Subscribe to Updates
Get the latest creative news from FooBar about art, design and business.
Author: roovari
ಇತ್ತೀಚಿನ ದಿನಗಳಲ್ಲಿ ಡೇರೆ ಮೇಳದ ಯಕ್ಷಗಾನ ಜಾಸ್ತಿ ನೋಡುತ್ತಿದ್ದ ನಾನು ಬಯಲಾಟ ಮೇಳದ ಆಟಕ್ಕೆ ಹೋದರೂ ಕೂಡ ಸ್ವಲ್ಪ ನೋಡಿ ಬರುತ್ತಿದ್ದೆ… ಆದ್ರೆ ಈ ವರ್ಷ ಎಲ್ಲರ ಬಾಯಲ್ಲೂ ಕೂಡ ಹಾಲಾಡಿ ಮೇಳದ ‘ಹಂಸ ಪಲ್ಲಕ್ಕಿ’ ಆಟ ಒಳ್ಳೆ ಉಂಟು ಅಂತ…. ಆಗ ಒಂದು ಕುತೂಹಲ ಮೂಡಿತ್ತು… ಆದ್ರೆ ಹೋಗಲು ಸಮಯ ಆಗ್ಲಿಲ್ಲ… ದಿನಾಂಕ 06-05-24ರಂದು ನಮ್ಮೂರು ಕಟ್ಟ್ ಬೆಲ್ತುರ್ ಅಲ್ಲಿ ಪ್ರದರ್ಶನ ಇದ್ದಿದ್ರಿಂದ ಹೋಗಿ ಸ್ವಲ್ಪ ನೋಡಿ ಬರುವ ಅಂತ ಹೋದೆ…ಆದ್ರೆ ಬಂದಿದ್ದು ಮಾತ್ರ ಆಟ ಮುಗಿದ ನಂತರನೆ…… ವಾವ್ ಅದ್ಭುತ ಪ್ರದರ್ಶನ…. ಪ್ರೊ. ಪವನ್ ಕಿರಣಕೆರೆ ಅವರ ಪ್ರಸಂಗ ಅಂದ್ರೆ ಒಂದು ವಿಶೇಷತೆ ಇರುತ್ತದೆ ಅಂತ ಗೊತ್ತಿತ್ತು… ಆದ್ರೆ ಪ್ರಸಂಗವನ್ನು ಅಚ್ಚುಕಟ್ಟಾಗಿ ವೀಕ್ಷಕರಿಗೆ ಸ್ವಲ್ಪ ಕೂಡ ಬೇಜಾರು ಆಗದ ಹಾಗೆ ಜನರ ಮುಂದೆ ಇಟ್ಟಿದ್ದು ಹಾಲಾಡಿ ಮೇಳದ ಕಲಾವಿದರು. ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಹೊಂದಾಣಿಕೆ ಅದ್ಭುತ. ಒಂದು ಬಯಲಾಟ ಮೇಳದಲ್ಲಿ ಒಂದು ಪ್ರಸಂಗ 120ಕ್ಕೂ ಅಧಿಕ ಪ್ರದರ್ಶನ…
ಕನ್ನಡದಲ್ಲಿ ಸಣ್ಣಕತೆಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನಲಾಗುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ಧ್ವನಿಯನ್ನು ಹೊಂದಿದ ಅನೇಕ ಕತೆಗಳು ಬರುತ್ತಿವೆ. ನವೋದಯ ಮಾರ್ಗದ ಕತೆಗಳೂ ಬೆಳಕು ಕಾಣುತ್ತಿವೆ. ಡಾ. ಸಬಿತಾ ಮರಕಿಣಿಯವರ ‘ಮಾಂಗ್ಣಿ ಮಾಸ್ಟ್ರಂಗೆ ನಮಸ್ಕಾರ’ ಎಂಬ ಹವಿಗನ್ನಡ ಕಥಾಸಂಕಲನವು ನವೋದಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಯಾವುದೇ ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಆರು ಕತೆಗಳಲ್ಲಿ ಆತ್ಮಶೋಧನೆ, ದ್ವಂದ್ವ ಮತ್ತು ಪ್ರತಿಮೆ ಸಂಕೇತಗಳಿಲ್ಲ. ಹವಿಗನ್ನಡದ ಆಡುಮಾತಿನ ಲಯವಿದೆ. ಆಕರ್ಷಕ ಆರಂಭ ಮತ್ತು ಅನಿರೀಕ್ಷಿತ ಮುಕ್ತಾಯಗಳಿಲ್ಲ. ಆಪ್ತವೆನಿಸುವ ನಿರೂಪಣೆಯಿದೆ. ‘ಅಬ್ಬೆ: ಮಣ್ಣಿಲಿ ಮಣ್ಣಾಗಿ’, ‘ಎಂಕಿಯ ದಿಬ್ಬಾಣ’, ‘ಮಾಂಗ್ಣಿ ಮಾಸ್ತ್ರನೂ…
ಕೊಪ್ಪಳ : ಹೌದು, ವಿಠ್ಠಪ್ಪ ಗೋರಂಟ್ಲಿಯವರು ಹುಟ್ಟಿನಿಂದ ಬಡತನದ ಬೇಗೆಯಲ್ಲಿ ಬೆಂದು ನೊಂದು ಬೆಳೆದು ಬಂದವರು. ಬಡತನವೇ ಅವರನ್ನು ಗಡಿಗೆರೆ ದಾಟಲು ಕಲಿಸಿದ್ದು.. ಆಶ್ಚರ್ಯದ ಸಂಗತಿ ಎಂದರೆ ಔಪಚಾರಿಕ ಶಿಕ್ಷಣದಲ್ಲಿ ಅವರು ಓದಿದ್ದು ಕೇವಲ ನಾಲ್ಕನೇಯ ತರಗತಿ. ಅಪಾರವಾಗಿ ಓದುವ ಹವ್ಯಾಸ ಅವರನ್ನು ಬಹಳ ಎತ್ತರಕ್ಕೆ ಒಯ್ದು ನಿಲ್ಲಿಸಿತು. ಎಷ್ಟೆಂದರೆ ನಾವೆಲ್ಲ ಅವರನ್ನು ಕೊಪ್ಪಳದ ನಡೆದಾಡುವ ವಿಶ್ವಕೋಶ ಎಂದೇ ಹೇಳುವಂತಾಯಿತು. ಅವರು ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ಜೀವನ ನಿರ್ವಹಣೆಗೆ ಬಟ್ಟೆ ನೇಯಲು ಆರಂಭಿಸಿದರು. ಆದರೂ ಅವರ ಓದುವ ಹವ್ಯಾಸ ಮಾತ್ರ ಕಡಮೆ ಆಗಲಿಲ್ಲ. ದುಡಿತದ ಜೊತೆಗೆ ರೂಢಿಸಿಕೊಂಡಿದ್ದ ನಿರಂತರ ಓದು ಅವರನ್ನು ಚಿಂತನಶೀಲ ಬರಹಗಾರರನ್ನಾಗಿ ರೂಪಿಸಿತು. ಕಪ್ಪೋಡಲ ಕರೆ, ಈ ನೆಲದೊಡಲಲ್ಲಿ, ಶ್ರೀ ಸದಾನಂದ ಸಂದೇಶ, ತನಿಖಾ ವರದಿ, ಯಾರು ಹಾಡದ ಹಾಡು, ನಿನ್ನ ನೀ ತಿಳಿ, ಕಡಲೊಳಗಿನ ನೂರೆಂಟು ಹನಿಗಳು, ತುಂಗಭದ್ರೆಯ ಅಳಲು, ಜಿಲ್ಲಾ ರಂಗ ಮಾಹಿತಿ ಅವರ ಪ್ರಕಟಿತ ಕೃತಿಗಳು. ಮಾತ್ರವಲ್ಲದೆ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕ…
ಧಾರವಾಡ : ವಿಶ್ವ ಪುಸ್ತಕ ದಿನದ ಅಂಗವಾಗಿ ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ್ದ ‘ಉತ್ತಮ ಓದುಗ’ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಶ್ರೀಮತಿ ಶ್ರೀರಂಜನಿ ಅಡಿಗ (ಬೆಂಗಳೂರು), ಶ್ರೀಮತಿ ರಂಜಿತಾ ಮಹಾಜನ (ಬೆಳಗಾವಿ), ಕುಮಾರಿ ನಯನಾ ಜಿ.ಎಸ್. ಕಳಂಜ (ದಕ್ಷಿಣ ಕನ್ನಡ), ಶ್ರೀಮತಿ ಮಾಲಾ ಹೆಗಡೆ ಕೆರೆಕೋಣ (ಉತ್ತರ ಕನ್ನಡ) ಮತ್ತು ಕುಮಾರಿ ವಿಭಾಶ್ರೀ ಭಟ್ (ಮೈಸೂರು) ‘ಉತ್ತಮ ಓದುಗ’ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಕುಮಾರಿ ಭವ್ಯ ಭಟ್ (ಮಡಿಕೇರಿ) ಅವರು ತೀರ್ಪುಗಾರರಾಗಿದ್ದರು. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರು ಬಹುಮಾನವನ್ನು ಪಡೆದ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀಮತಿ ಶ್ರೀರಂಜನಿ ಅಡಿಗ ಶ್ರೀಮತಿ ರಂಜಿತಾ ಮಹಾಜನ ಕುಮಾರಿ ನಯನಾ ಜಿ.ಎಸ್. ಕಳಂಜ ಶ್ರೀಮತಿ ಮಾಲಾ ಹೆಗಡೆ ಕೆರೆಕೋಣ ಕುಮಾರಿ ವಿಭಾಶ್ರೀ ಭಟ್
ತುಮಕೂರು : ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ‘ಚಿಣ್ಣರ ಬಣ್ಣದ ಶಿಬಿರ’ದ ಸಮಾರೋಪ ಸಮಾರಂಭವು ತುಮಕೂರು ತಾಲೂಕಿನ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ದಿನಾಂಕ 10-05-2024ರಂದು ಸಂಪನ್ನಗೊಂಡಿತು. ಈ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಮಕ್ಕಳ ಹಕ್ಕುಗಳ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡುತ್ತಾ “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಬಹಳ ಮುಖ್ಯ. ಡಮರುಗ ಸಂಸ್ಥೆ ಗ್ರಾಮೀಣ ಮಕ್ಕಳನ್ನು ಗುರಿಯಾಗಿಸಿಕೊಂಡು ಉಚಿತವಾಗಿ ರಂಗಶಿಬಿರ ನಡೆಸಿಕೊಂಡು ಬರುತ್ತಿರುವುದು ಅಭಿನಂದರಾರ್ಹ” ಎಂದು ಅಭಿಪ್ರಾಯಪಟ್ಟರು. ನಂತರ ಮಾತನಾಡಿದ ಸುಧಾ, “ನಾನು 40 ವರ್ಷ ದೆಹಲಿ ಮತ್ತು 10 ವರ್ಷ ಬೆಂಗಳೂರಿನಲ್ಲಿ ಇದ್ದು ರಂಗ ತಂಡಗಳ ನಿರಂತರ ಸಂಪರ್ಕದಲ್ಲಿದ್ದುಕೊಂಡು ಬಂದವಳು. ಆದರೆ ಗ್ರಾಮೀಣ ಮಟ್ಟದಲ್ಲಿ ಒಂದು ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೆ ಪೂರ್ಣಾವಧಿ ರಂಗಶಿಬಿರವನ್ನು ಆಯೋಜಿಸಿರುವುದು ತೀರಾ ಅಪರೂಪ. ಆದ್ದರಿಂದಲೇ ವಿಷಯ ತಿಳಿದು ಒಂದು ದಿನ ಮುಂಚಿತವಾಗಿ ಬಂದು ಶಿಬಿರದಲ್ಲಿ ಭಾಗವಹಿಸಿ ಅಂತರಾಳದಿಂದ ಹೇಳುತ್ತಿದ್ದೇನೆ. ಇದೊಂದು ಅದ್ವಿತೀಯ ರಂಗಕಾರ್ಯ. ಇದರ ರೂವಾರಿ ಮೆಳೇಹಳ್ಳಿ ದೇವರಾಜ್ ಮತ್ತು…
ಮಂಗಳೂರು : ಬ್ಯಾರಿ ಎಲ್ತ್ ಗಾರ್ತಿಮಾರೊ ಕೂಟದ ವತಿಯಿಂದ ಆಯೋಜಿಸಿದ್ದ ‘ಸಾಹಿತ್ಯತ್ತೊ ಒಸರ್ -2024’ (ಸಾಹಿತ್ಯದ ಒರತೆ) ಕಾರ್ಯಕ್ರಮವು ದಿನಾಂಕ 12-05-2024ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಜರಗಿತು. ಈ ಕಾರ್ಯಕ್ರಮದ ನೆಪದಲ್ಲಿ ನಡೆದ ‘ಪಾಟೆಲ್ತ್ ರೊ ಒಸರ್’ ಬಹುಭಾಷಾ ಕವಿಗೋಷ್ಠಿಯಲ್ಲಿ ಮೊದಲು ಕವಿತೆ ಪ್ರಸ್ತುತಪಡಿಸಿದವರು ಆಯೆಷಾ ಯು.ಕೆ. “ಹೌದು, ಅಮ್ಮನೆಂದರೆ ನಾಟಕಕಾರ್ತಿ… ಕುಟುಂಬದ ಒಳಿತಿಗಾಗಿ ದುಃಖ ದುಮ್ಮಾನವನ್ನು ಹುದುಗಿಟ್ಟುಕೊಂಡು ಏನೂ ಆಗಲಿಲ್ಲ ಎಂಬಂತೆ ನಟಿಸುವಾಕೆ…’ ಅವರು ಸ್ವರಚಿತ ಕವನದ ಇಂಥ ಸಾಲುಗಳನ್ನು ಓದುತ್ತಿರುವಾಗ ಸಭಿಕರಲ್ಲಿ ಮೊದಲು ಮೌನ, ನಂತರ ಹೃದಯ ಭಾರ. ಕೆಲವರ ಕಣ್ಣಂಚು ತಮಗರಿವಿಲ್ಲದೇ ಒದ್ದೆ. ವಿಶ್ವ ಅಮ್ಮಂದಿರ ದಿನದ ಅಂಗವಾಗಿ ತಾಯಂದಿರ ಕುರಿತ ಕವಿತೆ ವಾಚಿಸಿದ ಅವರು, ಅಮ್ಮಂದಿರು ತಮ್ಮ ನೋವನ್ನು ನಾಟಕೀಯವಾಗಿ ಅಡಗಿಸಿಡುವುದನ್ನು ಕಾವ್ಯಾತ್ಮಕವಾಗಿ ನಿರೂಪಿಸಿ ಸಭಿಕರ ಹೃದಯವನ್ನು ಆರ್ದ್ರಗೊಳಿಸಿದರು. ನೋವನ್ನು ಕಣ್ಣೀರಿನ ಮೂಲಕ ಪ್ರಕಟಪಡಿಸದೆ ಅಡಗಿಸಿಟ್ಟ ಅಮ್ಮ ಕೊನೆಗೊಂದು ದಿನ ಕಣ್ಣೀರು ಹಾಕಿದಾಗ ಮಕ್ಕಳು ‘ಆಹಾ… ಅಮ್ಮ ನಾಟಕ ಮಾಡುತ್ತಿದ್ದಾಳೆ…’ ಎಂದು ಗೇಲಿ ಮಾಡಿದರು ಎಂಬ…
ಹೆಗ್ಗೋಡು : ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ ಹೆಗ್ಗೋಡು ಇದರ ವತಿಯಿಂದ ‘ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್’ 2024-25ನೇ ಸಾಲಿನ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆಯ ಬಾಬ್ತು ಭಾಗಶಃ ವಿದ್ಯಾರ್ಥಿವೇತನ ದೊರೆಯುತ್ತದೆ. ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯ ಶ್ರಾವ್ಯ ಪರಿಕರಗಳ ಅನುಕೂಲತೆಯಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ.
ಕಾಸರಗೋಡಿನ ಹಿರಿಯ ತಲೆಮಾರಿನ ಕವಿಗಳಲ್ಲಿ ಒಬ್ಬರಾದ ಕೃಷ್ಣ ಭಟ್ಟ ಪಟ್ಟಾಜೆಯವರ ‘ಭಾವಾಂಜಲಿ’ಯು ಉತ್ತಮ ಕವಿತೆಗಳ ಸುಂದರ ಗುಚ್ಛ. ಇಲ್ಲಿ ಕೆಲವನ್ನು ರಾಗಬದ್ಧವಾಗಿ ಹಾಡಬಹುದಾದರೆ ಮತ್ತೆ ಕೆಲವನ್ನು ಭಾವಬದ್ಧವಾಗಿ ಓದಬಹುದು. ಇವುಗಳ ಹೃದ್ಯವಾದ ಭಾವ ಸಾಮರಸ್ಯದಲ್ಲಿ ನವ್ಯ-ನವೋದಯಗಳ ಕಲ್ಪನೆಯೇ ಒಮ್ಮೆ ಮರೆತುಹೋಗುತ್ತದೆ. ‘ಒಂದು ರಾತ್ರೆ’, ‘ಹಾಡು ಕೋಗಿಲೆ’, ‘ಹೇಮಂತ’, ‘ನಲಿದಾಡು ಕಂದ’, ‘ಬಾ ಕಾಡಿಗೆ’ ಮೊದಲಾದ ಕವಿತೆಗಳು ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತವೆ. ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಪ್ರತಿಮೆ-ಸಂಕೇತಗಳ ಹಂಗುತೊರೆದ ಸರಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ವೈಶಿಷ್ಟ್ಯ. ಹೊಗೆಯಾಡುತಿಹುದೊಂದು ಕಿಡಿಸಿಡಿಸಿದರದೆ ಸಾಕು ಆಗ ನೋಡಲ್ಲೆಲ್ಲು ಅಗ್ನಿ ವರ್ಷ ಆಸನ್ನವೈ ದೇವದಾನವರ ಯುದ್ಧವಿದು ಯುದ್ಧ ಯಜ್ಞದ ಫಲವೇ ಲೋಕನಾಶ (ಶಾಂತಿ) ಜಗತ್ತು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸುವ ಈ ಸಾಲುಗಳು ಮನುಷ್ಯರ ನಡುವಿನ ಸ್ನೇಹದ ಬೆಸುಗೆಯನ್ನು ಇಲ್ಲವಾಗಿಸುತ್ತಿರುವ ಯುದ್ಧ ಮತ್ತು ಭಯೋತ್ಪಾದನೆಗಳನ್ನು ನೆನೆದು ತಲ್ಲಣಿಸುತ್ತವೆ. ಹೊತ್ತಿ ಉರಿಯುತ್ತಿರುವ ಯುದ್ಧಜ್ವಾಲೆಯ ಪರಿಣಾಮಗಳನ್ನು ಸೆರೆಹಿಡಿಯುತ್ತವೆ. ಪೂರ್ವಜರ ವಿಮಲ ಸಚ್ಚಾರಿತ್ರ್ಯ ಮುಕುರಕ್ಕೆ ಕರೆಗೊಡಲಾವ್…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ ‘ರಾವಣ ವಧೆ’ ಎಂಬ ತಾಳಮದ್ದಳೆಯು ಓ೦ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 11-05-2024ರಂದು ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಮತ್ತು ಅಚ್ಯುತ ಪಾಂಗಣ್ಣಾಯ ಹಾಗೂ ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ (ರಾವಣ), ಗುಡ್ಡಪ್ಪ ಬಲ್ಯ (ಶ್ರೀ ರಾಮ), ಭಾಸ್ಕರ್ ಬಾರ್ಯ (ಮಂಡೋದರಿ), ಮಾಂಬಾಡಿ ವೇಣುಗೋಪಾಲ ಭಟ್ (ಮಾತಲಿ), ಚಂದ್ರಶೇಖರ್ ಭಟ್ ಬಡೆಕ್ಕಲ (ದೂತ), ಪ್ರೇಮಲತಾ ಟಿ. ರಾವ್ (ವಿಭೀಷಣ) ಸಹಕರಿಸಿದರು. ಟಿ. ರಂಗನಾಥ ರಾವ್ ಹಾಗೂ ದುಗ್ಗಪ್ಪ ಎನ್. ಸಹಕರಿಸಿದರು.
ಉಡುಪಿ : ಗಾಂಧಿ ಆಸ್ಪತ್ರೆ ಉಡುಪಿ ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂ ಮತ್ತು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂ ಅವರ ಆಶೀರ್ವಾದದೊಂದಿಗೆ ‘ವಯೋಲಿನ್ ಕಛೇರಿ’ಯನ್ನು ದಿನಾಂಕ 15-05-2024ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಛೇರಿಯನ್ನು ಖ್ಯಾತ ಬಾಲ ಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಮತ್ತು ಅವರ ಮಾರ್ಗದರ್ಶಕ ಶ್ರೀ ಸಿ.ಎಸ್. ಅನುರೂಪ್ ಅವರು ನಡೆಸಿಕೊಡಲಿದ್ದಾರೆ.