Author: roovari

ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ ಪ್ರಸ್ತುತಪಡಿಸುವ ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ರಚಿಸಿರುವ ‘ನೃತ್ಯಕಾವ್ಯ’ ಪುಸ್ತಕ ಲೋಕಾರ್ಪಣೆ, ‘ಭಾವಸ್ಥ’ ಭಕ್ತಿ ಮತ್ತು ನಾಯಕ ಭಾವ ಕೇಂದ್ರಿತ ಭರತನಾಟ್ಯ ಮಾರ್ಗ ನೃತ್ಯ ಪ್ರಸ್ತುತಿ ಕಾರ್ಯಕ್ರಮ ಜೂನ್ 4ರಂದು ಸಂಜೆ 4.30ಕ್ಕೆ ಪುರಭವನದಲ್ಲಿ ನಡೆಯಲಿದೆ ಎಂದು ಬಿ. ಸುಮಂಗಲಾ ರತ್ನಾಕರ್ ರಾವ್ ತಿಳಿಸಿದರು. ಕಲಾಕೇಂದ್ರದ ಘಟಕವಾದ ಹೀರಾ ಪಬ್ಲಿಕೇಷನ್ಸ್ ಮೂಲಕ ‘ನೃತ್ಯ ಕಾವ್ಯ’ ಭರತನಾಟ್ಯ ಮಾರ್ಗದ ನೃತ್ಯ ಬಂಧಗಳು ಎಂಬ ಭರತನಾಟ್ಯ ನೃತ್ಯ ಸಾಹಿತ್ಯದ ಕನ್ನಡ ಭಾಷೆಯ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಪುಸ್ತಕದ 9 ಹಾಡುಗಳಿಗೆ ದಕ್ಷಿಣ ಭಾರತದ 6 ಮಂದಿ ಯುವ ನೃತ್ಯ ಕಲಾವಿದರು. ‘ಭಕ್ತಿ, ನಾಯಕ ಭಾವಕೇಂದ್ರಿತ ಭಾವಸ್ಥ ಆತನ ಭಾವಛಾಯೆಗಳು’ ಎಂಬ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ. ವಿದ್ವಾನ್‌ ಬಿ. ದೀಪಕ್ ಕುಮಾರ್‌ ಪುತ್ತೂರು, ವಿದ್ವಾನ್ ಪ್ರಮೋದ್‌ ಕುಮಾರ್ ಉಳ್ಳಾಲ, ವಿದ್ವಾನ್ ಸುಜಯ್ ಶ್ಯಾನುಬಾಗ್‌ ಹುಬ್ಬಳ್ಳಿ, ವಿದ್ವಾನ್ ವಿಜಯಕುಮಾರ್ ಎಸ್‌. ಚೆನ್ನೈ, ವಿದ್ವಾನ್ ಅನಿಲ್ ಅಯ್ಯ‌ರ್ ಬೆಂಗಳೂರು…

Read More

ಉಡುಪಿ : ರಂಗ ಭೂಮಿ ಉಡುಪಿಯು ದಿ. ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಆಯೋಜಿಸುವ ‘ರಂಗ ಭೂಮಿ ಆನಂದೋತ್ಸವ -2023’ ಕಾರ್ಯಕ್ರಮವು ಜೂನ್ 3 ಹಾಗೂ 4ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ದಿನಾಂಕ 03-06-2023ರಂದು ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಉಡುಪಿ ಶಾಸಕರಾದ ಶ್ರೀ ಯಶ್‌ಪಾಲ್ ಎ. ಸುವರ್ಣ ಇವರು ಉದ್ಘಾಟಿಸಲಿದ್ದು, ಉಡುಪಿಯ ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಣಿಪಾಲದ ಆಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಕಾರ್ಯದರ್ಶಿಯಾದ ಶ್ರೀ ಬಿ.ಪಿ. ವರದರಾಯ ಪೈ, ಉಡುಪಿಯ ಕರ್ನಾಟಕ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಎ.ಜಿ.ಎಂ. ಶ್ರೀ ರಾಜಗೋಪಾಲ ಬಿ., ಯುವ ಉದ್ಯಮಿ ಶ್ರೀ ಮಿಥುನ್ ಆರ್. ಹೆಗ್ಡೆ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀನಗರದ ಶ್ರೀ ಕುತ್ಪಾಡಿ ಜಗನ್ನಾಥ ಗಾಣಿಗ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ನಿವೃತ್ತ ಎಂ.ಡಿ. ಹಾಗೂ ಕರ್ನಾಟಕ…

Read More

ಉಡುಪಿ: ಶ್ರೀ ಕಾನಂಗಿ ಮಹಾಲಿಂಗೇಶ್ವರ ದೇವಸ್ಥಾನ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಉಡುಪಿ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಜಾನಪದದಲ್ಲಿ ಭಜನೆ’ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 04-06-2023ರ ರವಿವಾರ ಬೆಳಿಗ್ಗೆ ಉಡುಪಿಯ ಕಡೆಕಾರಿನ ಶ್ರೀ ಕಾನಂಗಿ ಮಹಾಲಿಂಗೇಶ್ವರ ( ಬ್ರಹ್ಮ-ವಿಷ್ಣು- ಮಹೇಶ್ವರ ) ದೇವಸ್ಥಾನ ಕುತ್ಪಾಡಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಂಬಲಪಾಡಿಯ ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ತುಕರಾಮ ಪೂಜಾರಿ ಹಾಗೂ ಉಡುಪಿಯ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿಯಾದ ಶ್ರೀ ರವಿರಾಜ ನಾಯಕ್ ವಿಶೇಷ ಉಪನ್ಯಾಸ ನೀಡಲಿದ್ದು ಶ್ರೀ ಕಾನಂಗಿ ಮಹಾಲಿಂಗೇಶ್ವರ ( ಬ್ರಹ್ಮ-ವಿಷ್ಣು- ಮಹೇಶ್ವರ ) ದೇವಸ್ಥಾನದ ಧರ್ಮದರ್ಶಿಗಳಾದ ಡಾ.ಕೆ.ಆರ್.ಕೆ.ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಡೆಕಾರಿನ ಹಿರಿಯ ಭಜಕರಾದ ಶ್ರೀ…

Read More

ಮೈಸೂರು: ಮೈಸೂರಿನ ಶ್ರೀ ಗುರು ಕಲಾ ಶಾಲೆಯು ಮೂರು ತಿಂಗಳ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ದಿನಾಂಕ 02-06-2023 ರಂದು ಆರಂಭವಾಗುವ ಈ ಶಿಬಿರದಲ್ಲಿ 7 ರಿಂದ 14 ವರ್ಷದವರೆಗಿನ ಮಕ್ಕಳು ಭಾಗವಹಿಸಬಹುದು. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅಭಿನಯ, ನೃತ್ಯ, ದೇಹ ಭಾಷೆ, ಸಂಭಾಷಣ ಕೌಶಲ್ಯ, ರಂಗಾಟಗಳು, ರಂಗಗೀತೆ, ಭಾಷಾ ಬಳಕೆ, ಓದುವ ರೀತಿ, ಧ್ವನಿ ವ್ಯತ್ಯಾಸ, ವ್ಯಕ್ತಿತ್ವ ವಿಕಸನ ಹೀಗೆ ಹತ್ತು ಹಲವು ವಿಷಯಗಳನ್ನು ಪರಿಣತರು ಹೇಳಿಕೊಡಲಿದ್ದಾರೆ. ಈ ತರಗತಿಗಳು ವಾರದಲ್ಲಿ ಎರಡು ದಿನ ನಡೆಯಲಿದ್ದು ಶುಕ್ರವಾರ ಸಂಜೆ 4.30 ರಿಂದ 6.30ರ ವರೆಗೆ ಹಾಗೂ ಶನಿವಾರ 3.00 ರಿಂದ 6.00ರ ವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ -9980794690 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಶ್ರೀಗುರು ಕಲಾ ಶಾಲೆ- ಮೈಸೂರಿನ ಶ್ರೀರಾಂಪುರದಲ್ಲಿ (ಪ್ರೀತಿ ಲೇಔಟ್)ನಲ್ಲಿ 2016ರಂದು ಸ್ಥಾಪನೆಯಾಯಿತು. ಇಲ್ಲಿ ಮಕ್ಕಳು, ಮಹಿಳೆಯರು ಒಳಗೊಂಡಂತೆ ಎಲ್ಲ ವಯೋಮಾನದ ಆಸಕ್ತರಿಗೂ ಸಂಗೀತವನ್ನು ಹೇಳಿಕೊಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಆಕಾಶವಾಣಿಯಲ್ಲಿ…

Read More

ಜೀವನದ 56 ವಸಂತಗಳಲ್ಲಿ 44 ವರ್ಷ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತನಾಮರಾದವರು ಕೋಟ ಶಿವಾನಂದ. ಕೋಟದ ದಿ| ರಾಮಕೃಷ್ಣ ಮೆರಟ ಮತ್ತು ಜಲಜಾಕ್ಷಮ್ಮನ ಪುತ್ರನಾಗಿ 01-06-1967ರಲ್ಲಿ ಜನಿಸಿದ ಇವರು ಗಿಳಿಯಾರು ಶಾಂಭವಿ ಶಾಲೆಯಲ್ಲಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದವರು. ಅಮೃತೇಶ್ವರಿ ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಆಯ್ಕೆ ಮಾಡಿ ಅಂದಿನ ಭಾಗವತ ನಾರಣಪ್ಪ ಉಪ್ಪೂರರ ಮಾರ್ಗದರ್ಶನದಲ್ಲಿ 4ವರ್ಷ ವೃತ್ತಿ ಮೇಳದ ತಿರುಗಾಟ ಮಾಡಿದ ಶಿವಣ್ಣ ಚಂಡೆ ವಾದನದ ಗೀಳನ್ನು ಹತ್ತಿಸಿಕೊಂಡು ಮನೆಯಲ್ಲಿ ಡಬ್ಬವನ್ನು ಬಾರಿಸುತ್ತ ಗುರುವಿಲ್ಲದೆ ಚಂಡೆವಾದಕರಾದರು. ಮನೆಯ ಪಕ್ಕದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿದ್ದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಪ್ರೋತ್ಸಾಹವು ಶಿವಣ್ಣರ ಕಲಿಕೆಗೆ ಪ್ರೇರಣೆಯಾಯಿತು. ಹಿರೇ ಮಹಾಲಿಂಗೇಶ್ವರ ಮತ್ತು ಪಂಚಲಿಂಗೇಶ್ವರ ಮೇಳಕ್ಕೆ ಚಂಡೆ ವಾದಕರಾಗಿ ಸೇರ್ಪಡೆಗೊಂಡು ಬಳಿಕ ಕಾಳಿಂಗ ನಾವಡರಿಂದ ಆಹ್ವಾನ, ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆ. ಅಲ್ಲಿ ಹೊಳೆಗದ್ದೆ ದುರ್ಗಪ್ಪ ಗುಡಿಗಾರ ಮತ್ತು ಮಂದಾರ್ತಿ ರಾಮಕೃಷ್ಣರ ಸಾಮಿಪ್ಯದಲ್ಲಿ ಪರಿಪೂರ್ಣ ಚಂಡೆ ವಾದಕರಾಗಿ…

Read More

ಉಡುಪಿ : ಉಡುಪಿಯ ತುಳುಕೂಟದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನೀಡಲಾದ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ದಿನಾಂಕ 28-05-2023 ಭಾನುವಾರ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 28ನೇ ದಿವಂಗತ ಎಸ್.ಯು. ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ಕನ್ನಡ-ತುಳು ಸಾಹಿತಿ ಯಶೋದಾ ಮೋಹನ್ ಇವರ ‘ದೇರಮಾಮುನ ದೂರನೋಟೊಲು’ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಯಶಪಾಲ್ ಎ. ಸುವರ್ಣ ಅವರು ಯಶೋದಾ ಮೋಹನ್ ಬರೆದಿರುವ ‘ದೇರಮಾಮುನ ದೂರನೋಟೊಲು’ ಕಾದಂಬರಿಯನ್ನು ಬಿಡುಗಡೆಗೊಳಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, “ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಸಾಕಷ್ಟು ಬೇಡಿಕೆ, ಹೋರಾಟಗಳು ನಡೆಯುತ್ತಿದ್ದು, ತುಳು ಭಾಷೆಗೆ ನ್ಯಾಯ ಸಿಗುವ ಕೆಲಸ ಮಾಡುವೆ. ತುಳುನಾಡಿನಲ್ಲಿ ಹುಟ್ಟಿ ತುಳುಕೂಟದ ಸದಸ್ಯನಾಗಿರುವ ನಾನು ನಿಮ್ಮೆಲ್ಲರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಬೇಕಿದೆ” ಎಂದರು. ಜಾನಪದ ವಿದ್ವಾಂಸ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಎಕ್ಕಾರ್ ಕೃತಿ ಪರಿಚಯ ಮಾಡುತ್ತಾ “ತುಳುನಾಡು ಸಂಸ್ಕೃತಿ ಮತ್ತು…

Read More

ಐದು ಬತ್ತಿಯಿರಿಸಿ ಸಾಲಾಗಿ ಉರಿಸಿಟ್ಟ ತುಪ್ಪದ ದೀಪಗಳು. ಮೂಲೆಯೊಂದರಲ್ಲಿ ನಡುಗುತ್ತಾ ಕುಳಿತ ಇಟ್ಟಿಚ್ಚಿರಿ. ವಿವಾಹಾನಂತರದ ಪ್ರಸ್ತಕ್ಕೆ ಸಿದ್ಧವಾಗಿರುವ ನವವಧುವಿನ ಮಧುರವಾದ, ವರ್ಣನಾತೀತವಾದ ನಡುಕವಿರಬಹುದು. ತಳಮಳವಿರಬಹುದು. ನಡುಕ ಹೆಚ್ಚಾಯಿತು. ನೊರೆಯೂ ಜೊಲ್ಲೂ ಉಕ್ಕತೊಡಗಿತು. ನೆಲದ ಮೇಲೆ ಬಿದ್ದು ಬಿಲ್ಲಿನಂತೆ ಡೊಂಕಾದಳು. ಸೊಂಟ ಮುರಿದ ಹುಳದಂತೆ ಹೊರಳಿದಳು.ಚಡಪಡಿಸಿದಳು.ಕ್ರಮೇಣ ಬೆವರಿನಲ್ಲಿ ಮಿಂದು ಕ್ಷೀಣಿಸಿ ನಿದ್ದೆ ಹೋದಳು. ಪ್ರಸ್ತ ಅದ್ಭುತವಾಗಿತ್ತು! ಇದು ಇಟ್ಟಿಚ್ಚಿರಿಯ ಪ್ರಸ್ತ. ಮೇಲ್ನೋಟಕ್ಕೆ ಅದ್ಭುತವಾದ ಪ್ರಸ್ತದ ಒಳಾರ್ಥ ಅರಿವಾಗುವುದೇ ಅಶ್ವತ್ಥಾಮನನ್ನು ಓದುತ್ತಾ ಸಾಗಿದಾಗ. ಅಪಸ್ಮಾರ ರೋಗಿಯೊಬ್ಬಳ ಮೊದಲ ರಾತ್ರಿಯ ನೋವನ್ನು ಹೇಳಿಯೂ ಹೇಳದಂತೆ ಓದುಗನ ಮನಕ್ಕಿಳಿಸುವ ನಾ.ದಾಮೋದರ ಶೆಟ್ಟಿಯವರು ಅನುವಾದಿಸಿದ ಮಾಡಾಂಬ್ ಕುಂಞಕುಟ್ಟನ್ ಅವರ ಅಶ್ವತ್ಥಾಮನ್ ಕಾದಂಬರಿಯ ಸಾಲುಗಳು. ತಪ್ಪುಗಳೇ ಮಾಡಲಿಲ್ಲವೆಂದು ಸರಾಗವಾಗಿದ್ದುಬಿಡುವ ಕಾದಂಬರಿಯ ನಾಯಕ ಕುಂಜಿಣ್ಣಿ ಕೊನೆಗೆ ಪ್ರಾಯಶ್ಚಿತದೊಳಗೆ ಬೇಯುವನೋ ಎಂದೆನಿಸಿದಾಗಲೇ ಇಲ್ಲ ಆತ ಬದಲಾಗಿಲ್ಲ ಎಂಬಂತೆ ಅಲ್ಲಲ್ಲಿ ಹೇಳಿದರೂ ಕೊನೆಗೆ ಮಹಾಭಾರತದ ಅಶ್ವತ್ಥಾಮನಂತೆ ತಪ್ಪಿನ ವ್ರಣಗಳು ಕೀವಾಗಿ, ನೋವಾಗಿ ಕಾಡತೊಡಗಿದಾಗ ಊರನ್ನೇ ಬಿಟ್ಟು ತೊರೆಯುವ ಆತನ ತೊಳಲಾಟಗಳ ಎಳೆಯೇ ಅಶ್ವತ್ಥಾಮ. ಪ್ರತೀಕಾರಕ್ಕೋ,…

Read More

ಮಸ್ಕತ್ : ಬಿರುವ ಜವನೆರ್ ಮಸ್ಕತ್ ಇವರು ಒಮಾನ್ ಮಸ್ಕತ್ ನ ಧಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿದ ಪೂಜಾ ಸಹಿತ ‘ಶ್ರೀ ಶನೀಶ್ವರ ಮಹಾತ್ಮೆ- ವಿಕ್ರಮಾದಿತ್ಯ ವಿಜಯ’ ಯಕ್ಷಗಾನ ತಾಳಮದ್ದಳೆ ನೆರೆದ ಸಾವಿರಾರು ತುಳುವರನ್ನು ರಂಜಿಸಿತು. “ಪೂಜ್ಯ ಶಿರಡಿ ಸಾಯಿ ಬಾಬಾ, ಶ್ರೀ ನಿತ್ಯಾನಂದ ಗುರುಕೃಪೆಯಿಂದ ಬಿರುವ ಜವನೆರ್ ಮಸ್ಕತ್ ಸಂಯೋಜಿಸುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ” ಎಂದು ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ದ್ವಿತೀಯ ಬಾರಿ ಮಸ್ಕತ್ ನಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಸಿಕೊಟ್ಟ ಶ್ರೀ ಶನೀಶ್ವರ ಭಕ್ತ ವೃಂದದ ಕಲಾವಿದರನ್ನು ಅಭಿನಂದಿಸಿದರು. 2018ರಲ್ಲಿಯೂ ಜನ ಮನ ರಂಜಿಸಿದ್ದ ಈ ತಂಡ ಈ ಬಾರಿ ಮಸ್ಕತ್ ನಲ್ಲಿ ಅಪೂರ್ವ ದಾಖಲೆ ಸೃಷ್ಟಿಸಿದೆ ಎಂದು ನುಡಿದರು. ಶಂಕರ್ ಉಪ್ಪೂರು, ಚಂದ್ರಕಾಂತ್ ಕೋಟ್ಯಾನ್, ಲೋಕೇಶ್ ಕುಂದರ್ ದಂಪತಿಗಳು ಸೇವಾ ಸಂಕಲ್ಪ ಮಾಡಿದರು. ವೃತ್ತಿ ಹಾಗೂ ಹವ್ಯಾಸಿ ಅನುಭವಿ ಕಲಾವಿದರ ಸಮಾಗಮದಲ್ಲಿ ನಡೆದ ಚಾರಿತ್ರಿಕ ಶನಿ ಪೂಜೆಯಲ್ಲಿ…

Read More

ಉಡುಪಿ : ದಿನಾಂಕ 13-05-2023ರಂದು ಸಂಜೆ ಮಿತ್ರಮಂಡಳಿ ಕೋಟ ವತಿಯಿಂದ ಪ್ರೊ. ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ಶ್ರೀಲೋಲ ಸೋಮಯಾಜಿಯವರ ಧಾರವಾಡದ ರಾಘವೇಂದ್ರ ಪಾಟೀಲ ಕಥಾಸಪ್ರಶಸ್ತಿ-2022 ವಿಜೇತ ಕೃತಿ ‘ನ ಪ್ರಮದಿತವ್ಯಮ್’ ಲೋಕಾರ್ಪಣೆಗೊಂಡಿತು. ವಿಜ್ಞಾನಿ ನಾಡೋಜ ಶ್ರೀ ಕೆ.ಪಿ.ರಾಯರು ಕೃತಿ ಬಿಡುಗಡೆ ಮಾಡಿದರು. ಡಾ. ಅನಿಲ ಕುಮಾರ್ ಶೆಟ್ಟಿಯವರು ಪುಸ್ತಕ ಪರಿಚಯ ಮಾಡುತ್ತಾ “ಬಾಲ್ಯದಲ್ಲಿ ಪರಿಸರದಿಂದ ಗಾಢವಾದ ಅನುಭವಗಳಿಗೆ ಸಮಕಾಲೀನ ಸಂದರ್ಭಗಳು ಅನುಕೂಲಕರವಾಗಿ ಮೇಳೈಸಿದಾಗ ಪರಿಣಾಮಕಾರಿಯಾದ ಕತೆಗಳು ಹುಟ್ಟುತ್ತವೆ ಎಂಬುದಕ್ಕೆ ಈ ಕೃತಿ ಸಾಕ್ಷಿ” ಎಂದರು. ಇದೇ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಪುಸ್ತಕ ಪ್ರಕಾಶಕ ಮೈಸೂರಿನ ಸಂಸ್ಕೃತಿ ಸುಬ್ರಹ್ಮಣ್ಯರನ್ನು ಗೌರವಿಸಲಾಯಿತು. ಧಾರವಾಡದ ರಾಘವೇಂದ್ರ ಪಾಟೀಲ ಕಥಾ ಸ್ಪರ್ಧೆಯ ಪ್ರಥಮ ಬಹುಮಾನಿತ ಕೃತಿ ‘ನ ಪ್ರಮದಿತವ್ಯಮ್’ ಕಥಾಸಂಕಲನದಲ್ಲಿಯ ಸಂಗೀತ ಸಂಬಂಧಿ ಕತೆಯೊಂದು ತನ್ನ ಪದುಮನಾಭನ ಧ್ಯಾನದಲ್ಲಿಯ ಒಂದು ಪ್ರಸಂಗಕ್ಕೆ ಸಂವಾದಿಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ನಾಡೋಜ ಕೆ.ಪಿ.ರಾಯರು ಸ್ಮರಿಸಿಕೊಂಡರು. ಸಾಹಿತಿ ಚಿತ್ರಪಾಡಿ ಪ್ರೊ. ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ…

Read More

ಪುತ್ತೂರು; ಪುತ್ತೂರು ತಾಲೂಕು ಸವಣೂರು‌ ಸಮೀಪದ ಇಡ್ಯಾಡಿ ಶ್ರೀಮತಿ ಮತ್ತು ಶ್ರೀ ಯೋಗೀಶ್ ರವರು ನೂತನವಾಗಿ ನಿರ್ಮಿಸಿದ‌ ‘ಮಧು ಶ್ರೀ’ ನಿಲಯದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಇದರ ವತಿಯಿಂದ ದಿನಾಂಕ‌ 29.05.2023ರಂದು ‘ಶರಘಾತ’ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಆನಂದ ಸವಣೂರು, ತಾರಾನಾಥ ಸವಣೂರು, ಬಾಲಕೃಷ್ಣ ಬೊಮ್ಮಾರು, ಅಚ್ಯುತ ಪಾಂಗಣ್ಣಾಯ ಕೋಡಿಬೈಲು‌ ಸಹಕರಿಸಿದರು. ಮುಮ್ಮೇಳದಲ್ಲಿ‌ ಶ್ರೀ ರಾಮ (ಕಿಶೋರಿ ದುಗ್ಗಪ್ಪ ನಡುಗಲ್ಲು‌), ವಾಲಿ (ಶುಭಾ ಜೆ.ಸಿ. ಅಡಿಗ) ಸುಗ್ರೀವ (ಹರಿಣಾಕ್ಷೀ ಜೆ. ಶೆಟ್ಟಿ) ಸಹಕರಿಸಿದರು. ಆನಂದ ಸವಣೂರು ಸ್ವಾಗತಿಸಿ, ಯೋಗೀಶ್ ಇಡ್ಯಾಡಿ ವಂದಿಸಿದರು.

Read More