Author: roovari

ಮಂಗಳೂರು : ಮಂಗಳೂರಿನ ಹಿಂದಿ ಪ್ರಚಾರ ಸಮಿತಿಯ ಆವರಣದಲ್ಲಿರುವ ‘ನಾದನೃತ್ಯ ಕಲಾ ಶಾಲೆ’ಯಲ್ಲಿ ದಿನಾಂಕ : 30-06-2023ರಂದು ತಿಂಗಳ ಸರಣಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ಸುಲೋಚನಾ ವಿ. ಭಟ್ ಇವರು ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದು ಅನುಭವದ ಮಾತುಗಳನ್ನು ಆಡಿದರು. ನೃತ್ಯ ಶಾಲೆಯ ಗುರುಗಳಾದ ಭ್ರಮರಿ ಶಿವಪ್ರಕಾಶರ ಶಿಷ್ಯೆಯಾದ ಸುಪುತ್ರಿ ಶುಕೀ ರಾವ್ ಇವರು ನೃತ್ಯ ಕಾರ್ಯಕ್ರಮವನ್ನು ನೀಡಿದರು. ಮೊದಲಿಗೆ ತಾಳ ಮಾಲಿಕೆಯ ಅಲರಿಪು, ಗಣಪತಿಯ ಸ್ತುತಿಯಿರುವ ಶಬ್ದಂ, ಗಂಗಾವತರಣದ ಕತೆಯಿರುವ ಮಹಾದೇವ ಶಿವ ಶಂಭೋ ಎಂಬ ಕೀರ್ತನೆ ಹಾಗೂ ಭಾವಯಾಮಿ ರಘುರಾಮಂ ಎಂಬ ಕೀರ್ತನೆಗೆ ನರ್ತಿಸಿದರು. ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ಎಂ.ಎಚ್. ಇವರು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾತೃಭಾಷೆಯ ಬಗ್ಗೆ ಹೊಂದಬೇಕಾದ ಪ್ರೀತಿಯ ಬಗ್ಗೆ ಅರಿವು ಮೂಡಿಸಿ, ನೃತ್ಯ ಪ್ರದರ್ಶಿಸಿದ ಶುಕೀ ರಾವ್ ಇವರನ್ನು ಅಭಿನಂದಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.…

Read More

ಮಂಗಳೂರು : ವಿಜಯ ಕರ್ನಾಟಕ ಮತ್ತು ಸಂಗೀತ ಭಾರತಿ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಆಷಾಢ ಏಕಾದಶಿಯ ‘ಬೋಲಾದ ವಿಠಲ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ : 01-07-2023ರಂದು ನಗರದ ಪುರಭವನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಪಂಡಿತ್‌ ಆನಂದ್ ಭಾಟೆ ಮತ್ತು ವಿದುಷಿ ಭಾಗ್ಯಶ್ರೀ ದೇಶಪಾಂಡೆ ಅವರ ಅಭಂಗ, ಭಜನಾ ಸಂಕೀರ್ತನೆಗಳು, ದಾಸರ ರಚನೆಗಳು, ಕಲಾವಿದರ ಏರಿಳಿತದ ಆಲಾಪನೆಯೊಂದಿಗೆ ಪ್ರೇಕ್ಷಕರನ್ನು ಭಕ್ತಿಗಾನದಲ್ಲಿ ತೇಲಾಡುವಂತೆ ಮಾಡಿ ಮಂತ್ರಮುಗ್ಧಗೊಳಿಸಿತು. ಭಾಗ್ಯಶ್ರೀ ದೇಶಪಾಂಡೆ ತಮ್ಮ ಅಮೋಘ ಕಂಠಸಿರಿಯಿಂದ ಜನರ ಗಮನ ಸೆಳೆದರು. ತಮ್ಮ ಸ್ವಂತ ರಚನೆಯಾಗಿರುವ ಜ್ಞಾನಾಚೆ ಸಾಗರ್, ಸಖಾ ಮಾಜ್ಹಾ ಜ್ಞಾನೇಶ್ವರ್ … ಗೀತೆಯನ್ನು ಏರಿಳಿತದ ಆಲಾಪನೆಯೊಂದಿಗೆ ಹಾಡಿದಾಗ ಭಜನೆಗೆ ಪ್ರೇಕ್ಷಕರೂ ತಲೆತೂಗಿ ಪ್ರೋತ್ಸಾಹಕರ ಕರತಾಡನದೊಂದಿಗೆ ಮೆಚ್ಚಗೆ ಸೂಚಿಸಿದರು. ಕೊನೆಗೆ ಸಂತ ತುಕಾರಾಮರ ಬೋಲಾವ ವಿಠಲ, ಪಹಾವ ವಿಠಲವನ್ನು ಭಕ್ತಿ ಭಾವ ತುಂಬಿ ಹಾಡಿದರು. ಪಂಡಿತ್ ಆನಂದ್ ಭಾಟೆಯವರ ಸಂತ ತುಕಾರಾಮರ…

Read More

ಕಾಸರಗೋಡು: ಕಾಸರಗೋಡಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಮೇಘ ರಂಜನಾ ಚಂದ್ರಗಿರಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸುವ ‘ಭಜಿಸು ಕನ್ನಡ’ ಕಾರ್ಯಕ್ರಮವು ದಿನಾಂಕ 16-7-2023ರ ಭಾನುವಾರ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮಯೂರ ಮಂಟಪದಲ್ಲಿ ನಡೆಯಲಿದೆ. ಕೂಡ್ಲುವಿನ ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ರಂಗಭೂಮಿ, ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ಶ್ರೀ ಕಾಸರಗೋಡು ಚಿನ್ನಾ ಉದ್ಘಾಟಿಸಲಿದ್ದಾರೆ. ಕುಮಾರಿ ಸಾಕ್ಷಿ ಕೂಡ್ಲು ಪ್ರಾರ್ಥನೆ ಗೈಯಲಿದ್ದು, ‘ಮೇಘ ರಂಜನಾ’ದ ಆಡಳಿತ ನಿರ್ದೇಶಕರಾದ ಶ್ರೀ ಪುರುಷೋತ್ತಮ ಕೊಪ್ಪಲ್ ಸ್ವಾಗತಿಸಲಿರುವರು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ವೇಣುಗೋಪಾಲ್ ಹಾಗೂ ಕವಯತ್ರಿಯಾದ ಶ್ರೀಮತಿ ದಿವ್ಯಾಗಟ್ಟಿ ಪರಕ್ಕಿಲ ಶುಭಾಶಂಸನೆ ಗೈಯಲಿರುವರು.ಇದೇ ಸಂದರ್ಭದಲ್ಲಿ ಕೀರ್ತನಕಾರರಾದ ಶ್ರೀ ನರಸಿ೦ಹ ಹೊಸ ಮನೆ ಮತ್ತು ರಂಗನಟ ಹಾಗೂ ನಿರ್ದೇಶಕರಾದ ಶ್ರೀ ಉದಯಕುಮಾರ್ ಮನ್ನಿಪ್ಪಾಡಿಯವರನ್ನು ಸನ್ಮಾನಿಸಲಾಗುವುದು. ‘ಮೇಘ ರಂಜನಾ’ದ ನಿರ್ದೇಶಕಿ ಕುಮಾರಿ ಮೇಘನಾ ಕೊಪ್ಪಲ್…

Read More

ಚೆನ್ನೈ: ನಟನ ತನ್ನ ಚಟುವಟಿಕೆಯ ಭಾಗವಾಗಿ ಇದೇ 13-07-2023ರಂದು ಸಂಜೆ ಚೆನ್ನೈಯ ಮೈಲಾಪೊರೆಯ ‘ಭವನ್ಸ್ ಮೈನ್ ಆಡಿಟೋರಿಯಂ’ನಲ್ಲಿ ನಡೆಯಲಿರುವ ಚೆನ್ನೈಯ ರಾಷ್ಟ್ರೀಯ ಬಹುಭಾಷಾನಾಟಕೋತ್ಸವದಲ್ಲಿ ನಟನ ಪಯಣ ರೆಪರ್ಟರಿ ತಂಡದ ‘ಕಣಿವೆಯ ಹಾಡು’ ನಾಟಕವು ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ಅತೊಲ್ ಫ್ಯೂಗಾರ್ಡ್ ಅವರದ್ದು. ಡಾ. ಮೀರಾ ಮೂರ್ತಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅವರು ನಾಟಕಕ್ಕೆ ಸಂಗೀತ ಒದಗಿಸಿದ್ದಾರೆ. ನಟನದ ಶ್ರೀ ಮೇಘ ಸಮೀರ ಮತ್ತು ದಿಶಾ ರಮೇಶ್ ಅವರು ಅಭಿನಯಿಸುತ್ತಿದ್ದು, ನಾಡಿನ ಹೆಸರಾಂತ ರಂಗತಜ್ಞ ಡಾ. ಶ್ರೀಪಾದ ಭಟ್ ಅವರು ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿದ್ದಾರೆ. ಚೆನ್ನೈಯ ಭಾರತೀಯ ವಿದ್ಯಾ ಭವನ ಆಯೋಜನೆಯಲ್ಲಿ ನಡೆಯುತ್ತಿರುವ ಈ ನಾಟಕೋತ್ಸವದಲ್ಲಿ ಕನ್ನಡ ನಾಡಿನಿಂದ ಆಯ್ಕೆಯಾದ ಏಕೈಕ ನಾಟಕ ಇದಾಗಿದೆ. ನಾಟಕದ ಕುರಿತು: ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲಾ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ…

Read More

ಮಂಗಳೂರು : ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ‘ನೃತ್ಯಾಮೃತಮ್ -2023’ ಕಾರ್ಯಕ್ರಮ ನಗರದ ಪುರಭವನದಲ್ಲಿ ದಿನಾಂಕ :08-07-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ನೃತ್ಯ ಕಲೆಯ ಕಲಿಯುವಿಕೆಯಿಂದ ಮನುಷ್ಯನಲ್ಲಿ ತಾಳ್ಮೆ ಸಹನೆ ಏಕಾಗ್ರತೆ ಬೆಳೆಯಲು ಸಾಧ್ಯ. ಭರತನಾಟ್ಯ ಕಲೆಯು ಆಧ್ಯಾತ್ಮಿಕ ವಿಷಯಗಳ ಅರಿವನ್ನು ನೀಡುತ್ತದೆ. ಭರತನಾಟ್ಯ ಕಲೆಯಲ್ಲಿ ಪ್ರಸಿದ್ದಿ ಪಡೆಯಬೇಕಾದರೆ ಕಠಿಣ ಪರಿಶ್ರಮದೊಂದಿಗೆ ಧ್ಯೇಯ ಅತೀ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 28 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಲಾ ಸೇವೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭರತಾಂಜಲಿಯ ಕಲಾ ಗುರುಗಳಾದ ವಿದ್ವಾನ್ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ್ ದಂಪತಿಗಳು ಅಭಿನಂದನಾರ್ಹರು” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಪೊಳಲಿ,…

Read More

ಐರ್ಲೆಂಡ್‌: ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಐರೀಶ್ ತುಳುನಾಡ ಸಂಘವನ್ನು ದಿನಾಂಕ : 25-06-2023ರಂದು ಸ್ಥಾಪಿಸಲಾಯಿತು. ಡಬ್ಲಿನ್‌ನ ಸುತ್ತಮುತ್ತಲಿರುವ ತುಳುವರು ಜತೆಯಾಗಿ ಈ ನೂತನ ಸಂಘವನ್ನು ಸ್ಥಾಪಿಸಿದ್ದಾರೆ. ನೂತನ ಸಂಘವನ್ನು ಗುಣಶೀಲ ಶೆಟ್ಟಿ, ಸ್ಟೆಲ್ಲಾ ಕಾರ್ಡೋ, ಮೋಹನ್ ಮತ್ತು ಹೇಮಲತಾ ಉದ್ಘಾಟಿಸಿ ಚಾಲನೆ ನೀಡಿದರು. ಐರ್ಲೆಂಡ್‌ನಲ್ಲಿ ನೆಲೆಯಾಗಿರುವ ಕರಾವಳಿಯ ನಿವಾಸಿಗರಿಗೆ ಒಂದು ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿಕೊಡುವುದು, ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿನಿಮಯ ಮಾಡಿಕೊಡುವುದು ಮತ್ತು ಅಲ್ಲಿರುವ ಎಲ್ಲಾ ಭಾರತೀಯರನ್ನು ಒಗ್ಗೂಡಿಸಿ ಏಕತೆಯಿಂದ ಕಾರ್ಯನಿರ್ವಹಿಸುವುದು ಸಂಘದ ಪ್ರಮುಖ ಉದ್ದೇಶಗಳಾಗಿವೆ. ನೂತನ ಸಂಘಕ್ಕೆ ವಿಡಿಯೋ ಸಂದೇಶದ ಮೂಲಕ ಕೋಸ್ಟಲ್‌ವುಡ್‌ನ ನಟ, ನಿರ್ದೇಶಕ ವಿಜಯ್‌ ಕುಮಾರ್ ಕೊಡಿಯಾಲ್ ಬೈಲ್, ಕನ್ನಡದ ಸಂಗೀತ ನಿರ್ದೇಶಕ ಗುರುಕಿರಣ್, ದಾಯ್ಜಿ ವರ್ಲ್ಡ್ ಮೀಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಕಲಾವಿದ ವಾಲ್ಟರ್ ನಂದಳಿಕೆ, ನಟ ಪ್ರಕಾಶ್ ತುಮಿನಾಡು, ಶಿವಧ್ವಜ್, ರೂಪಶ್ರೀ ವರ್ಕಾಡಿ, ವಿಜಯ ಶೋಭರಾಜ್ ಪಾವೂರು, ಹಿನ್ನೆಲೆ ಗಾಯಕ ರಮೇಶ್ಚಂದ್ರ ಶುಭ ಕೋರಿದರು. ಕರಾವಳಿಯ ಆಹಾರ ಪದ್ಧತಿ, ತುಳುನಾಡಿನ ಸಿನಿಮಾ, ನಾಟಕ, ಯಕ್ಷಗಾನ…

Read More

ಪುತ್ತೂರು : ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಸಿದ್ಧಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ ‘ಶಂಕರ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ. ಅವರ ‘ತಿರಿ’ ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ : 05-07-2023 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡುತ್ತಾ “ಭಾಷೆಯು ಸಾಹಿತ್ಯದ ಲಿಖಿತ ಮಾಧ್ಯಮವಾಗಿದೆ. ಎಲ್ಲಾ ಭಾಷೆಯು ಒಂದೇ ರೀತಿಯ ಆಯಾಮವನ್ನು ಹೊಂದಿಲ್ಲ. ಇದನ್ನು ಜಗತ್ತಿಗೆ ಪರಿಚಯಿಸುವುದು ಮಹತ್ತರ ತೆರೆಯ ಕೆಲಸವಾಗಿದೆ. ಶ್ರಮಪಟ್ಟು ಮಾಡಿದ ಕೆಲಸಕ್ಕೆ ಜೀವನದುದ್ದಕ್ಕೂ ಯಶಸ್ಸನ್ನು ಪಡೆಯಲು ಅನೇಕ ದಾರಿಗಳು ಸಿಗುತ್ತವೆ ಮತ್ತು ಇವು ನೆನಪುಗಳೊಂದಿಗೆ ಸಮೀಕರಿಸುತ್ತವೆ. ‘ತಿರಿ’ ಎಂಬ ಪುಸ್ತಕದಲ್ಲಿ ಮೋಡಗಳೇ ನಮಗೆ ನೀರಿನ ಆಧಾರವಾಗಿದೆ. ಅದನ್ನು ನೀರು ಮತ್ತು…

Read More

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿರುವ ಮೆಲ್ಬೋರ್ನ್ ನಗರದಲ್ಲಿ ಸ್ಥಾಪಿಸಲಾದ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ದಿನಾಂಕ 08-07-20223 ರಂದು ಲೋಕಾರ್ಪಣೆ ಮಾಡಿದರು. “ಕನ್ನಡದ ಕಾರ್ಯಚಟುವಟಿಕೆಗಳನ್ನು ವಿದೇಶದಲ್ಲಿಯೂ ವಿಸ್ತರಿಸುತ್ತಿರುವ ಅನಿವಾಸಿ ಕನ್ನಡಿಗರ ಭಾಷಾ ಪ್ರೇಮ ಹಾಗೂ ನಾಡು ನುಡಿಯ ಮೇಲಿರುವ ಅಭಿಮಾನ ಈ ಕನ್ನಡ ಭವನವನ್ನು ನೋಡಿದಾಗ ಅರ್ಥವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ವಿದೇಶದಲ್ಲಿ ಇರುವ ಕನ್ನಡ ಸಂಘಗಳನ್ನು ಪರಿಷತ್ತಿನ ಅಂಗ ಸಂಸ್ಥೆಯನ್ನಾಗಿಸಿಕೊಂಡು ವಿದೇಶದಲ್ಲಿಯೂ ಕನ್ನಡ ಕಟ್ಟುವ ಕಾಯಕಲ್ಪದಲ್ಲಿ ತೊಡಗಿಕೊಳ್ಳಲಿದೆ. ರಾಜ್ಯದಲ್ಲಿ ಅನಿವಾಸಿ ಕನ್ನಡಿಗರ ಪ್ರತಿನಿಧಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಲಿದೆ. ಅನಿವಾಸಿ ಕನ್ನಡಿಗರು ಸೇರಿ ಕಟ್ಟಿಕೊಂಡಿರುವ ಕನ್ನಡದ ಸಂಘಟನೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯದ ಮೂಲಕ ನಾಡು ನುಡಿಯನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಅದರಂತೆ ಇಲ್ಲಿನ ಕನ್ನಡಿಗರು ಪ್ರಪಂಚದಾದ್ಯಂತ ನಮ್ಮ ಭಾಷೆ, ಸಂಸ್ಕೃತಿಯ ಸೊಗಡನ್ನು ಕಾಪಾಡಿಕೊಳ್ಳುವಲ್ಲಿ ಗಣನೀಯ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಕನ್ನಡಿಗರು ತಮ್ಮ ಉಪಜೀವನ ಕಟ್ಟಿಕೊಳ್ಳುವುದರ…

Read More

ಮಂಗಳೂರು: ಕಲಾಕುಲ್ ರೆಪರ್ಟರಿಯ ಹೊಸ ನಾಟಕ ತಂಡಕ್ಕೆ ಚಾಲನೆ ಮತ್ತು ಅಸ್ತಿತ್ವ ತಂಡದಿಂದ ಎಮ್ಮಾವ್ಸ್ ನಾಟಕ ಪ್ರದರ್ಶನವು ದಿನಾಂಕ 02-07-2023 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಕಲಾಕುಲ್ ರೆಪರ್ಟರಿಯ ಹೊಸ ನಾಟಕ ತಂಡಕ್ಕೆ ಚಾಲನೆ ನೀಡಿ ಮಾತನಾಡಿದ ನಾರಾವಿ ಸಂತ ಆಂಟನಿ ಕಾಲೇಜಿನ ಪ್ರಾಂಶುಪಾಲ ವಂ ಡಾ. ಆಲ್ವಿನ್ ಸೆರಾವೊ “ಕಲಾ ವಿಭಾಗಕ್ಕೆ ಮಕ್ಕಳ ಆಸಕ್ತಿ ಕುಂಠಿತವಾಗುತ್ತಿದೆ. ಬಹಳ ಕಾಲೇಜುಗಳಲ್ಲಿ ಕಲಾ ವಿಭಾಗ ಮುಚ್ಚಲ್ಪಟ್ಟಿವೆ. ಎಲ್ಲರೂ ಇಂಜಿನಿಯರಿಂಗ್, ಮೆಡಿಸಿನ್, ವಾಣಿಜ್ಯ, ಆಡಳಿತ ವಿಭಾಗಗಳಿಗೆ ಸೇರುತ್ತಿದ್ದಾರೆ. ಸಮಾಜಶಾಸ್ತ್ರ, ಮನೋಶಾಸ್ತ್ರ, ತತ್ವಶಾಸ್ತ್ರ ಇವೆಲ್ಲಾ ಜೀವಿಸಲು ಅಗತ್ಯವಿರುವ ವಿಷಯಗಳು. ಇವೆಲ್ಲಾ ಕಲಿಯದಿದ್ದರೆ ನಮ್ಮ ಸಮಾಜ ಎಲ್ಲಿ ತಲುಪಬಹುದು? ಇಂತಹ ಸಂದರ್ಭದಲ್ಲಿ ಮಾಂಡ್ ಸೊಭಾಣ್ ಕಲಾಕುಲ್ ರೆಪರ್ಟರಿಯನ್ನು ಪುನರಾರಂಭಿಸಿದ್ದು ಸಂತಸದ ಸಂಗತಿ. ಈ ಎಂಟು ಜನ ವಿದ್ಯಾರ್ಥಿಗಳು ಧೈರ್ಯದಿಂದ ನಾಟಕ ಕಲಿಯಲು ಮುಂದೆ ಬಂದಿದ್ದಾರೆ. ನಿಮಗೆ ಮೂರು ಕಿವಿ ಮಾತು ಹೇಳುತ್ತೇನೆ. ಪ್ರಥಮವಾಗಿ ಜನರನ್ನು ಅವಲೋಕಿಸಿ. ಮುಖ ಚಹರೆಗಳಲ್ಲಿ, ಅವರ ಭಾವನೆಗಳಲ್ಲಿ ಕತೆಗಳಿವೆ, ನಾಟಕಗಳಿವೆ. ಎರಡನೆಯದು ಓದು.…

Read More

ಬದಿಯಡ್ಕ: ಅಡೂರು ಗ್ರಾಮದ ಕೊರತಿಮೂಲೆಯ ಬಾಲಕೃಷ್ಣ ತಂತ್ರಿ ಅವರ ಸ್ಮರಣಾರ್ಥ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆ- 2023ರ ಫಲಿತಾಂಶ ಪ್ರಕಟಗೊಂಡಿದೆ. ಪ್ರಥಮ ಬಹುಮಾನವನ್ನು ಮಂಗಳೂರಿನ ಬಿ.ಸತ್ಯವತಿ ಭಟ್ ಕೊಳಚಪ್ಪು ಅವರು ಬರೆದ ‘ಗೀತಾಮೃತ ಸಾರ’ ಕವನ ಪಡೆದುಕೊಂಡಿದೆ. ದ್ವಿತೀಯ ಬಹುಮಾನವನ್ನು ಸ್ನೇಹಲತಾ ದಿವಾಕರ್ ಕುಂಬ್ಳೆ ಅವರ ‘ಈ ಕ್ಷಣವೂ ಸರಿದುಹೋಯಿತು’ ಕವನ ಹಾಗೂ ತೃತೀಯ ಬಹುಮಾನವನ್ನು ಮಂಗಳೂರಿನ ರಾಜೇಂದ್ರ ಕೇದಿಗೆ ಅವರು ಬರೆದ ‘ಅಮ್ಮ… ಇನ್ನೂ ಧ್ಯಾನಸ್ಥೆ’ ಕವನವು ಪಡೆದುಕೊಂಡಿದೆ.

Read More