Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ತಡಂಬೈಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ 9ನೇ ವಾರ್ಷಿಕೋತ್ಸವವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ದಿನಾಂಕ 29-01-2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಇಡ್ಯ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ರಮಾನಂದ ಭಟ್ ಮಾತನಾಡಿ “ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯು ಒಳ್ಳೆಯ ಕೆಲಸಗಳನ್ನು ಮಾಡುತಿದ್ದು, ಅದಕ್ಕೆ ನಮ್ಮ ಶ್ರೀ ಕ್ಷೇತ್ರದಿಂದ ಸಂಪೂರ್ಣ ಸಹಕಾರವನ್ನು ಸಂತೋಷದಿಂದ ಕೊಡುತ್ತೇವೆ.”ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ ಸುರತ್ಕಲ್ ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಭವ್ಯಾ ಶೆಟ್ಟಿ ಅವರು ಮಂಡಳಿಯ ಯಕ್ಷಗಾನ ಕಲಾ ಸೇವೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಮಾತನಾಡಿ “ ತಡಂಬೈಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಸಮರ್ಥವಾಗಿ ತಾಳಮದ್ದಳೆ ಕಾರ್ಯಕ್ರಮವನ್ನು ನೀಡಲು ಮಂಡಳಿಯ ನಿರ್ದೇಶಕ ಹಾಗೂ ಗುರುಗಳಾದ ವಾಸುದೇವರಾಯರ ಪರಿಶ್ರಮ ಅಭಿನಂದಾನರ್ಹ”. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತೆಂಕುತಿಟ್ಟು…
ಹೊಸಕೋಟೆ : ಹೊಸಕೋಟೆಯ ‘ಜನಪದರು ಸಾಂಸ್ಕೃತಿಕ ವೇದಿಕೆ (ರಿ)’ ಆಯೋಜಿಸುವ ಪ್ರತಿ ತಿಂಗಳ ಎರಡನೇ ಶನಿವಾರದ ರಂಗಮಾಲೆ -79ರ ನಾಟಕ ಸರಣಿಯ ಅಂಗವಾಗಿ ದಿನಾಂಕ 10-02-2024ರ ಶನಿವಾರ ರಂಗರಥ ಬೆಂಗಳೂರು ಪ್ರಸ್ತುತಪಡಿಸಿದ ಆಫ್ರಿಕನ್ ಖ್ಯಾತ ನಾಟಕಕಾರ ವಾರಿಯೋ ಪೋ ರಚನೆಯ ಕೆ.ವಿ. ಅಕ್ಷರ ಅನುವಾದಿಸಿ, ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಇವರು ನಿರ್ದೇಶನ ಮಾಡಿದ ವೈನೋದಿಕ ನಾಟಕ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ಏರ್ಪಡಿಸಲಾಗಿತ್ತು. ನಾಟಕ ಪ್ರದರ್ಶನವನ್ನು ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ @ ಪಾಪಣ್ಣ ಕಾಟಂನಲ್ಲೂರು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನ ಶ್ರೇಷ್ಠ ಲೇಖಕ ನೋಬಲ್ ವಿಜೇತ ಆಫ್ರಿಕಾದ ಹಾಗೂ ತೃತೀಯ ಜಗತ್ತಿನ ರಾಷ್ಟ್ರಗಳ ಆಧುನಿಕ ಮಧ್ಯಮ ವರ್ಗದ ಜನಸಮುದಾಯದ ಶ್ರೇಷ್ಠ ನಾಟಕಕಾರ. ದಾರಿಯೊ ಪೋ ಇಂದಿನ ಭವಣೆಯ ಬದುಕು ಎಷ್ಟು ಅಪನಂಬಿಕೆ, ಗೊಂದಲ, ತಲ್ಲಣಗಳಿಂದ ಕೂಡಿದೆ. ನೆಮ್ಮದಿಯ ಬಾಳು ಹೇಗೆ ಹಾಳು ಮಾಡಿದೆ ಎಂಬ ವಾಸ್ತವ ಕಾಲ ದೇಶ ಮೀರಿದೆ ಎಂಬದನ್ನು ತೆರೆದಿಟ್ಟ ಅಪರೂಪದ ನಾಟಕ ಇದು…
ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಎರಡು ದಿನಗಳ ‘ವಿಶ್ವ ಕೊಂಕಣಿ ಸಮಾರೋಹ, ಪ್ರಶಸ್ತಿ ಪ್ರದಾನ 2023, ಕಾರ್ಯಕ್ರಮವು ದಿನಾಂಕ 10-02-2024ರ ಶನಿವಾರದಂದು ಅರಂಭಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಎಂ. ಆರ್. ಪಿ. ಎಲ್. ಇದರ ಹಣಕಾಸು ವಿಭಾಗದ ಚೀಫ್ ಜನರಲ್ ಮ್ಯಾನೇಜರ್ ಸುರೇಂದ್ರ ನಾಯಕ್ “ಭಾಷೆ ತಾಯಿಗೆ ಸಮಾನ. ಹೃದಯದಲ್ಲಿ ಭಾಷಾ ಪ್ರೀತಿಯಿದ್ದಾಗ ಅದು ನಾಲಿಗೆ ಮತ್ತು ಮನೆಯೊಳಗೆ ನೆಲೆಸಲು ಸಾಧ್ಯ. ಬದಲಾವಣೆಯ ಕಾಲಘಟ್ಟದಿಂದಾಗಿ ಭಾಷೆಗೆ ಎದುರಾಗಿರುವ ಸವಾಲನ್ನು ಮಕ್ಕಳು ಮತ್ತು ಯುವಜನತೆಯಲ್ಲಿ ಭಾಷಾಭಿಮಾನ ಗಟ್ಟಿಗೊಳಿಸುವ ಮೂಲಕ ಉತ್ತಮ ಭವಿಷ್ಯ ನಿರೀಕ್ಷಿಸಲು ಸಾಧ್ಯ. ಕೊಂಕಣಿ ಭಾಷೆ ಕಲಬೆರಕೆ ಮತ್ತು ಬಳಕೆಯಲ್ಲಿ ಇಳಿಮುಖವಾಗುವ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. ಸಾಹಿತ್ಯ ಸಂಶೋಧನೆಯಿಂದ ಕೊಂಕಣಿಯ ತಳಪಾಯ ಗಟ್ಟಿಗೊಳಿಸಬಹುದು. ಆದರೆ ಬಳಕೆಯಿಂದ ಮಾತ್ರ ಅಲ್ಲಿ ಉನ್ನತ ಭವಿಷ್ಯದ ಸೌಧ ನಿರ್ಮಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾದ ಈ ದಿನಗಳಲ್ಲಿ ಭಾಷೆ ಸಂಸ್ಕೃತಿಯನ್ನು…
ಬೆಂಗಳೂರು : ಪದ ಪ್ರಸ್ತುತ ಪಡಿಸುವ ‘ಕರ್ನಾಟಕ ಜಾನಪದ ಉತ್ಸವ’ ಜಾನಪದ ನಾಟಕ, ನೃತ್ಯ, ಗಾಯನ ಮತ್ತು ರಂಗ ಗೌರವ ಕಾರ್ಯಕ್ರಮಗಳು ದಿನಾಂಕ 19-02-2024ರಿಂದ 21-02-2024ರವರೆಗೆ ಬೆಂಗಳೂರಿನ ಮಲತ್ತಹಳ್ಳಿಯ ಕಲಾ ಗ್ರಾಮ ಸಮುಚ್ಚಯ ಭವನದಲ್ಲಿ ನಡೆಯಲಿದೆ. ದಿನಾಂಕ 19-02-2024ರಂದು ಸಂಜೆ 6.30ಕ್ಕೆ ರಂಗ ತಜ್ಞರಾದ ನರೇಂದ್ರ ಬಾಬು ಇವರ ಅಧ್ಯಕ್ಷತೆಯಲ್ಲಿ ಜಾನಪದ ವಿದ್ವಾಂಸರಾದ ಡಾ. ಹಿ.ಚಿ. ಬೋರಲಿಂಗಯ್ಯ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಗೊ.ರು. ಚನ್ನಬಸಪ್ಪ ರಚನೆಯ ರಾಮಮೂರ್ತಿಯವರ ಸಂಗೀತ ಮತ್ತು ನಿರ್ದೇಶನದಲ್ಲಿ ಕರ್ನಾಟಕ ಜಾನಪದ ನಾಟಕ ‘ಸಾಕ್ಷಿ ಕಲ್ಲು’ ಪ್ರದರ್ಶನಗೊಳ್ಳಲಿದೆ. ದಿನಾಂಕ 20-02-2024ರಂದು ಸುಮಾ ಆರ್. ಕಂಠಿ ಇವರ ನೃತ್ಯ ನಿರ್ದೇಶನದಲ್ಲಿ ‘ಕರ್ನಾಟಕ ಜಾನಪದ ನೃತ್ಯ ವೈಭವ’ ಪ್ರಸ್ತುತಿಗೊಳ್ಳಲಿದೆ. ಈ ಸಂದರ್ಭದಲ್ಲಿ ಖ್ಯಾತ ಆಯುರ್ವೇದ ತಜ್ಞರಾದ ಡಾ. ಅಬ್ದುಲ್ ಖಾದರ್, ಹಿರಿಯ ರಂಗತಜ್ಞರು ಹಾಗೂ ಕವಿಗಳಾದ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಹಿರಿಯ ಸಾಹಿತಿ ಮತ್ತು ಪ್ರಕಾಶಕರಾದ ಅವಿರತ ಹರೀಶ್ ಮತ್ತು ಅಂತರಾಷ್ಟ್ರೀಯ ಚಿತ್ರ ಕಲಾವಿದರಾದ ಓ.…
ಕೊಡಗು : ಕುಶಾಲನಗರದ ‘ಕನ್ನಡಸಿರಿ ಸ್ನೇಹ ಬಳಗ’ ಮತ್ತು ‘ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು’ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಗಟ್ಟಿಮೇಳದೊಂದಿಗೆ ‘ಸಾಹಿತ್ಯ ಸಂಭ್ರಮ’ವು ದಿನಾಂಕ 18-02-2024ರಂದು ವಿರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಚಿ. ಸೌ. ಕಾವ್ಯಶ್ರೀ ಮತ್ತು ಚಿ.ರಾ. ರಾಜು ಸಿ. ಇವರ ವಿವಾಹೋತ್ಸವದ ಗಟ್ಟಿಮೇಳದೊಂದಿಗೆ ಗಾಯನ ಗೋಷ್ಠಿ, ಹನಿಗವನದ ಕವಿಗೋಷ್ಠಿ ಮತ್ತು ಖ್ಯಾತ ಸಾಹಿತಿ ಕಿಗ್ಗಾಲು ಎಸ್. ಗಿರೀಶ್ರವರ ‘ಮಾಯವಾದ ಮಾಯಾಂಗನೆ’ ಎಂಬ ಕೃತಿ ಲೋಕಾರ್ಪಣೆ ಇರುತ್ತದೆ. ಕವಿ ಹಾಗೂ ಕವಯತ್ರಿಯರಿಗೆ ತಪ್ಪದೇ ಆರು ಸಾಲಿನ ಹನಿಗವನ (ದಾಂಪತ್ಯ ಕುರಿತು) ಅಥವಾ ನಾಲ್ಕು ಸಾಲಿನ ಒಂದು ಚುಟುಕು ವಾಚನಕ್ಕೆ ಅವಕಾಶ ಇದೆ. ಕವನ ವಾಚನ ಮಾಡಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗುವುದು.
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ‘ವಿವೇಕವಾಣಿ’ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತೆರಡನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 13-02-2024ರಂದು ಮಂಗಳೂರಿನ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದರ ನಾಯಕತ್ವ ಮತ್ತು ನಿರ್ವಹಣೆಯ ಪಾಠಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಬೆಂಗಳೂರಿನ ವಿವೇಕಾನಂದ ಯೂತ್ ಮೂವ್ಮೆಂಟ್ ಇದರ ಸಿ. ಇ. ಓ ಕಚೇರಿಯಲ್ಲಿ ವ್ಯವಸ್ಥಾಪಕರಾಗಿರುವ ಶ್ರೀ ಸಂದೀಪ್ ವಸಿಷ್ಠ “ಸ್ವಾಮಿ ವಿವೇಕಾನಂದರ ತತ್ವಗಳಾದ ಸೇವೆ ಮತ್ತು ತ್ಯಾಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾಯಿ ಭಾರತಿಯ ಪೂಜೆಯನ್ನು ಮಾಡುತ್ತಾ ದೀನರ, ದಲಿತರ ಮತ್ತು ದುಃಖಿಗಳ ಸಮಸ್ಯೆಗಳನ್ನು ಅರಿತುಕೊಳ್ಳುವವರಾಗಬೇಕು. ನಮ್ಮ ಗುರಿಗಳು ಯಾವಾಗಲೂ ಅತೀ ಎತ್ತರದಲ್ಲಿರಬೇಕು ಹಾಗೆ ಆ ಗುರಿಯನ್ನು ತಲುಪುವಲ್ಲಿ ತಾಳ್ಮೆಯಿಂದ ಪರಿಶ್ರಮಿಸಬೇಕು. ನೇತೃತ್ವವನ್ನು ವಹಿಸಿಕೊಳ್ಳುವುದು ಒಂದು ಒಳ್ಳೆಯ ನಾಯಕತ್ವದ ಗುಣ ಮತ್ತು ಸರಿಯಾದ ರೀತಿಯಲ್ಲಿ ಆಯೋಜನೆ ಮಾಡುವುದೇ ನಿರ್ವಹಣೆ.” ಎಂದು ಹೇಳಿದರು. ಎ. ಜೆ. ಇನ್ಸ್ಟಿಟ್ಯೂಟ್ ಆಫ್…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಮೂಡುಪೆರಂಪಳ್ಳಿ ಶಿವಳ್ಳಿ ಗ್ರಾಮ ಇಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ದಿನಾಂಕ 11-02-2023ನೇ ರವಿವಾರ ‘ಶ್ರೀ ರಾಮ ದರ್ಶನ’ ಎಂಬ ತಾಳಮದ್ದಳೆ ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ರಾಮ ಪ್ರಕಾಶ್ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ, ಶುಭಾ ಜೆ.ಸಿ. ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ) ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ), ವಿದ್ಯಾಲಕ್ಷ್ಮಿಆರ್. ಭಟ್ (ಜಾಂಬವತಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಹರಿಕೃಷ್ಣ ಶಿವತಾಯ ವಂದಿಸಿದರು. ಈ ಕಾರ್ಯಕ್ರಮವನ್ನು ರಾಜಶ್ರೀ ಶಬರಾಯ, ನಾರಾಯಣ ಶಬರಾಯ ದಂಪತಿಗಳು ಪ್ರಾಯೋಜಿಸಿದರು.
ಮಂಗಳೂರು : ಯಕ್ಷಗಾನ ಕಲಾವಿದ, ಯಕ್ಷಗುರು ವರ್ಕಾಡಿ ಶ್ರೀ ರವಿ ಅಲೆವೂರಾಯರ ಷಷ್ಠ್ಯಬ್ದಿ ಪ್ರಯುಕ್ತ ‘ಅಲೆವೂರಾಯಾಭಿನಂದನಮ್’ ಕಾರ್ಯಕ್ರಮವು ದಿನಾಂಕ 11-02-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿಗಳವರು “ಕಲೆಯ ಮೂಲ ಸ್ವರೂಪದ ಉಳಿಸಿಕೊಳ್ಳುವಿಕೆ ಹಾಗೂ ಬೆಳವಣಿಗೆಗೆ ವರ್ಕಾಡಿ ರವಿ ಅಲೆವೂರಾಯರಂತಹಾ ಕಲಾವಿದರು; ಗುರುಗಳು ಇಂದು ಬೇಕಾಗಿದ್ದಾರೆ. ಎಳೆಯ ಪೀಳಿಗೆಗೆ ಯಕ್ಷಗಾನವನ್ನು ಅದರಂತೆಯೇ ತಲುಪಿಸುವಲ್ಲಿ ಉತ್ತಮ ಯಕ್ಷಗುರುಗಳು ಶ್ರಮಿಸುತ್ತಾರೆ. ಅಂಥವರಲ್ಲಿ ಶ್ರೀಮಠದ ಪ್ರೀತಿಪಾತ್ರ ಶಿಷ್ಯರಾದ ಅಲೆವೂರಾಯರು ಬಹಳ ಮುಂಚೂಣಿಯಲ್ಲಿದ್ದಾರೆ. ಶ್ರೀಮಠದ ಮೇಳದಲ್ಲೂ ಕಲಾವಿದರಾಗಿ ದುಡಿದವರೂ ಆಗಿದ್ದಾರೆ. ಇಂದು ಅವರ ಷಷ್ಠ್ಯಬ್ದಿಯ ಆಚರಣೆಯ ಸಂದರ್ಭದಲ್ಲೂ ವಿವಿಧ ಮಕ್ಕಳ ಮೇಳಗಳನ್ನು ಇಲ್ಲಿಗೆ ಕರೆಸಿ ಪ್ರದರ್ಶನ ನೀಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಆಶೀರ್ವದಿಸಲು ನಾವೂ ಹೆಮ್ಮೆಪಡುತ್ತೇವೆ. ನಾವು ನಂಬಿಕೊಂಡು ಬಂದಿರುವ ಶ್ರೀದಕ್ಷಿಣಾಮೂರ್ತಿ ಸ್ವಾಮಿ ಇವರಿಗೆ ಉತ್ತಮ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಹೇಳಿದರು. “ಯಕ್ಷಗಾನ ರಂಗಭೂಮಿಯನ್ನು ಬಲವಾಗಿ ನಿಂತು ಬೆಳೆಸುವ…
ಉಡುಪಿ : ಮಾಹೆ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆಶ್ರಯದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಬರೆದ ಮಾಚಾರು ಗೋಪಾಲ ನಾಯ್ಕ ಹೇಳಿದ ‘ಸಿರಿಸಂಧಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 10-02-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ “ಜಗತ್ತಿನಲ್ಲೇ ಕರ್ನಾಟಕ ಜಾನಪದ ಸಂಸ್ಕೃತಿ ಅದ್ಭುತವಾಗಿದ್ದು, ಚಿನ್ನಪ್ಪ ಗೌಡರು ಬರೆದ ‘ಸಿರಿಸಂಧಿ’ ಕೃತಿಯೂ ತುಳುವ ನಾಡು ಸಹಿತ ರಾಜ್ಯದ ಇತರ ಭಾಗದ ಜಾನಪದಗಳ ಅಧ್ಯಯನಕ್ಕೂ ಮೇಲ್ಪಂಕ್ತಿಯಾಗಿದೆ. ತುಳುನಾಡು ವ್ಯಾಪ್ತಿ ಮಾತ್ರವಲ್ಲದೇ ಮಂಟೇಸ್ವಾಮಿ, ಮಲೆಮಹದೇಶ್ವರ, ಹಾಲುಮತ, ಕೃಷ್ಣಗೊಲ್ಲ ಮೊದಲಾದ ಜಾನಪದಗಳ ಅಧ್ಯಯನಕ್ಕೆ ಇದೊಂದು ಮಾರ್ಗದರ್ಶಿಯಾಗಿದೆ. ಸಿರಿ ಸಾಹಿತ್ಯದ ಬಗ್ಗೆ ನಿರಂತರ ಅಧ್ಯಯನ ಮುಂದುವರಿಯಬೇಕು” ಎಂದು ಹೇಳಿದರು. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, “ಯುವಜನರು ಕಲೆ, ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು” ಎಂದರು. ವಿಮರ್ಶಕ ಡಾ. ಬಿ. ಜನಾರ್ದನ್ ಭಟ್ ಕೃತಿ ಪರಿಚಯಿಸಿದರು.…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾ.ಮಂ. ಕೃಷ್ಣರಾಯರಿಗೆ ದಿ. ಟಿ. ಶ್ರೀನಿವಾಸ್ ಸ್ಮರಣಾರ್ಥ ‘ಶ್ರೀ ಪಿ.ಕೆ. ನಾರಾಯಣ’ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13-02-2024ರಂದು ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ. ಮಹೇಶ ಜೋಶಿಯವರು “ಶಾ.ಮಂ. ಕೃಷ್ಣರಾವ್ ಅವರು ಗೋವಾ ಮತ್ತು ಕರ್ನಾಟಕದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಿದ್ದಾರೆ. ಸ್ವತ: ತಾವು ಬರೆಯುವುದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಬೆಳೆಸಿದ್ದಾರೆ ಎಂದು ವಿಶ್ಲೇಷಿಸಿದರು. ಗೋವಾದಲ್ಲಿ ತಾವು ದೂರದರ್ಶನದ ನಿರ್ದೇಶಕರಾಗಿದ್ದಾಗ ಅಲ್ಲಿದ್ದ ನಿರುದ್ವಿಗ್ನ ವಾತಾವರಣವನ್ನು ನೆನಪು ಮಾಡಿಕೊಂಡ ನಾಡೋಜ ಡಾ. ಮಹೇಶ ಜೋಶಿಯವರು ಅಂತಹ ಕಡೆ ಕನ್ನಡವನ್ನು ಕಟ್ಟಿ ಶಾ.ಮಂ. ಕೃಷ್ಣರಾಯರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಗೋವಾದಲ್ಲಿ ಅವರು ಕನ್ನಡ ಶಾಲೆಗಳನ್ನು ಕಟ್ಟಿದರು, ಸೈಕಲ್ಲಿನಲ್ಲಿ ಮನೆ ಮನೆಗೆ ಹೋಗಿ ಕನ್ನಡ ಪತ್ರಿಕೆಗಳನ್ನು ತಲುಪಿಸಿ ವಾಚನಾಭಿರುಚಿ ಬೆಳೆಸಿದರು. ‘ಗೋವಾ ಕನ್ನಡ ಸಂಘ’, ‘ಗೋಮಾಂತ ಭಾರತಿ’, ‘ಕರ್ನಾಟಕ ಸಂಘ’ಗಳನ್ನು ಕಟ್ಟಿ ಕನ್ನಡಿಗರನ್ನು ಸಂಘಟಿಸಿದರು. ಒಮ್ಮೆ ಗೌರೀಶ ಕಾಯ್ಕಿಣಿಯವರು ಗೋವಾಗೆ…