Author: roovari

25 ಫೆಬ್ರವರಿ 2023, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಕೃಷ್ಣಪ್ಪ ಹಾಗೂ ಚಂದ್ರಾವತಿ ದಂಪತಿಯರ ಮಗನಾಗಿ 25.02.1997 ರಂದು ಪುನೀತ್ ಬೋಳಿಯಾರು ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಅಮ್ಮ ಅಪ್ಪ ಹಾಗೂ ಅಜ್ಜ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. 7ನೇ ತರಗತಿಯಲ್ಲಿ ಇರುವಾಗ ಕಟೀಲು 3ನೇ ಮೇಳಕ್ಕೆ ಸೇರ್ಪಡೆ. ಆಗಿನ ಭಾಗವತರು ಕುರಿಯ ಗಣಪತಿ ಶಾಸ್ತ್ರಿಗಳು ತುಂಬಾ ಉತ್ತಮವಾದ ಮಾರ್ಗದರ್ಶನ ನೀಡಿದರು. ನಂತರದಲ್ಲಿ ಕಟೀಲು 2, 4, 1ನೇ ಮೇಳದಲ್ಲಿ ತಿರುಗಾಟ ಮಾಡಿ ಕಾಲೇಜ್ ವಿದ್ಯಾಭ್ಯಾಸ ಮಾಡುವಾಗ ಎಡನೀರು ಮೇಳಕ್ಕೆ ಸೇರಿ 4 ವರ್ಷ ತಿರುಗಾಟ ಮಾಡಿ, ಉದ್ಯೋಗಕ್ಕೆ ಸೇರಿದ ಮೇಲೆ ಕಟೀಲು 6ನೇ ಮೇಳಕ್ಕೆ ಸೇರಿ ಪ್ರಸ್ತುತ ಕಟೀಲು 1ನೇ ಮೇಳದಲ್ಲಿ 3ನೇ ಕಿರೀಟ ವೇಷಧಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಭಾಗವತರಿಂದ ಕೆಲವು ವೇಷದ ಬಗ್ಗೆ ಹಾಗೂ ಹಿರಿಯ ಕಲಾವಿದರ ಜೊತೆ, ಪುಸ್ತಕ ಓದುವುದರಿಂದ,  ವೇಷದ ಬಗ್ಗೆ ಪ್ರಸಂಗದ ಸನ್ನಿವೇಶದ ಬಗ್ಗೆ ಪಾತ್ರದ…

Read More

24 ಫೆಬ್ರವರಿ 2023, ಬೆಂಗಳೂರು: ಮಹೇಶ್ ಎಸ್. ಪಲ್ಲಕ್ಕಿಯವರ ನಿರ್ದೇಶನದ ಸಂಸರ ಮೂಲ ರಚನೆಯಾದ ‘ಭಾವರಂಗ ತಂಡ’ದ ಅಭಿನಯದಲ್ಲಿ “ಬಿರುದಂತೆಂಬರ ಗಂಡ” ಕನ್ನಡ ನಾಟಕ, ನಟನಾ ರಂಗ ಶಾಲೆ ಮೈಸೂರಿನಲ್ಲಿ ಫೆಬ್ರವರಿ 26ಕ್ಕೆ ಸಂಜೆ 5 ಗಂಟೆಗೆ ಪ್ರದರ್ಶನ ಕಾಣಲಿದೆ. ಬಿರುದಂತೆಂಬರಗಂಡ ನಾಟಕದ ಸಾರಾಂಶ ಕನ್ನಡ ನಾಟಕ ಕ್ಷತ್ರದ ಶೇಕ್ಸ್ ಪಿಯರ್ ಯೆಂದು ಪ್ರಸಿದ್ದರಾದ ಸಂಸರವರು ಬರೆದಿರುವ ನಾಟಕ, ಬಿರುದಂತೆಂಬರಗಂಡ. ಈ ನಾಟಕ 1572-1575 ಇಸವಿಯ ಕಾಲಘಟ್ಟದಾಗಿದ್ದು,ಒಡೆಯರ್ ರಾಜವಂಶದಲ್ಲಿ ಮೊಟ್ಟಮೊದಲ ಬಾರಿಗೆ ರಾಜಪ್ರಭುತ್ವ ಸಾಧಿಸಿದ,ಶ್ರೀ ಇಮ್ಮಡಿ ತಿಮ್ಮರಾಜ ಒಡೆಯರ್ ಅವರ ಕಥೆಯಾಗಿದೆ. ಕೇವಲ ವ್ಯಾಪಾರಿಯಾಗಿದ್ದ ರಾಜನ ಭಕ್ತ, ಇನ್ನೊಂದು ರಾಜ್ಯದ ರಾಜನ ಮೇಲೆ ಯುದ್ಧಕ್ಕೆ ಹೋಗಿ,ಕೊನಗೆ ಆ ಊರಿನ ರಾಣಿಯ ಮುಂದೆ ಅವನು ಮಾಡಿದ ಉದ್ದತ್ತಿಕೆಯ ಉತ್ಸಾಹ ಮೆರವಣಿಗೆಗೆ ಅವನ ಮೊಣಕಾಲುಗಳ ಮೇಲೆ ನಿಂತು ಕ್ಷಮೆ ಬೇಡುವಂತಾಯಿತು. ಆದರೆ ಇದು ಯಾಕೆ ಸಂಭವಿಸಿತು? ರಾಜನ ಮರ್ಯಾದೆಯನ್ನು ರಕ್ಷಿಸುತ್ತಿರುವಾಗ ಕ್ಷಮೆಯನ್ನು ಬೇಡಲು ರಾಜನು ತನ್ನ ಅಪ್ಪಟ ಪ್ರಜೆಯನ್ನು ಏಕೆ ಶಿಕ್ಷೆಗೆ ಒಳಪಡೆಸಿದನು ಎಂಬುದು…

Read More

24 ಫೆಬ್ರವರಿ 2023, ಮುಂಬೈ: ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ ಶಾಸ್ತ್ರೀಯ ನೃತ್ಯದ ಖ್ಯಾತ ನೃತ್ಯಗಾತಿ ಪದ್ಮಭೂಷಣ ಪುರಸ್ಕೃತೆ ಡಾ. ಕನಕ್ ರೆಲೆ ಅವರು 22 ಫೆಬ್ರವರಿ 2023 ರಂದು ತಮ್ಮ 85ನೇ ವಯಸ್ಸಿನಲ್ಲಿ ಬುಧವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ . ಇವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರಚಾರ ಮತ್ತು ಸಂಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ನೂರಾರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ, ನೃತ್ಯ ಪ್ರಕಾರವನ್ನು ಉಳಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟವರು. ಡಾ. ರೆಲೆಯವರು ಗುಜರಾಥ್ ನಲ್ಲಿ11 ಜೂನ್ 1937 ರಲ್ಲಿ ಜನಿಸಿದರು. ತನ್ನ ಚಿಕ್ಕಪ್ಪನೊಂದಿಗೆ ಕೊಲ್ಕೊತ್ತಾದಲ್ಲಿರುವಾಗ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ ಪ್ರದರ್ಶನಗಳನ್ನು ವೀಕ್ಷಿಸುವ ಅವಕಾಶ ಒದಗಿದ್ದು ಅದು ಕಲಾತ್ಮಕ ಸಂವೇದನೆಗಳನ್ನು ರೂಪಿಸಿಕೊಳ್ಳಲು ತನಗೆ ಸಹಾಯ ಮಾಡಿದೆ ಎಂದು ಅವರೇ ಹೇಳುತ್ತಾರೆ. ಕಥಕ್ಕಳಿ ಕಲಾವಿದೆಯಾದ ಡಾ.ರೆಲೆ ಗುರು ಪಾಂಚಾಲಿ ಕರುಣಾಕರ ಪಣಿಕ್ಕರ್ ಇವರಲ್ಲಿ ತನ್ನ 7ನೇ ವರ್ಷದ ಎಳವೆಯಲ್ಲಿಯೇ ಕಥಕ್ಕಳಿ ತರಬೇತಿಯನ್ನು ಮತ್ತು ಕಲಾಮಂಡಲ ರಾಜಲಕ್ಷ್ಮಿ ಅವರಿಂದ ಮೋಹಿನಿಯಾಟ್ಟಂಗೆ ದೀಕ್ಷೆಯನ್ನು ಪಡೆದರು. ಸಂಗೀತ ನಾಟಕ ಅಕಾಡಮಿ…

Read More

24 ಫೆಬ್ರವರಿ 2023, ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಂಭ್ರಮದ ಸ್ಥಾಪನಾ ದಿನದ ಪ್ರಯುಕ್ತ ಶ್ರೀ ಸಚ್ಚಿದಾನಂದ ಸೇವಾ ಸದನ, ದರ್ಬೆ ಇಲ್ಲಿ ದಿನಾಂಕ 23 ಫೆಬ್ರವರಿ 2023ರಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯರು,ಮಾಜಿ ವಿಧಾನಪರಿಷತ್ ಸದಸ್ಯರು ಆದ ಶ್ರೀ ಅಣ್ಣಾ ವಿನಯಚಂದ್ರ ರವರು ಗಣೇಶ್ ನಾಯಕ್ ಪುತ್ತೂರು ಇವರು ಬರೆದ “ಮನವು ಮಾತಾಡಿತು” ಪುಸ್ತಕ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಇದರ ಜಂಟಿ‌ ನಿರ್ದೇಶಕ ಗೋಕುಲದಾಸ್ ನಾಯಕ್ ,ಉದ್ಯಮಿ ಕರೋಡಿ ಗೋಪಾಲಕೃಷ್ಣ ಬೋರ್ಕರ್, ಪ್ರಗತಿಪರ ಕೃಷಿಕ ಕುಳ್ಳಾಜೆ ಈಶ್ವರ ನಾಯಕ್, ಉದ್ಯಮಿ ಶಿವಶಂಕರ ನಾಯಕ್ ರೈತ ಬಂಧು  ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ,ಸಾರಸ್ವತ ಸಮೂಹ ಸಂಸ್ಥೆಗಳ ಕೇಂದ್ರೀಯ ಸಮಿತಿ ಅಧ್ಯಕ್ಷ ಉಮೇಶ್ ಪ್ರಭು ಬೆಳ್ತಂಗಡಿ,  ಪುರುಷೋತ್ತಮ ಪ್ರಭು ಮುಂಡಕೊಚ್ಚಿ ,ನಿವೃತ್ತ ವೃತ್ತ ನಿರೀಕ್ಷಕ ಮುಕುಂದ ನಾಯಕ್ ,ಶ್ರೀಮತಿ ವಿನತಾದೇವಿ‌ ಸುಳ್ಯ ,ಬದನಾಜೆ…

Read More

24 ಫೆಬ್ರವರಿ 2023, ಬೆಂಗಳೂರು: ಬೀಚಿ ಅವರ ರಚನೆ, ಶೈಲೇಶ್ ಕುಮಾರ್ ಅವರ ನಿರ್ದೇಶನದಲ್ಲಿ ನಗುವಿನ ಭೋಜನ ಉಣಿಸಲು ಸೈಡ್ ವಿಂಗ್ ತಂಡದವರು ‘ಸೀತೂ ಮದುವೆ’ ನಾಟಕದೊಂದಿಗೆ ಬರುತ್ತಿದ್ದಾರೆ. ನಾಳೆ, ಫೆಬ್ರವರಿ 25ಕ್ಕೆ ಕೆ.ಎಚ್. ಕಲಾಸೌಧ, ಹನುಮಂತನಗರ ಬೆಂಗಳೂರಿನಲ್ಲಿ ಸಂಜೆ 7:30ಕ್ಕೆ. ಟಿಕೇಟಿಗಾಗಿ ಸಂಪರ್ಕಿಸಿ: ಶ್ರೀಮತಿ ಮಾಲಾ: 9980179019, ಶ್ರೀ ಶೈಲೇಶ್: 9845087901 ಸೀತು ಮದುವೆ ಬಗ್ಗೆ: ಮದುವೆಯನ್ನೂದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾರೆ. ಅದಕ್ಕೆ ಎನೋ ಕೆಲವರಿಗೆ ಸ್ವರ್ಗ ಸೇರೋವರಿಗೂ ಮದ್ವೆನೇ ಆಗೋದಿಲ್ಲ. ಆ ಕಾಲ, ಅರವತ್ತರ ಆಸುಪಾಸಿನಲ್ಲಿ ಇಪ್ಪತ್ತರ ಹರೆಯದ ಹೆಣ್ಣಿಗೆ ಮದುವೆಯಾಗಿಲ್ಲ ಅಂದ್ರೆ! ಛೆ ಛೆ.. ಎಂಥಾ ಅಪರಾಧ.. ದೊಡ್ಡ ಕನಸುಗಳನ್ನು ಹೊತ್ತು ಮದುವೆಯೆಂದರೆ ಮೂತಿ ಮುರಿಯೋ ಮದುವೆ ಹುಡುಗಿ ಒಂದೆಡೆ.. ಆಕೆಗೆ ಮದುವೆ ಮಾಡುವುದನ್ನೇ ದೊಡ್ಡ ಕನಸಾಗಿಸಿಕೊಂಡ ಮನೆಯವರು ಒಂದೆಡೆ..ಈ ಎರಡೆಡೆಯಲ್ಲಿರುವವರು ಒಂದೆಡೆಗೆ ಸೇರುತ್ತಾರೋ? ಬೀಚಿಯವರ ಕಚಗುಳಿಯಿಡುವ ಸಾಲುಗಳೊಂದಿಗೆ ಅರವತ್ತರ ಆಸುಪಾಸಿನ ರಸವತ್ತಾದ ಕಥನ ! “ಸೀತೂ ಮದುವೆ !?” ರಚನೆ – ನಿರ್ಮಾಣ – ನಿರ್ದೇಶನ :…

Read More

24 ಫೆಬ್ರವರಿ 2023, ಮಂಗಳೂರು: ಹಳೆಯ ತಳಹದಿಯಲ್ಲಿ ಹೊಸದು ರೂಪುಗೊಳ್ಳುವಲ್ಲಿ ವಸ್ತು ಸಂಗ್ರಹಾಲಯಗಳು ಹಿರಿದಾದ ಪಾತ್ರ ವಹಿಸುತ್ತಿವೆ. ಇದರಿಂದ ಈ ಕಾಲದಲ್ಲಿ ನಿಂತು ಭೂತ ಕಾಲವನ್ನು ನೋಡುವ ಜತೆಗೆ ತುಳುನಾಡಿನ ಬದುಕು ಕೃಷಿ ಪರಂಪರೆ, ಅವಿಭಕ್ತ ಕುಟುಂಬದ ಕಲ್ಪನೆಯನ್ನು ಕಟ್ಟಿಕೊಡುವ ಕಾರ್ಯವನ್ನು ತುಳು ವಸ್ತು ಸಂಗ್ರಹಾಲಯ ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು. ಅವರು ಬಿ.ಸಿ. ರೋಡ್ ನ ಸಂಚಯ ಗಿರಿಯಲ್ಲಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಳಿಕೆಯ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 23, ಫೆಬ್ರವರಿಯಂದು ಉದ್ಘಾಟಿಸಿ ಮಾತನಾಡಿದರು. ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವು ಅಬ್ಬಕ್ಕನ ಇತಿಹಾಸ ಪರಿಚಯಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆ, ವಿದ್ವಾಂಸರಿಗೆ ಅಧ್ಯಯನ ಕೇಂದ್ರವಾಗಿದ್ದು, ನಾಡಿನ ತನ್ಮಯತೆ ಕಲಾತ್ಮಕತೆಯನ್ನು ಪರಿಚಯಿಸುತ್ತಿದೆ . ಪ್ರೊ | ತುಕಾರಾಮ ಪೂಜಾರಿ ದಂಪತಿ ರಾಣಿಯ…

Read More

23 ಫೆಬ್ರವರಿ 2023, ಬೆಂಗಳೂರು: ಸಂಚಾರಿ ಥಿಯೇಟರ್ ಅರ್ಪಿಸುವ “ಮಿಸ್ ಅಂಡರ್ ಸ್ಟ್ಯಾಂಡಿಂಗ್” ನಾಟಕ ದಿನಾಂಕ 24ರಂದು ಕಲಾಗ್ರಾಮ, ಬೆಂಗಳೂರು ಹಾಗೂ ದಿನಾಂಕ 25ರಂದು ರಂಗ ಶಂಕರ, ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ. ಟಿಕೆಟಿಗಾಗಿ 9884345569, 9611666711 ಸಂಪರ್ಕಿಸಿ ಸಂಸಾರದಲ್ಲಿ ಸನಿದಪ – ದಾರಿಯೋಫೊ ಅವರ ಮೂಲಕೃತಿಯಾದ ಈ ನಾಟಕವನ್ನು ಕೆ.ವಿ. ಅಕ್ಷರ ಅವರು ಕನ್ನಡಕ್ಕೆ ತಂದಿದ್ದಾರೆ. ಇಡೀ ನಾಟಕದಲ್ಲಿ ಜೋಡಿಗಳ ಸಂಬಂಧಗಳ ಭಾವ, ಸ್ಥಿತಿಗಳು ಬೇರೆ ಬೇರೆ ಘಟನೆಗಳಿಗೆ ಪೂರಕವಾಗಿ ಬದಲಾಗುವ, ಬದಲಾಗಿಸುವ ವಿಚಿತ್ರ ಸಂಕಷ್ಟಗಳಿಗೆ ಸಿಲುಕಿಕೊಳ್ಳುವ ಮತ್ತು ಮತ್ತೆ ಮತ್ತೆ ವಿಷಯಗಳನ್ನು ಅಪಾರ್ಥ ಮಾಡಿಕೊಂಡು ಸಂಕಷ್ಟಗಳನ್ನು ತಂದುಕೊಳ್ಳುವ ಮತ್ತು ಅವುಗಳ ಜೊತೆಯಲ್ಲೇ ಕನಸು ಕಾಣುವ ಹಲವಾರು ಘಟನೆಗಳ ಜೊತೆಯಲ್ಲಿ ಬದುಕಿನ ಸಂಬಂಧಗಳ ಸಂಕೀರ್ಣತೆಯನ್ನು ಪ್ರಹಸನದ ಮೂಲಕ ಅಭಿವ್ಯಕ್ತಿಸುವ ಪ್ರಯತ್ನ ಇದಾಗಿದೆ. ಇಂದಿನ ಬದುಕಿನಲ್ಲಿ, ಸಂಬಂಧಗಳ ಆಯಸ್ಸು ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಈ ನಾಟಕ ಹೆಚ್ಚು ಪ್ರಸ್ತುತ ಎನಿಸುತ್ತದೆ. ಪಿನೋಕಿಯೋ ನಾಟಕದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಸಂಚಾರಿ ವಿಜಯ್ ಅವರ…

Read More

23 ಫೆಬ್ರವರಿ 2023, ಉಡುಪಿ: ಇಪ್ಪತ್ತೊಂದು ವರ್ಷಗಳಿಂದ ನಿರಂತರ ರಂಗಪ್ರಕ್ರಿಯೆಯಲ್ಲಿ ತೊಡಗಿರುವ ಸುಮನಸಾ ಕೊಡವೂರು ಉಡುಪಿ ಸಂಸ್ಥೆಗೆ ಹತ್ತನೇ ವರ್ಷದಲ್ಲಿ ಮೂಡಿದ ಕಲ್ಪನೆ ರಂಗಹಬ್ಬ. ಈ ಬಾರೀ ಹನ್ನೊಂದನೇ ರಂಗಹಬ್ಬ. ಒಂದೊಂದು ಬಾರೀ ಬಿನ್ನ ಬಿನ್ನ ಕಲ್ಪನೆಯೊಂದಿಗೆ ಮೂಡಿ ಬರುತ್ತಿರುವ ಈ ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಯಿಂದ ಬಂದು ಬೇರೆ ಬೇರೆ ಬಾಷೆಯ ನಾಟಕ ಪ್ರದರ್ಶನ ನೀಡಿರುತ್ತಾರೆ. ಈ ಬಾರೀ ರಾಜ್ಯದೊಳಗಿನ ನಾಟಕ ತಂಡಗಳು ಭಾಗವಹಿಸುವುದರೊಂದಿಗೆ ಕನ್ನಡ-ತುಳು ಹಾಗೂ ಮಹಿಳಾ ಯಕ್ಷಗಾನ ಕೂಡಾ ಈ ಹಬ್ಬದ ಭಾಗವಾಗಲಿದೆ. ಸುಮನಸಾ ಕೊಡವೂರು-ಉಡುಪಿ (ರಿ.) ಆಯೋಜಿಸಿರುವ ರಂಗ ಹಬ್ಬ 11, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನಗರ ಸಭೆ ಉಡುಪಿಯ ಸಹಯೋಗದೊಂದಿಗೆ ಫೆಬ್ರವರಿ 26ರಿಂದ ಮಾರ್ಚ್ 4ರವರೆಗೆ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ನಡೆಯಲಿದೆ. ಕಲಾಸಕ್ತರಿಗೆ ಉಚಿತ ಪ್ರವೇಶ ಒದಗಿಸಿದ್ದು, ಸಾರ್ವಜನಿಕರು ಈ ಹಬ್ಬದ ರಸದೌತಣವನ್ನು ಸವಿಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ. ಫೆಬ್ರವರಿ…

Read More

23, ಫೆಬ್ರವರಿ, 2023, ತುಮಕೂರು: ದೃಶ್ಯ (ರಿ.) ಬೆಂಗಳೂರು ಪ್ರಯೋಗಿಸುತ್ತಿರುವ ಶ್ರೀಮತಿ ದಾಕ್ಷಾಯಣ ಭಟ್ ಎ. ನಿರ್ದೇಶದ ಐತಿಹಾಸಿಕ ನಾಟಕ “ರಕ್ತ ಧ್ವಜ” ದಿನಾಂಕ 21 -02 -2023ರ ಮಂಗಳವಾರದಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸಂಜೆ 6-30ಕ್ಕೆ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಿ.ಎಂ. ರವಿ ಕುಮಾರ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಇವರು ನೆರವೇರಿಸಿದರು. ಅತಿಥಿಗಳಾಗಿ ಡಾ| ಲಕ್ಷ್ಮಣ ದಾಸ್ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರು, ಶ್ರೀಮತಿ ಖಾ.ಹ. ರವಿಕುಮಾರಿ ಸಾಹಿತಿಗಳು ಹಾಗೂ ನಿಕಟ ಪೂರ್ವ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶ್ರೀ. ಉಗಮ ಶ್ರೀನಿವಾಸ ಪತ್ರಕರ್ತರು ರಂಗ ಸಂಘಟಕರು ಜಿನ್ ಟೀಮ್, ಶ್ರೀ ಮಳೀವಲ್ಲಿ ದೇವರಾಜ್ ರಂಗ ನಿರ್ದೇಶಕರು ತುಮಕೂರು ಇವರುಗಳು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಣುಚ ಆಯೋಜಿಸಿದರು. ನಾಟಕದ ಬಗ್ಗೆ :…

Read More

23, ಫೆಬ್ರವರಿ 2023, ಮಂಗಳೂರು: ಕರಾವಳಿ‌ ಲೇಖಕಿಯರ ವಾಚಕಿಯರ ಸಂಘ(ರಿ). ಸಾರ್ವಜನಿಕ ಹಾಗೂ ಜಿಲ್ಲಾ ಗ್ರಂಥಾಲಯ ಕೇಂದ್ರ ಮಂಗಳೂರು ಕರ್ನಾಟಕ ಸರಕಾರ ಇವರು ಜಂಟಿಯಾಗಿ ನಡೆಸಿದ ಅಕ್ಷರ ಜಾಗೃತಿ ಮತ್ತು ಕವಿಗೋಷ್ಟಿ ಕಾರ್ಯಕ್ರಮ ಫೆಬ್ರವರಿ 19ರಂದು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ‌ ನಡೆಯಿತು. ಅಕ್ಷರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಡಶಾಲಾವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆಗಳನ್ನು ಕ.ಲೇವಾ.ಸಂಘದ ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ನಡೆಸಿದರು. ಬಿ.ಎಂ.ರೋಹಿಣಿ, ಮಂಜುಳಾ ಸುಕುಮಾರ್, ರೂಪಕಲಾ ಆಳ್ವ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕ.ಲೇ.ವಾ.ಸಂಘದ ಸದಸ್ಯೆಯರಾದ ಸುಮಾಬಾರ್ಕೂರು ಮತ್ತು ಸರಸ್ವತಿಯವರ ಆಶಯ ಗೀತೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಶಿಲೇಖ ಬಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ‌ ಅಭ್ಯಾಗತರಾಗಿದ್ದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀ ಬಾಹುಬಲಿ ಪ್ರಸಾದ್ ಇವರು ಮಾತನಾಡಿ ” ಒಂದು ಉತ್ತಮ ಪುಸ್ತಕದಿಂದ ಮೌಲ್ಯಯುತ ಜೀವನ ನಡೆಸಲು ಸಾಧ್ಯವಿದೆ. ಸಾಹಿತಿಗಳಾಗುವುದು ಬಹಳ ಸುಲಭದ ಕೆಲಸವಲ್ಲ. ಭಾಷೆಯನ್ನು ಉಳಿಸಲು ಹಾಗೂ ಬೆಳೆಸಲು ಬರಹಗಾರರ…

Read More