Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭ ಗೊಂಡಿದ್ದ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 31-07-2023ರ ಸೋಮವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ವಿದುಷಿ ರಾಧಿಕಾ ಶೆಟ್ಟಿ ಇವರ ಶಿಷ್ಯೆಯಾದ ಮಂಗಳೂರಿನ ಅದಿತಿ ಲಕ್ಷ್ಮೀ ಭಟ್. ನೃತ್ಯ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ. ಡಾ.ಕಿರಣ್ ಕುಮಾರ್ ಬಿ.ಎಸ್ ಮತ್ತು ಡಾ.ಚೈತ್ರ ಲಕ್ಷ್ಮೀ ಬಿ. ಇವರ ಪುತ್ರಿಯಾದ ಅದಿತಿ ಲಕ್ಷ್ಮೀ ಭಟ್ ತನ್ನ 6ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಪ್ರಾರಂಭಿಸಿ, ಕರ್ನಾಟಕ, ಕೇರಳ, ತಮಿಳುನಾಡು, ಕೊಲ್ಲೂರು ಮತ್ತು ಕೊಚ್ಚಿನ್ ಹೀಗೆ ವಿವಿಧ ಪ್ರತಿಷ್ಟಿತ ವೇದಿಕೆಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾಳೆ. ವಿವಿಧ ಕಲಾ ಪ್ರಕಾರಗಳ ಬಗ್ಗೆಯೂ ಅಪಾರ ಒಲವು ಹೊಂದಿರುವ ಈಕೆ ಅದಕ್ಕಾಗಿ ಬಹಳಷ್ಟು ಶ್ರಮವಹಿಸಿ ಅಭ್ಯಾಸ ಮಾಡುವ ಉತ್ಸಾಹ ಹೊಂದಿದ್ದಾಳೆ. ಭರತನಾಟ್ಯದ ಜೊತೆಗೆ ಬೆಂಗಳೂರಿನ ಅನುಪಮಾ ಮಂಜುನಾಥ್ ಇವರಿಂದ ಕರ್ನಾಟಕ…
ಅಡ್ಯನಡ್ಕ : ಜನತಾ ಹಿರಿಯ ಪ್ರಾಥಮಿಕ ಶಾಲೆ ಅಡ್ಯನಡ್ಕದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ವತಿಯಿಂದ ಜರುಗಿದ ‘ಸಾಹಿತ್ಯ ಸಂಭ್ರಮ – 2’ ಮಕ್ಕಳ ಶಿಬಿರದ ಉದ್ಘಾಟನೆಯು ದಿನಾಂಕ 22-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ಟಾಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ಶ್ರೀ ಎಸ್. ಬಾಲಕೃಷ್ಣ ಕಾರಂತ ಎರುಂಬು ಇವರು ಮಾತನಾಡುತ್ತಾ “ಕೇವಲ ಪಠ್ಯಗಳು ಮಕ್ಕಳನ್ನು ಪರಿಪೂರ್ಣರನ್ನಾಗಿ ಮಾಡಲಾರವು. ಹೊಡೆತದಿಂದ ಎಚ್ಚರಿಸುವ ಬದಲು ಸಾಹಿತ್ಯದ ಮೂಲಕ ಮಕ್ಕಳನ್ನು ಜಾಗೃತಗೊಳಿಸಬೇಕು. ಸಾಹಿತ್ಯವು ಜಡತ್ವವನ್ನು ದೂರ ಮಾಡಬಲ್ಲದು” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಉದ್ಘಾಟನೆಯನ್ನು ಶ್ರೀ ಭಾಸ್ಕರ ಅಡ್ವಳ ನೆರವೇರಿಸಿದರು. ಮಕ್ಕಳಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಚುಟುಕು ಸಾಹಿತ್ಯ ರಚನೆಯ ತರಬೇತಿಯನ್ನು ಶ್ರೀ ಜಯಾನಂದ ಪೆರಾಜೆ ನಡೆಸಿಕೊಟ್ಟರು. ಭಾಸ್ಕರ ಅಡ್ವಳರು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿದರು. ಬಂಟ್ಟಾಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ಉಪಸ್ಥಿತರಿದ್ದರು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು…
ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಆಯೋಜಿಸಿದ ‘ಸಾಹಿತ್ಯ-ಸಾಂಗತ್ಯ’ ಸರಣಿ ಕಾರ್ಯಕ್ರಮ -7 ದಿನಾಂಕ 17-07-2023ರಂದು ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು. ಉಪನ್ಯಾಸಕರಾಗಿ ಆಗಮಿಸಿದ ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀ ಎಚ್.ಎಂ.ನಾಗರಾಜ ರಾವ್ ಕಲ್ಕಟ್ಟೆ ಮಾತನಾಡುತ್ತಾ “ಯಶಸ್ಸಿಗಾಗಿ ನಿರೀಕ್ಷೆಗಳಿರುತ್ತವೆ. ನಿರೀಕ್ಷೆಯೇ ಪ್ರಧಾನವಾಗಬಾರದು. ಪ್ರತೀ ಸಲವೂ ಪ್ರಯತ್ನ ಪಡುವ ಮೂಲಕ ಯಶಸ್ಸು ಗಳಿಸಲು ಸಾಧ್ಯವಿದೆ. ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ. ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ. ಸಂವಹನದಲ್ಲೂ ಸಾಹಿತ್ಯವಿದೆ. ಅದು ಹೃದಯದ ಭಾಷೆಯೇ ಆದಾಗ ಸರಳ ಸಾಹಿತ್ಯವಾಗುತ್ತದೆ. ಯಾವ ಮಾಧ್ಯಮದಲ್ಲಿ ಕಲಿತರೂ ಜ್ಞಾನಕ್ಕಾಗಿ ಕಲಿಯಬೇಕೇ ಹೊರತು ಹೊಟ್ಟೆಪಾಡಿಗಲ್ಲ. ಹಾಗೆಯೇ ಸಾಹಿತ್ಯವೆಂದರೆ ಮನಸ್ಸಿನ ತುಡಿತಗಳನ್ನು ಪ್ರತಿಬಿಂಬಿಸುವ ಮಾಧ್ಯಮ. ಸಂತೋಷಕ್ಕಾಗಿ ಸಾಹಿತ್ಯ ಓದಬೇಕು” ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಶ್ರೀ ಎಚ್.ಎಂ. ನಾಗರಾಜ ರಾವ್ ಕಲ್ಕಟ್ಟೆಯವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್.ಎಲ್,…
ಶ್ರೀಲಂಕಾ: ಉಳ್ಳಾಲ ನಾಟ್ಯನಿಕೇತನದ ನಿರ್ದೇಶಕಿ, ನೃತ್ಯಗುರು, ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ರಾಜಶ್ರೀ ಉಳ್ಳಾಲ್ ನಿರ್ದೇಶನದಲ್ಲಿ ಶ್ರೀಲಂಕಾದ ಜಾಫ್ನಾದಲ್ಲಿ ನಡೆದ ಭರತನಾಟ್ಯ, ಸ್ಯಾಕ್ಸೋಫೋನ್ ಮತ್ತು ಮೃದಂಗ ನಾದವೈಭವಂ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆದಿದ್ದು, ಹಿರಿಯ ಕಲಾವಿದೆಯರ ತಂಡ ಭರತನಾಟ್ಯ ಪ್ರದರ್ಶನ ನೀಡಿದೆ. ನಾಟ್ಯ ನಿಕೇತನದ ವಿದುಷಿ ರಾಜಶ್ರೀ ಉಳ್ಳಾಲ್, ವಗ್ಗ ನಾಟ್ಯ ನಿಕೇತನದ ವಿನುತಾ ಪ್ರವೀಣ್ ಗಟ್ಟಿ, ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್, ಚಂದ್ರಿಕಾ, ಕವಿತಾ ಯಶ್ಪಾಲ್, ಡಾ.ಪ್ರಿಯಾ ದಿಲ್ರಾಜ್ ಆಳ್ವ, ಮತ್ತು ದಿವ್ಯಾ ಸಂದೀಪ್ ನೃತ್ಯ ಪ್ರದರ್ಶನ ನೀಡಿದರು. ಹಾಗೂ ಕಲಾರತ್ನ ಜಯರಾಮ ಮಂಗಳೂರು, ಯುವ ಕಲಾಮಣಿ ಪುತ್ತೂರು ನಿಕ್ಷಿತ್ ಬೆಂಗಳೂರು, ಡಾ.ಎರ್ಲಾಲೈ ಶಿವಶಕ್ತಿನಾಥನ್, ಡಾ.ಟಿ.ಎನ್.ರಘುನಾಥನ್ ಇವರಿಂದ ಸ್ಯಾಕ್ರೋಫೋನ್ ಮತ್ತು ಮೃದಂಗ ನಾದವೈಭವಂ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕೃಷ್ಣಪ್ಪ ಮನೋಹರ್ ಸಹಕರಿಸಿದರು. ಜಾಫ್ನಾದ ಚುನ್ನಕಂ ಎಂಬಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲಾಕಲಿ ವೆಸ್ಟ್ ಶ್ರೀವಿನಯಾಗರ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗ ನೀಡಿತು.
ಮೈಸೂರು : ಸಂಚಲನ ಮೈಸೂರು ಪ್ರಸ್ತುತಪಡಿಸುವ ಬಿ.ಎಂ.ಶ್ರೀ ರಚಿಸಿ ಡಾ.ಪಿ.ವಿ.ನಾರಾಯಣ ಹೊಸ ಕನ್ನಡಕ್ಕೆ ಅನುವಾದಿಸಿದ ‘ಅಶ್ವತ್ಥಾಮನ್’ ನಾಟಕದ ಪ್ರದರ್ಶನವು ದಿನಾಂಕ 05-08-2023 ರಂದು ಮೈಸೂರಿನ ರಂಗಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ನಡೆಯಲಿದೆ. ಶಶಿಧರ ಅಡಪರ ರಂಗವಿನ್ಯಾಸವಿರುವ ಈ ನಾಟಕದ ರಂಗ ನಿರ್ವಹಣೆ ಮಹೇಶ್.ಸಿ ಇವರದ್ದು. ಹೆಚ್.ಕೆ.ವಿಶ್ವನಾಥ ರಂಗ ಪರಿಕರಗಳನ್ನು ಸಜ್ಜು ಗೊಳಿಸಿದ್ದು, ಕೃಷ್ಣ ಚೈತನ್ಯರ ಸಹಕಾರದೊಂದಿಗೆ ಧನಂಜಯ ಆರ್.ಸಿ ಈ ನಾಟಕಕ್ಕೆ ಸಂಗೀತ ನೀಡಲಿದ್ದಾರೆ. ಮಾನಸ ಮುಸ್ತಫಾ ವಸ್ತ್ರ ವಿನ್ಯಾಸ ಮಾಡಿದ್ದು, ಪ್ರತಿಭಾ ನಂದಕುಮಾರ ಪ್ರಸಾಧನ, ಮಧು ಮಳವಳ್ಳಿಯವರ ಪರಿಕಲ್ಪನೆ,ವಿನ್ಯಾಸ,ನಿರ್ದೇಶನ ಹಾಗೂ ಬೆಳಕಿನ ವಿನ್ಯಾಸವಿರುವ ಈ ನಾಟಕಕ್ಕೆ ಉಮಾಶ್ರೀ ಮಧುಮಳವಳ್ಳಿಯವರು ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ‘ಅಶ್ವತ್ಥಾಮನ್’ ಗ್ರೀಕ್ ನ ಬರಹಗಾರ ಸಾಫೋಕ್ಲೀಸ್ನ ‘ಏಜಾಕ್ಸ್’ ಅಥವಾ ‘ಅಯಾಸ್’ ನಾಟಕದ ಕನ್ನಡ ರೂಪಾಂತರವೇ ‘ಅಶ್ವತ್ಥಾಮನ್’ ನಾಟಕ. ಪಾತ್ರಗಳು ಹಾಗೂ ಸನ್ನಿವೇಶಗಳ ಹೊರ ಆವರಣದ ಮಟ್ಟಿಗೆ ಇದು ನಿಜ. ಆದರೆ ನಾಟಕದ ಸತ್ತ್ವ ಅನುವಾದವೇ. ಪೌರುಷ-ಸ್ವಾಭಿಮಾನಗಳು ಒಂದು ಮಿತಿಯಲ್ಲಿದ್ದರೆ ಅವುಗಳ ಬಗ್ಗೆ ನಮ್ಮ ಸಂಪ್ರದಾಯ ಗೌರವಿಸುತ್ತದೆಯೇ…
ಬೆಂಗಳೂರು: ಬೆಂಗಳೂರಿನ ರಂಗತಂತ್ರ ಅರ್ಪಿಸುವ ಟಿ.ಪಿ.ಕೈಲಾಸಂ ಇವರ ‘ಬಂಡ್ವಾಳ್ವಲ್ಲದ ಬಡಾಯಿ’ ನಾಟಕವು ದಿನಾಂಕ 29-07-2023 ರಂದು ಹಾಗೂ ಬಿ.ಆರ್. ಲಕ್ಷ್ಮಣರಾವ್ ಇವರ ‘ನನಗ್ಯಾಕೋ ಡೌಟು’ ನಾಟಕದ ಪ್ರದರ್ಶನವು ದಿನಾಂಕ 30-07-2023 ರಂದು ಬೆಂಗಳೂರಿನ ಬಸವನಗುಡಿಯ ವಾಡಿಯ ಸಭಾಂಗಣದಲ್ಲಿ ನಡೆಯಲಿದೆ. ‘ಬಂಡ್ವಾಳ್ವಲ್ಲದ ಬಡಾಯಿ’ ಉದ್ದಿನ ಮಣಿ, ಕಂಪೇರಿಟಿವ್ ಕೊಲೊರೊಲಿಗೆ, ಶ್ಯಾಡೋ ಆಫ್ ದ ಸನ್ comparative colorology, shadow of the sun, comparative colorology, shadow of the sun ಮುಂತಾದ ವಿಶಿಷ್ಟ ಪದ ಪ್ರಯೋಗಗಳು ಪ್ರಹಸನ ಪಿತಾಮಹ ಎಂದು ಖ್ಯಾತರಾಗಿರುವ ಟಿ.ಪಿ.ಕೈಲಾಸಂ ಅವರ ಟ್ರೇಡ್ ಮಾರ್ಕ್ ಎಂದರೆ ಉತ್ಪ್ರೇಕ್ಷೆಯಲ್ಲ. ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ನಗುವಿನ ಬುಗ್ಗೆ ಹರಿಸುವ ಬಗೆ ಕೈಲಾಸಂರವರಿಗೆ ಸುಲಭವಾಗಿ ಕರಗತ. ಅದಕ್ಕೆ ಅಲ್ಲವೇ ಇವರನ್ನು tipycal ass ಅನ್ನುವುದು. ಇಂತಹ ಕೈಲಾಸಂರವರು 1945ರಲ್ಲಿ, ಒಬ್ಬ ಲಾಯರ್ ತನ್ನ ಬದುಕನ್ನ ಹೇಗೆಲ್ಲಾ ನಡೆಸಬಹುದು ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನ ಉಡಾಫೆ ಮತ್ತು ವ್ಯಂಗ್ಯದ ಮೂಲಕ ಅದ್ಬುತವಾಗಿ…
ಮೈಸೂರು : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ. ತನ್ನ ಚಟುವಟಿಕೆಯ ಭಾಗವಾಗಿ ಕನ್ನಡ ಆಧುನಿಕ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ ರಂಗ ಸಂಘಟಕ, ಚಿಂತಕ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ‘ಸುಬ್ಬಣ್ಣ ಸ್ಮರಣೆ’ ಕಾರ್ಯಕ್ರಮವನ್ನು ಪ್ರತಿವರ್ಷ ಜುಲೈ ತಿಂಗಳಲ್ಲಿ ನಡೆಸುತ್ತಾ ಬಂದಿದ್ದು, 20232ನೇ ಸಾಲಿನ ನಟನದ ಜುಲೈ ತಿಂಗಳ ಎಲ್ಲಾ ಕಾರ್ಯಕ್ರಮಗಳನ್ನು ಸುಬ್ಬಣ್ಣರ ಸ್ಮರಣೆಗೆ ಅರ್ಪಿಸಿದೆ. ಜುಲೈ 01ರಿಂದ ಆರಂಭವಾಗಿ ಪ್ರತಿ ವಾರಾಂತ್ಯಗಳಲ್ಲಿ ವಿವಿಧ ನಾಟಕಗಳ ಪ್ರದರ್ಶನ, ರಂಗ ಕಾರ್ಯಾಗಾರ ನಡೆದಿದ್ದು, 2023ರ ಸುಬ್ಬಣ್ಣ ಸ್ಮರಣೆಯ ಕಡೆಯ ಕಾರ್ಯಕ್ರಮವಾಗಿ ಜುಲೈ 30ರಂದು ಬೆಳಗ್ಗೆ 10ಕ್ಕೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ‘ರಂಗಶಿಕ್ಷಣ; ವರ್ತಮಾನ ಮತ್ತು ಭವಿಷ್ಯದ ಅವಕಾಶಗಳು’ ಎಂಬ ವಿಷಯದ ಕುರಿತು ರಂಗಚರ್ಚೆಯನ್ನು ಆಯೋಜನೆ ಮಾಡಲಾಗಿದೆ. ಈ ರಂಗಚರ್ಚೆಯಲ್ಲಿ ಹಿರಿಯ ರಂಗಕರ್ಮಿ, ನಿವೃತ್ತ…
ಬೆಂಗಳೂರು : ಶಾಸ್ತ್ರೀಯ ನೃತ್ಯ ಕ್ಷೇತ್ರ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಸಹಜವಾಗಿಯೇ ರಂಗಪ್ರವೇಶಗಳೂ ಮೇಲಿಂದ ಮೇಲೆ ಆಗುತ್ತಿರುತ್ತವೆ. ಆದರೆ ಎಲ್ಲೋ ಒಂದು ಕಡೆ ಈ ರಂಗಪ್ರವೇಶಗಳು ಏಕತಾನತೆಯಿಂದ ಕೂಡಿರುತ್ತವೆ ಎಂಬ ಅಸಮಾಧಾನ ಕೂಡ ಕೇಳಿಬರುತ್ತಿರುತ್ತದೆ. ಹಾಗೆಂದು ತೀರಾ ನಿರಾಸೆಗೊಳ್ಳುವ ಅವಶ್ಯಕತೆ ಖಂಡಿತ ಇಲ್ಲ. ಆಗಾಗೊಮ್ಮೊಮ್ಮೆ ವಿಶೇಷ ವಿನ್ಯಾಸದ ರಂಗಪ್ರವೇಶಗಳೂ ವೇದಿಕೆಗೆ ಬರುತ್ತಾ ಭರವಸೆಯನ್ನು ಮೂಡಿಸುತ್ತವೆ. ಅಂತಹ ಒಂದು ರಂಗಪ್ರವೇಶ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿಯ ಕಲಾನಿರ್ದೇಶಕಿ, ಗುರು ಶ್ರೀಮತಿ ಶ್ರೀವಿದ್ಯಾ ಶಶಿಧರ್, ತಮ್ಮ ಪ್ರತಿಭಾವಂತ ಶಿಷ್ಯೆ ಶ್ರೀಮತಿ ಪ್ರಣತಿ ಎಸ್. ವಾಟಾಳ್ ಅವರ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆಯಿತು. ಗುರುವಾಗಿ ಶ್ರೀವಿದ್ಯಾ ಅವರಿಗೂ ಇದು ರಂಗಪ್ರವೇಶವೇ. ಏಕೆಂದರೆ ಅವರ ಮಾರ್ಗದರ್ಶನದ ಮೊದಲ ರಂಗಪ್ರವೇಶ ಇದು. ಆದರೆ ಪ್ರದರ್ಶನದ ಒಟ್ಟಂದವನ್ನು ಕಂಡಾಗ, ಪಾಂಡಿತ್ಯಪೂರ್ಣ ಗುರುಗಳ ಮಾರ್ಗದರ್ಶನದಲ್ಲಿ ಅನುಭವೀ ನರ್ತಕಿಯೊಬ್ಬಳ ಪ್ರದರ್ಶನದಂತಿತ್ತು ಅಂದಿನ ಕಾರ್ಯಕ್ರಮ. ಮೂರು ಹೊಸಬಗೆಯ ವಿಭಿನ್ನ ಕೃತಿಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲ ಬಂಧಗಳೂ…
ಪುತ್ತೂರು: ಭರತನಾಟ್ಯ ಕಲಾವಿದೆಯಾಗಿರುವ ಲೇಖಕಿ ನರಿಮೊಗರು ಗ್ರಾಮದ ಶ್ರೀಮತಿ ಅಪರ್ಣಾ ಕೊಡೆಂಕಿರಿ ಅವರು ತುಳು ಲಿಪಿಯಲ್ಲಿ ಬರೆದ ಪ್ರಪ್ರಥಮ ಭಗವದ್ಗೀತೆ ಪುಸ್ತಕವನ್ನು ದಿನಾಂಕ 10-07-2023ರಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು. ಮೂಲತಃ ನೃತ್ಯ ವಿದುಷಿ ಆಗಿರುವ ಶ್ರೀಮತಿ ಅಪರ್ಣಾ ಕೊಡೆಂಕಿರಿ ಇವರು ತುಳು ಭಾಷೆಯ ಮೇಲಿನ ಪ್ರೀತಿ, ಅಕ್ಕರೆಯನ್ನು ಭಗವದ್ಗೀತೆ ಅನುವಾದದ ಮೂಲಕ ತುಳುನಾಡಿನ ಜನತೆಗೆ ಸಮರ್ಪಿಸಿದ್ದಾರೆ. ಇದರಲ್ಲಿ ತುಳು ಲಿಪಿಯ ವರ್ಣಮಾಲೆಯ ಸಹಿತ ಸಂಪೂರ್ಣ ಭಗವದ್ಗೀತೆಯನ್ನು ತುಳು ಹಾಗೂ ಕನ್ನಡದಲ್ಲಿ ಅಕ್ಕಪಕ್ಕದ ಪುಟಗಳಲ್ಲಿ ಸುಲಭವಾಗಿ ಹೊಂದಿಸಿ ನೋಡುವಂತೆ ನೀಡಲಾಗಿದೆ. ಎಡಪುಟದಲ್ಲಿ ತುಳುವಿನಲ್ಲೇ ಅರ್ಥ ಸಹಿತ ಶ್ಲೋಕ, ಬಲಪುಟದಲ್ಲಿ ಕನ್ನಡದಲ್ಲಿ ಶ್ಲೋಕ ಹಾಗೂ ಕನ್ನಡ ಲಿಪಿಯಲ್ಲಿ ಬರೆದ ತುಳು ಭಾಷಾರ್ಥ ನೀಡಲಾಗಿದೆ. ತುಳು ಲಿಪಿ ಕಲಿಯುವವರಿಗೆ ಭಗವದ್ಗೀತೆಯಿಂದಲೇ ಪ್ರಾರಂಭಿಸುವ ಅವಕಾಶ, ಲಿಪಿ ಬಲ್ಲವರಿಗೆ ತುಳುವಿನಲ್ಲೇ ಓದುವ ಅವಕಾಶವನ್ನು ಅಪರ್ಣಾ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹಾಗೂ ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಆನಂದತೀರ್ಥ ಸಗ್ರಿ…
ಮೂಲ್ಕಿ : ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆಯಲ್ಲಿ ಮಧ್ವ ಸಿದ್ಧಾಂತ ತಂತ್ರಸಾರದ ತಾಳೆಗರಿಯ ಮೂಲ ಪಠ್ಯವನ್ನು ವಿಶೇಷ ತಂತ್ರಜ್ಞಾನದ ಮೂಲಕ ಪುಸ್ತಕದಲ್ಲಿ ಪ್ರಕಟಿಸುವ ಮೂಲಕ ಮಾಧ್ವ ತಂತ್ರಸಾರದಿಂದ ಅರ್ಚಿತ ದೇವಾಲಯಗಳಿಗೆ ನೀಡುವ ಧ್ಯೇಯದಿಂದ ‘ಮೆಮೆರಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್’ ಕಾರ್ಯಕ್ರಮ ದಿನಾಂಕ 24-07-2023ರಂದು ನಡೆಯಿತು. ಅಮೆರಿಕಾದಲ್ಲಿ ವಿಜ್ಞಾನಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ತಾರಾ ಪ್ರಕಾಶನ ಮುಖ್ಯಸ್ಥ ಪ್ರೊ.ಮುಕುಂದ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ “ಸನಾತನ ಭಾರತೀಯ ಜ್ಞಾನ ಭಂಡಾರಗಳು ತಾಳೆಗರಿಯಲ್ಲಿ ಅಡಕವಾಗಿದ್ದು, ಅವುಗಳನ್ನು ಅಧ್ಯಯನಕಾರರು ಮತ್ತು ಯುವ ಪೀಳಿಗೆಗೆ ನಿಸ್ವಾರ್ಥವಾಗಿ ಮುಟ್ಟಿಸುವ ಕಾರ್ಯ ಅಗತ್ಯವಿದೆ. ತಾಳೆಗರಿಯಲ್ಲಿ ಬರವಣಿಗೆಯು ಕೊರೆದು ಮಾಡಲ್ಪಟ್ಟಿದ್ದು, ಸುಮಾರು ಸಾವಿರ ವರ್ಷ ಪುರಾತನವಾದ ತಾಳೆಗರಿಗಳು ಶಿಥಿಲವಾಗಿ, ಪುಡಿಯಾಗುವ ಕಾರಣ ವಿಶೇಷ ಕಾಂತೀಯ ತಂತ್ರಜ್ಞಾನದ ಮೂಲಕ ವಿವಿಧ ಆಯಾಮಗಳಲ್ಲಿ ಅವುಗಳ ಪಡಿಯಚ್ಚು ಪಡೆದು ವಿದ್ವಾಂಸರಿಂದ ಅಧ್ಯಯನ ನಡೆಸಿದ ಬಳಿಕ ಮುದ್ರಿಸಲಾಗುತ್ತದೆ. ಭಾರತೀಯ ತಾಳೆಗರಿಗಳು ಕೇವಲ ಶಾಸ್ತ್ರಕ್ಕೆ ಸೀಮಿತವಾಗದೆ ವಿಜ್ಞಾನ ತಂತ್ರಜ್ಞಾನ ಹಾಗೂ ವೈದ್ಯಕೀಯ ಅಗಾಧ…