Author: roovari

ಬೆಂಗಳೂರು: ಲೇಖಕಿ ಬಾನು ಮುಸ್ತಾಕ್ ಇವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾ ಸಂಕಲನದ ಇಂಗ್ಲಿಷ್ ಅನುವಾದಿತ ಕೃತಿ ‘ಹಸೀನಾ ಆ್ಯಂಡ್ ಅದರ್ ಸ್ಟೋರೀಸ್’ ಕೃತಿಯು 2024ನೇ ಸಾಲಿನ ‘ಇಂಗ್ಲಿಷ್ ಪೆನ್’ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಕೃತಿಯನ್ನು ಲೇಖಕಿ ದೀಪಾ ಬಸ್ತಿ ಅನುವಾದಿಸಿದ್ದಾರೆ. ಕನ್ನಡ ಸೇರಿ ಹತ್ತು ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಗೊಂಡ 16 ಕೃತಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ. ಇದೇ ಮೊದಲ ಬಾರಿಗೆ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಗೊಂಡ ಕೃತಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ‘ಇಂಗ್ಲಿಷ್ ಪೆನ್’ ಸಂಘಟನೆ ತಿಳಿಸಿದೆ.

Read More

ಸಾಧಿಸಿದರೆ ಏನನ್ನು ಗಳಿಸಬಹುದು ಎಂಬುದಕ್ಕೆ ಸಾಕ್ಷಿ 75ರ ಹರೆಯದ ನೃತ್ಯ ಕಲಾವಿದೆ ಗುರು ಡಾ. ವಸುಂಧರಾ ದೊರೆಸ್ವಾಮಿ ಇವರು. ಯುವ ನೃತ್ಯ ಕಲಾವಿದೆಯರು ನಾಚಿಕೊಳ್ಳುವಂತೆ ತನ್ನ ಅಂಗಸೌಷ್ಟವ, ಅಭಿನಯ, ಅಡವುಗಳ ಪಕ್ವತೆ, ಅಂಗ ಶುದ್ಧತೆ ಇವುಗಳಿಗೆ ಪೂರಕವಾಗಿ ಹೊಸ ಹೊಸ ಆವಿಷ್ಕಾರವನ್ನು ಮಾಡಿ ‘ವಸುಂಧರಾ ಶೈಲಿ’ ಎಂಬುದನ್ನು ಕಲಾ ಪ್ರಪಂಚಕ್ಕೆ ನೀಡಿದ ಗುರು ಡಾ. ವಸುಂಧರಾ ದೊರೆಸ್ವಾಮಿ ನಿಜಕ್ಕೂ ಶ್ಲಾಘನೀಯರು. ಅವರು ಇತ್ತೀಚೆಗೆ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಮಂಗಳೂರು ಇದರ ನಿರ್ದೇಶಕಿ ಹಾಗೂ ಗುರುಗಳ ಶಿಷ್ಯೆ ವಿದುಷಿ ಭ್ರಮರಿ ಶಿವಪ್ರಕಾಶ ಇವರು ಏರ್ಪಡಿಸಿದ ಆರು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಫಲಾನುಭವಿಗಳಾದ ತನ್ನ ಪ್ರಶಿಷ್ಯರುಗಳಲ್ಲಿ ಹೊಸತನವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಡಾ. ವಸುಂಧರಾ ಅವರು  ಮಂಗಳೂರಿನ ಪ್ರಶಿಷ್ಯರೊಂದಿಗೆ ಉಡುಪಿ, ಬೆಂಗಳೂರು ಹಾಗೂ ಕೋಲ್ಕತ್ತಾದ ಶಿಷ್ಯ-ಪ್ರಶಿಷ್ಯರೂ ಈ ಕಾರ್ಯಾಗಾರದಲ್ಲಿ ಭಾಗಿಯಾದರು. ಪ್ರತೀದಿನವೂ ಆರಂಭದಲ್ಲಿ ನೃತ್ಯಕ್ಕೆ ಬೇಕಾದ ಉಪಯುಕ್ತ ಯೋಗಾಭ್ಯಾಸದಿಂದ ಆರಂಭಿಸಿ ನೃತ್ಯಬಂಧಗಳನ್ನು ಹೇಳಿಕೊಡುವಲ್ಲಿ ಡಾ. ವಸುಂಧರಾ ದೊರೆಸ್ವಾಮಿ ಯಶಸ್ವಿಯಾದರು. ಮೊದಲನೆಯ ದಿನ…

Read More

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯ ನೇತೃತ್ವದಲ್ಲಿ ‘ಕರ್ನಾಟಕ ಸಂಭ್ರಮ 50ರ ಸವಿನೆನಪು 2023-24’ನೇ ಕಲಾಪೋಷಕರ ಸಹಕಾರದೊಂದಿಗೆ 4ದಿನಗಳ ಕಾಲ ಹಮ್ಮಿಕೊಳ್ಳಲಾದ ‘ಸಿರಿಬಾಗಿಲು ಯಕ್ಷವೈಭವ’ದ ಉದ್ಘಾಟನಾ ಸಮಾರಂಭವು ದಿನಾಂಕ 17-07-2024 ರಂದು ನಡೆಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮಾವನ್ನು ದೀಪಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮಾತನಾಡಿ “ಸಿರಿಬಾಗಿಲು ಪ್ರತಿಷ್ಠಾನವು ಕಾಸರಗೋಡಿನಲ್ಲಿ ಯಕ್ಷಗಾನ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು. ಮೂವತ್ತಕ್ಕೂ ಹೆಚ್ಚು ಹವ್ಯಾಸಿ ತಂಡಗಳಿಗೆ ಯಕ್ಷಗಾನ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯುತ್ತಮ ಕೆಲಸ.” ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ “ಕನ್ನಡದ ಶುದ್ದಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ನಮ್ಮ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಯಕ್ಷಗಾನ ನಿರ್ವಹಿಸುತ್ತಿದೆ. ಗಡಿನಾಡು ಕಾಸರಗೋಡಿನಲ್ಲಿ ಮಲೆಯಾಳಿ ಸೆರಗಲ್ಲಿ ಕನ್ನಡವನ್ನು…

Read More

ಮಂಗಳೂರು : ವಿಸ್ಡಮ್ ಇನ್ಸ್ಟಿಟ್ಯೂಟ್ಸ್ ನೆಟ್ವರ್ಕ್ ವತಿಯಿಂದ, ಮಂಗಳೂರಿನ ಓಸಿಯಾನ್ ಪೆರ್ಲ್ ಹೋಟೆಲ್ ಸಭಾಂಗಣದಲ್ಲಿ ದಿನಾಂಕ 21-07-2024ರಂದು ನಡೆದ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಕಾಸರಗೋಡು ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ದಂಪತಿಗಳ ಅಕ್ಷರ ಲೋಕದ ಸರ್ವತೋಮುಖ ಸಾಧನೆ, ಸೇವೆಗಾಗಿ ‘ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್’ ನೀಡಿ ಗೌರವಿಸಲಾಯಿತು. ವಿಸ್ಡಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಫ್ರಾನ್ಸಿಸ್ಕ್ಯಾ ತೇಜ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಚಾರ್ಟ್ರರ್ಡ್ ಅಕೌಂಟೆಂನ್ಸ್ ಒಫ್ ಇಂಡಿಯಾ ಮಂಗಳೂರು ಶಾಖೆಯ ಅಧ್ಯಕ್ಷರಾದ ಸಿ.ಎ. ಗೌತಮ್ ಪೈ, ಗಾಂಗ್ಲಿಯಾ ಟೆಕ್ನೊಲಾಜಿಸ್ ಎಂ.ಡಿ. ಹಾಗೂ ಎಂ.ಐ.ಟಿ. ಮಣಿಪಾಲ್ ಅಸೋಸಿಯೇಟೆಡ್ ಪ್ರೊಫೆಸರ್ ಡಾ. ದಶರಥ ರಾಜ್ ಕೆ. ಶೆಟ್ಟಿ ಮತ್ತು ತ್ರಿಷಾ ಸಮೂಹ ಸಂಸ್ಥೆ ಸಂಸ್ಥಾಪಕರಾದ ಸಿ.ಎ. ಗೋಪಾಲಕೃಷ್ಣ ಭಟ್ ಮುಖ್ಯ ಅಥಿತಿಗಳಾಗಿದ್ದರು. ವಿಸ್ಡಮ್ ಸಂಸ್ಥೆಯ ಸಿ.ಎ.ಓ. ಗುರುತೇಜ್ ಹಾಗೂ ಸಿ.ಇ.ಓ. ಅಭಿಲಾಷ್ ಕ್ಷತ್ರಿಯ ಕಾರ್ಯಕ್ರಮ ನಿರೂಪಿಸಿ ನೇತೃತ್ವ ನೀಡಿದರು. ವಿಸ್ಡಮ್ ಸಂಸ್ಥೆಯ ಮಂಗಳೂರು ಉಡುಪಿ, ಮಣಿಪಾಲ, ಹಾಸನ, ಶಿವಮೊಗ್ಗ, ಪುತ್ತೂರು, ಮೂಡುಬಿದಿರೆ,…

Read More

ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ (ಮಾಹೆ) ಮತ್ತು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಇದರ ವತಿಯಿಂದ ‘ಬಡಗುತಿಟ್ಟಿನ ಎರಡನೇ ವೇಷ ಮತ್ತು ಪುರುಷ ವೇಷಗಳ ಯುದ್ಧದ ಸನ್ನಿವೇಶಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ’ವನ್ನು ದಿನಾಂಕ 28-07-2024ರಂದು ಬೆಳಿಗ್ಗೆ ಗಂಟೆ 9-00ರಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಐರೋಡಿ ಗೋವಿಂದಪ್ಪ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಉಡುಪಿಯ ಯಕ್ಷಗಾನ ಕಲಾರಂಗ ಉಪಾಧ್ಯಕ್ಷರಾದ ಶ್ರೀ ಎಸ್.ವಿ. ಭಟ್ ಇವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಆಯುಕ್ತರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಇವರು ಅಧ್ಯಕ್ಷತೆ ವಹಿಸಲಿದ್ದು, ಯಕ್ಷಗಾನ ಬರಹಗಾರರಾದ ಶ್ರೀ ರಾಘವ ಶೆಟ್ಟಿ ಬೇಳೂರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣದಲ್ಲಿ ಭಾಗವಹಿಸುವ ಕಲಾವಿದರು : ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಚಂದ್ರಕಾಂತ ರಾವ್ ಮೂಡುಬೆಳ್ಳೆ, ಮದ್ದಳೆಯಲ್ಲಿ ಶ್ರೀ ಎನ್.ಜಿ. ಹೆಗಡೆ ಯಲ್ಲಾಪುರ ಮತ್ತು ಚೆಂಡೆಯಲ್ಲಿ ಶ್ರೀ ರಾಕೇಶ್ ಮಲ್ಯ ಹಳ್ಳಾಡಿ.…

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ 11ನೇ ವರ್ಷದ ಸಂಭ್ರಮದಲ್ಲಿದ್ದು, ವಿಶೇಷ ಸಂಚಿಕೆಯನ್ನು ದಿನಾಂಕ 22-07-2024ರಂದು ಬಂಟ್ವಾಳ ಎಸ್.ವಿ.ಎಸ್. ದೇವಳ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ್ ಆಳ್ವ ಬಿಡುಗಡೆಗೊಳಿಸಿದರು. ಬಳಿಕ ಮಾತಾಡಿದ ಅವರು “ನಮ್ಮ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡಿದ್ದ ಮಾಲತಿ ಶೆಟ್ಟಿ ಅವರು ಜಾಗತೀಕರಣದ ಈ ವೇಳೆಯಲ್ಲೂ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯ. ಶಾಲೆ ಕಾಲೇಜುಗಳಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಪ್ರಯತ್ನಪಟ್ಟಾಗ ಮಾತ್ರ ಕನ್ನಡಕ್ಕೆ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಕಳೆದ 10 ವರ್ಷಗಳಲ್ಲಿ 40 ಪುಸ್ತಕ ಬಿಡುಗಡೆ, 101 ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರು ಕನ್ನಡ ಭಾಷೆ ಉಳಿವಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದರು. ಭುವನಾಭಿರಾಮ ಉಡುಪ ಮಾತನಾಡಿ “ಕನ್ನಡ ಭಾಷೆ ಬೆಳವಣಿಗೆಗೆ ವಿವಿಧ ರೀತಿಯ ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಮಾಲತಿ ಶೆಟ್ಟಿ ಮತ್ತವರ ತಂಡಕ್ಕೆ ಅಭಿನಂದನೆಗಳು” ಎಂದರು. ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು…

Read More

ಮುಲ್ಕಿ : ಶ್ರೀ ವಿನಾಯಕ ಯಕ್ಷ ಕಲಾ ತಂಡ (ರಿ.) ಕೆರೆಕಾಡು ಮುಲ್ಕಿ ಇದರ ವತಿಯಿಂದ ‘ತೈತತಕತ’ ಕಾರ್ಯಕ್ರಮವು ದಿನಾಂಕ 27-07-2024 ಮತ್ತು 28-07-2024ರಂದು ಸಂಜೆ ಗಂಟೆ 4-00ರಿಂದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನಡೆಯಲಿದೆ. ದಿನಾಂಕ 27-07-2024ರಂದು ಶ್ರೀ ಕ್ಷೇತ್ರ ಕಾರಿಂಜದ ಆಡಳಿತಾಧಿಕಾರಿ ಶ್ರೀ ಚಂದ್ರಶೇಖರ ಶೆಟ್ಟಿ ಇವರಿಂದ ಉದ್ಘಾಟನೆಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶ್ರೀ ಶ್ರೀ ವೇದಮೂರ್ತಿ ಶ್ರೀ ಕೃಷ್ಣ ತಂತ್ರಿಯವರು ಆಶೀರ್ವಚನ ನೀಡಲಿದ್ದಾರೆ. ಮುಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಮೆಸ್ಕಾಂನ ಕಿರಿಯ ಇಂಜಿನಿಯರ್ ಶ್ರೀ ಬಿ. ರಾಜೇಶ್ ಇವರಿಗೆ ‘ಶ್ರೀ ವಿನಾಯಕ ಯಕ್ಷಕಲಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ನಡೆಯಲಿರುವ ‘ಸತ್ವ ಶೈಥಿಲ್ಯ’ ಪ್ರಸಂಗದ ಯಕ್ಷಗಾನ ಪ್ರದರ್ಶನದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ ಆಳಿಕೆ ಭಾಗವತರಾಗಿ, ಮಧೂರು ರಾಮಪ್ರಕಾಶ್ ಕಲ್ಲೂರಾಯ ಮತ್ತು ಯೋಗೀಶ್ ಉಳೆಪಾಡಿ ಇವರುಗಳು ಚೆಂಡೆ ಮದ್ದಳೆಯಲ್ಲಿ…

Read More

ಸುರತ್ಕಲ್ : ಪಣಂಬೂರು ನಾಗರಿಕ ಸನ್ಮಾನ ಸಮಿತಿಯ ನೇತೃತ್ವದಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದ ಸುರೇಶ್‌ ಕಾಮತ್ ಇವರ 60ನೇ ಜನ್ಮ ದಿನಾಚರಣೆ ಪ್ರಯುಕ್ತ ಕುಳಾಯಿ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ದಿನಾಂಕ 20-07-2024ರಂದು ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪಣಂಬೂರು ಕೇಂದ್ರೀಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ಎಸ್. ಈಶ್ವರ ಭಟ್ “ಹಲವಾರು ದಶಕಗಳಿಂದ ಯಕ್ಷಗಾನ ಹಿಮ್ಮೇಳ ಕಲಾವಿದರಾಗಿರುವ ಪಣಂಬೂರು ಸುರೇಶ್ ಕಾಮತ್ ಅಪರೂಪದ ಕಲಾಸಾಧಕ. ಯಕ್ಷಗಾನ ಕಲಿಕೆ ತಂಡಗಳಿಗೂ ಅವರಂತಹ ಸವ್ಯಸಾಚಿಗಳ ಸಹಕಾರ ಔಚಿತ್ಯಪೂರ್ಣ” ಎಂದು ಅಭಿಪ್ರಾಯಪಟ್ಟರು. ನವ ಮಂಗಳೂರು ಬಂದರು ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಷ್ಣುಮೂರ್ತಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಕೃಷ್ಣ ಹೆಬ್ಬಾರ್, ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಎಂ. ಸದಾಶಿವ, ಸರ್ಜನ್ ಡಾ. ಪಿ. ಸತ್ಯಮೂರ್ತಿ ಐತಾಳ್ ಶುಭ ಹಾರೈಸಿದರು. ನಾಗರಿಕ ಸನ್ಮಾನ ಸಮಿತಿಯ ಎಂ. ಶಂಕರನಾರಾಯಣ ನಿರೂಪಿಸಿ, ಕೆ.ಪಿ. ಚಂದ್ರಶೇಖರ್ ಸ್ವಾಗತಿಸಿ, ಎಸ್.ಎನ್. ಭಟ್…

Read More

ಮಣಿಪಾಲ : ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ (ರಿ.) ಸರಳೆಬೆಟ್ಟು ಮಣಿಪಾಲ ಇದರ ನೇತೃತ್ವದಲ್ಲಿ ರಂಗ ಚಿನ್ನಾರಿ ಕಾಸರಗೋಡು (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಸುವಿಖ್ಯಾತ ರಂಗ ನಿರ್ದೇಶಕ, ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಇವರ ನಿರ್ದೇಶನದಲ್ಲಿ ‘ರಂಗ ಸಂಸ್ಕೃತಿ’ ಕಾರ್ಯಾಕಾರವನ್ನು ದಿನಾಂಕ 28-07-2024ರಂದು ಬೆಳಗ್ಗೆ 10-00 ಗಂಟೆಗೆ ಮಣಿಪಾಲದ ಸರಳೆಬೆಟ್ಟು ರತ್ನ ಸಂಜೀವ ಕಲಾ ಮಂಡಲದಲ್ಲಿ ಆಯೋಜಿಸಲಾಗಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಈ ರಂಗ ಕಾರ್ಯಾಕಾರದಲ್ಲಿ ಮೂಕಾಭಿನಯ, ಧ್ವನಿ, ಆಶು ರಚನೆ, ನಡೆ ಮತ್ತು ಪ್ರಸಾದನ ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ನೋಂದಣಿಗಾಗಿ ಸಂಪರ್ಕಿಸಿ 9008845383.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ‘ಮಳಲಿ ವಸಂತಕುಮಾರ್ ಸಾಹಿತ್ಯ ದತ್ತಿನಿಧಿ’ ಪುರಸ್ಕಾರಕ್ಕೆ ಮಂಡ್ಯ ಜಿಲ್ಲೆಯ ಹಿರಿಯ ಬರಹಗಾರ ‘ರಾಗೌ’ ಕಾವ್ಯನಾಮದ ಡಾ. ರಾಮೇಗೌಡ ಇವರು ಆಯ್ಕೆಯಾಗಿದ್ದಾರೆ. ‘ಮನುಕುಲದ ಮಾತುಗಾರ’ ಎಂದೇ ಹೆಸರಾಗಿದ್ದ ಡಾ. ಮಳಲಿ ವಸಂತ ಕುಮಾರ್ ಇವರು ಶ್ರೇಷ್ಠ ವಾಗ್ಮಿಗಳು ಮತ್ತು ಬರಹಗಾರರೂ ಆಗಿದ್ದರು. ಕನ್ನಡಪರ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಇವರು ಬರಹಗಾರರನ್ನು ಪ್ರೋತ್ಸಾಹಿಸುವಲ್ಲಿ ಸಿದ್ದ ಹಸ್ತರು. ಇವರ ಹೆಸರಿನಲ್ಲಿ ಕುಟುಂಬ ವರ್ಗದವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ವಿಶ್ವಾಸವಿಟ್ಟು ದತ್ತಿ ನಿಧಿಯನ್ನು ಸ್ಥಾಪನೆ ಮಾಡಿದ್ದು ಬರಹಗಾರರಿಗೆ, ಕನ್ನಡಪರ ಹೋರಾಟಗಾರರಿಗೆ ಈ ಪುರಸ್ಕಾರವನ್ನು ನೀಡಲು ವಿನಂತಿಸಿದ್ದಾರೆ. 2024ನೇ ಸಾಲಿನ ‘ಮಳಲಿ ವಸಂತ ಕುಮಾರ್ ಸಾಹಿತ್ಯ ಪ್ರಶಸ್ತಿ’ಯನ್ನು ಪಡೆದಿರುವ ಡಾ. ರಾಮೇಗೌಡ (ರಾಗೌ) ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಈರೇಗೌಡನ ದೊಡ್ಡಿ ಮೂಲದವರು. 37 ವರ್ಷಗಳ ಕಾಲ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕವಿತೆ, ಮಕ್ಕಳ ಸಾಹಿತ್ಯ, ನಾಟಕ, ವಿಮರ್ಶೆ, ಜಾನಪದ, ಗ್ರಂಥ…

Read More