Author: roovari

ಉಡುಪಿ : ಭಾವನಾ ಪೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜನೆಯಲ್ಲಿ ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈಯವರ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಕಲಾಕೃತಿಗಳು ‘ಮಾರುತ ಪ್ರಿಯ’ ಎನ್ನುವ ಶೀರ್ಷಿಕೆಯಡಿಯಲ್ಲಿ ದಿನಾಂಕ 15ರಿಂದ 24ನೇ ಸೆಪ್ಟಂಬರ್‌ವರೆಗೆ ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ನಡೆಯಿತು. ಕಲಾಪ್ರದರ್ಶನದಲ್ಲಿ ಕೊಂಕಣ ಕರಾವಳಿಯ ಅಳಿವಿನಂಚಿನಲ್ಲಿರುವ ಕಾವಿ ಕಲೆಯ ಬಗೆಗಿನ ವಿಸ್ತೃತ ಅಧ್ಯಯನವನ್ನು ನಡೆಸಿ ಅದರ ಉಳಿವಿಗಾಗಿ ಶ್ರಮಿಸುತ್ತಲಿರುವ ಜನಾರ್ದನ ಹಾವಂಜೆಯವರ 18ಕಾವಿ ಕಲೆಯ ಕಲಾಕೃತಿಗಳೂ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿ ಕಲಾತ್ಮಕ ಅಭಿವ್ಯಕ್ತಿಯಲ್ಲಿ ತೊಡಗಿಸಿಕೊಂಡಿರುವ ಸಂತೋಷ್ ಪೈಗಳ 12 ಛಾಯಾಚಿತ್ರಗಳು ಮತ್ತು ಹಲವು ರೇಖಾಚಿತ್ರಗಳು ಇಲ್ಲಿ ಪ್ರದರ್ಶನಕ್ಕಿದ್ದವು. ಹಾವಂಜೆಯವರು ಹೇಳುವಂತೆ “ಕಾವಿ ಕಲೆ ಎಂದರೆ ಸುಣ್ಣ ಹಾಗೂ ಕೆಮ್ಮಣ್ಣಿನ ಬಳಕೆಯೊಂದಿಗೆ ಕೆಂಪು ಹಾಗೂ ಬಿಳಿ ಎರಡೇ ವರ್ಣಗಳನ್ನು ಬಳಸಿ ಗೀರುತ್ತ, ಕೆರೆಸಿ ತೆಗೆದು ಕಲಾಕೃತಿ ನಿರ್ಮಿಸಿಕೊಳ್ಳುವ ಪದ್ಧತಿ. ಈ ಕಲೆಯು ಕೇವಲ ಚಿತ್ರಕಲೆಯೆಂಬುದಾಗಿ ಹಲವರ ಅಭಿಪ್ರಾಯಗಳಿವೆ. ಆದರೆ ಕಾವಿಕಲೆಯು ಗಾರೆಯೊಂದಿಗೆ ಭಿತ್ತಿಚಿತ್ರ ಪದ್ಧತಿಯನ್ನೊಳಗೊಳ್ಳುವ…

Read More

ಉಡುಪಿ : ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪುರಸ್ಕಾರ ಸಮಾರಂಭವು ದಿನಾಂಕ 07-10-2023 ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತ ಶ್ರೀಸೋದೆ ವಾದಿರಾಜ ಮಠಾಧೀಶ ಶ್ರೀಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು “ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವ ಕಲೆಯಲ್ಲ. ಅದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ, ನಾವು ಆರಾಧಿಸುವ ದೇವರ ಕಥನಗಳನ್ನು ಅರಿಯುವ ಅವಕಾಶವಾಗುತ್ತದೆ, ಯಕ್ಷಗಾನ ವೀಕ್ಷಿಸುವ ಸಾಮಾಜಿಕರಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಇಂಥ ಯಕ್ಷಗಾನಗಳನ್ನು ಸಂಘಟಿಸಿ, ಯಕ್ಷಗಾನ ಕಲಾವಿದರನ್ನು ಸಂಮಾನಿಸುವುದು ಪುಣ್ಯಪ್ರದವಾದ ಕಾರ್ಯವಾಗಿದೆ.ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರು ಕಲಾವಿದರಷ್ಟೇ ಮುಖ್ಯ” ಎಂದು ಹೇಳಿದರು. ಹಿರಿಯ ಸ್ತ್ರೀವೇಷಧಾರಿ ಅಂಬಾಪ್ರಸಾದ್‌ ಪಾತಾಳ ಅವರಿಗೆ ‘ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಯಕ್ಷಗಾನ ಕಲಾಸಾಧಕ ಪ್ರಶಸ್ತಿ’ಯನ್ನು ಮತ್ತು ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಅವರಿಗೆ ‘ಸರ್ಪಂಗಳ ಯಕ್ಷಗಾನ ಕಲಾಸೇವಾ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಸಂಮಾನ ಸ್ವೀಕರಿಸಿ ಮಾತನಾಡಿದ ಅಂಬಾಪ್ರಸಾದ ಪಾತಾಳ ಅವರು ಪ್ರಶಸ್ತಿಯನ್ನು ನೀಡಿದ ಸರ್ಪಂಗಳ ಕುಟುಂಬಕ್ಕೆ ಮತ್ತು ಯಕ್ಷಗಾನ ಕಲಾರಂಗ ಸಂಸ್ಥೆಗೆ ಕೃತಜ್ಞತೆ…

Read More

‘ಕಾರಂತರು ಮತ್ತು ಯಕ್ಷಗಾನ’ ಎಂಬ ವಿಚಾರ ಮಾತಾಡುವಾಗ ನೆನಪಿಡಬೇಕಾದ ಸಂಗತಿ ಎಂದರೆ, ಯಾವುದೇ ಕ್ಷೇತ್ರದಲ್ಲಿ ಡಾ. ಶಿವರಾಮ ಕಾರಂತರು ಮಾಡುವ ಕೆಲಸಗಳು ಬೇರೆ ಯಾರೂ ಮಾಡಿದ ಹಾಗಿಲ್ಲ. ದೃಷ್ಟಿ ಧೋರಣೆ, ವಿವರ, ನಿರ್ವಹಣೆ, ಸಂಘಟನೆಗಳಲ್ಲಿ ಅವರದೊಂದು ವಿಭಿನ್ನ ಮಾರ್ಗ; ಮಾರ್ಗ ಪ್ರವರ್ತಕ ಮಾರ್ಗ, ಯಕ್ಷಗಾನದಲ್ಲಾದರೂ ಹಾಗೆಯೇ. ಈ ವಿಚಾರವನ್ನಿಟ್ಟುಕೊಂಡು, ಇಂದಿನ ಗೋಷ್ಠಿಯಲ್ಲಿ ಪ್ರಸ್ತಾವಿತವಾದ ವಿಚಾರಗಳ ಸುತ್ತ ಒಂದಿಷ್ಟು. (ಇದೇ ವಿಷಯವಾಗಿ, ನಾನು ಈಗಾಗಲೇ ‘ಶತಮಾನದ ಕೊನೆಯಲ್ಲಿ ಕಾರಂತರು’ ಎಂಬ ವಿಷಯದಲ್ಲಿ ಇಸವಿ 2000ದಲ್ಲಿ ನಡೆದ ಗೋಷ್ಠಿಯಲ್ಲಿ ಮಾತಾಡಿರುವುದರಿಂದ ಕೆಲವು ಅಂಶಗಳ ಪುನರಾವರ್ತನೆ ಇಲ್ಲಿ ಅನಿವಾರ್ಯ.) ‘ಕಾರಂತರು ಯಕ್ಷಗಾನಕ್ಕೆ ತಮ್ಮ ವ್ಯಕ್ತಿತ್ವವನ್ನು ಕೊಟ್ಟರು’ ಎಂಬ ಒಂದು ಮಾತಿನಿಂದ, ಯಕ್ಷಗಾನ ಗುರು ಹೊಸ್ತೋಟ ಮಂಜುನಾಥ ಭಾಗವತರು, ಕಾರಂತ-ಯಕ್ಷಗಾನ ಸಂಬಂಧದ ನಿರ್ವಚನ ನೀಡಿದಂತಾಗಿದೆ. ಯಕ್ಷಗಾನದ ಸಾಕಲ್ಯದೃಷ್ಟಿಯ ಗ್ರಹಿಕೆ ಇರುವ ದೇಶಿ ಪದ್ಧತಿಯ ಅಭಿವ್ಯಕ್ತಿಯ ಭಾಗವತರು ಇಲ್ಲಿ ಉದ್ಘಾಟಕರಾದುದು ಅತ್ಯಂತ ಉಚಿತ, ಅಂತೆಯೆ ಯಕ್ಷಗಾನದ ವಿವಿಧ ಅಂಗಗಳಲ್ಲಿ ಆಳವಾದ ಅಭ್ಯಾಸ ನಡೆಸಿ, ಸಂಘಟನಾತ್ಮಕವಾಗಿ, ವಿಶೇಷತಃ ದೀವಟಿಗೆ ಬೆಳಕಿನ…

Read More

ಶಶಿಧರ ಹಾಲಾಡಿಯವರ ಎರಡನೆಯ ಕಾದಂಬರಿ ‘ಅಬ್ಬೆ’. ವರ್ಷದ ಹಿಂದೆ ಪ್ರಕಟವಾದ ಮೊದಲ ಕಾದಂಬರಿ ‘ಕಾಲಕೋಶ’ದಂತೆಯೇ ಬ್ಯಾಂಕ್‌ ನೌಕರನೊಬ್ಬನ ಉತ್ತಮ ಪುರುಷ ನಿರೂಪಣೆಯಲ್ಲಿರುವ ಕಾದಂಬರಿ. ಮೇಲ್ನೋಟಕ್ಕೆ ಇದು ಬ್ಯಾಂಕ್ ನೌಕರರ ಅಸಹಾಯಕತೆಯ, ದುರಿತ ದುಮ್ಮಾನಗಳ ಕಥೆಯೆಂದು ಅನ್ನಿಸಿದರೂ, ಪರಾಂಬರಿಸಿ ನೋಡಿದರೆ, ಪಶು, ಪಕ್ಷಿ, ಪ್ರಾಣಿಗಳ ಮತ್ತು ಮರ, ಗಿಡ, ಬಳ್ಳಿಗಳ ಕುರಿತು ಕುತೂಹಲ ಹುಟ್ಟಿಸುವ ಬರಹವಾಗಿದೆ. ಇಲ್ಲಿನ ಕಥೆ ನಮ್ಮನ್ನು ತೆರೆದಿಡುವುದೇ ಪ್ರಕೃತಿಯನ್ನು ಮತ್ತು ಮನುಷ್ಯೇತರ ಜೀವವೈವಿಧ್ಯವನ್ನು ಕಾಪಿಡಬೇಕಾದ ಅಗತ್ಯಕ್ಕಾಗಿ ಈ ಭೂಮಿ ಇರುವುದು ತನಗೊಬ್ಬನಿಗೆಂದೇ ಬದುಕುತ್ತಿರುವ ಮನುಷ್ಯರ ಸಣ್ಣತನದೆದುರು ಇಲ್ಲಿ ಬರುವ ಔದ್ಯೋಗಿಕ ರಂಗದಲ್ಲಿ ನಡೆವ ಶೋಷಣೆಯ ಕಥೆ ಈ ನಿಟ್ಟಿನ ಒಂದು ಉಪ ಉತ್ಪನ್ನ ಅಷ್ಟೇ. ಬಹುದಿನಗಳ ಬಳಿಕ ಪೂರ್ಣಚಂದ್ರ ತೇಜಸ್ವಿಯವರ ಬರವಣಿಗೆಯ ಲವಲವಿಕೆಯನ್ನು ಮತ್ತು ಆಶಯವನ್ನು ನೆನಪಿಸುವ ಅಪರೂಪದ ಕಾದಂಬರಿಯಿದು. ಬಯಲು ಸೀಮೆಯ ಕಲ್ಕೆರೆಯಲ್ಲಿ ಹುಟ್ಟಿಬೆಳೆದಿದ್ದ ಅದೇ ಊರಿನ ಶಾಲೆಯಲ್ಲಿ ಓದಿದ್ದ ನರಸಿಂಹಯ್ಯನ ಮಗನಿಗೆ ಆ ಊರಿನ ಕುರಿತು ಆಸಕ್ತಿಯೇ ಇದ್ದಂತಿಲ್ಲ, ‘ಆ ಹಳ್ಳೀಲಿ ಏನಿದೆ ಅಪ್ಪ, ನನಗೆ…

Read More

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ ) ಇದರ 25 ವರ್ಷಗಳ ಬೆಳ್ಳಿ ಹಬ್ಬದ‌ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ 13ನೇ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶವು ದಿನಾಂಕ 26/10/2023 ಗುರುವಾರ ನಡೆಯಲಿದೆ. ಬೆಳಗ್ಗೆ 9:30 ರಿಂದ ಸಂಜೆ 5:30 ವರೆಗೆ ಶೇಷಾದ್ರಿಪುರಂ ಮೈನ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಹಿರಿಯ ಸಾಹಿತಿ, ಸಂಶೋಧಕರಾದ ‌ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ ಅವರ‌ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿನಿಧಿಗಳು, ಸಮೂಹ ನೃತ್ಯ,‌ಸಮೂಹ ಗಾಯನ ನಡೆಸಿಕೊಡುವವರು, ಕವಿಗೋಷ್ಠಿಯಲ್ಲಿ ಭಾಗವಹಿಸಲಿಚ್ಚಿಸುವವರು, ಕನಿಷ್ಠ ಹತ್ತು ವರ್ಷಗಳು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ಕಿರು ಪರಿಚಯವನ್ನು ನಮ್ಮ ಟ್ರಸ್ಟ್ ನ ವಿವಿಧ ದತ್ತಿ ಪ್ರಶಸ್ತಿಗೆ ಶಿಫಾರಸು ಮಾಡಿ 10/10/2023 ರ ಒಳಗೆ ಕಳುಹಿಸಬಹುದು. ಆಯ್ಕೆ ಆದವರಿಗೆ ಕರೆ ಮಾಡಿ ತಿಳಿಸಲಾಗುವುದು. 1.ದೊಡ್ಡಬಳ್ಳಾಪುರದ ಸಾಹಿತಿ ಶ್ರೀಮತಿ ಶ್ರೀ ರೇಣುಕಾ ನಾಗಪ್ರಿಯ ದತ್ತಿ 2.ಮಾಗಡಿ‌ವಿಜಯಾನಾಗೇಶ್ ಯುವ ಮಹಿಳಾ ಸಾಹಿತ್ಯ ದತ್ತಿ 3.ಕೆ.ಕೃಷ್ಣಮೂರ್ತಿ ಪೂಜಾರಿ ಪಾಳ್ಯ ಗಾಯಕ ಮತ್ತು…

Read More

ಕರ್ನಾಟಕ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ನಗರವೆಂದರೆ ಮುಂಬಯಿ. ಮುಂಬಯಿಯಲ್ಲಿರುವಷ್ಟು ಸಂಘ-ಸಂಸ್ಥೆಗಳು ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವತ್ತಿಗೂ ಈ ಮಾಯಾನಗರಿಯಲ್ಲಿ ಹದಿನೆಂಟು, ಇಪ್ಪತ್ತು ಲಕ್ಷ ತುಳು ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿರುವುದು ಉಲ್ಲೇಖನೀಯ ಅಂಶ. ವಲಸೆ ಬಂದ ಮುಂಬಯಿ ಕನ್ನಡಿಗರು ಅನ್ಯಾನ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಹಸ ಸಾಧನೆ ಬಹು ರೋಚಕವಾಗಿದೆ. ಮುಂಬಯಿಯಲ್ಲಿ ಸಂಘಟನಾ ಕ್ಷೇತ್ರದಲ್ಲಿ ಮಿನುಗುತಾರೆಯಾಗಿ ಮಿಂಚಿದವರು ಜಯ ಸುವರ್ಣ. ಜಯಣ್ಣ ಎಂದೇ ಅವರು ಇಲ್ಲಿನ ತುಳು ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾದ ಅಪೂರ್ವ ಚೇತನ. ಮುಂಬಯಿ ಮಹಾನಗರದಲ್ಲಿ ಸಮಾಜ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ಸಂಘಟಕ ಜಯ ಸುವರ್ಣ ಅವರ ಹೆಸರು ಚಿರಸ್ಥಾಯಿಯಾಗಿದೆ. ಅವರು ಉದ್ಯಮಿಯಾಗಿ, ಖ್ಯಾತ ಸಂಘಟಕರಾಗಿ, ಬಿಲ್ಲವರ ಎಸೋಸಿಯೇಶನ್‌ನ ಅಧ್ಯಕ್ಷರಾಗಿ, ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷರಾಗಿ, ತುಳು ಕನ್ನಡಿಗರ ಸ್ಪೂರ್ತಿಯಾಗಿ ಉತ್ತುಂಗಕ್ಕೇರಿದ ಅತಿ ಸರಳ ಹಾಗೂ ಅತ್ಯಂತ ವಿರಳ ಸಾಂಸ್ಕೃತಿಕ ನಾಯಕ…

Read More

Art Houz ತನ್ನ ಒಂಬತ್ತನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ ಮತ್ತು ನೂರನೇ ಕಲಾಪ್ರದರ್ಶನದ ಅಂಗವಾಗಿ ಮೂವತ್ತು ಮೂರು ಹಿರಿಯ ಕಲಾವಿದರ ಕಲಾಪ್ರದರ್ಶನವನ್ನು ಹಮ್ಮಿಕೊಂಡಿದೆ.”Transformative Legacies and Studio Stories” ಹೆಸರಿನಲ್ಲಿ ಈ ಕಲಾ ಪ್ರದರ್ಶನ ನಡೆಯುತ್ತಿದೆ. ದಿನಾಂಕ 23-09-2023ರಂದು ಪ್ರಖ್ಯಾತ ಪ್ರಿಂಟ್ ಮೇಕರ್ ಕಲಾವಿದರಾದ ಶ್ರೀ ದೇವರಾಜ್ ದಾಕೋಜಿ ಅವರಿಂದ ಈ ಪ್ರದರ್ಶನ ಉದ್ಘಾಟನೆಗೊಂಡಿತು. ಭಾಗವಹಿಸಿದ ಕಲಾವಿದರೆಲ್ಲ ನವ್ಯಕಲೆಯ ಅಲೆಯೆಬ್ಬಿಸುತ್ತಲೇ ಕನ್ನಡ ನಾಡಿನ ಕಲೆಯನ್ನು ಶ್ರೀಮಂತಗೊಳಿಸಿದವರು. ಕಾಲಕ್ಕೆ ಸರಿಯಾಗಿ ಹೊಸತನ ಬೆಳೆಸಿಕೊಂಡವರು. ಆಧುನಿಕ ಕಾಲಘಟ್ಟದಲ್ಲಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದವರು. ಶ್ರೀ ಎಸ್.ಜಿ. ವಾಸುದೇವ್, ಶ್ರೀ ಜಸು ರಾವಲ್, ಶ್ರೀ ವಿ.ಜಿ. ಅಂದಾನಿ, ಶ್ರೀ ಜೆ.ಎಸ್. ಖಂಡೇರಾವ್, ಶ್ರೀ ಚಂದ್ರನಾಥ ಆಚಾರ್ಯ, ಶ್ರೀ ಭಾಸ್ಕರ್ ರಾವ್, ಶ್ರೀ ಚಿ.ಸು. ಕೃಷ್ಣ ಸೆಟ್ಟಿ ಹೀಗೆ ಹಲವಾರು ಹಿರಿಯ ಕಲಾವಿದರ ಕಲಾ ವಿದ್ವಾಂಸರ ಶ್ರೇಷ್ಠ ಕಲಾಕೃತಿಗಳ ಸಮೂಹವೇ ಇದರಲ್ಲಿ ಇದೆ. ಇವರೆಲ್ಲ ತಮ್ಮ ಕಲ್ಪನಾ ವಿಲಾಸವನ್ನು ಮುಕ್ತವಾಗಿ ಹರಿದುಬಿಟ್ಟು ಕಲೆಯ ಸೃಷ್ಟಿಯಲ್ಲಿ, ಸೃಜನಶೀಲ…

Read More

ಕಾಸರಗೋಡು : ಕಾಸರಗೋಡಿನಲ್ಲಿ 2001ರಲ್ಲಿ ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರಿಂದ ಸ್ಥಾಪನೆಯಾಗಿ, ಇದೀಗ ವಿಂಶತಿ ವರ್ಷಾಚರಣೆಯನ್ನು ನಡೆಸುತ್ತಿರುವ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಹಾಗೂ ಗ್ರಂಥಾಲಯದಲ್ಲಿ 2023 ಅಕ್ಟೋಬರ್ 1ರಂದು ಸಂಭ್ರಮ. ಸೇರಿದ್ದ ಕನ್ನಡಿಗರಿಗೆ ಕನ್ನಡ ಉತ್ಸವದ ಖುಷಿ. ನೂತನ ಕೃತಿಯ ಸಮೀಕ್ಷೆ, ಹೊಸಾ ಕೃತಿಗಳ ಬಿಡುಗಡೆ ಹಾಗೂ ಕನ್ನಡ ಭವನದ 2023ರ ಸಾಲಿನ ಅನೇಕ ಪ್ರಶಸ್ತಿಗಳ ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿತ್ತು. ಕನ್ನಡ ಭವನ ಹಾಗೂ ಗ್ರಂಥಾಲಯದ ಬಯಲು ರಂಗಮಂದಿರದಲ್ಲಿ ನಡೆದ ಈ ಕನ್ನಡ ಪರವಾದ ಕಾರ್ಯಕ್ರಮದಲ್ಲಿ ಅನೇಕ ಕನ್ನಡಿಗರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಚೇತನ ಅಣಂಗೂರು ಬಾಲಕೃಷ್ಣ ಮಾಸ್ತರ್ ಅವರ ಬದುಕನ್ನು ಆಧರಿಸಿಕೊಂಡು ಬರೆದ ‘ಸಮಾಜ ಸಂಪದ’ ಕೃತಿಯ ಲೋಕಾರ್ಪಣೆ ಹಾಗೂ ಕೃತಿಯ ಸಮೀಕ್ಷೆ ನಡೆಯಿತು. ಈ ಕೃತಿಯು ಸುಬ್ಬಯ್ಯಕಟ್ಟೆ ಕೈರಳಿ ಪ್ರಕಾಶನದ 25ನೇ ಕೃತಿಯಾಗಿ, ರವಿ ನಾಯ್ಕಾಪು ಅವರ ಸಾಹಿತ್ಯದಲ್ಲಿ ರಚನೆಯಾಗಿದೆ. ಕೃತಿಯ ಬಗ್ಗೆ ನಿವೃತ್ತ ಪ್ರಾಂಶುಪಾಲ…

Read More

ಬೆಂಗಳೂರು :  ಬೆಂಗಳೂರಿನ ಜಕ್ಕೂರಿನಲ್ಲಿರುವ ‘ಶ್ರೀ ರಾಮ ಕಲಾ ವೇದಿಕೆ’ ಪ್ರಸ್ತುತಪಡಿಸಿದ ‘ಸಂಗೀತ ಸುಧೆ’ ಕಾರ್ಯಕ್ರಮ ದಿನಾಂಕ 02-10-2023 ರಂದು ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಿತು. ಕಳೆದ ವರ್ಷ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಾಗೂ ಈ ವರ್ಷ ತಮ್ಮ ಜೀವನದ 75 ಸಂವತ್ಸರಗಳನ್ನು ಪೂರೈಸಿದ ಪಂಡಿತ್ ವಿನಾಯಕ ತೊರವಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಬಗ್ಗೆ ಮಾತನಾಡುತ್ತಾ ಪಂಡಿತ್ ರವೀಂದ್ರ ಯಾವಗಲ್ “ ಶ್ರೀಯುತ ತೊರವಿಯವರು ಒಬ್ಬ ಉತ್ತಮ ಸಂಗೀತ ಕಾರ್ಯಕರ್ತ, ಕಲಾವಿದ ಹಾಗೂ ಕಲಾ ಸೇವಕ. ಹುಬ್ಬಳ್ಳಿ ಮತ್ತು ಧಾರವಾಡದಂತಹ ಪ್ರದೇಶದಲ್ಲಿ ನಡೆಯುತ್ತಿದ್ದ ಆಹೋರಾತ್ರಿ ಸಂಗೀತ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ನಡೆಸಿದ ಕೀರ್ತಿ ಪಂಡಿತ್ ವಿನಾಯಕ ತೊರವಿ ಇವರಿಗೆ ಸಲ್ಲುತ್ತದೆ. ಇವರ ನಿರ್ದೇಶನದ ‘ಗುರುರಾಜ್ ದೇಶಪಾಂಡೆ ಸಂಗೀತ ಸಭಾ’ ಹಲವಾರು ಯುವ ಪ್ರತಿಭೆಗಳನ್ನು ಬೆಳೆಸಿದೆ ಹಾಗೂ ಪ್ರೋತ್ಸಾಹಿಸಿದೆ.” ಎಂದರು. ‘ಶ್ರೀ ರಾಮ ಕಲಾ ವೇದಿಕೆ’ಯ ಪರವಾಗಿ ರವಿ ದೇಸಾಯಿ, ಶ್ರೀರಂಗ ಸುಬ್ಬಣ್ಣ, ಉದಯರಾಜ್…

Read More

ಸುರತ್ಕಲ್ : ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿ ಸೆನೆಟ್ ಮತ್ತು ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ದಿನಾಂಕ 05-10-2023 ರಂದು ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ನರಸಿಂಹ ಮೂರ್ತಿ ಆರ್ “ಸ್ಪರ್ಧಾತ್ಮಕ ಆಧುನಿಕ ಬದುಕಿನಲ್ಲಿ ಉತ್ತಮ ಕಲಿಕಾ ಸಾಧನೆಯೊಂದಿಗೆ ಸಂವಹನ ಕಲಾ ಕೌಶಲ್ಯ ಹಾಗೂ ನಾಯಕತ್ವದ ಗುಣಗಳು ಮುಖ್ಯ. ವಿದ್ಯಾರ್ಥಿಗಳು ತಮಗೆ ದೊರಕುವ ಅವಕಾಶ ಬಳಸಿಕೊಂಡು ಉತ್ತಮ ಕೌಶಲಗಳನ್ನು ಪಡೆದುಕೊಳ್ಳಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಕಾಲೇಜಿನ ಲಲಿತಕಲಾ ಸಂಘವು ಕಲಾಸಕ್ತ ವಿದ್ಯಾರ್ಥಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿ ತರಬೇತಿ ನೀಡಿದ ಫಲವಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಕಾಲೇಜಿನ ಕೀರ್ತಿಯನ್ನು ಬೆಳಗಿಸಿದೆ” ಎಂದರು. ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಕುಳಾಯಿ ಕಾಲೇಜಿನ ಕಾರ್ಯಚಟುವಟಿಕೆಗಳನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಭಟ್ ಎಸ್.ಜಿ ಪ್ರತಿಜ್ಞಾವಿಧಿ ಬೋಧಿಸಿದರು. ಲಲಿತಕಲಾ ಸಂಘದ ಸಂಯೋಜಕರಾದ ಡಾ. ಸೌಮ್ಯ ಪ್ರವೀಣ್ ಕೆ.,…

Read More