Author: roovari

ಬೆಂಗಳೂರು : ಬುಕ್‌ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ವನ್ನು ಘೋಷಿಸಿತ್ತು. ಮಲಯಾಳಂ ಲೇಖಕಿ ಕೆ.ಆರ್.‌ ಮೀರಾ ಇವರಿಗೆ ಈ ಪ್ರಶಸ್ತಿ ಲಭಿಸಿದ್ದು, ಕೋರಮಂಗಲದ ಸೇಂಟ್‌ ಜಾನ್ಸ್‌ ಸಭಾಂಗಣದಲ್ಲಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ ದಿನಾಂಕ 10 ಆಗಸ್ಟ್ 2025 ಭಾನುವಾರದಂದು ಪ್ರಶಸ್ತಿಯನ್ನ ಪ್ರದಾನಿಸಲಾಯಿತು. ಪುರಸ್ಕೃತರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರು ಪ್ರಶಸ್ತಿಯನ್ನು ಪ್ರದಾನಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಡೋಜ ಹಂಪ ನಾಗರಾಜಯ್ಯ “ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವವು ವಿವಿಧ ಭಾಷಾ ಸಾಹಿತ್ಯದ ಇತಿಹಾಸದಲ್ಲಿ ಒಂದು ಅದ್ಭುತ ಅಧ್ಯಾಯವನ್ನು ತೆರೆಯಿತು. ಮೂರು ದಿನಗಳ ಕಾಲ ನಾಲ್ಕು ಭಾಷೆಗಳ ಒಟ್ಟು 180 ಗೋಷ್ಠಿಗಳು ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ಚರ್ಚೆಗೆ ಸಾಕ್ಷಿಯಾದವು. ಬಿ.ಬಿ.ಎಲ್.ಎಫ್.ನಂತಹ ಅರ್ಥಪೂರ್ಣ ಪರಿಕಲ್ಪನೆಗಿಂತ ನಮ್ಮ ಹೊಸ ಪೀಳಿಗೆಯ ಬರಹಗಾರರಿಗೆ ನಾವು ಬೇರೆ ಯಾವ ಉತ್ತಮ ಪರಂಪರೆಯನ್ನು ಬಿಟ್ಟುಕೊಡಬಹುದು? ಮೆಗಾ ಸಾಹಿತ್ಯ…

Read More

ಕಳೆದ ತೊಂಭತ್ತರ ದಶಕದ ಕೊನೆಯ ಕಾಲ. ನಾನು ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ‘ತುಂಬಾಡಿ ರಾಮಯ್ಯ’ ಅವರ ಹೆಸರು ಕೇಳಿದ್ದೆ. ಮೇಷ್ಟ್ರು ಎಸ್.ಜಿ. ಸಿದ್ದರಾಮಯ್ಯ ಮತ್ತು ಡಾ. ರಾಜಪ್ಪ ದಳವಾಯಿಯವರು ಪಾಠ ಮಾಡುತ್ತಿದ್ದಾಗ ಆಗ ತಾನೇ ಬಿಡುಗಡೆಯಾಗಿದ್ದ ‘ಮಣೆಗಾರ’ ಆತ್ಮಕತೆಯ ಬಗೆಗೆ ಕ್ಲಾಸಿನಲ್ಲಿ ಹೇಳುತ್ತಿದ್ದರು. ‘ಯಾರಿವರು ತಮ್ಮ ಕೃತಿಗೆ ಸಮುದಾಯ ಸೂಚಕವಾದ ಹೆಸರಿಟ್ಟಿದ್ದಾರಲ್ಲ’ ಎಂದು ಆಶ್ಚರ್ಯನಾಗಿದ್ದೆ. ಆ ಕೃತಿ ನನ್ನ ಕೈಗೆ ಸಿಕ್ಕಿ ಓದಿದಾಗ ನನ್ನೂರ ಹತ್ತಿರದ ತುಂಬಾಡಿ ಗೊಲ್ಲಹಳ್ಳಿಯ ಹೆಸರು, ಅದರೊಳಗಿನ ಅನುಭವಗಳು ನನ್ನನ್ನು ತಲ್ಲಣಗೊಳಿಸಿದ್ದವು. ‘ಮಣೆಗಾರ’ ತುಮಕೂರಿನ ಮೊದಲ ‘ದಲಿತ ಆತ್ಮಕಥೆ’. ದಲಿತ ಅನುಭವವನ್ನು ವಿಭಿನ್ನವಾಗಿ ಕಟ್ಟಿದ ಕೃತಿ. ‘ಮುಟ್ಟಿದರೆ ಮಿಡಿವ ಮಣೆಗಾರ’ (ರಹಮತ್ ತರೀಕೆರೆ) ಎಂದೆಲ್ಲಾ ಕನ್ನಡದ ಚಿಂತನಾವಲಯದಲ್ಲಿ ದೊಡ್ಡ ಚರ್ಚೆಯನ್ನೇ ಈ ಕೃತಿ ಹುಟ್ಟಿಹಾಕಿತ್ತು. ಇಪ್ಪತೈದು ವರ್ಷಗಳ ಹಿಂದೆ ಬೆರಗಿನಿಂದ ನೋಡುತ್ತಿದ್ದ ಹಿರಿಯರಾದ ತುಂಬಾಡಿ ರಾಮಯ್ಯನವರ ಬರಹಕ್ಕೆ ಕಡನುಡಿಗಳನ್ನು ಬರೆಯುವ ಅವಕಾಶ ಒದಗಿಬಂದಿದೆ. ನನ್ನಂತಹ ಕಿರಿಯನಿಂದ ಬರೆಸಬೇಕೆಂಬ ಅವರ ನಿಲುವು ನನ್ನಲ್ಲಿ ಮುಜುಗರವನ್ನು ಮತ್ತು ಅವರ…

Read More

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ನಡೆಯುವ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವನ್ನು ದಿನಾಂಕ 16 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಪರಿವರ್ತನ ರಂಗ ಸಮಾಜದ ಕಲಾವಿದರು ಅಭಿನಯಿಸುವ ರವೀಂದ್ರ ಭಟ್ ಇವರ ಕೃತಿಯಾಧಾರಿತ ನಾಟಕ ‘ಮೂರನೇ ಕಿವಿ’ ಪ್ರದರ್ಶನಗೊಳ್ಳಲಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕದ ಬಗ್ಗೆ : ಮಾತು ಬಾರದಿರುವ ಪ್ರಪಂಚದಲ್ಲಿ ಶಬ್ದ ಮತ್ತು ಮಾತಿಗೆ ಅಗಾಧವಾದ ಪ್ರಾಮುಖ್ಯತೆ ಇದೆ. ಹುಟ್ಟಿನಿಂದಲೇ ಕಿವುಡರಾದವರಿಗೆ ಮಾತನಾಡುವುದನ್ನು ಕಲಿಸಲು ನಡೆಸುವ ದೀರ್ಘ ಪ್ರಯತ್ನವೇ ಮೂರನೇ ಕಿವಿ ಕೃತಿಯ ಪ್ರಮುಖ ಉದ್ದೇಶ. ಮಾತು ಕಲಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ವಿಜ್ಞಾನವಿದೆ.…

Read More

ಬೆಂಗಳೂರು: ಬುಕ್‌ ಬ್ರಹ್ಮ ಸಂಸ್ಥೆಯ ವತಿಯಿಂದ ಆ. 8, 9, 10 ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ-2025ʼರ ಎರಡನೇಯ ದಿನದ ಕಾರ್ಯಕ್ರಮಗಳು ದಿನಾಂಕ 9 ಆಗಸ್ಟ್ 2025ರ ಶನಿವಾರದಂದು‌ ಕೋರಮಂಗಲದ ಸೇಂಟ್‌ ಜಾನ್ಸ್‌ ಆಡಿಟೋರಿಯಂನಲ್ಲಿ ನಡೆದಿದ್ದು, ಹಲವು ವಿಚಾರಗೋಷ್ಠಿಗಳಿಗೆ ಸಾಹಿತ್ಯ ಉತ್ಸವದ 8 ವೇದಿಕೆಗಳು ಸಾಕ್ಷಿಯಾದವು. ಉತ್ಸವದ ಮುಖ್ಯ ವೇದಿಕೆ ಮಂಟಪ ಸಭಾಂಗಣದಲ್ಲಿ ನಡೆದ ಕೊಳಲು ವಾದಕ ಪ್ರವೀಣ್‌ ಗೋಡ್ಕಿಂಡಿ ಅವರ ʻಮಾರ್ನಿಂಗ್‌ ಮೆಲೋಡಿʼ ಕಾರ್ಯಕ್ರಮವು ಎರಡನೇಯ ದಿನದ ಕಾರ್ಯಕ್ರಮಕ್ಕೆ ಮುನ್ನುಡಿ ನೀಡಿತು. ನಂತರದಲ್ಲಿ ಇದೇ ವೇದಿಕೆಯಲ್ಲಿ ಪೌಲ್‌ ಜಚಾರೀಯ, ಎಚ್.ಎಸ್.‌ ಶಿವಪ್ರಕಾಶ್‌, ಅಜಿತನ್‌, ವೋಲ್ಗಾ, ಅನುಜ ಚಂದ್ರಮೌಲಿ, ಟಿ. ಎಂ. ಕೃಷ್ಣ, ಸುಮಂಗಲಾ, ಶೈಲಜಾ, ಸಿ. ಮೃಣಾಲಿನಿ, ಕಿರುಂಗೈ ಸೇತುಪತಿ, ಕೆ. ಶ್ರೀನಿವಾಸ್‌, ರಶ್ಮೀ ವಾಸುದೇವ, ಸುಧೀಶ್‌ ವೆಂಕಟೇಶ್‌, ಮಯೂರ ಶೇಯಾಂಶ್‌ ಕುಮಾರ್‌, ವಿ. ಐಶ್ವರ್ಯ, ಮನು ಪಿಲ್ಲೈ, ವಿ.ಎಸ್.‌ ಕೈಕಸಿ, ಆಡೂರು ಗೋಪಾಲಕೃಷ್ಣನ್‌, ಗಿರೀಶ್‌…

Read More

ಬೆಂಗಳೂರು : ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳೂ ಆದ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಇವರು ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿ ಇರುವ ಪ್ರತಿಷ್ಠಿತ ಬಿ. ಎಂ. ಶ್ರೀ. ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಆಯ್ಕೆ ಆಗಿರುತ್ತಾರೆ ಎಂದು ಬಿ. ಎಂ. ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಹಾಗೂ ಕಾರ್ಯದರ್ಶಿ ಡಾ. ಶಾಂತರಾಜು ಈ ವಿಷಯವನ್ನು ತಿಳಿಸಿದ್ದಾರೆ. ಸಾಹಿತಿಗಳಾಗಿ, ಸಾಂಸ್ಕೃತಿಕ ಚಿಂತಕರಾಗಿ, ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿರುವ ಸಿಸಿರಾ ಇವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿಕೊಂಡು 1998 ರಿಂದಲೂ ಕನ್ನಡಪರವಾದ ಹಾಗೂ ಮಹಾತ್ಮ ಗಾಂಧೀಜಿ, ವಿವೇಕಾನಂದರ ವಿಚಾರಧಾರೆಗಳ ಪ್ರಸಾರ ಕಾರ್ಯದಲ್ಲಿ ತಮ್ಮನ್ನು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿರುತ್ತಾರೆ.

Read More

ಬೆಂಗಳೂರು: ಬುಕ್‌ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ʻಸ್ವಾತಂತ್ರ್ಯೋತ್ಸವ ಕಥಾʼ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯ ಪ್ರಶಸ್ತಿಯನ್ನು ಕೋರಮಂಗಲದ ಸೇಂಟ್‌ ಜಾನ್ಸ್‌ ಸಭಾಂಗಣದಲ್ಲಿ, ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ ದಿನಾಂಕ 9 ಆಗಸ್ಟ್ 2025ರ ಶನಿವಾರದಂದು ಪ್ರದಾನಿಸಲಾಯಿತು. ಈ ಬಾರಿಯ ಬುಕ್‌ ಬ್ರಹ್ಮ ಕಥಾ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಸುಲ್ತಾನ್‌ ಮನ್ಸೂರ್ ಅವರ ʻಪೆರೇಡ್ ಪೊಡಿಮೋನುʼ ಕತೆ ಪಡೆದುಕೊಂಡಿತು. ಈ ಪ್ರಶಸ್ತಿಯು ರೂಪಾಯಿ 50,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ದ್ವಿತೀಯ ಬಹುಮಾನವು ಸದಾಶಿವ ಸೊರಟೂರು ಅವರ ʻಬೆಳಕು ಕುಡಿದ ಸಂಜೆʼ ಕತೆಗೆ ಲಭಿಸಿದ್ದು, ಪ್ರಶಸ್ತಿಯು ರೂಪಾಯಿ 25,000 ನಗದು ಹಾಗೂ ಪ್ರಶಸ್ತಿ ಫಲಕ, ತೃತೀಯ ಬಹುಮಾನವು ದಾದಾಪೀರ್‌ ಜೈಮನ್ ಅವರ ʻದಿಗಿಲುʼ ಕಥೆಗೆ ಲಭಿಸಿದ್ದು, ಪ್ರಶಸ್ತಿಯು ರೂಪಾಯಿ 15,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು. ಸಮಾಧಾನಕರ ಪ್ರಶಸ್ತಿಗಳನ್ನು ಅಕ್ಷತಾ ಕೃಷ್ಣಮೂರ್ತಿ ಅವರ…

Read More

ಮಂಗಳೂರು: ಮಂಗಳೂರಿನ ಜೆಪ್ಪು ಬಡಾವಣೆಯಲ್ಲಿರುವ ಸಾಹಿತಿ ವಿವೇಕ ರೈ ಅವರ ಮನೆಯಲ್ಲಿ ಅವರಿಗೆ ಡಾ. ಎಂ. ಚಿದಾನಂದ ಮೂರ್ತಿ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 06 ಆಗಸ್ಟ್ 2025ರಂದು ನಡೆಯಿತು. ಸಮಾರಂಭದಲ್ಲಿ ಭಾಗವಹಿಸಿದ ಎಂದು ನಿವೃತ್ತ ಕುಲಪತಿ ಪ್ರೊ. ಚಿನ್ನಪ್ಪ ಗೌಡ ಮಾತನಾಡಿ “ಕನ್ನಡ ಸಾಹಿತ್ಯ ಲೋಕದ ಸಂಶೋಧಕರಲ್ಲಿ ವಿನೂತನ ವಿಶಿಷ್ಟತೆ ಸಾಧಿಸಿರುವವರು, ಕಠಿಣ ಪರಿಶ್ರಮದ ಮೂಲಕ ಸಂಶೋಧನೆ, ಕಾವ್ಯ ಸಂಗ್ರಹಿಸಿದವರು ವಿವೇಕ ರೈ. ಅವರಿಗೆ ಅರ್ಹವಾಗಿ ಚಿದಾನಂದ ಪ್ರಶಸ್ತಿ ಸಂದಿದೆ” ಎಂದು ಹೇಳಿದರು. ಪ್ರಶಸ್ತಿ ಸ್ವೀಕರಿಸಿದ ವಿವೇಕ ರೈ ಮಾತನಾಡಿ “ಚಿದಾನಂದ ಮೂರ್ತಿ ಹೆಸರಿನ ಪ್ರಶಸ್ತಿ ದೊರೆತಿದ್ದು ಕನ್ನಡ ಸಾಹಿತ್ಯ ಲೋಕದ ಸಂಶೋಧಕರು, ವಿದ್ವತ್ ಕೆಲಸ ಮಾಡುವವರಿಗೆ ಹಾಗೂ ಕಠಿಣ ಪರಿಶ್ರಮಕ್ಕೆ ಸಂದ ಪ್ರಶಸ್ತಿಯಾಗಿದೆ. ಈ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಲ್ಪ ಬರೆದರೂ ಬಹುಬೇಗ ಜನಪ್ರಿಯತೆ ಗಳಿಸಿಕೊಳ್ಳಬಹುದು. ಆದರೆ, ಸಾಹಿತ್ಯದ ಗಂಭೀರ ಪ್ರಕಾರಗಳಾದ ಗ್ರಂಥ ಸಂಪಾದನೆ, ಸಂಶೋಧನೆಗಳಂತಹ ಕೆಲಸ ಮಾಡುವವರು ಜನಪ್ರಿಯರಾಗುವುದು ಅಪರೂಪ. ಚಿದಾನಂದ ಮೂರ್ತಿ, ಎಂ. ಎಂ.…

Read More

ಬೆಂಗಳೂರು: ಬುಕ್‌ ಬ್ರಹ್ಮ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ʻಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರʼ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯ ಪ್ರಶಸ್ತಿಯನ್ನು ಕೋರಮಂಗಲದ ಸೇಂಟ್‌ ಜಾನ್ಸ್‌ ಸಭಾಂಗಣದಲ್ಲಿ, ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕಾರ್ಯಕ್ರಮದಲ್ಲಿ 8 ಆಗಸ್ಟ್ 2025ರ ಶುಕ್ರವಾರದಂದು ಪ್ರದಾನಿಸಲಾಯಿತು. ಈ ಬಾರಿಯ ಬುಕ್‌ ಬ್ರಹ್ಮ ಕಾದಂಬರಿಯ ಸ್ಪರ್ಧೆ ಪ್ರಶಸ್ತಿಯು ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಪ್ರಕಟಗೊಂಡ ಕಾದಂಬರಿಗಾರ್ತಿ ಸುಶೀಲಾ ಡೋಣೂರ ಅವರ ʻಪೀಜಿʼ ಕಾದಂಬರಿಗೆ ಲಭಿಸಿತು. ಈ ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು ಸಹಿತ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ನೀಡಲಾಗಿದೆ. ಮೆಚ್ಚುಗೆ ಪಡೆದ ಕೃತಿಗಳಾಗಿ ಪುಸ್ತಕ ಮನೆ ಪ್ರಕಾಶನದಿಂದ ಪ್ರಕಟಗೊಂಡ ಕಾದಂಬರಿಕಾರ ರಾಜಶೇಖರ ಹಳೆಮನೆ ಅವರ ʻಒಡಲುಗೊಂಡವರುʼ, ಕಂಟಲಗೆರೆಯ ಆದಿಜಂಬೂ ಪ್ರಕಾಶನದ ಕಾದಂಬರಿಕಾರ ಗುರುಪ್ರಸಾದ್‌ ಕಂಟಲಗೆರೆಯವರ ʻಅಟ್ರಾಸಿಟಿʼ, ಅಂಕಿತ ಪುಸ್ತಕ ಪ್ರಕಟಿಸಿರುವ…

Read More

ಬೆಂಗಳೂರು : ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಸಂಭ್ರಮ, ಸಾಧಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ, ಪಿ. ಯು. ಸಿ. ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ದಿನಾಂಕ 09 ಆಗಸ್ಟ್ 2025ರ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಮಾತನಾಡಿ “2011ರ ಜನಗಣತಿ ಪ್ರಕಾರ ದೇಶದಲ್ಲಿರುವ ಮಾತೃಭಾಷೆಗಳ ಸಂಖ್ಯೆ 19,569. ಇವುಗಳ ಉಳಿವಿಗೆ ಎಲ್ಲರೂ ಕೆಲಸ ಮಾಡಬೇಕು.ಭಾಷೆಯ ಉಳಿವಿಗಾಗಿ ಕನ್ನಡ ಪ್ರಾಧಿಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಬಲಿಷ್ಠ ನಾಡು ಕಟ್ಟಬೇಕಾದರೆ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ ಉಳಿಸಬೇಕು. ವಿವಿಧ ಸಂಸ್ಕೃತಿ, ಭಾಷೆ ಮತ್ತು ಆಚರಣೆ ಹೊಂದಿರುವ ಭಾರತವನ್ನು ಹಾಳು ಮಾಡಲು ಬಿಡಬಾರದು” ಎಂದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾದ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿ “ಹೆಣ್ಣು ಮಕ್ಕಳು ಸವಾಲು, ಅಡಚಣೆ, ಅವಮಾನವನ್ನು ಧೈರ್ಯದಿಂದ ಎದುರಿಸಬೇಕು. ಸಾಧ್ಯವಾದಷ್ಟು ಮೊಬೈಲ್ ನಿಂದ ದೂರವಿರಿ. ಜಾಲತಾಣದಲ್ಲಿ ಅಪರಿಚಿತರಿಗೆ ಫೋಟೊ, ಕಳುಹಿಸಬಾರದು. ಒಂದು ವೇಳೆ ಯಾವುದಾದರೂ ತೊಂದರೆಗೆ ಸಿಲುಕಿದರೆ…

Read More

ಮೈಸೂರು : ಶ್ರೀ ದುರ್ಗಾ ನೃತ್ಯಾ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ (ರಿ.) ಮೈಸೂರು ಪ್ರಸ್ತುತ ಪಡಿಸುವ ‘ಅರ್ಪಣಂ’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 16 ಮತ್ತು 17 ಆಗಸ್ಟ್ 2025ರಂದು ಮೈಸೂರಿನ ರಾಮಕೃಷ್ಣ ನಗರದ ರಾಮ ಗೋವಿಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 16 ಆಗಸ್ಟ್ 2025ರಂದು 5-00 ಗಂಟೆಗೆ ವಿದುಷಿ ಶ್ರೀವಿದ್ಯಾ ರಾವ್ ಇವರ ಶಿಷ್ಯರಾದ ಶ್ರೀ ದುರ್ಗಾ ನೃತ್ಯಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. 7-00 ಗಂಟೆಗೆ ಮಂಜು ವಿ. ನಾಯರ್ ಮತ್ತು ಜಗದೀಶ್ವರ ಸುಕುಮಾರ್ ಇವರಿಂದ ‘ನೇಯಂ’ ಪ್ರಸ್ತುತಗೊಳ್ಳಲಿದೆ. ದಿನಾಂಕ 17 ಆಗಸ್ಟ್ 2025ರಂದು ‘ನಾಟ್ಯ ದಾಸೋಹಂ’ ಭರತನಾಟ್ಯ ಮೂಲಕ ಹರಿದಾಸ ಸಾಹಿತ್ಯದ ಪರಿಶೋಧನೆಯಲ್ಲಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಕರ್ನಾಟಕ ಕಲಾಶ್ರೀ ರಾಜಶ್ರೀ ಶೆಣೈ, ವಿದ್ಯಾಶ್ರೀ ರಾಧಾಕೃಷ್ಣ, ಮಂಜುಳ ಸುಬ್ರಹ್ಮಣ್ಯ, ಉನ್ನತ್ ಜೈನ್, ಡಾ. ಸಾಗರ್ ಟಿ.ಎಸ್., ಮಂಜರಿಚಂದ್ರ ಪುಷ್ಪರಾಜ್ ಮತ್ತು ರಾಧಿಕಾ ಶೆಟ್ಟಿ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.

Read More