Subscribe to Updates
Get the latest creative news from FooBar about art, design and business.
Author: roovari
ಸುಬ್ರಹ್ಮಣ್ಯ : ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಇವರ ವತಿಯಿಂದ ಪುರಂದರದಾಸ ಹಾಗೂ ಸಂತ ತ್ಯಾಗರಾಜರ ‘ಆರಾಧನಾ ಮಹೋತ್ಸವ’ವು ಕುಕ್ಕೇ ಶ್ರೀ ಸುಬ್ರಹ್ಮಣ್ಯದ ಧರ್ಮ ಸಮ್ಮೇಳನ ಮಂಟಪದಲ್ಲಿ ದಿನಾಂಕ 03-03-2024ರಂದು ನಡೆಯಲಿದೆ. ಮುಂಜಾನೆ 6-00 ಗಂಟೆಗೆ ನಗರ ಸಂಕೀರ್ತನೆ, 8:00 ಗಂಟೆಗೆ ದೀಪೋಜ್ವಲನ, ಗಂಟೆ 8-15ಕ್ಕೆ ವಿದ್ವಾನ್ ಚಿಂತನ್ಪಲ್ಲಿ ಶ್ರೀನಿವಾಸ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, 9-00 ಗಂಟೆಗೆ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲುಕಟ್ಟೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, 9:35ಕ್ಕೆ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟದ ಸರ್ವ ಸದಸ್ಯರಿಂದ ಪಂಚರತ್ನ ಗೋಷ್ಠಿ ಗಾಯನ, ಗಂಟೆ 10-25ಕ್ಕೆ ವಿಶ್ವಮೋಹನ ನೃತ್ಯ ಕಲಾಶಾಲೆ ಕಡಬ ವಿದುಷಿ ಮಾನಸ ಪುನೀಶ್ ರೈ ಬಳಗದವರಿಂದ ಭರತನಾಟ್ಯ, 11 ಗಂಟೆಗೆ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಪಿಟೀಲು ವಾದನ, 11.30ಕ್ಕೆ ಶ್ರೀಮತಿ ವಿದುಷಿ ಡಾ. ಜಲಜಾ ಪ್ರಸಾದ್ ಇವರಿಂದ ಕರ್ನಾಟಕ ಶಾಸ್ತ್ರೀಯ…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಮಾರ್ಚ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 04-03-2024, 11-03-2024, 18-03-2024 ಮತ್ತು 25-03-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 04-03-2024ರಂದು ನಡೆಯಲಿರುವು ಸರಣಿ 35ರಲ್ಲಿ ವಿದುಷಿ ಶೀತಲ್ ರಾವ್ ಉಡುಪಿ, ದಿನಾಂಕ 11-03-2024ರಂದು ನಡೆಯಲಿರುವು ಸರಣಿ 36ರಲ್ಲಿ ಶ್ರೀಕರಿ ಮಂಗಳೂರು, ದಿನಾಂಕ 18-03-2024ರಂದು ನಡೆಯಲಿರುವು ಸರಣಿ 37ರಲ್ಲಿ ಶ್ರದ್ಧಾ ಶ್ರೀನಿವಾಸ್ ಬೆಂಗಳೂರು ಮತ್ತು ದಿನಾಂಕ 25-03-2024ರಂದು ನಡೆಯಲಿರುವು ಸರಣಿ 38ರಲ್ಲಿ ವಿದುಷಿ ಚೈತ್ರಾ ರಾವ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.
ಮಂಗಳೂರು: ನಡೆದಾಡುವ ಜ್ಞಾನ ಭಂಡಾರ, ಪತ್ರಿಕಾ ರಂಗದ ಭೀಷ್ಮ, ಅಪ್ರತಿಮ ವಾಗ್ಮಿಯಾದ ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಸ್ನೇಹ ಜೀವಿ ಮನೋಹರ್ ಪ್ರಸಾದ್(64) ದಿನಾಂಕ 01-03-2024ನೇ ಶುಕ್ರವಾರ ಬೆಳಗಿನಜಾವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕು ಕರುವಾಲು ಗ್ರಾಮದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ‘ನವ ಭಾರತ’ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಮಂಗಳೂರು ಉದಯವಾಣಿ ಪತ್ರಿಕೆಯ ವರದಿಗಾರರಾಗಿದ್ದರು. ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದರು. ಉತ್ತಮ ಕಥೆಗಾರರು, ಕವಿಯಾಗಿದ್ದ ಮನೋಹರ್ ಪ್ರಸಾದ್ ಅವರು ಕರಾವಳಿ ಇತಿಹಾಸ ಕುರಿತ 600ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅಂತಿಮ ದರ್ಶನ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲೋಬೊ ಲೇನ್ ನಲ್ಲಿರುವ ‘ಈಶ ಅಪಾರ್ಟ್ಮೆಂಟ್’ ನಲ್ಲಿ ಅಪರಾಹ್ನ…
ಧರ್ಮಸ್ಥಳ : ರಂಗಶಿವ ಕಲಾಬಳಗ ಧರ್ಮಸ್ಥಳ ಅರ್ಪಿಸುವ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಕ್ಷೇತ್ರದ ಸಿಬ್ಬಂದಿಗಳು ಅಭಿನಯಿಸುವ ‘ಕೇಳೆ ಸಖಿ ಚಂದ್ರಮುಖಿ’ ಯಕ್ಷ ನಾಟಕವು ದಿನಾಂಕ 02-03-2024ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಪ್ರಜ್ಞಾ ಮತ್ತಿಹಳ್ಳಿ ಮೂಲ ರಚನೆಯ ಈ ನಾಟಕವನ್ನು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಮರು ರಂಗರೂಪಗೊಳಿಸಿದ್ದು, ವಿನ್ಯಾಸ ಮತ್ತು ನಿರ್ದೇಶನ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರದ್ದು.
ಮಂಗಳೂರು : ಆಯನ ನಾಟಕದ ಮನೆ ಮತ್ತು ರಂಗ ಅಧ್ಯಯನ ಕೇಂದ್ರ ಹಾಗೂ ಸಂತ ಆಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಮಂಗಳೂರು ಸಹಭಾಗಿತ್ವದಲ್ಲಿ ಎರಡು ನಾಟಕ ಪ್ರದರ್ಶನವು ದಿನಾಂಕ 04-03-2024 ಮತ್ತು 05-03-2024ರಂದು ಸಂಜೆ 7-00 ಗಂಟೆಗೆ ಸಂತ ಆಲೋಶಿಯಸ್ ಸಹೋದಯ ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 04-03-2024ರಂದು ಚಂದ್ರಶೇಖರ್ ಕೆ. ನಿರ್ದೇಶನದಲ್ಲಿ ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ಹೋರಾಟದ ಹಾಡುಗಳ ಹುಟ್ಟಿನ ಕಥನ ‘ಪಂಚಮಪದ’ ಮತ್ತು ದಿನಾಂಕ 05-03-2024ರಂದು ಶ್ರೀಜಿತ್ ಸುಂದರಂ ಬೆಂಗಳೂರಿನ ಪಯಣ ಪ್ರಸ್ತುತ ಪಡಿಸುವ ಮಂಗಳಮುಖಿಯರ ನಿಜ ಕನಸು ‘ತಲ್ಕಿ’ ನಾಟಕಗಳ ಪ್ರದರ್ಶನ ನಡೆಯಲಿದೆ. ಪಂಚಮಪದ : ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಆ ಹಾಡುಗಳೊಂದಿಗೆ ಇಲ್ಲಿನ ಹಲವು ಜನ ಸಮುದಾಯಗಳ ಸಂಸ್ಕೃತಿ, ಬದುಕು, ಬವಣೆ, ಚಳುವಳಿಯ ನೆನಪುಗಳು ಬೆಸೆದುಕೊಂಡಿವೆ. ಇಂತಹ ಹತ್ತಾರು ಹಾಡುಗಳ ಹುಟ್ಟಿನ ಸುತ್ತಲಿನ ಕಥನಗಳನ್ನು ನಾವು ಬಗೆಯುತ್ತಾ ಹೋದಂತೆ ಈ ನೆಲದ ಸಾಂಸ್ಕೃತಿಕ ಇತಿಹಾಸದ ಭಿನ್ನ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಪ್ರಸ್ತುತ ಪ್ರಯೋಗ ಹಾಡು,…
ಕಾಸರಗೋಡು : ಕಾವಯತ್ರಿ ರೇಖಾ ಸುದೇಶ್ ರಾವ್ ಇವರ ದ್ವಿತೀಯ ಕವನ ಸಂಕಲನ ‘ಹೊಂಬೆಳಕು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 22-02-2024 ದಂದು ಕಾಸರಗೋಡಿನ ಕನ್ನಡಭನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ಎಂ. ಪಿ. ಶ್ರೀನಾಥ್ ಕನ್ನಡ ಭವನ ಕಾಸರಗೋಡು ಅಧ್ಯಕ್ಷರಾದ ವಾಮನ್ ರಾವ್ ಬೇಕಲರಿಗೆ ‘ಹೊಂಬೆಳಕು’ ಕೃತಿ ನೀಡಿ ಬಿಡುಗಡೆಗೊಳಿಸಿದರು. ಪ್ರಕಾಶಕರಾದ ಕಥಾಬಿಂದು ಪಿ. ವಿ. ಪ್ರದೀಪ್ ಕುಮಾರ್ ಕೃತಿ ಅವಲೋಕನ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ರವಿ ನಾಯಿಕಾಪು, ಕವಯತ್ರಿ ಸುಭಾಷಿಣಿ, ಲೇಖಕ ವಿ. ಬಿ. ಕುಳಮರ್ವ, ಕವಯತ್ರಿ ಚಂಚಲಾಕ್ಷಿ ಶಾಂಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ ಜಯಪ್ರಕಾಶ್ ತೋಟ್ಟೆತೋಡಿ, ಕವಯತ್ರಿ ಉಷಾಕಿರಣ್, ಕೃತಿಕಾರ್ತಿ ರೇಖಾ ಸುದೇಶ್ ರಾವ್, ಡಾ. ಪಿ. ಕೃಷ್ಣ ಭಟ್, ಸಾಹಿತಿ ಪಿ. ವಿ. ಪ್ರದೀಪ್ ಕುಮಾರ್, ಕೇಂದ್ರ ಸಾಹಿತ್ಯ ಅಕಾಡೆಮಿ ಉಪ ಕಾರ್ಯದರ್ಶಿ ಡಾ. ಎಸ್. ಪಿ.…
ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಪ್ರಸಕ್ತ ಸಾಲಿನ ಭಾರತ ಸರಕಾರದ ಸಂಸ್ಕೃತ ಇಲಾಖೆಯ ಸಂಶೋಧನ ಫೆಲೋಶಿಪ್ಗೆ ಆಯ್ಕೆಯಾಗಿದ್ದಾರೆ. ಡಾ. ಉಮಾ ರಾವ್ ಅವರು ‘ಭೈರಪ್ಪನವರ ಕಾದಂಬರಿಗಳಲ್ಲಿ ಏಕೀಕೃತವಾಗಿ ಮೂಡಿರುವ ಭಾರತೀಯ ಸಂಸ್ಕೃತಿಯ ಚಿತ್ರಣ (ಒಂದು ಬಹುಭಾಷಿಕ ಸಂವೇದನೆ) ಮುಂದಿನ ಎರಡು ವರ್ಷಗಳಲ್ಲಿ ಸಂಶೋಧನೆಯನ್ನು ನಡೆಸಲಿದ್ದಾರೆ. ಮುಂಬೈನ ಹಿರಿಯ ಕನ್ನಡ ಸಾಧಕರಲ್ಲಿ ಡಾ. ಉಮಾ ರಾಮರಾವ್ ಅವರೂ ಒಬ್ಬರು. ಇಂಜಿನಿಯರಿಂಗ್ ಪದವಿ ಪಡೆದು ಮುಂಬೈನ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡುತ್ತಲೇ ಕನ್ನಡದಲ್ಲಿ ಪ್ರಭುತ್ವ ಸಾಧಿಸಿ ಓದು ಬರವಣಿಗೆ ಮಾಡಿ ಸೈ ಎನಿಸಿಕೊಂಡವರು ಡಾ. ಉಮಾ ರಾವ್ ಅವರು. ಸಾಂಪ್ರತ ಮುಂಬೈನ ಮುಂಚೂಣಿಯಲ್ಲಿರುವ ಲೇಖಕರಲ್ಲಿ ಅವರದು ಎದ್ದು ಕಾಣುವ ಹೆಸರು. ಸಾಹಿತ್ಯ, ಇತಿಹಾಸ, ಸಂಗೀತ, ಪುರಾಣ ಎಲ್ಲದರಲ್ಲೂ ಅವರಿಗೆ ವಿಶೇಷ ಆಸ್ಥೆ. ಅವರು ಒಳ್ಳೆಯ ವಾಗ್ಮಿ. ನೇರ ನಡೆನುಡಿಗೆ ಹೆಸರಾಗಿರುವ ಡಾ. ಉಮಾರಾವ್ ಅವರು ದಕ್ಷ ಆಡಳಿತಗಾರರು, ಶಿಸ್ತಿನ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ 23-03-2024 ಮತ್ತು 24-03-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುವ ಎರಡು ದಿನಗಳ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭುವನೇಶ್ವರಿ ಹೆಗಡೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ. ಪ್ರಾಧ್ಯಾಪಕಿ, ಸಾಹಿತಿ, ಲೇಖಕಿ, ಹಾಸ್ಯ ಭಾಷಣಗಾರ್ತಿ, ಅಂಕಣಗಾರ್ತಿ ಹೀಗೆ ಕನ್ನಡ ಸಾರಸ್ವತ ಲೋಕದ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ಭುವನೇಶ್ವರಿ ಹೆಗಡೆ ಅವರ ಮುಡಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷತೆಯ ಸೇರ್ಪಡೆಯಾಗುತ್ತಿದೆ. ಕನ್ನಡದ ಪ್ರಮುಖ ಹಾಸ್ಯ ಲೇಖಕಿಯಾದ ಭುವನೇಶ್ವರಿ ಹೆಗಡೆ ಬಹುಮುಖ ಸಾಧಕಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಕರ್ನಾಟಕ ರಾಜ್ಯ…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 4ನೇ ದಿನದ ಕಾರ್ಯಕ್ರಮವು ದಿನಾಂಕ 28-02-2024ರಂದು ನಡೆಯಿತು. ಈ ದಿನದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ ಅವರು ಮಾತನಾಡಿ “ಕಲಾಪ್ರಕಾರಗಳಲ್ಲಿ ನಾಟಕವೇ ಶ್ರೇಷ್ಠವಾದುದು. ಪ್ರೇಕ್ಷಕನಿಗೆ ಬೇಕಾದ ಎಲ್ಲವೂ ನಾಟಕ ಒಳಗೊಂಡಿರುತ್ತದೆ. ಕೊಡವೂರಿನಲ್ಲಿ ಹಿಂದೆ ಶಂಕರನಾರಾಯಣ ನಾಟಕ ಮಂಡಳಿ ಇತ್ತು. ಬಳಿಕ ಅದು ನಿಂತು ಹೋಯಿತು. ಕೊಡವೂರು ಯಕ್ಷಗಾನ ಕಲೆಗೆ ಪ್ರಸಿದ್ಧವಾಗಿತ್ತು. ಈಗ ಸುಮನಸಾ ಕೊಡವೂರು ಸಂಸ್ಥೆಯಿಂದಾಗಿ ನಾಟಕ ರಂಗದಲ್ಲಿಯೂ ಹೆಸರುವಾಸಿಯಾಗುತ್ತಿದೆ. ಕಲಾ ಪ್ರದರ್ಶನಗಳನ್ನು ನೋಡಲು ಹಿರಿಯರೇ ಹೆಚ್ಚಾಗಿ ಬರುತ್ತಾರೆ. ಮಕ್ಕಳು ಇರುವುದಿಲ್ಲ. ಆದರೆ ಇಲ್ಲಿ ಸಣ್ಣ ಮಕ್ಕಳನ್ನೂ ತೊಡಗಿಸಿಕೊಂಡಿದ್ದಾರೆ. ಇದು ಇತರರಿಗೂ ಪ್ರೇರಣೆ. ಕಲಾ ವೇದಿಕೆ ಎಷ್ಟು ಮುಖ್ಯವೋ ಸುತ್ತಲ ಪರಿಸರವೂ ಅಷ್ಟೇ ಮುಖ್ಯ. ಈ ಬಯಲು ರಂಗಮಂದಿರದಲ್ಲಿ ಪರಿಸರವನ್ನು ಉಳಿಸಿಕೊಂಡೇ ರಂಗಪ್ರದರ್ಶನಗಳು ನಡೆಯುತ್ತಿವೆ. ತೆರೆದ…
ಕೊಪ್ಪಳ : ಧಾರವಾಡದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದಲ್ಲಿ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳ 110ನೇ ಜನ್ಮದಿನದ ಅಂಗವಾಗಿ ಸಂಗೀತೋತ್ಸವ ಹಾಗೂ ‘ಪುಟ್ಟರಾಜ ಸಮ್ಮಾನ-2024’ ಪ್ರದಾನ ಸಮಾರಂಭವು ದಿನಾಂಕ 03-03-2024ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಜ್ಯುನಿಯರ್ ಕಾಲೇಜಿನ ಆವರಣ ಹತ್ತಿರ, ಐ.ಎಂ.ಎ. ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭವು ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಚಾಲಕರಾದ ಪರಮಪೂಜ್ಯ ಶ್ರೀ ಡಾ. ಕಲ್ಲಯ್ಯಜ್ಜನವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಗಂಗಾವತಿ ವಿಧಾನ ಸಭೆಯ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅಧ್ಯಕ್ಷತೆಯಲ್ಲಿ ಮಾನ್ಯ ಸಚಿವರಾದ ಶ್ರೀ ಶಿವರಾಜ ತಂಗಡಗಿಯವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯ ದೇವರಹೊಸಪೇಟೆಯ ಶ್ರೀ ಮಂಜುನಾಥ ಭಜಂತ್ರಿ ಇವರಿಂದ ಶಹನಾಯಿ ವಾದನ ನಡೆಯಲಿದೆ. ಇವರಿಗೆ ಹುಬ್ಬಳ್ಳಿ ಶ್ರೀ ಆಂಜನೇಯ ಭಜಂತ್ರಿ ತಬಲಾ ಸಾಥ್ ನೀಡಲಿದ್ದಾರೆ. ಪಂಡಿತ ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಇವರ ಗಾಯನಕ್ಕೆ ಸಂವಾದಿನಿಯಲ್ಲಿ ಶ್ರೀ…