Subscribe to Updates
Get the latest creative news from FooBar about art, design and business.
Author: roovari
19 ಏಪ್ರಿಲ್ 2023, ಮೈಸೂರು: ಅಭಿಯಂತರರು ಪ್ರಸ್ತುತ ಪಡಿಸುವ “ಮರಣ ಮೃದಂಗ” ರಂಗ ಪ್ರಯೋಗವು ದಿನಾಂಕ:23-04-2023ರ ಬಾನುವಾರ ಸಂಜೆ 6-30ಘಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ನಾಡಿನ ಪ್ರಖ್ಯಾತ ನಾಟಕಕಾರ ಹಾಗೂ ರಂಗನಿರ್ದೇಶಕರಾದ ಶ್ರೀ ರಾಜೇಂದ್ರ ಕಾರಂತರವರು ರಚಿಸಿ ನಿರ್ದೇಶಿಸಿದ್ದು, ಈ ರಂಗ ಪ್ರಯೋಗದ ನಿರ್ವಹಣೆ ಹೆಚ್.ಎಸ್. ಸುರೇಶ್ ಬಾಬು ಅವರದ್ದು. ಮರಣ ಮೃದಂಗ: ನಾಡಿನ ಪ್ರಖ್ಯಾತ ನಾಟಕಕಾರ ಹಾಗೂ ರಂಗನಿರ್ದೇಶಕರಾದ ಶ್ರೀ ರಾಜೇಂದ್ರ ಕಾರಂತರವರು ರಚಿಸಿರುವ ‘ಮರಣ ಮೃದಂಗ’ ನಾಟಕವು ಅಧಿಕಾರದಲ್ಲಿರುವ ವ್ಯಕ್ತಿಯು ತಾನು ಎಲ್ಲಕ್ಕು ಅತೀತ ಎಂದು ಭಾವಿಸಿ ಬಿಡುತ್ತಾನೆ. ಸಾವು ಮನೆ ಬಾಗಿಲನ್ನು ಬಡಿದಾಗಲೇ ಮನುಷ್ಯನಿಗೆ ತಾನೆಷ್ಟು ಅಸಹಾಯಕ ಎಂಬ ಸತ್ಯ ಅರಿವಾಗುವುದು. ಅಂತಹ ಒಬ್ಬ ದುರಹಂಕಾರಿ ಹಾಗೂ ರಾಜಕೀಯ ನಾಯಕನ ಸಾವಿನ ಹೊಸ್ತಿಲಿನ ಸಂವೇದನೆಗಳೇ ಮರಣ ಮೃದಂಗ. ನಿರ್ದೇಶಕರ ಬಗ್ಗೆ: ಶ್ರೀ ರಾಜೇಂದ್ರ ಕಾರಂತ ಕನ್ನಡ ನಾಡಿನ ಪ್ರತಿಭಾವಂತ ರಂಗನಿರ್ದೇಶಕ ಹಾಗೂ ನಾಟಕಕಾರರು. 50ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿರುವ ಇವರು 100ಕ್ಕೂ…
19 ಏಪ್ರಿಲ್ 2023, ಬೆಂಗಳೂರು: ಸ್ಟೇಜ್ ಬೆಂಗಳೂರು ಪ್ರಸ್ತುತ ಪಡಿಸಿದ ಮಕ್ಕಳ ಥಿಯೇಟರ್ ಹಬ್ಬ ಏಪ್ರಿಲ್ -2023 ಇದರ ಅಂಗವಾಗಿ ನಾಟಕ ‘ಬದುಕಿನ ಬಣ್ಣ’ ದಿನಾಂಕ 12-04-2023ನೇ ಬುಧವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ನಯನ ಸಭಾಂಗಣದಲ್ಲಿ ನಡೆಯಿತು. ಸಂಜಯ್ ನಟನ ಮತ್ತು ಶೇಖರ್ ನಟನ ಇವರು ವಿನ್ಯಾಸ ಮತ್ತು ನಿರ್ದೇಶಿಸಿದ್ದು, ಸುಪ್ರೀತ್ ರವರ ಸಂಗೀತ ಈ ನಾಟಕಕಿದೆ. “ಬದುಕಿನ ಬಣ್ಣ” ಆಧುನಿಕ ಹಾಗೂ ಖಾಸಗೀಕರಣಗಳು ಮಾನವನಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಮ್ಮ ಸಂಸ್ಕೃತಿ, ಕಾಡು, ಪ್ರಾಣಿ, ಪಕ್ಷಿಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು. ಮಹಾನಗರಗಳಲ್ಲಂತೂ ಮರ ಗಿಡಗಳು, ಪಕ್ಷಿಗಳು ಕಾಣ ಸಿಗುವುದೇ ವಿರಳ. ಎಲ್ಲಾ ಮರ ಗಿಡಗಳ ಜಾಗದಲ್ಲಿ ಬಹು ಮಹಡಿಯ ಕಟ್ಟಡಗಳು, ಡಾಂಬರು ರಸ್ತೆ, ಫೈ-ಓವರ್ಗಳು, ವಾಹನಗಳ ಕಿರಿಕಿರಿ ಶಬ್ದ, ಕಾಲಿಗೆ ಚಕ್ರ ಕಟ್ಟಿಕೊಂಡಿರುವಂತೆ ತಮ್ಮ ಕೆಲಸಗಳತ್ತ ಓಡಾಡುವ ಜನರು. ತಮ್ಮ ಮಕ್ಕಳ ಬಗ್ಗೆಯೇ ಕಾಳಜಿ ವಹಿಸದ ಜನರು ಇನ್ನು ಮರ ಗಿಡಗಳ, ಪ್ರಾಣಿ ಪಕ್ಷಿಗಳ ಬಗ್ಗೆ…
19 ಏಪ್ರಿಲ್ 2023, ಮೈಸೂರು: ಅದಮ್ಯ ರಂಗ ಶಾಲೆ (ರಿ.) ಮೈಸೂರು ಇವರು ಜಿ.ಪಿ.ಐ.ಇ.ಆರ್. ರಂಗ ತಂಡ ಮೈಸೂರು ಸಹಕಾರದೊಂದಿಗೆ ಹನುಮಂತ ಹಾಗೇರಿ ಅವರ ರಚನೆಯ ನಾಟಕ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಇದೇ ಬರುವ ಏಪ್ರಿಲ್ 23ನೇ ಭಾನುವಾರದಂದು ಮೈಸೂರಿನ ಕಲಾಮಂದಿರ ಆವರಣ, ಕಿರು ರಂಗಮಂದಿರ ಇಲ್ಲಿ ಪ್ರದರ್ಶನಗೊಳ್ಳಲಿದೆ . ಈ ನಾಟಕವನ್ನು ವಿನೋದ ಸಿ. ಮೈಸೂರು (ಸಾಣೆಹಳ್ಳಿ ಪದವೀಧರ, ಎಂ.ಎ ಡ್ರಾಮಾ) ನಿರ್ದೇಶಿಸಿದ್ದು, ಮಧು ಮಳವಳ್ಳಿ ಬೆಳಕಿನ ವಿನ್ಯಾಸ ಮಾಡಲಿದ್ದಾರೆ. ನಾಟಕದ ಬಗ್ಗೆ: ಗುಡಿಯಾಗಿನ ಹನುಮಪ್ಪ ಯಾರಿಗೆ ಸೇರಬೇಕು? ಅನ್ನುವುದೇ ಎರಡು ಊರುಗಳ ನಡುವೆ ನಡೆಯುವ ಜಗಳವೇ ಈ ನಾಟಕದ ಕಥಾವಸ್ತು. ಆರಂಭದಲ್ಲಿ ಪೂಜಾರಿ-ರಿಂದಮ್ಮನ ಕನಸಿನಿಂದ ಶುರುವಾದ ಜಗಳಕ್ಕೆ “ರಾಜಕಾರಣ” ಸೇರಿಕೊಂಡು ಬೇರೆಯ ಸ್ವರೂಪ ಪಡೆದುಕೊಳ್ಳುತ್ತದೆ. ನೂರಾರು ವರ್ಷಗಳಿಂದ ಸಹ ಬಾಳ್ವೆಯಿಂದ ಬದುಕಿದ ಜನರನ್ನು, ಅವರ ಧಾರ್ಮಿಕ ಭಾವನೆಯನ್ನು ಕೆರಳಿಸಿ ತಮ್ಮ ಲಾಭಕ್ಕೆ ರಾಜಕಾರಣಿಗಳು ಬಳಸಿಕೊಳ್ಳುತ್ತಾ , ಅವರಲ್ಲೇ ದ್ವೇಷದ ಕಿಡಿ ಹಚ್ಚುತ್ತಾರೆ. ಇಷ್ಟೆಲ್ಲ ನಡೆದರು ಪಾಪ ಜನರಿಗೆ…
18 ಏಪ್ರಿಲ್ 2023, ಮಂಗಳೂರು: ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಒಂಭತ್ತನೇ ವರ್ಷಾಚರಣೆ ಪ್ರಯುಕ್ತ ಎಪ್ರಿಲ್ 22ರಂದು ಶನಿವಾರ ‘ಬಂಟ ಸಾಂಸ್ಕೃತಿಕ ವೈಭವ – 2023’ ಉರ್ವಾಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜರಗಲಿದೆ ಎಂದು ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಹೇಳಿದ್ದಾರೆ. ನಗರದ ಬಲ್ಮಠ ಕುಡ್ಲ ಪೆವಿಲಿನ್ ನ ಸದಾಶಯ ಕಚೇರಿಯಲ್ಲಿ ಜರಗಿದ ಪೂರ್ವ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಪೂರ್ವಾಹ್ನ ಒಂಬತ್ತು ಗಂಟೆಗೆ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ‘ಬಿಸುಕಣಿ’ ಉದ್ಘಾಟಿಸುವರು. ಬಳಿಕ ವಿವಿಧ ಬಂಟರ ಸಂಘಗಳ ಕಲಾತಂಡಗಳಿಂದ ಸಾಂಸ್ಕೃತಿಕ ವೈಭವ ಜರಗುವುದು. ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭವನ್ನು ನಿಟ್ಟೆ ವಿಶ್ವವಿದ್ಯಾನಿಲಯ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ ಉದ್ಘಾಟಿಸಲಿದ್ದು, ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದರು. ಇದೇ ಸಂದರ್ಭದಲ್ಲಿ ‘ಸದಾಶ್ರಯ’ ಗೃಹ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ‘ಏಕಾಂತದಿಂದ ಲೋಕಾಂತರಕೆ’ ಕೃತಿ ಬಿಡುಗಡೆ: ‘ಸದಾಶಯ’ ಪತ್ರಿಕೆಯ ಪ್ರಧಾನ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ 100 ಲೇಖನಗಳ ಸಂಚಯ ‘ಏಕಾಂತದಿಂದ ಲೋಕಾಂತರ’…
18 ಏಪ್ರಿಲ್ 2023, ಮಂಗಳೂರು: ಮಕ್ಕಳ ಬೇಸಿಗೆ ರಜೆಯನ್ನು ಸದುಪಯೋಗಗೊಳಿಸಲು ಕಲಾಭಿ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಇವರ ವತಿಯಿಂದ ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ನಲ್ಲಿ “ಅರಳು” ಎಂಬ ಹತ್ತು ದಿನಗಳ ವೃತ್ತಿಪರ ರಂಗಭೂಮಿ ಆಯೋಜಿಸಿದ್ದು, ದಿನಾಂಕ 16.04.2023 ರವಿವಾರದಂದು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ.ಶ್ರೀಪಾದ್ ಭಟ್ ಇದನ್ನು ಉದ್ಘಾಟಿಸಿದರು. ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಕಾರ್ಯದರ್ಶಿ ಎಂ. ರಂಗನಾಥ್ ಭಟ್, ಜೊತೆ ಕಾರ್ಯದರ್ಶಿ ಸುರೇಶ ಕಾಮತ್, ಮುಖ್ಯೋಪಾಧ್ಯಾಯರು ಕವಿತಾ ಮೌರ್ಯ, ಪಿ.ಆರ್.ಒ. ಉಜ್ವಲ್ ಮಲ್ಯ, ಗೌರವ ಸಲಹೆಗಾರರು ಡಾ.ಎಂ. ದಾಮೋದರ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷರು ಸುರೇಶ್ ಬಿ. ವರ್ಕಾಡಿ ಇವರು ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ. ಶ್ರೀಪಾದ್ ಭಟ್ ತಮ್ಮ ಮಾತಿನ ಮೂಲಕ ಮಕ್ಕಳು ಹಾಗೂ ಅವರ ಪೋಷಕರಲ್ಲಿ ರಂಗಭೂಮಿಯ ಅಭಿರುಚಿ ಮೂಡಿಸಿದರು ಮತ್ತು ಪೋಷಕರೊಂದಿಗೆ ಸಂವಾದ ಕೂಡ ನಡೆಸಿದರು. ನಂತರ ಮಂಗಳೂರಿನ ಜರ್ನಿ ಥಿಯೇಟರ್ ತಂಡದಿಂದ ರಂಗ…
18 ಏಪ್ರಿಲ್ 2023, ಬೆಂಗಳೂರು: ತೊ.ನಂಜುಂಡಸ್ವಾಮಿ ಗೆಳೆಯರ ಬಳಗ ಇದರ ವತಿಯಿಂದ ನಡೆದ ತೊ.ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಉಳ್ಳಾಲ ಗ್ರಾಮದ ನಯನ ರಂಗಮಂದಿರದಲ್ಲಿ ದಿನಾಂಕ 15.04.2023ರಂದು ನಡೆಯಿತು. ಹಿರಿಯ ರಂಗಕರ್ಮಿ, ಬೆಳಕು ತಜ್ಞ ಹಾಗೂ ರಂಗಸಂಘಟಕ ಶ್ರೀ ಚಂದ್ರಕುಮಾರ್ ಸಿಂಗ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು. ಶ್ರೀ ಪಂಡಿತಾರಾಧ್ಯ ಸ್ವಾಮಿಗಳು, ಸಾಣೇಹಳ್ಳಿ ಅವರ ಸಾನಿಧ್ಯ ಮತ್ತು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೊ.ನಂಜುಂಡಸ್ವಾಮಿ ಅವರ ಶ್ರೀಮತಿಯವರಾದ ಶ್ರೀಮತಿ ಬಿ. ಜಯಮ್ಮ ಅವರಿಗೆ ರಂಗ ಗೌರವವನ್ನು ನೀಡಿ ಅಭಿನಂದಿಸಲಾಯಿತು. ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಬರಲಾಗದ ಡಾ.ಸಿ ಎನ್ ಮಂಜುನಾಥ್ ಅವರು ಕಳುಹಿಸಿದ್ದ ತೊ.ನಂಜುಂಡಸ್ವಾಮಿ ಅವರ ಕುರಿತಾದ ಸಂದೇಶವನ್ನು ಸಭೆಯಲ್ಲಿ ಓದಲಾಯಿತು. ಡಾ. ಜಿ.ಟಿ. ಸುಭಾಶ್, ಶಶಿಧರ ಅಡಪ, ಶ್ರೀನಿವಾಸ್ ಜಿ. ಕಪ್ಪಣ್ಣ ಅವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತೊ.ನಂಜುಂಡಸ್ವಾಮಿ ಅವರ ಸಂಘಟನೆಯ ಕಾರ್ಯಗಳನ್ನು, ರಂಗಭೂಮಿಗೆ ಅವರು ಮಾಡಿದ ವೈದ್ಯಕೀಯ ಸೇವೆಗಳನ್ನು ನೆನಪಿಸಿದರು. ರಂಗಚಂದಿರ ಚಂದ್ರು ಅವರು ಸ್ವಾಗತ ಕೋರಿದರು.…
18 ಏಪ್ರಿಲ್ 2023, ಉಡುಪಿ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭೂಮಿಕಾ ಹಾರಾಡಿ ಸಹಕಾರದಲ್ಲಿ ದಿನಾಂಕ 13-04-2023 ಗುರುವಾರದಂದು ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆದ ನಾಡಿನ ಜಾನಪದ ಕಲೆಗಳ ಅನಾವರಣ `ಜಾನಪದ ವೈಭವ ‘ ಕಾರ್ಯಕ್ರಮ ಅಪಾರ ಜನಾಕರ್ಷಣೆ ಪಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸರ್ವೋತ್ತಮ ಗಾಣಿಗ ಹಾರಾಡಿ ಅವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ `ಜಾನಪದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್ನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ಯಕ್ಷಗಾನ ಕ್ಷೇತ್ರಕ್ಕೆ ಹಾರಾಡಿ ಮನೆತನದ ಕೊಡುಗೆ ಅಪಾರ. ಹಾರಾಡಿ ಮನೆತನದ ಕೊನೆಯ ಕೊಂಡಿ ಸರ್ವೋತ್ತಮ ಗಾಣಿಗ ಅವರಿಗೆ ಜಾನಪದ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ ಎಂದರು. ನಾಡಿನ ಜಾನಪದ ಕಲೆಗಳು…
18 ಎಪ್ರಿಲ್ 2023, ಮೂಡುಬಿದಿರೆ: ಮೂಡುಬಿದಿರೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿ ಹೊಂದುವಲ್ಲಿ ಡಾ. ಎಲ್.ಸಿ ಸೋನ್ಸ್ ಅವರ ಕೊಡುಗೆಯೂ ಮಹತ್ವದ್ದಾಗಿದೆ. ಕೃಷಿಕರು ಕೂಡಾ ಹೇಗೆ ಗೌರವಯುತವಾಗಿ ಬದುಕಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪರಿಸರದ ಕುರಿತಾಗಿ ವಿಶೇಷ ಕಾಳಜಿ ಹೊಂದಿದ್ದ ಸೋನ್ಸ್ ಅವರು ಜಾತಿ ಮತ ಪಂಥವನ್ನು ಮೀರಿ ಬೆಳೆದ ರೀತಿ ಎಲ್ಲರಿಗೂ ಆದರ್ಶಪ್ರಾಯವಾದುದು ಎಂಬುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಡಾ. ಎಲ್.ಸಿ.ಸೋನ್ಸ್ ಅಭಿಮಾನಿ ಬಳಗ, ಮೂಡುಬಿದಿರೆ ಇದರ ಮತಿಯಿಂದ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಡಾ. ನರೇಂದ್ರ ರೈ ದೇರ್ಲ ಅವರ “ ಎಲ್.ಸಿ.ಸೋನ್ಸ್ ಸೃಷ್ಟಿಸಿದ ಫಲ ಪ್ರಪಂಚ ಸೋನ್ಸ್ ಫಾರ್ಮ್” ಎಂಬ ಕೃತಿಯನ್ನು ಮೂಡುಬಿದಿರೆ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ…
18.04.1997 ರಂದು ಕೆ.ಗುಂಡು ನಾಯ್ಕ ಹಾಗೂ ಕಾವೇರಿ ಇವರ ಮಗನಾಗಿ ದಿನೇಶ್ ನಾಯ್ಕ ಕನ್ನಾರು ಅವರ ಜನನ. ಕರೆಸ್ಪಾಂಡೆನ್ಸ್ ನಲ್ಲಿ ಡಿಗ್ರಿಯ ಜೊತೆಗೆ ಮೇಳದ ತಿರುಗಾಟವನ್ನು ಮುಗಿಸಿ ಪ್ರಸ್ತುತ ಉಡುಪಿಯ ತೆಂಕನಿಡಿಯೂರಿನ Government First Grade collage ನಲ್ಲಿ M.S.W ವ್ಯಾಸಂಗ ಮಾಡುತ್ತಿದ್ದಾರೆ. ಗಣೇಶ್ ನಾಯ್ಕ ಚೇರ್ಕಾಡಿ ಹೆಜ್ಜೆಗಾರಿಕೆಯ ಗುರುಗಳು, ಡಾ.ರವಿ ಕುಮಾರ್ ಸೂರಾಲು ಕೈ ತಾಳದ ಗುರುಗಳು, ಉದಯ ಕುಮಾರ್ ಹೊಸಾಳ ಭಾಗವತಿಕೆಯ ಗುರುಗಳು. ತಂದೆಯವರ ವೇಷ ನೋಡಿ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದರು. ೭ನೇ ತರಗತಿಯ ರಜೆಯಲ್ಲಿ ಕನ್ನಾರಿನಲ್ಲಿ ಹೆಜ್ಜೆ ಕಲಿತು, ಆ ಬಳಿಕ ಕೆಲವು ವೇಷಗಳನ್ನು ಮಾಡಿ ಪಿ.ಯು.ಸಿ ರಜೆಯಲ್ಲಿ ೨ ತಿಂಗಳು ಮಂದಾರ್ತಿ ಮೇಳಕ್ಕೆ ವೇಷ ಮಾಡುವುದನ್ನು ಕಲಿಯುವುದಕ್ಕೆ ದೊಡ್ಡಪ್ಪ ಬುಕ್ಕಿಗುಡ್ಡೆ ಮಹಾಬಲ ನಾಯ್ಕ ಜೊತೆಗೆ ಹೋದೆ. ಆಗ ಪುಂಡುವೇಷದ ಬಗ್ಗೆ ಆಸಕ್ತಿಯಾಯಿತು, ವಿಶ್ವನಾಥ್ ಆಚಾರ್ಯ ತೊಂಬಟ್ಟು ಅವರ ನಾಟ್ಯಕ್ಕೆ ಪ್ರೇರಣೆಗೊಂಡು ಅವರ ಹಾಗೆ ವೇಷಧಾರಿಯಾಗಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹಾಗೆ All Rounder ಕಲಾವಿದನಾಗಬೇಕು…
17-04-2023,ಮಂಗಳೂರು: ವಿಶ್ವಕಲಾ ದಿನಾಚರಣೆಯ ಅಂಗವಾಗಿ ನಗರದ ಬೊಕ್ಕಪಟ್ಟಣದ ಸಮೀಪ ನದಿ ಕಿನಾರೆಯಲ್ಲಿ ದಿನಾಂಕ 15-04-2023 ಶನಿವಾರ ಬೆಳಗ್ಗೆಯಿಂದ ಸಂಜೆ ವರೆಗೆ ಆಶು ಚಿತ್ರ ಕಲಾಶಿಬಿರ ಏರ್ಪಡಿಸಲಾಗಿತ್ತು. ಉದ್ಘಾಟಕರಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಮಾಜಿ ಕುಲಸಚಿವ (ಪರೀಕ್ಷಾಂಗ) ಪ್ರೊ|ಪಿ.ಎಲ್ ಧರ್ಮ ಅವರು ಮಾತನಾಡಿ, ಕರಾವಳಿ ಚಿತ್ರಕಲಾ ಚಾವಡಿ ಕಳೆದ 30 ವರ್ಷಗಳಿಂದ ನಿರಂತರ ಮಂಗಳೂರಿನ ಜನತೆಗೆ ನೂರಾರು ಚಿತ್ರಕಲಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಆದರ್ಶವಾಗಿದ್ದಾರೆ ಎಂದರು. ವಿಶ್ವಕಲಾ ದಿನಾಚರಣೆಯನ್ನು ಇಡೀ ಜಗತ್ತಿನ ಕಲಾವಿದರು ಆಚರಿಸುತ್ತಿರುವಾಗ ಮಂಗಳೂರಿನ ಕಲಾವಿದರು ಸ್ಥಳದಲ್ಲೇ ಚಿತ್ರರಚನೆ ಮಾಡುವಂತದ್ದು ಕಲಾವಿದರು. ವೈಯಕ್ತಿಕವಾಗಿ ಬೆಳೆಯಲು ಮತ್ತು ಸಮಾಜಕ್ಕೆ ಸಮಾಜದ ಜನರಿಗೆ ಚಿತ್ರಕಲೆಯ ಪರಿಚಯ ನೀಡಿದಂತಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ದಿವಾಕರ್ ಕದ್ರಿ ಮಾತನಾಡಿ, ಇಂತಹ ಕಲಾಮೇಳ ಶಿಬಿರ ಮನಸ್ಸಿಗೆ ಮುದ ಕೊಡುವಂತದ್ದು ಇಂತಹ ಸುಂದರ ಪ್ರೇಕ್ಷಣೀಯ ಸ್ಥಳದಲ್ಲಿ ಏರ್ಪಟಿಸಿದ್ದರಿಂದ ಜನತೆಗೆ ಪ್ರವಾಸಿಗಳಿಗೆ ನೀಡಿದಂತಾಗುತ್ತದೆ ಎಂದರು. ಭಾಗವಹಿಸಿದ ಕಲಾವಿದರಿಗೆ ಎಲ್ಲರಿಗೂ ಕ್ಯಾನ್ವಾಸ್ ನೀಡಿ ಪ್ರೋತ್ಸಾಹಿಸಿದರು. ಹಿರಿಯ…