Subscribe to Updates
Get the latest creative news from FooBar about art, design and business.
Author: roovari
ಮೂಡುಬಿದಿರೆ : ಮೂಡುಬಿದಿರೆ ಜೈನ ಕಾಶಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಟ್ಟಾಭಿಷೇಕ ರಜತ ಮಹೋತ್ಸವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 08.10.2023ನೇ ರವಿವಾರ ಶ್ರೀ ಜೈನ ಮಠ ಮೂಡುಬಿದಿರೆಯ ಭಟ್ಟಾರಕ ಸಭಾಭವನದಲ್ಲಿ ನಡೆಯಿತು. ಮೂಡುಬಿದಿರೆ ಜೈನ ಕಾಶಿ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭಾ ಆಶೀರ್ವಾದಗಳೊಂದಿಗೆ ಶ್ರೀ ಜೈನ ಮಠ ಮೂಡುಬಿದಿರೆ, ಧವಳತ್ರಯ ಶ್ರೀ ಜೈನ ಕಾಶಿ ಟ್ರಸ್ಟ್ (ರಿ), ಶ್ರೀ ಜೈನ ಮಠ ಟ್ರಸ್ಟ್ ಇವುಗಳ ಜಂಟಿ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ “ಶರಸೇತು ಬಂಧ” ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಗಿರೀಶ್ ಮುಳಿಯಾಲ, ಚೆಂಡೆ ಮದ್ದಳೆಗಳಲ್ಲಿ ಶ್ರೀ ದೇವಾನಂದ ಭಟ್ ಬೆಳ್ವಾಯಿ, ಮಾ.ದಿವಿಜೇಶ್ ಭಟ್ ಬೆಳ್ವಾಯಿ, ಮಾ.ಸುಮುಖ್ ತುಲ್ಪುಲೆ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ…
ಕಣಿಯೂರು : ನವರಾತ್ರಿ ಮಹೋತ್ಸವದ ಅಂಗವಾಗಿ ದಿನಾಂಕ 17-10-2023ರ ಮಂಗಳವಾರದಂದು ಸಂಜೆ ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಇವರಿಂದ ಯಕ್ಷಗಾನ ತುಳು ತಾಳಮದ್ದಳೆ ಪಂದುಬೆಟ್ಟು ವೆಂಕಟರಾಯ ವಿರಚಿತ ‘ಕೋಟಿ – ಚೆನ್ನಯ’ ಪ್ರಸಂಗವು ಬಹಳ ಸೊಗಸಾಗಿ ನಡೆಯಿತು. ಭಾಗವತರಾಗಿ ಶ್ರೀ ಸೂರ್ಯನಾರಾಯಣ ಭಟ್ ಕಣಿಯೂರು, ಮದ್ದಳೆ ಮತ್ತು ಚೆಂಡೆವಾದನದಲ್ಲಿ ಶ್ರೀ ರಾಮಮೂರ್ತಿ ಕುದ್ರೆಕೋಡ್ಳು, ಟಿ.ಡಿ.ಗೋಪಾಲಕೃಷ್ಣ ಭಟ್ ಪುತ್ತೂರು, ರಾಮದಾಸ್ ಶೆಟ್ಟಿ ದೇವಸ್ಯ ಹಾಗೂ ಮಾ. ಅದ್ವೈತ್ ಕನ್ಯಾನ ಅವರು ಭಾಗವಹಿಸಿದ್ದರು. ಅರ್ಥಗಾರಿಕೆಯಲ್ಲಿ ಶ್ರೀಗಳಾದ – ಪೆರುಮಳ ಬಲ್ಲಾಳ – ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು, ಕೋಟಿ – ಕೊಳ್ತಿಗೆ ನಾರಾಯಣ ಗೌಡ, ಚೆನ್ನಯ- ದೀಕ್ಷಿತ್ ಕಣಿಯೂರು, ರಾಮ ಜೋಯಿಸ/ಕೇಮರ ಬಲ್ಲಾಳ- ರಾಜಗೋಪಾಲ್ ಕನ್ಯಾನ, ಕಿನ್ನಿದಾರು- ಶ್ರೀಮತಿ ರೇಣುಕಾ ಕಣಿಯೂರು, ಚಂದುಗಿಡಿ- ಶಂಕರ್ ಸಾರಡ್ಕ, ದೇವಣ್ಣ ಬಲ್ಲಾಳ- ಜಯರಾಂ ಭಟ್ ದೇವಸ್ಯ ಅವರು ಸಹಕರಿಸಿದರು. ಶ್ರೀ ಕೊಳ್ತಿಗೆಯವರ ಕೋಟಿಯ ಅರ್ಥವು ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಇದೇ ಸಂದರ್ಭದಲ್ಲಿ ಸುಮಾರು…
ಸುರತ್ಕಲ್ : ಗೋವಿಂದ ದಾಸ ಕಾಲೇಜು ಗ್ರಂಥಾಲಯ, ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶಗಳ ಸಹಭಾಗಿತ್ವದಲ್ಲಿ, ಗೋವಿಂದದಾಸ ಕಾಲೇಜಿನ ಗ್ರಂಥಾಲಯದಲ್ಲಿ ಶಿವರಾಮ ಕಾರಂತರ 121ನೇ ಜನ್ಮ ದಿನಾಚರಣೆಯು ದಿನಾಂಕ 10-10-2023ರಂದು ನಡೆಯಿತು. ಇದರ ಪ್ರಯುಕ್ತ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು “ಶಿವರಾಮ ಕಾರಂತರು ಮಾನವತಾವಾದಿ ಹಾಗು ಪರಿಸರವಾದಿಯಾಗಿ, ನಾಡು-ನುಡಿಗಳ ಚಿಂತಕರಾಗಿದ್ದವರು.” ಎಂದು ನುಡಿದರು. ಕಾಲೇಜಿನ ಉಪಪ್ರಾಂಶುಪಾಲ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಪ್ರೋ. ರಮೇಶ ಭಟ್, ಎಸ್.ಜಿ, ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್, ಉಪನ್ಯಾಸಕರಾದ ಪ್ರೋ. ಕುಮಾರ ಮಾದರ, ಡಾ.ಆಶಾ, ಡಾ. ಪ್ರಶಾಂತ, ಗ್ರಂಥಾಲಯದ ಸಿಬ್ಬಂದಿಗಳಾದ ಸಾವಿತ್ರಿ ಮತ್ತು ಸುಮನ್ ಉಪಸ್ಥಿತರಿದ್ದರು. ಗ್ರಂಥಪಾಲಕಿ ಡಾ. ಸುಜಾತ ಬಿ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅಕ್ಷತಾ ಶೆಟ್ಟಿ ವಂದಿಸಿದರು.
ಮಂಗಳೂರು : ಅಡ್ಯಾರ್ನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಅಕ್ಷಯ ಆರ್. ಶೆಟ್ಟಿಯವರ ‘ಪೆರ್ಗ’ ತುಳು ನಾಟಕ ಕೃತಿ ನಗರದ ಪ್ರೆಸ್ ಕ್ಲಬ್ನಲ್ಲಿ ದಿನಾಂಕ 12-10-2023ರಂದು ಅನಾವರಣಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಹಾವೇರಿ ಜಾನಪದ ವಿವಿಯ ವಿಶ್ರಾಂತ ಉಪ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ, “ತುಳು ಸಾಹಿತ್ಯ ಕ್ಷೇತ್ರದಲ್ಲಿ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿಗಳಿಗಿಂತಲೂ ತುಳು ನಾಟಕ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಳ್ಳುವ ಮೂಲಕ ಅಪಾರ ಕೊಡುಗೆಯನ್ನು ನೀಡಿವೆ. ತುಳುವಿನಲ್ಲಿ 5000ಕ್ಕೂ ಅಧಿಕ ನಾಟಕಗಳು ರಚನೆಯಾಗಿದ್ದು, ಸುಮಾರು 1000ದಷ್ಟು ನಾಟಕ ಕೃತಿಗಳು ಪ್ರಕಟಗೊಂಡಿವೆ. 400ರಷ್ಟು ಕವನ ಸಂಕಲನ, 200ರಷ್ಟು ಕಥಾ ಸಂಕಲನ ಹಾಗೂ 75 ಕಾದಂಬರಿಗಳು ತುಳುವಿನಲ್ಲಿ ಪ್ರಕಟವಾಗಿವೆ. ನವ ಸಾಹಿತಿ, ಲೇಖಕರು ತುಳು ಸಂಸ್ಕೃತಿಯನ್ನು ಹೊಸ ರೀತಿಯ ಶೋಧನೆಯ ಮೂಲಕ ವರ್ತಮಾನದಲ್ಲಿ ಇತಿಹಾಸವನ್ನು ನಾಟಕ, ಕದಾಂಬರಿಗಳ ಮೂಲಕ ಕಟ್ಟಿಕೊಡುವ ಕಾರ್ಯವನ್ನು ನಡೆಸುತ್ತಿರುವುದು ಕಂಡು ಬರುತ್ತಿದೆ. ರತ್ನವರ್ಮ ಹೆಗ್ಗಡೆ ಹಾಗೂ ಎಸ್.ವಿ. ಪಣಿಯಾಡಿ ಅವರಿಂದ ತುಳು ನಾಟಕ ಕೃತಿಗಳಿಗೆ…
ಮೂಡುಬಿದಿರೆ : ಅಶ್ವತ್ಥಪುರದ ಯಕ್ಷಚೈತನ್ಯದ ಹತ್ತೊಂಬತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 08-10-2023ರಂದು ಜರುಗಿದ ಕಾರ್ಯಕ್ರಮದಲ್ಲಿ ಡಾ. ಜೋಶಿಯವರಿಗೆ ನಡೆದಾಡುವ ‘ಜ್ನಾನಕೋಶ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜೋಶಿಯವರು ಯಕ್ಷಗಾನದ ಎಲ್ಲಾ ಆಯಾಮಗಳು ದಾಖಲೀಕರಣವಾಗುತ್ತಿದ್ದು , ಪದವೀದರರು, ಸ್ನಾತ್ತಕೋತ್ತರರು, ಕಾನೂನು ಪದವೀದರರು ಇಂದು ಯಕ್ಷಗಾನದೆಡೆಗೆ ಆಕರ್ಷಿತರಾಗುತ್ತಿರುವುದು ಯಕ್ಷಗಾನದ ಪ್ರಮುಖ ಬೆಳವಣಿಗೆಯಾಗಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ದೇಶಸ್ಥ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಮಠ ನಿತ್ಯಾನಂದರವರು ಮಾತನಾಡಿ “ಇತ್ತೀಚೆಗೆ ಕೆಲವು ಯುವಕಲಾವಿದರಿಂದ ಕೆಲವು ಅಪಸವ್ಯಗಳು ಹಾಗೂ ಯಕ್ಷಗಾನದ ಹೆಸರಲ್ಲಿ ಕೆಲವು ಹಿರಿಯ ಕಲಾವಿದರಿಂದ ಸ್ಥಳೀಯ ದೂರದರ್ಶನದಲ್ಲಿ ಜರುಗುವ ಕೆಲವು ಧಾರವಾಹಿಗಳು ಯಕ್ಷಗಾನಕ್ಕೆ ಸಹ್ಯಬೆಳವಣಿಗೆಯಲ್ಲ” ಎಂದು ಅಭಿಪ್ರಾಯಪಟ್ಟರು. ವೇ.ಮೂ.ಕಂಚಿಬೈಲು ಪ್ರಭಾಕರ ಭಟ್ ಅಶ್ವತ್ಥಪುರ ಇವರು ಆಶೀರ್ವಚನವಿತ್ತರು. ಶ್ರೀ ಮಧ್ಭಾಗವತ ಗ್ರಂಥ ಪ್ರಸಾರ ಅಭಿಯಾನದ ರೂವಾರಿಗಳಾದ ಕಾಯರಗುಡ್ಡೆ ಕೃಷ್ಣಮೂರ್ತಿ, ಶ್ರೀ ಸೀತಾರಾಮಚಂದ್ರ ದೇವಳದ ಮೊಕ್ತೇಸರ ಶಂಕರಮೂರ್ತಿ ಕಾಯರಬೆಟ್ಟು, ಹಿರಿಯ ಅರ್ಥದಾರಿ ಉಜಿರೆ ಅಶೋಕ ಭಟ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಯಕ್ಷಚೈತನ್ಯದ ಅಧ್ಯಕ್ಷರಾದ ಕೃಷ್ಣಮೂರ್ತಿ…
ಬೆಂಗಳೂರು : ಬೆಂಗಳೂರಿನ ‘ಕಲಾವಿಲಾಸಿ’ ಆಯೋಜಿಸುವ “ನಾನು-ನಟ-ಪಾತ್ರ” ಎಂದರೆ? ವಿಷಯವನ್ನು ಆಧರಿಸಿ 5 ದಿನಗಳ ರಂಗ ನಟನಾ ಕಾರ್ಯಗಾರ ನಿರ್ದೇಶಕ ಯತೀಶ್ ಎನ್. ಕೊಳ್ಳೇಗಾಲ ಇವರ ನಿರ್ದೇಹಸನದಲ್ಲಿ ದಿನಾಂಕ 05-11-2023 ರಿಂದ 09-11-2023ರ ವರೆಗೆ ಬೆಂಗಳೂರಿನಲ್ಲಿ ಜಯನಗರದಲ್ಲಿ ನಡೆಯಲಿದೆ. ಈ ಕಾರ್ಯಗಾರದಲ್ಲಿ ಭಾಗಿಯಾದವರಿಗೆ ಅದರ ಮುಂದಿನ ಭಾಗವಾಗಿ ಹೊಸ ನಾಟಕದಲ್ಲಿ ತೊಡಗಿಸಿಕೊಳ್ಳುವ ಅವಕಾಶವಿರುತ್ತದೆ. ಶುಲ್ಕ ಮತ್ತು ಇತರೆ ಮಾಹಿತಿಗೆ 9663523904. 9739398819 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಕಲಾವಿಲಾಸಿ ಬಗ್ಗೆ: ಐದು ವರ್ಷ ಪೂರೈಸಿರುವ ‘ಕಲಾವಿಲಾಸಿ’ ಇದೊಂದು ಆಸಕ್ತ ಯುವ ರಂಗ ಉತ್ಸಾಹಿಗಳು ಕಟ್ಟಿದ ಹವ್ಯಾಸಿ ತಂಡ. ಬೀಚಿಯವರ ಜೀವನ ಆಧಾರಿತ “ಮಾನಸ ಪುತ್ರ” ನಾಟಕದ ಪ್ರದರ್ಶನ ಮೂಲಕ ಆರಂಭವಾದ ಈ ತಂಡದಿಂದ ಇಲ್ಲಿನವರೆಗೂ ಒಟ್ಟು ಹತ್ತು ವೇದಿಕೆಗಳಲ್ಲಿ ಪ್ರದರ್ಶನ ಕಂಡಿದೆ. ರಂಗ ಸಂಘಟನೆಯ ಭಾಗವಾಗಿ ‘ಆಟಮಾಟ’ ಧಾರವಾಡ ತಂಡಕ್ಕೆ ಕಥಾ ನಾಟಕೋತ್ಸವ ಆಯೋಜಿಸುವುದರ ಮೂಲಕ ‘ಕಲಾವಿಲಾಸಿ’ ತಂಡವು ರಂಗ ಸಂಘಟನೆಯ ಮೊದಲ ಹೆಜ್ಜೆಯನ್ನು ಇರಿಸಿತು. 2019ರ ಜೂನ್ 29 ಮತ್ತು 30ರಂದು…
ಮೂಡುಬಿದಿರೆ: ಮೂಡುಬಿದಿರೆಯ ಕನ್ನಡ ಭವನದ ತುಳುಕೂಟದ ಕಛೇರಿಯಲ್ಲಿ ತಿಂಗಳ ಸಭೆ ಹಾಗೂ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ದಿನಾಂಕ 07-10-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಸಂಘಟಕರೂ ಆಗಿರುವ ಎಂ. ದೇವಾನಂದ ಭಟ್ “ ತುಳುನಾಡಿನ ಯಕ್ಷಗಾನ” ಕುರಿತು ಮಾತನಾಡುತ್ತಾ ರಂಗ ಪ್ರವೇಶಕ್ಕೆ ಮುನ್ನ ಯಕ್ಷಗಾನ ಕಲೆಯಲ್ಲಿರುವ ವಿವಿಧ ಹಂತಗಳನ್ನು ಅವರು ಸಮಗ್ರವಾಗಿ ವಿವರಿಸಿದರು. ಕಲಾವಿದನಿಗೆ ನಾಟ್ಯ, ಮಾತುಗಾರಿಕೆ ಮತ್ತು ಪುರಾಣ ಜ್ಞಾನದ ಜೊತೆ ಬಣ್ಣಗಾರಿಕೆಯ ಬಗ್ಗೆಯೂ ಸಂಪೂರ್ಣ ತಿಳುವಳಿಕೆ ಇರಬೇಕಾಗುತ್ತದೆ. “ಯಕ್ಷಗಾನವು ಸಮೃದ್ಧ ಹಾಗೂ ಪರಿಪೂರ್ಣವಾದ ಕಲೆಯಾಗಿದ್ದು ತುಳು ಭಾಷೆಗೂ ಯಕ್ಷಗಾನದ ಕೊಡುಗೆ ಗಣನೀಯವಾಗಿದೆ.”ಎನ್ನುತ್ತಾ ಬೇರೆ ಬೇರೆ ಪಾತ್ರಗಳಿಗೆ ಬಳಸುವ ಬಣ್ಣಗಾರಿಕೆ ಮತ್ತು ವಸ್ತ್ರ ವಿನ್ಯಾಸದ ಬಗ್ಗೆ ವಿವರಣೆ ನೀಡಿದರು. ವಿಶೇಷವಾಗಿ ಬಣ್ಣಗಾರಿಕೆ ಮತ್ತು ವೇಷ ಭೂಷಣಗಳ ಬಗ್ಗೆ ವಿವರಿಸಿದರು. ಕೆಲವು ಪ್ರಸಂಗಗಳ ಆಯ್ದ ತುಳು, ಕನ್ನಡ ಪದ್ಯಗಳನ್ನು ಭಾಗವತರಾದ ಶಿವಪ್ರಸಾದ್ ಭಟ್ ಅವರು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ದೇವಾನಂದ ಭಟ್ ಸಹಕರಿಸಿದರು. ಸಂವಾದ ಕಾರ್ಯಕ್ರಮದ ಕೊನೆಯಲ್ಲಿ…
ಪುತ್ತೂರು : ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ‘ಕಾರಂತ ಬಾಲವನ ಪ್ರಶಸ್ತಿ’ ಪ್ರದಾನ ಸಮಾರಂಭ ಪುತ್ತೂರು ಪರ್ಲಡ್ಕದ ಬಾಲವನದಲ್ಲಿ ದಿನಾಂಕ 10-10-2023ರಂದು ನಡೆಯಿತು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ‘ಕಾರಂತ ಬಾಲವನ ಪ್ರಶಸ್ತಿ’ ಪ್ರದಾನ ಮಾಡಿ ಆಚಾರ್ಯ ದಂಪತಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಪೇಟವಿರಿಸಿ, ಫಲಕ, ಕಾರಂತರ ಪುತ್ಥಳಿ, ಫಲಪುಷ್ಪಗಳೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, “ವಿಶ್ವಕ್ಕೇ ಸಾಧಕರಾಗಿ ಗುರುತಿಸಿಕೊಂಡ ಡಾ. ಶಿವರಾಮ ಕಾರಂತರ ಕರ್ಮಭೂಮಿ ಬಾಲವನ ಇನ್ನಷ್ಟು ಅಭಿವೃದ್ಧಿಯಾಗಬೇಕು. ಕಾರಂತರ ಒಡನಾಡಿಗಳು, ಮುಂದಿನ ಪೀಳಿಗೆಗೆ ಕಾರಂತರ…
ಯಕ್ಷಗಾನವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ನಾಟಕ ರೂಪವಾಗಿದೆ. ಪ್ರಾಚೀನ ಕಾಲದಿಂದಲೂ ಯಕ್ಷಗಾನವು ಶ್ರೀಮಂತ ಮತ್ತು ರೋಮಾಂಚಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ. ಅದು ತನ್ನ ವರ್ಣರಂಜಿತ ವೇಷಭೂಷಣಗಳು, ಲಯಬದ್ಧ ಸಂಗೀತ ಮತ್ತು ಕ್ರಿಯಾತ್ಮಕ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಹೀಗೆ ಈ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ನೀಡುತ್ತಿರುವ ಹಿರಿಯ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟಿ. ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯ ಪಟ್ಲದಲ್ಲಿ 21.10.1966ರಂದು ಮಂಜಪ್ಪ ಶೆಟ್ಟಿ ಹಾಗೂ ಕಮಲಾ ಎಂ ಶೆಟ್ಟಿ ಇವರ ಮಗನಾಗಿ ಜನನ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯ ಗುರುಗಳು ಕುಂಞರಾಮ ಮಣಿಯಾಣಿ (ಪ್ರಥಮ ಗುರುಗಳು)ಯವರಿಂಧ ಕಲಿತು ನಂತರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ. ಒಡನಾಡಿ ಹಿರಿಯರು ಗುರು ಸ್ವರೂಪರೆನಿಸಿದವರು ತೆಕ್ಕಟ್ಟೆ ಆನಂದ ಮಾಸ್ತರರು. ಯಕ್ಷಗಾನ ರಂಗದಲ್ಲಿ ಸರ್ವ ಸಾಧಾರಣ ಎಲ್ಲಾ ವೇಷಗಳು ಮಾಡಿರುವ ಅನುಭವ ಪೆರ್ಲ ಜಗನ್ನಾಥ ಶೆಟ್ಟಿ…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಕವಿಗೋಷ್ಠಿಯನ್ನು ದಿನಾಂಕ 21-10-2023ರಂದು ಶನಿವಾರ ಬೆಳಗ್ಗೆ 11:30ಕ್ಕೆ ಉಡುಪಿ ಕುಂಜಿಬೆಟ್ಟು ಇಲ್ಲಿರುವ ಯು.ಪಿ.ಎಂ.ಸಿ.ಯ ಉಪೇಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಆಶಾ ಕುಮಾರಿಯವರು ಕವಿಗೋಷ್ಠಿಯ ಉದ್ಘಾಟನೆಯನ್ನು ಮಾಡಲಿದ್ದು, ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ರವಿರಾಜ್ ಹೆಚ್.ಪಿ. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಸಾಪ ಉಡುಪಿ ಜಿಲ್ಲೆಯ ಕೋಶಾಧ್ಯಕ್ಷರಾದ ಮನೋಹರ್ ಮತ್ತು ಕವಿಗೋಷ್ಠಿಯ ಸಂಚಾಲಕರಾದ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಭಾಗವಹಿಸಲಿದ್ದು, ಕವಿಗೋಷ್ಠಿಯ ಆಶಯ ನುಡಿಯನ್ನು ಕವಯಿತ್ರಿ ಶ್ರೀಮತಿ ಪೂರ್ಣಿಮಾ ಸುರೇಶ್ ನಿರ್ವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಕವಿ ಹಾಗೂ ರಂಗನಟ ರಾಜೇಶ್ ಭಟ್ ಪಣಿಯಾಡಿ ವಹಿಸಲಿದ್ದು, ಸುಮಾರು ಹನ್ನೊಂದು ಮಂದಿ ಯುವ ಕವಿಗಳು ಭಾಗವಹಿಸಲಿದ್ದಾರೆ ಎಂದು ಕ.ಸಾ.ಪ. ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಹಾಗೂ ರಂಜಿನಿ ವಸಂತ್ ತಿಳಿಸಿರುತ್ತಾರೆ.