Subscribe to Updates
Get the latest creative news from FooBar about art, design and business.
Author: roovari
ಉಳ್ಳಾಲ : 2023- 2024ನೇ ಸಾಲಿನ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಪ್ರಮೀಳಾ ಮಾಧವ್ (ಸಾಹಿತ್ಯ ಕ್ಷೇತ್ರ) ಹಾಗೂ ಮಾಲತಿ ಹೊಳ್ಳ (ಕ್ರೀಡಾ ಕ್ಷೇತ್ರ) ಇವರನ್ನು ಆಯ್ಕೆ ಮಾಡಲಾಗಿದೆ. ದಿನಾಂಕ 24-02-2024ರಂದು ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆಯುವ ‘ಅಬ್ಬಕ್ಕ ಉತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ತಿಳಿಸಿದರು. ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರಾದ ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ “ಇಬ್ಬರಿಗೂ ಒಂದೇ ಹೆಸರಿನ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ತಲಾ ರೂಪಾಯಿ 25 ಸಾವಿರ ಆಗಿದ್ದು, ಎರಡೂ ರೀತಿಯ ಗೌರವವನ್ನು ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಎಂದೇ ಗುರುತಿಸಲಾಗುತ್ತದೆ. ಡಾ. ಕೆ.ಚಿನ್ನಪ್ಪ ಗೌಡ, ಪ್ರೊ. ಎ. ವಿ. ನಾವಡ, ಡಾ. ಗಣೇಶ್ ಅಮೀನ್ ಸಂಕಮಾರ್, ಡಾ. ನಾ. ದಾಮೋದರ ಶೆಟ್ಟಿ, ಬಿ. ಎಂ. ರೋಹಿಣಿ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ.” ಎಂದರು. ಮಾಲತಿ ಹೊಳ್ಳ : ಮೂಲತಃ ಉಡುಪಿಯ ಕೋಟದ ಮಾಲತಿ ಹೊಳ್ಳ…
ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು ಮಣ್ಣಗುಡ್ಡ ಮತ್ತು ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಇದರ ಸಹಯೋಗದಲ್ಲಿ ‘ರಂಗತರಬೇತಿ ಕಾರ್ಯಾಗಾರ ಮತ್ತು ನಾಟಕ ನಿರ್ಮಾಣ ಪ್ರಕ್ರಿಯೆ’ಯು ದಿನಾಂಕ 11-02-2024ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ಉದ್ದಾಟನೆಗೊಂಡಿತು. ಈ ಕಾರ್ಯಾಗಾರವನ್ನು ಕಾಲೇಜಿನ ಸಂಚಾಲಕರಾದ ಶ್ರೀ ವಸಂತ್ ಕಾರಂದೂರು ಉದ್ಘಾಟಿಸಿ “ಇದೊಂದು ಸರಳ ಮತ್ತು ಅಪೂರ್ವವಾದ ಸಮಾರಂಭ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಒಳ್ಳೆಯ ರೀತಿಯ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಇಂದು ನಾಟಕ ಕಲೆ ನಶಿಸಿ ಹೋಗುತ್ತಿದೆ. ಭೂಮಿಯಲ್ಲಿ ನಾವು ಬದುಕಿ ಇರುವಷ್ಟು ಕಾಲ ಈ ನಾಟಕವು ಶಾಶ್ವತವಾಗಿ ಬೆಳವಣಿಗೆಯನ್ನು ಹೊಂದಬೇಕು. ಇದು ನಮ್ಮ ಕಾಲೇಜಿನ ಹೊಸ ಹಾಗೂ ಒಳ್ಳೆಯ ಪ್ರಯತ್ನ. ಇದರಲ್ಲಿ ನಾವು ಯಶಸ್ವಿಯಾಗಿ ಸಮಾಜಕ್ಕೆ ಒಳ್ಳೆಯ ನಟರು ನಿರ್ದೇಶಕರನ್ನು ನೀಡುವ ಸುವರ್ಣ ಅವಕಾಶ ಬಂದಿದೆ” ಎಂದು ಹೇಳಿದರು. ಜರ್ನಿ ಥಿಯೇಟರ್ ಇದರ ಸಾಂಸ್ಕೃತಿಕ ರಾಯಭಾರಿಯಾದ ಶ್ರೀ ಸುನೀಲ್ ಪಲ್ಲಮಜಲು ಇವರು “ಅನುಭವ ಸವಿಯಲ್ಲ ಅದರ ನೆನಪೇ ಸವಿ. ಅದು ಮತ್ತೆ ಮರುಕಳಿಸಿದೆ.…
ಉಡುಪಿ : ಶ್ರೀ ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯ ನಿಕೇತನ ಕೊಡವೂರು ಇದರ ಜಂಟಿ ಆಶ್ರಯದಲ್ಲಿ ಆರಂಭಗೊಂಡ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 19-02-2024ರ ಸೋಮವಾರ ಸಂಜೆ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಶಿವಮೊಗ್ಗದ ವಿದುಷಿ ಕವನ ಪಿ. ಕುಮಾರ್ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ. ಕವನ ಪಿ. ಶಿವಮೊಗ್ಗ : ಪ್ರೇಮ್ ಕುಮಾರ್ ಮತ್ತು ಶ್ರೀಮತಿ ಗೀತಾ ದಂಪತಿಗಳ ಸುಪುತ್ರಿಯಾಗಿರುವ ವಿದುಷಿ ಕುಮಾರಿ ಕವನ ಪಿ. ಕುಮಾರ್ ತನ್ನ ಆರನೇ ವಯಸ್ಸಿನಿಂದ ಭರತನಾಟ್ಯದ ಅಭ್ಯಾಸವನ್ನು ಶಿವಮೊಗ್ಗದ ಖ್ಯಾತ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಪುಷ್ಪ ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ ನಡೆಸಿದ್ದು, ತನ್ನ ವಿದ್ವತ್ತನ್ನೂ ಪೂರ್ಣಗೊಳಿಸಿದ್ದಾರೆ. ಗುರುಗಳ ತಂಡದೊಂದಿಗೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಇವರು ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ…
ಪೌರಾಣಿಕ, ಚಾರಿತ್ರಿಕ ನಾಟಕಗಳ ಸುಗ್ಗಿಯ ಕಾಲವೊಂದಿತ್ತು. ಕಳೆದ ಸುಮಾರು ನಾಲ್ಕು ದಶಕಗಳಿಂದೀಚೆಗೆ ಅಂತಹ ನಾಟಕಗಳನ್ನು ಪ್ರದರ್ಶಿಸುವುದು ಕಡಿಮೆಯಾಗಿದೆ. ಒಂದು ವೇಳೆ ತುಘಲಕ್ನಂತಹ ನಾಟಕಗಳು ರಂಗವೇರಿದರೂ ಅವು ಆಧುನಿಕ ಪರಿವೇಷದೊಂದಿಗೆ ರಂಗವೇರುತ್ತವೆ. ಹೊಸ ಕಾಲಕ್ಕೆ ಹಳೆ ನಾಟಕಗಳು ಹೊಸ ಬಗೆಯ ರಂಗಾವಿಷ್ಕಾರಗಳನ್ನು ಮೈಗೂಡಿಸಿಕೊಂಡು ಅವತರಿಸಬೇಕಾದ್ದು ಕಾಲದ ಅನಿವಾರ್ಯತೆ. ಕನ್ನಡದ ಯುವ ನಾಟಕಕಾರರಲ್ಲಿ ಪ್ರಮುಖರಾಗಿರುವ ಶಶಿರಾಜ್ ರಾವ್ ಕಾವೂರು ಇವರು ಇತ್ತೀಚೆಗೆ ರಚಿಸಿ, ಬಿಡುಗಡೆ ಮಾಡಿದ ‘ಛತ್ರಪತಿ ಶಿವಾಜಿ’ ನಾಟಕ ಈ ಕಾಲಕ್ಕೂ ಹೇಗೆ ಅನ್ವಯಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೊರಗಿನ ರಾಜರುಗಳ ಆಳ್ವಿಕೆ, ದಬ್ಬಾಳಿಕೆಗಳಿಂದ ಕಂಗೆಟ್ಟ ಮರಾಠರು ಶಿವಾಜಿಯ ಮೂಲಕ ಹೊಸ ಸಾಮ್ರಾಜ್ಯ ಕಟ್ಟುವುದಕ್ಕೆ ಹೊರಡುತ್ತಾರೆ. ಬಾಲ್ಯದಲ್ಲಿ ತಾಯಿ ಜೀಜಾಬಾಯಿ, ಗುರುಗಳಾದ ಸಮರ್ಥ ರಾಮದಾಸರು, ದಾದಾಜಿಯವರು ಶಿವಾಜಿಗೆ ಬೇಕಾದ ವಿದ್ಯಾಭ್ಯಾಸ ನೀಡಿ ಶತ್ರುಪಾಳಯವನ್ನು ಎದುರಿಸಬಲ್ಲ ಶಕ್ತ ನಾಯಕನನ್ನಾಗಿ ರೂಪಿಸುತ್ತಾರೆ. ನಾಟಕದ ಪ್ರಾರಂಭದಲ್ಲಿ ಔರಂಗಜೇಬನ ಆಸ್ಥಾನದಲ್ಲಿ ಜಾವಳಿ ಕೋಟೆಯನ್ನು ವಶಪಡಿಸಿದ ಶಿವಾಜಿಯನ್ನು ಸದೆಬಡಿಯಲಿರುವ ಉಪಾಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಒಂದು ಕಡೆಯಿಂದ ಮೊಗಲರು, ಮತ್ತೊಂದು ಕಡೆಯಿಂದ…
ಬೊಂಡಾಲ : ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ ಸುವರ್ಣ ಸಂಭ್ರಮ ಕಾರ್ಯಕ್ರಮ ಹಾಗೂ ಕಟೀಲು ಮೇಳದ ಯಕ್ಷಗಾನ ಬಯಲಾಟವು ದಿನಾಂಕ 15-02-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ “ಯಕ್ಷಗಾನ ಬಯಲಾಟವನ್ನು ದೇವರ ಸೇವಾ ರೂಪವಾಗಿ ಆಡಿಸುವ ಸಂಪ್ರದಾಯ ಕರಾವಳಿಯಲ್ಲಿ ಬೆಳೆದು ಬಂದಿದೆ. ಇದರಿಂದ ನಮ್ಮ ಸಂಸ್ಕೃತಿಯ ಪುನರುತ್ಥಾನ ಸಾಧ್ಯ. ಅಲ್ಲದೆ ಈ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸಮಾಜದ ಶ್ರೇಷ್ಠ ಕಾರ್ಯ. ಯಕ್ಷಗಾನ ಕಲೆಯ ಬೆಳವಣಿಗೆಗಾಗಿ ರಾಜ್ಯಮಟ್ಟದ ಯಕ್ಷಗಾನ ಪ್ರಾಧಿಕಾರ ನಿರ್ಮಾಣಕ್ಕೆ ಸರಕಾರದ ನೆಲೆಯಲ್ಲಿ ಯತ್ನಿಸಲಾಗುವುದು” ಎಂದು ಹೇಳಿದರು. ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾಲಿಗ್ರಾಮ ಸೇರಿದಂತೆ ಬಹು ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರಿಗೆ ‘ಸುವರ್ಣೋತ್ಸವ ಗೌರವ ಪ್ರಶಸ್ತಿ’ ನೀಡಲಾಯಿತು. ಅಲ್ಲದೆ ಕಟೀಲು ಮೇಳದ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಅವರಿಗೆ 2024…
ಮೂಡಬಿದಿರೆಯ : ಮೂಡಬಿದಿರೆಯ ಪ್ರಥಮ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 20-02-2024ರಂದು ಮೂಡಬಿದಿರೆಯ ಸ್ವರಾಜ್ಯ ಮೈದಾನದ ಬಳಿ ಇರುವ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಲಿದೆ. ಖ್ಯಾತ ರಂಗಕರ್ಮಿ ಹಾಗೂ ಕಿರುತೆರೆ ಮತ್ತು ಚಲನಚಿತ್ರ ನಟರಾದ ಶ್ರೀ ಶ್ರೀಪತಿ ಮಂಜನಬೈಲು ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದ ಉದ್ಘಾಟನೆಯನ್ನು ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಎ. ಕೋಟ್ಯಾನ್ ನಿರ್ವಹಿಸಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಆಶಯ ನುಡಿಗಳನ್ನಾಡಲಿದ್ದು, ಮೂಡುಬಿದಿರೆಯ ಜೈನಮಠದ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಶುಭಾಶಂಸನೆಯ ನುಡಿಗಳನ್ನಾಡಲಿದ್ದಾರೆ. ಉದ್ಘಾಟನಾ ಸಾಮಾರಂಭದ ಬಳಿಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ತಂಡದಿಂದ ನಾಡು – ನುಡಿ ಆರಾಧನೆ , ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರಿಂದ ‘ಮೂಡಬಿದಿರೆ ಗತಕಾಲದ ಹೆಜ್ಜೆ ಗುರುತುಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ, ಸರ್ವಮಂಗಳ ಜೈನ ಮಹಿಳಾ ಸಂಘದ ಸದಸ್ಯರಿಂದ ‘ಭರತೇಶ ವೈಭವ’ದ ಆಯ್ದ…
ಕೊಡಿಯಾಲಬೈಲ್ : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಸಹಯೋಗದಲ್ಲಿ ಶಶಿರಾಜ್ ರಾವ್ ಕಾವೂರು ಬರೆದ ‘ಪರಶುರಾಮ’ ಮತ್ತು ‘ಛತ್ರಪತಿ ಶಿವಾಜಿ’ ನಾಟಕ ಕೃತಿಗಳು ಸಂತ ಅಲೋಶಿಯಸ್ ಕಾಲೇಜಿನ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ದಿನಾಂಕ 14-02-2024ರಂದು ಲೋಕಾರ್ಪಣೆಗೊಂಡವು. ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೇಶ್ವರ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ “ಪುಸ್ತಕಗಳಿಗಿಂತಲೂ ನಾಟಕ ಸಮಾಜದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ ಮತ್ತು ಆತಂಕ ದೂರ ಮಾಡಿ ಸಮಾಜ ಜಾಗೃತಗೊಳಿಸುತ್ತದೆ. ಪರಶುರಾಮ ಹಾಗೂ ಶಿವಾಜಿ ವೀರ ಪುರುಷರಾಗಿದ್ದು, ಅಂತಹವರ ಜೀವನದ ಕುರಿತ ನಾಟಕಗಳು ಇಂದಿಗೆ ಪ್ರಸ್ತುತ” ಎಂದು ಹೇಳಿದರು. ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ, “ಕರಾವಳಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದೆ. ಅನೇಕ ಕೃತಿಗಳನ್ನು ಕರಾವಳಿಯಲ್ಲಿ ಪ್ರಕಟಗೊಳಿಸಲಾಗಿದೆ. ಇಂದಿನ ದಿನದಲ್ಲಿ ಪುಸ್ತಕ ಪ್ರಕಟಿಸುವುದು ಕ್ಲಿಷ್ಟಕರವಾಗಿದ್ದು, ಓದುಗರು, ಕೃತಿಕಾರರು ಹಾಗೂ ಪ್ರಕಟಕರು ಜತೆಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಇದನ್ನು…
ಬಂಟ್ವಾಳ : ಶ್ರೀ ಒಡಿಯೂರು ರಥೋತ್ಸವದಲ್ಲಿ ‘ಶ್ರೀರಾಮ ತುಳು ಸಾಹಿತ್ಯ ಸಮ್ಮೇಳನ’ವು ದಿನಾಂಕ 18-02-2024 ಮತ್ತು 19-02-2024ರಂದು ಶ್ರೀ ಒಡಿಯೂರು ಕ್ಷೇತ್ರದಲ್ಲಿ ನಡೆಯಲಿದೆ. ದಿನಾಂಕ 18-02-2024ರಂದು ಸಾಹಿತಿ ಯಕ್ಷಗಾನ ಕಲಾವಿದರಾದ ಡಾ. ಭಾಸ್ಕರಾನಂದ ಕುಮಾರ್ ಕಟೀಲು ಇವರ ಅಧ್ಯಕ್ಷತೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು 24ನೇ ತುಳು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿಯಲ್ಲಿ ಬರೆದ ಅಧ್ಯಾತ್ಮ ರಾಮಾಯಣದ ‘ಸುಂದರಕಾಂಡ’ ಮತ್ತು ಡಾ. ವಸಂತಕುಮಾರ ಪೆರ್ಲ ಅವರು ಬರೆದ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ತುಳು ಲೇಖನಗಳ ಸಂಕಲನ ‘ತೂಪರಿಕೆ’ ಬಿಡುಗಡೆಯಾಗಲಿವೆ. ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯನಿಲಯದ ಸಹಾಯಕ ಉಪನ್ಯಾಸಕರಾದ ಡಾ. ರಾಜಶ್ರೀ ಶೆಟ್ಟಿ, ಪುತ್ತೂರಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಶಕುಮಾರ ಎಂ.ಕೆ. ಹಾಗೂ ದೈವನರ್ತಕರಾದ ಡಾ. ರವೀಶ್ ಪಡುಮಲೆ ಇವರಿಂದ ರಾಮಾಯಣದ ಬಗ್ಗೆ ವಿಮರ್ಶೆ, ಮಧ್ಯಾಹ್ನ 1-00 ಗಂಟೆಗೆ ಚುಟುಕು ಕವಿಗೋಷ್ಠಿ ಮತ್ತು ಕವಿಗೋಷ್ಠಿ ನಡೆಯಲಿದೆ.…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಯುವ ಸಾಹಿತಿಗಳಿಗಾಗಿ ಸಾಹಿತಿ, ಕವಿ ದಿವಂಗತ ಮೇಟಿ ಮುದಿಯಪ್ಪ ನೆನಪಿನ ಜಿಲ್ಲಾಮಟ್ಟದ ‘ಯುವ ಕಥಾ ಸ್ಪರ್ಧೆ-2024’ಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳು ಕೇವಲ ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಕಥೆಯು ಕನಿಷ್ಟ ಒಂದು ಸಾವಿರದಿಂದ ಗರಿಷ್ಟ ಒಂದು ಸಾವಿರದ ಐನೂರು ಪದಗಳಿಗೆ ಮೀರಿರಬಾರದು. 18 ರಿಂದ 35 ವಯೋಮಿತಿಯ ಉಡುಪಿ ಜಿಲ್ಲೆಯ ಯುವಕ ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಯಾವುದೇ ಪ್ರಕಾರದ ಕಥೆಗಳಿಗೆ ಅವಕಾಶವಿದೆ. ಸ್ಪರ್ಧಿಯು ಕಳುಹಿಸುವ ಕಥೆಯು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಿರಬಾರದು ಹಾಗೂ ಪ್ರಕಟಣೆಗೊಂಡಿರಬಾರದು. ಕಥೆ ಕಳುಹಿಸಲು ಕೊನೆಯ ದಿನಾಂಕ 30-03-2024. ಸ್ಪರ್ಧೆಯ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ನಗದು ಬಹುಮಾನ ತಲಾ ರೂ.5000/- ಹಾಗೂ 3000/- ದ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಲಾಗುವುದು. ಮೂರು ಮೆಚ್ಚುಗೆ ಪಡೆದ ಕಥೆಗಳಿಗೆ ಪ್ರಶಸ್ತಿ ಪತ್ರದ ಜೊತೆ ಮೇಟಿ ಮುದಿಯಪ್ಪರ ಕೃತಿ ಸೇರಿ…
ಬೆಂಗಳೂರು : 2023ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್’ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಕುಶಾಲ ನಗರದ ಬರಹಗಾರರಾದ ಹಂಚೆಟ್ಟರ ಫ್ರಾನ್ಸಿ ಮುತ್ತಣ್ಣ ಮತ್ತು ಕೋಲಾರ ಜಿಲ್ಲೆಯ ಡಾ. ಅಮರೇಂದ್ರ ಹೊಲ್ಲಂಬಳ್ಳಿಯವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಪಾರವಾದ ಗೌರವದಿಂದ ಡಾ. ಎ. ಪುಷ್ಪಾ ಅಯ್ಯಂಗಾರ್, ಮೈಸೂರು ಅವರು ಈ ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ನಾಡು-ನುಡಿ, ನೆಲ, ಜಲ ಕುರಿತ ಚಿಂತಕರು, ಕೃತಿ ರಚನೆಕಾರರು, ಕನ್ನಡ ಪರ ಹೋರಾಟಗಾರರು ಅಥವಾ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರಿಗೆ ಈ ಪುರಸ್ಕಾರವನ್ನು ನೀಡಲಾಗುವುದು. 2023ರ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀಮತಿ ಹಂಚೆಟ್ಟಿರ ಫಾನ್ಸಿ ಮುತ್ತಣ್ಣನವರು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಕೊಡಗು ಜಿಲ್ಲೆಯ…