Subscribe to Updates
Get the latest creative news from FooBar about art, design and business.
Author: roovari
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಆಶ್ರಯದಲ್ಲಿ ಸಂಗೀತ ವರ್ಷಧಾರೆ ‘ಮಳೆ ಹಾಡುಗಳ ಕಲರವ’ ಕಾರ್ಯಕ್ರಮವು ದಿನಾಂಕ 12-08-2023ನೇ ಶನಿವಾರ ಪೂರ್ವಾಹ್ನ 11-00ರಿಂದ ನಡೆಯಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಶ್ರೀನಾಥ ರೈ ಬಾಳಿಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ ಉಪಸ್ಥಿತರಿರುವರು. ಸುಳ್ಯದ ಭಾವನಾ ಸುಗಮ ಸಂಗೀತ ಬಳಗ (ರಿ.) ಇದರ ಶ್ರೀ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ಕ.ಸಾ.ಪ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ವಿದ್ಯಾಬೋಧಿನೀ ಪ್ರೌಢ ಶಾಲೆ ಬಾಳಿಲ ಇದರ ಆಶ್ರಯದಲ್ಲಿ ಸಂಗೀತ ವರ್ಷಧಾರೆ ‘ಮಳೆ ಹಾಡುಗಳ ಕಲರವ’ ಕಾರ್ಯಕ್ರಮವು ದಿನಾಂಕ 09-08-2023ನೇ ಬುಧವಾರ ವಿದ್ಯಾಬೋಧಿನೀ ಪ್ರೌಢ ಶಾಲೆ ಬಾಳಿಲದಲ್ಲಿ ಪೂರ್ವಾಹ್ನ 11.00ರಿಂದ ನಡೆಯಲಿದೆ. ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ.) ಬಾಳಿಲ ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ರಾವ್ ಯು. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸ್ಥೆಯ ಸಂಚಾಲಕರಾದ ಶ್ರೀ ಪಿ.ಜಿ.ಎಸ್.ಎನ್.ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಯಶೋಧರ ನಾರಾಲು ಉಪಸ್ಥಿತರಿರುವರು. ಸುಳ್ಯದ ಭಾವನಾ ಸುಗಮ ಸಂಗೀತ ಬಳಗ (ರಿ.) ಇದರ ಶ್ರೀ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ಕ.ಸಾ.ಪ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು : ಮಂಗಳೂರು ಗಮಕ ಕಲಾ ಪರಿಷತ್ತಿನ ಮನೆ ಮನೆ ಗಮಕದ 5ನೇ ಪಲ್ಲವದ ಕಾರ್ಯಕ್ರಮ ದಿನಾಂಕ 31-07-2023ರಂದು ಮಂಗಳೂರಿನ ಅತ್ತಾವರದ ಅಭಿಷ್ ಪರ್ಲ್ ನಲ್ಲಿರುವ ಶ್ರೀಯುತ ಪ್ರಸನ್ನಕುಮಾರ್ ಇವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾನಿಕೇತನ ಪಿ.ಯು. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಸುರೇಶ್ ರಾವ್ ಅತ್ತೂರು ಇವರು ವಾಚನ ಮಾಡಿದರೆ ಶಕ್ತಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವಿದ್ವಾನ್ ರವಿಶಂಕರ್ ಹೆಗಡೆ ದೊಡ್ನಳ್ಳಿ ವ್ಯಾಖ್ಯಾನಿಸಿದರು. ಜೈಮಿನಿ ಭಾರತದ ‘ಚಂದ್ರಹಾಸ ಚರಿತ್ರೆ’ಯನ್ನು ಆಯ್ಕೆ ಮಾಡಿಕೊಂಡಿದ್ದು ರಸಪೂರ್ಣವಾದ ವಾಚನ ವಿದ್ವತ್ ಪೂರ್ಣವಾದ ವ್ಯಾಖ್ಯಾನ ಸೇರಿದ ಶೋತೃಗಳ ಮನಸೆಳೆಯಿತು. ಆತಿಥೇಯರಾದ ಶ್ರೀ ಪ್ರಸನ್ನ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಗಮಕಲಾ ಪರಿಷತ್ತಿನ ಖಜಾಂಚಿಗಳಾದ ಶ್ರೀಮತಿ ಚಂದ್ರಿಕಾ ಸುರೇಶ್ ವಂದಿಸಿದರು.
ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು?| ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?|| ನಿತ್ಯಸತ್ತ್ವವೇ ಭಿತ್ತಿ, ಜೀವಿತ ಕ್ಷಣಚಿತ್ರ| ತತ್ತ್ವವೀ ಸಂಬಂಧ – ಮಂಕುತಿಮ್ಮ|| ಚಿತ್ರವೊಂದಕ್ಕೆ ಗೋಡೆ ಬೇಕೇ ಬೇಕು. ಚಿತ್ರವಿಲ್ಲದ ಗೋಡೆಯು ಕೂಡ ಸೊಗಸಾಗಿ ಕಾಣೋದಿಲ್ಲ. ಒಂದಕ್ಕೊಂದು ಸಂಬಂಧ. ಹೊರಗಿನ ಜಗತ್ತನ್ನು ವಿವಿಧ ರೀತಿಯಿಂದ ನೋಡುವವ ಕಲಾವಿದ. ತನ್ನ ಅನುಭವಗಳನ್ನು ವಿವಿಧ ರೀತಿಯಲ್ಲಿ ಸಂಯೋಜನೆಗೊಳಿಸಿ ತಿಳಿಸುವ ಪ್ರಯತ್ನ ಕಲಾವಿದರದು. ನಾಲ್ಕು ಗೋಡೆಗಳ ಮಧ್ಯೆ ರಚಿಸಿದ ಕಲಾವಿದನ ಕಲಾಕೃತಿಗಳನ್ನು ಸಮುದಾಯಕ್ಕೆ ತಲುಪಿಸುವಲ್ಲಿ, ಕಲೆಗೊಂದು ಮೌಲ್ಯವನ್ನು ತಂದುಕೊಡುವಲ್ಲಿ ಕಲಾ ಗ್ಯಾಲರಿಗಳ ಪಾತ್ರ ದೊಡ್ಡದು. ಕಲಾವಿದನ ಕಲಾಕೃತಿ ನೋಡುಗ ಇಲ್ಲದೆ ಸಾಫಲ್ಯವಾಗುವುದಿಲ್ಲ. ಕಲಾವಿದ ಸೃಷ್ಟಿ ಮಾಡಿದರೆ ಅದರಿಂದ ಪ್ರಭಾವಿತರಾಗುವವರು ನೋಡುಗರು.ಇವರಿಬ್ಬರ ಮಧ್ಯೆ ಸಂಪರ್ಕಸೇತುವಾಗಿ ಕೆಲಸ ಮಾಡುವುದು ಕಲಾ ಗ್ಯಾಲರಿ. ಇಂಥಹ ಒಂದು ಕಲಾ ಗ್ಯಾಲರಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ‘ಆರ್ಟ್ಮಾ ಆರ್ಟ್ ಗ್ಯಾಲರಿ’ ಅನ್ನುವ ಹೆಸರಿನಲ್ಲಿ ತಲೆಯೆತ್ತಿದೆ. ಜನನಿಬಿಡ ಸ್ಥಳವಾದರೂ ಗ್ಯಾಲರಿ ಒಳ ಆವರಣ ಪ್ರಶಾಂತವಾಗಿ ಹಳ್ಳಿ ಮನೆಯ ಮಾಳಿಗೆಯನ್ನು ನೆನಪಿಸುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಇರುವ…
ಪುತ್ತೂರು: ಡಿಸೆಂಬರ್ -2023ರಲ್ಲಿ ನಡೆಯಲಿರುವ ‘ಶ್ರೀ ಆಂಜನೇಯ 55’ರ ಸಂಭ್ರಮಕ್ಕೆ ಪೂರಕವಾಗಿ, ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ರೂಪುಗೊಂಡು ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ ತಾಳಮದ್ದಳೆ’ ಎಂಬ ಕಾರ್ಯಕ್ರಮದಡಿಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ದಿನಾಂಕ 04-08-2023ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆಯ ಕೊನೆಯ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಆನಂದ್ ಸವಣೂರು, ಶ್ರೀ ನಿತೀಶ್ ಎಂಕಣ್ಣಮೂಲೆ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಶ್ರೀ ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಜಯಂತಿ ಹೆಬ್ಬಾರ್ (ಶ್ರೀ ಕೃಷ್ಣ), ಶ್ರೀಮತಿ ಪ್ರೇಮಲತಾ ರಾವ್ (ಸತ್ಯಭಾಮಾ), ಶ್ರೀ ರಾಮಚಂದ್ರ ಭಟ್ (ವಿಷ್ಣು) ಮತ್ತು ಶ್ರೀ ಅಚ್ಯುತ ಪಾಂಗಣ್ಣಾಯ (ಲಕ್ಷ್ಮೀ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸುಮಾರು 55 ಕಲಾವಿದರನ್ನು ಜೊತೆಗೂಡಿಸಿ ಹತ್ತು ಕಂತುಗಳಲ್ಲಿ ಮೂಡಿಬಂದ ಈ ವಿನೂತನ ಕಾರ್ಯಕ್ರಮದ ಧ್ವನಿ…
ಮೂಡುಬಿದಿರೆ : ಬೆಳುವಾಯಿಯ ಯಕ್ಷದೇವ ಮಿತ್ರಕಲಾ ಮಂಡಳಿಯ ವತಿಯಿಂದ 26ನೇ ವರ್ಷದ ಬಹುಆಯಾಮಗಳ ಯಕ್ಷಗಾನ ಪ್ರಸ್ತುತಿ ‘ಯಕ್ಷ ಸಂಭ್ರಮ -2023’ ಮೂಡುಬಿದಿರೆಯ ಕನ್ನಡ ಭವನದಲ್ಲಿ ದಿನಾಂಕ 30-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ, ವಹಿಸಿದ್ದು, ಮೂಡುಬಿದಿರೆಯ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಉದ್ಘಾಟಿಸಿ, ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣ ತಂತ್ರಿ ಆಶೀರ್ವಚನ ನೀಡಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ರಾಮಕೃಷ್ಣ ರಾವ್ ರೆಂಜಾಳ ಮತ್ತು ಶ್ರೀ ನಾರಾಯಣ ಶೆಟ್ಟಿ ಪೆರುವಾಯಿಯವರಿಗೆ ‘ಯಕ್ಷದೇವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಯಕ್ಷಗಾನ ಕರಾವಳಿಯ ಗಂಡು ಕಲೆ ಎನ್ನುವುದಕ್ಕಿಂತ ಅದು ಕರ್ನಾಟಕದ ಗಂಡು ಕಲೆ ಎನ್ನುವುದೇ ಅರ್ಥಪೂರ್ಣವಾಗಿದೆ. ರಾಜ್ಯದಲ್ಲಿ 84ರಷ್ಟು ಕಲಾ ಪ್ರಕಾರಗಳಲ್ಲಿ ಯಕ್ಷಗಾನವನ್ನು ಮೀರಿದ ಪ್ರಕಾರವಿಲ್ಲ. ಒಂದು ಕಾಲಕ್ಕೆ ಪೌರಾಣಿಕ ಪ್ರಸಂಗಗಳಿಗೆ ಬೇಡಿಕೆಯಿಲ್ಲ…
ಬಂಟ್ವಾಳ : ದಿನಾಂಕ 29-07-2023 ಶನಿವಾರ ದಿನ ನಮ್ಮ ‘ನಿರತ’ ಆಪ್ತ ರಂಗಮನೆ ವೇದಿಕೆಯಲ್ಲಿ ಗ್ರಹಿಕೆಯನ್ನು ಮೀರಿ ಅದ್ಭುತ ಯಶಸ್ಸಿನ ಪ್ರದರ್ಶನ ‘ಸಂಪೂರ್ಣ ರಾಮಾಯಣ’. ಕ್ರಿಯಾಶೀಲ ಪ್ರತಿಭಾನ್ವಿತ ನೃತ್ಯ ಗುರುಗಳಾದ ವಿದ್ವಾನ್ ಶ್ರೀ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಶ್ರೀಮತಿ ಪ್ರೀತಿಕಲಾ ಇವರು ಒಂದು ಗಂಟೆಯ ಅವಧಿಯಲ್ಲಿ ತ್ರೇತಾಯುಗದ ಶ್ರೀ ರಾಮನ ಜೀವನದ ಪ್ರಮುಖ ಘಟನೆಗಳಿಗೆ ಜೀವತುಂಬಿ ಅಭಿನಯಿಸಿದ ಪ್ರತಿಯೊಂದು ದೃಶ್ಯಗಳೂ ಮೈರೋಮಾಂಚನಗೊಳಿಸಿತು. ಈ ಮೊದಲು ಕಾರ್ಯಕ್ರಮವನ್ನು ನೋಡಿದ್ದರೂ ಪ್ರತಿಸಲವೂ ಹೊಸತಾಗುವ ಭಾವ….ಶ್ರೀ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಂಥರೆ..ಕೈಕೇಯಿ..ದಶರಥನ ಪಾತ್ರಗಳು, ಸೀತಾ ಸ್ವಯಂವರ, ರಾಮ ಭರತರ ನಡುವಿನ ಭಾವುಕ ಸನ್ನಿವೇಶ, ಶೂರ್ಪನಖಿಯ ಆಗಮನ, ಮಾರೀಚ-ಸೀತೆ-ರಾಮ-ಲಕ್ಷ್ಮಣ.. ಸೀತಾಪಹರಣದ ಜಟಾಯು, ಹನುಮಂತ-ರಾಮನ ಭೇಟಿ, ಲಂಕಾ ಪ್ರವೇಶದ ಹನುಮಂತನ ಭಾವ.. ಶ್ರೀರಾಮ ಪಟ್ಟಾಭಿಷೇಕ.. ಎಲ್ಲ ದೃಶ್ಯಗಳಿಗೂ ಶ್ರೇಷ್ಠ ಅಭಿನಯ ನೀಡಿ ಸಂಯೋಜಿಸಿದ ನೃತ್ಯ, ಸಾಂದರ್ಭಿಕ ಜತಿಗಳು….ಎಲ್ಲರಿಗೂ ಅರ್ಥವಾಗುವಂತೆ ನಿರೂಪಿಸುವ ಶಕ್ತಿ ಇವರಿಗೆ ಮಾತ್ರ ಸಾಧ್ಯ ಎಂದೆನಿಸಿತು. ಶ್ರೇಷ್ಠ ಕಲಾವಿದರಾಗಿಯೂ ಅಷ್ಟೇ ಸರಳವಾಗಿ ಬೆರೆಯುವ ಮತ್ತು…
ಸುರತ್ಕಲ್: ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆಯು ದಿನಾಂಕ 31-07-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಕನ್ನಡ ಹಾಗೂ ತುಳು ಚಿತ್ರರಂಗದ ಪ್ರಶಸ್ತಿ ವಿಜೇತ ಯುವ ಸಂಕಲನಕಾರ ಶ್ರೀ ರಾಹುಲ್ ವಸಿಷ್ಠರವರು ತಮ್ಮ ತಬಲಾ ವಾದನದ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. “ಚಲನಚಿತ್ರ ರಂಗದಲ್ಲಿ ಸಣ್ಣಪುಟ್ಟ ಹೆಜ್ಜೆಗಳನ್ನಿಡುತ್ತಾ, ದೊಡ್ಡ ಕನಸಿನ ಬುತ್ತಿಯನ್ನು ಕಟ್ಟಿಕೊಂಡು ಬಂದೆ. ಸತತ ಪ್ರಯತ್ನದ ಫಲವಾಗಿ ಆ ಕನಸುಗಳು ನನಸಾಗಿ ನಾನಿಲ್ಲಿ ನಿಂತಿರುವೆ” ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮೀ ಪಿ. ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಪಪ್ರಾಂಶುಪಾಲರಾದ ಶ್ರೀಮತಿ ಸುನೀತಾ ಕೆ., ವಿದ್ಯಾರ್ಥಿ ಕ್ಷೇಮ ಪಾಲಕಿ ಶ್ರೀಮತಿ ಪಲ್ಲವಿ, ಉಪನ್ಯಾಸಕರಾದ ಶ್ರೀಮತಿ ಚೈತ್ರ ಶೆಟ್ಟಿ, ಶ್ರೀಮತಿ ಶೈಲಾಜಾ, ಶ್ರೀಮತಿ ಜಯಂತಿ ಅಮೀನ್ ಹಾಗೂ ಮತ್ತಿತರ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಲಲಿತಕಲಾ ಸಂಘದ ಸಂಯೋಜಕರಾದ…
ಮಂಗಳೂರು : ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಸಪ್ತಾಹದ ಅಂಗವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 02-08-2023ರಂದು ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳ ಅಭಿನಯ ಗೀತೆಗಳನ್ನು, ಕಥಾಕಥನವನ್ನು ಹಾಗೂ ವಿವಿಧ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾಯ್ಕ್, “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ಅನಿವಾರ್ಯ. 1ರಿಂದ 5ನೇ ತರಗತಿಯ ಮಕ್ಕಳು ಹೆಚ್ಚು ಚಟುವಟಿಕೆಗಳ ಮೂಲಕವೇ ವಿಷಯವನ್ನು ಕಲಿಯುತ್ತಾರೆ. ಮಕ್ಕಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿರುವ ಶಿಕ್ಷಕ -ಶಿಕ್ಷಕಿಯರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ ಹಾಗೂ ಪೋಷಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಾ ಬದ್ಧವಾಗಿದೆ” ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಲರಾದ ಶ್ರೀ ರವಿಶಂಕರ್ ಹೆಗಡೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ…
ಉಡುಪಿ : ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಹಾಗೂ ನೃತ್ಯ ನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ಸೋಮವಾರ ದಿನಾಂಕ 31-07-2023ರಂದು ನಡೆಯಿತು. ಕೊಡವೂರಿನ ಶ್ರೀ ಶಂಕರ ನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದುಷಿ ರಾಧಿಕಾ ಶೆಟ್ಟಿ ಇವರ ಶಿಷ್ಯೆಯಾದ ಮಂಗಳೂರಿನ ಕುಮಾರಿ ಅದಿತಿ ಲಕ್ಷ್ಮೀ ಭಟ್ ಇವರು ಭರತನಾಟ್ಯ ಪ್ರದರ್ಶಿಸಿದರು. ಅದಿತಿ ಲಕ್ಷ್ಮೀ ಭಟ್ ಇವರು ದೇವಿ ರಾಜರಾಜೇಶ್ವರಿಯನ್ನು ಮನಃ ಪೂರ್ವಕವಾಗಿ ಮೆಚ್ಚಿ ಭಕ್ತಿ ಭಾವದಿಂದ ಹೊಗಳುವ ಅಂಬಾ ಪ್ರಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮುಂದೆ ಕನ್ನಡದ ರಾಗಮಾಲಿಕೆಯಲ್ಲಿರುವ ಜನಪ್ರಿಯವಾದ ನೀಲ ಮೇಘ ಶ್ಯಾಮ ಸುಂದರನ ಎಂಬ ವರ್ಣಗಳನ್ನು ಪ್ರಸ್ತುತಪಡಿಸಿದರು. ಇದರಲ್ಲಿ ತನ್ನ ಪ್ರೀತಿಯ ನೀಲ ಮೇಘ ಶ್ಯಾಮ ಸುಂದರನ ಒಂದೇ ಒಂದು ಕಣ್ಣೋಟಕ್ಕಾಗಿ ಹಂಬಲಿಸುವ ಆಕೆಯ ಭಾವವು ವ್ಯಕ್ತವಾಗುತ್ತದೆ. ಭಗವಂತನಾದ ನಾಟರಾಜನ ಸ್ತುತಿಗೆ ನರ್ತಿಸುವ ಮೂಲಕ ಅಂದಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.