Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಮತ್ತು ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನವನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ದಿನಾಂಕ 24-12-2023ರಂದು ಅಲ್ಲಿಯ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ “ಮನಸ್ಸಿಗೆ ಮದ ನೀಡದೆ ಮುದ ನೀಡುವ ಮೋಹಕ ಕಲೆ ಭರತನಾಟ್ಯ. ಕರಾವಳಿಯ ನೃತ್ಯ ಕಲಾವಿದರ ಈ ಸಂಘಟನೆ ಸ್ತುತ್ಯಾರ್ಹ” ಎಂದು ಹೇಳಿದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಸ್ಥಾಪಕ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್’ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷ ಮೈಸೂರಿನ ಪ್ರೊ. ಕೆ. ರಾಮಮೂರ್ತಿ ರಾವ್ ದಂಪತಿಯನ್ನು ಗೌರವಿಸಲಾಯಿತು. ಗೋಷ್ಠಿಗಳಲ್ಲಿ ವಿದ್ವಾನ್ ಚಂದ್ರಶೇಖರ ನಾವಡ ಅಧ್ಯಕ್ಷತೆಯಲ್ಲಿ ಗುರು ಉಷಾ ದಾತಾರ್ ದೇವಾಲಯ ನೃತ್ಯದ ಬಗ್ಗೆ, ಲಂಡನ್ನ ಚಿತ್ರಲೇಖ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶೀಲಾ ಚಂದ್ರಶೇಖರ್ ಭಕ್ತಿಯ ವಿವಿಧ ಆಯಾಮಗಳ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಠಿಯಲ್ಲಿ ಭರತನಾಟ್ಯಕ್ಕೆ ಧ್ವನಿಸುರುಳಿ: ಸಜೀವ ಹಿಮ್ಮೇಳ…
ಮಡಿಕೇರಿ : ಏಳು ವರ್ಷದ ಬಾಲಕಿ ಮಾಯಾ ಅಪ್ಪಚ್ಚು ತನ್ನ ಶಾಲೆಯ ಆರಂಭದ ದಿನಗಳಲ್ಲಿ ಅಲ್ಲಿಯ ಹೊಸ ವಾತಾವರಣದಲ್ಲಿ ತನಗೆ ಉಂಟಾದ ಭಯ, ಆತಂಕ, ಮನಸ್ಸಿನ ಗೊಂದಲಗಳು ಹಾಗೂ ಅದ್ಭುತ ಕಲ್ಪನಾ ಶಕ್ತಿಯನ್ನು ಸ್ವತಃ ತಾನೇ ವಿವರಿಸಿರುವ ‘ಮಾಯಾಳ ಮಾಂತ್ರಿಕ ಜಗತ್ತು’ ಪುಸ್ತಕ ದಿನಾಂಕ 21-12-2023ರಂದು ಬಿಡುಗಡೆಗೊಂಡಿತು. ಮಡಿಕೇರಿಯಲ್ಲಿ ಮಾಯಾ ಅಪ್ಪಚ್ಚು ಬರೆದಿರುವ ‘ಮಾಯಾಳ ಮಾಂತ್ರಿಕ ಜಗತ್ತು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು ತಂದೆ ಕಾರ್ತಿಕ್ ಅಪ್ಪಚ್ಚು ಮಾಯಾಳ ನೆನಪುಗಳನ್ನು ಮೆಲುಕು ಹಾಕಿ, ಅವಳ ಬರಹಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿದ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಮಾಯಾಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕೊಡಗಿನ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕವನ್ನು ನೀಡಲಾಗುವುದೆಂದರು. ಮಾಯಾಳ ಪುಟ್ಟ ಸಹೋದರ ವರುಣ್ ಹಾಜರಿದ್ದರು. ಅಮೆರಿಕಾದ ಹೈಕ್ರಾಫ್ಟ್ ಡ್ರೈವ್…
ಮಂಗಳೂರು : ಸಾಧನ ಬಳಗದ ‘ಸ್ನೇಹ ಮಿಲನ’ ಕಾರ್ಯಕ್ರಮವು ದಿನಾಂಕ 10-12-2023ರಂದು ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಕೃಷ್ಣ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಯೋಗೀಶ್ ಕುಮಾರ್ ಜಪ್ಪು ಮಾತನಾಡಿ, “ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಲು ಮನೆಯಲ್ಲಿ ತಾಯಿಯ ಪ್ರೋತ್ಸಾಹ ಅಗತ್ಯವಿದೆ. ಮಹಿಳೆಯರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಆಚಾರ ವಿಚಾರಗಳನ್ನು ಕಲಿಸಬೇಕು” ಎಂದರು. ಯಕ್ಷಗಾನ ಕಲಾವಿದೆ ಪ್ರಫುಲ್ಲಾ ನಾಯಕ್ ಮಾತನಾಡಿ, “ಸಾಧನೆ ಮಾಡಿದರೆ ವಿದ್ಯೆಯನ್ನು ಕಲಿತು ಪಾರಂಗತರಾಗಬಹುದು” ಎಂದರು. ಸಬಿತಾ ಕಾಮತ್ ಸ್ವಾಗತಿಸಿ, ಮುರಳಿಧರ್ ನಾಯಕ್ ಅವರು ಪಂಚವಟಿ ಪ್ರಸಂಗದ ಪರಿಚಯ ಮಾಡಿಕೊಟ್ಟರು. ಪ್ರಕಾಶ ಶೆಣೈ ಪ್ರಸ್ತಾವಿಸಿದರು. ನರಸಿಂಹ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದ್ದರು. ಬಿ. ಗಣೇಶ್ ನಾಯಕ್ ವಂದಿಸಿ, ವಸುಧಾ ಪ್ರಭು, ವಿದ್ಯಾ ಮಾರುತಿ ಪ್ರಭು, ಸವಿತಾ ನಾಯಕ್ ಸಹಕರಿಸಿದರು. ಸವಿತಾ ಭಟ್ ಮತ್ತು ಪ್ರಣತಿ ನಾಯಕ್ ನಿರೂಪಿಸಿದರು. ಯಕ್ಷಗಾನ ಶಿಕ್ಷಕ ಶ್ರೀಕೃಷ್ಣಮೂರ್ತಿ ಅವರನ್ನು ಸಮ್ಮಾನಿಸಲಾಯಿತು. ಯಕ್ಷರಂಗ ಕುಂಜಿಬೆಟ್ಟು ಉಡುಪಿ ಅವರು ಬಡಗುತಿಟ್ಟು ‘ಪಂಚವಟಿ’ ಪ್ರಸಂಗ ಪ್ರದರ್ಶಿಸಿದರು.
ಪುತ್ತೂರು : ಲೇಖಕಿ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರು ಬರೆದಿರುವ ‘ಸತ್ಯದರ್ಶನ ನುಡಿಮುತ್ತುಗಳು’ ಮತ್ತು ‘ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್ನ ತಾಯಿತಾತ್’ ಅರೆಭಾಷೆ ಕವನ ಸಂಕಲನದ ಲೋಕಾರ್ಪಣೆಯು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ದಿನಾಂಕ 31-12-2023ರಂದು ಬೆಳಿಗ್ಗೆ ದರ್ಬೆ ಬೈಪಾಸ್ ರಸ್ತೆಯ ಮಕ್ಕಳ ಮಂಟಪದಲ್ಲಿ ನಡೆಯಿತು. ಪುಸ್ತಕ ಲೋಕಾರ್ಪಣೆ ಮಾಡಿದ ದರ್ಬೆ ಮಕ್ಕಳ ಮಂಟಪದ ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ ಅವರು ಮಾತನಾಡಿ, “ಲೇಖಕಿ ಸುಲೋಚನಾ ಅವರು ಬರೆದಿರುವ ಪುಸ್ತಕವನ್ನು ಓದಿ ಮಂಥನ ಮಾಡಿಕೊಳ್ಳಬೇಕು. ಅವರು ಬರೆದಿರುವ ಪುಸ್ತಕದ ಬಗ್ಗೆ ಏನಾದರೂ ವಿಚಾರಗಳು ಅಥವಾ ಪ್ರತಿಕ್ರಿಯೆಗಳಿದ್ದರೆ ಅವರನ್ನು ಸಂಪರ್ಕಿಸಬಹುದು. ಸುಲೋಚನಾ ಅವರ ಬರವಣಿಗೆಯು ನಿರಂತರವಾಗಿ ಮುಂದುವರಿಯಲಿ” ಎಂದರು. ಕಾರ್ಯಕ್ರಮ ಉದ್ಘಾಟಸಿದ ತಹಶೀಲ್ದಾರ್ ಜೆ. ಶಿವಶಂಕರ್ ಅವರು ಮಾತನಾಡಿ, “ನಮ್ಮ ಇಲಾಖೆಯಲ್ಲಿ ಉಪ ತಹಶೀಲ್ದಾರ್ ಆಗಿದ್ದುಕೊಂಡು ಸುಲೋಚನಾ ಅವರು ಪುಸ್ತಕ ಬರೆದಿರುವುದು ಸಂತೋಷ ತಂದಿದೆ. ಈ ಪ್ರಸ್ತಕವನ್ನು ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಂಡು ಅದರಲ್ಲಿರುವ…
ಕೋಟ : ಶ್ರೀ ನಂದಿಕೇಶ್ವರ ಗೆಳೆಯರ ಬಳಗ ಕೋಟತಟ್ಟು ಪಡುಕರೆ ಇದರ 12ನೇ ವರ್ಷದ ಯಕ್ಷಸಂಭ್ರಮವು ಕೋಟತಟ್ಟು ಪಡುಕರೆಯ ನಂದಿಕೇಶ್ವರ ದೇವಸ್ಥಾನ ವಠಾರದಲ್ಲಿ ದಿನಾಂಕ 16-12-2023ರಂದು ಸಂಪನ್ನಗೊಂಡಿತು. ಶ್ರೀ ನಂದಿಕೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಘು ತಿಂಗಳಾಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 25ನೇ ವರ್ಷದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಮತ್ತು ಮತ್ಸ್ಯೋದ್ಯಮಿ ಮಹಾಬಲ ತಿಂಗಳಾಯ ಪಡುಕರೆ ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ನಂದಿಕೇಶ್ವರ ದೇವಸ್ಥಾನ ಅರ್ಚಕ ನಾಗರಾಜ ಕಾರಂತ ಮತ್ತು ಭಗವತ್ ಭಜನಾ ಮಂದಿರದ ಅರ್ಚಕ ಬಾಬು ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದರು. ಲಕ್ಷ್ಮಣ್ ಪೂಜಾರಿ ಬೆಂಗಳೂರು ಸ್ವಾಗತಿಸಿ, ಶಿವರಾಮ ಪೂಜಾರಿ ಪ್ರಸ್ತಾವನೆಗೈದರು. ಮಂಜುನಾಥ ಭಂಡಾರಿ ಪಡುಕರೆ ನಿರೂಪಿಸಿ, ವಂದಿಸಿದರು.
ಬೆಳಗಾವಿ : ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಡಾ. ಡಿ.ಎಸ್. ಕರ್ಕಿ 116ನೇ ಜನ್ಮದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 31-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾವೇರಿ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಡಾ. ಗೀತಾಂಜಲಿ ಕುರಡಗಿ ಇವರು ಮಾತನಾಡುತ್ತಾ “ಗಡಿಯಲ್ಲಿ ಕನ್ನಡ ಕಟ್ಟಿ ಬೆಳೆಸಿದ ಕೀರ್ತಿ ಡಾ. ಡಿ.ಎಸ್. ಕರ್ಕಿ ಅವರಿಗೆ ಸಲ್ಲುತ್ತದೆ. ಅವರು, ಹಚ್ಚಿದ ಕನ್ನಡ ದೀಪ ನಿರಂತರವಾಗಿ ಬೆಳಗುತ್ತಿದ್ದು, ನಾಡು-ನುಡಿಗೆ ಕರ್ಕಿಯವರ ಅಪಾರ ಕೊಡುಗೆಯನ್ನು ಸ್ಮರಿಸುವಂತಿದೆ. 1907ರಲ್ಲಿ ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ಹುಟ್ಟಿದ ಕರ್ಕಿಯವರು ಹುಟ್ಟಿ, ಶಿಕ್ಷಕರಾಗಿ ಜೀವನ ನಿರ್ವಹಿಸಿ, ಕನ್ನಡ ಜ್ಯೋತಿ ಬೆಳೆಗಿದವರು. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದಾರೆ” ಎಂದು ಹೇಳಿದರು. ಡಾ. ಡಿ.ಎಸ್.ಕರ್ಕಿಯವರು ನವೋದಯ ಪಾವಿತ್ರ್ಯತೆ ಕಾಪಾಡಿಕೊಂಡು ಬಂದ ನಾಡಿನ ಅಗ್ರಗಣ್ಯ ಕವಿಗಳು. ಸತ್ಯವನ್ನು ಕೊಲ್ಲಲು ಆಗಲ್ಲ, ಸತ್ಯ…
ಕಾಸರಗೋಡು : ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಿಂದ ನಿರ್ಮಿಸಲ್ಪಟ್ಟ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವು ದಿನಾಂಕ 26-12-2023ರಂದು ಲೋಕಾರ್ಪಣೆಗೊಂಡಿತು. ಗಡಿನಾಡ ಕವಿ, ಪಾರ್ತಿ ಸುಬ್ಬರ ಯಕ್ಷ ಪ್ರಸಂಗಗಳನ್ನು ತಾಳೆ ಗರಿಗಳಲ್ಲಿ ಸಂಗ್ರಹಿಸಿ ಪುಸ್ತಕ ರೂಪಕ್ಕಿಳಿಸಿದ ಮಹಾನುಭಾವ ದಿ. ಸಿರಿಬಾಗಿಲು ವೆಂಕಪ್ಪಯ್ಯರ ಸ್ಮರಣಾರ್ಥ ಅವರ ಮಗ ಧರ್ಮಸ್ಥಳ ಮೇಳದ ಮುಖ್ಯ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಭಗೀರಥ ಯತ್ನದ ಫಲ ಈ ಭವ್ಯ ಭವನ. ಯಕ್ಷಗಾನೀಯ ಮತ್ತು ಇನ್ನಿತರ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರವನ್ನಾಗಿಸಬೇಕೆಂಬ ಮಹದಾಸೆಯಿಂದ ನಿರ್ಮಾಣಗೊಂಡ ಈ ಭವನದಲ್ಲಿ ಸುಸಜ್ಜಿತವಾದ ಸಭಾಂಗಣ, ಗ್ರಂಥಾಲಯ, ಮ್ಯೂಸಿಯಂ, ವಿಶ್ರಾಂತಿ ಕೊಠಡಿಗಳಿದ್ದು ಈಗಾಗಲೇ ಇಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿವೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಭವನವನ್ನು ದೀಪ ಪ್ರಜ್ವಲನಗೊಳಿಸಿ, ದಿ. ವೆಂಕಪ್ಪಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಲೋಕಾರ್ಪಣೆಗೊಳಿಸಿದರು. “ಕಾಸರಗೋಡು ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯನ್ನಾಗಿ ನೀಡಿದ ನೆಲ. ಧರ್ಮಸ್ಥಳ ಮೇಳದಲ್ಲೂ ಇಲ್ಲಿನವರು ಅನೇಕರು ಇದ್ದರು, ಈಗಲೂ ಇದ್ದಾರೆ.…
ಮೂಲ್ಕಿ : ಕಾರ್ನಾಡಿನಲ್ಲಿ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕ.ಸಾ.ಪ. ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 27-12-2023ರಂದು ನಡೆಯಿತು. ಈ ಸಮ್ಮೇಳನ ಉದ್ಘಾಟಿಸಿದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು “ಆಧುನೀಕರಣದ ಭರಾಟೆಯಲ್ಲಿ ಅಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬಂದಿದೆ. ಕನ್ನಡ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು” ಎಂದರು. ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ “ಮೂಲ್ಕಿ ತಾಲೂಕಿನಲ್ಲಿ ಒಂಭತ್ತು ಯಕ್ಷಗಾನ ಮೇಳಗಳು ತಿರುಗಾಟ ನಡೆಸುತ್ತಿದ್ದು, ಕನ್ನಡ ಸಾಹಿತ್ಯಕ್ಕೆ ಭಾಷೆಗೆ ದೊಡ್ಡ ಕೊಡುಗೆ ಸಿಕ್ಕಿದೆ. ಮೂಲ್ಕಿಯಲ್ಲಿ ಆಯುರ್ವೇದ ಗಿಡಗಳಿದ್ದ ಕಾರಣ ಮೂಲಿಕಾ ಪುರವಾಗಿ ಪ್ರಸಿದ್ದವಾಗಿದೆ, ಮೂಲ್ಕಿ ತಾಲೂಕು ಅನೇಕ ಕವಿಗಳನ್ನು ಕೊಟ್ಟಿದೆ. ಇಲ್ಲಿನ ಜನಪದ ಮೌಖಿಕ ಸಂಪತ್ತು, ಕಂಬಳಗಳು, ದೇವಾಲಯಗಳು, ಪತ್ರಿಕೆಗಳು ಮಹತ್ವದ್ದು. ಏಳಿಂಜೆ, ಸೀಮಂತೂರು, ಪೊಸ್ರಾಲು, ಪಾವಂಜೆ, ಕೊಡೆತ್ತೂರು, ಬಪ್ಪನಾಡು…
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯ ಬಯಲಾಟ ಕಾರ್ಯಕ್ರಮವು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದಿನಾಂಕ 28-12-2023ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಪಣಂಬೂರು ನಂದನೇಶ್ವರ ದೇವಳದ ಪ್ರಧಾನ ಅರ್ಚಕರಾದ ಶ್ರೀ ದೇವದತ್ತ ಶರ್ಮರು “ಯಕ್ಷಗಾನ ಕಲೆ ಈಗ ಸರ್ವಮಾನ್ಯವಾಗಿದೆ. ಹಿಂದಿಗಿಂತಲೂ ಹೆಚ್ಚಿನ ರಾಜ ಗಾಂಭೀರ್ಯದಿಂದ ಮೆರೆದು ಸಂಪನ್ನಗೊಳ್ಳುತ್ತಿದೆ. ಕಲಾಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಲೆಯನ್ನು ಗೌರವ ಭಾವನೆಯಿಂದ ಕಂಡು ಸಂಭ್ರಮಿಸುತ್ತಿದ್ದಾರೆ. ಕಲಾವಿದರೂ ಹೊಸ ರೀತಿಯಲ್ಲಿ ಹಳೆಯ ಪರಂಪರೆಯನ್ನು ರಸಿಕರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇದು ಕಲೆಗೆ-ಕಲಾವಿದರಿಗೆ ನೀಡುವ ಪ್ರೋತ್ಸಾಹ. ಇಂದು ಸರಕಾರವು ಸಂಸ್ಕೃತಿ ಇಲಾಖೆಯ ಮೂಲಕ ಕಲೆಗೆ ಬೇರೆ ಬೇರೆ ರೀತಿಯಲ್ಲಿ ಸಹಕರಿಸುತ್ತಾ ಬರುತ್ತಿರುವುದು ಸ್ವಾಗತಾರ್ಹ. ಇಂದಿನ ಕಾರ್ಯಕ್ರಮವನ್ನು ಸಂಘಟಿಸಿದ ಶ್ರೀ ರವೀಂದ್ರ ಪೂಜಾರಿಯವರಿಗೆ ಅಭಿನಂದನೆಗಳು” ಎಂದು ಹೇಳಿದರು. ಹಿರಿಯ ಯಕ್ಷಗಾನ ಕಲಾವಿದ ಪಿ. ಶ್ರೀಧರ ಐತಾಳರು “ಯಕ್ಷಗಾನದಲ್ಲಿ ಹೊಸ ಹೊಸ ಕಲಾವಿದರ ಪ್ರವೇಶ ಕಲೆಯ ಬೆಳವಣಿಗೆಗೆ ಪೂರಕ. ಕಲೆಯ…
ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್. ಕಾಲೇಜು, ರೇಡಿಯೋ ಪಾಂಚಜನ್ಯ 90.80 ಎಫ್.ಎಂ. ಮತ್ತು ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 27-12-2023ರಂದು ‘ಭಾರತೀಯ ಭಾಷಾ ಉತ್ಸವದ’ ಪ್ರಯುಕ್ತ ಪುತ್ತೂರಿನ ತೆಂಕಿಲದ ವಿವೇಕಾನಂದ ಬಿ.ಎಡ್. ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಪುತ್ತೂರಿನ ಖ್ಯಾತ ಆಯುರ್ವೇದಿಕ್ ವೈದ್ಯರಾದ ಡಾ. ಹರಿಕೃಷ್ಣ ಪಾಣಾಜೆ ಅವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ದೀಪವು ಬೆಳಕನ್ನು ನೀಡಿ ಕತ್ತಲೆಯನ್ನು ಹೋಗಲಾಡಿಸುವಂತೆ ಉತ್ತಮ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ಹರಿದು ತನ್ಮೂಲಕ ಅಜ್ಞಾನದ ಅಂಧಕಾರ ತೊಲಗಿಸಬೇಕು” ಎಂದು ಶುಭ ಹಾರೈಸುತ್ತಾ ತಮ್ಮ ಸ್ವರಚಿತ ಕವನ ಒಂದನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಬಿ.ಎಡ್. ಕಾಲೇಜಿನ ಸಂಚಾಲಕರಾದ ಶ್ರೀಮತಿ ಗಂಗಮ್ಮ ಎಚ್. ಶಾಸ್ತ್ರಿ ಅವರು ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀ ವಸಂತ ಮಾಧವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವಿವೇಕಾನಂದ…