Author: roovari

ಮುಂಬಯಿ :  ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 23-03-2024ರ ಶನಿವಾರ ಮತ್ತು 24-03-2024 ರ ಭಾನುವಾರದಂದು ಮುಂಬಯಿಯ ಮೈಸೂರು ಅಸೋಸಿಯೇಷನ್ನಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭರತನ ನಾಟ್ಯಶಾಸ್ತ್ರದ ಕುರಿತು ಮಾತನಾಡಿದ ನಾಡಿನ ಹಿರಿಯ ಕಲಾವಿದ, ರಂಗತಜ್ಞ, ನಿರ್ದೇಶಕ, ನಟ ಹಾಗೂ ವಿದ್ವಾಂಸರಾದ  ಡಾ. ಬಿ. ವಿ. ರಾಜಾರಾಮ  “ಕಲೆ, ಸಾಹಿತ್ಯ, ಸಂಗೀತ ನೃತ್ಯ ಇವೆಲ್ಲವೂ ಬದುಕನ್ನು ಸಮೃದ್ಧ ಹಾಗೂ ಸಾರ್ಥಕಗೊಳಿಸುತ್ತವೆ. ಇವು ನಮ್ಮಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸುಮಾರು 2,೦೦೦ ವರ್ಷಗಳಷ್ಟು ಹಿಂದೆ ಭರತನು ರಚಿಸಿದ ನಾಟ್ಯ ಶಾಸ್ತ್ರಸಂಗೀತವು  ನೃತ್ಯ, ಸಾಹಿತ್ಯ, ಅಭಿನಯಕ್ಕೆ ಮೂಲ. ಭರತನ ನಾಟ್ಯ ಶಾಸ್ತ್ರ ಒಂದು ಪರಂಪರೆಯಾಗಿ ಬೆಳೆದು ಬಂದಿದೆ. ನಾಟ್ಯಶಾಸ್ತ್ರದ ರಸ ಸಿದ್ಧಾಂತ ಸಂತೋಷವನ್ನು ನೈಸರ್ಗಿಕವಾಗಿ ಸ್ವೀಕರಿಸುವುದರ ಕುರಿತು ಹೇಳುತ್ತದೆ.  ಭರತನು ಹೇಳಿದ ಷಡ್‌ರಸಗಳು ಆರೋಗ್ಯಕ್ಕೆ ಹಾಗೂ ನಂತರದ ಅಭಿನವಗುಪ್ತ ಪಾದನಿಂದ ಬಂದ ಅಭಿನವ ಭಾರತದಲ್ಲಿ ಬರುವ ನವರಸಗಳು ಮನಸ್ಸಿಗೆ…

Read More

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚ ‘ಶ್ರೀ ಮೈಸೂರು ವಾಸುದೇವಾಚಾರ್ಯರ’ ಸ್ಮರಣಾರ್ಥ ಸಾದರಪಡಿಸುವ ‘ಕಿಶೋರ ಗಾಯನ ನಮನ’ ಕಾರ್ಯಕ್ರಮವು ದಿನಾಂಕ 07-04-2024, 14-04-2024 ಮತ್ತು 21-05-2024ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಮೈಸೂರಿನ ಅಗ್ರಹಾರ ಶ್ರೀ ವಾಸುದೇವಾಚಾರ್ಯರ ನಿವಾಸದಲ್ಲಿ ನಡೆಯಲಿದೆ. ದಿನಾಂಕ 07-04-2024ರಂದು ಉಡುಪಿಯ ಕುಮಾರಿ ಮೇಧಾ ಉಡುಪ, ಬೆಂಗಳೂರಿನ ಚಿ. ಆದಿತ್ಯ ಶ್ರೀನಿಧಿ ತಾಯೂರ್ ಮತ್ತು ಶಿವಮೊಗ್ಗದ ಕುಮಾರಿ ದ್ಯುತಿ ಎಸ್. ಇವರ ಹಾಡುಗಾರಿಕೆಗೆ ಮೈಸೂರಿನ ವಿದ್ವಾನ್ ಶ್ರೀವತ್ಸ ಹೆಚ್. ಪಿಟೀಲು ಹಾಗೂ ವಿದ್ವಾನ್ ಜಿ. ಸುಬ್ರಮಣ್ಯ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 14-04-2024ರಂದು ಮೈಸೂರಿನ ಕುಮಾರಿ ನಿರಾಮಯಾ ವಿ. ರಾವ್, ಚಿ. ಕುನಾಲ್ ಮಹೇಶ್ ಮತ್ತು ಕುಮಾರಿ ಹರಿಣಿ ಇವರ ಹಾಡುಗಾರಿಕೆಗೆ ಮೈಸೂರಿನ ವಿದ್ವಾನ್ ರೂಪನಗುಡಿ ರತ್ನತೇಜ ಪಿಟೀಲು ಹಾಗೂ ವಿದ್ವಾನ್ ಜಿ. ಸುಬ್ರಮಣ್ಯ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 21-04-2024ರಂದು ಬೆಂಗಳೂರಿನ ಕುಮಾರಿ ಸಾರಂಗಿ ಎಸ್. ಹರಿತ್ವ, ಕುಮಾರಿ ಅರ್ಣ…

Read More

ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ವತಿಯಿಂದ ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 29-03-2024ರಂದು ಮಂಗಳೂರಿನ ಹೋಟೆಲ್ ವುಡ್ಲ್ಯಾಂಡ್ಸ್ ನಲ್ಲಿ ನಡೆಯಿತು. ನಮ್ಮ ನಡುವೆ ಸದಾ ಸ್ನೇಹ ಪೂರ್ಣ ಚಟುವಟಿಕೆಗಳಿಂದ ಮಾದರಿ ಮಾರ್ಗದರ್ಶಕರಾಗಿದ್ದು ಜನ ಮನ್ನಣೆಗಳಿಸಿ ಇತ್ತೀಚೆಗೆ ದಿವಂಗತರಾದ ಮಾಧ್ಯಮ ತಜ್ಞ ಮನೋಹರ ಪ್ರಸಾದ್, ಚಲನಚಿತ್ರ ಹಾಗೂ ರಂಗನಟ ವಿ.ಜಿ. ಪಾಲ್, ಗಾಯಕ, ಪ್ರಸಾದನಕಾರ  ಎಸ್. ರಾಮದಾಸ್, ಸಂಗೀತ ಕ್ಷೇತ್ರದ ಗಿಟಾರಿಸ್ಟ್ ನವೀನ್ ಚಂದ್ರ ಎಂ. ಅವರಿಗೆ ತೋನ್ಸೆ ಅವರು ನುಡಿನಮನ ಸಲ್ಲಿಸಿ, ಒಕ್ಕೂಟದ ವತಿಯಿಂದ  ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹರಿದಾಸರಾದ ತೋನ್ಸೆ ಪುಷ್ಕಳ ಕುಮಾರ್ “ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರನ್ನು ಸ್ಮರಿಸುವುದು ಸಾಂಸ್ಕೃತಿಕ ಸಂಘಟನೆಗಳ ಆದ್ಯ ಕರ್ತವ್ಯ.” ಎಂದರು. ಕಾರ್ಯಕ್ರಮದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮುಂದಿನ ಏಪ್ರಿಲ್, ಮೇ ಹಾಗೂ…

Read More

ಬೈಂದೂರು : ಲಾವಣ್ಯ ಬೈಂದೂರಿನ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಸಹಯೋಗದಲ್ಲಿ ಜಗದೀಶ ಮಯ್ಯ ಇವರ ಪ್ರಾಯೋಜಕತ್ವದಲ್ಲಿ ‘ಯಕ್ಷ ಲಾವಣ್ಯ-24’ ಸರಣಿ ಕಾರ್ಯಕ್ರಮವು ದಿನಾಂಕ 30-03-2024ರ ಶನಿವಾರದಂದು ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ಮಾತನಾಡಿ “ತಾಳಮದ್ದಲೆ ಬಹಳ ಕಡಿಮೆಯಾಗುತ್ತಿದ್ದು ಹಿಂದೆಲ್ಲಾ ಮನೆಯ ಜಗುಲಿಯಲ್ಲಿ, ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಪೂರ್ತಿ ರಾತ್ರಿಯಿಂದ ಬೆಳಿಗ್ಗಿನ ತನಕ ನಡೆಯುತ್ತಿತ್ತು. ಆದರೆ ಈಗ ಬದಲಾದ ಕಾಲಘಟ್ಟಕ್ಕೆ ಹೊಂದಿಕೊಂಡು ಕಾಲ ಮಿತಿಯಲ್ಲಿ ನಡೆಸುವಂತಾಗಿದೆ. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ತಾಳಮದ್ದಲೆ ಹಾಗೂ ಯಕ್ಷಗಾನ ಜನರಿಂದ ದೂರವಾಗುತ್ತಿದೆ. ಹಿಮ್ಮೇಳ ಮತ್ತು ಅರ್ಥದಾರಿಗಳು ಮಾತ್ರ ಸಾಕಾಗುವ ಅತ್ಯಂತ ಸರಳ ರಂಗಭೂಮಿಯಾದ ತಾಳಮದ್ದಲೆಗೆ ಅದರದ್ದೇ ಆದ ಶ್ರೋತೃವರ್ಗ ಇರುವುದರಿಂದ ಜೀವಂತ ಕಲೆ ನಶಿಸದು ಎಂಬ ಭರವಸೆ ನೀಡುತ್ತದೆ.” ಎಂದರು. ಲಾವಣ್ಯದ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ…

Read More

ಮಂಗಳೂರು : ಕಲಾಶಾಲೆ ಮತ್ತು ಸ್ವರಾಲಯ ಸಾಧನಾ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ 79ನೇ ಮನೆ ಮನೆಯಲ್ಲಿ ಸ್ವರಾಲಯ ಸಾಧನಾ ಶಿಬಿರ ಕಾರ್ಯಕ್ರಮಮವು ದಿನಾಂಕ 24-03-2024ರ ಭಾನುವಾರದಂದು ವೈದ್ಯ ಕೆ. ಆರ್. ಕಾಮತ್ ಅವರ ನಿವಾಸ ‘ಶ್ರೀ ರಾಮಪ್ರಸಾದ್’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯ ಡಾ. ಅಶೋಕ ಶೆಣೈ “ಶಾಸ್ತ್ರೀಯ ಸಂಗೀತದ ರಾಗಗಳು ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವುದು ನಿಜ. ಇದು ವೈಜ್ಞಾನಿಕವಾಗಿ ರುಜುವಾಗಿದೆ. ಹಾಗಾಗಿ ಅರೋಗ್ಯಕರ ಜೀವನಕ್ಕಾಗಿ ಉತ್ತಮ ಸಂಗೀತ ಆಲಿಸಿ. ನಗರದ ವೈದ್ಯಕೀಯ ಕಾಲೇಜುಗಳು ಕೂಡ ಸಂಗೀತ ಚಿಕಿತ್ಸೆ (ಮ್ಯೂಸಿಕಲ್ ತೆರಪಿ) ಕುರಿತಂತೆ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡಿವೆ. ಐ. ಸಿ. ಯು. ನಲ್ಲಿ ಚಿಕಿತ್ಸೆ ಪಡೆಯುವವರಿಗೆ ಹಾಗೂ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸಂಗೀತ ಚಿಕಿತ್ಸೆ ನೀಡಿದಾಗ ಅವರ ದೇಹಗಳಲ್ಲಿ ಸಕರಾತ್ಮಕವಾಗಿ ಬದಲಾವಣೆಗಳು ಆಗಿರುವುದು ದೃಢವಾಗಿದೆ.ಮುಂಜಾವಿನ ಹೊತ್ತು ಭಕ್ತಿ ಭಾವದ ಭೈರವಿ ರಾಗ ಅಲಿಸಿದರೆ ಮನಸ್ಸು ಅರಳುವುದು. ಅದೇ ಬೇಸರದಲ್ಲಿ ಇರುವವರು ತೋಡಿ, ದರ್ಬಾರಿ …

Read More

ಸುಳ್ಯ :  ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರು ‘ಅಮರ ಸುಳ್ಯ ಅಧ್ಯಯನ ಕೇಂದ್ರ’ ಸುಳ್ಯ ಇದರ ಸಹಯೋಗದೊಂದಿಗೆ ಆಯೋಜಿಸಿದ ಖ್ಯಾತ ಸಾಹಿತಿ ಡಾ.ಶಂಕರ ಪಾಟಾಳಿ ಬದಿಯಡ್ಕ ವಿರಚಿತ ‘ಶಿಶಿಲ ಚಿಂತನೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 29-03-2024ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬಾ‌ರ್ ಸಮೋ ಸಂಪಾಜೆ “ಓರ್ವ ತಾಯಿ ಶಿಶುವನ್ನು ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಹೊತ್ತು ಬಳಿಕ ಅದನ್ನು ಭೂಮಿಗೆ ಬಿಡುಗಡೆಗೊಳಿಸುವ ರೀತಿಯಲ್ಲಿ ಒಬ್ಬ ಸಾಹಿತಿ ತನ್ನ ಕೃತಿಯನ್ನು ಬಹಳಷ್ಟು ದಿನಗಳಿಂದ ತನ್ನ ಮನಸ್ಸಿನಲ್ಲಿ ಬಂದಂತಹ ವಾಕ್ಯಗಳನ್ನು ಕೃತಿ, ಸಾಹಿತ್ಯ ಹಾಗೂ ಕವನ ಮುಂತಾದವುಗಳ ಮೂಲಕ ಹೊರ ಚಿಮ್ಮಿ ಅದನ್ನು ಜಗತ್ತಿನ ಮುಂದೆ ಇಡುತ್ತಾನೆ. ಅದನ್ನು ಓದುಗರು ಯಾವ ರೀತಿ ಬೆಳೆಸುತ್ತಾರೆ ಎಂಬುದರ ಮೇಲೆ ಆ ಕೃತಿಯ ಮೌಲ್ಯವು ನಿಂತಿರುತ್ತದೆ. ಡಾ. ಶಿಶಿಲರು ಎಲ್ಲಾ ವಿಭಾಗದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡವರು. ಅರ್ಥಶಾಸ್ತ್ರಜ್ಞನಾಗಿದ್ದ ಅವರು…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ವು ದಿನಾಂಕ 06-04-2024ರಂದು ಸಂಜೆ 5.45 ಗಂಟೆಗೆ ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರೋಡಿನಲ್ಲಿರುವ ‘ಅನುಪಲ್ಲವಿ’ಯಲ್ಲಿ ಹಾಗೂ ‘ಉದಯರಾಗ – 52’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ಕೆಳಗಡೆ ದಿನಾಂಕ 07-04-2024 ಭಾನುವಾರ ಪೂರ್ವಾಹ್ನ 6-00 ಗಂಟೆಗೆ ನಡೆಯಲಿದೆ. ದಿನಾಂಕ 06-04-2024ರಂದು ಚಿನ್ಮಯೀ ಮನೀಷ್ ಇವರ ಹಾಡುಗಾರಿಕೆಗೆ ಸುನಂದ ಪಿ.ಎಸ್. ಮಾವೆ ವಯೋಲಿನ್, ಯುವಕಲಾಮಣಿ ನಿಕ್ಷಿತ್ ಪುತ್ತೂರು ಮೃದಂಗ ಹಾಗೂ ಕಾರ್ತಿಕ್ ಭಟ್ ಇನ್ನಂಜೆ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ಸುರತ್ಕಲ್ಲಿನ ಸಂಗೀತ ಗುರು ವಿದುಷಿ ಸುಮಾ ಸತೀಶ್ ರಾವ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಸಂಗೀತ ಶಾಲೆಯ ವಿದ್ಯಾರ್ಥಿಗಳು ‘ನಾಮಸನಕೀರ್ಥಂ’ ಪ್ರಸ್ತುತ ಪಡಿಸಲಿದ್ದಾರೆ.…

Read More

ಉಡುಪಿ : ಬಂಟ್ವಾಳ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ತುಳು ಬದುಕು ವಸ್ತು ಸಂಗ್ರಹಾಲಯ ಮತ್ತು ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ಡಾ. ಮಾಲತಿ ಕೃಷ್ಣಮೂರ್ತಿ ಇವರ ‘ಭಾಸ್ಕರಾನಂದ ಸಾಲೆತ್ತೂರರ ತುಳುವ ವಸ್ತು ಪ್ರಪಂಚ’ ಎಂಬ ಕೃತಿ ಲೋಕಾರ್ಪಣೆಯು ದಿನಾಂಕ 06-04-2024ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್. ಇವರು ವಹಿಸಲಿದ್ದು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ರಾಜ ಗೋಪುರದಲ್ಲಿ ಪಾರ್ತಿಸುಬ್ಬ ವಿರಚಿತ ‘ಉರಗಾಸ್ತ್ರ ಪ್ರಯೋಗ’ ಎಂಬ ತಾಳಮದ್ದಳೆ ದಿನಾಂಕ 01-04-2024 ರಂದು  ನಡೆಯಿತು.  ಹಿಮ್ಮೇಳದಲ್ಲಿ  ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಕುಮಾರ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ , ಮುರಳೀಧರ ಕಲ್ಲೂರಾಯ ಹಾಗೂ ಮಾ. ಪರೀಕ್ಷಿತ್ ಸಹಕರಿಸಿದರು. ಅರ್ಥಧಾರಿಗಳಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು ಶ್ರೀರಾಮನಾಗಿ, ಮನೋರಮಾ ಜಿ. ಭಟ್ ಲಕ್ಷ್ಮಣ ನಾಗಿ, ಶ್ರೀಧರ ರಾವ್ ಕುಂಬ್ಳೆ ಸೀತೆಯಾಗಿ, ಭಾಸ್ಕರ ಬಾರ್ಯ ವಿಭೀಷಣನಾಗಿ, ಗುಡ್ಡಪ್ಪ ಬಲ್ಯ ರಾವಣನಾಗಿ, ದುಗ್ಗಪ್ಪ ನಡುಗಲ್ಲು ಇಂದ್ರಜಿತುವಾಗಿ, ಹರಿಣಾಕ್ಷಿ ಜೆ.ಶೆಟ್ಟಿ ವಿದ್ಯುಜಿಹ್ವನಾಗಿ ಹಾಗೂ ಭಾರತಿ ರೈ ಅರಿಯಡ್ಕ ಸರಮೆಯಾಗಿ ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.

Read More

ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೊ ಸಂಯೋಜಿಸುವ ‘ಬಾಲ ಲೀಲಾ -2024’ ಚಿಣ್ಣರ ಬೇಸಿಗೆ ಶಿಬಿರವು ದಿನಾಂಕ 11-04-2024ರಿಂದ 14-04-2024ರವರೆಗೆ ಬೆಳಗ್ಗೆ 9ರಿಂದ ಸಂಜೆ 5ರ ತನಕ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ನೋಂದಣಿಗಾಗಿ ಸಂಪರ್ಕಿಸಿರಿ : ವಿಶು ರಾವ್ ಹಾವಂಜೆ 9880052105 ಜನಾರ್ದನ ಹಾವಂಜೆ 9845650544 ಉದಯ್ ಕೋಟ್ಯಾನ್ 9448157424

Read More