Author: roovari

ಬೆಂಗಳೂರು : ಕರ್ನಾಟಕದ ಕ್ರಿಯಾಶೀಲ ರಂಗ ತಂಡಗಳಲ್ಲಿ ಜನಪದರು ಈಗ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಪ್ರದರ್ಶನ ಸರಣಿ “ರಂಗ ಮಾಲೆ -75” ಅಮೃತ ಮಹೋತ್ಸವ ತಿಂಗಳು. ಈ ಕಾರಣಕ್ಕೆ ದಿನಾಂಕ 14-10-2023ರಿಂದ ಮೂರು ದಿನಗಳ ರಂಗ ಸಂಭ್ರಮ ಆಯೋಜನೆ ಮಾಡಿದ್ದು, ಉದ್ಘಾಟನೆ ಮಾಡಿದ ನಾಡಿನ ಸಾಂಸ್ಕೃತಿಕ ರಾಯಭಾರಿ ಸಾಣಿ ಹಳ್ಳಿಯ ಶ್ರೀ ಮಠದ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ “ಜನಪದರು ರಂಗ ಮಂದಿರ ನೋಡಿ ಮಹಾಸಂತಸವಾಗಿದೆ. ನಾನು ರಾಷ್ಟ್ರದ ಹಲವಾರು ರಂಗ ಮಂದಿರ ನೋಡಿದ್ದು, ಆಧುನಿಕ ರಿವಾ ಲಿಂಗ್ ಹೈಡ್ರಾಲಿಕ್ ಅಲ್ಲದೆ ಸುಸಜ್ಜಿತ ಧ್ವನಿ ಬೆಳಕುಗಳು ಹೊಂದಿದೆ. ಶ್ರೇಷ್ಠ ಆಸನ ಹಾಗೂ ಹವಾ ನಿಯಂತ್ರಿತ ಸೌಲಭ್ಯ ಕೇವಲ ಜನರ ಸಹಕಾರದಿಂದ ಮಾಡಿದ ಈ ಘನ ಕಾರ್ಯ ಅಧ್ಯಕ್ಷ ಪಾಪಣ್ಣ ಕಾಟಂ ನಲ್ಲೂರು ಮತ್ತು ತಂಡ ಅಭಿನಂದನಾರ್ಹರು. ಇದರೊಂದಿಗೆ ನಮ್ಮ ಶಿವಸಂಚಾರ ಹಾಗೂ ಇತರೇ ರಂಗ ತಂಡಗಳ ನಾಟಕ ನಿಮಗೆ ತಲುಪಿಸಲು ಹಾಗೆ, ದಾಸೋಹದ ಅರಿವು…

Read More

ಮಂಗಳೂರು : ಪೇಜಾವರ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’ವು ದಿನಾಂಕ 14-10-2023ರಂದು ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಬಿದ್ರೆ ಶಾಸಕ ಶೀ ಉಮಾನಾಥ ಕೋಟ್ಯಾನ್ ಇವರು ಮಾತನಾಡುತ್ತಾ “ಯುಕ್ಷರಂಗವು ಇಂದು ಸಮೃದ್ಧವಾಗಿ ಬೆಳೆದು ನಿಲ್ಲಲು ಹವ್ಯಾಸಿ ರಂಗಭೂಮಿಯೂ ಕಾರಣ. ಎಷ್ಟೋ ಹವ್ಯಾಸಿ ಕಲಾವಿದರು ಪ್ರಬುದ್ಧತೆ ಮೆರೆದು ಯಕ್ಷರಂಗ ಭೂಮಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ರವಿ ಅಲೆವೂರಾಯರಂತಹಾ ಯಕ್ಷಗುರುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ಕಡೆಗಳಲ್ಲಿ ಯಕ್ಷ ತರಗತಿಗಳನ್ನು ನಡೆಸುತ್ತಾ ಮುಂದಿನ ಯಕ್ಷ ಪೀಳಿಗೆಗಳನ್ನು ಈ ರಂಗಕ್ಕೆ ಕೊಡುಗೆಯಾಗಿ ನೀಡಿ ಯಕ್ಷಮಾತೆಯ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇಂದು ಶ್ರೀ ಸೋಮನಾಥೇಶ್ವರ ಯಕ್ಷ ನಿಧಿ ಸಂಸ್ಥೆ ಅವರಿಗೆ ಗೌರವ ಸನ್ಮಾನವನ್ನು ನೀಡಿದೆ. ಅವರಿಂದ ಇನ್ನೂ ಸ್ಫೂರ್ತಿಯುತವಾಗಿ ಯಕ್ಷ ಸೇವೆ ಜರಗಲಿ” ಎ೦ದು ಹೇಳಿದರು. ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗುರು ಶ್ರೀ…

Read More

ತುಮಕೂರು : ಯಕ್ಷಗಾನ ಸಾಂಸ್ಕೃತಿಕ ವೇದಿಕೆ ತುಮಕೂರು ಮತ್ತು ಶ್ರೀ ಕೃಷ್ಣ ಮಂದಿರ ತುಮಕೂರು ಇವರ ಸಹಯೋಗದಲ್ಲಿ ‘ಸುಧನ್ವ ಕಾಳಗ’ ಯಕ್ಷಗಾನ ಬಯಲಾಟವು ದಿನಾಂಕ 28-10-2023ರ ಶನಿವಾರ ಸಂಜೆ ಘಂಟೆ 4.30ಕ್ಕೆ ತುಮಕೂರಿನ ಶ್ರೀ ಕೃಷ್ಣ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಕರ್ನಾಟಕ ಯಕ್ಷಧಾಮ ಮಂಗಳೂರು ಇವರ ನೇತೃತ್ವದಲ್ಲಿ ಯಕ್ಷಗಾನದ ಅಗ್ರಗಣ್ಯ ಕಲಾವಿದರ ಕೂಡುವಿಕೆಯಲ್ಲಿ ಪ್ರಸ್ತುತಪಡಿಸುವ ಈ ಯಕ್ಷಗಾನ ಪೌರಾಣಿಕ ಪ್ರಸಂಗದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಸುಬ್ರಾಯ ಹೆಬ್ಬಾರ, ಅಕ್ಷಯ ಕುಮಾರ, ಶ್ರೀನಿವಾಸ ಪ್ರಭು, ಪ್ರಸನ್ನ ಶೆಟ್ಟಿಗಾರ, ಶಶಿಕಾಂತ ಶೆಟ್ಟಿ, ಪ್ರಶಾಂತ ಹೆಗಡೆ, ಜನಾರ್ದನ ಹಂದೆ, ರಾಮಕೃಷ್ಣ ಭಟ್, ಅಂಬರೀಷ ಭಟ್‌ ಹಾಗೂ ಲಕ್ಷ್ಮೀ ಪ್ರಸಾದ ಭಾಗವಹಿಸಲಿದ್ದಾರೆ. ಕಲಾವಿದ , ಕವಿ, ಸಾಹಿತಿ, ಗಾಯಕ ಮತ್ತು ಸಂಘಟಕರಾದ ಹೆಚ್‌. ಜನಾರ್ದನ ಹಂದೆ ಮಂಗಳೂರು ಇವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಯ.ಸಾಂ. ವೇದಿಕೆ ತುಮಕೂರಿನ ಪ್ರಧಾನ ಸಂಚಾಲಕರುಗಳಾದ ನಾಗರಾಜಧನ್ಯ.ಕೆ ಹಾಗೂ ಅನಂತರಾವ್.ಕೆ ಮತ್ತು ಸಂಚಾಲಕರುಗಳು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಸ್ಟಾಕ್‌ ಹೋಂ : ಈ ಬಾರಿಯ ‘ಸಾಹಿತ್ಯದ ನೊಬೆಲ್’ ಪಾರಿತೋಷಕಕ್ಕೆ ಭಾಜನರಾಗಿರುವ ಕಾದಂಬರಿ, ಕವಿತೆ, ಪ್ರಬಂಧ, ಮಕ್ಕಳ ಸಾಹಿತ್ಯದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದಿರುವ ನಾರ್ವೆಯ ಖ್ಯಾತ ಲೇಖಕ ಜಾನ್ ಫೋಸ್ಸೆ ಅವರು ಸೃಜನಶೀಲ ಲೇಖಕರೆನ್ನಿಸಿಕೊಂಡಿದ್ದಾರೆ. ಫೋಸ್ಸೆ ಬಳಸುವ ನ್ಯೂ ನಾರ್ವೆ ಭಾಷೆಯನ್ನು ದೇಶದ ಕೇವಲ ಶೇ.10 ಜನ ಮಾತ್ರ ಬಳಸುತ್ತಾರೆ. ಈ ಭಾಷೆಯನ್ನು 19ನೇ ಶತಮಾನದಲ್ಲಿ ಗ್ರಾಮೀಣ ಆಡುಭಾಷೆಯೊಂದಿಗೆ ರೂಪಿಸಲಾಗಿದೆ. ಅಲ್ಲಿ ಹೆಚ್ಚಾಗಿ ಮಾತನಾಡುವ ಡ್ಯಾನಿಶ್ ಭಾಷೆ‌ಗೆ ಪರ್ಯಾಯವಾಗಿ ಸ್ಥಳೀಯ ಭಾಷೆ ಎಂದು ಇದನ್ನು ಪರಿಗಣಿಸಲಾಗುತ್ತದೆ. ನಾರ್ವೆಯ ಅಧಿಕೃತ ಭಾಷೆಯಾದ ‘ನಾರ್ವೇಜಿಯನ್ ನೈನೋರ್‌ಸ್ಟ್’ ನಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಾದೇಶಿಕ ಅಸ್ಮಿತೆ ಮತ್ತು ಭಾಷೆಯ ಜತೆ ಅವರು ಆಧುನಿಕ ಕಲಾತ್ಮಕ ತಂತ್ರಗಳನ್ನು ಬೆಸೆದಿರುವುದು ವಿಶೇಷ. ಖ್ಯಾತ ಸಾಹಿತಿಗಳಾದ ಸ್ಯಾಮ್ಯೂಯಲ್ ಬೆಕೆಟ್, ಥಾಮಸ್ ಬೆರ್ನಾರ್ಡ್ ಅವರನ್ನು ಫೋಸ್ಸೆ ಅವರ ಬರಹಗಳು ನೆನಪಿಸುತ್ತವೆ. ಹೊಸ ನಮೂನೆಯ ನಾಟಕಗಳು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾದ ಗದ್ಯಕ್ಕಾಗಿ ಜಾನ್ ಫೋಸ್ಸೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ…

Read More

ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಪ್ರಸ್ತುತ ಪಡಿಸುವ ‘ವಿಜಯದಶಮಿ ಸಂಗೀತೋತ್ಸವ ಮತ್ತು ರಜತ ಸಂಭ್ರಮ -2023’ ಕಾರ್ಯಕ್ರಮವು ಉಡುಪಿಯ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ದಿನಾಂಕ 24-10-2023ರಂದು ಬೆಳಿಗ್ಗೆ 8.30ರಿಂದ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಕ್ಯಾಪ್ಟನ್ ಶ್ರೀ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಮತ್ತು ಪರ್ಕಳದ ಉದ್ಯಮಿಗಳಾದ ರೊ. ಎಂ.ಪಿ.ಎಚ್.ಎಫ್.ಶ್ರೀ ಮಂಜುನಾಥ ಉಪಾಧ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಪಾಡಿಗಾರು ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ಬೆಳಿಗ್ಗೆ 8.30ರಿಂದ ಪಿಳ್ಳಾರಿ ಗೀತೆಗಳು, 9.00ಕ್ಕೆ ಹೊಸ ಸಂಗೀತ ಪಾಠ, 10.20ರಿಂದ ಕು.ನೀಹಾರಿಕಾ ದೇರಾಜೆ ಅವರ ಹಿಂದುಸ್ತಾನಿ ಗಾಯನಕ್ಕೆ ತಬಲಾದಲ್ಲಿ ಭಾರವಿ ದೇರಾಜೆ ಮತ್ತು ಹಾರ್ಮೋನಿಯಂನಲ್ಲಿ ಆದಿತ್ಯ ಭಟ್ ಪಾಣೆಮಂಗಳೂರು ಇವರು ಸಾಥ್ ನೀಡಲಿದ್ದಾರೆ. 11.30ರಿಂದ ‘ಕೃಷ್ಣ ಗಾನ ಸುಧಾ’ ಸದಸ್ಯರಾದ ಉಷಾ ಹೆಬ್ಬಾರ್ ಮತ್ತು ಶಿಷ್ಯರಿಂದ ಭಕ್ತಿ ಸಂಗೀತ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು (ರಿ.) ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ರಂಗಚಿನ್ನಾರಿಯ ಸಂಗೀತ ಘಟಕ ‘ಸ್ವರ ಚಿನ್ನಾರಿ’ ಏರ್ಪಡಿಸುವ ‘ಸ್ವರ ಸಂಗೀತ ಶಿಬಿರ’ವು ದಿನಾಂಕ 28-10-2023ರಂದು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ, ಅಂತರಾಷ್ಟ್ರೀಯ ಖ್ಯಾತಿಯ ಮೆಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ನಿರ್ದೇಶನದಲ್ಲಿ ಈ ಶಿಬಿರವು ನಡೆಯಲಿದ್ದು, ಭಾಗವಹಿಸುವವರು ಶಿಬಿರ ಸಂಚಾಲಕರಾದ ಸ್ವರ ಚಿನ್ನಾರಿಯ ಕಾರ್ಯದರ್ಶಿಯಾದ ಕಿಶೋರ್ ಪೆರ್ಲ 8075284452 ಮತ್ತು ಜೊತೆ ಕಾರ್ಯದರ್ಶಿಯಾದ ಪ್ರತಿಜ್ಞಾ ರಂಜಿತ್ 9741919699 ಇವರಲ್ಲಿ ಹೆಸರು ನೋಂದಾಯಿಸಬಹುದು.

Read More

ಕೋಟ : ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ ಸಭಾಂಗಣದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇದರ ಸಹಯೋಗದಲ್ಲಿ ದಿನಾಂಕ 10-10-2023ರಂದು ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ‘ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ ಸಮಾರಂಭ ‘ಇಂಪನ’ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಇವರು ಉದ್ಘಾಟಿಸಿ, ಸಂಗೀತಗಾರ ಡಾ. ವಿದ್ಯಾಭೂಷಣ ಅವರಿಗೆ ‘ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡುತ್ತಾ “ಶಿವರಾಮ ಕಾರಂತರು ತಮ್ಮ ಜೀವನದಲ್ಲಿ ಕಲೆ, ಸಾಹಿತ್ಯ, ಪರಿಸರ, ಸಮಾಜಸೇವೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅವು ಸಮಾಜಕ್ಕೆ ನೀಡಿದ ಮಾರ್ಗದರ್ಶನವಾಗಿದೆ. ಭಾರತೀಯ ಸಂಸ್ಕೃತಿ, ಧರ್ಮ, ಸಂಸ್ಕಾರದೊಂದಿಗೆ ಮಾನವೀಯ ಗುಣವುಳ್ಳ ಜನರು ತಯಾರಾದರೆ ಭಾರತ ವಿಶ್ವ ಗುರುವಾಗಲು ಸಾಧ್ಯ. ಕಲೆ, ಧರ್ಮ, ಸಂಸ್ಕೃತಿಯ ಸಮನ್ವಯದ ಅತ್ಯಗತ್ಯವಿದ್ದು, ತುಳುನಾಡಿನ ಸಮೃದ್ಧ ವಿರಾಸತ್‌ ಜಗತ್ತಿಗೆ ತಲುಪಬೇಕು. ಕಲೆ, ಸಾಂಸ್ಕೃತಿಕ ವಿರಾಸತ್ ಭಾರತದ ಜೀವಾಳ, ಈ ನಿಟ್ಟಿನಲ್ಲಿ ಮಕ್ಕಳಿಗೆ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವರ್ಷಂಪ್ರತಿ ಜಿಲ್ಲೆಯ ಮಹಿಳಾ ಲೇಖಕರಿಗೆ ಕೊಡಮಾಡುವ ಪ್ರತಿಷ್ಠಿತ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ಗೆ 2023-24 ಸಾಲಿಗೆ ಈರಮಂಡ ಹರಿಣಿ ವಿಜಯ್‌ ಹಾಗೂ ಕಟ್ರತನ ಲಲಿತಾ ಅಯ್ಯಣ್ಣ ಆಯ್ಕೆಯಾಗಿದ್ದಾರೆ. ಈ ಬಾರಿ ಗೌರಮ್ಮ ದತ್ತಿ ಪ್ರಶಸ್ತಿಗೆ 12 ಲೇಖಕರು 15 ಪುಸ್ತಕಗಳನ್ನು ಕಳುಹಿಸಿದ್ದರು. ಇದರಲ್ಲಿ ಈರಮಂಡ ಹರಿಣಿ ವಿಜಯ್ ಅವರ ‘ಅಗ್ನಿ ಯಾತ್ರೆ’ ಮತ್ತು ಕಟ್ರತನ ಲಲಿತಾ ಅಯ್ಯಣ್ಣ ಅವರ ‘ಕಡಲಾಳದ ಮುತ್ತುಗಳು’ ಪುಸ್ತಕಗಳು ಸಮಾನ ಅರವತ್ತು ಅಂಕಗಳನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಪ್ರಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ನೀಡಲಾಗುತ್ತಿದೆ. ಜಿಲ್ಲಾ ಕಸಾಪದಿಂದ ದಿನಾಂಕ 27-10-2023ರಂದು ಮಧ್ಯಾಹ್ನ 1.30ಕ್ಕೆ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಗೌರಮ್ಮ ದತ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾವುದು. ಸಮಾರಂಭದಲ್ಲಿ ಗೌರಮ್ಮ ದತ್ತಿ ಕಥಾ ಸ್ಪರ್ಧಾ ವಿಜೇತರಿಗೂ ಬಹುಮಾನ ವಿತರಿಸಲಾಗುತ್ತದೆ. ಈ ಬಾರಿಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕುಶಾಲನಗರದ ಫಾತಿಮಾ ಪ್ರೌಢ ಶಾಲೆಯ ತನ್ಮಯಿ ಎ.ಸಿ.,…

Read More

ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯು ಬೇರೆ ಬೇರೆ ಕಲೆಗಳ ಜೊತೆಗೆ ಯಕ್ಷಗಾನವನ್ನು ಆರಾಧಿಸುವ ಜಿಲ್ಲೆಯಾಗಿ, ಯಕ್ಷಗಾನಕ್ಕೆ ಸ್ತ್ರೀ, ಪುರುಷ ಭೇದವಿಲ್ಲದೇ ಅನೇಕ ಪ್ರಸಿದ್ಧ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಕೆಲವರು ಯಕ್ಷಗಾನ ಪ್ರಿಯರು ಸಿಗಬಹುದು, ಆದರೆ ಯಕ್ಷಗಾನ ಪ್ರೀತಿಸುವುದರ ಜೊತೆಗೆ ಕಲಾವಿದರ ಕುಟುಂಬ ಕೂಡ ಇದೆ ಎಂದು ಗೊತ್ತಾಗಿದ್ದು ಆಗ್ನೇಯ ಭಟ್ ಕ್ಯಾಸನೂರು ಅವರ ಪರಿಚಯ ಆದ ಮೇಲೆಯೇ. ಹವ್ಯಾಸಿ ಯಕ್ಷಗಾನ ಕಲಾವಿದರಾದ ಆಗ್ನೇಯ ಭಟ್ ಕ್ಯಾಸನೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನ ಅಶೋಕ ಭಟ್ ಹಾಗೂ ಪೂರ್ಣಿಮಾ ದಂಪತಿಯರ ಮಗನಾಗಿ, ಅಪೂರ್ವ ದುರ್ಗಪ್ರಸಾದ್ ಜೋಯ್ಸ್ ಇವರ ಪ್ರೀತಿಯ ತಮ್ಮನಾಗಿ 17-10-1995ರಂದು ಜನನ. MA, B.Ed in samskrutha ಇವರ ವಿದ್ಯಾಭ್ಯಾಸ. ಅಧ್ಯಾಪಕ ವೃತ್ತಿ, ಯಕ್ಷಗಾನ ಪ್ರವೃತ್ತಿ. ಇದರ ಜೊತೆಗೆ ಪ್ರಸ್ತುತ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಚಾಮರಾಜಪೇಟೆ ಬೆಂಗಳೂರು ಇದರ ಅಡಿಯಲ್ಲಿ ಪಿಎಚ್ಡಿ ಕೂಡ ಮಾಡುತ್ತಿದ್ದಾರೆ, ಜ್ಯೋತಿಷ್ಯ ಶಾಸ್ತ್ರವನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಅದರಲ್ಲಿ…

Read More

ಸೋಮವಾರ ಪೇಟೆ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಘಟಕ, ಐಗೂರು ಗ್ರಾಮದ ಕ.ಸಾ.ಪ. ಹೋಬಳಿ ಘಟಕ ಮತ್ತು ಎಡವಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ‘ಎಸ್.ಎಸ್. ರಾಮಮೂರ್ತಿ ದತ್ತಿ ಉಪನ್ಯಾಸ’ ಕಾರ್ಯಕ್ರಮವು ಎಡವಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 07-10-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಐಗೂರು ಅರೆಭಾಷೆ ಗೌಡ ಸಮಾಜದ ಅಧ್ಯಕ್ಷರಾದ ಬಾರನ ಭರತ್ ಕುಮಾರ್ ಮಾತನಾಡಿ “ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಭಾಷಾ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಬೇಕು. ಕನ್ನಡದ ಮಣ್ಣಿನಲ್ಲಿ ಬದುಕುವ ಎಲ್ಲ ಜಾತಿ ಜನಾಂಗದವರು ಕನ್ನಡ ಭಾಷೆಯನ್ನು ಮಾತನಾಡಬೇಕು” ಎಂದರು. ಐಗೂರುವಿನ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಚಂಗಪ್ಪ ಡಿ.ಎಸ್. ಇವರು ‘ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕನ್ನಡದ ಕವಿಗಳ ಕೊಡುಗೆ’ ಎಂಬ ವಿಚಾರ ಕುರಿತು ಉಪನ್ಯಾಸ ನೀಡಿ “ಕನ್ನಡ ಭಾಷೆಯ ಅಳಿವು ಉಳಿವು ನಮ್ಮ ಕೈಯಲ್ಲಿದ್ದು, ಹೆಚ್ಚು…

Read More