Author: roovari

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅದ್ಯಯನ ಪೀಠ, ಕನಕದಾಸ‌ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕನಕ ಜಯಂತಿಯ ಪ್ರಯುಕ್ತ ‘ಕನಕ ತತ್ವಚಿಂತನ’ ಪ್ರಚಾರೋಪನ್ಯಾಸ ಮಾಲಿಕೆ ಮತ್ತು ‘ರಾಮಧಾನ್ಯ ಚರಿತೆ : ಅರ್ಥಾನುಸಂಧಾನ’ ಗಮಕ ವ್ಯಾಖ್ಯಾನ ಬಾನುಲಿ ಸರಣಿ ಕಾರ್ಯಕ್ರಮವು ದಿನಾಂಕ 28-11-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ “ಕನಕದಾಸರ ಸಾಹಿತ್ಯ ರಚನೆಗಳು ಅತ್ಯದ್ಭುತವಾದುದು. ಅವರು ಸಾಹಿತಿ, ಕವಿ ಮಾತ್ರವಲ್ಲ ಭಕ್ತಿ ಚಳುವಳಿಯ ಮೂಲಕ ಸಮಾಜದ ಅಸಮಾನತೆಯನ್ನು ದೂರಗೊಳಿಸಿ ಸಮಾನತೆಯ ಸಮಾಜ ನಿರ್ಮಾಣದ ಕನಸು ಕಂಡವರು. ಅಧ್ಯಾತ್ಮದ ಮೂಲಕ ಸಮಾನತೆಯ ಆಶಯವನ್ನು ಬಿತ್ತಿದವರು. ಅವರ ಸಾಹಿತ್ಯ ರಚನೆಗಳು, ಸಂದೇಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ, ಭಿನ್ನತೆಯನ್ನು ದೂರಗೊಳಿಸಿ ಸಮಾನತೆಯ ಸಮಾಜ ಕಟ್ಟುವುದು ಅವರ ಕನಸಾಗಿತ್ತು. ಅವರ‌ ಸಂದೇಶ ಮತ್ತು ಜೀವನವನ್ನು ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ತಲುಪಿಸುವ ಕಾರ್ಯ ಪೀಠದಿಂದ‌ ಆಗುತ್ತಿರುವುದು ಶ್ಲಾಘನೀಯ” ಎಂದರು. ಉಪ್ಪಿನಂಗಡಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಅವರು…

Read More

ಕಾಸರಗೋಡು : ತೆಂಕುತಿಟ್ಟಿನ ಪ್ರಸಿದ್ಧ ಹಿರಿಯ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನದ ಹಿಮ್ಮೇಳದಲ್ಲಿ ಅವರ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಿನಾಂಕ 23-12-2023ರಂದು ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ಸಂಸ್ಮರಣೆಯೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಕಲೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪದ್ಯಾಣ ಶಂಕರನಾರಾಯಣ ಭಟ್ ಇವರು ರಾಮಕ್ಷಷ್ಣ ಭಟ್ ಮತ್ತು ಪಾರ್ವತಿ ಅಮ್ಮ ದಂಪತಿಗಳ ಸುಪುತ್ರ. ಯಕ್ಷಗಾನ ಗುರುಗಳಾದ ಬಾಲಪಾಠ ಅಣ್ಣ ತಿರುಮಲೇಶ್ವರ ಭಟ್ಟ ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಇವರಲ್ಲಿ ಯಕ್ಷಗಾನದ ಹಿಮ್ಮೇಳ ಅಭ್ಯಸಿಸಿದರು. 1973ರಿಂದ ಕುಂಡಾವು ಮೇಳ, ಕರ್ನಾಟಕ ಮೇಳ, ಸುರತ್ಕಲ್ಲು ಮೇಳ, ಸುಂಕದಕಟ್ಟೆ ಮೇಳ, ಕಟೀಲು ಮೇಳ, ಕದ್ರಿ ಮೇಳ, ಕುಂಟಾರು ಮೇಳ, ಎಡನೀರು ಮೇಳ, ಹೊಸನಗರ ಮೇಳಗಳಲ್ಲಿ ಸುಮಾರು 50 ವರ್ಷದ ಅನುಭವ ಹೊಂದಿದ್ದಾರೆ. ಶ್ರೀಯುತರಿಗೆ ಕರ್ನಾಟಕ ಎಕಾಡಮಿ ಪ್ರಶಸ್ತಿ,…

Read More

ಮಂಗಳೂರು : ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ (ರಿ.) ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬದ ಪ್ರಯುಕ್ತ ದಿನಾಂಕ 24-11-2023ರಂದು ಏರ್ಪಡಿಸಿದ್ದ ವಿದ್ವಾನ್ ಕೆ. ಕಾಂತ ರೈ ಮೂಡಬಿದ್ರೆ ಅವರ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣ ಜ್ಯೋತಿ ಬೆಳಗಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ “ಜೀವನದ ಜಂಜಾಟದ ನಡುವೆ ನಮಗೆ ನೆಮ್ಮದಿ ನೀಡುವ ಶಕ್ತಿ ಇರುವುದು ಕಲೆಗೆ ಮಾತ್ರ. ಯಕ್ಷಗಾನ, ನಾಟಕ, ನೃತ್ಯ – ಸಂಗೀತಗಳ ಮೂಲಕ ಮನಸ್ಸು – ಬುದ್ಧಿಗಳು ಜಾಗೃತಗೊಳ್ಳುತ್ತವೆ. ಅದಕ್ಕೆ ಕಾರಣರಾದ ಕಲಾವಿದರನ್ನು ನಾವು ಮರೆಯಬಾರದು. ಕಲೆಗಾಗಿ ಬದುಕಿದವರು ಸದಾ ಸ್ಮರಣೀಯರು. ಯಕ್ಷಾಂಗಣವು…

Read More

ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ವ್ಯಾಸರಾಯ ಬಲ್ಲಾಳ ಶತಮಾನೋತ್ಸವ ಸಂಭ್ರಮ ಮತ್ತು ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 01-12-2023 ಶುಕ್ರವಾರದಂದು ಮುಂಬಯಿಯ ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್ಸಿನಲ್ಲಿರುವ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ. ನಾಯಕ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೊದಲ ಉಪನ್ಯಾಸ ಮೈಸೂರಿನ ಹಿರಿಯ ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ಇವರಿಂದ ‘ಕತೆಗಾರರಾಗಿ ವ್ಯಾಸರಾಯ ಬಲ್ಲಾಳ’ ಮತ್ತು ಖ್ಯಾತ ವಿಮರ್ಶಕರಾದ ಡಾ.ಬಿ.ಜನಾರ್ದನ ಭಟ್‌ ಎರಡನೇ ಉಪನ್ಯಾಸ ‘ಕಾದಂಬರಿಕಾರರಾಗಿ ಬಲ್ಲಾಳರು’ ಎಂಬ ವಿಷಯದಲ್ಲಿ ನಡೆಯಲಿದೆ. ಬಳಿಕ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ‘ನಾನು ಕಂಡಂತೆ ಬಲ್ಲಾಳರು’ ಎಂಬ ವಿಷಯದಲ್ಲಿ ವ್ಯಾಸರಾಯ ಬಲ್ಲಾಳರ ಮಕ್ಕಳಾದ ಪೂರ್ಣಿಮಾ ಹೆಬ್ಬಾರ್ ಮತ್ತು ಅಂಜಲಿ ಅರುಣ್, ಇವರ ಜೊತೆಗೆ ಮುಂಬಯಿಯ ಖ್ಯಾತ ಕಾದಂಬರಿಕಾರರಾದ  ಮಿತ್ರಾ ವೆಂಕಟ್ರಾಜ್ ಭಾಗವಹಿಸಲಿದ್ದಾರೆ. ಮೂರನೇ ಉಪನ್ಯಾಸ ಮುಂಬಯಿಯ ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಭರತ್ ಕುಮಾರ್ ಪೊಲಿಪು ಇವರು ‘ಬಲ್ಲಾಳರ ಕನ್ನಡ…

Read More

ಬೆಂಗಳೂರು : ಅನ್ ಬಾಕ್ಸಿಂಗ್ ಬೆಂಗಳೂರು ಮತ್ತು ಜಂಗಮ ಕಲೆಕ್ಟಿವ್ ಜೊತೆಯಾಗಿ ಅರ್ಪಿಸುವ ‘ನಾಟಕಗಳ ಹಬ್ಬ’ ದಿನಾಂಕ 04-12-2023ರಿಂದ 11-11-2023 ರ ವರೆಗೆ ಬೆಂಗಳೂರಿನ ವಿವಿಧೆಡೆ ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 04-12-2023ರಂದು ಸಂಜೆ 7.30ಕ್ಕೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಮಂಗಳೂರಿನ ‘ಅಸ್ತಿತ್ವ’ ಪ್ರಸ್ತುತ ಪಡಿಸುವ ಅರುಣ್ ಲಾಲ್ ಕೇರಳ ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದ ನಾಟಕ ‘ಜುಗಾರಿ’ ಪ್ರದರ್ಶನಗೊಳ್ಳಲಿದೆ. ದಿನಾಂಕ 06-12-2023ರಂದು ಸಂಜೆ 7.30ಕ್ಕೆ ಜೆ.ಸಿ.ರೋಡಿನ ನಯನ ಸಭಾಂಗಣದಲ್ಲಿ ಧಾರವಾಡದ ‘ಆಟ-ಮಾಟ’ ಪ್ರಸ್ತುತ ಪಡಿಸುವ ಮಹಾದೇವ ಹಡಪದ ಪರಿಕಲ್ಪನೆ ಮತ್ತು ನಿರ್ದೇಶನದ ‘ನಾ ರಾಜಗುರು’ ನಾಟಕದಲ್ಲಿ ವಿಶ್ವರಾಜ್ ನಿಜಗುಣ ರಾಜಗುರು ಅಭಿನಯಿಸಲಿದ್ದಾರೆ. ದಿನಾಂಕ 07-12-2023ರಂದು ಸಂಜೆ 7.30ಕ್ಕೆ ಹನುಮಂತ ನಗರದ ಕೆ.ಹೆಚ್ ಕಲಾ ಸೌಧದಲ್ಲಿ ಮೈಸೂರಿನ ‘ನಟನ’ ಪ್ರಸ್ತುತ ಪಡಿಸುವ ‘ಕಣಿವೆಯ ಹಾಡು’ ಪ್ರದರ್ಶನಗೊಳ್ಳಲಿದ್ದು, ಡಾ. ಶ್ರೀಪಾದ್ ಭಟ್ ವಿನ್ಯಾಸ ಮತ್ತು ನಿರ್ದೇಶನದ ಈ ನಾಟಕಕ್ಕೆ ಸಂಗೀತ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರದ್ದು. ದಿನಾಂಕ 10-12-2023ರಂದು ಬೆಳಿಗ್ಗೆ…

Read More

ಮಂಗಳೂರು : ಸಂಸ್ಕಾರ ಭಾರತೀ ಮಂಗಳೂರು ಮಹಾನಗರ ಸಮಿತಿ ಆಶ್ರಯದಲ್ಲಿ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮವು ದಿನಾಂಕ 25-11-2023 ಶನಿವಾರದಂದು ಸಂಜೆ ಗಂಟೆ 4ಕ್ಕೆ ಶರವು ದೇವಸ್ಥಾನದ ಬಳಿಯಿರುವ ಬಾಳಂಭಟ್ ಹಾಲ್ ಇಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಳಂಭಟ್ ಮನೆತನದ ವೇದ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ತನ್ನ ಮುಖ್ಯ ಭಾಷಣದಲ್ಲಿ ಸಂಸ್ಕಾರಯುತವಾದ ಕಾರ್ಯಕ್ರಮ ಸಂಸ್ಕಾರ ಭಾರತೀಯದ್ದು. ಸಂಸ್ಕಾರ ಭಾರತೀ ಸಂಸ್ಕೃತಿಯಿಂದ ಕೂಡಿದೆ. ಸಂಸ್ಕಾರ ಭಾರತೀ ಅರ್ಥಪೂರ್ಣವಾದ ಹೆಸರು ಹೀಗೆ ಸಂಸ್ಕಾರ ಭಾರತೀಯ ಹೆಸರಿನ ವಿಶ್ಲೇಷಣೆ ಮಾಡಿದರು. ಭಾರತೀಯರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ಉದ್ದೀಪನ ಮಾಡುವ ಸತ್ಕಾರ್ಯ ಸಂಸ್ಕಾರ ಭಾರತೀ ಮಾಡುತ್ತಿದೆ. ಭಾರತ ಮಾತೆಯ ಬಗ್ಗೆ, ಸನಾತನ ಧರ್ಮದ ಬಗ್ಗೆ, ನಮ್ಮ ಆಚಾರ ನೀತಿಯ ಬಗ್ಗೆ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಕಾರ ಭಾರತೀ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಸಂಸ್ಕಾರ ಭಾರತೀ…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ವತಿಯಿಂದ ಡಾ.ಎಚ್.ಆರ್. ವಿಶ್ವಾಸ ಅವರ ಸಂಗಮ ಕಾದಂಬರಿಯ ಬಿಡುಗಡೆ ಮತ್ತು ಅಭಾಸಾಪ ಮಂಗಳೂರು ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಘೋಷಣೆಯು ದಿನಾಂಕ 27-11-2023ರಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರ ಸಭಾಂಗಣದಲ್ಲಿ ನಡೆಯಿತು. ಕಾದಂಬರಿ ಬಿಡುಗಡೆಗೊಳಿಸಿದ ಕರ್ಣಾಟಕ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಎಂ.ಎಸ್‌. ಮಹಾಬಲೇಶ್ವರ ಮಾತನಾಡಿ, ಸಾಹಿತ್ಯ ಓದುಗರಿಗೆ ಕುತೂಹಲದ ಜೊತೆಗೆ ಆನಂದ ನೀಡಬೇಕು. ಸಾಮಾಜಿಕ ಸಮಸ್ಯೆಗಳನ್ನು ತೆರೆದಿಟ್ಟು ಅದಕ್ಕೆ ಪರಿಹಾರ ಸೂಚಿಸಬೇಕು. ಅಂತಹ ಧನಾತ್ಮಕ ಅಂಶಗಳು ಸಂಗಮ ಕಾದಂಬರಿಯಲ್ಲಿ ಅಡಕವಾಗಿದೆ ಎಂದರು. ಶಕ್ತಿನಗರದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಸುಮನಾ ನಂದೋಡಿ ಕೃತಿ ಪರಿಚಯ ನೀಡಿದರು. ಅಭಾಸಾಪ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಕಾರ ಡಾ. ಎಚ್‌.ಆರ್. ವಿಶ್ವಾಸ ಉಪಸ್ಥಿತರಿದ್ದರು. ಶೈಲೇಶ್ ಕುಲಾಲ್ ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದರು. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಗೀತಾ ಲಕ್ಷ್ಮೀಶ ವಂದಿಸಿ, ಅಭಾಸಾಪ ಜಿಲ್ಲಾ…

Read More

ಮಂಗಳೂರು : ಮರಕಡದ ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವವು ಮರಕಡ ಮೈದಾನದಲ್ಲಿ ದಿನಾಂಕ 18-11-2023ರಂದು ಮಂಗಳೂರಿನ ಮಂಗಳಾದೇವಿಯ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮೇಲ್ವಿಚಾರಕರಾದ ಸ್ವಾಮಿ ರಘು ರಾಮಾನಂದ ಇವರ ಆಶೀರ್ವಚನದೊಂದಿಗೆ ನೆರವೇರಿತು. ಇದೇ ಸಂದರ್ಭದಲ್ಲಿ ಮರಕಡ ಕುಮೇರುಮನೆ ಶ್ರೀಮತಿ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮರಣಾರ್ಥ ರೂ.10,000/- ಮೊತ್ತದ ‘ಶುಭವರ್ಣ ಪ್ರಶಸ್ತಿ-2022’ನ್ನು ಹಿರಿಯ ನಿವೃತ್ತ ಕಲಾವಿದ ಕಾವೂರು ವಿಠಲ ಶೆಟ್ಟಿಗಾರ್ ಅವರಿಗೆ, ಹಾಗೂ ರೂ.10,000/- ಮೊತ್ತ ‘ಶುಭವರ್ಣ ಸಂಮಾನ -2023’ನ್ನು ಶ್ರೀ ಅಶೋಕ ಆಚಾರ್ಯ ವೇಣೂರು ಇವರಿಗೆ ಮತ್ತು ಮರಕಡ ಕಾರ್ತಿಕ್ ಕಮಾರ್ ಸ್ಮರಣಾರ್ಥ 5,000/- ಮೊತ್ತದ ‘ಶುಭವರ್ಣ ಪ್ರತಿಭಾ ಪುರಸ್ಕಾರ -2023’ನ್ನು ಶ್ರೀ ದೇವಿಪ್ರಸಾದ್ ಪೆರಾಜೆ ಅವರಿಗೆ ಕೊಡಮಾಡಲಾಯಿತು. ಶ್ರೀ ಕಟೀಲು ಆರು ಮೇಳಗಳ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟಿ, ಹಿರಿಯ ಯಕ್ಷ ಗುರುಗಳಾದ ಶ್ರೀ ಶಿವರಾಮ ಪಣಂಬೂರು, ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರು ಮತ್ತು ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷರಾದ ಶ್ರೀ ಯಜ್ಞೇಶ್ವರ ಬರ್ಕೆ, ಕರ್ನಿರೆ ಸುವರ್ಣ…

Read More

ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಮಿತಿಯು ಆಯೋಜಿಸಿದ ರಾಜ್ಯ ಮಟ್ಟದ ವಿದ್ಯಾರ್ಥಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಮಾರಿ ನಂದಿನಿ ಯು. (ಶಿವಮೊಗ್ಗ) ಪ್ರಥಮ, ಚಿನ್ಮಯ್ ರಮೇಶ್ ಹೆಗಡೆ (ಬೆಂಗಳೂರು) ದ್ವಿತೀಯ, ಯಜ್ಞುಶಾ ಕನ್ನೆಪ್ಪಾಡಿ (ಕಾಸರಗೋಡು) ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರ ಕವಿತೆಗಳು ನೈಸರ್ಗಿಕ ವಿದ್ಯಮಾನ ಮತ್ತು ಜನ ಸಾಮಾನ್ಯರ ಬದುಕಿಗೆ ಸ್ಪಂದಿಸುತ್ತದೆ. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ ರಚನೆಗಳು ವಾಸ್ತವ ಸತ್ಯಗಳನ್ನು ಒಳಗೊಂಡಿವೆ ಎಂದು ತೀರ್ಪುಗಾರರಾಗಿ ಸಹಕರಿಸಿದ ಕುಮಾರಿ ಭವ್ಯ ಭಟ್ ಮಡಿಕೇರಿ ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯ ಗಂಗಾ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಬಹುಮಾನ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು 82 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.

Read More

ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ನಾಟ್ಕದೂರು ಇಲ್ಲಿರುವ ನಮ ತುಳುವೆರ್ ಕಲಾ ಸಂಘಟನೆ (ರಿ.) ವತಿಯಿಂದ ಸುವರ್ಣ ಕರ್ನಾಟಕ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 01-11-2023ರಿಂದ 01-11-2024ರವರೆಗೆ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ದಿನಾಂಕ 01-12-2023ನೇ ಶುಕ್ರವಾರದಂದು ‘ಸುವರ್ಣ ಕರ್ನಾಟಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಮುದ್ರಾಡಿ ನಾಟ್ಕದೂರು ಬಿ.ವಿ. ಕಾರಂತ ಬಯಲು ರಂಗ ಸ್ಥಳದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಇವರು ವಹಿಸಲಿದ್ದು, ಬೆಳಗಾವಿಯ ರಂಗ ನಿರ್ದೇಶಕರಾದ ಶ್ರೀ ಶ್ರೀಪತಿ ಮಂಜನಬೈಲು ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ವಾಸ್ತು ತಜ್ಞರಾದ ಶ್ರೀ ಪ್ರಮಲ್ ಕುಮಾರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆ, ಶಂಕರಪುರ, ಏಕ ಜಾತಿ ಧರ್ಮ ಪೀಠ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ, ಮಂದಾ ರ್ತಿ ದೇವಸ್ಥಾನದ…

Read More