Author: roovari

ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ 55ನೇ ವರ್ಷದ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮೆ – ಸರ್ವೆ ಸಹಯೋಗದಲ್ಲಿ ದಿನಾಂಕ 26-08-2023ರಿಂದ 01-09-2023ರವರೆಗೆ ‘ಶ್ರೀ ರಾಮಾಯಣ ದರ್ಶನಂ ತಾಳಮದ್ದಳೆ ಸಪ್ತಾಹ’ವು ಮಠದಲ್ಲಿ ಜರಗಲಿದೆ. ದಿನಾಂಕ 26-08-2023ನೇ ಶನಿವಾರದಂದು ಕಲ್ಲಮೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ದೀಪ ಪ್ರಜ್ವಲಿಸಿ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಬಳಿಕ ‘ಶ್ರೀರಾಮ ವನ ಗಮನ’ ತಾಳಮದ್ದಳೆ ಜರಗಲಿದೆ. ದಿನಾಂಕ 27-08-2023ರಂದು ‘ಭರತಾಗಮನ’, 28-08-2023ರಂದು ‘ಪಂಚವಟಿ’, 29-08-2023ರಂದು ‘ವಾಲಿ ಮೋಕ್ಷ’, 30-08-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ‘ಚೂಡಾಮಣಿ’, ದಿನಾಂಕ 31-08-2023ರಂದು ‘ಅತಿಕಾಯ ಮೋಕ್ಷ’ ಹಾಗೂ ಸಪ್ತಾಹದ ಕೊನೆಯ ದಿನ 01-09-2023ರಂದು ಸಂಜೆ 5.30ರಿಂದ ‘ಶ್ರೀ ರಾಮ ನಿರ್ಯಾಣ’ ತಾಳಮದ್ದಳೆ ನಡೆಯಲಿದೆ. ಈ ಸಪ್ತಾಹದಲ್ಲಿ ಪ್ರಸಿದ್ಧ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರು ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದ್ದು, ಸಪ್ತಾಹದ ಯಶಸ್ಸಿಗೆ ಕಲಾಭಿಮಾನಿಗಳು ಸರ್ವ…

Read More

ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಕೋಡಿಂಬಾಡಿ ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ  ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ಸರಕಾರಿ ಪ್ರೌಢ ಶಾಲೆ ಶಾಂತಿನಗರದಲ್ಲಿ ಗ್ರಾಮ ಸಾಹಿತ್ಯ ಸಂಭ್ರಮದ 8ನೇ ಸರಣಿ ಕಾರ್ಯಕ್ರಮ ದಿನಾಂಕ 26-08-2023ರಂದು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೋಡಿಂಬಾಡಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕ.ಸಾ.ಪ. ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಶ್ರೀ ಉಮೇಶ್ ನಾಯಕ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಕೋಡಿಂಬಾಡಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರೋಹಿತ್, ಸಿ.ಆರ್.ಪಿ.ಒ. ಶ್ರೀ ಮಹಮ್ಮದ್ ಅಶ್ರಫ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಪ್ರಕಾಶ್ ಗೌಡ ಭಾಗವಹಿಸಲಿರುವರು. ಹಿರಿಯ ಸಾಹಿತಿಗಳಾದ ಶ್ರೀ ರಾಜೇಂದ್ರ ಆರಿಗ, ಪತ್ರಕರ್ತ ಶ್ರೀ ಸಂತೋಷ್ ಕುಮಾರ್, ನಾಟಕ ರಚನೆಕಾರರಾದ…

Read More

ಗೋಕರ್ಣ : ಪರಮಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಶ್ರೀರಾಮಚಂದ್ರಾಪುರ ಮಠ ಇವರ ಆಶ್ರಯ ಮತ್ತು ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 26-08-2023 ಶನಿವಾರ ಮಧ್ಯಾಹ್ನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರ, ಅಶೋಕೆ, ಗೋಕರ್ಣ ಇಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್‌ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 15 ಕಛೇರಿಗಳು ನಡೆದಿದ್ದು, ಇದು 16ನೆಯ ಸಂಗೀತ ಕಛೇರಿಯಾಗಿರುತ್ತದೆ. ‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮಣಿಪಾಲ, ಅದಿತಿ ಪ್ರಹ್ಲಾದ್ ಬೆಂಗಳೂರು, ಆಶ್ವೀಜಾ ಉಡುಪ ಕಿನ್ನಿಗೋಳಿ, ಮೇಧಾ ಉಡುಪ ಮಂಗಳೂರು ಮತ್ತು ಶರಣ್ಯಾ ಕೆ.ಎನ್. ಸುರತ್ಕಲ್,…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತ ಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಕೊಡ್ಲಿಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ‘ಆರೋಡ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ. ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮದಂತೆ ಶರಣ ಸಂಸ್ಕೃತಿಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಕೊಡ್ಲಿಪೇಟೆಯ ಹಲಸಿನಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 26-08-2023ರಂದು ಬೆಳಿಗ್ಗೆ 11:00 ಗಂಟೆಗೆ ಏರ್ಪಡಿಸಲಾಗಿದೆ‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವ ಕಾಮತ್ ಇವರು ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಶೀರ್ವಚನವನ್ನು ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸದಾಶಿವ ಸ್ವಾಮೀಜಿಗಳು ನೀಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಶ್ರೀ ಎಚ್.ಎಸ್. ಚಂದ್ರಮೌಳಿ ನೆರವೇರಿಸಲಿದ್ದಾರೆ.…

Read More

ಕುತ್ತಾರು ಪದವು  : 76ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಯ ಪ್ರಯುಕ್ತ ಯಕ್ಷನಂದನ ಪಿ.ವಿ. ಐತಾಳರ ಇಂಗ್ಲಿಷ್ ಯಕ್ಷಗಾನ ಬಳಗ ಮತ್ತು ರೋಟರಿ ಕ್ಲಬ್ ಪೋರ್ಟ್ ಟೌನ್ ಪಣಂಬೂರು ಇದರ ವತಿಯಿಂದ ಕುತ್ತಾರು ಪದವಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ಜತೆಗೂಡಿ ನಡೆಸುವ ಸಾಂಸ್ಕೃತಿಕ, ನಲಿವು ಸಂಭ್ರಮ ಕಾರ್ಯಕ್ರಮ ದಿನಾಂಕ 15-08-2023ರಂದು ನಡೆಯಿತು. ಬಾಲ ಸಂರಕ್ಷಣ ಕೇಂದ್ರ ಕುತ್ತಾರು ಪದವು ಇದರ ಸಂಚಾಲಕರಾದ ಶ್ರೀ ಪಿ. ಅನಂತ ಕೃಷ್ಣ ಭಟ್ ಅವರು “ಯಕ್ಷನಂದನ ಜತೆಯಾಗಿ ಮಾಡಿದ ಕಾರ್ಯಕ್ರಮ ಮಕ್ಕಳಿಗೆ ಆನಂದ ಜತೆಗೆ ಬಾಲ್ಯದಲ್ಲಿನ ಸಂಭ್ರಮದ ಆಚರಣೆಯಾಗಿದೆ. ಪ್ರತೀ ವರ್ಷ ಮಾಡುತ್ತಿರುವ ಈ ಸೇವೆ ಶ್ಲಾಘನೀಯ” ಎಂದರು. ರೋಟರಿ ಪೋರ್ಟ್ ಟೌನ್ ಅಧ್ಯಕ್ಷರಾದ ಕೋಮಲ ರಾಮನ್, ಯಕ್ಷನಂದನದ ಸದಸ್ಯೆ ಸೌಜನ್ಯ ಶ್ರೀಕುಮಾರ್ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಯಕ್ಷನಂದನದ ಅಧ್ಯಕ್ಷ ಡಾ. ಪಿ. ಸತ್ಯಮೂರ್ತಿ ಐತಾಳ, ವಾಣಿ ಎಸ್. ಐತಾಳ, ಶ್ಯಾಮಲಾ ಎಸ್. ಐತಾಳ, ರೋಟರಿ ಪಣಂಬೂರಿನ ಪಿ. ರಾಜೇಂದ್ರ ಬಸವರಾಜ್, ನವೀನ್ ಕುಮಾರ್,…

Read More

ಮಂಗಳೂರು : ಗುರುಕುಲ ಕಲಾ ಪ್ರತಿಷ್ಠಾನ ದಕ್ಷಿಣ ಕನ್ನಡ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಸಡಗರವನ್ನು ಸಾಹಿತ್ಯ ಗೋಷ್ಠಿಯ ಮೂಲಕ ಸ್ಥಳೀಯ ಸ್ಕೌಟ್ ಮತ್ತು ಗೈಡ್ಸ್ ಸಭಾಭವನದಲ್ಲಿ ದಿನಾಂಕ 15-08-2023ರಂದು ಅದ್ದೂರಿಯಾಗಿ ಆಚರಿಸಲಾಯಿತು. ಉತ್ಸವದ ಅಂಗವಾಗಿ ಮೂವರು ಸಾಧಕರಾದ ಹಿರಿಯ ಯಕ್ಷಗಾನ ಕವಿ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ, ಅಬೂಬಕ್ಕರ್ ಕೈರಂಗಳ ಮತ್ತು ಯು.ಆರ್. ಶೆಟ್ಟಿಯವರಿಗೆ ಸನ್ಮಾನ ಮತ್ತು ಅಂತರ್ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮಾನಸಾ ಕೈಂತಜೆಯವರ ಸಾರಥ್ಯದಲ್ಲಿ ನಡೆದ ಈ ಸಮಾರಂಭದ ಉದ್ಘಾಟನೆಯನ್ನು ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್ ವಹಿಸಿದ್ದರು. ಅವರು ಮಾತನಾಡುತ್ತಾ “ಸಾಹಿತ್ಯಕ್ಕೆ ಪರಿಧಿಯೇ ಇಲ್ಲ. ದೇಶ ವಿದೇಶಗಳಲ್ಲಿಯೂ ಕನ್ನಡದ ಕಂಪು ಪಸರಿಸುತ್ತಿದೆ. ಒಂದು ಉತ್ತಮ ಸ್ವಾತಂತ್ರ್ಯ ಸಂಭ್ರಮದ ಈ ಗಳಿಗೆ ಅತ್ಯಮೂಲ್ಯ” ಎಂದರು. ಮುಖ್ಯ ಅತಿಥಿಗಳಲ್ಲೊಬ್ಬರಾದ ಮಂಗಳೂರಿನ ಮೂಲವ್ಯಾಧಿ ಮತ್ತಿತರ ರೋಗಗಳ ಮಿಶ್ರಪದ್ಧತಿ ತಜ್ಞ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು “ಗುರುಕುಲ ಎಂಬ ಅನ್ವರ್ಥ ನಾಮಧೇಯವಿರುವ ಈ ಸಂಸ್ಥೆಯ ಕಾರ್ಯ ವೈಖರಿಗಳು ಜನ ಸಂಕುಲದಲ್ಲಿ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ʻಅಂಕಿತ ಪುಸ್ತಕ ಪುರಸ್ಕಾರʼ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 18-08-2023ರಂದು ನಡೆಯಿತು. ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಸರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶಕುಮಾರ ಎಸ್‌.ಹೊಸಮನಿ ಅವರು “ಸಾಮಾಜಿಕ ಬದಲಾವಣೆ ಸಾಹಿತ್ಯದಿಂದಲೇ ಸಾಧ್ಯ. ರಾಜ್ಯಾದಂತ ಇರುವ ಸಾಹಿತಿಗಳು, ಲೇಖಕರು ಪ್ರಕಾಶಕರು ಅಕ್ಷರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಜೊತೆಗೆ ಶ್ರೀ ಸಾಮಾನ್ಯ ವ್ಯಕ್ತಿಗಳ ವಿಶ್ವ ವಿದ್ಯಾಲಯ ಎಂದು ಗುರುತಿಸಿಕೊಂಡ  ಗ್ರಂಥಾಲಯಗಳನ್ನು ಉಳಿಸಿದ್ದರು ಅದೇ ಸಾಹಿತ್ಯ. ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರಕಾಶಕರ ಕೊಡುಗೆ ಮರೆಯುವಂತಿಲ್ಲ” ಎಂದು ಹೇಳಿದರು. ಕನ್ನಡ ಪುಸ್ತಕಗಳ ಡಿಜಿಟಲೀಕರಣವನ್ನು ಮಾಡುತ್ತಿರುವುದರ ಕುರಿತು ವಿವರಗಳನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲೇಖಕ ಹಾಗೂ ಪತ್ರಕರ್ತರಾದ ಶ್ರೀ ಗಿರೀಶ್‌ರಾವ್‌ ಹತ್ವಾರ್‌ (ಜೋಗಿ) ಮಾತನಾಡಿ “ಪ್ರಕಾಶಕರಿಗೆ ಪ್ರಶಸ್ತಿಗಳನ್ನು ಕೊಡುವ ಪದ್ಧತಿ ತೀರಾ ಕಡಿಮೆ. ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಂತೆ ಲೇಖಕರ ಸಂಘವು ಪ್ರಕಾಶಕರಿಗೆ ಗುರುತಿಸುವ ಕೆಲಸ…

Read More

ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ಪ್ರಕಟಿಸಿದ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನ “ಯಕ್ಷ ದೀವಟಿಗೆ” ದಿನಾಂಕ 14-08-2023ರ ಸೋಮವಾರದಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕರು, ಅರ್ಥಧಾರಿಗಳು ಹಾಗೂ ಯಕ್ಷಗಾನ ವಿದ್ವಾಂಸರೂ ಆದ ಡಾ.ಎಂ.ಪ್ರಭಾಕರ ಜೋಷಿಯವರು “ಯಕ್ಷಗಾನವು ರೂಪ ಪ್ರಧಾನವಾದ ಕಲೆ. ಯಾವುದೇ ಕಲೆಯ ಸ್ವರೂಪ ಪ್ರಜ್ಞೆಯ ಅರಿವಿಲ್ಲದೆ ಮಾಡುವ ವಿಮರ್ಶೆ ಸಾಧುವಾದುದಲ್ಲ. ಕಲಾ ವಿಮರ್ಶೆಗೆ ಅನೇಕ ಮುಖಗಳಿವೆ. ಯಕ್ಷಗಾನದ ವಿಮರ್ಶೆಗೆ ಕಾರಂತರು, ಸೇಡಿಯಾಪು ಹಾಗೂ ರಾಘವನ್ ಮೊದಲಾದ ಹಿರಿಯರ ಪರಂಪರೆಯಿದೆ. ವಿಮರ್ಶೆಯು ಯಾವುದೇ ಕಲೆಯಲ್ಲಿ ಪ್ರೀತಿಯನ್ನು ಮತ್ತು ತಿಳುವಳಿಕೆಯನ್ನು ಬೆಳೆಸಬೇಕು. ಆಳಕ್ಕಿಳಿಯದೆ ತಳಮಟ್ಟದ ಅಧ್ಯಯನ ಇಲ್ಲದೆ ಸರಿ ತಪ್ಪುಗಳ ವಿವೇಚನೆ ಕೂಡದು. ಕನ್ನಡ ಸಾಹಿತ್ಯದ ಸಮಗ್ರ ಅಧ್ಯಯನವೆಂದರೆ ಅದು ಯಕ್ಷಗಾನವನ್ನು ಬಿಟ್ಟಿರಲು ಸಾಧ್ಯವಿಲ್ಲ. ಮುಖ್ಯವಾಗಿ ಇತ್ತೀಚೆಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳಲ್ಲಿ ಅಸಮತೋಲನದ ಸಮಸ್ಯೆಯಿದೆ. ‘ಯಕ್ಷಗಾನ’ ಎಂಬುದು ಒಂದು ಸಮಷ್ಠಿ ಕಲೆ.…

Read More

ಮುಡಿಪು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಹೋಬಳಿ ಘಟಕ ಮತ್ತು ವಿಶ್ವಮಂಗಳ ಪ್ರೌಢಶಾಲೆ ಮಂಗಳ ಗಂಗೋತ್ರಿ, ಕೊಣಾಜೆ ಇವರ ಸಹಯೋಗದೊಂದಿಗೆ ವಿಶ್ವಮಂಗಳ ಶಾಲಾ ಸಭಾಂಗಣದಲ್ಲಿ ದಿನಾಂಕ 18-08-2023ರಂದು ‘ಕನ್ನಡ ಸಂಭ್ರಮ – ಕುವೆಂಪು ಕಂಪು’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ, ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆಯವರು ಕುವೆಂಪು ಸಾಹಿತ್ಯದ ಕುರಿತು ಉಪನ್ಯಾಸ ನೀಡಿ “ಕುವೆಂಪು, ಕಾರಂತ, ಕಯ್ಯಾರರಂತಹ ಮಹತ್ವದ ಲೇಖಕರು ಮಕ್ಕಳ ಸಾಹಿತ್ಯದಲ್ಲಿ ವಿಪುಲ ಕೃಷಿ ಮಾಡಿದ್ದು, ಅವುಗಳಲ್ಲಿ ಮೌಲ್ಯ ಪ್ರತಿಪಾದನೆ ಮುಖ್ಯ ಉದ್ದೇಶವಾಗಿದೆ. ಸರಳವಾದ ನಿರೂಪಣೆಯಲ್ಲಿ ಮಕ್ಕಳ ಮನಸ್ಸಿಗೆ ಮುಟ್ಟುವ ರೀತಿಯ ಸಾಹಿತ್ಯ ರಚನೆಗಳಾಗಿವೆ. ಇದಕ್ಕೆ ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರಿಜೋಗಿ ಉತ್ತಮ ಉದಾಹರಣೆ. ಸಾಹಿತ್ಯದ ಉದ್ದೇಶ ಮನುಷ್ಯ ಮನಸ್ಸಿನ ಸಂಕುಚಿತ ಆಲೋಚನೆಗಳನ್ನು ದೂರಮಾಡಿ ಪ್ರತಿಯೊಬ್ಬನನ್ನೂ ವಿಶ್ವ ಮಾನವನನ್ನಾಗಿಸುವುದಾಗಿದೆ. ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಗಳು ಈ ವಿಶ್ವಮಾನವತೆಯ…

Read More

ಉಡುಪಿ : ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ ಇನ್ನಂಜೆಯಲ್ಲಿ ಕಾಪು ವಿಧಾನಸಭಾ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಯಕ್ಷಗಾನ ತರಗತಿಯನ್ನು ದಿನಾಂಕ 22-08-2023ರಂದು ಹಿರಿಯ ಯಕ್ಷಗಾನ ಕಲಾವಿದ ಡಾ. ಕೊಳ್ಯೂರು ರಾಮಚಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಮತ್ತು ಸದಸ್ಯರಾದ ಸುಬ್ರಹ್ಮಣ್ಯ ಬೈಪಡಿತ್ತಾಯ ಶುಭ ಹಾರೈಸಿದರು. ಶಾಲಾ ನಿವೃತ್ತ ಉಪನ್ಯಾಸಕ ನಂದನ್ ಕುಮಾರ್, ಪ್ರಾಚಾರ್ಯರಾದ ಪುಂಡರೀಕಾಕ್ಷ ಕೊಡಂಚ, ಆಡಳಿತಾಧಿಕಾರಿ ಮಂಜುಳ ಎಸ್. ನಾಯಕ್ ಹಾಗೂ ಯಕ್ಷಗುರು ಶಾಂತಾರಾಮ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಟರಾಜ ಉಪಾಧ್ಯ ಸ್ವಾಗತಿಸಿ, ಪ್ರಭಾಕರ ಭಟ್ ವಂದಿಸಿ, ಅನಿತಾ ವೀರ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

Read More