Subscribe to Updates
Get the latest creative news from FooBar about art, design and business.
Author: roovari
ಬಡಗುತಿಟ್ಟು ಯಕ್ಷಗಾನ ರಂಗದ ಅಭಿಜಾತ ಕಲಾವಿದ; ಅಭಿಮನ್ಯು, ಬಬ್ರುವಾಹನದಂತಹ ಪುಂಡು ವೇಷಗಳಲ್ಲಿ ಮೆರೆದು ಕ್ರಾಂತಿ ಮೂಡಿಸಿ ಯಕ್ಷರಂಗದ ಅಭಿಮನ್ಯು, ಯಕ್ಷಗಾನದ ಸಿಡಿಲಮರಿ, ಚಿರಯುವಕ ಎಂಬಿತ್ಯಾದಿ ಬಿರುದು ಪಡೆದು ಪುಂಡುವೇಷದಲ್ಲಿ ವಿಶಿಷ್ಟ ಹೆಸರು ಮಾಡಿದ ಕಲಾವಿದರು ಶ್ರೀಯುತ ತೀರ್ಥಹಳ್ಳಿ ಗೋಪಾಲ ಆಚಾರ್ಯ. ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ: ಯಕ್ಷಗಾನದ ಉಭಯತಿಟ್ಟುಗಳಿಗೆ ಮಹಾನ್ ಕಲಾವಿದರನ್ನು ನೀಡಿದ ಮಲೆನಾಡಿನ ತೀರ್ಥಹಳ್ಳಿ ಗೋಪಾಲಾಚಾರ್ಯರ ಹುಟ್ಟೂರಾದರೂ ಅವರ ಯಕ್ಷಗಾನ ಕಾರ್ಯಕ್ಷೇತ್ರ ಉಡುಪಿ ಜಿಲ್ಲೆ. ಬಹಳ ಹಿಂದಿನಿಂದಲೂ ಕುಂದಾಪುರ ತಾಲೂಕಿನ ನಾಯ್ಕನಕಟ್ಟೆಯಲ್ಲಿ ನೆಲೆನಿಂತ ಇವರು ತೀರ್ಥಹಳ್ಳಿಯ ವಾಸುದೇವ ಆಚಾರ್ಯ ಹಾಗೂ ಸುಲೋಚನಮ್ಮ ದಂಪತಿಗಳ ಐದು ಮಂದಿ ಮಕ್ಕಳಲ್ಲಿ ಎರಡನೆಯವರಾಗಿ ೨೪.೦೨.೧೯೫೬ ರಂದು ಜನಿಸಿದರು. ಕೇವಲ 3ನೇ ತರಗತಿ ವಿದ್ಯಾಭ್ಯಾಸ ಮಾಡಿ ತೀರ್ಥಹಳ್ಳಿ ಕೃಷ್ಣೋಜಿ ರಾವ್ ಬಳಿ ಪ್ರಾಥಮಿಕ ಯಕ್ಷಗಾನ ಅಭ್ಯಾಸ ಮಾಡಿದರೂ ಉಳಿದದ್ದೆಲ್ಲ ಕಂಡುಕೇಳಿ ಕಲಿತದ್ದೇ ಹೆಚ್ಚು. ಇವರ ಹೆಜ್ಜೆಗಾರಿಕೆಯಲ್ಲಿ ಮಟಪಾಡಿ ವೀರಭದ್ರ ನಾಯಕರ ಹೆಜ್ಜೆಗುರುತನ್ನು ಕಾಣಬಹುದಾಗಿದೆ. ತನ್ನ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ…
ಬೆಂಗಳೂರು: ಸ್ಪಂದನ, ಬೆಂಗಳೂರು -ನಾಟಕ ತಂಡ ತನ್ನ ಐವತ್ತನೆಯ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ನೇಷನಲ್ ಹೈಸ್ಕೂಲಿನ ಸಭಾಂಗಣದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ದಿನಾಂಕ 31-05-2023ರಂದು ಆಯೋಜಿಸಿತು. ತನ್ನಂತೆ ಐವತ್ತರ ಆಸುಪಾಸಿನ ತಂಡಗಳೆಷ್ಟಿವೆ ರಾಜಧಾನಿಯಲ್ಲಿ? ಎಲ್ಲರನ್ನೂ ಕರೆದು ಮಾತನಾಡಿಸೋಣ ಎಂಬ ಯೋಚನೆಯೊಂದು ಸ್ಪಂದನದ ನೇತಾರರಾದ ಬಿ.ಜಯಶ್ರೀ- ಅವರಿಗೆ ಹೊಳೆದಿರಬೇಕು. ಅದನ್ನು ಕಾರ್ಯಗತಗೊಳಿಸುವವರಾರು ಎಂಬ ಪ್ರಶ್ನೆ ಉದಿಸಿದಾಗ ಉತ್ತರ ರೂಪದಲ್ಲಿ ದೊರಕಿದವರೇ ಕನ್ನಡ ರಂಗಭೂಮಿಯ ಸವ್ಯಸಾಚಿ ಶ್ರೀನಿವಾಸ್ ಜಿ. ಕಪ್ಪಣ್ಣ. ಕಾರ್ಯಕ್ರಮ ಜಯಶ್ರೀಯವರ ಸ್ಪಂದನದ್ದಾದರೂ ಅದಕ್ಕೊಂದು ಚೌಕಟ್ಟು ಒದಗಿಸಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟವರು ಕಪ್ಪಣ್ಣ. ನೋಡಿದರೆ ಒಂದು ಕಾಲದ ಗಟ್ಟಿಮುಟ್ಟಾದ ಎಂಟು ತಂಡಗಳು! ನಟರಂಗ, ಸ್ಪಂದನ, ಕಲಾಗಂಗೋತ್ರಿ, ರಂಗಸಂಪದ, ಬೆನಕ, ಸಮುದಾಯ, ಸಂಕೇತ್ ಹಾಗೂ ಕನ್ನಡ ಸಾಹಿತ್ಯ ಕಲಾಸಂಘ (ನಾಟ್ಯದರ್ಪಣ). (ಅವುಗಳಲ್ಲಿ ʻಸಮುದಾಯʼದಂಥ ಕೆಲವು ತಂಡಗಳು ಇವತ್ತಿಗೂ ತನ್ನ ಗಟ್ಟಿತನವನ್ನು ಉಳಿಸಿಕೊಂಡಿದೆ.) ಒಂದೊಂದು ರಂಗ ತಂಡಕ್ಕೂ ಬೃಹತ್ತಾದ ಇತಿಹಾಸ. ಇತ್ತೀಚೆಗಷ್ಟೇ ʻನಟರಂಗಕ್ಕೆ ಐವತ್ತು ವರ್ಷʼ ಕಾರ್ಯಕ್ರಮವನ್ನು ಆಯೋಜಿಸಿ ಗೆದ್ದ ಕಪ್ಪಣ್ಣ, ಸ್ಪಂದನದ ಈ ಕಾರ್ಯಕ್ರಮಕ್ಕೆ ಬೇರೆಯೇ ಆಯಾಮ…
21 ಮೇ 2023ರಂದು ಮಂಗಳೂರಿನ ಕರಾವಳಿ ಲೇಖಿಕಿಯರ ಮತ್ತು ವಾಚಕಿಯರ ಸಂಘದಲ್ಲಿ ಅನಾವರಣಗೊಂಡ ಕಾಸರಗೋಡಿನ ಸೃಜನಶೀಲ ಬರಹಗಾರ್ತಿ ಶೀಲಾಲಕ್ಷ್ಮೀ ಅವರ ‘ಸರಸ-ಸಮರಸ’ ಕಾದಂಬರಿ ಮನಶಾಸ್ತ್ರ, ಸ್ತ್ರೀ ಸಬಲೀಕರಣಕ್ಕೆ ಹೆಜ್ಜೆಯಾಗಿ, ಮಾನವೀಯತೆಯ ನೆಲೆಯಾಗಿ ಗುರುತಿಸಿಕೊಂಡಿದೆ. ಕಾದಂಬರಿ ರಚನೆಯ ಕುರಿತು ಲೇಖಕಿ ಶೀಲಾಲಕ್ಷ್ಮೀಯವರು “ಓರ್ವ ತಾಯಿಯಾಗಿ ಮಕ್ಕಳ ಮನಸ್ಸಿನ ಸೂಕ್ಷ್ಮತೆಗಳನ್ನು ಗಮನಿಸುವುದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಅವರ ಮನೋಲ್ಲಾಸಕ್ಕೆ ಮಾರಕವಾಗಿ ಅವರ ವ್ಯಕ್ತಿತ್ವ ರೂಪೀಕರಣದಲ್ಲಿ ಋಣಾತ್ಮಕ ಪರಿಣಾಮ ಬೀರುವಂಥಾ ಹಲವಾರು ಬೆಳವಣಿಗಗಳು ಅವರವರ ಮನೆಯೊಳಗೇ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಅರಿತೋ ಅರಿಯದೆಯೋ ಹೆತ್ತವರೇ ಇದಕ್ಕೆ ಕಾರಣೀಭೂತರಾಗುತ್ತಿರುವುದು ದುರದೃಷ್ಟಕರ. ಒಂದೆರಡು ದಶಕಗಳ ಹಿಂದೆ ವೈದ್ಯಲೋಕದಲ್ಲಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ‘ಖಿನ್ನತೆ’ ಅಥವಾ ‘ಡಿಪ್ರೆಷನ್’ ಎನ್ನುವ ಪದ ಇತ್ತೀಚೆಗೆ ಮನೆ ಮನೆಗಳಲ್ಲೂ ಕೇಳಿಬರುತ್ತಿದೆ. ಸ್ಪರ್ಧಾತ್ಮಕ ಜಗತ್ತಿನ ಒತ್ತಡ ಹೆತ್ತವರನ್ನೂ ಮಕ್ಕಳನ್ನೂ ಹೈರಾಣಾಗಿಸುವ ಬಗೆಯು ನನ್ನನ್ನು ಬಹುವಾಗಿ ಕಾಡಿದೆ. ಇದನ್ನೇ ವಸ್ತುವನ್ನಾಗಿಸಿಕೊಂಡು ‘ಸರಸ-ಸಮರಸ’ ಕಥೆ ಸೃಷ್ಟಿಯಾಗಿದೆ” ಎಂದಿದ್ದಾರೆ. ಆಧುನಿಕ ಬದುಕಿನಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಇಂದು ತಲೆದೋರುತ್ತಿರುವ ಮಾನಸಿಕ ಸಮಸ್ಯೆಗಳು ನೂರಾರು,…
ಪುತ್ತೂರು : ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ವತಿಯಿಂದ ದಿನಾಂಕ 30-05-2023ರಂದು ಸಂಜೆ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಮೇಧಿನಿರ್ಮಾಣ’ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಜಯಪ್ರಕಾಶ್ ನಾಕೂರು, ಸತೀಶ್ ಇರ್ದೆ, ಆನಂದ ಸವಣೂರು, ಪದ್ಯಾಣ ಶಂಕರ ನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಆದಿಮಾಯೆ (ದುಗ್ಗಪ್ಪ ಯನ್.), ವಿಷ್ಣು (ಕು೦ಬ್ಳೆ ಶ್ರೀಧರ್ ರಾವ್ ಮತ್ತು ಭಾಸ್ಕರ್ ಶೆಟ್ಟಿ ಸಾಲ್ಮರ), ಬ್ರಹ್ಮ (ಭಾಸ್ಕರ್ ಬಾರ್ಯ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಈಶ್ವರ (ಚಂದ್ರಶೇಖರ್ ಭಟ್ ಬಡೆಕ್ಕಿಲ), ಮಧು (ಗುಂಡ್ಯಡ್ಕ ಈಶ್ವರ ಭಟ್) ಮತ್ತು ಕೈಟಭ (ಗುಡ್ಡಪ್ಪ ಬಲ್ಯ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಬನ್ನೂರು ರಾಜಗೋಪಾಲ್ ಭಟ್ ಪ್ರಾಯೋಜಿಸಿದ್ದರು. ಇದೇ ಯಕ್ಷಗಾನ ಸಂಘದ 2022-2023 ಸಾಲಿನ ಕೊನೆಯ ಕೂಟ (ಪತ್ತನಾಜೆ)ವು ದಿನಾಂಕ 31-05-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದ ತಾಳಮದ್ದಳೆ…
ಕುಂದಾಪುರ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಸಾರಥ್ಯದಲ್ಲಿ ಮೇ 27ರಂದು ‘ರಜಾರಂಗು-ರಂಗಮಂಚ’ ಮಕ್ಕಳ ಶಿಬಿರದ ಸಮಾರೋಪ ಸಮಾರಂಭ ಹಾಗೂ ‘ಕಾಳಿಂಗ ನಾವುಡರ ಸಂಸ್ಮರಣೆ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿ ಹಿರಿಯ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರು “ಗಗನಂ ಗಗನಾಕಾರಂ. ಸಮುದ್ರಕ್ಕೆ ಸಮುದ್ರವೇ ಸಾಟಿ. ಹಾಗೆಯೇ ನಾವುಡರಿಗೆ ಸಾಟಿ ಮತ್ತೊಂದಿಲ್ಲ. ರಂಗದಲ್ಲಿ ಏನೂ ಅಲ್ಲದ ಕಲಾವಿದನನ್ನು ಮೇಲಕ್ಕೆತ್ತುವ ಸಾಮರ್ಥ್ಯ ಕಾಳಿಂಗ ನಾವುಡರಲ್ಲಿದೆ. ರಂಗದಲ್ಲಿ ರಾಜಿ ಇಲ್ಲದ ಮಹಾನ್ ಕಲಾವಿದ. ಅತೀ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ ಶಕ್ತಿ ದೈವದತ್ತವಾಗಿ ಅವರಿಗೆ ಅನುಗ್ರಹಿತವಾಗಿದೆ. ಅವರು ಯಕ್ಷಗಾನದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾದರು” ಎಂದು ಹೇಳಿದರು. ಬೆಳೆಯುವ ಮಕ್ಕಳಿಗೆ ಕಲೆಯ ಪರಿಚಯವನ್ನು ಮಾಡಿಸಿದರೆ, ಅವರಿಗೆ ಭಾಗವಹಿಸುವುದಕ್ಕೆ ಅವಕಾಶವನ್ನು ಕೊಟ್ಟರೆ, ಒಂದು ತಲೆಮಾರಿಗೆ ನಾವೊಂದು ಕಾಣಿಕೆ ಕೊಟ್ಟ ಹಾಗೆ. ಇಂತಹ ಕೆಲಸವನ್ನು ಮಾಡಿದ ಸಂಸ್ಥೆಯನ್ನು ಶ್ಲಾಘಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನನ್ನನ್ನೂ ಸೇರಿದಂತೆ ಅನೇಕ ಕಲಾವಿದರನ್ನು ಬೆಳಕಿಗೆ ತಂದು ಕಲಾ ಪ್ರಪಂಚಕ್ಕೆ ತೋರಿಸಿಕೊಟ್ಟವರು…
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ಮೇ 30 ಮತ್ತು 31ರಂದು ನಡೆದ ಆಹ್ವಾನಿತ ಕಾಲೇಜು ತಂಡಗಳ ಯಕ್ಷಗಾನ ಸ್ಪರ್ಧೆಯಲ್ಲಿ ‘ತರಣಿಸೇನ ಕಾಳಗ’ ಪ್ರದರ್ಶಿಸಿದ ನಿಟ್ಟೆ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನ, ‘ಶ್ರೀಹರಿ ಲೀಲಾ’ ಪ್ರದರ್ಶಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ, ‘ಸುದರ್ಶನ ವಿಜಯ’ ಪ್ರದರ್ಶಿಸಿದ ಮಂಗಳೂರು ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯ ತೃತೀಯ ಪ್ರಶಸ್ತಿ ಪಡೆದವು. ರಾಜ ವೇಷದಲ್ಲಿ ಗೋವಿಂದ ದಾಸ ಕಾಲೇಜಿನ ಕಾರ್ತಿಕ್ ಅಮೀನ್, ಎಸ್.ಡಿ.ಎಂ.ನ ಅಜೇಯ ಸುಬ್ರಹ್ಮಣ್ಯ, ಪುಂಡುವೇಷದಲ್ಲಿ ಎಸ್.ಡಿ.ಎಂ.ನ ಪ್ರಶಾಂತ ಐತಾಳ, ಮಂಗಳೂರು ವಿವಿ ಕಾಲೇಜಿನ ಕೌಶಿಕ್, ಸ್ತ್ರೀ ವೇಷದಲ್ಲಿ ಆಳ್ವಾಸ್ನ ಈಶ್ವರೀ ಶೆಟ್ಟಿ, ಮಂಗಳೂರು ವಿವಿ ಕಾಲೇಜಿನ ವೀಕ್ಷಿತಾ, ಹಾಸ್ಯದಲ್ಲಿ ನಿಟ್ಟೆ ಎನ್ಎಸ್ಎಎಂನ ಪ್ರಣವ ಮೂಡಿತ್ತಾಯ, ಎಸ್.ಡಿ.ಎಂ.ನ ರೋಹಿಲ್ ಶೆಟ್ಟಿ, ಬಣ್ಣದ ವೇಷದಲ್ಲಿ ಎಸ್.ಡಿ.ಎಸ್.ನ ವೆಂಕಟ ಯಶಸ್ವಿ ಕೆ., ಆಳ್ವಾಸ್ ನ ಜೀವನ್ ಕಟೀಲ್ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದರು. ಸಮಗ್ರ…
ಕಾರ್ಕಳ: ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕಾರ್ಕಳ ಸಮಿತಿ ಜಂಟಿಯಾಗಿ ಮತ್ತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರ್ಕಳದ ಹೋಟೇಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 27-05-2023 ರಂದು ನಡೆಯಿತು. ಆಳ್ವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀ ಹರೀಶ್ ಟಿ.ಜಿಯವರು ‘ಉಗಾಭೋಗಗಳೆಂಬ ರಸಘಟ್ಟಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ‘ದಾಸ ಪರಂಪರೆಯಲ್ಲಿ ಬಂದಂತಹ ಕೀರ್ತನಕಾರರು ದೊಡ್ಡ ಮಟ್ಟದಲ್ಲಿ ಕೀರ್ತನೆಗಳನ್ನು ಬರೆದಂತೆ ಶ್ಲೋಕ ರೂಪದ ಸಣ್ಣ ಸಣ್ಣ ಭಕ್ತಿಗೀತೆಗಳಾಗಿರುವ ಉಗಾಭೋಗಗಳನ್ನೂ ರಚಿಸಿದರು. ಇವು ಗಾತ್ರದಲ್ಲಿ ಚಿಕ್ಕದಾದರೂ ಆಧ್ಯಾತ್ಮಿಕ ಹಂಬಲ ಮತ್ತು ಅದರ ರೀತಿಯನ್ನು ಸರಳವಾಗಿ ಇಲ್ಲಿ ನಿರೂಪಿಸಲಾಗಿದೆ. ಕೆಲವೇ ಸಾಲುಗಳಲ್ಲಿ ಭಕ್ತಿಯ ಮಹತ್ವವನ್ನು ಸಾರುವ ಉಗಾಭೋಗಗಳು ಅರ್ಥಪೂರ್ಣವೂ, ಸತ್ವಪೂರ್ಣವೂ ಆಗಿದ್ದು ಅವು ಕೊಡುವ ಆನಂದ ಅಪರಿಮಿತವಾದುದು ಭಕ್ತಿ, ಶರಣಾಗತಿ ಮತ್ತು ಮೋಕ್ಷ ಪ್ರಾಪ್ತಿಯನ್ನು ಗುರಿಯಾಗಿಟ್ಟುಕೊಂಡು ರಚನೆಗೊಂಡ ಉಗಾಭೋಗಗಳಲ್ಲಿ ಶ್ರೇಷ್ಠವಾದ ತಾತ್ವಿಕ ಚಿಂತನೆಗಳು ಅಡಗಿವೆ. ಶರಣರ…
ಮಂಗಳೂರು : ದಿನಾಂಕ 31-05-2023ರಂದು ಮಂಗಳೂರು ಗಮಕ ಕಲಾ ಪರಿಷತ್ತಿನ ಸಹಯೋಗದೊಂದಿಗೆ ಮಂಗಳೂರು ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಆವರಣದಲ್ಲಿ ವಾಸವಾಗಿರುವ ಶ್ರೀಮತಿ ವಾಣಿ ಮತ್ತು ಶ್ರೀ ಶುಭಕರ ಇವರ ಮನೆಯಲ್ಲಿ ಮನೆ ಮನೆ ಗಮಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಈ ಕಾರ್ಯಕ್ರಮದಲ್ಲಿ ಅಲ್ಲಿನ ಸಂಸ್ಕೃತ ಶಿಕ್ಷಕಿ ಶ್ರೀಮತಿ ಸ್ಮಿತಾ ಅವರ ಉತ್ತಮ ವಾಚನದಲ್ಲಿ ಮತ್ತು ಅಲ್ಲಿನ ಕನ್ನಡ ಉಪನ್ಯಾಸಕರಾದ ನಮ್ಮ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸುರೇಶ್ ರಾವ್ ಅವರ ವ್ಯಾಖ್ಯಾನದಲ್ಲಿ “ಕರ್ಣ ಜನನ” ಪ್ರಸಂಗ ಚೆನ್ನಾಗಿ ಮೂಡಿ ಬಂದಿತು. ನಮ್ಮ ಪರಿಷತ್ತಿನ ಕಾರ್ಯದರ್ಶಿಯಾದ ಶ್ರೀ ಶುಭಕರ ಅವರು ಸ್ವಾಗತಿಸಿ, ವಂದಿಸಿದರು. ವಾಣಿಶ್ರೀ ಅವರು ನಿರೂಪಣೆ ಮಾಡಿದರು. ಮಕ್ಕಳಾದ ಶ್ರೀಪಾಲ ಮತ್ತು ಶ್ರೀಕಲಾ ದೀಪ ಬೆಳಗಿಸಿ ಉದ್ಘಾಟಸಿದರು. ಹತ್ತಾರು ಮಂದಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಂಗಳೂರು: ಆಕಾಶವಾಣಿ ಮಂಗಳೂರು ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಮಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಯುವವಾಣಿ ಕಥಾ-ಕವನ-ಲೇಖನ ಸ್ಪರ್ಧೆ 2023ರ ಬಹುಮಾನ ವಿತರಣಾ ಸಮಾರಂಭವು 27-5-2023ರ ಶನಿವಾರ ಅಪರಾಹ್ನ ಮಂಗಳೂರು ಆಕಾಶವಾಣಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು. ಆಕಾಶವಾಣಿ ಮಂಗಳೂರು ನಿಲಯದ ಕಾರ್ಯಕ್ರಮ ಮುಖ್ಯಸ್ಥ ಶ್ರೀ ಟಿ. ಕೆ.ಉಣ್ಣಿಕೃಷ್ಣನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಳ್ತೂರು ಅಣ್ಣಯ್ಯ ಕುಲಾಲ್,ರೆಡ್ ಕ್ರಾಸ್ ಅಂತರ ರಾಷ್ಟ್ರೀಯ ಸಂಸ್ಥೆಯ ಮಂಗಳೂರು ವಿಭಾಗದ ಅಧ್ಯಕ್ಷ ರೊಟೇರಿಯನ್ ಸಿ.ಎ ಶ್ರೀ ಶಾಂತಾರಾಮ ಶೆಟ್ಟಿ, ಐ.ಸಿ.ಎ.ಐ ಮಂಗಳೂರು ವಿಭಾಗದ ಪೂರ್ವಾಧ್ಯಕ್ಷ ಸಿ.ಎ ಶ್ರೀ ಎಸ್.ಎಸ್. ನಾಯಕ್, ಪ್ರಣವ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಶ್ರೀ ಸೋಮಪ್ಪ ನಾಯಕ್, ವಿನಯ ಕೃಷಿಕ ಬೆಳೆಗಾರರ ಸಂಘ, ಕೋಲ್ನಾಡು ಇದರ ಅಧ್ಯಕ್ಷ ಶ್ರೀ ವಿಜಯ್ ಶೆಟ್ಟಿ ಕೋಲ್ನಾಡು ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕ ಶ್ರೀ…
ಬೆಂಗಳೂರು: ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದ್ದು ಕನ್ನಡ ಪುಸ್ತಕಗಳನ್ನು ಖರೀದಿಸಲು ಮುಂಬರುವ ಬಜೆಟ್ ನಲ್ಲಿ 25ಕೋಟಿ ಮೀಸಲಿಡಬೇಕು ಎಂದು ಪ್ರಕಾಶಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನು 30-05-2023ರ ಮಂಗಳವಾರ ಭೇಟಿಮಾಡಿ ಪುಸ್ತಕೋದ್ಯಮದ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರು. ಸಾರ್ವಜರಿಕ ಗ್ರಂಥಾಲಯ ಇಲಾಖೆಯು ಏಕಗವಾಕ್ಷಿ ಯೋಜನೆಯಡಿ 2020 ರಿಂದ 3 ವರ್ಷಗಳ ಪುಸ್ತಕ ಖರೀದಿ ನಡೆಸಿಲ್ಲ. ಇದರಿಂದಾಗಿ ರಾಜ್ಯದ ಎಲ್ಲೆಡೆ ಓದುಗರು ಹೊಸ ಕೃತಿಗಳಿಂದ ವಂಚಿತರಾಗಿದ್ದಾರೆ ಬಿ.ಬಿ.ಎಂ.ಪಿ 450ಕೋಟಿ ಗ್ರಂಥಾಲಯ ಕರ ಸಂಗ್ರಹಿಸಿದೆ ಇದನ್ನು ಸಂಬಂಧಿಸಿದ ಇಲಾಖೆಗೆ ಹತ್ತಾಂತರಿಸಿಲ್ಲ ಇದರಿಂದಾಗಿ ಪ್ರಕಾಶನ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ಪ್ರಕಾಶಕರು ಹೇಳಿದರು. ಪುಸ್ತಕ ಪ್ರಕಟಣೆ ವೆಚ್ಚ ಗಗನಕ್ಕೇರಿದೆ ಆದರೆ ಸಗಟು ಖರೀದಿಯಲ್ಲಿ ಮಾತ್ರ ಹಳೆಯ ದರವನ್ನೇ ನಿಗದಿಪಡಿಸಲಾಗಿದೆ. ಹೆಚ್ಚಿರುವ ಕಾಗದ, ಮುದ್ರಣ ಬೆಲೆ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ಟಿ) ಪ್ರಕಾಶನ ರಂಗ ತತ್ತರಿಸಿದೆ. ಆದ್ದರಿಂದ ಒಂದು ಪುಟದ…