Subscribe to Updates
Get the latest creative news from FooBar about art, design and business.
Author: roovari
ಕೊಪ್ಪಳ : ಮೈಸೂರು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ವಿಸ್ತಾರ್ ರಂಗ ಶಾಲೆ ಕೊಪ್ಪಳ (ಪರಿವರ್ತನಾತ್ಮಕ ರಂಗಭೂಮಿ) ಇವರ ವತಿಯಿಂದ ಒಂದು ವರ್ಷದ ನಾಟಕ ಡಿಪ್ಲೋಮಾ ಕೋರ್ಸ್ಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಯಶಸ್ವಿಯಾಗಿ 4 ಬ್ಯಾಚುಗಳನ್ನು ಪೂರೈಸಿದ್ದು, ಈಗ 5ನೇ ಬ್ಯಾಚ್ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-07-2024. ಕೋರ್ಸ್ನ ವೈಶಿಷ್ಟ್ಯತೆಗಳು * ದೇಶದ ಅನುಭವಿ ರಂಗಶಿಕ್ಷಕರಿಂದ ತರಬೇತಿ. * ಪ್ರಾಯೋಗಿಕ ಮತ್ತು ಸೈದ್ಧಾಂತಿಕ ತರಬೇತಿಗಳು. * ನಟನೆ, ನಿರ್ದೇಶನ, ಕ್ರಿಯಾತ್ಮಕ ಬರವಣಿಗೆ, ಜಾನಪದ ರೂಪಗಳು, ಕಳರಿಪಟ್ಟು ಇತ್ಯಾದಿ. * ಲಿಂಗ ಹಾಗೂ ಸಾಮಾಜಿಕ ವಿಶ್ಲೇಷಣೆ. * ಪ್ರಸಾಧನ, ರಂಗಸಜ್ಜಿಕೆ, ಬೆಳಕು, ಪರಿಕರ, ವಸ್ತ್ರ ವಿನ್ಯಾಸದ ತರಗತಿಗಳು. * ಜನಪದ ಕಲಾಪ್ರಕಾರಗಳ ಅಲ್ಪಾವಧಿ ಕೋರ್ಸುಗಳು. * ಮೂರು ಪ್ರಾಯೋಗಿಕ ನಾಟಕಗಳು. ಹೆಚ್ಚಿನ ಮಾಹಿತಿಗಾಗಿ ವಿಳಾಸ : ವಿಸ್ತಾರ್-ಬಾಂಧವಿ, ಹೊನ್ನುಣಸಿ ಕ್ರಸ್, ಚಿಕ್ಕ ಬೀಡನಾಳ, ಹಿರೇಬಿಡನಾಳ ಅಂಚೆ, ಕುಕನೂರ ತಾಲೂಕು, ಕೊಪ್ಪಳಜಿಲ್ಲೆ-583230 9535383161,…
ಮಂಗಳೂರು : ವಿಜಯ ಕರ್ನಾಟಕ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನವು ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣ ಆಯೋಜಿಸಿದೆ. ಸಂಗೀತ ಪ್ರಿಯರ ಬಹುನಿರೀಕ್ಷಿತ, ಕಳೆದ ಐದು ಆವೃತ್ತಿಗಳಲ್ಲಿ ಯಶಸ್ವಿಯಾಗಿದ್ದ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮವು ಮಂಗಳೂರು ಪುರಭವನದಲ್ಲಿ ದಿನಾಂಕ 21-07-2024ರಂದು ಸಂಜೆ ಗಂಟೆ 5-00ರಿಂದ ನಡೆಯಲಿದೆ. ಹಿರಿಯ ದಿಗ್ಗಜ ಕಲಾವಿದೆ ಸಂಗೀತ ಕಟ್ಟಿ ಕುಲಕರ್ಣಿ ಮತ್ತು ಜೀ ಮರಾಠಿ ಸರಿಗಮಪ ಸಂಗೀತ ಸ್ಪರ್ಧೆಯ ಫೈನಲಿಸ್ಟ್ ಮುಗ್ಧ ವೈಶಂಪಾಯನ ಹಾಗೂ ಪ್ರಥಮೇಶ ಲಘಾಟೆ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 2018, 2019, 2021, 2022 ಮತ್ತು 2023ರ ಆವೃತ್ತಿಗಳು ನಗರದ ಪುರಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ‘ಬೋಲಾವ ವಿಠಲ’ ಕಾರ್ಯಕ್ರಮ ನಡೆದಿತ್ತು. ಸುಮಾರು ಮೂರೂವರೆ ಗಂಟೆಗಳ ಕಾಲ ಕಲಾವಿದರು ಕಲಾರಸಿಕರಿಗೆ ಸಂಗೀತದ ರಸದೌತಣ ಉಣಬಡಿಸಿದ್ದರು. ಇದೀಗ ಮತ್ತೊಮ್ಮೆ ಅಂತಹುದೇ ಶ್ರೇಷ್ಠ ಮಟ್ಟದ ಸಂಗೀತಕ್ಕಾಗಿ ವೇದಿಕೆ ಸಿದ್ಧವಾಗಿದೆ. ಅದೇ ಕಾರ್ಯಕ್ರಮ, ಅದೇ ಪರಿಕಲ್ಪನೆ, ಅದೇ ಉದ್ದೇಶ. ಆದರೆ…
ಮಂಗಳೂರು : ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯವು ಈ ಸಾಲಿನ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯದ ಲಿಖಿತ ಪರೀಕ್ಷೆಗಳನ್ನು ದಿನಾಂಕ 27-07-2024 ಮತ್ತು 28-07-2024ರಂದು ರಾಜ್ಯದ 18 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದೆ. ದಿನಾಂಕ 27-07-2024ರಂದು ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ, ನೃತ್ಯದಲ್ಲಿ ಜೂನಿಯರ್ ವಿಭಾಗದ ‘ಶಾಸ್ತ್ರ ಪತ್ರಿಕೆ’ ಪರೀಕ್ಷೆ ಮಧ್ಯಾಹ್ನ 1ರಿಂದ 3-30ರವರೆಗೆ ನಡೆಯಲಿದೆ. ‘ಶ್ರವಣ ಜ್ಞಾನ/ ದೃಶ್ಯ ಜ್ಞಾನ’ ವಿಷಯದ ಪರೀಕ್ಷೆ ಸಂಜೆ 4ರಿಂದ 4.30ರವರೆಗೆ ನಡೆಯಲಿದೆ. ದಿನಾಂಕ 28-07-2024ರಂದು ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ, ನೃತ್ಯದಲ್ಲಿ ‘ಶಾಸ್ತ್ರಪತ್ರಿಕೆ- 1’ ಸೀನಿಯರ್ ವಿದ್ವತ್ ಪೂರ್ವ ಮತ್ತು ಅಂತಿಮ ಪರೀಕ್ಷೆಗಳು ಬೆಳಗ್ಗೆ ಗಂಟೆ 10-00ರಿಂದ ಮಧ್ಯಾಹ್ನ 12-30, ‘ಶಾಸ್ತ್ರ ಪತ್ರಿಕೆ- 2’ ಪರೀಕ್ಷೆಗಳು ಮಧ್ಯಾಹ್ನ ಗಂಟೆ 1-30ರಿಂದ 4-00 ಗಂಟೆಯವರೆಗೆ ನಡೆಯಲಿದೆ. ಕರಾವಳಿಯ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಬಲ್ಮಠ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ…
ಬೆಂಗಳೂರು : ಜಂಗಮ ಕಲೆಕ್ಟಿವ್ ಬೆಂಗಳೂರು, ನಿರ್ದಿಗಂತ ಮತ್ತು ಪಿ.ಆರ್.ಎಫ್. ಇವರ ಸಹಯೋಗದಲ್ಲಿ ‘ಬಾಬ್ ಮಾರ್ಲಿ From Kodihalli’ ನಾಟಕ ಪ್ರದರ್ಶನವು ದಿನಾಂಕ 20-07-2024ರಂದು ರಂಗಶಂಕರದಲ್ಲಿ ನಡೆಯಲಿದೆ. ಪಠ್ಯ ಆಕರ : ಎನ್.ಕೆ. ಹನುಮಂತಯ್ಯ, ಚಂದ್ರಶೇಕರ್ ಕೆ., ರಚನೆ, ವಿನ್ಯಾಸ, ನಿರ್ದೇಶನ : ಲಕ್ಷ್ಮಣ್ ಕೆ.ಪಿ. ಮತ್ತು ಡ್ರಮಟರ್ಗ್ : ವಿ.ಎಲ್. ನರಸಿಂಹಮೂರ್ತಿ. ಪ್ರದರ್ಶನ ಪಠ್ಯ ವಿನ್ಯಾಸ ಹಾಗೂ ನಟನೆ ಮರಿಯಮ್ಮ ಚೂಡಿ, ಚಂದ್ರ ಶೇಕರ್ ಕೆ., ಶ್ವೇತಾರಾಣಿ ಹೆಚ್. ಕೆ. ಭರತ್ ಡಿಂಗ್ರಿ ಇವರಿಂದ ಮಂಜು ನಾರಾಯಣ್ ಬೆಳಕಿನ ವಿನ್ಯಾಸ ಮಾಡಿದ್ದಾರೆ. ‘ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ ‘ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ಸಂಭ್ರಮ…
ಉಡುಪಿ : ‘ಹಮ್’ – ಯು.ಎನ್. ಉಮೆನ್.ಲೀಡ್ ಆಧರಿಸಿದ, ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಯು.ಎನ್. ಉಮೆನ್ ಇಂಡಿಯಾ ನಿರ್ಮಿಸಿದ ಈ ಪುಸ್ತಕದಲ್ಲಿ ಭಾರತೀಯ ಮಹಿಳಾ ಪರಿವರ್ತಕ ನಾಯಕತ್ವದ ಕುರಿತಾದ 75 ಕಥೆಗಳ ಸಂಕಲನವನ್ನು ಒಳಗೊಂಡಿದೆ. ಮಹಿಳಾ ನಾಯಕರನ್ನು ಗೌರವಿಸಲು ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. U.N. Women Asia-Pacific leading from the front ಇದರ ‘ಹಮ್’ ಎಂಬ ಕಥಾ ಸಂಗ್ರಹವನ್ನು ಹೊಂದಿದೆ. ಇದು ಭಾರತದಲ್ಲಿ ಮಹಿಳೇಯರ ನೇತೃತ್ವದ ಅಭಿವೃದ್ಧಿಯ ವಿಷಯ-ಕಥೆಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿ ಕರ್ನಾಟಕದಿಂದ ಯಕ್ಷ ಗುರು ಪ್ರಿಯಾಂಕ ಕೆ. ಮೋಹನ್ ಅವರ ಕೆಲಸದ ಬಗ್ಗೆ, ಅವರ ಅಭಿಪ್ರಾಯ ಒಳಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಪರಿವರ್ತನಾಶೀಲ ನಾಯಕತ್ವದ ಶಕ್ತಿಗೆ ಪ್ರಿಯಾಂಕ ಅವರ ಪ್ರಯಾಣ ಸಾಕ್ಷಿಯಾಗಿದೆ. ಸಂಪ್ರದಾಯವನ್ನು ನಾವೀನ್ಯತೆಯೊಂದಿಗೆ ಸಂಯೋಜಿಸುವ, ಲಿಂಗ ಸ್ಟೀರಿಯೊ ಟೈಪ್ಗಳಿಗೆ ಸವಾಲು ಹಾಕುವ ಮತ್ತು ಯುವ ಕಲಾವಿದರನ್ನು ಪ್ರೇರೇಪಿಸುವ ಮತ್ತು ಸಬಲಗೊಳಿಸುವ ಅವರ ಸಾಮರ್ಥ್ಯವು ಯಕ್ಷಗಾನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಮತ್ತು ವಿಕಸನಗೊಳಿಸುವಲ್ಲಿ…
ಬೆಂಗಳೂರು : ಇತ್ತೀಚೆಗೆ ನಿಧನರಾದ ಸಾಹಿತಿ ಕಮಲಾ ಹಂಪನಾ ಇವರಿಗೆ ‘ನುಡಿ ಗೌರವ’ ಕಾರ್ಯಕ್ರಮವು ದಿನಾಂಕ 12-07-2024 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಶ್ರೀಕೃಷ್ಣರಾಜ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕಮಲಾ ಹಂಪನಾ ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದಲ್ಲಿ ಒಂದು ಯುಗದ ಮುಕ್ತಾಯವಾಗಿದೆ ಎಂದರೆ ತಪ್ಪಾಗದು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಷ್ಟು ದೊಡ್ಡದು. ಅವರ ಅಗಲುವಿಕೆಯಿಂದ ಮನೆಯ ಹಿರಿಯರನ್ನು ಕಳೆದುಕೊಂಡ ತಬ್ಬಲಿ ಭಾವವನ್ನು ಅನುಭವಿಸುತ್ತಿದ್ದೇನೆ. ಪತಿ ಡಾ. ಹಂಪನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಮೊದಲಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದ ಡಾ. ಕಮಲಾ ಹಂಪನಾ ಮೂಡಬಿದರೆಯಲ್ಲಿ ನಡೆದ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನ, ಲೇಖಕಿಯರ ಸಮ್ಮೇಳನ, ಅತ್ತಿಮಬ್ಬೆ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಹೀಗೆ ಹಲವು ಪ್ರಮುಖ ಸಮ್ಮೇಳನಗಳ…
ಬೆಂಗಳೂರು : ಶ್ರೀ ಚೆನ್ನಕೇಶವ ಸಾಂಸ್ಕೃತಿಕ ಸಂಘ (ರಿ.) ಇದರ ವಾರ್ಷಿಕೋತ್ಸವದ ಅಂಗವಾಗಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆಯು ದಿನಾಂಕ 14-07-2024ರಂದು ಮಧ್ಯಾಹ್ನ 3-30 ಗಂಟೆಗೆ ದೊಡ್ಡಕಲ್ಲಸಂದ್ರ ಮೆಟ್ರೊ ಬಳಿಯಿರುವ ಶಂಕರ ಫೌಂಡೇಷನ್ – ಢಮರು ಆಡಿಟೋರಿಯಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಹೆಚ್ಚಿನ ಮಾಹಿತಿಗಾಗಿ 7676330365ಗೆ ಕರೆ ಮಾಡಿ.
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 15-07-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಗೌತಮಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಾಘವೇಂದ್ರ ಸೋಮಯಾಜಿ ಮತ್ತು ಅನುರಾಧಾ ಸೋಮಯಾಜಿ ಇವರ ಸುಪುತ್ರಿಯಾಗಿರುವ ಗೌತಮಿ ಎಂ. ಸೋಮಯಾಜಿ ಇವರು 2013ರಿಂದ ವಿದುಷಿ ಮಾನಸಿ ಸುಧೀರ್ ಇವರಲ್ಲಿ ನೃತ್ಯಾಭ್ಯಾಸ ಆರಂಭಿಸಿದ್ದು, ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಇವರ ಮಾರ್ಗದರ್ಶನದಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ವಿದ್ವತ್ ಪಾಠಗಳನ್ನು ಕಲಿಯುತ್ತಿದ್ದಾರೆ. ಗುರು ಶ್ರೀ ನಾಗರಾಜ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ಸಂಗೀತ ತರಗತಿಯ ಜೂನಿಯರ್ ಮುಗಿಸಿ, ಸೀನಿಯರ್ ವಿಭಾಗದಲ್ಲಿ ಕಲಿಯುತ್ತಿದ್ದು, ಯಕ್ಷಗಾನ ಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಕಾಸರಗೋಡು : ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಈ ವರ್ಷದ ನಾಟ್ಯ ತರಗತಿ ಮತ್ತು ಹೊಸದಾಗಿ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಯಕ್ಷರಂಗದ ಖ್ಯಾತ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಇವರು ದಿನಾಂಕ 06-07-2024ರಂದು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನದ ಮಹತ್ವದ ಕುರಿತು ವಿಸ್ತಾರವಾಗಿ ನುಡಿದರು. ತರಬೇತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಕೆ.ಎನ್. ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಹಿಮ್ಮೇಳ ಗುರುಗಳಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಘವ ಬಲ್ಲಾಳ್ ಕಾರಡ್ಕ, ನಾಟ್ಯ ಗುರುಗಳಾದ ರಾಕೇಶ್ ರೈ ಅಡ್ಕ, ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಕಲಾ ಸಂಘದ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ನಾಟ್ಯ ತರಬೇತಿ ಉಚಿತವಾಗಿ ನೀಡುತ್ತಿದ್ದು, ಹಿಮ್ಮೇಳ ತರಗತಿಗೆ ಸಣ್ಣ ಶುಲ್ಕವನ್ನಿರಿಸಿ ತರಬೇತಿ ನೀಡಲಾಗುವುದು. ರಾಮಕೃಷ್ಣ ಹೊಳ್ಳ ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು.
ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಗುರುಕುಲ ಕಲಾ ಪ್ರತಿಷ್ಠಾನ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಕಾರದೊಂದಿಗೆ, ಪುತ್ತೂರಿನ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ, ಮುಂಗಾರು ಕವಿಗೋಷ್ಠಿ (ಕವಿತೆಯೊಂದಿಗೆ ಪುಷ್ಪವೃಷ್ಠಿ) ಕಾರ್ಯಕ್ರಮವು ದಿನಾಂಕ 17-07-2024ರಂದು ಪುತ್ತೂರಿನ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಹೋಟೆಲ್ ಸ್ವಾಗತ್ ಒಂದನೇ ಮಹಡಿಯಲ್ಲಿ ನಡೆಯಲಿದೆ. ಪುತ್ತೂರು ತಾಲೂಕು ಕ.ಸಾ.ಪ.ದ ಡಾ. ಹರ್ಷ ಕುಮಾರ್ ರೈ ಮಾಡಾವು ಇವರ ಅಧ್ಯಕ್ಷತೆಯಲ್ಲಿ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಪ್ರಪುಲ್ಲ ಗಣೇಶ್ ಇವರು ಉದ್ಘಾಟನೆ ಮಾಡಲಿದ್ದಾರೆ. ಗುರುಕುಲ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿರುವರು.