Author: roovari

ದೆಹಲಿ : ದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಏಷ್ಯಾದ ಅತಿದೊಡ್ಡ ಅಕ್ಷರಗಳ ಹಬ್ಬ “ಫೆಸ್ಟಿವಲ್ ಆಫ್ ಲೆಟರ್ಸ್” ಕಾರ್ಯಕ್ರಮ ದಿನಾಂಕ 7 ಮಾರ್ಚ್ 2025 ರಿಂದ 12 ಮಾರ್ಚ್ 2025ರ ವರೆಗೆ ನಡೆಯಲಿದ್ದು ಇದರಲ್ಲಿ ಕನ್ನಡ, ತುಳು, ಕೊಡವ, ಬಂಜಾರ ಸಾಹಿತಿಗಳು ಪಾಲ್ಗೊಂಡಿದ್ದು, ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಲೇಖಕರಾದ ಚಂದ್ರಶೇಖರ ಕಂಬಾರ, ಪೂರ್ಣಿಮಾ ಸುರೇಶ್, ಎಚ್. ಎಸ್. ಶಿವಪ್ರಕಾಶ್, ಮನು ಬಳಿಗಾರ್, ವಿವೇಕ ಶಾನುಭಾಗ ಎಂ. ಎಸ್. ಆಶಾದೇವೀ, ಅಮರೇಶ ನುಗಡೋಣಿ, ಪದ್ಮನಿ ನಾಗರಾಜು, ಸಿದ್ದಪ್ಪ ಸಿ. ಕೊಟರಗಸ್ತಿ, ರಮೇಶ್ ಅರೋಲಿ, ಕೇಶವ ಮಳಗಿ, ರೇಣುಕಾ ರಮಾನಂದ, ಜಯಶ್ರೀ ಕಂಬಾರ್, ಶೋಭಾ ನಾಯ್ಕ, ಸಿದ್ಧರಾಮ ಹೊನ್ನಲ್, ಚಂದ್ರಶೇಖರ ತಾಳ್ಯ, ಬೇಲೂರು ರಘುನಂದನ್, ಶಶಿ ತರೀಕೆರೆ, ಸಹನಾ ವಿಜಯಕುಮ‌ರ್, ಎ. ರೇವತಿ ತುಳು ಲೇಖಕಿಯರಾದ ಅಕ್ಷತಾ ರಾಜ್ ಪೆರ್ಲ, ಅತ್ರಾಡಿ ಅಮೃತಾ ಶೆಟ್ಟಿ, ಕೊಡವ ಭಾಷೆ ಲೇಖಕಿಯರಾದ ಎಂ. ಪಿ. ರೇಖಾ, ಮುಳ್ಳಂಗದ ರೇವತಿ ಪೂವಯ್ಯ ಹಾಗೂ ಬಂಜಾರ ಲೇಖಕರಾದ…

Read More

ಉಡುಪಿ : ಶ್ರೀ ಉಡುಪಿ ಮಾಧವ ಬಲ್ಲಾಳ್ ಇವರಿಗೆ ಗೌರವಾರ್ಪಣೆ ಪ್ರಯುಕ್ತ ‘ಭಕ್ತಿ ಸಂಗೀತ’ ಮತ್ತು ‘ನೃತ್ಯ ರೂಪಕ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025 ರಂದು ಸಂಜೆ 5-00 ಗಂಟೆಗೆ ಉಡುಪಿ ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಂಜೆ 5-00 ಗಂಟೆಗೆ ಶ್ರೀಮತಿ ಮಾನಸ ತಂತ್ರಿ, ಶ್ರವಣ್ ಉಪಾಧ್ಯಾಯ, ಕುಮಾರಿ ಶ್ರದ್ಧಾ, ಕುಮಾರಿ ಸ್ಮೃತಿ, ಕುಮಾರಿ ರಕ್ಷಾ ಮತ್ತು ಇತರರಿಂದ ನಡೆಯುವ ಭಕ್ತಿ ಸಂಗೀತಕ್ಕೆ ಬಾಲಚಂದ್ರ ಭಾಗವತ ಮೃದಂಗದಲ್ಲಿ ಮತ್ತು ಕುಮಾರಿ ಧನಶ್ರೀ ಶಬರಾಯ ವಯೋಲಿನ್ ನಲ್ಲಿ ಸಹಕರಿಸಲಿದ್ದಾರೆ. 6-30 ಗಂಟೆಗೆ ನೃತ್ಯ ನಿಕೇತನ ಕೊಡವೂರು ತಂಡ ದವರಿಂದ ‘ನಾರಸಿಂಹ’ ನೃತ್ಯ ರೂಪಕ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ತುಳು ಕೂಟ (ರಿ) ಕುಡ್ಲ ಇದರ ವತಿಯಿಂದ ‘ಬಂಗಾರ್ ಪರ್ಬ’ ಕಾರ್ಯಕ್ರಮವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಗ್ಗೆ 9-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರ್ತಿಶೇಷ ಮರೋಳಿ ಬಿ. ದಾಮೋದರ ನಿಸರ್ಗ ವೇದಿಕೆಯಲ್ಲಿ ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ತುಳು ವರ್ಲ್ಡ್ ಫೌಂಡೇಶನ್ ಇವರಿಂದ ‘ಪಾಡ್ದನ ಮೇಳ’. ಮಾನ್ಯ ವಿಧಾನ ಸಭಾ ಸಭಾಪತಿಗಳಾದ ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ದೀಪ ಪ್ರಜ್ವಲನೆಗೈಯ್ಯಲಿರುವರು. ಅಪರಾಹ್ನ 11-30 ಗಂಟೆಗೆ ತುಳು ವಿಚಾರಗೋಷ್ಠಿ, 1-00 ಗಂಟೆಗೆ ‘ಯಕ್ಷಮಣಿ’ ಮಹಿಳಾ ತಾಳಮದ್ದಳೆ, ಮಧ್ಯಾಹ್ನ ಗಂಟೆ 2-15ಕ್ಕೆ ಬೆಂಗಳೂರಿನ ‘ಐಲೇಸಾ’ – ದ ವಾಯ್ಸ್ ಆಫ್ ಓಷ್ಯನ್’ ಇವರಿಂದ ‘ತುಳು ಸಾಂಸ್ಕೃತಿಕ ರಂಗು’ ಪ್ರಸ್ತುತಗೊಳ್ಳಲಿದೆ. ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಂ. ರತ್ನಕುಮಾರ್ ಇವರಿಗೆ ‘ಕೀರ್ತಿಶೇಷ ಮರೋಳಿ ಬಿ. ದಾಮೋದರ ನಿಸರ್ಗ…

Read More

ಮಹಾಬಲ ಲಲಿತಕಲಾ ಸಭಾ (ರಿ.) ಪುತ್ತೂರಿನ ಜೈನ ಭವನದಲ್ಲಿ ದಿನಾಂಕ 26 ಫೆಬ್ರವರಿ 2025ರಂದು ಆಯೋಜಿಸಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಶೋತೃಗಳನ್ನು ಸಂಗೀತ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು. ಹಾಡುಗಾರಿಕೆಯಲ್ಲಿ ತರುಣ ವಿದ್ವಾನ್ ಸಾಕೇತರಾಮನ್, ವಯಲಿನ್ ತರುಣ ವಿದ್ವಾಂಸ ಡಾ. ನಿಶಾಂತಚಂದ್ರನ್, ಮೃದಂಗದಲ್ಲಿ ಹಿರಿಯ ವಿದ್ವಾಂಸ ಮನ್ನಾರ್‌ಕೋಯಿಲ್ ಬಾಲಾಜಿ, ಖಂಜೀರದಲ್ಲಿ ಮತ್ತೋರ್ವ ತರುಣ ಕಲಾವಿದ ಉಡುಪಿ ಶ್ರೀಕಾಂತ್ ಈ ಸಂಗೀತ ಕಛೇರಿಯನ್ನು ಅತ್ಯಂತ ರಸವತ್ತಾಗಿ ನಡೆಸಿಕೊಟ್ಟರು. ಅಪರೂಪ ರಾಗ ನಳಿನಕಾಂತಿ ಕಿರು ಆಲಾಪನೆಯೊಂದಿಗೆ ‘ನೀವೇ ಗತಿಯನಿ’ ಎಂಬ ವರ್ಣ ಚರಣ ‘ಮಾರ ಕೋಟಿ ಸುಂದರಾ’ ಬಹಳ ಸುಂದರವಾದ ಚಿಟ್ಟೆಸ್ಟರಗಳಲ್ಲದೆ ಮನೋಧರ್ಮ ಸ್ವರಗಳೊಂದಿಗೆ ಕಛೇರಿಯ ಪ್ರಾರಂಭ. ಪುರಂದರ ದಾಸರ ‘ಜಯ ಜಾನಕೀಕಾಂತ’ ನಾಟ ರಾಗದಲ್ಲಿ ಷಟ್ ಸ್ಮೃತಿ ದೈವತ ಪ್ರಯೋಗದೊಂದಿಗೆ ‘ದಶರಥಾತ್ಮಜ’ ಎಂಬಲ್ಲಿ ಸ್ವರಪ್ರಸ್ತಾರಗಳಲ್ಲಿ ಪ್ರತೀ ಆವರ್ತನಕ್ಕೂ ತ್ಯಾಗರಾಜರ ಪಂಚರತ್ನ ಕೀರ್ತನೆ ‘ಜಗದಾನಂದಕಾರಕ’ದಲ್ಲಿಯ ಚರಣಗಳ ಸ್ವರಗಳನ್ನು ಅಳವಡಿಸಿ ತಮ್ಮದೇ ಸ್ವರಗಳ ಮುಕ್ತಾಯ ಸೇರಿಸಿ ಹಾಡಿದುದು ರಸಿಕರ ಮನ ಮುಟ್ಟಿತು. ಅದಕ್ಕೆ ತಕ್ಕಂತೆ ಆಸ್ವಾದಿಸಲು ಅರಿತ…

Read More

ಮಂಗಳೂರು : ಅಲೆವೂರಾಯ ಪ್ರತಿಷ್ಠಾನವು ಕೀರ್ತಿಶೇಷ ವರ್ಕಾಡಿ ಲಕ್ಷ್ಮೀನಾರಾಯಣ ಅಲೆವೂರಾಯರ ಹೆಸರಿನಲ್ಲಿ ನಡೆಸುತ್ತಾ ಬಂದಿರುವ ‘ಯಕ್ಷತ್ರಿವೇಣಿ’ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 23 ಫೆಬ್ರವರಿ 2025 ರಂದು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬೆಂಕಿನಾಥೇಶ್ವರ ಮೇಳದ ಸಂಚಾಲಕ ಸುರೇಂದ್ರ ಮಲ್ಲಿ ಗುರುಪುರ ಮಾತನಾಡಿ “ಯಕ್ಷಗಾನದಿಂದ ನಾನು ತುಂಬಾ ಅನುಭವ ಪಡೆದಿದ್ದೇನೆ. ಗಣ್ಯಮಾನ್ಯರ ಜೊತೆ ಕಲಾವಿದನಾಗಿ ಮಾನ್ಯತೆ ಪಡೆದಿದ್ದೇನೆ. ಜೊತೆಗೆ ಕಲೆಯ ಉಳಿಕೆಗಾಗಿ ಮೇಳ ನಡೆಸುತ್ತಾ ಸಾಕಷ್ಟು ನೋವು-ನಲಿವುಗಳನ್ನು ಹೊಂದಿದ್ದೇನೆ. ಆದರೂ ಸಹ ಕಲಾವಿದರ ಸಹಕಾರದಿಂದ ನೋವಿನಲ್ಲೂ ನಲಿವನ್ನು ಕಂಡಿದ್ದೇನೆ. ಅದರಲ್ಲಿ ಸಾರ್ಥಕತೆ ಇದೆ ಇಂದಿನ ಅಲೆವೂರಾಯ ಪ್ರತಿಷ್ಠಾನದ ಸನ್ಮಾನವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ” ಎಂದು ಹೇಳಿದರು. ದೇವಳದ ಶ್ರೀನಿವಾಸ ಐತಾಳ ಶುಭಕೋರಿದರು. ತುಳು ಕೂಟ ಕುಡ್ಲ ಇದರ ಅಧ್ಯಕ್ಷೆಯಾದ ಹೇಮಾ ದಾಮೋದರ ನಿಸರ್ಗ ಮಾತನಾಡಿ “ಯಕ್ಷಗಾನವು ಸರ್ವರನ್ನೂ ತೊಡಗಿಸಿಕೊಳ್ಳುವ ಕಲೆ. ಇಂದು ಮಕ್ಕಳು, ಸ್ರೀ ಹಾಗೂ ಪುರುಷ ಎನ್ನುವ ಭೇದವಿಲ್ಲದೇ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ…

Read More

ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜೈಕರ್ನಾಟಕ ಸಂಘ ಬೆಳ್ಳೇಕೆರೆ (ರಿ.) ಇದರ ವತಿಯಿಂದ ‘ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ’ ಹಾಗೂ ‘ಅಮೃತ ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 08 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ರಕ್ಷಿದಿಯ ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಯಾಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚಿನ್ ಎನ್.ಜಿ. ಇವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಕವಿತಾ ಸುಬ್ಬಯ್ಯ ಮತ್ತು ರಾಧೆ ರಕ್ಷಿದಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ‘ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ’ಯನ್ನು ಬಿ. ಪರಶುರಾಮ್ ಇವರಿಗೆ ಹಾಗೂ ‘ಅಮೃತ ಕಾವ್ಯ ಪ್ರಶಸ್ತಿ’ಯನ್ನು ಸಂಘಮಿತ್ರೆ ನಾಗರಘಟ್ಟ ಮತ್ತು ವಿಶಾಲ್ ಮಾಸ್ಟರ್ ಇವರುಗಳಿಗೆ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ರತ್ನ ಸಕಲೇಶಪುರ, ನರಸಿಂಹ ಮೂರ್ತಿ ಚಾಮರಾಜನಗರ, ಕಲಾಪ್ರಿಯ ಮಂಜು ಸಕಲೇಶಪುರ ಇವರುಗಳಿಂದ ಆನಂದ ನಾದಸಂಗಮ ಬಳಗ ಜೊತೆಗೂಡಿ ಜಾನಪದ ಮತ್ತು ರಂಗಗೀತೆಗಳ ಕಾರ್ಯಕ್ರಮ ನಡೆಯಲಿದೆ.

Read More

ಬೆಳ್ತಂಗಡಿ : ತುಳು ಶಿವಳ್ಳಿ ಸಭಾ ಬೆಳ್ತಂಗಡಿ ತಾಲೂಕು ಕುವೆಟ್ಟು ವಲಯದ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ಬೆಳ್ತಂಗಡಿ ಲಾಯಿಲ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದ ಹಿಮ್ಮೇಳ ಕಲಾವಿದ ‘ಕಟೀಲು ಶ್ರೀನಿಧಿ ಆಸ್ರಣ್ಣ ಪ್ರಶಸ್ತಿ ವಿಜೇತ’ ಗೇರುಕಟ್ಟೆಯ ಮಧೂರು ರಾಮ ಪ್ರಕಾಶ ಕಲ್ಲೂರಾಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಮನೊಳಿತ್ತಾಯರಾದ ಹರಿಪ್ರಸಾದ ಅರಂಬುಡತ್ತಾಯ, ಬೆಳ್ತಂಗಡಿ ವಲಯದ ಗಣ್ಯರಾದ ಶ್ರೀ ರಾಜ ಪ್ರಸಾದ ಪೊಳ್ನಾಯ, ಶ್ರೀ ಗಂಗಾಧರ ಕೆವುಡೇಲು, ಶ್ರೀ ಹರೀಶ್ ರಾವ್ ಮುಂಡ್ರುಪಾಡಿ, ಶ್ರೀ ಗಂಗಾಧರ್ ರಾವ್ ಕೆವುಡೇಲು, ಡಾ. ಡಿ ಶ್ರೀಪತಿ ಅರ್ಮುಡತ್ತಾಯ, ಶ್ರೀ ರಾಘವೇಂದ್ರ ಭಾಂಗಿನ್ನಾಯ, ಶ್ರೀ ದಯಾಕರ ಕುತ್ಯಾರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Read More

ಬೆಂಗಳೂರು : ದೃಶ್ಯ ರಂಗತಂಡ ಇದರ ವತಿಯಿಂದ ‘ದೃಶ್ಯ ನಾಟಕೋತ್ಸವ 2025’ವನ್ನು ದಿನಾಂಕ 09 ಮಾರ್ಚ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ನೋಂದಣಿದಳ ಮಹಾಪರಿವೀಕ್ಷಕರಾದ ಕೆ.ಎ. ದಯಾನಂದ್, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜ್ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ರಂಗಕರ್ಮಿ ಗಣೇಶ ಶೆಣೈ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಹಿರಿಯ ರಂಗಕರ್ಮಿ ಲೇಖಕರಾದ ಡಾ. ವಿಜಯಾ, ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ ಮತ್ತು ರಂಗ ನಿರ್ದೇಶಕರಾದ ಸುರೇಶ್ ಅನಗಳ್ಳಿ ಇವರಿಗೆ ರಂಗ ಗೌರವ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕಿರು ಚಿತ್ರ ಪ್ರದರ್ಶನ ಹಾಗೂ ದಾಕ್ಷಾಯಿಣಿ ಭಟ್ ಎ. ಇವರ ನಿರ್ದೇಶನದಲ್ಲಿ ‘ತಾಜ್ ಮಹಲಿನ ಟೆಂಡರ್’ ನಾಟಕ ಪ್ರದರ್ಶನ ನಡೆಯಲಿದೆ.

Read More

ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನೃತ್ಯದ ಮೂಲಕ ಕಥೆ ಹೇಳುವ ‘ಐಸಿರಿ ಅಧ್ಯಾಯ-2’ ಉತ್ಸವಗಳ ಪರಂಪರೆ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025 ರಂದು ವಿ. ವಿ ಇಲ್ಲಿನ ಎಲ್. ಸಿ.ಆರ್‌. ಐ. ಸಭಾಂಗಣದಲ್ಲಿ ನಡೆಯಿತು. ಸ್ಪರ್ಧೆ ಉದ್ಘಾಟಿಸಿದ ಖ್ಯಾತ ರಂಗ ಹಾಗೂ ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ “ಶಿಕ್ಷಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಯೋಜಿಸುವ ಮಹತ್ವ ಅರಿಯ ಬೇಕು. ಇಂತಹ ಉಪಕ್ರಮಗಳು ಕಲಿಕೆಯ ವಿಧಾನವನ್ನು ಯಾವ ರೀತಿ ಹೆಚ್ಚಿಸುತ್ತವೆ ಮತ್ತು ಮಹತ್ವಾಕಾಂಕ್ಷಿ ಯುವ ಕಲಾವಿದರಿಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತವೆ” ಎಂದರು. ವಿಶ್ವವಿದ್ಯಾಲಯದ ಉಪಕುಲಪತಿ ಫಾ.ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಮಾತನಾಡಿ, ‘ಕರಾವಳಿಯ ಸಾಂಪ್ರದಾಯಿಕ ಭಾಷೆಗಳು ಮತ್ತು ಕಲಾ ಪ್ರಕಾರಗಳನ್ನು ಸಂರಕ್ಷಿಸುವ ಹಾಗೂ ಅವುಗಳ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಬಲಪಡಿಸುವ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು,” ಎಂದರು. ಇದೇ ಸಂದರ್ಭದಲ್ಲಿ ತುಳುನಾಡಿನ ಶ್ರೀಮಂತ ಇತಿಹಾಸವನ್ನು ಸಂರಕ್ಷಿಸುವ ಅವಿರತ ಪ್ರಯತ್ನಗಳಿಗಾಗಿ ಬೆನೆಟ್ ಅಮ್ಮಣ್ಣ, ಹಬ್ಬಗಳು ಹಾಗೂ…

Read More

ಬೆಂಗಳೂರು : ಚೇತನ ಫೌಂಡೇಶನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಮತ್ತು ಕರ್ನಾಟಕ ಸೋಷಿಯಲ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ‘ಮಹಿಳಾ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಬೆಂಗಳೂರಿನ ಗಾಂಧೀ ಭವನದ ಬಾಪೂ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದ ಮಹಿಳೆಯರಿಗೆ ‘ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ’, ‘ಹೆಮ್ಮೆಯ ಕನ್ನಡತಿ ಪ್ರಶಸ್ತಿ’, ‘ಕದಳಿ ಅಕ್ಕಮಹಾದೇವಿ ಸಾಹಿತ್ಯ ಪ್ರಶಸ್ತಿ’, ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಗಳು ನಡೆಯಲಿದೆ. ಲೇಖಕಿ, ಚಿತ್ರಸಾಹಿತಿ, ಪತ್ರಕರ್ತರು, ನಾಡು ನುಡಿ ಚಿಂತಕರಾದ ಡಾ. ಜ್ಯೋತಿ ಜೀವನ್ ಸ್ವರೂಪ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಚೇತನ ಫೌಂಡೇಶನ್ ಸಂಸ್ಥೆಯ ಸಂಚಾಲಕರಿಂದ ಈ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಗೋಷ್ಠಿ 01ರಲ್ಲಿ ‘ಅವಳೆಂದರೆ ..?’ ವಿಶೇಷ ಕಾವ್ಯವಾಚನ ಶ್ರೀಮತಿ ವಿದ್ಯಾ ಆರ್. ದೇವಗಿರಿ, ಡಾ. ಲತಾ ಎಸ್. ಮುಳ್ಳೂರ ಮತ್ತು ಶ್ರೀಮತಿ ಹೇಮಾವತಿ ಇವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಶ್ರೀ ಸುರೇಶ ಕೋರಕೊಪ್ಪ,…

Read More