Subscribe to Updates
Get the latest creative news from FooBar about art, design and business.
Author: roovari
ಸುಳ್ಯ : ಯೋಗೀಶ್ ಹೊಸೋಳಿಕೆ ಇವರ ಮದುವೆ ಕುರಿತ ಮೊಟ್ಟಮೊದಲ ಅರೆಭಾಷೆ ಕೃತಿ “ಎಲಾಡಿಕೆ” ದಿನಾಂಕ 14-11-2023ರಂದು ಹೊಸೋಳಿಕೆ ಕಟ್ಟೆಮನೆ ದೈವಸ್ಥಾನದಲ್ಲಿ ದೀಪಾವಳಿ ಆಚರಣೆಯೊಂದಿಗೆ ಕುಟುಂಬಸ್ಥರು ಹಾಗೂ ಬಂಧು-ಮಿತ್ರರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು. ಯೋಗೀಶ್ ಹೊಸೋಳಿಕೆ ಹಾಗೂ ಶ್ರೀಮತಿ ಜಯಶ್ರೀ ಹೊಸೋಳಿಕೆಯವರ ಮದುವೆ ಕವಿಗೋಷ್ಠಿ, ಅರೆಭಾಷೆ ಪುಣ್ಯಕೋಟಿ ಪುಸ್ತಕ ಬಿಡುಗಡೆ, ಅರೆಭಾಷೆ ಮದುವೆ ಕಾಗದ, ಸಂಪ್ರದಾಯಬದ್ಧ ಮದುವೆ ಮತ್ತು 1100 ಕ್ಕಿಂತಲೂ ಹೆಚ್ಚಿನ ಪುಸ್ತಕ ಒಂದೇ ದಿನ ವಿತರಣೆ ಹೀಗೆ ಹಲವು ದಾಖಲೆಗಳನ್ನು ಬರೆದು ಆಪಾರ ಜನಮೆಚ್ಚುಗೆ ಗಳಿಸಿತ್ತು. ಈ ಎಲ್ಲಾ ದಾಖಲೆಗಳನ್ನು ಸಾಹಿತಿ ಯೋಗೀಶ್ ಹೊಸೋಳಿಕೆಯವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಈ ಪುಸ್ತಕ ಪ್ರಕಟಿಸಿದ್ದು, ಕುಟುಂಬದ ಹಿರಿಯರಾದ ವಿಶ್ವನಾಥ್ ಹೊಸೋಳಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಕುಟುಂಬದ ಅಧ್ಯಕ್ಷರಾದ ಎಚ್.ಬಿ. ಕೇಶವ ಹೊಸೋಳಿಕೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಿರಣ ರಂಗ ಸಂಸ್ಥೆಯ ಅಧ್ಯಕ್ಷ ಪುಸ್ತಕ ಸಂಪಾದಕ ಯೋಗೀಶ್ ಹೊಸೋಳಿಕೆ, ಶ್ರೀಮತಿ ಜಯಶ್ರೀ ಯೋಗೀಶ್ ಹೊಸೋಳಿಕೆ, ವಿದ್ವತ್.…
ಉಡುಪಿ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸರಕಾರಿ ಪದವಿ ಪೂರ್ವ ಕಾಲೇಜು ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಕನಕದಾಸರ ಕುರಿತಾದ ವಿಸ್ತರಣಾ ಉಪನ್ಯಾಸ ಮಾಲಿಕೆಯ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 10-11-2023ರಂದು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ ಮತ್ತು ಟಿ.ಎಂ.ಎ. ಪೈ ಶಿಕ್ಷಣ ವಿದ್ಯಾಲಯದ ಸಮನ್ವಯಾಧಿಕಾರಿಗಳಾದ ಡಾ. ಎ. ಮಹಾಬಲೇಶ್ವರ ರಾವ್ ಅವರು ‘ಕನಕದಾಸರ ಹರಿಭಕ್ತಿ ಸಾರ ಮರುವಿವೇಚನೆ’ ಕುರಿತಾಗಿ ವಿವರವಾದ ಉಪನ್ಯಾಸ ನೀಡಿದರು. ಕನಕದಾಸರ ಹರಿ ಭಕ್ತಿ ಸಾರವನ್ನು ಮುದ್ರಣ ರೂಪದಲ್ಲಿ ಹೊರತರುವಲ್ಲಿ ಪಾಶ್ಚಾತ್ಯ ವಿದ್ವಾಂಸರಾದ ಡಾ. ಹರ್ಮನ್ ಮೊಗ್ಗಿಂಗ್ ಕೊಡುಗೆಗಳನ್ನು ಸ್ಮರಿಸುತ್ತಾ ಕೃತಿಯ ಮೂಲ ಕರ್ತೃ ಕುರಿತಾಗಿರುವ ಜಿಜ್ಞಾಸೆಗಳನ್ನು ಹೇಳುವುದರ ಜೊತೆಗೆ ಹರಿಭಕ್ತಿಸಾರದಲ್ಲಿ ವ್ಯಕ್ತವಾದ ಕನಕ ಚಿಂತನೆಗಳ ಸಮಗ್ರ ಮಾಹಿತಿ ನೀಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕರಾದ…
ಮಧೂರು : ಮಕ್ಕಳ ದಿನಾಚರಣೆಯ ಪ್ರಯುಕ್ತ ನಾಟ್ಯರಂಗ ಪುತ್ತೂರು ಹಾಗೂ ನಾಟ್ಯ ಮಂಟಪ ಮಧೂರು ಇವರ ವತಿಯಿಂದ ಮಧೂರು ಪಂಚಾಯತ್ ಬಡ್ಸ್ ಶಾಲೆಯ ಮಕ್ಕಳಿಗಾಗಿ ‘ನಾಟ್ಯ ಪ್ರವೇಶಿಕೇ’ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಧೂರು ಪಂಚಾಯತ್ ಸ್ಥಾಯಿ ಸಮಿತಿ ಛೇರ್ಮನ್ ರಾಧಾಕೃಷ್ಣ ಸುರ್ಲು ಕಾರ್ಯಕ್ರಮವನ್ನು ದಿನಾಂಕ 14-11-2023ರಂದು ಉದ್ಘಾಟಿಸಿದರು. ಮಧೂರು ಗ್ರಾಮ ಪಂಚಾಯ್ತ್ ಅಧ್ಯಕ್ಷರಾದ ಕೆ. ಗೋಪಾಲಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಶೋದಾ ಸುಂದರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಜನನಿ ಮುರಳಿ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕರಾದ ಗುರುಪ್ರಸಾದ್ ಕೋಟೆಕಣಿ ಶುಭ ಹಾರೈಸಿದರು. ಉಪಾಧ್ಯಕ್ಷೆ ಸ್ಮಿಜ ವಿನೋದ್ ಉಪಸ್ಥಿತರಿದ್ದರು. ಬಡ್ಸ್ ಶಾಲಾ ಅಧ್ಯಾಪಕಿ ಕವಿತ ಸ್ವಾಗತಿಸಿದರು. ತದನಂತರ ನಾಟ್ಯರಂಗ ಪುತ್ತೂರು ಇದರ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಮಣ್ಯ ಅವರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ನೃತ್ಯದ ವಿವಿಧ ಹಸ್ತ, ಚಲನೆಗಳನ್ನು ಬಡ್ಸ್ ಶಾಲಾ ಮಕ್ಕಳಿಗೆ ಪರಿಚಯಿಸಲಾಯಿತು. ನಾಟ್ಯಮಂಟಪ ಮಧೂರು ಇದರ ನಿರ್ದೇಶಕಿ ಸೌಮ್ಯ ಶ್ರೀಕಾಂತ್ ಕಾರ್ಯಕ್ರಮದ…
ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಎರಡನೇ ಶನಿವಾರ ಆಯೋಜಿಸುವ ರಂಗ ಮಾಲೆ – ನಾಟಕ ಸರಣಿ ಕಾರ್ಯಕ್ರಮವು ದಿನಾಂಕ 10-11-2023 ಮತ್ತು 11-11-2023 ರಂದು ನಡೆಯಿತು. ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭಕ್ಕಾಗಿ ಈ ಬಾರಿ ನಾಡಿನ ಖ್ಯಾತ ರೆಪರ್ಟಿಗಳಲ್ಲಿ ಒಂದಾದ ನಿನಾಸಂ ಹೆಗ್ಗೂeಡು ತಿರುಗಾಟ – 2023-24. ರ ಎರಡು ನಾಟಕಗಳನ್ನು ವೇದಿಕೆಯ ಅಧ್ಯಕ್ಷ ಕೆ. ವಿ ವೆಂಕಟರಮಣಪ್ಪ. ಪಾಪಣ್ಣ ಕಾಟಂ ನಲ್ಲೂರು ಉದ್ಘಾಟಿಸಿದರು. ಮೊದಲ ದಿನ ಜ್ಞಾನಪೀಠ ಪ್ರಶಸ್ತಿ ವಿಜೇತ. ಡಾ. ಚಂದ್ರಶೇಖರ ಕಂಬಾರರ ‘ಹುಲಿಯ ನೆರಳು’ ನಾಟಕವನ್ನು ಕೆ.ಜಿ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಯಶಸ್ವಿ ಪ್ರದರ್ಶನಗೊಂಡಿತು. ರಂಗ ಮಾಲೆ – 76 ರಲ್ಲಿ. ಎರಡನೇ ದಿನ ದಕ್ಷಿಣ ಆಫ್ರಿಕ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆ. ಲೂಯಿ ನಕೋಶಿ ರಚಿಸಿ. ನಟರಾಜ ಹೊನ್ನವಳ್ಳಿ ಅನುವಾದಿಸಿದ ನಾಟಕ ‘ಆ ಲಯ ಈ ಲಯ’ ವನ್ನು ಶ್ವೇತಾರಾಣಿ ಹೆಚ್. ಕೆ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು. ಎರಡೂ ನಾಟಕಗಳು ನೆರದ ಪ್ರೇಕ್ಷಕರನ್ನ…
ಉಪ್ಪೂರು : ಮಯ್ಯ ಯಕ್ಷ ಬಳಗ ಹಾಲಾಡಿ ಕುಂದಾಪುರ, ಕರ್ನಾಟಕ ಯಕ್ಷಧಾಮ ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಇದರ ಸಂಯೋಜನೆಯಲ್ಲಿ ಪ್ರಾಚಾರ್ಯ ಮಾರ್ವಿ ನಾರಣಪ್ಪ ಉಪ್ಪೂರರ ಸಂಸ್ಕರಣೆ, ಯಜಮಾನ ‘ಪಿ ಶ್ರೀಧರ ಹಂದೆಯವರ ನೆನಪು’ ಶಿಷ್ಯ ಭಾಗವತ ‘ಜಿ. ರಾಘವೇಂದ್ರ ಮಯ್ಯರ ಕನಸು’ ಯಕ್ಷಗಾನ ಸಭಾವಂದನ, ಸಂಸ್ಮರಣೆ ಸಮ್ಮಾನ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 02-12-2023 ರಂದು ಮದ್ಯಾಹ್ನ ಘಂಟೆ 3.00 ರಿಂದ. ಮುದೂರಿ (ಮಯ್ಯರ ಮನೆ) ಶಾಲೆಯ ನಾರಣಪ್ಪ ಉಪ್ಪರರ ವೇದಿಕೆಯಲ್ಲಿ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಗೌರವ ಅಭ್ಯಾಗತರಾಗಿ ಶ್ರೀ ಕಿರಣ್ ಕುಮಾರ್ ಕೊಡ್ಲಿ, ಶ್ರೀ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಶ್ರೀ ಬಾಲಕೃಷ್ಣ ಶೆಟ್ಟಿ ಹಿಲಿಯಾಣ, ಶ್ರೀ ಕೃಷ್ಣಮೂರ್ತಿ ಉಪ್ಪೂರ, ಶ್ರೀ ಪಿ. ವೆಂಕಟೇಶ್ ಹಂದೆ, ಶ್ರೀ ಅಶೋಕ ಶೆಟ್ಟಿ ಚೋರಾಡಿ, ಶ್ರೀ ಸಂಜೀವ ನಾಯ್ಕ, ಶ್ರೀ ಆನಂದ ಕುಂದರ್, ಡಾ. ನಾಗೇಶ್ ಕುಂದಾಪುರ, ಶ್ರೀ ಜನಾರ್ದನ ಹಂದೆ, ಶ್ರೀ ಪ್ರಕಾಶ ಶೆಟ್ಟಿ ಗೈನಾಡಿ,…
ಬಂಟ್ವಾಳ : ಅಮ್ಮುಂಜೆಯಲ್ಲಿ ದಿನಾಂಕ 12-11-2022 ಹಾಗೂ 13-11-2022 ರಂದು ನಡೆದ 22ನೆಯ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ‘ಸವಿನೆನಪು’ ಕಾರ್ಯಕ್ರಮಮವು ದಿನಾಂಕ 11-11-2023 ರಂದು ಅಮ್ಮುಂಜೆ ಅನುದಾನಿತ ಹಿ.ಪ್ರಾ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನದ ಅವಲೋಕನ ಗೈದು ಮಾತನಾಡಿದ ಮೊಡಂಕಾಪು ದೀಪಿಕಾ ಪ್ರೌಢಶಾಲಾ ವಿಶ್ರಾಂತ ಮುಖ್ಯ ಶಿಕ್ಷಕ, ಚಿಂತಕ ಹಾಗೂ ರಂಗಭೂಮಿ ತಜ್ಞ ಮಹಾಬಲೇಶ್ವರ ಹೆಬ್ಬಾರ್ “ಕವಿಯೊಬ್ಬ ಕವಿತೆಯನ್ನು ಬರೆದು ಅದರ ನಾನಾರ್ಥಗಳನ್ನು ಗ್ರಹಿಸಲು ಓದುಗರಿಗೆ ಬಿಟ್ಟುಕೊಡುವಂತೆ,ಅಮ್ಮುಂಜೆಯ ಸಾಹಿತ್ಯ ಸಮ್ಮೇಳನದ ಅರ್ಥ ವ್ಯಾಪ್ತಿಯನ್ನು ತಾವೇ ಹೇಳಿಕೊಳ್ಳದೆ ಜನತೆಯ ಮುಂದೆ ಬಿಟ್ಟು ಕೊಟ್ಟವರು ಇಲ್ಲಿನ ಸ್ವಾಗತ ಸಮಿತಿಯ ಮಹಾನುಭಾವರು. ಜನರ ದೃಷ್ಟಿ ಬೇರೆ ಬೇರೆ ಇರುತ್ತದೆ.ಆದರೆ ಅದರಲ್ಲಿನ ಅಂತಿಮ ವಿಮರ್ಶೆ ಬಹಳ ಉತ್ತಮವಾಗಿರುತ್ತದೆ. ಅದಕ್ಕೆ ಸಾಕ್ಷಿಯಾಗಿ ಅಮ್ಮುಂಜೆಯ ಬಡಕಬೈಲು ಪರಮೇಶ್ವರ ರಾವ್ ಮಹಾದ್ವಾರದ ಬಳಿಯಿಂದ ಸಂಭ್ರಮದಿಂದ ನಡೆದ ಮೆರವಣಿಗೆಯಿಂದ ತೊಡಗಿ ಅಮ್ಮುಂಜೆ ಅನುದಾನಿತ ಹಿ.ಪ್ರಾ.ಶಾಲಾ ವಠಾರದಲ್ಲಿ ಕಳೆದ ವರ್ಷ ಜರುಗಿದ ಸಾಹಿತ್ಯ ಸಮ್ಮೇಳನ ಎಂದೆಂದೂ ಸ್ಮೃತಿ ಪಟಲದಲ್ಲಿದೆ” ಎಂದರು. ಸಮಾರಂಭದಲ್ಲಿ…
ನಾನು ಇದುವರೆಗೆ ಕಂಡ best ineractive childrens’ activity. ‘ಲಾ ಪೋ ಲಾ’ ಎಂಬ ಮಕ್ಕಳಾಟ, ಈ ಆಟ ಸುರುವಾಗೋದೇ ಸುತ್ತಲಿದ್ದ ಮಕ್ಕಳ ಗುಜು ಗುಜು ತಾರಕಕ್ಕೇರಿದ ಮೇಲೆ. ಗೌಜಿ ಯ ಮಧ್ಯದಲ್ಲೇ ಮಕ್ಕಳ ಮಧ್ಯೆ ಇದ್ದ ರಟ್ಟಿನ ಪೆಟ್ಟಿಗೆಯೊಳಗಿಂದ ಧಡಕ್ ಅಂತ ಸದ್ದು. ಪೆಟ್ಟಿಗೆ ಅಲ್ಲಾಡ್ತದೆ. ಗೌಜಿಯೆಲ್ಲ ಬಂದ್! ಏಕ್ ದಂ ಮೌನ. ಸ್ವಲ್ಪ ಸಮಯದ ನಂತರ ಮತ್ತೆ ಸದ್ದು. ಈಗ ಸ್ವಲ್ಪ ಧೈರ್ಯಸ್ಥೆ ಹುಡುಗಿಯೊಬ್ಬಳು ಪೆಟ್ಟಿಗೆಯ ಹತ್ತಿರ ಹೋಗಿ ಇಣುಕ್ತಾಳೆ. ನಿಧಾನಕ್ಕೆ ಕೈಯೊಂದು ಹೊರಬರ್ತದೆ. ಮತ್ತೆ ಕಾಲು…ಮತ್ತೆ ಎರಡೂ ಕೈ, ಎರಡೂ ಕಾಲು. ಮತ್ತೆ ತಲೆ…ಹೀಗೆ ಮಕ್ಕಳ ಕುತೂಹಲ ಉತ್ತುಂಗಕ್ಕೆ ಏರ್ತಿದ್ದಂತೆ ಹೊರಬರ್ತಾನೆ ಕ್ಲೌನ್. ‘ಲಾ ಪೋ ಲಾ’ ಆದರೆ ಅವನಿಗೆ ಪೆಟ್ಟಿಗೆಯಿಂದ ಹೊರ ಬರೋದಕ್ಕಾಗಲ್ವೇ! ಅದಕ್ಕೆ ಮಕ್ಕಳ ಸಹಾಯವೇ ಬೇಕು. ಹೇಗೋ ಹೇಗೋ ಮಾಡಿ ಅವನನ್ನ ಹೊರತಂದ ಮೇಲೆ ನೋಡಿ, ಸುರುವಾಗುತ್ತೆ ಆಟ. ಇಡೀ ಒಂದು ಘಂಟೆಯ ಮಕ್ಕಳಾಟ. ಈ ‘ಲಾ ಪೋ ಲಾ ನಮ್ಮೊಳಗಿನದೇ ಮಗು’.…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಹಕಾರದಲ್ಲಿ ದಿ. ಪುಳಿಮಾರು ಎಂ. ಕೃಷ್ಣ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 11-11-2023ರ ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪ್ರಸಿದ್ಧ ಉರಗ ತಜ್ಞ, ಸಾಹಿತಿ ಗುರುರಾಜ್ ಸನಿಲ್ ಮಾತನಾಡುತ್ತಾ “ಹಾವುಗಳ ಬಗ್ಗೆ ಬಹಳಷ್ಟು ತಪ್ಪು ನಂಬಿಕೆಗಳಿದ್ದು, ಅದನ್ನು ಹೋಗಲಾಡಿಸದಿದ್ದರೆ ಅದರ ಅಡ್ಡ ಪರಿಣಾಮ ಪರಿಸರ ಮತ್ತು ನಮ್ಮ ಮೇಲಾಗುವ ಸಾಧ್ಯತೆ ಇರುತ್ತದೆ. ಭಯವನ್ನು ಗೆಲ್ಲಲಿಕ್ಕೆ ಪ್ರಯತ್ನಿಸಿದರೆ ಖಂಡಿತ ಯಶಸ್ಸು ಸಾಧ್ಯ. ತಮ್ಮ ಜೀವನದಲ್ಲಿ ಪ್ರಾರಂಭದಿಂದಲೇ ಭಯವನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಬೇಕು” ಎಂಬ ಕಿವಿ ಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಆಡಿಗ , ಕೋಶಾಧಿಕಾರಿ ವಿ…
ಮಂಗಳೂರು : ತುಳುಕೂಟ (ರಿ) ಕುಡ್ಲ ಇದರ ಬಂಗಾರ್ ಪರ್ಬೊ ಸರಣಿ ವೈಭವೊ -09 ಕಾರ್ಯಕ್ರಮವು ದಿನಾಂಕ 18-11- 2023ನೇ ಶನಿವಾರದಂದು ಅಪರಾಹ್ನ 1:30 ಗಂಟೆಗೆ ಸುರತ್ಕಲ್ಲಿನ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ತುಳುವೆರೆ ತುಡರ ಪರ್ಬೊ …. ಎಂಬ ಶಿರೋನಾಮೆಯೊಂದಿಗೆ ನಡೆಯಲಿದೆ. ಹೆಸರಾಂತ ಉದ್ಯಮಿ, ಅಗರಿ ಎಂಟರ್ ಪ್ರೈಸಸಿನ ಮಾಲಕ ಅಗರಿ ಶ್ರೀ ರಾಘವೇಂದ್ರರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿ. ಇದರ ಜನರಲ್ ಮ್ಯಾನೇಜರ್ ಆದ ಲ. ಭಾಸ್ಕರ ಸಾಲ್ಯಾನ್, ವಿದ್ಯಾದಾಯಿನೀ ಪ್ರೌಢ ಶಾಲೆಯ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರೂ ಆದ ಶ್ರೀ ಸುಧಾಕರ ರಾವ್ ಪೇಜಾವರ, ವಿದ್ಯಾದಾಯಿನೀ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಕೆ.ಬಾಲಚಂದ್ರ ಇವರುಗಳು ಭಾಗವಹಿಸಲಿದ್ದಾರೆ. ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ವೆಂಕಟ್ರಮಣ ಭಟ್ ತುಳುವೆರೆ ತುಡರ ಪರ್ಬ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ತುಳು…
ಬೆಂಗಳೂರು : ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ‘ಯಕ್ಷ ಸಂಕ್ರಾಂತಿ’ ಭಾವ ಬಣ್ಣಗಳ ಒಡ್ಡೋಲಗ ದಿನಾಂಕ 18-11-2023ರಂದು ರಾತ್ರಿ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಡೆಯಲಿರುವ ‘ಭೀಷ್ಮ ಪರ್ವ’ ಯಕ್ಷಗಾನ ಪ್ರಸಂಗದಲ್ಲಿ ಭೀಷ್ಮನಾಗಿ ಕೃಷ್ಣ ಯಾಜಿ ಬಳ್ಕೂರು, ಕೃಷ್ಣನಾಗಿ ವಿಶ್ವನಾಥ್ ಹೆನ್ನಾಬೈಲ್, ಅರ್ಜುನನಾಗಿ ಚಂದ್ರಹಾಸ ಹೊಸಪಟ್ಣ ಮತ್ತು ಧರ್ಮರಾಯನಾಗಿ ಮಂಜುನಾಥ ರಾವ್ ಚೌಕುಳಮಕ್ಕಿ ಪಾತ್ರ ನಿರ್ವಹಿಸಲಿದ್ದಾರೆ. ಭೀಷ್ಮನ ಬದುಕು, ಅದೆಷ್ಟು ಒಗಟುಗಳ ಸಂಕಥನ ! ಭೀಷ್ಮನಿಗಿಂತ ಮುಂಚೆ ಹುಟ್ಟಿದ ಏಳು ಮಂದಿ ಮಕ್ಕಳನ್ನು ಹೆತ್ತಬ್ಬೆ ಗಂಗಾ ಭವಾನಿ ನದಿಗೆಸೆಯುವಾಗ, ಸ್ತ್ರೀ ವ್ಯಾಮೋಹದಿಂದ ಖಂಡಿಸದೇ ಉಳಿದವನು ಶಂತನು!. ಭೀಷ್ಮನ ಸರದಿ ಬಂದಾಗ, ಈ ಮಗು ಬೇಕು ಎನ್ನುತ್ತಾನೆ ಶಂತನು. ಆ ಕಾರಣಕ್ಕಾಗಿ ಗಂಗೆ ದೂರವಾಗುತ್ತಾಳೆ, ಮಗ ಬದುಕುಳಿಯುತ್ತಾನೆ!. ತಂದೆಗೋಸುಗ ಸತ್ಯವತಿಯನ್ನು ಕರೆ ತರುವಾಗ ಕಂದರನ ಇಚ್ಚೆಯಂತೆ ವ್ಯವಹರಿಸುತ್ತಾನೆ ದೇವವ್ರತ. ವಧುವನ್ನು ಮನೆ ತುಂಬಿಕೊಳ್ಳುವ ಸಲುವಾಗಿ, ಆಡಿದ ಮಾತಿನಂತೆ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾನೆ. ಆದರೆ ಹಸ್ತಿನಾವತಿಗೆ ಒಳಪಡದೆ ಸ್ವತಂತ್ರ ರಾಜ್ಯವಾಗಿದ್ದ ಕಾಶಿಯ…