Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಯಕ್ಷ ಆರಾಧನಾ ಕಿದಿಯೂರು ಟ್ರಸ್ಟಿನ ಪ್ರಥಮ ವಾರ್ಷಿಕೋತ್ಸವವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ದಿನಾಂಕ 28-05-2023 ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ವಿದ್ವಾನ್ ಗಣಪತಿ ಭಟ್ ಅವರಿಗೆ ‘ಯಕ್ಷ ಆರಾಧನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯವರು “ಯಕ್ಷಗಾನ ಅನಕ್ಷರಸ್ಥರಿಗೂ ನಮ್ಮ ಪುರಾಣಗಳ ಬಗ್ಗೆ ತಿಳಿಸಿ ಅವರಲ್ಲಿ ಅಧ್ಯಾತ್ಮಿಕ ಜಾಗೃತಿ ಮೂಡಿಸಿದೆ. ಯಕ್ಷಗಾನದಂತಹ ಕಲೆಗಳು ಬರೀ ಮನೋರಂಜನೆಗೆ ಮಾತ್ರವಲ್ಲ, ಸಮಾಜಕ್ಕೂ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿವೆ. ಈ ಜಾನಪದ ಕಲೆಗಳು ಸಂಸ್ಕಾರ, ನೀತಿವಂತ ಸಮಾಜವನ್ನು ನಿರ್ಮಿಸಿವೆ. ಎಲ್ಲಾ ಕಲೆಗಳನ್ನು ಮೇಳೈಸಿಕೊಂಡಿರುವ ಯಕ್ಷಗಾನಕ್ಕೆ ಇಂದು ರಾಜಾಶ್ರಯ ತಪ್ಪಿದರೂ, ಸಮಾಜ, ಮಠ ಮಂದಿರಗಳ ಪ್ರೋತ್ಸಾಹದಲ್ಲಿ ಬೆಳೆಯುತ್ತಿದೆ. ಆಧುನಿಕತೆಯ ಪ್ರಭಾವದಲ್ಲಿ ಈ ಕಲೆ ತನ್ನ ನೈಜತೆಯನ್ನು ಕಳೆದುಕೊಂಡು ವಿಕಾರವಾಗಬಾರದು. ಈ ಪ್ರಜ್ಞೆ ಕಲಾವಿದರಲ್ಲಿರಬೇಕು” ಎಂದು ಅವರು ಮಾರ್ಮಿಕವಾಗಿ ನುಡಿದರು. ಅಭ್ಯಾಗತರಾಗಿ ಆಗಮಿಸಿದ ತಲ್ಲೂರು…
ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ ಹೊಸಬೆಟ್ಟು, ಇದರ ರಜತ ಸಂಭ್ರಮದ ಪ್ರಯುಕ್ತ ‘ನೃತ್ಯ ಶರಧಿ’ ಸರಣಿ ಕಾರ್ಯಕ್ರಮವು ದಿನಾಂಕ 21-05-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾ ತಿಲಕ ನಾಟ್ಯಾಚಾರ್ಯ ಶ್ರೀ ಮೋಹನ್ ಕುಮಾರ್ ಉಳ್ಳಾಲ್ ಮಂಗಳ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಮೋಹನ್ ಕುಮಾರ್ ಉಳ್ಳಾಲ್, ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದ್ವಾನ್ ಮುರಳೀಧರ ಆಚಾರ್ಯ ಉಪಸ್ಥಿತರಿದ್ದರು. ವಿದುಷಿ ಶಾರದಾಮಣಿ ತನ್ನ ಶಿಷ್ಯೆ ಶ್ರೀ ಶಾರದಾ ನಾಟ್ಯಾಲಯದ ನಿರ್ದೇಶಕಿ ಭಾರತಿ ಸುರೇಶ್ ಅವರನ್ನು ಅಭಿನಂದಿಸಿ ಶುಭ ಕೋರುತ್ತಾ “ಕಲೆ ಒಂದು ಶಕ್ತಿ ಮತ್ತು ಧ್ಯಾನ ಇದ್ದ ಹಾಗೆ, ನಂಬಿದವರ ಕೈ ಬಿಡುವುದಿಲ್ಲ. ನಾವು ಕಲೆಯನ್ನು ಪ್ರೀತಿಸಿದರೆ ಸಮಾಜವೇ ನಮ್ಮನ್ನು ಪ್ರೀತಿಸುತ್ತದೆ” ಎಂದರು. ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಮಾತನಾಡುತ್ತಾ “ಭರತನಾಟ್ಯ ಸನಾತನ ಕಲೆ, ಅದನ್ನು ಪ್ರೋತ್ಸಾಹಿಸಿ ಎಲ್ಲರೂ ಅದನ್ನು ಎತ್ತಿ ಹಿಡಿಯಬೇಕು. ನಟರಾಜನ ಆರಾಧನೆಯೊಂದಿಗೆ ಸಂಗೀತ ಮತ್ತು…
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಅಹ್ವಾನಿತ ತಂಡಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಭ್ರಾಮರೀ ಯಕ್ಷ ಝೇಂಕಾರ’ವನ್ನು ದಿನಾಂಕ 30-05-2023 ರಂದು ಮುಂಬೈ ಉದ್ಯಮಿ ಶಶಿಧರ್ ಶೆಟ್ಟಿ ಇನ್ನಂಜೆ ಉದ್ಘಾಟಿಸಿದರು. ದೇಗುಲದ ವಿಶೇಷಾಧಿಕಾರಿ ಮೋಹನ್ ರಾವ್, ಹಳೆ ವಿದ್ಯಾರ್ಥಿ ಸಂಘದ ಕಿರಣ್ ಪಕ್ಕಳ, ಕಿರಣ್ ಶೆಟ್ಟಿ,ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣ, ಸ್ಪರ್ಧೆಯ ಸಂಘಟಕ ಡಾ.ವಿಜಯ್ ವಿ ಉಪಸ್ಥಿತರಿದ್ದರು ಆಶಾಕೀರ್ತಿ ಸ್ವಾಗತಿಸಿದರು. ಚೊಂದಮ್ಮ ಎಂ. ಎಂ ನಿರೂಪಿಸಿ, ಪೂಜಾ ಯು.ಕಾಂಚನ್ ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಐಕಳ ಪಾಂಪೈ ಕಾಲೇಜು ಏಕಾದಶಿ ಮಹಾತ್ಮೆ, ಉರ್ವಸ್ಟೋರ್ನ ಸ್ವಸ್ತಿಕ್ ನ್ಯಾಶನಲ್ ಸ್ಕೂಲ್ ನಿಂದ ದಕ್ಷಯಜ್ಞ, ಮಂಗಳೂರು ವಿವಿ ಕಾಲೇಜು ತಂಡದ ದಕ್ಷಯಜ್ಞ ಸಂತ ಅಲೋಶಿಯಸ್ ಕಾಲೇಜು ತಂಡದಿಂದ ನರಕ ಹರಣ, ನಿಟ್ಟೆ ಡಾ. ಎನ್ ಎಸ್ ಎ.ಎಂ ಪ್ರಥಮ ದರ್ಜೆ ಕಾಲೇಜಿನ ತರಣಿಸೇನ,ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡದಿಂದ ದಕ್ಷಯಜ್ಞ ಪ್ರದರ್ಶನಗೊಂಡಿತು. ದಿನಾಂಕ…
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಮುಂಬೈಯ ಕನ್ನಡ ರಂಗಭೂಮಿಯ ಕಲಾವಿದ ಮೋಹನ್ ಮಾರ್ನಾಡ್ ಇವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರವನ್ನು ದಿನಾಂಕ 30-05-2023 ರಂದು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಮುಂಬೈಯ ಶಂಕ್ ಸ್ಟುಡಿಯೋದ ಮುಖ್ಯಸ್ಥರಾದ ಮನೋಹರ್ ನಾಯಕ್ ಅವರು ಸನ್ಮಾನಿಸಿ ಮೋಹನ್ ಮಾರ್ನಾಡ್ ಒಬ್ಬ ಒಳ್ಳೆಯ ರಂಗ ಕಲಾವಿದರಾಗಿದ್ದು, ಮುಂಬೈಯ ಶ್ರೇಷ್ಠ ಕಂಠದಾನ ಕಲಾವಿದರಾಗಿರುತ್ತಾರೆ. ಇವರು ಮುಂಬೈ ಕನ್ನಡ ರಂಗಭೂಮಿಗೆ ಬಹುದೊಡ್ಡ ಆಸ್ತಿ ಎಂದರು . ಸಮಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣಿೈ , ಅಧ್ಯಕ್ಷರಾದ ಪ್ರೊ. ಶಂಕರ್, ಸಿ.ಎಸ್ ರಾವ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ವ್ಯವಸ್ಥಾಪಕ ಹಫೀಸ್ ರೆಹಮಾನ್ , ಮನೋಹರ್ ತಿಂಗಳಾಯ, ರಾಘವೇಂದ್ರ ನಾಯಕ್, ನಾರಾಯಣ ಮಡಿ , ದಿನೇಶ್ ಉಪ್ಪೂರ್, ಸೀಮಾ ಮಾರ್ನಾಡ್, ನರಸಿಂಹಮೂರ್ತಿ ,ಗಣೇಶ್ ಬ್ರಹ್ಮಾವರ,…
ಸಾರಡ್ಕ : ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ಆರಾಧನಾ ಸಂಗೀತ ಶಾಲೆ ಸಾರಡ್ಕ ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 04-06-2023, ಭಾನುವಾರ ಸಂಜೆ ಸಾರಡ್ಕದ ಆರಾಧನಾ ಸಂಗೀತ ಶಾಲೆ ಇಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 12 ಕಚೇರಿಗಳು ನಡೆದಿದ್ದು, ಇದು 13ನೆಯ ಸಂಗೀತ ಕಚೇರಿಯಾಗಿರುತ್ತದೆ. ಈ ಕಾರ್ಯಕ್ರಮವನ್ನು ಸಾರಡ್ಕದ ಆರಾಧನಾ ಸಂಗೀತ ಶಾಲೆಯ ನಿರ್ದೇಶಕರಾದ ಸಂಗೀತ ವಿದುಷಿ ಶ್ರೀಮತಿ ಶಕುಂತಲಾ ಕೃಷ್ಣ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ…
ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ ಪ್ರಸ್ತುತಪಡಿಸುವ ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ರಚಿಸಿರುವ ‘ನೃತ್ಯಕಾವ್ಯ’ ಪುಸ್ತಕ ಲೋಕಾರ್ಪಣೆ, ‘ಭಾವಸ್ಥ’ ಭಕ್ತಿ ಮತ್ತು ನಾಯಕ ಭಾವ ಕೇಂದ್ರಿತ ಭರತನಾಟ್ಯ ಮಾರ್ಗ ನೃತ್ಯ ಪ್ರಸ್ತುತಿ ಕಾರ್ಯಕ್ರಮ ಜೂನ್ 4ರಂದು ಸಂಜೆ 4.30ಕ್ಕೆ ಪುರಭವನದಲ್ಲಿ ನಡೆಯಲಿದೆ ಎಂದು ಬಿ. ಸುಮಂಗಲಾ ರತ್ನಾಕರ್ ರಾವ್ ತಿಳಿಸಿದರು. ಕಲಾಕೇಂದ್ರದ ಘಟಕವಾದ ಹೀರಾ ಪಬ್ಲಿಕೇಷನ್ಸ್ ಮೂಲಕ ‘ನೃತ್ಯ ಕಾವ್ಯ’ ಭರತನಾಟ್ಯ ಮಾರ್ಗದ ನೃತ್ಯ ಬಂಧಗಳು ಎಂಬ ಭರತನಾಟ್ಯ ನೃತ್ಯ ಸಾಹಿತ್ಯದ ಕನ್ನಡ ಭಾಷೆಯ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಪುಸ್ತಕದ 9 ಹಾಡುಗಳಿಗೆ ದಕ್ಷಿಣ ಭಾರತದ 6 ಮಂದಿ ಯುವ ನೃತ್ಯ ಕಲಾವಿದರು. ‘ಭಕ್ತಿ, ನಾಯಕ ಭಾವಕೇಂದ್ರಿತ ಭಾವಸ್ಥ ಆತನ ಭಾವಛಾಯೆಗಳು’ ಎಂಬ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ. ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು, ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ, ವಿದ್ವಾನ್ ಸುಜಯ್ ಶ್ಯಾನುಬಾಗ್ ಹುಬ್ಬಳ್ಳಿ, ವಿದ್ವಾನ್ ವಿಜಯಕುಮಾರ್ ಎಸ್. ಚೆನ್ನೈ, ವಿದ್ವಾನ್ ಅನಿಲ್ ಅಯ್ಯರ್ ಬೆಂಗಳೂರು…
ಉಡುಪಿ : ರಂಗ ಭೂಮಿ ಉಡುಪಿಯು ದಿ. ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಆಯೋಜಿಸುವ ‘ರಂಗ ಭೂಮಿ ಆನಂದೋತ್ಸವ -2023’ ಕಾರ್ಯಕ್ರಮವು ಜೂನ್ 3 ಹಾಗೂ 4ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ದಿನಾಂಕ 03-06-2023ರಂದು ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಎ. ಸುವರ್ಣ ಇವರು ಉದ್ಘಾಟಿಸಲಿದ್ದು, ಉಡುಪಿಯ ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಣಿಪಾಲದ ಆಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಕಾರ್ಯದರ್ಶಿಯಾದ ಶ್ರೀ ಬಿ.ಪಿ. ವರದರಾಯ ಪೈ, ಉಡುಪಿಯ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಎ.ಜಿ.ಎಂ. ಶ್ರೀ ರಾಜಗೋಪಾಲ ಬಿ., ಯುವ ಉದ್ಯಮಿ ಶ್ರೀ ಮಿಥುನ್ ಆರ್. ಹೆಗ್ಡೆ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀನಗರದ ಶ್ರೀ ಕುತ್ಪಾಡಿ ಜಗನ್ನಾಥ ಗಾಣಿಗ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ನಿವೃತ್ತ ಎಂ.ಡಿ. ಹಾಗೂ ಕರ್ನಾಟಕ…
ಉಡುಪಿ: ಶ್ರೀ ಕಾನಂಗಿ ಮಹಾಲಿಂಗೇಶ್ವರ ದೇವಸ್ಥಾನ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಉಡುಪಿ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಜಾನಪದದಲ್ಲಿ ಭಜನೆ’ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 04-06-2023ರ ರವಿವಾರ ಬೆಳಿಗ್ಗೆ ಉಡುಪಿಯ ಕಡೆಕಾರಿನ ಶ್ರೀ ಕಾನಂಗಿ ಮಹಾಲಿಂಗೇಶ್ವರ ( ಬ್ರಹ್ಮ-ವಿಷ್ಣು- ಮಹೇಶ್ವರ ) ದೇವಸ್ಥಾನ ಕುತ್ಪಾಡಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಂಬಲಪಾಡಿಯ ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ತುಕರಾಮ ಪೂಜಾರಿ ಹಾಗೂ ಉಡುಪಿಯ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿಯಾದ ಶ್ರೀ ರವಿರಾಜ ನಾಯಕ್ ವಿಶೇಷ ಉಪನ್ಯಾಸ ನೀಡಲಿದ್ದು ಶ್ರೀ ಕಾನಂಗಿ ಮಹಾಲಿಂಗೇಶ್ವರ ( ಬ್ರಹ್ಮ-ವಿಷ್ಣು- ಮಹೇಶ್ವರ ) ದೇವಸ್ಥಾನದ ಧರ್ಮದರ್ಶಿಗಳಾದ ಡಾ.ಕೆ.ಆರ್.ಕೆ.ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಡೆಕಾರಿನ ಹಿರಿಯ ಭಜಕರಾದ ಶ್ರೀ…
ಮೈಸೂರು: ಮೈಸೂರಿನ ಶ್ರೀ ಗುರು ಕಲಾ ಶಾಲೆಯು ಮೂರು ತಿಂಗಳ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ದಿನಾಂಕ 02-06-2023 ರಂದು ಆರಂಭವಾಗುವ ಈ ಶಿಬಿರದಲ್ಲಿ 7 ರಿಂದ 14 ವರ್ಷದವರೆಗಿನ ಮಕ್ಕಳು ಭಾಗವಹಿಸಬಹುದು. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅಭಿನಯ, ನೃತ್ಯ, ದೇಹ ಭಾಷೆ, ಸಂಭಾಷಣ ಕೌಶಲ್ಯ, ರಂಗಾಟಗಳು, ರಂಗಗೀತೆ, ಭಾಷಾ ಬಳಕೆ, ಓದುವ ರೀತಿ, ಧ್ವನಿ ವ್ಯತ್ಯಾಸ, ವ್ಯಕ್ತಿತ್ವ ವಿಕಸನ ಹೀಗೆ ಹತ್ತು ಹಲವು ವಿಷಯಗಳನ್ನು ಪರಿಣತರು ಹೇಳಿಕೊಡಲಿದ್ದಾರೆ. ಈ ತರಗತಿಗಳು ವಾರದಲ್ಲಿ ಎರಡು ದಿನ ನಡೆಯಲಿದ್ದು ಶುಕ್ರವಾರ ಸಂಜೆ 4.30 ರಿಂದ 6.30ರ ವರೆಗೆ ಹಾಗೂ ಶನಿವಾರ 3.00 ರಿಂದ 6.00ರ ವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ -9980794690 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಶ್ರೀಗುರು ಕಲಾ ಶಾಲೆ- ಮೈಸೂರಿನ ಶ್ರೀರಾಂಪುರದಲ್ಲಿ (ಪ್ರೀತಿ ಲೇಔಟ್)ನಲ್ಲಿ 2016ರಂದು ಸ್ಥಾಪನೆಯಾಯಿತು. ಇಲ್ಲಿ ಮಕ್ಕಳು, ಮಹಿಳೆಯರು ಒಳಗೊಂಡಂತೆ ಎಲ್ಲ ವಯೋಮಾನದ ಆಸಕ್ತರಿಗೂ ಸಂಗೀತವನ್ನು ಹೇಳಿಕೊಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಆಕಾಶವಾಣಿಯಲ್ಲಿ…
ಜೀವನದ 56 ವಸಂತಗಳಲ್ಲಿ 44 ವರ್ಷ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತನಾಮರಾದವರು ಕೋಟ ಶಿವಾನಂದ. ಕೋಟದ ದಿ| ರಾಮಕೃಷ್ಣ ಮೆರಟ ಮತ್ತು ಜಲಜಾಕ್ಷಮ್ಮನ ಪುತ್ರನಾಗಿ 01-06-1967ರಲ್ಲಿ ಜನಿಸಿದ ಇವರು ಗಿಳಿಯಾರು ಶಾಂಭವಿ ಶಾಲೆಯಲ್ಲಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದವರು. ಅಮೃತೇಶ್ವರಿ ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಆಯ್ಕೆ ಮಾಡಿ ಅಂದಿನ ಭಾಗವತ ನಾರಣಪ್ಪ ಉಪ್ಪೂರರ ಮಾರ್ಗದರ್ಶನದಲ್ಲಿ 4ವರ್ಷ ವೃತ್ತಿ ಮೇಳದ ತಿರುಗಾಟ ಮಾಡಿದ ಶಿವಣ್ಣ ಚಂಡೆ ವಾದನದ ಗೀಳನ್ನು ಹತ್ತಿಸಿಕೊಂಡು ಮನೆಯಲ್ಲಿ ಡಬ್ಬವನ್ನು ಬಾರಿಸುತ್ತ ಗುರುವಿಲ್ಲದೆ ಚಂಡೆವಾದಕರಾದರು. ಮನೆಯ ಪಕ್ಕದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿದ್ದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಪ್ರೋತ್ಸಾಹವು ಶಿವಣ್ಣರ ಕಲಿಕೆಗೆ ಪ್ರೇರಣೆಯಾಯಿತು. ಹಿರೇ ಮಹಾಲಿಂಗೇಶ್ವರ ಮತ್ತು ಪಂಚಲಿಂಗೇಶ್ವರ ಮೇಳಕ್ಕೆ ಚಂಡೆ ವಾದಕರಾಗಿ ಸೇರ್ಪಡೆಗೊಂಡು ಬಳಿಕ ಕಾಳಿಂಗ ನಾವಡರಿಂದ ಆಹ್ವಾನ, ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆ. ಅಲ್ಲಿ ಹೊಳೆಗದ್ದೆ ದುರ್ಗಪ್ಪ ಗುಡಿಗಾರ ಮತ್ತು ಮಂದಾರ್ತಿ ರಾಮಕೃಷ್ಣರ ಸಾಮಿಪ್ಯದಲ್ಲಿ ಪರಿಪೂರ್ಣ ಚಂಡೆ ವಾದಕರಾಗಿ…