Author: roovari

ಬೆಂಗಳೂರು : ಪ್ರವರ ಥಿಯೇಟರ್ ಬೆಂಗಳೂರು ಇದರ ದಶಕದ ಸಂಭ್ರಮದಲ್ಲಿ ನಾಟಕ, ರಂಗಗೀತೆ, ಸಂವಾದ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 25-08-2023, 26-08-2023 ಮತ್ತು 27-08-2023ರಂದು ಬೆಂಗಳೂರಿನ ಹನುಮಂತನಗರ, ಕೆ.ಹೆಚ್. ಕಲಾಸೌಧದಲ್ಲಿ ನಡೆಯಲಿದೆ. ದಿನಾಂಕ 25-08-2023ರಂದು ಸಂಜೆ 5:30ಕ್ಕೆ ದಶಕದ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮ. ಅತಿಥಿಗಳಾಗಿ ಹಿರಿಯ ರಂಗಕರ್ಮಿಗಳಾದ ಶ್ರೀ ಗುಂಡಣ್ಣ ಸಿ.ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶ್ವನಾಥ್ ಹಿರೇಮಠ, ಕನ್ನಡ ಪ್ರಭದ ಜೋಗಿ ಬರಹಗಾರರು ಮತ್ತು ಪುರವಣಿ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ಅಜಯ್ ಪ್ರಕಾಶ್ ಬಿ.ವಿ. ಭಾಗವಹಿಸಲಿದ್ದಾರೆ. ಘಂಟೆ 6ರಿಂದ ಬೆಂಗಳೂರಿನ ರಂಗ ತಂಡಗಳಿಂದ ರಂಗ ಗೀತೆಗಳು ಹಾಗೂ 7.15ಕ್ಕೆ ಶ್ರೀರಂಗಪಟ್ಟಣದ ನಿರ್ದಿಗಂತ ಪ್ರಸ್ತುತ ಪಡಿಸುವ ನಾಟಕ ‘ಗಾಯಗಳು’. ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪಕ ಇದಾಗಿದೆ. ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಇವರದ್ದು. ದಿನಾಂಕ 26-08-2023ರಂದು ಸಂಜೆ 5:30ಕ್ಕೆ ಸಂವಾದ ಕಾರ್ಯಕ್ರಮ ‘ಸಮಕಾಲೀನ ರಂಗಭೂಮಿಯ ಸವಾಲುಗಳು ಮತ್ತು…

Read More

ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ ಬಂಟ್ವಾಳ ಇದರ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಳೆ ಸೇವೆಯ ಪ್ರಯುಕ್ತ ದಿನಾಂಕ 26-08-2023ರಂದು ಸಂಜೆ 6-30ಕ್ಕೆ ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ಇದರ ಸದಸ್ಯೆಯರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಚಂದ್ರಹಾಸ ಚರಿತ್ರೆ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರು ಶ್ರೀ ಹರೀಶ ಬಳಂತಿಮುಗರು ಮತ್ತು ಶ್ರೀ ವಿಶ್ವಾಸ್ ಭಟ್ ಕರ್ಬೆಟ್ಟು, ಚೆಂಡೆಯಲ್ಲಿ ಶ್ರೀ ರಾಮ್ ಪ್ರಸಾದ್ ವದ್ವ ಮತ್ತು ಮದ್ದಳೆಯಲ್ಲಿ ಶ್ರೀ ಮುರಳೀಧರ ಹಳೆನೇರೆಂಕಿ. ಮುಮ್ಮೇಳದಲ್ಲಿ ಚಂದ್ರಹಾಸನಾಗಿ ಶ್ರೀಮತಿ ರಾಜಶ್ರೀ ನಾವಡ, ಕಪ್ಪದ ದೂತನಾಗಿ ಶ್ರೀಮತಿ ಸುಲೋಚನ ನಾವಡ, ದುಷ್ಟಬುದ್ಧಿಯಾಗಿ ಶ್ರೀಮತಿ ಸರಸ್ವತಿ ಹೊಳ್ಳ, ವಿಷಯೆಯಾಗಿ ಶ್ರೀಮತಿ ಶ್ರೀಲತಾ ನಾವಡ, ಕುಳಿಂದ ಮತ್ತು ಕಾಳಿಕಾದೇವಿಯಾಗಿ ಶ್ರೀಮತಿ ಜಯಲಕ್ಷ್ಮೀ ಮಯ್ಯ ಮತ್ತು ಮದನನಾಗಿ ಶ್ರೀಮತಿ ಜಯಲಕ್ಷ್ಮೀ ಕಾರಂತ್ ಸಹಕರಿಸಲಿದ್ದಾರೆ.

Read More

ಕಾಸರಗೋಡು : ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನು ಆಧರಿಸಿ ‘ಮಂಜುನಾದ’ 15ನೇ ಸಂಗೀತ ಕಚೇರಿಯು ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ದಿನಾಂಕ 20-08-2023ರಂದು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ನೇತೃತ್ವದಲ್ಲಿ ನಡೆಯಿತು. ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮತ್ತು ಆಶ್ವೀಜಾ ಉಡುಪ, ವಯಲಿನ್ ನಲ್ಲಿ ಸುಪ್ರೀತಾ ಪಿ.ಎಸ್, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಮತ್ತು ತಂಬೂರದಲ್ಲಿ ಸುಜಾತ ಎಸ್. ಭಟ್ ಸಹಕರಿಸಿದರು. ಕೃತಿಗಳ ಪ್ರಸ್ತುತಿಯು ಸಂಗೀತ ರಸಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನವು ಆಯೋಜಿಸುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಶ್ರೀ ಕೃಷ್ಣನ ಕುರಿತಾದ ‘ಸ್ವರಚಿತ ಬಹುಭಾಷಾ ಕವನ ರಚನಾ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ. ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ಮುಕ್ತ ವಿಭಾಗ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕನ್ನಡ, ತುಳು, ಸಂಸ್ಕೃತ, ಹಿಂದಿ, ಮಲಯಾಳ ಸಹಿತ ಯಾವುದೇ ಭಾಷೆಗಳ ಸ್ವರಚಿತ ಕವನಗಳನ್ನು ಕಳುಹಿಸಬಹುದು. ಸೆಪ್ಟಂಬರ್ 1ರೊಳಗಾಗಿ ಕವನಗಳನ್ನು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ವಾಟ್ಸಪ್ಪ್ ಮಾಡಬಹುದಾಗಿದೆ. ಆಯ್ದ ಕವನಗಳನ್ನು ಮುದ್ರಿಸಿ ಶ್ರೀ ಕೃಷ್ಣ ವೇಷ ಸ್ಪರ್ಧೆಯ ದಿನದಂದು ಕೃತಿ ರೂಪದಲ್ಲಿ ಪ್ರಕಟಿಸಲಾಗುವುದು. ಕವನ ಕಳುಹಿಸಬೇಕಾದ ವಿಳಾಸ : ಶ್ರೀಮತಿ ಗೀತಾ ಲಕ್ಷ್ಮೀಶ್, ಶ್ರೀ ಕೃಷ್ಣ ಕವನ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು, 575003. ವಾಟ್ಸಪ್ ನಂ.9535656805.

Read More

ಬೆಂಗಳೂರು : ಬೆಂಗಳೂರಿನ ಇನ್ ಫಾರ್ಮ್ ಥಿಯೇಟರ್ ಅಭಿನಯಿಸುವ ‘ಸರಸತಿಯಾಗಲೊಲ್ಲೆ’ ಸಾವಿತ್ರಿಬಾಯಿ ಫುಲೆಯವರ ಅಕ್ಷರಯಾನದ ಕಥಾ ಹಂದರವುಳ್ಳ ನಾಟಕವು ದಿನಾಂಕ 25-08-2023ರಂದು ಸಂಜೆ 7.30ಕ್ಕೆ ಬೆಂಗಳೂರಿನ ಕಲಾಗ್ರಾಮ ಮಲ್ಲತಳ್ಳಿ ಇಲ್ಲಿ ನಡೆಯಲಿದೆ. ಡಾ. ಎಂ.ಬೈರೇಗೌಡ (ಮುದ್ದುಶ್ರೀ ದಿಬ್ಬ) ಇವರು ರಚಿಸಿದ ಈ ನಾಟಕವನ್ನು ನವೀನ್ ಭೂಮಿ ಇವರು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಸಂಗೀತ ಉಮೇಶ್ ಸಂಗಪ್ಪ ಪತ್ತಾರ ಮತ್ತು ಶುಭಕರ ಬಿ.ಯವರದ್ದು, ನಿರ್ಮಾಣ ನಿರ್ವಹಣೆ ರಂಗನಾಥ ಶಿವಮೊಗ್ಗ, ಮೂಡಲಪಾಯ ಯಕ್ಷಗಾನದ ಹೆಜ್ಜೆಗಳು ಎ.ಬಿ. ಶಂಕರಪ್ಪ, ಭಾಗವತ ಬಸವರಾಜು. ರಂಗದ ಮೇಲೆ ಕಲಾವಿದರಾಗಿ ಲೀನಾ ಆರ್ಯ, ಅಕ್ಷಯ್‌ ರಾಜ್ ಎನ್.ಆರ್., ರಾಘವ್, ಕೌಸಲ್ಯ, ಶಶಾಂಕ್, ಎಂ. ಶ್ರೀನಿವಾಸ್ ರಾವ್‌, ವಿಷ್ಣು ಅವನೀಷಾಗೌಡ, ಚರನ್ ಗೌಡ ಮತ್ತು ಪ್ರಜ್ವಲ್ ಕುಮಾರ್ ಗೌಡ ಇವರುಗಳು ಅಭಿನಯಿಸಲಿದ್ದಾರೆ. ಟಿಕೇಟ್ ದರ : 150/- ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ 7829444660 ನಿರ್ದೇಶಕ ನವೀನ್ ಭೂಮಿ ತಿಪಟೂರು : ಮೂಲತಃ ತಿಪಟೂರಿನವರಾದ ಇವರು ಪತ್ರಿಕೋದ್ಯಮದಲ್ಲಿ ಎಂ.ಎಸ್.ಸಿ ಎಲೆಕ್ಟ್ರಾನಿಕ್ ಮೀಡಿಯಾ ಪದವಿ…

Read More

ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-6’ ಇದರ ಅಂಗವಾಗಿ ‘ತುಳುವರೆ ಹಳ್ಳಿ ಗೊಬ್ಬುಲು’ ಕಾರ್ಯಕ್ರಮ ದಿನಾಂಕ 18-08-2023ರಂದು ಕೊಡ್ಮಣ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡ್ಮಣ್ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಭಾಸ್ಕರ ರಾವ್ ಇವರು ಮಾತನಾಡುತ್ತಾ “ಇಂದು ಭಾಷಾ ಗೊಂದಲಗಳ ಮಧ್ಯೆ ತುಳುವನ್ನು ಬಡವಾಗಲು ಬಿಡಬಾರದು. ತುಳುವಿಗೆ ಅದರದೇ ಆದ ವೈಶಿಷ್ಟವಿದೆ. ಈ ಮಣ್ಣಿನ ಕಂಪನ್ನು ಪಸರಿಸಲು ತುಳು ಕಾರಣವಾಗುತ್ತದೆ. ಇಂದಿನ ಯುಗದಲ್ಲಿ ಯಾವುದೇ ದೇಶದಲ್ಲಿದ್ದರೂ ನಾವು ಪ್ರತಿಯೊಬ್ಬನನ್ನೂ ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಭಾಷಾ ವಿನಿಮಯದಿಂದ ವಿಚಾರಗಳನ್ನೂ ಅವರಿಗೆ ತಿಳಿಸಬಹುದು. ಆಗ ತುಳುವರು ತಮ್ಮ ತಮ್ಮ ಆಚಾರ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಭಾಷಾ ಪ್ರೇಮವನ್ನು ವೃದ್ಧಿಗೊಳಿಸಬಹುದು. ಭಾಷಾ ಬಳಕೆ ಹೆಚ್ಚಿದಷ್ಟೂ ಅದು ವೃದ್ಧಿಸುತ್ತದೆ” ಎಂದು ಹೇಳಿದರು. ಕೂಟದ ಅಧ್ಯಕ್ಷರಾದ ಬಿ.ದಾಮೋದರ ನಿಸರ್ಗರವರು “ಮರೆಯಾಗುತ್ತಿರುವ ಹಳ್ಳಿ ಆಟಗಳು, ಗ್ರಾಮೀಣ ಕ್ರೀಡೆಗಳು ಇಂದಿನ ಜನಾಂಗಕ್ಕೆ ಪರಿಚಯಿಸಲ್ಪಡಬೇಕು ಎಂಬ ಕಾರಣಕ್ಕಾಗಿ ಇಂದು ಈ…

Read More

ಉಡುಪಿ : ನಿಟ್ಟೂರು ಪ್ರೌಢಶಾಲೆಯ ಸನಿಹದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ 60 ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ತರಬೇತಿಯು ದಿನಾಂಕ 21-08-2023ರಂದು ಆರಂಭಗೊಂಡಿತು. ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರು, ಮಾಜಿ ಶಾಸಕರೂ ಆದ ಶ್ರೀ ಕೆ.ರಘುಪತಿ ಭಟ್ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, “ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಕರಾವಳಿಯ ಅಪೂರ್ವಕಲೆ ಯಕ್ಷಗಾನವನ್ನು ಅಭ್ಯಾಸ ಮಾಡಿ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಸಮಾಜಕ್ಕೆ ಆಸ್ತಿಯಾಗಬೇಕೆಂಬುದು ಯಕ್ಷಶಿಕ್ಷಣದ ಆಶಯ. ಅಂತರಾಷ್ಟ್ರೀಯ ಖ್ಯಾತಿಯ ಸಂಜೀವ ಸುವರ್ಣರು ಗುರುಗಳಾಗಿ ಲಭ್ಯವಾದದ್ದು ವಿದ್ಯಾರ್ಥಿಗಳ ಭಾಗ್ಯ” ಎಂದು ಸಂತಸ ವ್ಯಕ್ತಪಡಿಸಿದರು. . ಸಭೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಸ್.ವಿ. ಭಟ್, ಶಿಕ್ಷಕರಾದ ಎಚ್.ಎನ್.ಶೃಂಗೇಶ್ವರ, ಸೀಮಾ, ಅಶೋಕ ಎಂ. ಹಳೆ ವಿದ್ಯಾರ್ಥಿಗಳಾದ ಪಿ.ದಿನೇಶ್ ಪೂಜಾರಿ, ಡಾ. ಪ್ರತಿಮಾ ಜಯಪ್ರಕಾಶ್ ಆಚಾರ್ಯ, ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ,ವಸತಿ ನಿಲಯದ ಮೇಲ್ವಿಚಾರಕರಾದ ಮಂಜುನಾಥ ರಾವ್ ಧನ್ಯವಾದ ಸಲ್ಲಿಸಿದರು.

Read More

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಬರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು ‘ಕರಾವಳಿ ಕರ್ನಾಟಕದಲ್ಲಿ ರಾಕ್ ಆರ್ಟ್’ (ಬಂಡೆ ಚಿತ್ರ) ಕುರಿತು ಪ್ರೊ. ಮುರುಗೇಶಿ ಟಿ. ಅವರ ಉಪನ್ಯಾಸವನ್ನು ಶನಿವಾರ 19-8-2023ರಂದು ಸಂಜೆ 6:00 ಗಂಟೆಗೆ ನಗರದ ಪಶ್ಚಿಮ ಕೊಡಿಯಾಲ್‌ಗುತ್ತಿನ ಬಂಗಾರುಗುತ್ತು ರಸ್ತೆಯಲ್ಲಿರುವ ಕೊಡಿಯಾಲ್‌ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿತು. ಪ್ರೊ. ಮುರುಗೇಶಿ ಅವರು ಪ್ರಸಿದ್ಧ ಸಂಶೋಧಕರು ಮತ್ತು ಈ ಪ್ರದೇಶದಲ್ಲಿನ ಇತಿಹಾಸ ಪೂರ್ವದ ಬಂಡೆ ಚಿತ್ರಗಳ ಬಗ್ಗೆ ಅನುಭವಿ ಪರಿಣತರು. ಅವರು ಇತ್ತೀಚೆಗೆ ಶಿರ್ವದ ಎಂ.ಎಸ್‌.ಆ‌ರ್.ಎಸ್‌. ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಪ್ರೊ.ಮುರುಗೇಶಿಯವರು ಯುವ ಉಪನ್ಯಾಸಕರಾಗಿದ್ದಾಗ ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾಗಿದ್ದ ದಿವಂಗತ ಡಾ.ಬಿ.ವಸಂತ ಶೆಟ್ಟಿಯವರು ನೀಡಿದ ಪ್ರೋತ್ಸಾಹವನ್ನು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡರು. “ಡಾ.ವಸಂತ ಶೆಟ್ಟಿಯವರು ಈ ಪ್ರದೇಶದ ಪುರಾತತ್ವ ಶಾಸ್ತ್ರದ…

Read More

ಮಂಗಳೂರು : ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕವು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದೊಂದಿಗೆ‌ ಜಂಟಿಯಾಗಿ ಆಯೋಜಿಸಿದ ‘ಕಡಲ ಕಿನಾರೆಯಲ್ಲಿ ವರ್ಷವೈಭವ, ಖ್ಯಾತ ಸಾಹಿತಿ ಭುವನೇಶ್ವರಿ ಹೆಗಡೆಯವರೊಂದಿಗೆ ಸಂವಾದ ಮತ್ತು ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 19-08-2023ರಂದು ಜರಗಿತು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ‌ಘಟಕದ ಕಾರ್ಯದರ್ಶಿ ಡಾ.ಮುರಲಿ ಮೋಹನ‌ ಚೂಂತಾರು ಇವರ ಕಡಲ ಕಿನಾರೆಯ ಪ್ರಕೃತಿ ರಮಣೀಯ ಪರಿಸರದ ‘ಕನಸು’ ಮನೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ‌ಘಟಕದ ಅಧ್ಯಕ್ಷರಾದ ಮಂಜುನಾಥ ಎಸ್.ರೇವಣ್ಕರ್ ವಹಿಸಿದ್ದರು. “ಹಾಸ್ಯ ಸಾಹಿತಿಗೆ ಪಂಥ ಇಲ್ಲ. ಹಾಸ್ಯ ಎಂದರೆ ಅಪಹಾಸ್ಯ ಅಲ್ಲ. ಬಡವರನ್ನು, ಅಂಗವಿಕಲರನ್ನು, ಹುಚ್ಚರನ್ನು, ಜಾತಿಗಳನ್ನು ಹಾಸ್ಯ ಮಾಡಬಾರದು. ಏನೇನೋ ಕಲ್ಪಿಸಿ ಸಾಹಿತ್ಯ ಬರೆಯುವುದು ನನಗೆ ಸೇರದು. ನಮ್ಮ ಸಮಾಜದಲ್ಲಿರುವ ಸ್ವಭಾವ ವೈಚಿತ್ರ್ಯಜನರನ್ನು ಗಮನಿಸುತ್ತ ಹಾಸ್ಯವನ್ನು ಮಾತ್ರ ನಾನು ಬರೆದೆ. ಜನರು ನಕ್ಕು ಹಗುರಾಗಬೇಕು. ಕಷ್ಟಗಳನ್ನು ಮರೆತು ನಗದಿದ್ದರೆ ಬದುಕು ಮುಂದುವರಿಯದು. ಅದಕ್ಕಾಗಿ ನಾನು ನಲಿವನ್ನು…

Read More

ಮಂಗಳೂರು : ಎಲ್ಲೂರು ಶ್ರೀನಿವಾಸ್ ರಾವ್ ಸಂಗೀತ ನಿರ್ದೇಶನದ ಥಂಡರ್ ಕಿಡ್ಸ್ ತಂಡದ ಮಕ್ಕಳು ಹಾಡಿದ ಹಾಡುಗಳ ಬಿಡುಗಡೆ ಸಮಾರಂಭವು ಕೆನರಾ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 20-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕರಾವಳಿ ಲೇಖಕಿಯರ ವಾಚಿಕಿಯರ ಸಂಘದ ಅಧ್ಯಕ್ಷೆಯಾದ ಡಾ.ಜ್ಯೋತಿ ಚೇಳ್ಯಾರು ಮಾತನಾಡುತ್ತಾ “ಮಕ್ಕಳನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಕಟ್ಟುವ ಕೆಲಸ ಇಂದು ಅಗತ್ಯವಾಗಿ ಆಗಬೇಕಾಗಿದೆ. ನಮ್ಮ ಮಣ್ಣಿನ, ನಮ್ಮ ನೆಲದ ಗುಣಗಳನ್ನು ಮಕ್ಕಳು ಆವಾಹಿಸಿಕೊಂಡಾಗಲೇ ಅವರಿಗೆ ನಮ್ಮ ಸಂಸ್ಕೃತಿಯ ಅರಿವು ಉಂಟಾಗಿ ಬದುಕನ್ನು ಪ್ರೀತಿಸುವ ಕಲೆ ಸಿದ್ಧಿಸುತ್ತದೆ” ಎಂದರು. ಇದೇ ಸಂದರ್ಭದಲ್ಲಿ ಕುಶಾಲಾಕ್ಷಿ ವಿ.ಕುಲಾಲ್, ಕಣ್ವತೀರ್ಥ ಅವರ ‘ತಗೊರಿ ಮಿತ್ತ್ ದ ಮಣ್ಣ್’ ತುಳು ಅನುವಾದಿತ ಕವನಗಳ ಸಂಕಲನವನ್ನು ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ ಥಂಡರ್ ಕಿಡ್ಸ್ ನ ಮಕ್ಕಳನ್ನು  ಸನ್ಮಾನಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ…

Read More