Subscribe to Updates
Get the latest creative news from FooBar about art, design and business.
Author: roovari
02 ಮಾರ್ಚ್ 2023, ಮಂಗಳೂರು : ನೆಯ್ಗೆಯ ನೂಲಿನಂತೆ ಮುದ್ರಾಡಿಯವರ ಜೀವನವೂ ಸಾಹಿತ್ಯ ಕೃತಿಗಳೂ ಸಾಧನೆಗಳೂ ಸ್ಪುಟವಾಗಿದ್ದವು. ಪ್ರಾಥಮಿಕ ಶಾಲಾ ಶಿಕ್ಷಕರಾದ ಮುದ್ರಾಡಿಯವರ ಕೃತಿ ವಿ.ವಿ.ಯ ಕನ್ನಡ ಐಚ್ಚಿಕ ವಿಷಯ ಪಠ್ಯವಾಗಿ ಆಯ್ಕೆಗೊಂಡಿದ್ದು, ಅವರ ಪ್ರತಿಭೆಗೆ ಸಾಕ್ಷಿ ಎಂದು ದ.ಕ. ಜಿಲ್ಲಾ ಕ.ಸಾ.ಪ.ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದರು. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಕಚೇರಿಯಲ್ಲಿ ದಿನಾಂಕ 28-02-2023ರಂದು ಆಯೋಜಿಸಲಾದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು. ಹಿರಿಯ ಕಲಾವಿದ, ಸಾಹಿತಿ, ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿಯವರು ಅಂಬಾತನಯರ ಬಹುಮುಖ ಪ್ರತಿಭೆಯನ್ನು ವಿವರಿಸುತ್ತಾ ‘ಪರಿತ್ಯಕ್ತ’ ಕೃತಿಯನ್ನು ಕನ್ನಡದ ಮೇರು ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರು ಶ್ಲಾಘಿಸಿರುವುದು ಅವರಿಗೆ ಸಂದ ಪ್ರಶಸ್ತಿಯೇ ಆಗಿದೆ. ನಟ, ನಾಟಕಕಾರ, ಪ್ರಸಂಗಕರ್ತೃ, ಯಕ್ಷಗಾನ ಕಲಾವಿದ ಅರ್ಥಧಾರಿ ಪ್ರವಚನಕಾರ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಂಬಾತನಯರಿಗೆ ಪಾರ್ತಿ ಸುಬ್ಬ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮೊದಲಾದ…
02 ಮಾರ್ಚ್ 2023, ಮಂಗಳೂರು: ಖ್ಯಾತ ಲೇಖಕಿ ಶ್ರೀಮತಿ ಐರಿನ್ ಪಿಂಟೋ ಇವರಿಗೆ ಕೊಂಕಣಿ ಲೇಖಕ ಸಂಘವು ‘ ಕೊಂಕಣಿ ಸಾಹಿತ್ಯ ಪ್ರಶಸ್ತಿ 2023 ’ ನೀಡಿ ಗೌರವಿಸಿದೆ. ಫೆಬ್ರವರಿ 25ರಂದು ನಂತೂರಿನ ಸಂದೇಶ ಪ್ರತಿಷ್ಠಾನದ ಸಂದೇಶ ಆವರಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರಗಿತು. ಮುಖ್ಯ ಅತಿಥಿಯಾಗಿ ರಾಕ್ಣೋ ವಾರಪತ್ರಿಕೆಯ ಮಾಜಿ ಸಂಪಾದಕ ರೆ. ಫ್ರಾನ್ಸಿಸ್ ರೋಡ್ರಿಗರ್ಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ಬೆಳ್ಳೂರು ಭಾಗವಹಿಸಿದ್ದರು. ಈ ಪ್ರಶಸ್ತಿಯ 25,000 ನಗದು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಐರಿನ್ ಪಿಂಟೋ ಕೊಂಕಣಿ ಲೇಖಕಿ, ಕಾದಂಬರಿ ಗಾರ್ತಿ ಎಂದು ಗುರುತಿಸಿದ್ದಕ್ಕಾಗಿ ಇಡೀ ಕೊಂಕಣಿ ಸಾಹಿತ್ಯ ಲೋಕಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊಂಕಣಿ ಸಮುದಾಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಕೆಎಲ್ಎಸ್ ನಿಂದ ಪ್ರಶಸ್ತಿ ಸ್ವೀಕರಿಸಿರುವುದು ನನಗೆ ಅಪಾರ ಸಂತಸ ತಂದಿದೆ. ನನ್ನ ಬೆಂಬಲಿಗರಿಗೆ ಸಾಹಿತ್ಯ ಅಭಿಮಾನಿಗಳಿಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ನಾನು ಕೃತಜ್ಞಳಾಗಿದ್ದೇನೆ…
02 ಮಾರ್ಚ್ 2023, ಬೆಂಗಳೂರು : ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ನೀಲಾ ರಾಮ್ ಗೋಪಾಲ್ (87) ಅವರು ಮಾರ್ಚ್ 1ರಂದು ಬುಧವಾರ ನಿಧನರಾದರು. ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ತಮಿಳುನಾಡಿನ ಕುಂಭಕೋಣಂನಲ್ಲಿ 1935ರಲ್ಲಿ ಜನಿಸಿದ ವಿದುಷಿ ನೀಲಾ ಅವರು, ರಾಮ್ ಗೋಪಾಲ್ ಅವರನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ತಮಿಳುನಾಡಿನ ತ್ಯಾಗರಾಜಪುರಂ ಎಂಬ ಹಳ್ಳಿಯಿಂದ ಆರಂಭವಾದ ಅವರ ಗಾಯನ ಯಾತ್ರೆ, ಲಂಡನ್ ನ ಭಾರತೀಯ ಭವನದವರೆಗೂ ತಲುಪಿದೆ. 72 ಮೇಳಕರ್ತ ರಾಗಗಳನ್ನು ಹಾಡಿ 19 ಧ್ವನಿಸುರಳಿ ಹೊರತಂದಿದ್ದಾರೆ. 59ನೇ ವರ್ಷದಲ್ಲಿ ಅವರು ಕ್ಯಾನ್ಸರ್ ಗೆ ತುತ್ತಾಗಿದ್ದರು. ಕ್ಯಾನ್ಸರ್ ಜಯಿಸಿದ ಅವರು ಮತ್ತೆ ಗಾಯನದಲ್ಲಿ ತೊಡಗಿಕೊಂಡಿದ್ದರು. ಉತ್ತಮ ಮನೋಧರ್ಮ ವಿದ್ವತ್ಪೂರ್ಣ ಗಾಯನಕ್ಕೆ ಹೆಸರಾದ ನೀಲಾ ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಗಾಯನ ಲೋಕಕ್ಕೆ ನೀಡಿದವರು. ಇವರನ್ನು ಶಿಷ್ಯಂದಿರು “ನೀಲಾ ಮಾಮಿ” ಎಂದೇ ಕರೆಯುತ್ತಿದ್ದರು. ಮದ್ರಾಸ್ ಮ್ಯೂಜಿಕ್ ಅಕಾಡೆಮಿ ನೀಡುವ ‘ಸಂಗೀತ ಕಲಾಚಾರ್ಯ’ ಪ್ರಶಸ್ತಿ,…
02 ಮಾರ್ಚ್ 2023, ಮಣಿಪಾಲ: “ಕೊಂಕಣಿ ರಂಗಭೂಮಿ”ಗೆ ಚಿನ್ನಾ ಕೊಡುಗೆ ಅನನ್ಯವಾದದ್ದು – ಟಿ. ಅಶೋಕ್ ಪೈ ಕೊಂಕಣಿ ರಂಗಭೂಮಿಯನ್ನು ಜನ ಸಮಾನ್ಯರೆಡೆಗೆ ಕೊಂಡೊಯ್ಯಲು ಕಾಸರಗೋಡು ಚಿನ್ನಾ ಮಾಡಿರುವ ಕೆಲಸ ಅನನ್ಯವಾದದ್ದು. ಮಲಯಾಳಂ ಹಾಗೂ ಕನ್ನಡ ಭಾಷೆಯ ಎರಡು ಕಿರು ನಾಟಕಗಳನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿ ರಂಗಕ್ಕೇರಿಸುವುದೆಂದರೆ ಅದು ಸುಲಭದ ಕೆಲಸವಲ್ಲ. ಇಂಥಹ ಕ್ರಿಯಾತ್ಮಕವಾದ ಕೆಲಸಗಳಲ್ಲಿ ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನದವರು ಯಾವತ್ತೂ ಜೊತೆಗಿರುತ್ತೇವೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಅಶೋಕ ಪೈ ಅವರು ಹೇಳಿದರು. ಅವರು ಮಣಿಪಾಲದ ಆ್ಯಂಫಿ ಥಿಯೇಟರ್ ನಲ್ಲಿ ಫೆಬ್ರವರಿ 25ರಂದು ಕಾಸರಗೋಡು ಚಿನ್ನಾ ನಿರ್ದೇಶನದ “ಕರ್ಮಾಧೀನ” ಮತ್ತು “ಎಕ್ಲೊ ಆನೇಕ್ಲೊ” ಕೊಂಕಣಿ ನಾಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಹಾಗೂ ಮಾಹೆ ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ಏರ್ಪಡಿಸಲ್ಪಟ್ಟ ನಾಟಕ ಪ್ರದರ್ಶನಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಹೆ ವಿಶ್ವ ವಿದ್ಯಾನಿಲಯದ ನಿರ್ದೇಶಕ ಗಿರಿಧರ ಕಿಣಿಯವರು ಅಪರೂಪವಾಗುತ್ತಿರುವ ಕೊಂಕಣಿ ರಂಗಭೂಮಿಗೆ ಜೀವ ತುಂಬುತ್ತಿರುವ…
01 ಮಾರ್ಚ್ 2023, ಉಡುಪಿ: ಸಾಮಾಜಿಕ ನೆರವಿಗಾಗಿ ಹುಟ್ಟಿ ಸಾಂಸ್ಖೃತಿಕ ಸಂಘಟನೆಯಾದ ಸುಮನಸಾ: ಜಯಕರ ಶೆಟ್ಟಿ ತನ್ನೂರಿನಲ್ಲಿ ಅವಘಡ ಉಂಟಾದಾಗ ಅವರ ನೆರವಿಗೆ ಸಮಾನ ಮನಸ್ಕರು ಒಟ್ಟಾಗಿ ಕಟ್ಟಿದ ಸಂಸ್ಥೆ ಸುಮನಸಾ ಇಂದು ಸಾಮಾಜಿಕ ಕಳಕಳಿಯನ್ನು ಮುಂದುವರಿಸುತ್ತಾ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬೇರೆ ಬೇರೆ ವಯೋಮಾನದವರು 60ಕ್ಕೂ ಅಧಿಕ ಮಂದಿ ಈ ಸಂಸ್ಥೆಯಲ್ಲಿದ್ದಾರೆ. ಇಷ್ಟೊಂದು ಶಿಸ್ತುಬದ್ಧವಾದ ತಂಡ ಮತ್ತೊಂದಿಲ್ಲ. ಈ ತಂಡದ ಶಿಸ್ತೇ ಬೇರೆಯವರಿಗೆ ಮಾದರಿ ಎಂದು ಶ್ಲಾಘಿಸಿದರು. ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಸುಮನಸಾ ತಂಡವು ರಂಗಭೂಮಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಇಂದು ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರಿಗೆ ರಂಗಸನ್ಮಾನ ನೀಡಿರುವುದು ತುಳುಕೂಟಕ್ಕೆ ನೀಡಿದ…
01 ಮಾರ್ಚ್ 2023, ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ಚಳವಳಿಗೆ ಸಾಕ್ಷಿ ಪ್ರಜ್ಞೆಯಂತಿರುವ ಮತ್ತು ಅದಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಶ್ರೀನಿವಾಸ ಜಿ ಕಪ್ಪಣ್ಣ ಅವರನ್ನು ಕುರಿತ ಪುಸ್ತಕವನ್ನು ಜಯದೇವ್ ಕಪ್ಪಣ್ಣ, ಸ್ನೇಹಾ ಕಪ್ಪಣ್ಣ ಹೊರತರುತ್ತಿದ್ದು, ಈ ಪುಸ್ತಕವನ್ನು ಪ್ರೋ.ನಾ. ದಾಮೋದರ ಶೆಟ್ಟಿಯವರು ಸಂಪಾದಿಸಿದ್ದಾರೆ. ಈ ಪುಸ್ತಕವು ಒಂದು ನೂರ ಮೂವತ್ತನಾಲ್ಕು ಹಿರಿಯರು ಗೆಳೆಯರು ಬರೆದಿರುವ ಲೇಖನಗಳ ಸಂಗ್ರಹ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾರ್ಚ್ 4, ಶನಿವಾರ ಸಂಜೆ 5.00 ಗಂಟೆಗೆ ಸಂಸ ಬಯಲು ರಂಗಮಂದಿರ ಕಲಾಕ್ಷೇತ್ರ ಆವರಣದಲ್ಲಿ ನಡೆಯಲಿದೆ.
01 ಮಾರ್ಚ್ 2023, ಮಂಗಳೂರು: ಮನಸ್ಸು ಮನಸ್ಸುಗಳ ಬೆಸೆಯುವ ಕೆಲಸ ಸಾಹಿತ್ಯದಿಂದ ಸಾಧ್ಯ ಎಂದು ಡಾ. ಹರಿಕೃಷ್ಣ ಪುನರೂರು ಹೇಳಿದ್ದಾರೆ. ಬಹುಭಾಷಾ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯುಗಪುರುಷ ನೇತೃತ್ವದಲ್ಲಿ ಕಥಾ ಬಿಂದು ಪ್ರಕಾಶನ ಆಶ್ರಯದಲ್ಲಿ ಬಹುಭಾಷಾ ಸಾಹಿತ್ಯ ಸಂಭ್ರಮ, ಪಿ. ಪ್ರದೀಪ್ ಕುಮಾರ್ ಅವರ ರಹಸ್ಯ ಗುಂಪು ಮತ್ತು ಕಣಜ ಎಂಬ ಎರಡು ಕೃತಿಗಳ ಅನಾವರಣ ಹಾಗೂ ಕಂಬಳ ಕ್ಷೇತ್ರದ ಸಾಧಕ ಪ್ರಸಾದ್ ಶೆಟ್ಟಿ, ಶ್ರೀನಿವಾಸ ಭಜನಾ ತಂಡದ ಅಧ್ಯಕ್ಷ ಕಿಶೋರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮವು ದಿನಾಂಕ 26 ಫೆಬ್ರವರಿ 2023 ಅದಿತ್ಯವಾರದಂದು ನಡೆಯಿತು. ಸಾಹಿತ್ಯಿಕ ಕೆಲಸದಿಂದ ಆಗಲಿ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿ, ಆಧುನಿಕತೆ ಬೆಳೆದು ಬಂದಂತೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಹೊಸ ಹೊಸ ಕವಿಗಳು ಹುಟ್ಟಿಕೊಂಡಿದ್ದಾರೆ. ಅವರನ್ನು ಇನ್ನಷ್ಟು ಮುಖ್ಯ ವಾಹಿನಿಗೆ ತರುವ ಕೆಲಸ ಇಂತಹ ಸಾಹಿತ್ಯಿಕ ಕೆಲಸ ಕಾರ್ಯದಿಂದ…
01 ಮಾರ್ಚ್ 2023, ಬೆಂಗಳೂರು: ವಿಜ್ಞಾನ ಪ್ರಸಾರ್ ನವ ದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಕುತೂಹಲಿ ಸ್ಕೋಪ್ ವಿಜ್ಞಾನ ನಾಟಕೋತ್ಸವ 24, 25, 26 ಫೆಬ್ರವರಿ 2023ರಂದು ಬೆಂಗಳೂರಿನ ಬಿ.ವಿ. ಕಾರಂತ ರಂಗ ಮನೆಯಲ್ಲಿ ಜರಗಿತು. ಮೊದಲ ದಿನದ ನಾಟಕ : ಅಬ್ದುಸ್ ಸಲಾಮ್ ಒಂದು ವಿಚಾರಣೆ 24 ಫೆಬ್ರವರಿ 2023, ಶುಕ್ರವಾರ ಪ್ರಸ್ತುತಿ : ಅರಿವು ರಂಗ, ಮೈಸೂರು ನಿರ್ದೇಶನ : ಯತೀಶ್ ಎನ್. ಕೊಳ್ಳೇಗಾಲ ರಚನೆ : ಶಶಿಧರ್ ಡೋಂಗ್ರೆ ಮೂಲ : ನೀಲಾಂಜನ್ ಚೌಧುರಿ ಸಂಗೀತ : ಸಾಯಿ ಶಿವ್ ಮೊಹಮ್ಮದ್ ಅಬ್ದುಸ್ ಸಲಾಂ ಪಾಕಿಸ್ತಾನ ಕಂಡ ಅಪ್ರತಿಮ ವಿಜ್ಞಾನಿ. ಪರಮಾಣು ವಿಜ್ಞಾನದ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಸಲಾಂ ಅವರು ಜನಿಸಿದ್ದು ಪಾಕಿಸ್ತಾನದ ಝಾಂಗ್ ಎಂಬ ಹಳ್ಳಿಯಲ್ಲಿ. ಚಿಕ್ಕಂದಿನಿಂದಲೇ ಬುದ್ಧಿವಂತ ಹುಡುಗ ಎನಿಸಿಕೊಂಡಿದ್ದ ಅಬ್ದುಸ್ ಮ್ಯಾಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದುಕೊಂಡು ಲಾಹೋರ್ ನಲ್ಲಿದ್ದ…
28 ಫೆಬ್ರವರಿ 2023, ಮಂಗಳೂರು: ತುಳು ಸಿನಿಮಾ ರಂಗವು ಕೂಡು ಕುಟುಂಬ ಕಲ್ಪನೆಯಲ್ಲಿ ಬೆಳೆದು ಬಂದಿದೆ. ಇಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಸಹಿತ ಎಲ್ಲರ ನಡುವೆ ಸಂಬಂಧ ಪರಸ್ಪರ ಬೆಸೆದುಕೊಂಡಿದೆ ಎಂದು ವಿದ್ವಾಂಸ ಪ್ರೊ. ಬಿ. ಎ. ವಿವೇಕ ರೈ ಹೇಳಿದರು. ತಮ್ಮ ಲಕ್ಷ್ಮಣ ಅವರು ಬರೆದ ತುಳು ಚಿತ್ರರಂಗದ 50 ವರ್ಷಗಳ ಇತಿಹಾಸ ಗ್ರಂಥ “ತುಳು ಬೆಳ್ಳಿ ತೆರೆಯ ಸುವರ್ಣ ಯಾನ” ಕೃತಿ ಯನ್ನು ಫೆ.27 ಸೋಮವಾರದಂದು ನಗರದ ಪುರಭವನ ದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಭಾಷೆಯ ಮೇಲಿನ ಭಾವನಾತ್ಮಕ ಸಂಬಂಧ ಪ್ರೀತಿ, ಅಭಿಮಾನದಿಂದ ಮಾಡುವ ಸಿನಿಮಾ ಗಳನ್ನು ನಾವು ನೋಡಿ, ಬೆಂಬಲಿಸಬೇಕು. ನಮ್ಮ ಭಾಷೆಯ ಸಿನಿಮಾ ವನ್ನು ನಾವು ತುಳು ಭಾಷಿಕರೇ ನೋಡದಿದ್ದರೆ ಅದು ಸರಿಯಲ್ಲ. ತುಳು ಸಿನಿಮಾ ಗಳ ವೀಕ್ಷಣೆ ಹೆಚ್ಚುವ ಮೂಲಕ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು. ತಮ ಲಕ್ಷ್ಮಣ ಅವರು ತುಳು ಸಿನಿಮಾ ರಂಗದ ಚರಿತ್ರಾ ಅರ್ಹ ಕೃತಿಯನ್ನು ಅರ್ಪಿಸಿದ್ದಾರೆ. ತಲಸ್ಪರ್ಶಿ ಜ್ಞಾನ ನೀಡಬಹುದಾದ…
28, ಫೆಬ್ರವರಿ 2023 ಉಡುಪಿ: ಕಲಾವಿದರ ಗೂಡಾದ ಕೊಡವೂರು ಬೀಡಾಗಲಿ: ಜಯರಾಜ್ ಕಾಂಚನ್. ಸುಮಧುರ ಮನಸ್ಸಿನ ಎಲ್ಲರ ಸುಮನಸಾ ಸಂಸ್ಥೆಯು ಕೊಡವೂರಿನಲ್ಲಿ ಕಲಾವಿದರ ಗೂಡು ಕಟ್ಟಿದೆ. ಈ ಗೂಡು ಬೀಡಾಗಿ ಬೆಳೆಯಲಿ ಎಂದು ಹಿರಿಯ ನಾಟಕಕಾರ ಜಯರಾಜ್ ಎಸ್. ಕಾಂಚನ್ ಹೇಳಿದರು. ಸಾಂಸ್ಕøತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್ನಲ್ಲಿ ಫೆಬ್ರವರಿ 27ರಂದು ಹಮ್ಮಿಕೊಂಡ ರಂಗಹಬ್ಬ-11 ಇದರ ಎರಡನೇ ದಿನದ ಕಾರ್ಯಕ್ರಮದಲ್ಲಿ ರಂಗಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಹಳ ಸಂಸ್ಥೆಗಳು ಹುಟ್ಟುತ್ತವೆ. ಆರಂಭಶೂರತ್ವ ತೋರಿಸುತ್ತವೆ. ಬಳಿಕ ಮುನ್ನಡೆಯುವುದಿಲ್ಲ. ಆದರೆ ಸುಮನಸಾ ಸಂಸ್ಥೆ ಈ ರೀತಿಯಾಗದೇ ಎಲ್ಲ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಧೀರ ಕಲಾವಿದರನ್ನು ಸೃಷ್ಟಿಸಿ 21 ವರ್ಷಗಳಿಂದ ಮುಂದೆ ಸಾಗುತ್ತಿದೆ ಎಂದು ಅವರು ಶ್ಲಾಘಿಸಿದರು. ಹೋಟೆಲ್ ಉದ್ಯಮಿ, ಕಲಾಪೋಷಕ ಟಿ. ರವೀಮದ್ರ ಪೂಜಾರಿ ಮಾತನಾಡಿ, ಸುಮನಸಾ ಸಂಸ್ಥೆಯು ಕೇವಲ ತನ್ನ ನಾಟಕಗಳನ್ನು ಪ್ರದರ್ಶಿಸುವುದಲ್ಲ. ರಾಜ್ಯ, ಬೇರೆ ರಾಜ್ಯಗಳ ತಂಡಗಳನ್ನು ಕರೆಸಿ ಅವರ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ಇಲ್ಲಿನ…