Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರಾವಳಿ ಕರ್ನಾಟಕದಲ್ಲೇ ಪ್ರಸಿದ್ಧ ತಂಡ ಎಂದೇ ಗುರುತಿಸಿಕೊಂಡಿರುವ ತುಳು ಮತ್ತು ಕನ್ನಡ ಚಿತ್ರನಟ ಸಂದೀಪ್ ಶೆಟ್ಟಿ ರಾಯಿ ಇವರ ನಾಯಕತ್ವದ ಹಾಗೂ ರಮೇಶ್ ಶೆಟ್ಟಿ ಮಿಜಾರು ಸಾರಥ್ಯದ ‘ಕಲಾಶ್ರೀ ಕುಸಾಲ್ದ ಕಲಾವಿದೆರ್ ಬೆದ್ರ’ ಇದರ 5ನೇ ವಾರ್ಷಿಕೋತ್ಸವ ಹಾಗೂ ಈ ವರ್ಷದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ದಿನಾಂಕ 11-08-2023ರಂದು ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್, ಡಾ.ದೇವದಾಸ್ ಕಾಮಿಕಾಡ್, ವಿಜಯ ಕುಮಾರ್ ಕೊಡಿಯಲ್ ಬೈಲ್, ಶಿವಶರಣ್ ಶೆಟ್ಟಿ, ಲೀಲಾಕ್ಷ ಕರ್ಕೇರಾ, ಬಿ.ಜೆ.ಪಿ. ವಕ್ತಾರ ಕಿರಣ್ ರೈ, ಭೋಜರಾಜ್ ವಾಮಂಜೂರು, ಸುನಿಲ್ ಕುಮಾರ್ ನೆಲ್ಲಿಗುಡ್ಡೆ ಹಾಗೂ ಬ್ರಿಜೇಶ್ ಚೌಟ ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ನಾಲ್ಕು ಜನ ಸಾಧಕರಾದ ಶ್ವಾನ ಪ್ರೇಮಿ ಶ್ರೀಮತಿ ರಜನಿ ಶೆಟ್ಟಿ, ಹಿರಿಯ ನಾಟಿ ವೈದ್ಯರಾದ ಶ್ರೀ ಉಗ್ಗಪ್ಪ ಪೂಜಾರಿ, ರಂಗಭೂಮಿ ಮತ್ತು ತುಳು ಸಿನಿಮಾ ರಂಗಕ್ಕೆ ಕೊಡುಗೆ…
ಬೆಂಗಳೂರು : ಶ್ರೀ ಪುರಂದರದಾಸ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಪ್ರಸ್ತುತಪಡಿಸುವ ದಾಸರ ಕೃತಿಗಳ ವಿಶೇಷ ಸಂಗೀತ ಕಾರ್ಯಕ್ರಮ ‘ಪುರಂದರ ನಾದೋಪಾಸನ’ ದಿನಾಂಕ 20-08-2023ರ ಭಾನುವಾರದಂದು ಬೆಂಗಳೂರಿನ ಔಟ್ ಹತ್ತಿರದ ಪುರಂದರ ಮಂಟಪದಲ್ಲಿ ನಡೆಯಲಿದೆ. ವಿದುಷಿ ಯಶಸ್ವಿ ಇವರ ಶಿಷ್ಯರಾದ ಪ್ರಣವಶ್ರೀ ವಿದ್ವಾನ್ ಯಶಸ್ವಿ ಸುಬ್ಬರಾವ್ ಮತ್ತು ವಿದ್ವಾನ್ ಅಭಿಜಿತ್ ಇವರಿಂದ ಯುಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಪಕ್ಕವಾದ್ಯ : ಎಸ್.ಮೋಕ್ಷಿತ್ ಪಿಟೀಲಿನಲ್ಲಿ, ವಿದ್ವಾನ್ ನಾಗೇಂದ್ರ ಪ್ರಸಾದ್ ಮೃದಂಗದಲ್ಲಿ ಹಾಗೂ ವಿದ್ವಾನ್ ಸೋಮಶೇಖರ ಘಟಂನಲ್ಲಿ ಸಹಕರಿಸಲಿದ್ದಾರೆ.
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಯಕ್ಷಗಾನ ಸಸ್ತಾಹದ ಮೂರನೇ ದಿನ ದಿನಾಂಕ 13-08-2023 ರಂದು ಸರಯೂ ಯಕ್ಷ ಬಾಲ ವೃಂದ ಕೋಡಿಕಲ್ ಇದರ ಕಲಾವಿದರಿಂದ ‘ಪಂಚವಟಿ’ ಪ್ರಸಂಗದ ತಾಳ ಮದ್ದಳೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಹಿಮ್ಮೇಳದಲ್ಲಿ ಶ್ರೀಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ, ಶ್ರೀಸ್ಕಂದ ಕೊನ್ನಾರ್ ಮತ್ತು ಶ್ರೀ ಅನಂತ ಕೃಷ್ಣ ಹೊಳ್ಳ ಹಾಗೂ ಮುಮ್ಮೇಳದಲ್ಲಿ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಅಕ್ಷಯ ಸುವರ್ಣ, ನಿಹಾಲ್ ಪೂಜಾರಿ, ಯೂಶಾನ್.ಎಂ. ಪೂಜಾರಿ, ವಿಜಯಲಕ್ಷೀ.ಎಲ್.ನಿಡ್ವಣ್ಣಾಯ, ಕಾವ್ಯಾ ಗಾಣಿಗ ಮತ್ತು ವೀಣಾ ಕೆ. ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಇವ ತಂಡದ ಕಲಾವಿದರನ್ನು ಗೌರವಿಸಿಸಿದರು.
ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾದ ಆರನೇ ವರ್ಷದ ಭ್ರಾಮರೀ ಯಕ್ಷವೈಭವ-2023 ಕಾರ್ಯಕ್ರಮ ದಿನಾಂಕ 12-08-2023ರಂದು ಜರಗಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿಯವರು ಮಾತನಾಡುತ್ತಾ “ಯಕ್ಷಗಾನ ಕಲೆ ವಿರೂಪಗೊಳ್ಳಲು ಅವಕಾಶ ನೀಡಲೇಬಾರದು. ಇದಕ್ಕಾಗಿ ಕಲಾವಿದರು ಹಾಗೂ ಮೇಳದ ಯಜಮಾನರು ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ಬೇರೆಯವರನ್ನು ದೂರುವ ಬದಲು ನಾವೆಲ್ಲ ಸೇರಿ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ. ಕಲೆಯನ್ನು ಒಳ್ಳೆಯದು ಮಾಡಲು ಎಲ್ಲರೂ ಜತೆಯಾಗಬೇಕು. ಕಲೆಗಳಲ್ಲಿ ಬೇಡದ್ದು ಬಂದರೆ ಅದು ಹೋಗುವುದಿಲ್ಲ. ಯಕ್ಷಗಾನಕ್ಕೆ ತನ್ನದೇ ಆದ ಘನತೆ ಇದೆ. ಹೊಸ ಪ್ರೇಕ್ಷಕರನ್ನು ತಲುಪುವ ಕಾರ್ಯ ನಡೆಯಬೇಕಿದೆ” ಎಂದು ಹೇಳಿದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, “ಯಕ್ಷಗಾನ ಸಹಿತ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಆಯೋಜಿಸುವ ಎಲ್ಲಾ ಆಯಾಮದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕಿದೆ” ಎಂದು ಆಶಿಸಿದರು. ಮೇಯರ್ ಜಯಾನಂದ ಅಂಚನ್ ಶುಭ ಹಾರೈಸಿದರು. ಎಸ್.ಸಿ.ಡಿ.ಸಿ.ಸಿ.…
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಇಪ್ಪತ್ತೆಂಟನೇ ಉಪನ್ಯಾಸ ದಿನಾಂಕ 12-08-2023ರಂದು ಮಂಗಳೂರಿನ ನೀರುಮಾರ್ಗದ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯದ ಕುರಿತು ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಾನಂದಜಿ ಅವರು ಮಾತನಾಡುತ್ತಾ “ಸಮಾಜ ಕೆಟ್ಟದು ಎಂದು ದೂರುತ್ತ ಕೂರುವದು ನಮ್ಮ ಕೆಲಸವಲ್ಲ. ಅದನ್ನು ಹೇಗೆ ಸರಿಪಡಿಸುವುದು ಎಂದು ಆಲೋಚಿಸಬೇಕು ಮತ್ತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಸಮಾಜಕ್ಕೆ ನಾವು ಉತ್ತಮವಾದ ಆಲೋಚನೆಗಳನ್ನು ನೀಡಬೇಕು. ಇದು ನಮ್ಮ ಕರ್ತವ್ಯ. ನಾವು ಕೇವಲ ಕೆಲಸವನ್ನು ನಮ್ಮ ಉದ್ಧಾರಕ್ಕಾಗಿ ಅಥವಾ ನಮ್ಮ ಉನ್ನತಿಗಾಗಿ ಮಾಡುತ್ತೇವೆ. ಆದರೆ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಅದು ಸೇವೆಯಾಗುತ್ತದೆ ಮತ್ತು ಇದರಿಂದ ಸಮಾಜದ ಉದ್ಧಾರ ಸಾಧ್ಯ. ಕೆಲಸದ ರೀತಿ ನೀತಿಗಳು ಬದಲಾಗುವುದಿಲ್ಲ. ಆದರೆ ನಾವು ಅದನ್ನು…
ಉಡುಪಿ: ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿಯಿಂದ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮಾರಕ ‘ಯಕ್ಷ ಸಾಧಕ’ ಪ್ರಶಸ್ತಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಜ್ವಲ್ ಡೆವಲಪರ್ಸ್ ಅವರ ಸಹಕಾರದೊಂದಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಮೇರು ಕಲಾವಿದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರಿಗೆ ಪ್ರದಾನ ಮಾಡಲಾಯಿತು. ಅಜ್ಜರಕಾಡಿನ ಪುರಭವನದಲ್ಲಿ ದಿನಾಂಕ 12-08-2023ರಂದು ನಡೆದ ಈ ಪ್ರಶಸ್ತಿ ಪ್ರದಾನ ಸಂಮಾರಂಭಕ್ಕೆ ಮಾಹೆಯ ಕುಲಪತಿಗಳಾದ ಡಾ. ಎಂ.ಡಿ ವೆಂಕಟೇಶ್ ಅವರು ಚೆಂಡೆ ವಾದನದ ಮೂಲಕ ಚಾಲನೆ ನೀಡಿದರು. ಅವರು ಮಾತನಾಡಿ ‘ಯಕ್ಷಗಾನ ಎಂಬುದು ಒಂದು ಕಲೆ . ಇದು ಕರಾವಳಿ ಭಾಗದ ಸಾಂಸ್ಕೃತಿಕ ಪ್ರತೀಕವಾಗಿದೆ ಹಾಗೂ ಈಗಲೂ ಸಹ ಜನರ ಪ್ರೋತ್ಸಾಹ ಬೆಂಬಲದಿಂದ ಕಲೆ ಉಳಿದು ಬೆಳೆಯುವುದಕ್ಕೆ ಸಹಕಾರಿಯಾಗಿದೆ” ಎಂದರು. ಸಮ್ಮಾನ ಸ್ವೀಕರಿಸಿದ ಕೊಂಡದಕುಳಿ ಅವರು ಯಕ್ಷಗಾನ ಕಲೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸುತ್ತಾ “ಕಲಾವಿದರು ನಾವು ಯಕ್ಷಗಾನದಿಂದ ಏನನ್ನು ಪಡೆಯುತ್ತೇವೋ ಅದರಲ್ಲಿ ಒಂದು ಭಾಗವನ್ನು ಕಲೆಯ ಬೆಳವಣಿಗೆಗೆ…
ಧಾರವಾಡ : ಗೋಕಾಕದ ನಾಡಿನ ಸಮಾಚಾರ ಸೇವಾ ಸಂಘ ಹಾಗೂ ಪತ್ರಿಕಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭವು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ದಿನಾಂಕ 29-07-2023ರಂದು ಜರುಗಿತು. ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಉಳುವಂಗಡ ಕಾವೇರಿ ಉದಯ ಅವರನ್ನು ‘ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ’ಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಉಳುವಂಗಡ ಕಾವೇರಿಯವರು ಚಂಗುಲಂಡ ಸಿ. ಮಾದಪ್ಪ ಮತ್ತು ಸರಸ್ವತಿ ದಂಪತಿಯರ ಸುಪುತ್ರಿ. ಬಹುಭಾಷಾ ಕವಿಯಾಗಿ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವರು. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಹುಮುಖ ಪ್ರತಿಭೆಯ ಕಾವೇರಿಯವರು ವಿವಿಧ ಸಂಘಟನೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದವರು. ಟಿ.ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಂಸ್ಥೆಯ ಸ್ಥಾಪಕ ಸದಸ್ಯೆ ಮತ್ತು ಕಾರ್ಯದರ್ಶಿಯಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವರು. ಕೊಡವ ತಕ್ಕ್ ಎಳ್ತ್’ಕಾರಡ ಕೂಟ ಮತ್ತು ಕೊಡವಾಮೆರ ಕೊಂಡಾಟ ಕೂಟದ ಸದಸ್ಯೆ, ಸಿರಿಗನ್ನಡ ವೇದಿಕೆ ಮಹಿಳಾ ಘಟಕ…
ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ಆಶ್ರಯದಲ್ಲಿ ಮಧ್ಯೆ ಮಳೆ ನೀರು ಬೀಳುವ ಕೊಡೆತ್ತೂರು ಗುತ್ತುವಿನ ನಾಲ್ಕಂಕಣದ ಚೌಕಿಮನೆಯಲ್ಲಿ ಆಯೋಜಿಸಿದ ‘ಮಳೆ ಮತ್ತು ಸಾಹಿತ್ಯ’ ಕಾರ್ಯಕ್ರಮವು ದಿನಾಂಕ 13-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರವಾದಿ, ಬರಹಗಾರ ದಿನೇಶ್ ಹೊಳ್ಳರು ಮಾತನಾಡುತ್ತಾ “ನೀರನ್ನು ದುಡ್ಡು ಕೊಟ್ಟು ಕೊಳ್ಳಬೇಕಾದ, ಸಾಲ ಪಡೆದುಕೊಳ್ಳಬೇಕಾದ ದಿನಗಳು ಬಂದಿವೆ. ಮಳೆಯಿಲ್ಲದೆ ಪ್ರಕೃತಿಯಿಲ್ಲ. ಪ್ರಕೃತಿಯಿಲ್ಲದೆ ಬದುಕಿಲ್ಲ. ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಬೇಕು. ನದಿ ತಿರುಗಿಸಿದರೆ, ಪ್ಲಾಸ್ಟಿಕ್ ವಿಪರೀತ ಬಳಸುತ್ತಲೇ ಹೋದರೆ, ಕಾಡು ಕಡಿಯುತ್ತಲೇ ಇದ್ದರೆ ಅಲ್ಲಿ ಹುಟ್ಟುವ ನದಿ ತೊರೆಗಳು ಬತ್ತಿ, ಕಷ್ಟದ ದಿನಗಳು ಬರಲಿವೆ. ಹುಲಿ ದಾಳಿ, ಅಂಗಳಕ್ಕೆ ಬಂದ ಚಿರತೆ, ತೋಟಕ್ಕೆ ನುಗ್ಗಿದ ಆನೆ ಎಂದೆಲ್ಲ ಓದುತ್ತಿದ್ದೇವೆ. ಕಾಡು ಕಡಿದಿದ್ದೇವೆ. ಪ್ಲಾಸ್ಟಿಕ್ ಬಾಟಲಿ ಕಸ ತುಂಬಿಸಿ, ನೀರಿನ ಮೂಲ ಹಾಳು ಮಾಡಿ ಭೂಕುಸಿತಕ್ಕೆ ಕಾರಣವಾಗುತ್ತಿದ್ದೇವೆ. ಆಧುನಿಕತೆಯ, ಅಭಿವೃದ್ಧಿಯ ನೆಪದಲ್ಲಿ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಪ್ರಕೃತಿಯ ನಾಶ ಮಾಡಿ, ಮಳೆ ಇಲ್ಲ ಎಂದು ರಜೆ…
ಪುತ್ತೂರು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪುತ್ತೂರು, ಇದರ ಆಶ್ರಯದಲ್ಲಿ ಅಧಿಕ ಶ್ರಾವಣ ಮಾಸ ಪ್ರಯುಕ್ತ ‘ವಿಶೇಷ ತಾಳಮದ್ದಳೆ ಚತುರ್ಥಿ’ ಕೊನೆಯ ಕಾರ್ಯಕ್ರಮದ ಅಂಗವಾಗಿ ದಿನಾಂಕ 12-08-2023ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ, ‘ಮಯೂರಧ್ವಜ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಮತ್ತು ಶ್ರೀ ಸತೀಶ್ ಇರ್ದೆ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಮುರಳೀಧರ ಕಲ್ಲೂರಾಯ ಮತ್ತು ಶ್ರೀ ಆದಿತ್ಯ ನಾರಾಯಣ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಪೂಕಳ ಲಕ್ಷ್ಮೀ ನಾರಾಯಣ ಭಟ್ (ಶ್ರೀ ಕೃಷ್ಣ), ಶ್ರೀ ಭಾಸ್ಕರ ಬಾರ್ಯ (ಮಯೂರಧ್ವಜ), ಶ್ರೀ ಕುಂಬ್ಳೆ ಶ್ರೀಧರ್ ರಾವ್ (ಕುಮುದ್ವತಿ). ಶ್ರೀ ದುಗ್ಗಪ್ಪ ಎನ್. (ತಾಮ್ರಧ್ವಜ) ಸಹಕರಿಸಿದರು. ದೇವಳದ ಆಡಳಿತ ಮೊಕ್ತೇಸರ ಅಶೋಕ್ ಪ್ರಭು ಸ್ವಾಗತಿಸಿ, ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು. ಶ್ರೀ ದೇವಳದ ಆಡಳಿತ ಸಮಿತಿಯ ಸದಸ್ಯರು, ಅರ್ಚಕರು ಕಲಾವಿದರಿಗೆ ಪ್ರಸಾದ ನೀಡಿ ಗೌರವಿಸಿದರು. ಸಂಘದ ಗೌರವ…
ನಿರ್ಕಾಣ್: ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಐಸಿವೈಎಂ ನಿರ್ಕಾಣ್ ಘಟಕ ವತಿಯಿಂದ ನಿರ್ಕಾಣ್ ಸಂತ ತೋಮಸರ ಶಾಲೆಯ ಸಭಾಂಗಣದಲ್ಲಿ ದಿನಾಂಕ 13-08-2023 ಭಾನುವಾರದಂದು ‘ಗ್ರಾಮ ಲೋಕ’ ಕಾರ್ಯಕ್ರಮ ನಡೆಯಿತು. ರಾಷ್ಟ್ರಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಸಲಹಾ ಮಂಡಳಿ ಸದಸ್ಯ ಎಚ್ಚೆಮ್, ಪೆರ್ನಾಲ್ – ಸಾಹಿತ್ಯ ಆಕಾಡೆಮಿ ನಡೆದು ಬಂದ ದಾರಿ, ಕಾರ್ಯಚಟುವಟಿಕೆಗಳು ಹಾಗೂ ಪ್ರಸ್ತುತ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿ, ಕಾರ್ಯಕ್ರಮದ ಅಧ್ಯಕ್ಷರಾದ ಜಿಯೋ ಅಗ್ರಾರ್, ಕವಿ ಸುರೇಶ್ ಬಾಳಿಗ, ಕತೆಗಾರ ಪಂಚು ಬಂಟ್ವಾಳ್, ಜಾನಪದ ಕಲಾವಿದೆ ರೋಸಲಿನ್ ಮೊರಾಸ್, ಕವಿ ಕಿರಣ್ ನಿರ್ಕಾಣ್ ಇವರನ್ನು ಪರಿಚಯಿಸಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಮುಖ್ಯಸ್ಥ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯ ಕವಿ ಮೆಲ್ವಿನ್ ರೊಡ್ರಿಗಸ್, ಐಸಿವೈಎಂ ನಿರ್ಕಾಣ್ ಘಟಕದ ಅಧ್ಯಕ್ಷೆ ಸ್ವೀಡಲ್ ರೊಡ್ರಿಗಸ್ ಅವರೊಂದಿಗೆ, ಕವಿ- ಕಲಾವಿದರನ್ನು ವೇದಿಕೆಗೆ ಬರಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷರಾದ ಜಿಯೋ ಅಗ್ರಾರ್ ಅವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಸಾಹಿತ್ಯದ ಅಗತ್ಯ, ನಾವು ಬದುಕುವ ಪರಿಸರ…