Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಮೈಸೂರಿನ ಕೊಡಗು ಗೌಡ ಸಮಾಜ ಆಯೋಜಿಸಿದ ಕೈಲ್ ಮುಹೂರ್ತ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ “ಅರೆಭಾಷೆ ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅವರು ಅವುಗಳನ್ನು ಅನುಸರಿಸಿ ಮುನ್ನಡೆಯುವಂತೆ ಹಿರಿಯರು ಪ್ರೇರಣೆ ನೀಡಬೇಕು. ಯುವ ಪೀಳಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಅರೆಭಾಷೆ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅಕಾಡೆಮಿಯಿಂದ ಸಾಧ್ಯವಾದಷ್ಟು ಅನುದಾನ ಕೂಡಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ ಮಾತನಾಡಿ “ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಕೇವಲ ಸಾಂಕೇತಿಕವಾಗಿ ಮಾತ್ರ ಆಚರಣೆ ಮಾಡದೆ, ಮನೆ ಮನಗಳಲ್ಲೂ ಆಚರಣೆ ಮಾಡಿದಾಗ ಸಂಸ್ಕೃತಿ ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ. ಮೈಸೂರು…
ಸುರತ್ಕಲ್ : ಸುರತ್ಕಲ್ ಇಲ್ಲಿನ ‘ಅನುಪಲ್ಲವಿ’ಯಲ್ಲಿರುವ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ನವೀಕರಣಗೊಂಡ ಸಭಾಂಗಣದ ಲೋಕಾರ್ಪಣಾ ಸಮಾರಂಭವು ದಿನಾಂಕ 13 ಸೆಪ್ಟೆಂಬರ್ 2025ರ ಶನಿವಾರದಂದು ನಡೆಯಿತು. ಸಮಾರಂಭದಲ್ಲಿ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ “ಪ್ರತಿಮನೆಗಳೂ ನಮ್ಮ ಕಲೆ, ಸಂಸ್ಕೃತಿಗಳನ್ನು ಬೆಳೆಸುವ ಪುಟ್ಟ ಕೇಂದ್ರಗಳಾಗಬೇಕು” ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನವೀಕರಣ ಕಾರ್ಯಕ್ಕೆ ವಿಶೇಷ ನೆರವು ನೀಡಿದ ಡಿ. ಅಣ್ಣು ದೇವಾಡಿಗ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ ರೆಮೋನಾ ಇವರನ್ನು ಸನ್ಮಾನಿಸಲಾಯಿತು. ಪ್ರದೀಪ ಕುಮಾರ ಕಲ್ಕೂರ, ಎ. ಕೃಷ್ಣಮೂರ್ತಿ ರಾವ್, ಡಾ. ಕೆ. ರಾಜ್ ಮೋಹನ್ ರಾವ್, ಉಮಾ ಉದಯಶಂಕರ್ ಹಾಗೂ ಶ್ರೀಶಕುಮಾರ್ ಎಂ. ಕೆ. ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ದಿವ್ಯಶ್ರೀ ಇವರಿಂದ ಸಂಗೀತ…
ಗೋಕರ್ಣ : ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ‘ಕೊಡಗಿನ ಗೌರಮ್ಮ’ ಹೆಸರಿನಲ್ಲಿ ಗೋಕರ್ಣದ ಹವ್ಯಕ ಮಹಾಮಂಡಲದಲ್ಲಿ ಸ್ಥಾಪಿಸಲಾಗಿರುವ ಸಣ್ಣ ಕಥೆಗಳ ದತ್ತಿ ಪ್ರಶಸ್ತಿಗೆ ಈ ಬಾರಿ ಕೊಡಗು ಮೂಲದ ಲೇಖಕಿ ಭಾರತಿ ಸೊದ್ರಕೆರೆ ಅವರ ‘ಮುಡಿಗೇರಿದೆ’ ಹಾಗೂ ಕೊಡಗಿನ ವಿರಾಜಬೇಟೆ ಸಮೀಪದ ಕೋಟೆಕೊಪ್ಪಲಿನ ಮೂರೇಡಿ ಆರ್. ಗಂಗಾಧರ ಮತ್ತು ಎಂ. ಜಿ. ಸಾವಿತ್ರಿಯವರ ಪುತ್ರಿ ಕಾಸರಗೋಡಿನ ಕೇಶವ ಪ್ರಸಾದ್ ಅವರ ಪತ್ನಿ ಭಾರತಿ ಕೊಡ್ವಕೆರೆ ಅವರು ಬರೆದಿರುವ ಸಣ್ಣ ಕಥೆ ‘ದಿನಚರಿ ಪುಸ್ತಕ ರಹಸ್ಯ’ ಆಯ್ಕೆಯಾಗಿದೆ. ಹವ್ಯಕ ಮಹಾ ಮಂಡಲದಲ್ಲಿ ಕೊಡಗಿನ ಗೌರಮ್ಮ ಇವದ ದತ್ತಿಯನ್ನು ಯುವ ಬರಹಗಾರರ ಉತ್ತೇಜನಕ್ಕಾಗಿ ನ್ಯಾಪಿಸಾಗಿದೆ. ಈ ದತ್ತಿ ನಿಧಿಯ ಮೂಲಕ ವರ್ಷಂ ಪ್ರತಿ ಹವ್ಯಕ ಮಹಿಳಾ ಬರಹಗಾರರಿಗೆ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿ ಭಾರತಿ ಕೊಡಕೆರೆ ಅವರಿಗೆ ಸಂದಿದೆ. ಎಳವೆಯಲ್ಲಿ ಸಾಹಿತ್ಯದತ್ತ ಅತೀವ ಆಸಕ್ತಿ ಹೊಂದಿದ್ದ ಭಾರತಿ ಕೊಟ್ಟಿಕೆರೆ, ಅಂದಿನ ದಿನಗಳಲ್ಲಿ ಸ್ಥಳೀಯ ಪತ್ರಿಕಗಳಿಗೆ ಕಥೆ, ಲೇಖನಗಳನ್ನು ಬರೆಯುತ್ತಿದ್ದವರು, ಕೇಶವ ಪ್ರಸಾದ್…
ಬಂಟ್ವಾಳ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇದರ ಮೂವತ್ತೆರಡನೆಯ ವಾರ್ಷಿಕೋತ್ಸವ, ನೂತನ ಗ್ರಂಥ ಅನಾವರಣ, ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕ್ರತ ಪ್ರತಿಭಾ ಪುರಸ್ಕಾರ ಸಮಾರಂಭದ ಅಂಗವಾಗಿ ದಿನಾಂಕ 14 ಸೆಪ್ಟೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ವಿದ್ಯಾ ಕುಟೀರ, ಬೈಪದವು ಕಬಕ ಇಲ್ಲಿ ‘ಭೀಷ್ಮಾರ್ಜುನ’ (ಕರ್ಮಬಂಧ) ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಪಿ.ಟಿ. ಜಯರಾಮ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭೀಷ್ಮ) ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀ ಕೃಷ್ಣ), ಶುಭಾ ಗಣೇಶ್ (ಅಭಿಮನ್ಯು), ಹರಿಣಾಕ್ಷಿ ಜೆ. ಶೆಟ್ಟಿ(ಅರ್ಜುನ) ಸಹಕರಿಸಿದರು. ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್, ನಾರಾಯಣ ಭಟ್ ಹಾಗೂ ತಿರುಮಲೇಶ್ವರ ಭಟ್ ಕಲಾವಿದರಿಗೆ ಶಾಲು ಹಾಗೂ ಪುಸ್ತಕ ನೀಡಿ ಗೌರವಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.
ಮಂಗಳೂರು : ಮಂಗಳೂರು ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ 75 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಆವರಣದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾಲ್ಕನೇ ದಿನವಾದ ದಿನಾಂಕ 15 ಸೆಪ್ಟೆಂಬರ್ 2025ರಂದು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಇದರ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಮಾತನಾಡಿ “ರಾಮಕೃಷ್ಣ ಪರಮಹಂಸರಾಗಲೀ, ಶ್ರೀಮಾತೆ ಶಾರದಾದೇವಿಯವರಾಗಲಿ ಅಥವಾ ಸ್ವಾಮಿ ವಿವೇಕಾನಂದರಾಗಲೀ ಸಮಾಜದಲ್ಲಿ ಕಷ್ಟದಲ್ಲಿರುವ ಅಥವಾ ಬಡತನದಲ್ಲಿರುವವರಿಗೆ ಕರುಣೆ ತೋರಿ ಅವರ ಅಭ್ಯುದಯಕ್ಕಾಗಿ ಕೆಲಸ ಮಾಡಿದವರು ಈ ಚಿಂತನೆಗಳೊಂದಿಗೆ ಒಟ್ಟುಗೂಡಿ ಇಂದು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಕೆಲಸ ಮಾಡುತ್ತಿದೆ. ಹಲವಾರು ಜನ ಸನ್ಯಾಸಿಗಳಾಗಿ ಅಥವಾ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ತನು, ಮನ, ಧನಪೂರ್ವಕವಾಗಿ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳೋಣ ಈ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ” ಎಂದು ಹೇಳಿದರು.…
‘ಈ ಪಯಣ ನೂತನ’ ರೇಡಿಯೋ ಜಾಕಿ ನಯನಾ ಶೆಟ್ಟಿಯವರ ಮೊದಲ ಕೃತಿ. ಹೆಸರಿಗೆ ತಕ್ಕಂತೆ ಹೊಸ ದಾರಿಯನ್ನು ಹುಡುಕುವ ಪ್ರಯತ್ನವಿರುವ 21 ಲಲಿತ ಪ್ರಬಂಧಗಳು ಇಲ್ಲಿವೆ. ಪರಂಪರೆಯ ಮತ್ತು ಆಧುನಿಕ ಶೈಲಿಯ ಜೀವನ ಕ್ರಮಗಳ ನಡುವೆ ಮಾಡುವ ಒಂದು ತೌಲನಿಕ ಚಿಂತನೆ ಸಂಕಲನದಲ್ಲಿರುವ ಎಲ್ಲ ಲೇಖನಗಳ ಮೂಲ ಸ್ರೋತ. ಸಹಜವಾಗಿಯೇ ತಮ್ಮ ಬಾಲ್ಯದಲ್ಲಿ ತಾವು ಕಂಡು ಅನುಭವಿಸಿದ ಜೀವನದ ಒಂದೊಂದು ಹೆಜ್ಜೆಗಳು ಅವರಿಗೆ ಧನಾತ್ಮಕವಾಗಿಯೂ ಅಧುನಿಕ, ನಾಗರಿಕವೆಂದು ಹೇಳಿಕೊಳ್ಳುವ ಬದುಕಿನಲ್ಲಿ ಕಾಣುವ ದೋಷ – ವಿಪರ್ಯಾಸಗಳು ಋಣಾತ್ಮಕವಾಗಿಯೂ ಅವರಿಗೆ ಕಾಣುತ್ತವೆ. ಕಳೆದುಕೊಂಡ ಹೆಜ್ಜೆಗಳನ್ನು ಮತ್ತೆ ಪಡೆದುಕೊಂಡರೆ ಎಷ್ಟು ಚೆನ್ನ ಎಂದು ಅವರಿಗೆ ಅನ್ನಿಸುತ್ತದೆ. ಹಾಗೆಂದು ಆಧುನಿಕ ಜಗತ್ತಿನಲ್ಲಿ ಸಾಗುತ್ತಿರುವ ಎಲ್ಲರಲ್ಲೂ ಆ ದೋಷಗಳಿವೆ ಎಂದು ಅವರು ಹೇಳುತ್ತಿಲ್ಲ. ಫಿನ್ ಲ್ಯಾಂಡ್, ಜಪಾನ್, ಸಿಂಗಾಪುರಗಳಂತಹ ದೇಶಗಳಲ್ಲಿ ಎಳೆಯ ಮಕ್ಕಳಿಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಿರುವ ರೀತಿಯ ಬಗ್ಗೆ ಅವರ ಶ್ಲಾಘನೆಯಿದೆ. ಮನುಷ್ಯನ ಖುಷಿಯ ಬಗೆಗಿನ ಮೊದಲ ಲೇಖನದಲ್ಲೇ ಇದು ಅರಂಭವಾಗುತ್ತದೆ. ಜಗತ್ತಿನ ಅತ್ಯಂತ ಹೆಚ್ಚು…
ಉಡುಪಿ : ತಿಂಗಳೆ ಪ್ರತಿಷ್ಠಾನ ಮತ್ತು ಸಂಜೀವ ಶಿಷ್ಯ ವೃಂದದಿಂದ ಅವರ ಸಪ್ತತಿ ವರ್ಷಾಚರಣೆ ಪ್ರಯುಕ್ತ ‘ಸಂಜೀವ ಯಕ್ಷ ಜೀವ-ಭಾವ’ ಕಾರ್ಯಕ್ರಮವು ದಿನಾಂಕ 12 ಸೆಪ್ಟೆಂಬರ್ 2025ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿರುವ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿತು. ಹಿರಿಯರಾದ ಶಂಭು ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಖ್ಯಾತ ಪ್ರಸೂತಿ ತಜ್ಞೆ, ಸಂಜೀವರ ಯಕ್ಷ ಶಿಷ್ಯೆ ಡಾ. ಗಿರಿಜಾ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು, ಅಮಿತಾಂಜಲಿ ಕಿರಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಆದ್ಯತಾ ಭಟ್ ಧನ್ಯವಾದ ಸಮರ್ಪಿಸಿದರು. ನಂತರ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಪಾರಂಪರಿಕ ಯಕ್ಷಗಾನ ನೃತ್ಯ ಪ್ರದರ್ಶನ ಜರಗಿತು. ಸಂಜೆ 4-00 ಗಂಟೆಗೆ ನಮ್ಮ ಸಂಜೀವ ಶೀರ್ಷಿಕೆಯಲ್ಲಿ ಸುವರ್ಣರ ಬಹುಮುಖಿ ವ್ಯಕ್ತಿತ್ವ ಅನಾವರಣಗೊಳಿಸುವ ಕಾರ್ಯಕ್ರಮ ಔಚಿತ್ಯಪೂರ್ಣವಾಗಿ ಮೂಡಿಬಂದಿತು. ಗುರು ಸಂಜೀವ, ಸಮಾಜಮುಖಿ ಸಂಜೀವ, ಯಕ್ಷ ಸಂಜೀವ ಎಂಬ ವಿಷಯಗಳ ಕುರಿತು ಅನುಕ್ರಮವಾಗಿ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,…
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಪ್ರಯೋಜಕತ್ವದಲ್ಲಿ ಸಾಹಿತ್ಯದ ಚಿತ್ತ ವಿದ್ಯಾರ್ಥಿಗಳತ್ತ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗಾಗಿ ‘ಕನ್ನಡ ರಾಜ್ಯೋತ್ಸವ ಅಂಚೆ ಕಾರ್ಡ್ ಕವನ ಸ್ಪರ್ಧೆ -2025’ಯನ್ನು ಏರ್ಪಡಿಸಲಾಗಿದೆ. ನಿಯಮಾವಳಿ : 1. ಪುತ್ತೂರು ತಾಲೂಕಿನಲ್ಲಿ ವಾಸವಾಗಿರುವ ಅಥವಾ ಅಧ್ಯಯನ ಮಾಡುತ್ತಿರುವ ಪ್ರಾಥಮಿಕ -ಪ್ರೌಢ -ಪಿಯು ಹಾಗೂ ಕಾಲೇಜು-ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ. 2. ಕವನದ ವಿಷಯ ಕನ್ನಡ ನಾಡು – ನುಡಿ- ಸಂಸ್ಕೃತಿ – ನೆಲ ಜಲಕ್ಕೆ ಸಂಬಂಧಿತವಾಗಿರತಕ್ಕದ್ದು. 3. ಕವನದ ಗರಿಷ್ಠ ಸಾಲುಗಳು 12 ಮಿತಿಯಲ್ಲಿ ಇರತಕ್ಕದ್ದು. 4. ನಿಮ್ಮ ಹೆಸರು, ತರಗತಿ, ವಿಳಾಸ, ವಾಟ್ಸಪ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ ಇರತಕ್ಕದ್ದು. 5. ಆಯ್ಕೆಯಾದ ಕವನಗಳಿಗೆ ಪ್ರಥಮ -ದ್ವಿತೀಯ- ತೃತೀಯ ಹಾಗೂ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಗುವುದು. 6. ಆಯ್ಕೆಯಾದ ಕವನಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವನ ವಾಚನಕ್ಕೆ ಅವಕಾಶವಿರುವುದು. (ಸಮಯದ ಹೊಂದಾಣಿಕೆ ನೋಡಿಕೊಂಡು) 7. ಕವನಗಳನ್ನು ದಿನಾಂಕ…
ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷ ರಂಗಾಯಣ ಕಾರ್ಕಳ ಇವರ ಸಹಯೋಗದಲ್ಲಿ ‘ಬಿ.ವಿ. ಕಾರಂತ ನೆನಪು’ ಕಾರ್ಯಕ್ರಮವನ್ನು ದಿನಾಂಕ 18, 19 ಮತ್ತು 20 ಸೆಪ್ಟೆಂಬರ್ 2025ರಂದು ಪ್ರತಿದಿನ ಸಂಜೆ 4-00 ಗಂಟೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 18 ಸೆಪ್ಟೆಂಬರ್ 2025ರಂದು ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್ ಇವರು ಉದ್ಘಾಟನೆ ಮಾಡಲಿದ್ದು, ಯಕ್ಷ ರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಗುರುರಾಜ ಮಾರ್ಪಳ್ಳಿ ಮತ್ತು ನಿನಾದ ತಂಡದಿಂದ ‘ಬಿ.ವಿ. ಕಾರಂತರ ರಂಗಸಂಗೀತ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ದಿನಾಂಕ 19 ಸೆಪ್ಟೆಂಬರ್ 2025ರಂದು ಶ್ರೀಮತಿ ಸಮುದ್ಯತಾ ವೆಂಕಟರಾಮು ಮತ್ತು ಶ್ರೀ ಅರುಣ ಬಿ.ಟಿ. ಇವರಿಂದ ಗಮಕ ಕಾವ್ಯವಾಚನ ಹಾಗೂ ದಿನಾಂಕ 20 ಸೆಪ್ಟೆಂಬರ್ 2025ರಂದು ಶ್ರೀ ರಾಧಾಕೃಷ್ಣ ಕಲ್ಚಾರ್…
ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮವು ದಿನಾಂಕ 07 ಸೆಪ್ಟೆಂಬರ್ 2025ರಂದು ವಿರಾಜಪೇಟೆಯ ಪ್ರಗತಿ ಶಾಲಾ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಉದ್ಘಾಟಿಸಿ ಮಾತನಾಡಿ “ಮಕ್ಕಳು ಸಮಾಜದ ಭವಿಷ್ಯದ ಅಸ್ತಿಯಾಗಿದ್ದು, ಅವರನ್ನು ಸಮರ್ಥ ಮತ್ತು ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲೆಯಲ್ಲೂ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದ್ದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಂಘಟನೆಯು ನಡೆಸುವ ಸೃಜನಾತ್ಮರ ಮಕ್ಕಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು”. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, “ಅತ್ಯಂತ ಪ್ರಾಮಾಣಿಕ ಮತ್ತು ನೈಜತೆಗೆ ಹತ್ತಿರವಾಗಿ ಮಕ್ಕಳ ಸೇವೆಯನ್ನು ಮಾಡುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅತ್ಯಂತ…