Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕನ್ನಡದ ಖ್ಯಾತ ಲೇಖಕಿ ದಿ.ಡಾ.ಎಚ್.ಗಿರಿಜಮ್ಮ ಅವರ ನೆನಪಿನಲ್ಲಿ ಪ್ರತೀ ವರ್ಷ ಮಹಿಳಾ ವೈದ್ಯರಿಗೆ ನೀಡುವ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. 2022ರಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯ, ಕಥಾ ಸಂಕಲನ, ಕಾದ೦ಬರಿ, ಕವಿತಾ ಸಂಕಲನ, ಪ್ರಬಂಧ, ಪ್ರವಾಸ ಕಥನ ಇತ್ಯಾದಿ ಯಾವುದೇ ಪ್ರಕಾರದ ತಮ್ಮ ಕೃತಿಗಳ ತಲಾ ಮೂರು ಪ್ರತಿಗಳನ್ನು ವೈದ್ಯ ಲೇಖಕಿಯರು ಆಗಸ್ಟ್ 30ರೊಳಗೆ ಕಳುಹಿಸಬಹುದು. ಪ್ರಶಸ್ತಿಯು ರೂ.25,000/- ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಕೃತಿಗಳನ್ನು ಡಾ. ಎಚ್. ಗಿರಿಜಮ್ಮ ಸ್ನೇಹ ಬಳಗ, ನಂ.222, 2ನೇ ಇಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರ ನಗರ, ಬೆಂಗಳೂರು -560079 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9986840477 ಸಂಪರ್ಕಿಸಬಹುದು.
ಔಪಚಾರಿಕ ಶಿಕ್ಷಣವು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಶಿಕ್ಷಣವು ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕವಾಗಿ ವ್ಯಕ್ತಿಯ ಅಭ್ಯುದಯವನ್ನು ಸಾಧಿಸಲು ಸಹಕಾರಿಯಾಗಿದೆ. ಔಪಚಾರಿಕ ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಸುವ್ಯವಸ್ಥಿತವಾಗಿರಿಸಲು ಅನುಕೂಲ ಮಾಡಿಕೊಡುತ್ತದೆ ಎಂಬುದು ಬಹುತೇಕ ಚಿಂತಕರ ಅಭಿಪ್ರಾಯ. ಶಿಕ್ಷಣದ ಮಹತ್ವವನ್ನು ಅರಿಸ್ಟಾಟಲ್, ಪ್ಲೇಟೋರಂತಹ ತತ್ತ್ವಜ್ಞಾನಿಗಳು ಜಗತ್ತಿಗೆ ಸಾರಿದ್ದಾರೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕೇವಲ ಔಪಚಾರಿಕ ಶಿಕ್ಷಣದಿಂದ ಮಾತ್ರವೇ ಬದುಕಿನ ಎಲ್ಲಾ ಮಜಲುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ, ಚಿತ್ರಕಲೆ, ಕ್ರೀಡೆ , ಕರಕುಶಲ ಇತ್ಯಾದಿ ಕಲೆಗಳು ಇತ್ಯಾದಿಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಅರ್ವತ್ತನಾಲ್ಕು ಪ್ರಮುಖ ವಿದ್ಯೆಗಳಲ್ಲಿ ಒಂದಾದ ನೃತ್ಯ ಕಲೆಗೆ ಮಾರುಹೋಗಿ, ಅದನ್ನು ಕಲಿಯುತ್ತಿರುವ ಮಕ್ಕಳಿಗೇನೂ ಕೊರತೆಯಿಲ್ಲ. ಶಾಸ್ತ್ರೀಯ ನೃತ್ಯದ ಕಡೆಗೆ ಮಕ್ಕಳು ಹಾಗೂ ಮುಖ್ಯವಾಗಿ ಅವರ ಪೋಷಕರ ಒಲವು ಅಧಿಕವಾಗಿರಲು ಕಾರಣ – ಶಾಸ್ತ್ರೀಯ ನೃತ್ಯವು ದೈವಿಕ ಕಲೆಯಾಗಿ, ಪರಮಾತ್ಮನನ್ನು ಸಾಕ್ಷಾತ್ಕರಿಸಲು ಸಹಕಾರಿ. ಅದರ ಜೊತೆ ಜೊತೆಗೆ ದೇಹ – ಮನಸ್ಸು ಎರಡನ್ನೂ…
ಮಂಗಳೂರು: ದೇಶಾಭಿಮಾನ ಹೆಚ್ಚಿಸುವ, ಕೊಂಕಣಿ ಮಾನ್ಯತೆಯನ್ನು ಸಂಭ್ರಮಿಸುವ ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 260ನೇ ಕಾರ್ಯಕ್ರಮ ಕೊಂಕಣ್ ಭಾರತ್ (ಸಂಗೀತ್ ಎಕ್ಸ್ ಪ್ರೆಸ್) ಸಂಗೀತ ಸಂಜೆ ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 06-08-2023ರಂದು ಜರಗಿತು. ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಜೋಡಿ ಲವೀನಾ-ಅನಿಲ್ ಪಾಯ್ಸ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಕಿಶೋರ್ ಫೆರ್ನಾಂಡಿಸ್, ಸ್ಪ್ಯಾನಿ ಆಲ್ವಾರಿಸ್ ಉಪಸ್ಥಿತರಿದ್ದರು. ರೈನಾ ಸಿಕ್ವೇರಾ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ನಡೆಯಿತು. ಮೊದಲಿಗೆ ಇತ್ತೀಚೆಗೆ ನಿಧನ ಹೊಂದಿದ ಕೊಂಕಣಿ ಗಾಯಕ ಕ್ಲೊಡ್ ಡಿ’ಸೋಜಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಅವರೇ ರಚಿಸಿದ ‘ಸಂಸಾರಾ’ ಹಾಡನ್ನು ಸಿಮೋನ್ ಮೊಂತೇರೊ ಹಾಡಿದರು. ಅನಂತರ ಕೊಂಕಣಿ ಭಾಷೆಯ ಬಗ್ಗೆ, ಭಾರತ ದೇಶದ ಬಗ್ಗೆ ಮನಸ್ಸಿಗೆ ಮುದ ನೀಡುವ ವಿವಿಧತೆಯಲ್ಲಿ ಏಕತೆ ಸಾರುವ ಹಿರಿ ಕಿರಿಯ ಗೀತ ರಚನಾಕಾರರ ಸುಂದರ 12 ಹಾಡುಗಳನ್ನು ವಿವಿಧ ವಯೋಮಾನದ ಗಾಯಕರು ಪ್ರಸ್ತುತ ಪಡಿಸಿದರು. ಮೆಲ್ವಿನ್ ಪೆರಿಸ್, ಡೊ…
ಬೆಂಗಳೂರು : ರಂಗಪ್ರವೇಶ ಅಥವಾ ಅರಂಗೇಟ್ರಮ್ ಒಂದು ಕಲಾವಿದನ ಬೆಳವಣಿಗೆಯ ಮೊದಲ ಹೆಜ್ಜೆ. ವರ್ಷಗಳಿಂದ ಸತತವಾಗಿ ಕಲೆಯನ್ನು ಅಭ್ಯಾಸ ಮಾಡಿ ಗುರುಗಳ ಅನುಮತಿ ಪಡೆದು ಕಲಾವಿದರು ಮೊದಲ ಬಾರಿ ವೇದಿಕೆಯನ್ನು ಏರುವ ಕಾರ್ಯಕ್ರಮವೇ ರಂಗಪ್ರವೇಶ. ಉದಯೋನ್ಮುಖ ಕಲಾವಿದೆ ಕು.ಸ್ತುತಿಶ್ರೀ ತಿರುಮಲೆ ‘ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ 06-08-2023ರಂದು ಬೆಂಗಳೂರಿನ ಜಯನಗರ ಬಡಾವಣೆಯ ಜೆ.ಎಸ್.ಎಸ್. ಸಭಾಂಗಣದಲ್ಲಿ ತಮ್ಮ ರಂಗಪ್ರವೇಶ ಪ್ರದರ್ಶನ ನೀಡಿದರು. ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವ ಕು.ಸ್ತುತಿಶ್ರೀ ಇವರು ವಿದುಷಿ ಶ್ರೀರಂಜಿನಿ ಉಮೇಶ್ ಹಾಗೂ ಹಿರಿಯ ಗುರುಗಳಾದ ಶ್ರೀಮತಿ ರೇವತಿ ನರಸಿಂಹನ್ ಅವರಲ್ಲಿ ನೃತ್ಯಾಭ್ಯಾಸ ಮಾಡಿ ಪ್ರಸ್ತುತ ‘ನಟನತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್‘ನ ವಿದುಷಿ ಶ್ರೀಮತಿ ವೈ.ಜಿ.ಶ್ರೀಲತಾ ನಿಕ್ಷಿತ್ ಅವರಲ್ಲಿ ಕಲಿಕೆಯನ್ನು ಮುಂದುವರಿಸಿ, ಅವರ ಮಾರ್ಗದರ್ಶನದಲ್ಲಿ ರಂಗಪ್ರವೇಶ ಮಾಡಿದ್ದಾರೆ. ಅದ್ಭುತವಾದ ಈ ರಂಗಪ್ರವೇಶವು ಓರ್ವ ನುರಿತ ಕಲಾವಿದೆ ನೀಡುವ ಕಾರ್ಯಕ್ರಮದಂತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದೆ. ಸ್ತುತಿಶ್ರೀ ತನ್ನ ರಂಗಪ್ರವೇಶದ ಪ್ರಾರಂಭದಲ್ಲಿ ಪುಷ್ಪಾಂಜಲಿ, ,…
ಕರುನಾಡ ಕರಾವಳಿ ಅಂದ್ರೇ ನಮ್ಮೆಲ್ಲರಿಗೆ ತಟ್ಟನೇ ನೆನಪಾಗೋದು ಯಕ್ಷಗಾನ. 16/08/1991ರಂದು ನಾಗರಾಜ ಕೆ ಎನ್ ಹಾಗೂ ವಿನೋದ ಇವರ ಮಗನಾಗಿ ಭಾರ್ಗವ ಭಾಗವತ್ ಅವರ ಜನನ. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಇವರ ವಿದ್ಯಾಭ್ಯಾಸ. ಅಪ್ಪ, ಅಣ್ಣ (ನಾಗಭೂಷಣ ಹೆಗ್ಗೋಡು ) ಮತ್ತು ಧಾರೇಶ್ವರ ಭಾಗವತರ ಕಾಳಿದಾಸ ಕ್ಯಾಸೆಟ್, ಭಾರ್ಗವ ಅವರು ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆ. ಅಣ್ಣ ನಾಗಭೂಷಣ ಹೆಗ್ಗೋಡು ಹಾಗೂ ಎ.ಪಿ. ಪಾಠಕ್ ಇವರ ಯಕ್ಷಗಾನ ಗುರುಗಳು. ಉಪನ್ಯಾಸಕ ವೃತ್ತಿ ಇರುವುದರಿಂದ ಪೂರ್ಣಕಾಲಿಕ ಯಕ್ಷಗಾನ ತಿರುಗಾಟ ಇಲ್ಲ. ಅಗತ್ಯ ಇದ್ದಾಗ ಬಡಗುತಿಟ್ಟಿನ ಎಲ್ಲಾ ಮೇಳದಲ್ಲಿ ಕೆಲಸ ಮಾಡಿರುತ್ತಾರೆ. ಸಾಲಿಗ್ರಾಮ, ಪೆರ್ಡೂರು, ಜಲವಳ್ಳಿ ಟೆಂಟ್ ಮೇಳ ಒಳಗೊಂಡು ಬಯಲಾಟದ ಎಲ್ಲ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವವಿದೆ. ಧಾರೇಶ್ವರರು ನೀಲಾವರ ಮೇಳ ಮಾಡಿದಾಗ ಅಧಿಕೃತ ಚಂಡೆ ವಾದಕರಾಗಿದ್ದರು. ಭಾಗವತನಾಗಿಯೂ ಅಲಸೆ, ಸೀತುರು, ನೀಲಾವರ, ಬೊಮ್ಮನಹಳ್ಳಿ ಮೇಳಗಳಲ್ಲಿ ಸೇವೆಯನ್ನು ಮಾಡಿರುತ್ತಾರೆ ಭಾರ್ಗವ. 15 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಪಾಠಕರು, ಕೋಟ,…
ಬದಿಯಡ್ಕ : ಶ್ರೀ ಭಾರತೀ ವಿದ್ಯಾಪೀಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕವು ಆಯೋಜಿಸಿದ್ದ ನಾಡೋಜ ಕವಿ ಡಾ. ಕೈಯ್ಯಾರರ ಕವನ, ಕಥಾ ಸಂಚಿಕೆಗಳಿಂದ ಆಯ್ದ ಭಾಗದ ‘ಚಿಂತನ ಮಂಥನ ಮತ್ತು ಸಂಸ್ಮರಣೆ’ ಕಾರ್ಯಕ್ರಮವು ದಿನಾಂಕ 09-08-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ.ಎನ್. ಮೂಡಿತ್ತಾಯರವರು ಉದ್ಘಾಟಿಸಿ ಮಾತನಾಡುತ್ತಾ “ನೀಳಕಾಯದ, ಸಪಾಟಾಗಿ ಮುಖಕ್ಷೌರ ಮಾಡಿ ಗಂಭೀರ ವದನದ, ಅಚ್ಚುಕಟ್ಟಾಗಿ ಉಡುಪು ತೊಟ್ಟು ಸದಾ ಖದರ್ ಶಾಲು ಹೊದ್ದ ಹಸನ್ಮುಖಿ ಕೈಯ್ಯಾರ ಕಿಂಞಣ್ಣ ರೈಗಳನ್ನು ಕಂಡಿದ್ದ ಜನರು ಮರೆಯುವುದಕ್ಕುಂಟೆ ? ಅವರ ಪರ್ವತವಾಣಿಯ ನಿರರ್ಗಳ ಭಾಷಣಗಳು, ಬರಹದ ಮೂಲಕ ವ್ಯಕ್ತಿಚಿತ್ರಗಳು, ಅಗಲಿದ ಸಾಧಕರ ಕುರಿತು ದಾಖಲೆ ಇವುಗಳನ್ನು ಕರಾರುವಾಕ್ಕಾಗಿ ಮುಂದಿಡುವ ನೆನಪುಶಕ್ತಿ ಇತ್ಯಾದಿಗಳು ಎಂದಿಗೂ ಮನೆಮಾತಾಗಿತ್ತು. ಒಂದು ಶತಮಾನ ಕಾಲ ಕಾಸರಗೋಡು ಅವರದೇ ಗುಂಗಿನಲ್ಲಿ ಖುಶಿಯಲ್ಲಿತ್ತು. ಶತಾಯುಷಿ ಮೂರು ಕಾಲಗಳನ್ನು ಕಂಡವರು, ಅದರ ನೋವು ಉಂಡವರು. ಸ್ವಾತಂತ್ರ್ಯ ಹೋರಾಟದ ಮೂಲಕ ದೇಶಸೇವೆ, ಕರ್ನಾಟಕದ ಏಕೀಕರಣದ ಮೂಲಕ ಕನ್ನಡ…
ಮಂಗಳೂರು : ಮುಲ್ಲಕಾಡಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ದಿನಾಂಕ 08-08-2023ರಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಇವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ನಿರಂತರವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡವರೂ ಸಹ ಸಿ.ಎ.ಯಂತಹ ದೇಶದ ಅತ್ಯುನ್ನತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಶಕ್ತಿ ಹೆಚ್ಚಾಗುತ್ತದೆಯೇ ಹೊರತು, ಪಠ್ಯ ಕಲಿಕೆಗೆ ಯಾವುದೇ ತೊಡಕು ಉಂಟು ಮಾಡುವುದಿಲ್ಲ” ಎಂದು ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಈ ಬಾರಿ ಸುಮಾರು 40 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಗತಿ ಆರಂಭಿಸಿದ್ದು, ಈ ವಿನೂತನ ಯೋಜನೆಯನ್ನು ಮುಲ್ಲಕಾಡು ಶಾಲೆಯಲ್ಲಿ ಆರಂಭಿಸಲಾಯಿತು. ಸಹಪಠ್ಯದಲ್ಲಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಮಾತುಗಾರಿಕೆ, ನಾಟ್ಯ, ಹಾಡುಗಾರಿಕೆ, ವೇಷಭೂಷಣದಂತಹ ಸಂಸ್ಕಾರಯುತ ವಿಷಯ, ವಿಚಾರಗಳು ಮಕ್ಕಳಿಗೆ ಸಿಗಲಿ ಎಂಬುದು ಈ ತರಬೇತಿಯ ಉದ್ದೇಶವಾಗಿದೆ. ಸ್ಥಳೀಯ ಕಾರ್ಪೋರೇಟರ್ ಗಾಯತ್ರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ…
ಪುತ್ತೂರು : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಶ್ರೀ ರಾಮ ಸೌಧ ದರ್ಬೆ ಪುತ್ತೂರು ಹಾಗೂ ಜ್ಞಾನ ಗಂಗಾ ಪುಸ್ತಕ ಮಳಿಗೆ ಇದರ ನೇತೃತ್ವದಲ್ಲಿ ನಡೆದ ‘ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ ಮತ್ತು ಸಾಹಿತ್ಯ ವೈಭವ’ ಇದರ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಇದರ ವತಿಯಿಂದ ದಿನಾಂಕ 11-08-2023ರಂದು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ‘ಮಾಗಧ ವಧೆ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಸತೀಶ್ ಇರ್ದೆ, ಶ್ರೀ ಆನಂದ್ ಸವಣೂರು, ಚೆಂಡೆ ಮತ್ತು ಮದ್ದಳೆಗಳಲ್ಲಿ ಶ್ರೀ ದಂಬೆ ಈಶ್ವರ ಶಾಸ್ತ್ರಿ, ಶ್ರೀ ಮುರಳೀಧರ ಕಲ್ಲೂರಾಯ, ಶ್ರೀ ಆದಿತ್ಯ ನಾರಾಯಣ, ಶ್ರೀ ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಗಣೇಶ್ (ಶ್ರೀ ಕೃಷ್ಣ), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಮಾಗಧ), ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ (ಭೀಮಸೇನ) ಸಹಕರಿಸಿದರು. ಸಂಘದ ನಿರ್ದೇಶಕ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ಕನ್ನಡ ಸಾಹಿತ್ಯ…
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ.ಜಿಲ್ಲಾ ಸಮಿತಿಯಿಂದ ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ‘ಸ್ವರಾಜ್ಯ-ಸುರಾಜ್ಯ ಕವಿಗೋಷ್ಠಿ’ಯು ದಿನಾಂಕ 10-08-2023ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕುಮಾರ್ ಶೆಟ್ಟಿ ಪಿ. ಮಾತನಾಡಿ “ಕವಿಗಳು ತಮ್ಮ ಕವನಗಳ ಮೂಲಕ ಸಮಾಜಕ್ಕೆ ಸದ್ವಿಚಾರದ ಸಂದೇಶ ಪಸರಿಸಬೇಕು. ಯುವ ಮನಸ್ಸುಗಳಲ್ಲಿ ಉತ್ತಮ ಭಾವನೆ ಮೂಡಿಸಲು ಪ್ರಯತ್ನಿಸಬೇಕು” ಎಂದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಜೊತೆ ಕಾರ್ಯದರ್ಶಿ ಡಾ.ಅರ್ಜುನ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಅ.ಭಾ.ಸಾ.ಪ. ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ಸಾ.ಪ. ಕಾರ್ಯದರ್ಶಿ ಪರಿಮಳ ರಾವ್, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಕೋಶಾಧಿಕಾರಿ ಶ್ರೀ ಭಾಸ್ಕರ ರೈ ಕಟ್ಟ, ಜೊತೆ ಕಾರ್ಯದರ್ಶಿ ಶ್ರೀಲಕ್ಷ್ಮಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಜಯಾನಂದ ಪೆರಾಜೆ ಮತ್ತು ಕೃಷ್ಣ ಡಿ.ಎಸ್. ಉಪಸ್ಥಿತರಿದ್ದರು. ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಿರಿಯಪ್ಪ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 40ಕ್ಕೂ ಅಧಿಕ…
ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಶ್ರೀಮತಿ ವನಜಾಕ್ಷಿ ಚಾರಿಟೆಬಲ್ ಟ್ರಸ್ಟ್ ಜಂಟಿಯಾಗಿ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ಮಹಾಕವಿ ರತ್ನಾಕರವರ್ಣಿ ಸಭಾಂಗಣದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಗಾಗಿ ಆಯೋಜಿಸಿದ ‘ಕನ್ನಡ ಭಾಷಾ ಬೋಧನಾ ಕಾರ್ಯಾಗಾರ’ ದಿನಾಂಕ 09-08-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್ ಮಾತನಾಡುತ್ತಾ “ಉತ್ತಮ ಅಧ್ಯಯನದ ಮುಖಾಂತರ ತರಗತಿಯಲ್ಲಿ ಕನ್ನಡ ಭಾಷೆಯ ಮೇಲಿನ ಒಲವನ್ನು ಹೆಚ್ಚಿಸಬೇಕು. ಕನ್ನಡ ಭಾಷೆ ಪ್ರತಿಯೊಬ್ಬರ ಜವಾಬ್ದಾರಿ. ಕನ್ನಡದ ಬಗ್ಗೆ ನಮಗೆ ಗೌರವವಿರಬೇಕು. ಇತ್ತೀಚೆಗಿನ ದಿನಗಳಲ್ಲಿ ರಾಮಾಯಣ ಮಹಾಭಾರತದಂತಹ ಪುರಾಣಗಳ ಚಿಂತನೆಯನ್ನು ಜನರಿಗೆ ತಲುಪಿಸಲು ಯಕ್ಷಗಾನದ ಬಳಕೆಯಾಗುತ್ತಿರುವುದು ಒಂದರ್ಥದಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಸಹಕಾರಿ. ಕನ್ನಡದ ಬಗ್ಗೆ ಶಿಕ್ಷಕರಲ್ಲಿ ಒಲವು ಇರಬೇಕು. ಇಂಗ್ಲೀಷ್ ಪರಿವರ್ತನೆಗೆ ಒಳಗಾಗುತ್ತಿರುವ ಶಿಕ್ಷಕರಿಗೆ ತರಗತಿಯಲ್ಲಿ ಕನ್ನಡ ಭಾಷಾ ಬೋಧನೆಯ ಕುರಿತು ಹಮ್ಮಿಕೊಂಡಿರುವ ವಿಶೇಷ ಕಾರ್ಯಾಗಾರ ಅವರ ಜ್ಞಾನ ಭಂಡಾರ…