Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ರಾಮಕೃಷ್ಣ ಮಠ ಮಂಗಳೂರು ಇದರ ಸಹಯೋಗದೊಂದಿಗೆ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ, ಮಂಗಳೂರು ಪ್ರಸ್ತುತ ಪಡಿಸುವ ಹರಿದಾಸರ ಕೃತಿ ಕೀರ್ತನೆಗಳ ಗಾಯನ ‘ದಾಸ ಗಾನಾಮೃತ’ ದಿನಾಂಕ 16-06-2023ರಂದು ಸಂಜೆ 5-15ಕ್ಕೆ ಮಂಗಳಾದೇವಿ, ರಾಮಕೃಷ್ಣ ಮಠ, ಸ್ವಾಮಿ ವಿವೇಕಾನ೦ದ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪುರಂದರ ಪ್ರಶಸ್ತಿ ವಿಜೇತ ಶ್ರೀ ಪುತ್ತೂರು ನರಸಿಂಹ ನಾಯಕ್ ಇವರು ಈ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆ.
ಉಡುಪಿ : ರಾಗ ಧನ ಉಡುಪಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶ್ರೀಮತಿ ಮತ್ತು ಡಾ. ಕೃಷ್ಣಮೂರ್ತಿ ಭಟ್ ಇವರ ಆತಿಥ್ಯ ಮತ್ತು ಸಹ ಪ್ರಾಯೋಜಕತ್ವದಲ್ಲಿ ಪ್ರಸ್ತುತ ಪಡಿಸುವ ಗೃಹ ಸಂಗೀತ ಕಾರ್ಯಕ್ರಮ ‘ರಾಗ ರತ್ನ ಮಾಲಿಕೆ -13’ ದಿನಾಂಕ 17-06-2023 ಶನಿವಾರ ಸಂಜೆ ಉಡುಪಿ ಜಿಲ್ಲೆಯ ಪರ್ಕಳದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಲತಾ ರಾವ್ ಮತ್ತು ಶಿಷ್ಯೆಯರಾದ ಚಿನ್ಮಯಿ ಭಟ್, ಸುರಭಿ ರಾವ್, ಧನ್ಯಾ ಪಿ. ಮತ್ತು ವೃಂದಾ ರಾವ್ ಇವರಿಂದ ಕೀರ್ತನೆಗಳ ಪ್ರಸ್ತುತಿ ನಡೆಯಲಿದೆ. ಹಾಡುಗಾರಿಕೆಗೆ ವಯೊಲಿನ್ ನಲ್ಲಿ ವೈಭವ್ ಪೈ ಮತ್ತು ಮೃದಂಗದಲ್ಲಿ ಪ್ರಜ್ಞಾನ್ ನಾಯಕ್ ಸಹಕರಿಸಲಿದ್ದಾರೆ. ಕಾಂಚನ ಸಹೋದರಿಯರೆಂದು ಖ್ಯಾತಿ ಪಡೆದ ಕಾಂಚನ ಎಸ್. ಶ್ರೀರಂಜನಿ ಹಾಗೂ ಕಾಂಚನ ಎಸ್. ಶ್ರುತಿರಂಜನಿ ಇವರ ದ್ವಂದ್ವ ಹಾಡುಗಾರಿಕೆ ನಡೆಯಲಿದ್ದು, ಹಾಡುಗಾರಿಕೆಗೆ ವಯೊಲಿನ್ ನಲ್ಲಿ ಎಸ್. ಶ್ರೀಜಿತ್ ತಿರುವನಂತಪುರ, ಮೃದಂಗದಲ್ಲಿ ಜಿ.ಎಸ್. ರಾಮಾನುಜನ್ ಮತ್ತು ಘಟಂನಲ್ಲಿ ಶರತ್ ಕೌಶಿಕ್ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ…
ಚಿತ್ರದುರ್ಗ : ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯಲ್ಲಿ 2023-24ನೇ ಸಾಲಿನ ರಂಗ ಶಿಕ್ಷಣಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಸಂಸ್ಥೆಯು ಕರ್ನಾಟಕ ರಾಜ್ಯಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಮತ್ತು ಪದವೀಧರರಾಗಿರುವ 16 ವರ್ಷ ಮೇಲ್ಪಟ್ಟ ಹಾಗೂ 30 ವರ್ಷದ ಒಳಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರಂಗ ಶಿಕ್ಷಣದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿ ಸಂಪೂರ್ಣ ಉಚಿತವಾಗಿದ್ದು, 25-06-2023 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿಗಳನ್ನು ಪ್ರಾಚಾರ್ಯರು ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ -577515 ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಪತ್ರ ಬರೆದು ಪ್ರವೇಶ ಅರ್ಜಿಗಳನ್ನು ತರಿಸಿಕೊಳ್ಳಬಹುದು ಅಥವಾ ರಂಗಶಾಲೆಯ ವೆಬ್ ಸೈಟ್ನಲ್ಲಿ ಅರ್ಜಿಗಳನ್ನು ಪಡೆಯಬಹುದು www.theatreschoolsanehalli.org ಹೆಚ್ಚಿನ ಮಾಹಿತಿಗಾಗಿ 9448398144, 8861043553, 9972007015.
ಯಕ್ಷಗಾನ ಎಂದರೆ ಪುರುಷ ಪ್ರಧಾನವಾದದ್ದು. ರಂಗದಲ್ಲಿ ಪುರುಷರೇ ಮಹಿಳೆಯರಾಗುತ್ತಿದ್ದರು. ಇಲ್ಲಿ ಎಲ್ಲವೂ ಪುರುಷಮಯ ಎಂಬ ಕಾಲ ಬದಲಾಗಿದೆ. ಪುರುಷ ಪ್ರಧಾನವಾದ ಯಕ್ಷಗಾನ ಕ್ಷೇತ್ರಕ್ಕೆ ಮಹಿಳೆಯರು ಲಗ್ಗೆ ಇಟ್ಟಿದ್ದಾರೆ. ಪುರುಷರಿಗೆ ಕಡಿಮೆ ಇಲ್ಲದಂತೆ ಕುಣಿಯುತ್ತಾರೆ. ಸ್ತ್ರೀಸಹಜ ಬೆಡಗು, ಬಿನ್ನಾಣವಷ್ಟೇ ಅಲ್ಲ, ಭಯಾನಕ, ಭೀಭತ್ಸ, ಶೃಂಗಾರ, ಕರುಣೆ, ವೀರ ಹೀಗೆ ಪುರುಷ ಪಾತ್ರವನ್ನೂ ತೊಟ್ಟು ಸೈ ಎನಿಸಿಕೊಳ್ಳುತ್ತಿದ್ದಾರೆ ಮಹಿಳೆಯರು ಹೀಗೆ ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ಕಲಾವಿದೆ ವಿದುಷಿ ಭಾಗೀರಥಿ ಎಮ್ ರಾವ್. 14.06.1970 ರಂದು ಯು.ಜಯರಾಮ ರಾವ್ ಹಾಗೂ ಶ್ರೀಮತಿ ನವೀನಮ್ಮ ಇವರ ಮಗಳಾಗಿ ಜನನ. ಬಿಕಾಂ ಇವರ ವಿದ್ಯಾಭಾಸ, ಕರ್ನಾಟಕ ಸಂಗೀತ ಹಾಗೂ ಭಾರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ. ಶ್ರೀಮಾನ್ ಐರೋಡಿ ಸದಾನಂದ ಹೆಬ್ಬಾರ್ ಯಕ್ಷಗಾನ ಗುರುಗಳು, ಹೆಜ್ಜೆಗಾರಿಕೆಯನ್ನು ಸೀತಾರಾಮ ಶೆಟ್ಟಿ ಕೊಯ್ಯುರ್ ಬಳಿ ಅಭ್ಯಾಸ ಮಾಡಿ, ಭಾಗವತಿಕೆಯನ್ನು ಕೆ. ಪಿ.ಹೆಗ್ಡೆ, ಸದಾನಂದ ಐತಾಳ್ ಬಳಿ ಕಲಿತಿರುತ್ತಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ವಿ.ಬಾಬು ಶೆಟ್ಟಿ (ಗೆಳೆಯರ ಬಳಗ…
ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತಪಡಿಸಿದ ಉತ್ಕೃಷ್ಟ ಮಟ್ಟದ ‘ಸುರ್ ಓ ಸಾಜ್’ ಸಂಗೀತ ಕಾರ್ಯಕ್ರಮ ನಗರದ ಪುರಭವನದಲ್ಲಿ ದಿನಾಂಕ 11-06-2023 ಭಾನುವಾರ ಸಂಗೀತ ಪ್ರಿಯರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಯಿತು. ಡಾ. ನವೀನ್ ಚಂದ್ರ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಜಿ.ಜಿ. ಲಕ್ಷ್ಮಣ್ ಪ್ರಭು, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್, ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್. ನಾಯಕ್, ಪಂಡಿತ್ ಮೌನೇಶ್ ಕುಮಾರ್ ಛಾವಣಿ, ಯುವ ಸಿತಾರ್ ವಾದಕ ಅಂಕುಶ್ ಎನ್. ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹೊಸದಿಲ್ಲಿಯ ಡಾ. ಬಿಪುಲ್ ಕುಮಾರ್ ರಾಯ್ ಅವರಿಂದ ಸಂತೂರ್ ವಾದನ ನಡೆಯಿತು. ಅವರಿಗೆ ಖ್ಯಾತ ತಬ್ಲಾ ವಾದಕ ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್ ಸಾಥ್ ನೀಡಿದರು. ಬಳಿಕ ಧಾರವಾಡದ ಡಾ.ವಿಜಯ್ ಕುಮಾರ್ ಪಾಟೀಲ್ ಮತ್ತು ಬೆಂಗಳೂರಿನ ಕೌಶಿಕ್ ಐತಾಳ್…
ಪೆರ್ಡೂರು: ಇಲ್ಲಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯು ನಡೆಸುತ್ತಿರುವ ಸಂಗೀತ ಶಾಲೆಯ ಹನ್ನೊಂದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಮತ್ತು ದ.ಕ ಜಿಲ್ಲಾಮಟ್ಟದ ಆಯ್ದ ತಂಡಗಳ ಕುಣಿತ ಭಜನಾ ಸ್ಪರ್ಧೆಯನ್ನು ಜುಲೈ 16ರಂದು ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಭಜನಾ ತಂಡಗಳು ಸಮಿತಿಯನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಸಂಪರ್ಕ ಸಂಖ್ಯೆ :9900408243, 9743579059 ಕುಣಿತ ಭಜನೆಯ ನಿಯಮಗಳು 1. ಪಕ್ಕವಾದ್ಯದವರನ್ನು ಸೇರಿ ಕನಿಷ್ಟ 10 ಮಂದಿ, ಗರಿಷ್ಠ 16 ಮಂದಿ ಭಜಕರಿರಬೇಕು. 2. ಯಾವುದೇ ದೇವರನಾಮಗಳನ್ನು ಹಾಡಬಹುದು. 3. ಕುಣಿತದೊಂದಿಗೆ ಹಾಡುವ ಮೂಲ ಹಾಡುಗಾರರು ಕನಿಷ್ಠ 3 ಮಂದಿ ಹಾಡಬೇಕು. 4. ಪಕ್ಕವಾದ್ಯವನ್ನು ತಂಡದವರೇ ತರಬೇಕು. 5. ತಾಳ, ತಬಲಾ ಮತ್ತು ಹಾರ್ಮೋನಿಯಂ ಕಡ್ಡಾಯವಾಗಿದ್ದು ತಪ್ಪಿದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು. ಇವುಗಳೊಂದಿಗೆ ಇತರೆ ಪಕ್ಕವಾದ್ಯಗಳನ್ನು ಬಳಸಬಹುದು. 6. ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲು ಹಾಜರಿದ್ದು ನೋಂದಾಯಿಸಿಕೊಳ್ಳಬೇಕು. 7. ವಯೋಮಿತಿ ಮತು ಲಿಂಗ ಭೇದವಿಲ್ಲ. 8.…
ಮೈಸೂರು : ಮೈಸೂರಿನ ನಟನ ರಂಗ ಶಾಲೆಯಲ್ಲಿ ಮಕ್ಕಳ ವಿಭಾಗದ ಅಭಿನಯ ಮತ್ತು ರಂಗ ತರಬೇತಿಗೆ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ 25-06-2023ರಂದು ಬೆಳಿಗ್ಗೆ ನಡೆಯಲಿದೆ. ಈ ತರಗತಿಗಳು 8ರಿಂದ 14 ವರ್ಷದ ಒಳಗಿನ ಮಕ್ಕಳಿಗಾಗಿದ್ದು, ತರಗತಿಗಳು ಪ್ರತಿ ಶನಿವಾರ ಮಧ್ಯಾಹ್ನ 3ರಿಂದ 5 ಹಾಗೂ ಭಾನುವಾರ ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ 7259537777 ಮತ್ತು 9480468327 ಸಂಖ್ಯೆಯನ್ನು ಸಂಪರ್ಕಿಸಬಹುದು.
ಹೊಸಕೋಟೆ: ಹೊಸಕೋಟೆ ತಾಲೂಕಿನ ‘ಜನಪದರು’ ಸಾಂಸ್ಕೃತಿಕ ವೇದಿಕೆ, ಪ್ರತೀ ತಿಂಗಳ ಎರಡನೇ ಶನಿವಾರದಂದು ಆಯೋಜಿಸುವ ನಾಟಕ ಸರಣಿ ‘ರಂಗ ಮಾಲೆ -71’ ದಿನಾಂಕ 10-06-2023ರಂದು ನಡೆಯಿತು. ಈ ಬಾರಿ ಬೆಂಗಳೂರಿನ ರೂಪಾಂತರ ರಂಗ ತಂಡ ಪ್ರಸ್ತುತ ಪಡಿಸಿದ ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರ ಮಹತ್ವದ ಕಾದಂಬರಿ ‘ಚೋಮನ ದುಡಿ’ ಪ್ರದರ್ಶನಗೊಂಡಿತು. ಈ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ ಆರ್. ನಾಗೇಶ್ ಹಾಗೂ ಕೆ.ಎಸ್.ಡಿ.ಎಲ್. ಚಂದ್ರು ಅವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಉದ್ಘಾಟನೆ ಮಾಡಿದ ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟ ರಮಣಪ್ಪ @ ಪಾಪಣ್ಣ ಕಾಟಂನಲ್ಲೂರು “ಕಾರಂತರ ಕೃತಿಗಳಲ್ಲಿ ಸರ್ವಕಾಲಿಕ ಜೀವನ ಮೌಲ್ಯಗಳಿವೆ” ಎಂದರು. ಪ್ರಾಯೋಜಕ ವೇಣು ಜ್ಯೋತಿಪುರ, ನಿರ್ದೇಶಕ ಕೆ.ಎಸ್.ಡಿ.ಎಲ್. ಚಂದ್ರು ಹಾಗೂ ನಟ ಮುರುಡಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಸಿದ್ದೇಶ್ವರ, ಜಗದೀಶ್ ಕೆಂಗನಾಳ್, ಎಂ. ಸುರೇಶ್, ಮಮತ ಮುನಿರಾಜು ಉಪಸ್ಥಿತರಿದ್ದರು. ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.
ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮದ ಜೋಗಿ ಬಂಗೇರ ಹಾಗೂ ರಾಧ ಕರ್ಕೇರ ಇವರ ಮಗನಾಗಿ 13-06-1985ರಂದು ಕೋಡಿ ರಾಘವೇಂದ್ರ ಕರ್ಕೇರ ಅವರ ಜನನ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣದಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕೋಡಿ ಕನ್ಯಾಣದಲ್ಲಿ ಪೂರೈಸಿ, ಪದವಿ ಪೂರ್ವ ಶಿಕ್ಷಣವನ್ನು ವಿವೇಕ ಪದವಿ ಪೂರ್ವ ಕಾಲೇಜು ಕೋಟ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಪದವಿ ಶಿಕ್ಷಣದೊಂದಿಗೆ ತೇರ್ಗಡೆಯಾಗಿ, ಎಮ್ ಬಿ ಎ ಫೈನಾನ್ಸ್ ಉನ್ನತ ಶಿಕ್ಷಣ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ. ಯಕ್ಷಗಾನದ ಗುರುಗಳು:- ಶ್ರೀ ಮಹಾಬಲ ಭಂಡಾರಿ ಕೋಡಿ ಶ್ರೀ ಗೋವಿಂದ ಉರಾಳ ಕೋಟ ಹೆಮ್ಮಾಡಿ ಪ್ರಭಾಕರ್ ಆಚಾರ್ ಕೃಷ್ಣಯ್ಯ ಆಚಾರ್ ಬಿದ್ಕಲ್ ಕಟ್ಟೆ ಶ್ರೀ ಬಸವ ಮರಕಾಲ ಸೈಬ್ರಕಟ್ಟೆ ಜಂಬೂರ್ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು. ಪ್ರಾಥಮಿಕ ಶಿಕ್ಷಣ ಮುಗಿಸುವ ಹಂತದಲ್ಲಿ ನನಗಾಗ 13 ವರ್ಷ ಪ್ರಾಯ. 1998ರಲ್ಲಿ ನಾನು ಸ.ಹಿ.ಪ್ರಾ. ಶಾಲೆ ಕೋಡಿ ಕನ್ಯಾಣದಲ್ಲಿ 7ನೇ…
ಮೂಲ್ಕಿ : ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕವಿ, ಛಾಂದಸ ಸಾಹಿತಿ ಗಣೇಶ ಕೊಲಕಾಡಿ ಅವರ ಮನೆಗೆ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಭೇಟಿ ನೀಡಿ ಗೌರವಿಸಿದರು. ಗಣೇಶ ಕೊಲಕಾಡಿಯವರು ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ಕೊಟ್ಟವರು. ಸಾಕಷ್ಟು ಸಂಮಾನ ಗೌರವಗಳಿಗೆ ಪಾತ್ರರಾದವರು. ಅನಾರೋಗ್ಯದಿಂದ ನೊಂದಿರುವ ಅವರು ಚೇತರಿಸಿ ಮತ್ತೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಕನ್ನಡ ಸಾಹಿತ್ಯ ನಾಡು ನುಡಿಗಾಗಿ ಶ್ರಮಿಸುವವರೊಂದಿಗೆ ಸಾಹಿತ್ಯ ಪರಿಷತ್ತು ಸದಾ ಜೊತೆಯಾಗಿರುತ್ತದೆ ಎಂಬ ನಿಟ್ಟಿನಲ್ಲಿ ಕೊಲಕಾಡಿಯವರ ಮನೆಗೆ ಭೇಟಿ ನೀಡಿದ್ದೇವೆ. ಜಿಲ್ಲೆಯ ಸಾಹಿತಿಗಳನ್ನು ಭೇಟಿಯಾಗಿ ಅವರ ಜೊತೆಗಿರುವ ಕಾರ್ಯ ನಿರಂತರವಾಗಿರುತ್ತದೆ ಎಂದು ಡಾ. ಶ್ರೀನಾಥ್ ತಿಳಿಸಿದರು. ಅನಂತ ಪ್ರಕಾಶ ಸಂಸ್ಥೆಯ ಕೊಡೆತ್ತೂರು ಸಚ್ಚಿದಾನಂದ ಉಡುಪ, ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ಮಿಥುನ ಕೊಡೆತ್ತೂರು, ಜೊಸ್ಸಿ ಪಿಂಟೋ, ವೆಂಕಟೇಶ ಹೆಬ್ಬಾರ್, ಮಾಧವ ಕೆರೆಕಾಡು ಹಾಗೂ ಹೆರಿಕ್ ಪಾಯಸ್ ಜೊತೆಗಿದ್ದರು.