು ತಮ್ಮ ಪುಸ್ತಕಕ್ಕೆ ಮುನ್ನುಡಿ ಬರೆಸುವ ಕಾರಣದಿಂದ ಹತ್ತಿರವಾದವರು. ಅವರು ಬರೆದಿರುವ ಮುನ್ನುಡಿಗಳನ್ನೇ ಸಂಕಲಿಸಿದರೆ ಒಂದು ಕೃತಿಯೇ ಆಗಬಹುದು. ಮೊನ್ನೆಯಷ್ಟೇ ಕವನ ಬರೆಯಲು ಪ್ರಾರಂಭಿಸಿದ ಚಿಣ್ಣನೂ ತನ್ನ…