Subscribe to Updates
Get the latest creative news from FooBar about art, design and business.
Author: roovari
ಯಕ್ಷರಂಗದಲ್ಲಿ ಅನೇಕ ಯುವಪ್ರತಿಭಾನ್ವಿತ ಕಲಾವಿದರು ಮಿಂಚುತ್ತಿದ್ದಾರೆ. ಇಂತಹ ಯುವ ಕಲಾವಿದರ ಸಾಲಿನಲ್ಲಿ ಮಿನುಗುತ್ತಿರುವ ಕಲಾವಿದರು ಸನ್ಮಯ್ ಭಟ್ ಮಲವಳ್ಳಿ. 20.10.2001ರಂದು ಸುಬ್ಬಯ್ಯ ಭಟ್ ಹಾಗೂ ಸವಿತಾ ಭಟ್ ಇವರ ಮಗನಾಗಿ ಜನನ. ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ. ಬಾಲ್ಯದಿಂದಲೂ ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದು ಅಜ್ಜ ನಾರಾಯಣ ಭಟ್ ಮಲವಳ್ಳಿ ಕಲಾವಿದರಾಗಿ ಹಲವಾರು ವರ್ಷ ಮೇಳದ ತಿರುಗಾಟ ಮಾಡಿದವರು. ಅವರ ಪ್ರೋತ್ಸಾಹ ಹಾಗೂ ತಂದೆ ತಾಯಿಯರ ಪ್ರೋತ್ಸಾಹ, ಕಣ್ಣಿಮನೆ ಗಣಪತಿ ಭಟ್ ಹಾಗೂ ಉದಯ ಕಡಬಾಳ ಇವರ ವೇಷ ನೋಡಿ ಯಕ್ಷಗಾನ ರಂಗಕ್ಕೆ ಪ್ರೇರಣೆಗೊಂಡು ಯಕ್ಷಗಾನಕ್ಕೆ ಬಂದರು. ಸದಾಶಿವ ಭಟ್ ಮಲವಳ್ಳಿ ಹಾಗೂ ಅನಂತ ಕುಣಬಿ ಮಲವಳ್ಳಿ ಸನ್ಮಯ್ ಅವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿಯನ್ನು ಮಾಡಿಕೊಳ್ಳುತ್ತೀರಿ:- ಹಿರಿಯ ಅನುಭವಿ ಕಲಾವಿದರಿಂದ ವೇಷದ ನಡೆಗಳನ್ನು ಕೇಳುವುದು, ಪ್ರಸಂಗ ಪುಸ್ತಕ ಓದುವುದು, ನನ್ನ ಕಲ್ಪನೆಯಲ್ಲಿ ಪಾತ್ರ ಚಿತ್ರಣವನ್ನು ರೂಪಿಸಿ ಸರಿಯೋ ತಪ್ಪೋ ಎಂದು ವಿಚಾರಿಸಿ ತಯಾರಿ…
ಮಂಗಳೂರು: ಕಟೀಲು ಮೇಳದಲ್ಲಿ ನಿರಂತರ 42 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಹಿರಿಯ ಯಕ್ಷಗಾನ ವೇಷಧಾರಿ ಶ್ರೀಧರ ಪಂಜಾಜೆ ಅವರಿಗೆ ‘ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ’ ನೀಡಿ ಸಂಮಾನಿಸಲಾಯಿತು. ಬೆಂಗಳೂರಿನ ಡಾ. ಬಿ. ನಿಶಾಕಾಂತ ಶೆಟ್ಟಿ ಅವರ ಶ್ರೀ ಕಟೀಲು ಮೇಳದ ಸೇವೆ ಆಟದ ಸಂಧರ್ಭದಲ್ಲಿ, ಹಿರಿಯ ಹವ್ಯಾಸಿ ತಾಳಮದ್ದಳೆ ಕಲಾವಿದ ಕೀರ್ತಿಶೇಷ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13-05-2023ರಂದು ಸಂಜೆ 6 ಗಂಟೆಯಿಂದ ಕದ್ರಿ ಕಂಬಳಗುತ್ತು ಮಂಗಳೂರಿನಲ್ಲಿ ಜರಗಿತು. ಡಾ. ಸುಧಾಕರ ಮಾರ್ಲ ಪಂಜಾಜೆ ಅವರನ್ನು ಅಭಿನಂದಿಸಿದರು. ಹಿರಿಯ ವಿದ್ವಾಂಸ ಡಾ. ಎಮ್. ಪ್ರಭಾಕರ ಜೋಶಿ, ಪ್ರದೀಪ ಕುಮಾರ ಕಲ್ಕೂರ, ಆಸ್ಪ ಲ್ಯಾಂಪ್ ನ ಸುರೇಶ ಬಿ. ಶೆಟ್ಟಿ, ಬಿ.ವಿ. ಹೆಗ್ಡೆ ಶಿರಸಿ, ಸುರೇಶ ವಿ. ಹೆಗ್ಡೆ, ಇಂದ್ರಾಳಿ ಶಿವರಾಮ್ ಶೆಟ್ಟಿ, ಬಾಳ ತಿಮ್ಮಪ್ಪ ಶೆಟ್ಟಿ, ಶಿರ್ವಕೋಡು ದಿನೇಶ್ ಹೆಗ್ಡೆ, ಸುಧಾಕರ ರಾವ್ ಪೇಜಾವರ, ಎಲ್ಲೂರು ರಾಮಚಂದ್ರ ಭಟ್, ಚೈತ್ರ ಸಾಕೇತ್…
ಮಂಗಳೂರು: ಶ್ರೀ ಕ್ಷೇತ್ರ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು ಇದರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಂಗಳೂರಿನ ‘ಥಂಡರ್ ಕಿಡ್ಸ್’ ತಂಡದ ಮಕ್ಕಳು ವಾದ್ಯಗೋಷ್ಠಿ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 14-05-2023ರಂದು ನಡೆಸಿಕೊಟ್ಟರು. ಮಕ್ಕಳ ಬೆರಳುಗಳಿಂದ ಮೂಡಿದ ಸಂಗೀತದ ಸ್ವರಗಳು ಮತ್ತು ಕಂಠದಿಂದ ಮೂಡಿದ ಸ್ವರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತಾಸಕ್ತ ಮಕ್ಕಳ ಬಾಲ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ದೊರೆತುದು ಮಕ್ಕಳ ಆಸಕ್ತಿಗೆ ಪೂರಕವಾಗಿತ್ತು. ತಬಲ : ಕು. ಆದ್ಯ ಮತ್ತು ಮಾ. ವಿನ್ಯಾಸ್, ಕೀಬೋರ್ಡ್: ಸ್ವಸ್ತಿಕ್ ಮತ್ತು ಅಕ್ಷಜ್, ಗಿಟಾರ್: ಮನ್ವಿತ್, ಕೊಳಲು : ಸಚಿನ್, ರಿದಂ ಪ್ಯಾಡ್ : ಶಾಹಿಲ್, ವೀಣೆ: ಐಶ್ವರ್ಯ, ಗಾಯನದಲ್ಲಿ: ವಿನಮ್ರ ಇಡಿದು, ಅರ್ಮನ್, ನಿನಾದ, ಪ್ರಾರ್ಥನಾ ಭಟ್, ವಸುಧ ಮಲ್ಯ, ಸುಜ್ಞಾನ ಆಚಾರ್ಯ ಪಾಲ್ಗೊಂಡಿದ್ದರು. ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸ್ ರಾವ್ ಅವರು ತರಬೇತಿಯನ್ನು ನೀಡಿದ್ದರು. ಕಾರ್ಯಕ್ರಮವನ್ನು ನಿಹಾರಿಕ ನಿರೂಪಿಸಿದರು. ಸುಧಾಕರರಾವ್ ಪೇಜಾವರ ಅವರು ಉಪಸ್ಥಿತರಿದ್ದು ಸಹಕರಿಸಿದರು.
ಮಂಗಳೂರು: ಶ್ರೀ ಶಾರದಾ ನಾಟ್ಯಾಲಯ ಕುಳಾಯಿ-ಹೊಸಬೆಟ್ಟು ಮಂಗಳೂರು ಇವರ ರಜತ ಸಂಭ್ರಮದ ಪ್ರಯುಕ್ತ ನಡೆಯುವ ಸರಣಿ ಕಾರ್ಯಕ್ರಮ ‘ನೃತ್ಯ ಶರಧಿ’ ದಿನಾಂಕ 21-05-2023ರಂದು ಸಂಜೆ 5-30ರಿಂದ ಕುದ್ಮುಲ್ ರಂಗರಾವ್ ಪುರಭವನ ಮಂಗಳೂರು ಇಲ್ಲಿ ಸಂಪನ್ನಗೊಳ್ಳಲಿದೆ. ನಾಟ್ಯ ರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಉಳ್ಳಾಲ ಶ್ರೀ ಮೋಹನ ಕುಮಾರ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಸನಾತನ ನಾಟ್ಯಾಲಯ ಮಂಗಳೂರು ಹಾಗೂ ವಿದ್ವಾನ್ ಶ್ರೀ ಕೆ. ಮುರಳೀಧರ್ ‘ಮಾಧವ ಸ್ಮರಣಮ್’ ಡಿಜಿಟಲ್ ಸ್ಟುಡಿಯೋ ಉಡುಪಿ ಇವರು ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಹಿಮ್ಮೇಳದಲ್ಲಿ ನೃತ್ಯ ನಿರ್ದೇಶನ : ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರಿಂದ, ನಟುವಾಂಗದಲ್ಲಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಮತ್ತು ವಿದುಷಿ ಶ್ರೀಮತಿ ಪ್ರಣತಿ ಸತೀಶ್. ಹಾಡುಗಾರಿಕೆಯಲ್ಲಿ ವಿದುಷಿ ಶ್ರೀಮತಿ ಅಪರ್ಣಾ ಶರ್ಮ ಪಾಂಡಿಚೇರಿ, ಮೃದಂಗ : ವಿದ್ವಾನ್ ಶ್ರೀ ಕೆ. ಬಾಲಚಂದ್ರ ಭಾಗವತ್ ಉಡುಪಿ, ಕೊಳಲು…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗ ಮತ್ತು ಕನ್ನಡ ಸಂಘ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ‘ಅಂಬಿಗರ ಚೌಡಯ್ಯ : ವಚನ ಮೀಮಾಂಸೆ’ 19-05-2023ರಂದು ರವೀಂದ್ರ ಕಲಾಭವನ ವಿ.ವಿ. ಕಾಲೇಜು ಮಂಗಳೂರು ಇಲ್ಲಿ ನಡೆಯಲಿದೆ. ಮಂಗಳೂರು ವಿ.ವಿ.ಯ ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರ ಘನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಸನ್ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಆರ್. ಜೈನ್ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮದರಾಸು ವಿ.ವಿ.ಯ ಕನ್ನಡ ವಿಭಾಗದ ಅಧ್ಯಕ್ಷರು ಹಾಗೂ ಬೆಂಗಳೂರು ಕ.ಸಾ.ಪ.ದ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ತಮಿಳ್ ಸೆಲ್ವಿ ಆಶಯ ನುಡಿಗಳನ್ನಾಡಲಿರುವರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಪೂರ್ವಾಹ್ನದ ಅವಧಿಯಲ್ಲಿ ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಯಕದ ಪರಿಕಲ್ಪನೆ’ ಎಂಬ ವಿಷಯದ ಬಗ್ಗೆ ಗೋಷ್ಠಿ ನಡೆಯಲಿದ್ದು,…
ಮೈಸೂರು: ‘ಆನ್ ಸ್ಟೇಜ್ ಯೂತ್ ಥಿಯೇಟರ್‘ ವತಿಯಿಂದ 45 ದಿನಗಳ ರಂಗ ಕಾರ್ಯಾಗಾರ ಮತ್ತು ನಾಟಕ ತಯಾರಿ “ಯು ಬೆಂಗಳೂರಿನ ಹೆಬ್ಬಾಳದ ಬಸವನ ಗುಡಿ ಸರ್ಕಲ್ ಹತ್ತಿರ “ಅಣ್ಣಯ್ಯಪ್ಪ ಭೈರವೇಶ್ವರ ಶಾಲೆ”ಯಲ್ಲಿ ಪ್ರಾರಂಭವಾಗಿದ್ದು . ಆಸಕ್ತಿಯುಳ್ಳ ವಿದ್ಯಾರ್ಥಿಗಳು ‘ಆನ್ ಸ್ಟೇಜ್’ ಗೆ ಕನೆಕ್ಟ್ ಆಗಿದ್ದಾರೆ. ಹೊಸ ಆಲೋಚನೆಯೊಂದಿಗೆ ಹೊರಟಿರುವ ಈ ರಂಗ ಕಾರ್ಯಾಗಾರ ಮತ್ತು ನಾಟಕ ತಯಾರಿಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ಈ ಶಿಬಿರದ ನಿರ್ದೇಶಕರಾದ ವಿನೋದ ಸಿ ಮೈಸೂರು 8892314554 ಇವರನ್ನು ಸಂಪರ್ಕಿಸಬಹುದು.
ಎಡನೀರು ಮಠ ಕಾಸರಗೋಡಿನ ಶಾಖಾ ಮಠ ಬೆಂಗಳೂರಿನ ಶ್ರೀ ಕೃಷ್ಣ ದೇವಾಲಯದಲ್ಲಿ ‘ಪ್ರತಿಷ್ಟಾ ಮಹೋತ್ಸವ ಹಾಗೂ ವಾರ್ಷಿಕೋತ್ಸವ ‘
ಬೆಂಗಳೂರು: ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠ ಕಾಸರಗೋಡು ಇದರ ಶಾಖಾ ಮಠ ಬೆಂಗಳೂರಿನ ಶ್ರೀ ಕೃಷ್ಣ ದೇವಾಲಯ ಇಲ್ಲಿನ 29 ನೇ ಪ್ರತಿಷ್ಟಾ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಮೇ. 12 ಮತ್ತು 13 ರಂದು ಪೂಜ್ಯ ಗುರುಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಯೊಂದಿಗೆ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಬಳಗದವರರಿಂದ ‘ಕೃಷ್ಣಾರ್ಪಣಂ’ ಭರತನಾಟ್ಯ ಕಾರ್ಯಕ್ರಮವು ಅತ್ಯಂತ ಮಜೋಜ್ಞವಾಗಿ ಮೂಡಿಬಂದಿತು. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರೊಂದಿಗೆ ಇವರ ಶಿಷ್ಯೆಯರಾದ ರುದ್ದೀ ಎಂ.ವಿ. ಹಾಗೂ ಅವನಿ ಬೆಳ್ಳಾರೆ ಜೊತೆಯಾಗಿದ್ದರು. ಕೃಷ್ಣ ದೇವಾಲಯದಲ್ಲಿ ಕೃಷ್ಣನ ಕುರಿತಾಗಿಯೇ ಎಲ್ಲಾ ಪ್ರಸ್ತುತಿಗಳಿದ್ದು ವಿಶೇಷವಾಗಿ ಜನಮೆಚ್ಚುಗೆಗೆ ಪಾತ್ರವಾಯಿತು.
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಹಮ್ಮಿಕೊಂಡ ಮೂರು ‘ದತ್ತಿ ಉಪನ್ಯಾಸ’ ಕಾರ್ಯಕ್ರಮಗಳು ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ದಿನಾಂಕ 19-05-2023ರಂದು ಅಪರಾಹ್ನ ಗಂಟೆ 4.30ಕ್ಕೆ ನಡೆಯಲಿದೆ. ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳೂ ಸಾಂಸ್ಕೃತಿಕ ಚಿಂತಕರೂ ಆದ ಪ್ರೊ. ಉಪೇಂದ್ರ ಸೋಮಯಾಜಿಯವರು ಮಾಡಲಿದ್ದಾರೆ. ಉಡುಪಿ ಜಿಲ್ಲೆಯ ಕ.ಸಾ. ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡುವರು. ದತ್ತಿ ದಾನಿಗಳಾದ ಸೂರಾಲು ನಾರಾಯಣ ಮಡಿ ಹಾಗೂ ಯಕ್ಷಗಾನ ಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. ಬ್ರಹ್ಮಾವರ ತಾಲೂಕು ಪ್ರಪ್ರಥಮ ಸಾಹಿತ್ಯ ಜ್ಞಾಪಕಾರ್ಥ ದತ್ತಿ, ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆಣಗಲ್ ದತ್ತಿ, ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನ (ಸಾಯಿಬ್ರ ಕಟ್ಟೆ) ಜ್ಞಾಪಕಾರ್ಥ ದತ್ತಿ ಹೀಗೆ ಮೂರು ದತ್ತಿಗಳಿಂದ ಮೂರು ಉಪನ್ಯಾಸ…
ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವ’ವು ದಿನಾಂಕ 07-05-2023ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಡಿತ್ ರವಿಕಿರಣ್ ಮಣಿಪಾಲ್, ಎಂ.ಆರ್.ಪಿ.ಎಲ್. ಹಾಗೂ ಒ.ಎನ್.ಜಿ.ಸಿ. ಜನರಲ್ ಮ್ಯಾನೇಜರ್ ಮಂಜುನಾಥ ಎಚ್.ವಿ. ಮೊದಲಾದವರು ಉಪಸಿತರಿದ್ದರು. ಧ್ಯಾನ ಸಂಗೀತ ಅಕಾಡೆಮಿ ಕಲಾ ಟಸ್ಟ್ ಇದರ ಆಧ್ಯಕ್ಷರಾದ ಶ್ರೀಮತಿ ಲೋಕೇಶ್ ಇವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಸಂಗೀತಗಾರರಾದ ಹಿರಿಯ ಕಲಾವಿದ ರಮಾನಾಥ್ ಕೋಟೆಕಾರ್ ಅವರನ್ನು ಸಮ್ಮಾನಿಸಲಾಯಿತು. ಅನಂತರ ನಡೆದ ಪ್ರಖ್ಯಾತ ಹಿಂದೂಸ್ಥಾನಿ ಗಾಯಕರಾದ ಪಂಡಿತ್ ಕುಮಾರ್ ಮರ್ಡೂರ್ ಧಾರವಾಡ, ಶ್ರೀಮತಿ ಮೇಧಾ ಭಟ್ ಸಿದ್ದಾಪುರ, ಶ್ರೀ ವಿಶಾಲ ಭಗವಾನ್ ರಾವ್ ಮಹರ್ ಗುಡೆ, ಅಮಿತ್ ಕುಮಾರ್ ಬೆಂಗ್ರೆ ಹಾಗೂ ಧ್ಯಾನ ಸಂಗೀತ…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಉಡುಪಿ ತಾಲೂಕು ಘಟಕದಿಂದ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ಮಣಿಪಾಲದಲ್ಲಿ ದಿನಾಂಕ 16-05-2023ರಂದು ನಡೆಯಿತು. 91 ವರ್ಷದ ಹಿರಿಯರಾದ ಶ್ರೀ ವಿಠಲ ರಾವ್ ಗಂಭೀರ್ ಅವರನ್ನು ಅವರ ಸ್ವಗೃಹ ಮಣಿಪಾಲದಲ್ಲಿ ಗೌರವಿಸಲಾಯಿತು. ಸರ್ಕಾರಿ ಕೆಲಸದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ವಿಠಲ್ ರಾವ್ ಅವರು ಕನ್ನಡ ನಾಡು ನುಡಿ ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಎಂಟು ವಿವಿಧ ವಾದ್ಯಗಳನ್ನು ನುಡಿಸಬಲ್ಲ ಇವರು ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಪರಿಣಿತರಾಗಿರುವ ವಿಠಲ್ ರಾವ್ ಅವರನ್ನು ಗೌರವಿಸುವುದು ನಮ್ಮ ಭಾಗ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯರಾದ ಉಪೇಂದ್ರ ಸೋಮಯಾಜಿ, ಭುವನ ಪ್ರಸಾದ್ ಹೆಗ್ಡೆ, ಚಂದ್ರಶೇಖರ್ ನಾವಡ, ನರಸಿಂಹಮೂರ್ತಿ, ಕಸಾಪ…