Subscribe to Updates
Get the latest creative news from FooBar about art, design and business.
Author: roovari
ದಿನೇಶ ಉಪ್ಪೂರರ ಈ ಪುಸ್ತಕ ಯಕ್ಷಗಾನದ ಲೋಕವನ್ನು ಬಲ್ಲವರಿಗೆ ಮತ್ತೆ ಮತ್ತೆ ಮೆಲ್ಲುವ ಕಜ್ಜಾಯ. ಓದಿಗೊಂದು ಹಾಸ್ಯದ ಮೆರಗು, ಮತ್ತೆ ಆಲೋಚಿಸಿದರೆ ಇಣುಕುವ ಲೋಕ ವಿವೇಕ. ಕಲೆಯ ಲೋಕ, ವಿಸ್ಮಯದ ಪ್ರಪಂಚ. ಕಲಾವಿದನನ್ನು ಸಾಮಾನ್ಯನಂತೆ ನಡೆಸಿಕೊಳ್ಳುವುದು ರಸಿಕರಿಗೆ ಒಪ್ಪುವ ಮಾತಲ್ಲ. ಕಲ್ಪನೆ, ಭ್ರಮೆಗಳಿಲ್ಲದಿದ್ದರೆ ಅದ್ಭುತ ರಮ್ಯವಾದ ಕಲೆಯನ್ನು ಅನುಭವಿಸಲಾಗುವುದಿಲ್ಲ.ಕಲಾವಿದನಿಗೂ ಸಹೃದಯನಿಗೂ ಸಮಾನವಾದ ಸಂಭ್ರಮ-ಸಮಸ್ಯೆ ಇದು. ಈ ವಿಸ್ಮಯದ ವಿಭಿನ್ನ ಮಗ್ಗುಲುಗಳು ತೆರೆದುಕೊಂಡಿವೆ ಈ ಪುಸ್ತಕದಲ್ಲಿ. ಬಲ್ಲವರಿಂದೆಲ್ಲ ಸಂಗ್ರಹಿಸಿದ `ಬಲ್ಲಿರೇನಯ್ಯ’ ಲೋಕಸಂಗ್ರಹದ ಹೊಸಪರಿಯಾಗಿದೆ. ಯಕ್ಷಗಾನದ ಕವಿ, ಕಲಾವಿದ, ಅರ್ಥಧಾರಿ, ಸಂಘಟಕ, ಪ್ರೇಕ್ಷಕರೆಲ್ಲರ ಸ್ವಾರಸ್ಯದ ನಡೆನುಡಿಗಳ ವಿವರದ ಗುಚ್ಛ. ಕಲೆ ಸೌಂದರ್ಯವನ್ನು ಸೃಷ್ಟಿಸುತ್ತದೆ. ಸೌಂದರ್ಯ ಆನಂದಕ್ಕೆ ಕಾರಣವಾಗುತ್ತದೆ. ಸಿಟ್ಟು, ದುಃಖ, ಸಮಸ್ಯೆಗಳೆಲ್ಲ ಸೌಂದರ್ಯವಾಗುವ, ರಸವಾಗುವ ಸಾಧ್ಯತೆ ಕಲೆಯಲ್ಲಿ. ಆ ಕಲೆಯೊಡನೆ ಗುರುತಿಸಿಕೊಂಡಿರುವವರ ರಂಗದ ನಡೆಯೊಡನೆ ರಂಗದಾಚೆಯ ನಡೆನುಡಿಗಳಲ್ಲೂ ಸಹೃದಯನಿಗೆ ಸೌಂದರ್ಯಾನುಭವವಾಗುವುದಿದೆಯಲ್ಲ ಅದು ವಿಶೇಷ. ಶಿರೂರು ಫಣಿಯಪ್ಪಯ್ಯನವರಿಗೆ ನಲವತ್ತು ಪ್ರಸಂಗಗಳ ಪದ್ಯಗಳು ಬಾಯಿಪಾಠವಾಗಿದ್ದವು ಎಂದರೆ ಒಂದು ಕಲೆಯ ಸಂಸ್ಕಾರ ಎಷ್ಟು ಎತ್ತರದ್ದು ಎಂದು ಅಚ್ಚರಿಯಾಗುತ್ತದಲ್ಲವೇ! ಕಲೆ…
ಬೆಂಗಳೂರು : ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯವು 2021ನೇ ಸಾಲಿನ ‘ಸಂಸ್ಕೃತ ಪುರಸ್ಕಾರ’ಕ್ಕೆ ಗ್ರಂಥಗಳನ್ನು ಆಹ್ವಾನಿಸಿದೆ. ಪುರಸ್ಕಾರವು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕವನ್ನು ಒಳಗೊಂಡಿದೆ. 2018ರಿಂದ ಈವರೆಗೆ ಪ್ರಕಟವಾದ ಪುಸ್ತಕಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುವುದು. ಲೇಖಕರು ತಮ್ಮ ಕೃತಿಗಳನ್ನು ಜೂನ್ 28ರೊಳಗೆ ಸಲ್ಲಿಸಬೇಕು. ಗ್ರಂಥಗಳನ್ನು ಉಪ ನಿರ್ದೇಶಕರು, ಪ್ರಸಾರಾಂಗ, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 18 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ವಿವಿ ಯ ಜಾಲತಾಣ: www.ksu.ac.in ನಲ್ಲಿ ಸಂಸ್ಕೃತ ಗ್ರಂಥ ಪುರಸ್ಕಾರ ಯೋಜನೆಯ ಸಂಪೂರ್ಣ ವಿವರ ಲಭ್ಯವಿದೆ. ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯ ರಚನೆ/ ಗ್ರಂಥ ರಚನೆ ಮತ್ತು ಪ್ರಕಾಶನದ ಉದ್ಯಮವು ಬಹಳ ದೀರ್ಘ ಇತಿಹಾಸವನ್ನು ಹೊಂದಿದೆ. ಇಂದಿಗೂ ಅನೇಕ ವಿದ್ವಾಂಸರು ಸಂಸ್ಕೃತ ವಾಙ್ಮಯದ ಗದ್ಯ, ಪದ್ಯ ಇತ್ಯಾದಿ ಪ್ರಕಾರಗಳ ರಚನೆಯಲ್ಲಿ ತೊಡಗಿದ್ದಾರೆ. ಅನೇಕ ಯುವ ಪ್ರತಿಭೆಗಳೂ ಇಂಥ ಗ್ರಂಥ ರಚನೆಯಲ್ಲಿ ತಮ್ಮ ಕೌಶಲ ತೋರಿಸುತ್ತಿದ್ದಾರೆ. ಪ್ರತಿ ವರ್ಷ ಸಂಸ್ಕೃತ ವಾಙ್ಮಯ…
ಬದಿಯಡ್ಕ : ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಅಡೂರು ಕೊರತಿಮೂಲೆ ಕೃಷ್ಣ ನಿವಾಸದ ಬಾಲಕೃಷ್ಣ ತಂತ್ರಿ ಸ್ಮರಣಾರ್ಥ 2023ನೇ ಸಾಲಿನ ‘ಶಿವಗಿರಿ ಸಾಹಿತ್ಯ ಸ್ಪರ್ಧೆ’ಯನ್ನು ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಕವನ ಸ್ಪರ್ಧೆಗೆ ಮುಕ್ತ ಅವಕಾಶವಿದ್ದು, ಆಸಕ್ತರು ಕವನ ಕಳುಹಿಸಬಹುದು. ಸ್ಪರ್ಧಿಯ ಸಂಕ್ಷಿಪ್ತ ಪರಿಚಯ, ಸಂಪರ್ಕ ಸಂಖ್ಯೆ ಸಹಿತ ಪೂರ್ಣ ವಿಳಾಸವನ್ನು ಪ್ರತ್ಯೇಕವಾಗಿ ಲಗತ್ತಿಸಿರಬೇಕು. ಆಸಕ್ತರು ಸ್ವರಚಿತ ಕವನವನ್ನು ಅಂಚೆಯ ಮೂಲಕ, ವಿರಾಜ್ ಅಡೂರು, ಕೃಷ್ಣನಿವಾಸ ಮನೆ, ಅಡೂರು ಗ್ರಾಮ, ಉರುಡೂರು ಅಂಚೆ, ಕಾಸರಗೋಡು – 671543 ವಿಳಾಸಕ್ಕೆ ಜೂನ್ 25ರ ಮೊದಲು ತಲುಪುವಂತೆ ಕಳುಹಿಸಬಹುದು.
ಬೆಂಗಳೂರು : ಬಸವ ಸಮಿತಿ ಬೆಂಗಳೂರು ವತಿಯಿಂದ ದಿನಾಂಕ 24-05-2023ರಂದು ಲಿಂ. ಎಸ್.ಜಿ. ಬಾಳೇಕುಂದ್ರಿಯವರ ಸಂಸ್ಮರಣಾರ್ಥ ವಚನಾಮೃತ ಸಾರದ ಭಕ್ತಿ ಸಂಗೀತ ಕಾರ್ಯಕ್ರಮವು ಬಸವ ಸಮಿತಿಯಲ್ಲಿ ಯಶಸ್ವಿಯಾಗಿ ನೆರವೇರಿತು. ಬಸವ ಸಮಿತಿ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಂಸ್ಮರಣಾ ಕಾರ್ಯಕ್ರಮದಲ್ಲಿ ಎರಡನೇ ಸರ್. ಎಂ.ವಿಶ್ವೇಶ್ವರಯ್ಯ ಎಂದೇ ಖ್ಯಾತರಾದ ಶ್ರೇಷ್ಠ ನೀರಾವರಿ ತಜ್ಞರಾದ ಎಸ್.ಜಿ. ಬಾಳೇಕುಂದ್ರಿರವರ 101ನೇ ಜನ್ಮ ಶತಮಾನೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಬೆಂಗಳೂರಿನ ಪ್ರೊ. ಎಮಿರಿಟಿಸ್ ಜಯದೇವ ಆಸ್ಪತ್ರೆಯ ಖ್ಯಾತ ಮಕ್ಕಳ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ಸಂಸ್ಮರಣಾ ನುಡಿಗಳನ್ನಾಡಿದರು. ಭಕ್ತಿ ಗಂಧರ್ವ ವಿದ್ವಾನ್ ಎಂ.ಎಸ್. ದೀಪಕ್ ಅವರು ‘ವಚನಾಮೃತ ಸಾರ’ ಎಂಬ ಬಸವಣ್ಣ ವಚನಗಳನ್ನು ವಿಶೇಷ ಸಂಗೀತ ಕಚೇರಿಯ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಹಳ ಸೊಗಸಾಗಿ ಪ್ರಸ್ತುತಪಡಿಸಿದರು. ಶ್ರೀಯುತ ದೀಪಕ್ ಅವರ ಗುರುಗಳಾದ ಗಾನ ಕಲಾಭೂಷಣ ಡಾ. ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಕರ್ನಾಟಕ ಸಂಗೀತದಲ್ಲಿ ಮಾತ್ರ ಕೇಳ-ಸಿಗಬಹುದಾದ ಒಂದು…
ಮೈಸೂರು : ಸಮತಾ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಡಾ.ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಕಾವ್ಯ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 01-06-2023 ಗುರುವಾರ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಶೋಧಕಿ ಟಿ.ಎನ್. ನಾಗರತ್ನಾ “ಸ್ತ್ರೀಪರ ವಾದ ಬಲವಾಗಿದ್ದ ಕಾಲದಲ್ಲಿ ಮಹಿಳೆಯರ ಹಕ್ಕಿನ ಜೊತೆಗೆ ಅವರ ಕರ್ತವ್ಯದ ಬಗ್ಗೆಯೂ ಎಚ್ಚರಿಸುವ ಮನೋಭಾವ ವಿಜಯಾದಬ್ಬೆ ಅವರಲ್ಲಿತ್ತು. ವಿಜಯಾ ಮಾತು ಕಡಿಮೆಯಾದರೂ ಉತ್ತಮ ನಡವಳಿಕೆ ಹೊಂದಿದ್ದರು. ಜಾತಿ-ಧರ್ಮ ಮೀರಿದ ವ್ಯಕ್ತಿತ್ವ ಅವರದ್ದು. ಅವರ ಸ್ತ್ರೀಪರ ಕಾಳಜಿಯಿಂದ ಸ್ಥಾಪಿತವಾದ ಸಮತಾ ಅಧ್ಯಯನ ಕೇಂದ್ರವು ಹಿಂಜರಿಕೆ ಮನೋಭಾವ ಹೊಂದಿದ್ದ ಅನೇಕರಿಗೆ ದಾರಿದೀಪವಾಗಿ ಕೆಲಸ ಮಾಡಿದೆ” ಎಂದು ಹೇಳಿದರು. ಸಮತಾ ಅಧ್ಯಯನ ಕೇಂದ್ರದ ನಿಕಟಪೂರ್ವ ಅಧ್ಯಕ್ಷೆ ಎಂ.ಎನ್. ಸುಮನಾ ಮಾತನಾಡಿ, “ಇದೇ ಮೊದಲ ಬಾರಿಗೆ ಈ ಸಂಸ್ಥೆಯಿಂದ ಅವರ ಹೆಸರಿನಲ್ಲಿ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಒಟ್ಟು 46 ಲೇಖಕಿಯರಿಂದ ವಿಮರ್ಶೆ ಮತ್ತು ಸಂಶೋಧನಾ ಕೃತಿಗಳು ಬಂದಿದ್ದು, ಇದರಲ್ಲಿ…
ʻಪದ್ಮಭೂಷಣ ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼಗೆ ಡಾ.ಪುಷ್ಪಾ ಐಯ್ಯಂಗಾರ್ ಹಾಗೂ ಶ್ರೀಮತಿ ಜಯಲಕ್ಷ್ಮಿ ಪಾಟೀಲ ಆಯ್ಕೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಾವಂತ ಮಹಿಳಾ ಸಾಹಿತಿಗಳಿಗಾಗಿ ಮೀಸಲಿಟ್ಟಿರುವ ʻಪದ್ಮಭೂಷಣ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼ ಪ್ರಕಟಿಸಲಾಗಿದೆ.2022 ಹಾಗೂ 2023ನೇ ಸಾಲಿನ ಪ್ರಶಸ್ತಿಗಾಗಿ ಮಹಿಳಾ ಸಾಹಿತಿಗಳ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 15,000(ಹದಿನೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪದ್ಮಭೂಷಣ ಡಾ.ಸರೋಜಾದೇವಿ ಅವರು ತಮ್ಮ ಸುಪುತ್ರಿ ಬಿ.ಭುವನೇಶ್ವರಿ ಅವರ ಸ್ಮರಣಾರ್ಥ ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ʻಪದ್ಮಭೂಷಣ ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುತ್ತಿರುವ ಮಹಿಳಾ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮಿಸಲಿಟ್ಟಿರುತ್ತಾರೆ. ಅದರಂತೆ ಕಳೆದ 26 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ಸಮರ್ಥ ಮಹಿಳಾ ಸಾಹಿತಿಗಳಿಗೆ ನೀಡುತ್ತಾ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಮಹಿಳಾ ಸಾಹಿತಿಯನ್ನು ಗುರುತಿಸಿ ಆಯ್ಕೆ ಮಾಡಿದೆ. ಇದುವರೆಗೆ ರಾಜ್ಯದ 25 ಮಹಿಳಾ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.…
ತೆಕ್ಕಟ್ಟೆ: ನಿರಂತರವಾಗಿ ಹಲವಾರು ವರ್ಷಗಳಿಂದ ನೆರವೇರಿದ ಬಡಗು ಯಕ್ಷಗಾನ ಹಿಮ್ಮೇಳ ತರಗತಿ ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ನೇತೃತ್ವದಲ್ಲಿ ಈ ವರ್ಷ ಜೂನ್ 4ರ ಭಾನುವಾರದಂದು ಮಧ್ಯಾಹ್ನ 3ರಿಂದ ಪ್ರತೀ ದಿನ ಆರು ತಿಂಗಳುಗಳ ಕಾಲ ನಡೆಯಲಿದೆ. ಪ್ರಸಂಗಕರ್ತರಾದ, ಕಲಾ ಪೋಷಕರಾದ ಮಹಾಬಲ ಹೇರಿಕುದ್ರು ತರಗತಿಯನ್ನು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಉಪನ್ಯಾಸಕರಾದ ಸುಜಯೀಂದ್ರ ಹಂದೆ, ಯಕ್ಷಗುರುಗಳಾದ ಸೀತಾರಾಮ ಶೆಟ್ಟಿ ಕೋಕೂರು, ಯಕ್ಷ ಸಂಘಟಕರಾದ ಕೋಟ ಸುದರ್ಶನ ಉರಾಳ ಆಗಮಿಸಲಿದ್ದಾರೆ. ಗುರುಗಳಾಗಿ ವಿದ್ವಾನ್ ಗಣಪತಿ ಭಟ್, ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆ ನಿಟ್ಟೂರು ಹಾಗೂ ಅತಿಥಿಯಾಗಿ ಪ್ರಾಚಾರ್ಯ ಕೆ.ಪಿ. ಹೆಗಡೆ ತೆಕ್ಕಟ್ಟೆ ಕೇಂದ್ರದ ಗುರುಗಳಾಗಿ ನೇಮಕಗೊಂಡಿರುತ್ತಾರೆ. ಭಾಗವತಿಗೆ, ಚಂಡೆ, ಮದ್ದಲೆ, ಹೆಜ್ಜೆ ತರಗತಿಗೆ ಸೇರಲಿಚ್ಚಿಸುವವರು ಉದ್ಘಾಟನೆಯಲ್ಲಿ ಹಾಜರಿರಬೇಕೆಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕ:9945947771
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾಶನ ಸಂಸ್ಥೆಗಳಿಗೆ ಕೊಡಮಾಡುವ 2022 ಹಾಗೂ 2023ನೇ ಸಾಲಿನ ʻಅಂಕಿತ ಪುಸ್ತಕ ಪುರಸ್ಕಾರʼದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು 35,000 (ಮೂವತೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದವರು ಕನ್ನಡ ಪ್ರಕಾಶಕರಿಗಾಗಿ ಈ ದತ್ತಿ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ಕನ್ನಡ ಪ್ರಕಾಶಕರಿಗಾಗಿ ಮಿಸಲಿಟ್ಟ ರಾಜ್ಯಮಟ್ಟದ ಈ ಪುರಸ್ಕಾರವನ್ನು ʻವರ್ಷದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ-ಅಂಕಿತ ಪುಸ್ತಕ ಪುರಸ್ಕಾರʼ ದತ್ತಿ ಹೆಸರಿನಲ್ಲಿ ಪ್ರಶಸ್ತಿಯನ್ನುನೀಡಬೇಕು ಎನ್ನುವುದು ದತ್ತಿ ದಾನಿಗಳ ಆಶಯವಾಗಿದೆ. ಅದರಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ನೀಡುತ್ತ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಪ್ರಕಾಶನ ಕ್ಷೇತ್ರದಲ್ಲಿ ನಿರಂತರ 10 ವರ್ಷಗಳಿಂದ ಚಾಲ್ತಿಯಲ್ಲಿದ್ದು ಕನ್ನಡ ಪುಸ್ತಗಳನ್ನು ಪ್ರಕಟಿಸುವ ಮೂಲಕ ಕನ್ನಡದ ಸೇವೆ ಸಲ್ಲಿಸುತ್ತಿರುವ ಪ್ರಕಾಶನವನ್ನು ಗುರುತಿಸಿ ಅಂಕಿತ ಪುಸ್ತಕ ಪುರಸ್ಕಾರ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕರೋನಾ…
ಮಂಗಳೂರು: ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ‘ಚಿತ್ತಾಲರ ಮುದ್ರೆ ಇರುವ ಅವರ ಬರವಣಿಗೆಯು ಕತೆ ಕಾದಂಬರಿಗಳಿಗೆ ಮಾತ್ರವಲ್ಲ. ಅವರ ಪ್ರಬಂಧ, ಲಬಸಾ (ಲಯಬದ್ದ ಸಾಲುಗಳು) ಕವಿತೆಗಳಲ್ಲಿಯೂ ಹರಡಿದೆ. ಈ ಅಗ್ರಮಾನ್ಯ ಲೇಖಕರ ಭಾವಚಿತ್ರವು ಮಂಗಳೂರು, ಶಕ್ತಿ ನಗರದ ವಿಶ್ವ ಕೊಂಕಣಿ ಕೀರ್ತಿ ಮಂದಿರದಲ್ಲಿ ಜೂನ್ 10ರಂದು ಅನಾವರಣಗೊಳ್ಳಲಿದೆ. ಬನ್ನಿ, ಸಂಜೆ 4ರಿಂದ 6.30ವರೆಗೆ ಬಿಡುವು ಮಾಡಿಕೊಳ್ಳಿ. ಕನ್ನಡ ಕಂಡ ಈ ಮಹತ್ವದ ಬರಹಗಾರರನ್ನು ಸ್ಮರಿಸಿಕೊಳ್ಳೋಣ. ವಿಶ್ವ ಕೊಂಕಣಿ ಕೇಂದ್ರ ಎಲ್ಲ ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಆಹ್ವಾನಿಸುತ್ತಿದೆ. ನಮ್ಮೊಂದಿಗೆ ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗರೂ ಇದ್ದು, ಚಿತ್ತಾಲರ ವ್ಯಕ್ತಿತ್ವ ಮತ್ತು ಬರಹಗಳನ್ನು ಮೆಲುಕು ಹಾಕುತ್ತಾ ಅವರೊಡನೆಯ ಒಡನಾಟದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ವಿಜೇತ ಕೃತಿ, ‘ನ ಪ್ರಮದಿತವ್ಯಮ್’ ವಿಭಿನ್ನ ಹಿನ್ನೆಲೆಯ ಹದಿಮೂರು ಸಣ್ಣ ಕಥೆಗಳ ಸಂಕಲನ, ಬಿಟ್ಟು ಬಂದ ಹಳ್ಳಿಯ ಮುಗ್ಧ ಮನುಷ್ಯ ಸಂಬಂಧಗಳನ್ನೋ ಬಾಲ್ಯದ ಹಳವಂಡಗಳನ್ನೂ ಮೆಲುಕುಹಾಕುವ ಯುವ ಬರಹಗಾರರ ಈಚೆಯ ಕಥೆಗಳಿಗಿಂತ ಪ್ರತ್ಯೇಕ ಹಾದಿ ಹಿಡಿದಿರುವ ಸೋಮಯಾಜಿಯವರಲ್ಲಿ ಜಾಗತೀಕರಣದ ಹಿನ್ನೆಲೆಯಲ್ಲಿ ವಿಸ್ತಾರವೂ, ವೈವಿಧ್ಯಮಯವೂ ಆಗುತ್ತಿರುವ ಜೀವನಾನುಭವದ ಕಥೆಗಳಿವೆ. ಅವರ ಕಥೆಗಳು ಘಟಿಸುವುದು ಲಿಬರಲೈಸ್ಡ್ ನವ್ಯೋತ್ತರ ಜಗತ್ತಿನಲ್ಲಾದರೂ, ಅವರು ಸೃಷ್ಟಿಸುವ ಪಾತ್ರಗಳು ನವೋದಯದ ಕಾಲಘಟ್ಟದಲ್ಲಿ ಬೇರು ಚಾಚಿರುವುದರಿಂದ ಅವರ ಕಥೆಗಳ ಕಟ್ಟೋಣ ಬಹುತೇಕ ಪೂರ್ವಸೂರಿಗಳು ಅನುಸರಿಸಿದ ಮಾರ್ಗದಲ್ಲಿವೆ. ಶ್ರೀಲೋಲ ಸೋಮಯಾಜಿ ಆದುದರಿಂದಲೇ, ಶ್ರೀಲೋಲ ಸೋಮಯಾಜಿಯವರ ಬಹುತೇಕ ಕಥೆಗಳು, ಸಮಕಾಲಿನ ಸಂದಿಗ್ಧತೆಯೊಂದರ ಎರಡು ಆಯಾಮಗಳನ್ನು ದಕ್ಕಿಸಿಕೊಂಡು ಬೆಳೆದರೂ, ಒಟ್ಟು ಮೌಲ್ಯಮಾಪನದ ಸಂದರ್ಭ ತಲುಪಿದಾಗ ಓದುಗರಿಗೆ ಹಸ್ತಾಂತರವಾಗುವ ಮಾಸ್ತಿಯವರ ಒಂದು ತಂತ್ರದ ಮುಂಚಾಚಿನ ಮಾದರಿಯಲ್ಲಿ ನಿರೂಪಿತವಾಗಿದೆ. ಉದಾರಣೆಗೆ ವೆಂಕಟಾಚಲ ನಿಲಯದಂತಹ ರಾಚನಿಕವಾಗಿ ಗಮನಾರ್ಹವೆನ್ನಿಸುವ ಕಥೆಯಲ್ಲಿನ ತ್ಯಾಗರಾಜರು ಬಿಲಹರಿ ರಾಗದ ಮೂಲಕ ಸತ್ತ ವ್ಯಕ್ತಿಯನ್ನು ಪುನಃ ಜೀವಂತ…