Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ ಸಮಾರೂಪ ಸಮಾರಂಭ ದಿನಾಂಕ 30 ಜೂನ್ 2025ರ ಶುಕ್ರವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು. ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಕದ್ರಿ ಶ್ರೀ ಮಂಜುನಾಥ ದೇವಳದ ಟ್ರಸ್ಟಿ ಉಷಾ ಪ್ರಭಾಕರ್ ಮಾತನಾಡಿ “ಯಕ್ಷಗಾನವನ್ನು ಇಂದು ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಶಾಲೆ- ಶಾಲೆಗಳಲ್ಲಿ ಉಚಿತವಾಗಿ ಕಲಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಅದರಲ್ಲೂ ಯಕ್ಷ ಶಿಕ್ಷಕರಾಗಿ, ಅನೇಕ ತಂಡಗಳಿಗೆ ಯಕ್ಷಗುರುವಾಗಿ, ಹನುಮಗಿರಿ ಮೇಳದ ಸ್ತ್ರೀ – ಪುರುಷ ಪಾತ್ರಗಳ ಕಲಾವಿದರಾಗಿ ಖ್ಯಾತರಾದ ರಕ್ಷಿತ್ ರವರು ಉಭಯತಿಟ್ಟುಗಳ ಕಲಾವಿದರೂ ಹೌದು. ಇವರನ್ನು ಸರಯೂ ಸಂಸ್ಥೆ ಗೌರವಿಸುತ್ತಿರುವುದು ಸಕಾಲಿಕವಾಗಿದೆ. ಅವರು ಇನ್ನೂ ಚೆನ್ನಾಗಿ ಸಾಧನೆ ಮಾಡಲಿ.” ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿದ ರಕ್ಷಿತ್ ಪಡ್ರೆ ಮಾತನಾಡಿ “ಯಕ್ಷಗಾನ ತನಗೆ ಅನೇಕ ಆಯಾಮವನ್ನು ಕಲ್ಪಿಸಿದೆ. ಕಲಿಯುತ್ತಾ ಕಲಿಸುತ್ತಾ ಸಾಗುತ್ತಿದ್ದೇನೆ. ಎಲ್ಲರ ಅನುಗ್ರಹ…
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ವತಿಯಿಂದ ಅಂತರರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ ಪುರಸ್ಕೃತ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಇವರಿಗೆ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಆಯೋಜಿಸಿದ್ದ ಸರ್ಕಾರಿ ಅಭಿನಂದನಾ ಸಮಾರಂಭವು ದಿನಾಂಕ 02 ಜೂನ್ 2025ರಂದು ನಡೆಯಿತು. ಈ ಅಭಿನಂದನಾ ಕಾರ್ಯಕ್ರಮದಲ್ಲಿ ಬಾನು ಮತ್ತು ದೀಪಾ ಇವರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ಬಾನು ಮುಷ್ತಾಕ್ ಅವರು ನಮ್ಮ ಭಾಷೆಗೆ ಬೂಕರ್ ಒದಗಿಸಿಕೊಡುವ ಮೂಲಕ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ಜಗತ್ತಿನ ಹೆಮ್ಮೆ” ಎಂದು ಮೆಚ್ಚುಗೆ ಸೂಚಿಸಿದರು. “ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್, ದೀಪಾ ಭಾಸ್ತಿಯವರಿಗೆ ತಲಾ ರೂ.10 ಲಕ್ಷ ಪುರಸ್ಕಾರ ನೀಡಲಾಗುವುದು ಎಂದು ಘೋಷಿಸಿ, ಬಾನು ಅವರ ಕತೆಗಳನ್ನು ಇಂಗ್ಲೀಷಿಗೆ ಪ್ರಕಟಿಸಲು, ಅನುವಾದಕ್ಕೆ ಸರ್ಕಾರದ ನೆರವು…
ಸುರತ್ಕಲ್ : ಕಲಾಬ್ದಿ ಗೋವಿಂದದಾಸ ಕಾಲೇಜು ಸುರತ್ಕಲ್ ಪ್ರಸ್ತುತ ಪಡಿಸಿದ ಚೇತನ್ ಗಣೇಶಪುರ ನಿರ್ದೇಶನದ ಪುರಂದರ ದಾಸರ ಕೀರ್ತನೆ ಆಧಾರಿತ ‘ಕೂಸಿನ ಕಂಡೀರ’ ಇದರ ಪ್ರಥಮ ಪ್ರದರ್ಶನವು ದಿನಾಂಕ 01 ಜೂನ್ 2025ರಂದು ವಿದ್ಯಾದಾಯಿನಿ ಪ್ರೌಢಶಾಲೆಯ ವಜ್ರಮಹೋತ್ಸವ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಕಲಾವಿದರಾದ ಸ್ವಾತಿ, ಕಾರ್ತಿಕ್ ಸೂರಿಂಜೆ, ತನುಶ್ರೀ ಶೆಟ್ಟಿಗಾರ, ಶ್ರೇಯ ಟಿ. ಶೆಟ್ಟಿ, ಅನನ್ಯಾ ಕೆ. ಭಟ್, ತೃಪ್ತಿ, ಪ್ರಾಪ್ತಿ, ಪಲ್ಲವಿ ಹೊಸಬೆಟ್ಟು, ರಿತೇಶ್ ದೇವಾಡಿಗ, ರಾಹುಲ್, ಆದೀಶ ಭಂಡಾರಿ, ವಿನೀತ್ ರಾಜ್ ಮಧ್ಯ, ಪ್ರತೀಕ್ಷಾ ಎ. ಭಟ್, ಸುಪ್ರೀತ್ ನಟಿಸಿದರು. ಶಶಾಂಕ್ ಶೆಟ್ಟಿಗಾರ್, ಧೀರಜ್, ಗೌರೀಶ್ ಶೇನೋಯ್, ಸಂಚಿತ್ ಬಂಗೇರ ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿದರು.
ಬೆಂಗಳೂರು : ಐ.ಟಿ.ಸಿ. ಸಂಗೀತ ಸಂಶೋಧನಾ ಅಕಾಡೆಮಿ ಕೋಲ್ಕತ್ತಾ ಇದರ ಸಹಯೋಗದೊಂದಿಗೆ ಸುರ್ ಸಾಗರ್ ಪ್ರಸ್ತುತ ಪಡಿಸುವ ರಾಗ್ಧಾರಿ ಸಂಗೀತ ಸಂಜೆ ಕಾರ್ಯಕ್ರಮವನ್ನು ದಿನಾಂಕ 07 ಜೂನ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಶ್ರೀ ಚಿತ್ರಾಪುರ ಮಠದಲ್ಲಿ ಆಯೋಜಿಸಲಾಗಿದೆ. ಶ್ರೀ ಸ್ವರನೇಂದು ಮಂಡಲ್ ಇವರ ಸರೋದ್ ವಾದನ ಮತ್ತು ಶ್ರೀ ಸಾಯಿ ಐಶ್ವರಿ ಮಹಾಶಬ್ದೆ ಇವರ ಹಾಡುಗಾರಿಕೆಗೆ ರೂಪಕ್ ಕಲ್ಲೂರ್ಕರ್ ತಬಲಾ ಹಾಗೂ ಸತೀಶ್ ಕೊಲ್ಲಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಬೆಂಗಳೂರು : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ನಡೆಯುವ ಸುವರ್ಣ ಪರ್ವ -11ರ ಸರಣಿಯಲ್ಲಿ ಕರ್ನಾಟಕ ಯಕ್ಷಧಾಮ ಮಂಗಳೂರು ಮತ್ತು ಪದ್ಮಕಮಲ ಟ್ರಸ್ಟ್ ಬೆಂಗಳೂರು ಇವರ ಸಹಯೋಗದೊಂದಿಗೆ ಸುವರ್ಣ ಸಮ್ಮಾನ – ಯಕ್ಷಗಾನ ಪ್ರದರ್ಶನವನ್ನು ದಿನಾಂಕ 08 ಜೂನ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕರಾದ ಕೆ. ಮೋಹನ್ ಹೊಳ್ಳ, ಶ್ರೀನಿವಾಸ ಸಾಸ್ತಾನ, ಕೃಷ್ಣಮೂರ್ತಿ ತುಂಗ ಕೆ., ಡಾ. ಶಿವಕುಮಾರ್ ಬೇಗಾರ್, ಡಾ. ರಾಧಾಕೃಷ್ಣ ಉರಾಳ ಮತ್ತು ಶಂಕರ ಬಾಳ್ಕುದ್ರು ಇವರಿಗೆ ಸುವರ್ಣಪರ್ವ ಗೌರವ ಪುರಸ್ಕಾರ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶಶಿಕಾಂತ್ ಶೆಟ್ಟಿ ಕಾರ್ಕಳ ಇವರ ನಿರ್ದೇಶನದಲ್ಲಿ ವೃತ್ತಿ ಕಲಾವಿದರಿಂದ ‘ಶ್ರೀ ದೇವಿ ವಿಜಯ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಬೆಂಗಳೂರು : ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ಣಾಟಕ ಸರ್ಕಾರ ಮತ್ತು ಕನ್ನಡ ಸಹೃದಯ ಪ್ರತಿಷ್ಠಾನ ಕುಮಾರ ವ್ಯಾಸ ಮಂಟಪ ಇವರ ಸಹಕಾರದಲ್ಲಿ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 07 ಜೂನ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಬೆಂಗಳೂರು ರಾಜಾಜಿ ನಗರದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಶ್ರೀ ವಾಗ್ದೇವಿ ಪ್ರಶಸ್ತಿ’ಯನ್ನು ವಿದುಷಿ ಎನ್. ಶ್ರೀಮತಿ ಜಯರಾಂ, “ಕೀರ್ತಿಶೇಷ ಗುರು ಪದ್ಮಶ್ರೀ ಹೆಚ್.ಆರ್. ಕೇಶವಮೂರ್ತಿ ಸ್ಮಾರಕ ಉತ್ತಮ ಗಮಕ ಶಿಕ್ಷಕ ಪ್ರಶಸ್ತಿ’ಯನ್ನು ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಹಾಗೂ ದಿ. ಕೆ.ವಿ. ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಯುವ ಗಮಕ ಪ್ರಶಸ್ತಿ’ಯನ್ನು ವಿದ್ವಾನ್ ವೇ. ಬ್ರಂ. ಅಚ್ಯುತ ಅವಧಾನೀ ಎಂ.ಎಲ್. ಇವರುಗಳಿಗೆ ಪ್ರದಾನ ಮಾಡಲಾಗುವುದು. ಸಾನ್ವಿ ಎಸ್. ಜೋಯಿಸ್, ಅನೀಶ್ ನಾಗೇಶ್, ರಿಧಿ ಭಾರದ್ವಾಜ್, ಸ್ಪಂದನಾ, ನೈನಿಕಾ ಕೊಡಂಚ ಕೆ., ಅಭಿರಾಮ ದೇಸಾಯಿ ಮುಂತಾದ ಕಲಾವಿದರಿಂದ ಕಾವ್ಯಾಂತ್ಯಾಕ್ಷರಿ ಹಾಗೂ ಪ್ರಶಸ್ತಿ…
ಮಂಗಳೂರು: ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಎಂಡ್ ಟ್ರೈನಿಂಗ್(ಸಿ. ಸಿ. ಆರ್. ಟಿ.) ವಿಭಾಗದವರು ವರ್ಷಪ್ರತಿ ಸಂದರ್ಶನದ ಮೂಲಕ ಆಯ್ಕೆ ಮಾಡುವ ಪ್ರತಿಷ್ಠಿತ ಕಲ್ಚರಲ್ ಟ್ಯಾಲೆಂಟ್ ಸರ್ಚ್ ಸ್ಕೀಮ್ (ಸಿ. ಟಿ. ಎಸ್. ಎಸ್.) ಇದರ ಜ್ಯೂನಿಯರ್ ವಿಭಾಗದ ಶಿಷ್ಯವೇತನಕ್ಕಾಗಿ ಮಂಗಳೂರಿನ ಅರಳು ಪ್ರತಿಭೆಗಳಾದ ಶುಕೀ ರಾವ್ ಹಾಗೂ ಶಿವಾನಿ ಇವರುಗಳು ಭರತನಾಟ್ಯ ವಿಷಯದಲ್ಲಿ ಅಧ್ಯಯನಕ್ಕಾಗಿ ಆಯ್ಕೆಯಾಗಿದ್ದಾರೆ. ಇವರೀರ್ವರು ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟಿ ಇದರ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶ್ ಇವರಲ್ಲಿ ಕಳೆದ ಎಂಟು ವರುಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು ಕೆನರಾ ಹೈಸ್ಕೂಲ್ ಸಿ. ಬಿ. ಎಸ್. ಇ. ಹಾಗೂ ಎಸ್. ಡಿ. ಎಂ. ಸ್ಕೂಲಿನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾಗಿದ್ದಾರೆ.
ಮುಂದೆ ಗುರಿ ಹಿಂದೆ ಗುರು ಇದ್ದರೆ ಸಾಧಕರಿಗೆ ಯಶಸ್ಸು ಸಾಧ್ಯ ಎನ್ನುತ್ತಾರೆ ಅನುಭವಿಗಳು. ಮುನ್ನುಗ್ಗಿ ಮುಂದೆ ಮುಂದೆ ನಡೆಯುವ ಛಲ ಸಾಧಕರಿಗೂ ಇರಬೇಕು. ಇಂತಹ ಒಬ್ಬ ಛಲಗಾರ ಡಾ. ಬಿ. ದೇವೇಂದ್ರಪ್ಪನವರು. ಮುಂದೆ ದಾರಿ ತೋರುವ ಗುರು ಭೌತಿಕವಾಗಿ ಇಲ್ಲದಿದ್ದರೂ, ಗುರು ದ್ರೋಣರ ಮೂರ್ತಿಯನ್ನು ಮುಂದಿಟ್ಟುಕೊಂಡು ಧನುರ್ವಿದ್ಯೆ ಅಭ್ಯಾಸ ಮಾಡಿ ಕರಗತಗೊಳಿಸಿಕೊಂಡಾತ ಏಕಲವ್ಯ. ಇದೇ ರೀತಿಯ ಸಾಧನೆ ಚಿತ್ರದುರ್ಗದ ಮದಕರಿ ನಾಯಕನ ವಂಶಕ್ಕೆ ಸೇರಿದ್ದ ಕಲಾವಿದ ದೇವೇಂದ್ರಪ್ಪನವರದು. 1899 ಜೂನ್ 3ರಂದು ಶಿವಮೊಗ್ಗ ಜಿಲ್ಲೆಯ ಅಯನೂರಿನಲ್ಲಿ ಜನಿಸಿದ ಮಹಾನ್ ಕಲಾವಿದ ಇವರು. ತಂದೆ ಸಂಗೀತ ಮತ್ತು ಭರತನಾಟ್ಯ ಪ್ರವೀಣರಾದ ಬಿ.ಎಸ್. ರಾಮಯ್ಯನವರು, ತಾಯಿ ತುಳಸಮ್ಮ. ತಂದೆಯಿಂದಲೇ ಸಂಗೀತ ಶಿಕ್ಷಣವನ್ನು ಪಡೆದ ಇವರು ಶಾಲಾ ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಸಂಗೀತದಲ್ಲಿ ಆಸಕ್ತಿ, ಶ್ರದ್ಧೆ ಇದ್ದ ಕಾರಣ ತಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿರುವ ಸಿತಾರ್, ಗೋಟುವಾದ್ಯ, ಪಿಟೀಲು, ಜಲತರಂಗ ಮುಂತಾದ ಸಂಗೀತ ಪರಿಕರಗಳನ್ನು ತಾವೇ ಸ್ವತಃ ಅಭ್ಯಾಸಮಾಡಿ ಪ್ರವೀಣರಾದರು. ಖ್ಯಾತ ಸಂಗೀತಗಾರರಾದ ಬಿಡಾರಂ ಕೃಷ್ಣಪ್ಪನವರ…
ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಮೂವರು ಪತ್ರಕರ್ತರು ಭಾಜನರಾಗಿದ್ದಾರೆ ಎಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್ ತಿಳಿಸಿದ್ದಾರೆ. ಹಿರಿಯ ಪತ್ರಕರ್ತ ಕೆ. ಬಿ.ಮಹಂತೇಶ್ ಅವರ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ರೂ.7 ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಪೂರ್ಣಗೊಳ್ಳುವುದು ಎಂದು?’ ಎಂಬ ವರದಿಗೆ ಹೆಚ್.ಜಿ.ರಾಕೇಶ್, ಕೋವರ್ ಕೊಲ್ಲಿ ಇಂದ್ರೇಶ್ ಮತ್ತು ಕುಟುಂಬವರ್ಗ ತಮ್ಮ ತಂದೆ ಬಿ. ವಿ. ಚಂದ್ರಶೇಖರ್ ಹಾಗೂ ತಾಯಿ ಪುಷ್ಪಲತಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಸೋರುತಿಹುದು ಮೀನಾಳ ಮನೆಯ ಮಾಳಿಗೆ” ಎಂಬ ವರದಿಗೆ ಕೆ.ಎಂ.ಇಸ್ಮಾಯಿಲ್ ಕಂಡಕರೆ ಹಾಗೂ ಎಂ. ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ಎಂ. ನಾರಾಯಣ ಹಾಗೂ ತಾಯಿ ಎನ್.ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿಗೆ ಶಕ್ತಿ…
ಮಂಗಳೂರು: ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’ ಕಾರ್ಯಕ್ರಮವು ದಿನಾಂಕ 01 ಜೂನ್ 2025ರ ಭಾನುವಾರದಂದು ಉಪ್ಪಳದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಸಭಾಂಗಣದಲ್ಲಿ ನಡೆಯಿತು. ತುಲುವೆರೆ ಕಲ ಇದರ ಅಧ್ಯಕ್ಷೆಯಾದ ಗೀತಾ ಲಕ್ಷ್ಮೀಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ “ಸಾಹಿತ್ಯ ಹಾಗೂ ಪ್ರಕೃತಿ ಒಂದಕ್ಕೊಂದು ಪೂರಕ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಸಾಂಸ್ಕೃತಿಕ ವೈಶಿಷ್ಟ್ಯ ತುಳುನಾಡಿನಲ್ಲಿದೆ. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವಾಗಬೇಕು. ಶಾಸ್ತ್ರ ಹಾಗೂ ಶಸ್ತ್ರಗಳು ಸಾಹಿತ್ಯದಿಂದ ಶಕ್ತಿಯಾಗುತ್ತದೆ. ಸನಾತನ ಸಂಸ್ಕೃತಿ, ಪ್ರಕೃತಿ, ಭಾಷೆ ಹಾಗೂ ಸಾಹಿತ್ಯಕ್ಕೆ ಬೇರ್ಪಡಿಸಲಾಗದ ಬಂಧವಿದೆ. ಇದರ ಉಳಿವಿಗೆ ಪ್ರಯತ್ನ ಅಗತ್ಯ. ತುಳು ಭಾಷೆ ಇಂದು ಸರ್ವವ್ಯಾಪಿಯಾಗಿದೆ. ಭಾಷೆ, ಸಂಸ್ಕೃತಿ ಬಗೆಗಿನ ಅಭಿಮಾನದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ” ಎಂದರು. ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ, ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಸಂಯೋಜಕರಾದ ಡಾ.ಮಾಧವ…