Subscribe to Updates
Get the latest creative news from FooBar about art, design and business.
Author: roovari
10 ಎಪ್ರಿಲ್ 2023, ಬಾಗಲಕೋಟೆ: ನಟರಾಜ ಸಂಗೀತ ನೃತ್ಯ ನಿಕೇತನ (ರಿ) ಬಾಗಲಕೋಟೆ,ನೃತ್ಯ ಸಂಸ್ಥೆಯ ನಿರ್ದೇಶಕರಾದ ವಿದುಷಿ ಶುಭದ ದೇಶಪಾಂಡೆ ಅವರ ಆಯೋಜನೆಯಲ್ಲಿ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರಿಂದ ಎರಡು ದಿನಗಳ “ತಾಳ ಪ್ರಕ್ರಿಯಾ” ಕಾರ್ಯಗಾರವು ಅಚ್ಚುಕಟ್ಟಾಗಿ ಮೂಡಿ ಬಂತು.15 ವಿದ್ಯಾರ್ಥಿನಿಯರು 2 ದಿನದ ಈ ಕಾರ್ಯಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ನಟರಾಜ ಸಂಗೀತ ನೃತ್ಯ ನಿಕೇತನ (ರಿ) ಬಾಗಲಕೋಟೆ : ನಟರಾಜ ಸಂಗೀತ ನೃತ್ಯ ನಿಕೇತನವು ಇಂದು ಇಪ್ಪತ್ತು ವರ್ಷಗಳನ್ನು ಪೂರೈಸಿ ಅಮೋಘ ಸೇವೆಯನ್ನು ನಾಡಿಗೆ ಸಲ್ಲಿಸಿದೆ.ಚಾಲುಕ್ಯ ಉತ್ಸವ ಬಾಗಲಕೋಟ ಉತ್ಸವ, ರನ್ನ ಉತ್ಸವ , ಮೈಸೂರು ದಸರಾ ಉತ್ಸವಗಳಲ್ಲಿ ಸಭೆಯನ್ನು ವ್ಯಕ್ತಪಡಿಸುತ್ತಿರುವುದಲ್ಲದೆ, ಪುಣೆ, ಚೆನ್ನೈ,ಬೆಂಗಳೂರು ಅಲ್ಲದೆ, ಸಿಂಗಾಪುರ, ಥೈಲ್ಯಾಂಡ್, ಫ್ರಾನ್ಸ್ ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಕೀರ್ತಿಭಾಜನರಾಗಿದ್ದರೆ ಕಲಾ ಸೇವೆಗೆ ಮುಡುಪಾಗಿಟ್ಟ ನಮ್ಮ ದೇವರ ಭವ್ಯ ಸಾಲಸ್ಕೃತಿಕ ಪರಂಪರೆಯ ಗಂಧವನ್ನು ದೇಶ-ವಿದೇಶಗಳಲ್ಲಿ ಹರಿಯುವಂತೆ ಮಾಡಿದ್ದಾರೆ. ಇದರ ರೂವಾರಿ ವಿದುಷಿ ಶುಭದ ದೇಶಪಾಂಡೆ ಅವರು ಸಂಗೀತ ನಾಟ್ಯ ಕಲಾ ಸಾಮ್ರಾಜ್ನಿ,…
ಎಪ್ರಿಲ್ 10, ಮುಂಬಯಿ: “ವಿಶ್ವ ರಂಗ ದಿನವನ್ನು ಕನ್ನಡ ಕಲಾ ಕೇಂದ್ರದ ಕಚೇರಿಯಲ್ಲಿ ಯಾಕೆ ಆಚರಿಸಬಾರದು ಎಂಬ ನಮ್ಮ ಮನದಿಚ್ಚೆಗೆ ಇಂತಹ ಅಭೂತಪೂರ್ವ ಸ್ಪಂದನೆ ಸಿಗುತ್ತದೆ ಎನ್ನುವ ಕಲ್ಪನೆ ಇದ್ದಿರಲಿಲ್ಲ. ವಿಶ್ವ ರಂಗಭೂಮಿ ದಿನವನ್ನು ವಿಶ್ವಾದ್ಯಂತ ಮಾರ್ಚ್ 27ರಂದು ಆಚರಿಸಲಾಗುತ್ತದೆ. ರಂಗಭೂಮಿಯ ವೈವಿಧ್ಯಮಯ ಕೊಡುಗೆಗಳನ್ನು ಆಚರಿಸಲು ಇದು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಕನ್ನಡಕಲಾ ಕೇಂದ್ರವು ಕಳೆದ ಆಗಸ್ಟ್ ತಿಂಗಳಲ್ಲಿ ಆಚರಿಸಿದ ನಾಟಕೋತ್ಸವದಲ್ಲಿ ಒಂದು ಕನ್ನಡ ನಾಟಕ, ಒಂದು ತುಳು ನಾಟಕ, ಒಂದು ರೂಪಕ ಮತ್ತು ಒಂದು ತಾಳಮದ್ದಲೆ ನಡೆಸಿ ವೈವಿಧ್ಯಮಯ ಕಾರ್ಯಕ್ರಮ ನೀಡಿದೆ ಎನ್ನುವುದಕ್ಕೆ ಸಂತೋಷವಾಗುತ್ತದೆ . ಮುಂಬಯಿ ಯ ನಾಟಕ ನಿರ್ದೇಶಕರು ಪ್ರಭುದ್ಧರಾಗಿದ್ದು ಕನ್ನಡಕಲಾ ಕೇಂದ್ರದ ನಾಟಕೋತ್ಸವಕ್ಕೆ ವರ್ಷಕ್ಕೆ ಒಂದಾದರೂ ನಾಟಕ ನೀಡುವ ಮೂಲಕ ನಮ್ಮ ನಾಟಕೋತ್ಸವದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕು” ಎಂದು ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ ಆರ್ ಹೇಳಿದರು. ಏಪ್ರಿಲ್ 8ರಂದು ಸಂಜೆ ಕನ್ನಡ ಕಲಾ ಕೇಂದ್ರದ ಸಾಯನ್ ನಲ್ಲಿರುವ ಕಚೇರಿಯಲ್ಲಿ ವಿಶ್ವರಂಗ ದಿನಾಚರಣೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೊಯಿಲದ ಜನಾರ್ಧನ ಹಾಗೂ ಜಾನಕಿ ಇವರ ಮಗನಾಗಿ 11.10.1988ರಂದು ಪ್ರೇಮ್ ರಾಜ್ ಕೊಯಿಲ ಅವರ ಜನನ. ಕಂಪ್ಯೂಟರ್ ಡಿಪ್ಲೊಮಾ ಇವರ ವಿದ್ಯಾಭ್ಯಾಸ. ಹರಿಪ್ರಸಾದ್ ರಾವ್ ರಾಯಿ ಮತ್ತು ಅಕ್ಕ- ಅಣ್ಣಂದಿರು ಪ್ರೇಮ್ ರಾಜ್ ಕೊಯಿಲ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ದಿನೇಶ್ ಶೆಟ್ಟಿ ಕಾವಳಕಟ್ಟೆ, ದಿವಾಣ ಶಿವಶಂಕರ್ ಭಟ್ ಇವರ ಯಕ್ಷಗಾನದ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಪ್ರಸಂಗದ ಎಲ್ಲಾ ಪದ್ಯಗಳನ್ನು ಓದಿ ಅರ್ಥ ಮಾಡಿಕೊಂಡು ಹಿರಿಯರಲ್ಲಿ, ರಂಗದಲ್ಲಿ ಜತೆಯಾಗುವ ವೇಷದವರಲ್ಲಿ, ಭಾಗವತರಲ್ಲಿ ರಂಗ ನಡೆಯ ಬಗ್ಗೆ ಕೇಳಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಪ್ರೇಮ್ ರಾಜ್ ಅವರು ಹೇಳುತ್ತಾರೆ. ಅತಿಕಾಯ ಮೋಕ್ಷ, ತಾಮ್ರಧ್ವಜ ಕಾಳಗ, ಬಬ್ರುವಾಹನ ಕಾಳಗ, ಲಲಿತೋಪಖ್ಯಾನ, ರಕ್ತರಾತ್ರಿ, ಗುರುದಕ್ಷಿಣೆ, ಲವ ಕುಶ ನೆಚ್ಚಿನ ಪ್ರಸಂಗಗಳು. ಬಬ್ರುವಾಹನ, ಕೃಷ್ಣ, ವಿಷ್ಣು, ಅಭಿಮನ್ಯು, ಅಶ್ವತ್ಥಾಮ, ಚಂಡ ಮುಂಡರು, ಲವ – ಕುಶ, ರುಕ್ಮಾಂಗ – ಶುಭಾಂಗ…
08 ಏಪ್ರಿಲ್ 2023, ಪಡುಬಿದ್ರಿ: ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮೂಲ ಮಠದ ಶ್ರೀ ಪ್ರಾಣ ದೇವರ ಸನ್ನಿಧಿಯಲ್ಲಿ ಗುರುವಾರ ದಿನಾಂಕ 06-04-2023ರಂದು ಹನುಮಜ್ಜಯಂತಿ ಮತ್ತು ಶ್ರೀ ರಾಜರಾಜೇಶ್ವರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಸಂದರ್ಭ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಶ್ರೀ ರೆಂಜಾಳ ಹರಿನಾರಾಯಣ ಬೈಪಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಡಿತ್ತಾಯ ದಂಪತಿಗೆ ಶತಮಾನದ ಶಕಪುರುಷ, ಜ್ಞಾನವೃದ್ಧರಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಸಂಸ್ಮರಣಾರ್ಥ ನೀಡಲಾಗುವ “ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ”ವನ್ನು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯಪಟ್ಟ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪ್ರದಾನ ಮಾಡಿ ದಂಪತಿಗಳನ್ನು ಹರಸಿದರು. ಪುರಸ್ಕಾರವು ಸನ್ಮಾನ ಪತ್ರದೊಂದಿಗೆ ರೂ.50,000 ನಿಧಿಯನ್ನು ಒಳಗೊಂಡಿದೆ. ಪಲಿಮಾರು ಮಠದ ದಿವಾನರಾದ ವಿದ್ವಾನ್ ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಬೈಪಾಡಿತ್ತಾಯ ದಂಪತಿಗಳನ್ನು…
08 ಏಪ್ರಿಲ್ 2023, ಉಡುಪಿ: ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ದಂಪತಿಗಳ ಸುಪುತ್ರಿಯಾದ ತನುಶ್ರೀ ಪಿತ್ರೋಡಿ ಉಡುಪಿಯ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ. ಯೋಗ ಗುರುಗಳಾದ ಶ್ರೀ ಹರಿರಾಜ್ ಕಿನ್ನಿಗೋಳಿ ಇವರಲ್ಲಿ ಯೋಗ ಅಭ್ಯಾಸ ಮತ್ತು ನಾಟ್ಯಾಚಾರ್ಯ ಶ್ರೀ ರಾಮಕೃಷ್ಣ ಕೊಡಂಚ ಇವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮಾಡಿ ಗುರುಗಳಿಬ್ಬರಿಗೂ ಖ್ಯಾತಿಯನ್ನು ತಂದು ಕೊಟ್ಟ ಧೀಮಂತ ಶಿಷ್ಯೆ. ಯೋಗಾಸನದ ಮೂಲಕ 1 ಗಿನ್ನಿಸ್ ವರ್ಲ್ಡ್ ರೆಕಾರ್ಡ್, 6 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಪ್ರಸ್ತುತ ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿರುವುದು ಈಕೆಯ ಸಾಧನೆಗೆ ಸಂದ ಗೌರವ. ತನ್ನ ಎಳವೆಯಲ್ಲಿಯೇ 5ನೇ ಯೋಗ ದಿನಾಚರಣೆಯ ಸಂದರ್ಭದಲ್ಲಿ “ಯೋಗ ರತ್ನ ಪ್ರಶಸ್ತಿ” ಮತ್ತು 27-05-2018ರಂದು ಅಭಿನಯ ಕಲಾವಿದರು ಉಡುಪಿ ಇವರಿಂದ “ನಾಟ್ಯ ಮಯೂರಿ” ಬಿರುದು ಮತ್ತು 14-11-2018ರಂದು ಇಟಲಿಯ ರೋಮ್ ನಗರದಲ್ಲಿ ನಡೆದ ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿಕೊಂಡು ಯೋಗ…
08 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ “ತುಳು ಹರಿಕಥೆ ಉಚ್ಚಯ-2023”ರ ಉದ್ಘಾಟನೆಯನ್ನು ದಿನಾಂಕ 07-04-2023ರಂದು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಹರೇಕಳದ ನಿವೃತ್ತ ಮುಖ್ಯೋಪಾಧ್ಯಯರಾದ ಕೆ. ರವೀಂದ್ರ ರೈ ಕಲ್ಲಿಮಾರ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮೂಕಾಂಬಿಕಾ ಕನ್ ಸ್ಟ್ರಕ್ಷನ್ ನ ಮಾಲೀಕರಾದ ಹರಿದಾಸ್ ಮಾಡೂರು ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಸೌಮ್ಯ ಆರ್ ಶೆಟ್ಟಿ, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿವೇಕಾನಂದ ಸನಿಲ್, ತುಳುವ ಸಿರಿ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ, ಸಂಚಾಲಕರಾದ ಅನಂತಕ್ರಷ್ಣ ಯಾದವ್, ಸುರೇಶ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.…
08 ಏಪ್ರಿಲ್ 2023, ಸುರತ್ಕಲ್: ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ನಾಲ್ಕು ದಿವಸಗಳ ಅಂತರ ಕಾಲೇಜು ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಯಾನ -2023’ನ್ನು ದಿನಾಂಕ 07-04-2023ರಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ಉದ್ಘಾಟಿಸಿ, “ದೈವೀ ಕಲೆಯಾದ ಯಕ್ಷಗಾನದ ಮೂಲಕ ಮಾನವೀಯ ಮೌಲ್ಯಗಳ ಪ್ರಸಾರವಾಗುತ್ತಿದೆ. ವಿದ್ಯಾರ್ಥಿಗಳು ಯಕ್ಷಗಾನ ಕಲೆಯ ಕುರಿತು ಆಸಕ್ತರಾಗುತ್ತಿರುವುದು ಶ್ಲಾಘನೀಯ” ಎಂದರು. ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಚ್. ಮಾತನಾಡಿ “ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆ ಯಕ್ಷಗಾನದ ಶ್ರೇಷ್ಠ ಪರಂಪರೆ ಹೊಂದಿದ್ದು ಮೌಲ್ಯಾಧಾರಿತ ಶಿಕ್ಷಣವನ್ನು ಸದಾ ಪ್ರೋತ್ಸಾಹಿಸುತ್ತದೆ” ಎಂದರು. ಅಗರಿ ಎಂಟರ್ ಪ್ರೈಸಸ್ನ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಪರಿಪೂರ್ಣ ಕಲೆಯಾದ ಯಕ್ಷಗಾನವನ್ನು ಯುವ ತಲೆಮಾರಿಗೆ ಪರಿಚಯಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾಗಿದೆ” ಎಂದರು. ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ವೈ.ವಿ.ರತ್ನಾಕರ ರಾವ್,…
08 ಏಪ್ರಿಲ್ 2023, ಪುತ್ತೂರು: ಪುತ್ತೂರಿನ ಸಮೀಪದಲ್ಲಿರುವ ಸೌಗಂಧಿಕಾದಲ್ಲಿ ಈ ವರ್ಷದ ವಸಂತ ಕಾಲದ ಚಿತ್ರಕಲಾ ಪ್ರದರ್ಶನವು ಏಪ್ರಿಲ್ ಎಂಟರಂದು ಶನಿವಾರ ಸಂಜೆ ಅನಾವರಣಗೊಳ್ಳಲಿದೆ. ಬೆಂಗಳೂರಿನ ಯುವ ಕಲಾವಿದರಾದ ಆದಿತ್ಯ ಸದಾಶಿವ ಮೂರ್ತಿಯವರು ಜಲ ವರ್ಣದಿಂದ “ವಾಷಿಂಗ್ ಮೆಥಡ್” ತಂತ್ರಜ್ಞಾನದಲ್ಲಿ ರಚಿಸಿರುವ ಕಲಾಕೃತಿಗಳು “ಮುಖಗಳು” ಎನ್ನುವ ಶೀರ್ಷಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕಲಾಕೃತಿಗಳು ಭಾರತೀಯ ಮತ್ತು ಆಫ್ರಿಕಾದ ಬುಡಕಟ್ಟು ಜನಾಂಗದ ಜನಪದ ಶೈಲಿಯ ಮುಖಗಳ ಅಧ್ಯಯನದ ಬಳಿಕ ರಚಿಸಿರುವ ಕಲಾಕೃತಿಗಳಾಗಿರುತ್ತವೆ. ವಿಶ್ವ ರಂಗಭೂಮಿಯ ಸಂಭ್ರಮ ಆಚರಣೆಯ ಪ್ರಯುಕ್ತ ನಡೆಯಲಿರುವ ಈ ಕಲಾ ಪ್ರದರ್ಶನವು ಮುಖಗಳ ಭಾವನೆಗಳ ಬಣ್ಣದೊಂದಿಗೆ ನಮ್ಮ ರಂಗ ಬಾಂಧವ್ಯದ ಸೊಗಸನ್ನು ಹೆಚ್ಚಿಸುವಂಥದ್ದು. 1996ರಲ್ಲಿ ಬೆಂಗಳೂರು ಮಹಾನಗರಿಯಲ್ಲಿ ಜನಿಸಿರುವ ಆದಿತ್ಯ ಬಾಲ್ಯದಲ್ಲಿ ತನ್ನ ತಂದೆ ಹಿರಿಯ ಕಲಾವಿದರಾದ ಎಂ. ಎಸ್.ಮೂರ್ತಿಯವರು ಸ್ಟುಡಿಯೋದಲ್ಲಿ ರಚಿಸುತ್ತಿದ್ದ ರೇಖೆಗಳನ್ನು, ತೈಲ ವರ್ಣ, ಜಲ ವರ್ಣ ಕಲಾಕೃತಿಗಳನ್ನು ಬಿತ್ತಿ ರೂಹುಗಳನ್ನು ನೋಡುತ್ತಾ ಗೆರೆಗಳನ್ನು ಎಳೆಯುತ್ತಾ ಚಿತ್ರಕಲೆ ಕಲಿಯಲಾರಂಭಿಸಿದವರು. ತದನಂತರ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಿಂದ “ದೃಶ್ಯ ಮತ್ತು…
07 ಏಪ್ರಿಲ್ 2023, ಉಡುಪಿ: ರಥಬೀದಿ ಗೆಳೆಯರು (ರಿ.) ಉಡುಪಿ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಹಿರಿಯ ಅಂಕಣಕಾರ ಡಾ. ಬಿ. ಭಾಸ್ಕರ ರಾವ್ ಇವರ “ಸಾರ್ವಕಾಲಿಕ” ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 09-04-2023 ಭಾನುವಾರ ಸಂಜೆ 4-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜು, ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಪುಸ್ತಕದ ಲೋಕರ್ಪಣೆಯನ್ನು ಹಿರಿಯ ಸಾಹಿತಿಗಳಾದ ಡಾ. ನಾ.ಮೊಗಶಾಲೆಯವರು ನೆರವೇರಿಸಲಿದ್ದು, ಶಿಕ್ಷಣ ತಜ್ಞರು, ಲೇಖಕರು ಡಾ. ಮಹಾಬಲೇಶ್ವರ ರಾವ್ ಇವರು ಕೃತಿಯ ಬಗ್ಗೆ ಮಾತನಾಡಲಿದ್ದಾರೆ. ಪುಸ್ತಕದ ಲೇಖಕರಾದ ಡಾ. ಬಿ. ಭಾಸ್ಕರ ರಾವ್ ಇವರ ಉಪಸ್ಥಿತಿಯಲ್ಲಿ ಶ್ರೀ. ಜಿ.ಪಿ. ಪ್ರಭಾಕರ ತುಮರಿಯವರು ಕಾರ್ಯಕ್ರಮ ಸಂಯೋಜನೆ ಮಾಡಲಿದ್ದಾರೆ. ಲೇಖಕರ ಕುರಿತು : ಕನ್ನಡದ ಸುಪ್ರಸಿದ್ದ ಅಂಕಣಕಾರರು ಹಾಗೂ ಸಂಸ್ಕೃತಿ ವಿಮರ್ಶಕರಾಗಿರುವ ಡಾ. ಬಿ. ಭಾಸ್ಕರ ರಾವ್ ಹೈದರಾಬಾದ್ ನ ಇಂಗ್ಲೀಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಯುನಿವರ್ಸಿಟಿ ಮತ್ತು ಇಂಗ್ಲೆಂಡ್ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದು ಮೂರು ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ನಲ್ವತ್ತು ವರ್ಷಗಳ…
07 ಏಪ್ರಿಲ್ 2023, ಮಂಗಳೂರು: ಮಂಗಳೂರು ಗಮಕ ಪರಿಷತ್ತಿನ ವತಿಯಿಂದ ತಲಪಾಡಿಯ ದೇವಿನಗರದ ಶ್ರೀಮತಿ ಮತ್ತು ಶ್ರೀ ಮಂಜುನಾಥ ಭಟ್ ಇವರ ಮನೆಯಂಗಳದಲ್ಲಿ ಚೊಚ್ಚಲ ಕಾರ್ಯಕ್ರಮ ನಡೆಯಿತು. ಗಮಕ ಕಾರ್ಯಕ್ರಮಕ್ಕೆ ಜನರು ಬರುವುದಲ್ಲ, ಜನರಿದ್ದಲ್ಲಿಗೆ ನಾವೇ ಹೋಗಿ ಕಾರ್ಯಕ್ರಮ ನೀಡಿ ಜನರಲ್ಲಿ ಗಮಕದ ಬಗ್ಗೆ ಆಸಕ್ತಿ ಕೆರಳಿಸಿ ಅಭಿರುಚಿ ಉಂಟು ಮಾಡುವುದೇ ಮನೆ ಮನೆ ಗಮಕ ಕಾರ್ಯಕ್ರಮದ ಉದ್ದೇಶ. ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀಯುತ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಮೃತ ಹಸ್ತದಿಂದ ದೀಪ ಬೆಳಗುವುದರೊಂದಿಗೆ ಮನೆ ಮನೆ ಗಮಕದ ಮೊದಲ ಪಲ್ಲವ ಚಿಗುರೊಡೆಯಿತು. ಕಾರ್ಯಕ್ರಮದ ಅನಿವಾರ್ಯತೆ, ಉದ್ದೇಶ, ಇತಿಹಾಸ ಮತ್ತು ಮಹತ್ವ ತಿಳಿಸಿದ ಕಲ್ಕೂರರು ಈ ಗಮಕ ಪಲ್ಲವ ಚಿಗುರಿ, ರೆಂಬೆ ಕೊಂಬೆಗಳಿಂದ ಸಮೃದ್ಧವಾಗಿ ಹೂತು, ಕಾಯಾಗಿ ಹೊಸ ಹೊಸ ಮರಗಳು ಹುಟ್ಟಿ ನಂದನವನವಾಗಲಿ ಎಂದು ಹಾರೈಸಿದರು. ಕುಮಾರವ್ಯಾಸ ಭಾರತದ ದೂರ್ವಾಸ ಆತಿಥ್ಯ ಭಾಗವನ್ನು ಗಮಕಿ ಸುರೇಶ್ ರಾವ್ ಅತ್ತೂರು ವಾಚಿಸಿದರು. ವಿದ್ವಾಂಸರಾದ ಸರ್ಪಂಗಳ ಈಶ್ವರ ಭಟ್ ಅವರು ಮನೋಜ್ಞವಾಗಿ ವ್ಯಾಖ್ಯಾನ ಮಾಡಿದರು.…