Author: roovari

ಕೀನ್ಯಾದ ಪ್ರಸಿದ್ಧ ಲೇಖಕ, ಆಫ್ರಿಕಾದ ಸಾಹಿತ್ಯ ದಿಗ್ಗಜ, ವಿಶೇಷವಾಗಿ ತಮ್ಮ ಸ್ಥಳೀಯ ಗಿಕುಯು ಭಾಷೆಯಲ್ಲಿ ಬರೆಯುತ್ತಿದ್ದ ಕೆಲವೇ ಲೇಖಕರಲ್ಲಿ ಒಬ್ಬರಾಗಿದ್ದ ಗೂಗಿ ವಾ ಥಿಯಾಂಗೋ ತಮ್ಮ 87ನೇ ವಯಸ್ಸಿನಲ್ಲಿ ಅಮೆರಿಕದ ಅಟ್ಲಾಂಟಾದಲ್ಲಿ ನಿಧನರಾಗಿದ್ದಾರೆ. ಇವರು ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು. ಅವರನ್ನು ಪೂರ್ವ ಆಫ್ರಿಕಾದ ಪ್ರಮುಖ ಕಾದಂಬರಿಕಾರ ಎಂದು ಪರಿಗಣಿಸಲಾಗಿದೆ. ಅವರ ಜನಪ್ರಿಯ ‘ವೀಪ್ ನಾಟ್- ಚೈಲ್ಡ್ (1964) ಪೂರ್ವ ಆಫ್ರಿಕನ್ ಒಬ್ಬರಿಂದ ಇಂಗ್ಲೀಷ್‌ನಲ್ಲಿ ಪ್ರಕಟವಾದ ಮೊದಲ ಪ್ರಮುಖ ಕಾದಂಬರಿ. ಅವರ ಮುಖ್ಯವಾದ ಕಾದಂಬರಿಗಳೆಂದರೆ ‘ದಿ ರಿವರ್ ಬಿಟ್ವೀನ್’, ‘ಎ ಗ್ರೈನ್ ಆಫ್ ವೀಟ್’, ‘ಡೆವಿಲ್ ಆನ್ ದಿ ಕ್ರಾಸ್’, ‘ವಿಜಾರ್ಡ್ ಆಫ್ ದಿ ಕ್ರೊ’. ಇವಲ್ಲದೆ ನಾಟಕ, ಸಾಹಿತ್ಯ, ಸಂಸ್ಕೃತಿ, ರಾಜಕೀಯ ಸ್ವರೂಪದ ಬಗ್ಗೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದು, ಕೆಲವು ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ. ಥಿಯಾಂಗೋ ಅವರ ಬಹುತೇಕ ಬರವಣಿಗೆಗಳು ಆಫ್ರಿಕಾದ ವಸಾಹತುಶಾಹಿ ಇತಿಹಾಸದ ವಿಷಾದಕರ ಪರಂಪರೆಯ ಕುರಿತು ಗಂಭೀರವಾಗಿ ಚರ್ಚಿಸುತ್ತವೆ. 1977ರಲ್ಲಿ…

Read More

ಬೆಳ್ತಂಗಡಿ : ಕರುಂಬಿತ್ತಿಲ್ ವಿದ್ವಾನ್ ವಿಠಲ ರಾಮಮೂರ್ತಿ ಇವರ ಮನೆಯಲ್ಲಿ ಆರು ದಿನಗಳ ಕಾಲ ನಡೆದ ‘ಕರುಂಬಿತ್ತಿಲ್ ಸಂಗೀತ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 25 ಮೇ 2025ರಂದು ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಸಿದ್ದ ಗಾಯಕ ವಿದ್ಯಾಭೂಷಣ ಇವರು ಮಾತನಾಡಿ “ಸಂಗೀತದ ವಿದ್ಯಾರ್ಥಿಗಳು ಜತೆಯಾಗಿ ಸೇರಿ ಗುರುಕುಲ ಮಾದರಿಯಲ್ಲಿ ಕಲಿಯುವುದರಿಂದ ತಮ್ಮ ಕಲಿಕೆಯನ್ನು ಇನ್ನಷ್ಟು ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ. ಗುರುಗಳು ಕಲಿಸಿದ ಪಾಠ, ವಿದ್ಯಾರ್ಥಿಗಳ ಶ್ರಮ, ಅವರ ಸಮರ್ಪಣಾ ಮನೋಭಾವ ಮತ್ತು ದೇವಾನುಗ್ರಹದೊಂದಿಗೆ ವಿದ್ಯೆಯೆನ್ನುವುದು ಒಬ್ಬ ವ್ಯಕ್ತಿಗೆ ಒಲಿದು ಬರುತ್ತದೆ. ಆದ್ದರಿಂದ ಅವರಿಗೆ ವಿದ್ಯೆಯನ್ನು ಹೇಳಿಕೊಡುವುದಷ್ಟೇ ಅಲ್ಲದೆ ಪೂರಕವಾದ ಮತ್ತು ಪ್ರೇರಕವಾದ ವಾತಾವರಣವನ್ನು ಒದಗಿಸಿಕೊಡುವ ಕೆಲಸವನ್ನು ಗುರುಗಳಾದ ವಿಠಲ ರಾಮಮೂರ್ತಿಯವರು ನಿರಂತರವಾಗಿ ಮಾಡುತ್ತಿದ್ದಾರೆ” ಎಂದು ಹೇಳಿದರು. ಕರುಂಬಿತ್ತಿಲ್ ಸಂಗೀತ ಶಿಬಿರದ ಆಯೋಜಕರಾದ ವಿದ್ವಾನ್ ವಿಠಲ ರಾಮಮೂರ್ತಿ ಮಾತನಾಡಿ “ಸಣ್ಣ ಮಟ್ಟಿನಲ್ಲಿ ಆರಂಭವಾದ ಕರುಂಬಿತ್ತಿಲ್ ಸಂಗೀತ ಶಿಬಿರ ಇಂದು ಹಂತ ಹಂತವಾಗಿ ಬೆಳೆದು 25 ವರ್ಷಗಳನ್ನು ಪೂರೈಸಿದೆ. ಶಿಬಿರ ನಿಡ್ಲೆಯ ಗ್ರಾಮೀಣ…

Read More

ಮೈಸೂರು : ಧೀಮಹಿ ಥಿಯೇಟರ್ ಅರ್ಪಿಸುವ ಕಾರ್ತಿಕ್ ಹೆಬ್ಬಾರ್ ರಚನೆ, ಸಂಗೀತ ಮತ್ತು ನಿರ್ದೇಶನದಲ್ಲಿ ‘#36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 01 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9742119911 ಸಂಖ್ಯೆಯನ್ನು ಸಂಪರ್ಕಿಸಿರಿ. ‘36 ಸತಿ ಸಾವಿತ್ರಿ ನಿವಾಸ’ ನಾಟಕವು ಮೂವರು ಮಧ್ಯಮ ವರ್ಗದ ಮಹಿಳೆಯರ ಸಾಮಾನ್ಯ ಕಥೆ. ಈ ಮೂವರು ಮಹಿಳೆಯರ ಜೀವನದಲ್ಲಿ ಪ್ರಶ್ನೆಯಾಗಿ ಬರುವಂತಹ ಒಂದು ವಿಶೇಷ ಸನ್ನಿವೇಶವನ್ನು ಅವರು ಎದುರಿಸುವ ಬಗೆ ಹಾಗೂ ತನ್ಮೂಲಕ ಕಂಡುಕೊಳ್ಳುವ ಹೊಸ ಅರ್ಥಗಳ, ಸ್ನೇಹದ ಹಾಗೂ ಮೈತ್ರಿಯ ಕಥೆಯನ್ನು ಈ ನಾಟಕ ಹಿಡಿದಿಡುತ್ತದೆ. ಈ ನಾಟಕ ಮಹಿಳೆಯರ ಜೀವನೋತ್ಸಾಹ, ಸಿಸ್ಟರ್ಹುಡ್ (ಭಗಿನಿ ಬಂಧುತ್ವ), ಮುಪ್ಪು, ಒಂಟಿತನ ಮುಂತಾದ ಎಲ್ಲಾ ಭಾವಗಳ ಒಂದು ಕಾಮನಬಿಲ್ಲಾಗಿ ನಿಲ್ಲುತ್ತದೆ. ಮಧ್ಯಮ ವರ್ಗದ ಒಂದು ಕಟ್ಟಡದಲ್ಲಿ ವಾಸವಾಗಿರುವ ಮಹಿಳೆಯರ ಜೀವನಕ್ಕೆ ಇದ್ದಕ್ಕಿದ್ದಂತೆ ಪ್ರವೇಶ ಮಾಡುವ ಒಂದು ವಿಶೇಷ ವ್ಯಕ್ತಿಯಿಂದಾಗಿ ಅವರ ಜೀವನದಲ್ಲಾಗುವ ಪರಿವರ್ತನೆ…

Read More

ಬೆಂಗಳೂರು : ಕನ್ನಡದ ಗೀತ ಸಾಹಿತಿ, ಸಾಹಿತಿ, ಕವಿ, ಕಥೆಗಾರ, ಸಂಭಾಷಣಕಾರ ಎಚ್. ಎಸ್. ವೆಂಕಟೇಶಮೂರ್ತಿ ದಿನಾಂಕ 30 ಮೇ 2025ರ ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. 1944ರ ಜೂನ್ 23ರಂದು ವೆಂಕಟೇಶಮೂರ್ತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರದ್ದು ಮಧ್ಯಮವರ್ಗದ ಕುಟುಂಬ. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕ ಆದರು. 2000ರಲ್ಲಿ ಅವರು ನಿವೃತ್ತಿ ಹೊಂದಿದರು. ಆ ಬಳಿಕವೂ ಬೆಂಗಳೂರನಲ್ಲೇ ನೆಲಿಸಿದ್ದ ಅವರು, ಬರಹ ಕೃಷಿಯಲ್ಲಿ ತೊಡಗಿಕೊಂಡಿದ್ದರು. ವೆಂಕಟೇಶಮೂರ್ತಿ ಅವರಿಗೆ ಬಣ್ಣದ ಲೋಕದ ಮೇಲೆ ಒಲವು ಮೂಡಲು ಕಾರಣ ಆಗಿದ್ದು ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು. ಅವರು ಬಾಲ್ಯದಲ್ಲಿ ಇದ್ದಾಗ ಸಾಕಷ್ಟು ಕೃತಿಗಳನ್ನು ಅವರು ಓದುತ್ತಿದ್ದರು. ಅವರು ಕವಿಯಾಗಿ,…

Read More

ಹೆಗ್ಗೋಡು : ನೀನಾಸಮ್ ರಂಗ ಶಿಕ್ಷಣ ಕೇಂದ್ರ ಹೆಗ್ಗೋಡು ಇದರ 2025ನೇ ಸಾಲಿನ ಬೇಸಿಗೆ ರಂಗ ಶಿಬಿರದ ವಿದ್ಯಾರ್ಥಿಗಳು ಅರ್ಪಿಸುವ ಮೋಹನ್ ರಾಕೇಶ್ ಇವರ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನವನ್ನು ದಿನಾಂಕ 31 ಮೇ 2025ರಂದು ಸಂಜೆ 7-00 ಗಂಟೆಗೆ ನೀನಾಸಮ್ ಸಭಾಭವನ ಮತ್ತು ಶಿವರಾಮ ಕಾರಂತ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ತಂಡ 1ಕ್ಕೆ ಶ್ವೇತ ಶ್ರೀನಿವಾಸ್ ಮತ್ತು ತಂಡ 2ಕ್ಕೆ ಅಜಯ್ ನೀನಾಸಮ್ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.

Read More

ಬೆಂಗಳೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಇದರ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ‘ಅಂತರ್ಜಾಲ ಆಧಾರಿತ ಅಂತರ್ರಾಜ್ಯಮಟ್ಟದ ಚಿತ್ರ ಕಾವ್ಯ ರಚನೆ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಕವಿಗಳು ದಿನಾಂಕ 30 ಮೇ 2025ರಂದು ಸಂಜೆ 05 ಗಂಟೆಯೊಳಗೆ ತಮ್ಮ ಹೆಸರನ್ನು ಈ ಕೆಳಗಿನ ಸಂಪರ್ಕ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ನೋಂದಾಯಿಸಿಕೊಳ್ಳಬಹುದು. ದಿನಾಂಕ 01 ಜೂನ್ 2025ರಂದು ಬೆಳಿಗ್ಗೆ 08ರಿಂದ ರಾತ್ರಿ 08ರವರೆಗೆ ದತ್ತ ಚಿತ್ರಕ್ಕೆ ಸಂಬಂಧಿಸಿದ ಕವಿತೆಗಳನ್ನು ಈ ಕೆಳಕಂಡ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ಕಳುಹಿಸಿಕೊಡಬೇಕು. ಲತಾಮಣಿ ಎಂ.ಕೆ. ತುರುವೇಕೆರೆ – ಅಧ್ಯಕ್ಷರು : 8904095119 ಶಿಲ್ಪಾ ಎನ್‌. – ಕಾರ್ಯದರ್ಶಿ : 7975168956. ದಿನಾಂಕ 05 ಜೂನ್ 2025ರಂದು ಸಂಜೆ 07-30 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಸ್ಪರ್ಧೆಗೆ ಕಳುಹಿಸಿದ ಕವಿತೆಗಳನ್ನು ಹಿರಿಯ ಅನುಭವಿ ಕವಿಗಳಿಂದ ಮೌಲ್ಯಮಾಪನ ಮಾಡಿಸಲಾಗುವುದು. ಆಯ್ಕೆಯಾದ ಪ್ರಥಮ, ದ್ವಿತೀಯ, ತೃತೀಯ ಹಾಗೂ ಅತ್ಯುತ್ತಮ, ಉತ್ತಮ…

Read More

ಬೆಂಗಳೂರು : ಡ್ರಾಮಾಟ್ರಿಕ್ಸ್ ಬೆಂಗಳೂರು ಪ್ರಸ್ತುತ ಪಡಿಸುವ ‘ಬೀಚಿ ರಸಾಯನ’ ನಾಟಕದ ಪ್ರದರ್ಶನವು ದಿನಾಂಕ 30 ಮೇ 2025ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ಬೀಚಿ ರಸಾಯನ : ಬದುಕಿನ ನಿತ್ಯ ಬಳಕೆಯಲ್ಲಿ ಜಡ್ಡುಗಟ್ಟಿಸಿಕೊಂಡ ಎಷ್ಟೊ ಪದಗಳಿಗೆ ಬೀಚಿಯವರು ಹೊಸ ಅರ್ಥ ದಕ್ಕಿಸಿಕೊಟ್ಟು ಒಂದು ಪದಕೋಶ ಸಿದ್ಧಮಾಡಿದರು. ಅದೇ ‘ತಿಮ್ಮ ರಸಾಯನ’ ಕೃತಿ. ಇಲ್ಲಿಂದ ಪದಗಳು ಮತ್ತು ಅವುಗಳಿರುವ ಹೊಸ ಅರ್ಥಗಳನ್ನ ಹೆಕ್ಕಿ ಪ್ರಸ್ತುತ ನಾಟಕವನ್ನ ಹೆಣೆಯಲಾಗಿದೆ. ಕಥಾವಸ್ತು ಸ್ವತಂತ್ರ, ಆದರೆ ಅದರ ಒಳಗಿನ ಪದ ಮತ್ತು ಅರ್ಥಗಳ ಜೀವಧಾತು ಬೀಚಿ ಅವರದು. ಭಕ್ತಿ ನಿಜವಾಗಿದ್ದರೆ ಸಾಲದು, ಅದು ಜಾತಿ ಸೋಂಕಿನಿಂದಲೂ ಮುಕ್ತವಾಗಿರಬೇಕು ಎಂಬುದನ್ನು ನಾಟಕೀಯವಾಗಿ ಹೇಳುವ ನಾಟಕ ಇದು. ಇಲ್ಲಿ ಭಕ್ತಿಯ ಪ್ರತೀಕವಾಗಿ ‘ಜಾನಕಮ್ಮ’ ಇದ್ದಾರೆ. ಹಾಗೇ ಎಲ್ಲಿ ಭಕ್ತಿಯ ಪರಾಕಾಷ್ಠತೆ ಇರುತ್ತದೆಯೋ ಅಲ್ಲಿ ವಸ್ತುನಿಷ್ಠ ಗ್ರಹಿಕೆಯೂ ಇರುತ್ತದೆ. ಗುರುಮೂರ್ತಿ ಈ ಪಾತ್ರದ ಸಂಕೇತ. ಈ ಭಕ್ತಿ ಮತ್ತು ವಸ್ತುನಿಷ್ಠತೆಗೆ ತನ್ನದೇ ಆದ ಗುಂಗು…

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ವಿಜ್ಞಾನ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದೆ. ಖ್ಯಾತ ವಿಜ್ಞಾನ ಲೇಖಕಿ ದಿವಂಗತ ಡಾ. ನಳಿನಿ ಮೂರ್ತಿ ಹೆಸರಿನಲ್ಲಿ ಅವರ ಪತಿ ಎಸ್. ನರಸಿಂಹ ಮೂರ್ತಿಯವರು ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದ್ದು, ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್. ಎಲ್. ಪುಷ್ಪ ತಿಳಿಸಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳು ಹಾಗೂ ವೈಜ್ಞಾನಿಕ ಕತೆ, ಕಾದಂಬರಿ ಹಾಗೂ ಸಂಕೀರ್ಣ (ವೈದ್ಯಕೀಯ/ ತಂತ್ರಜ್ಞಾನ/ ಕೃಷಿ ವಿಜ್ಞಾನ/ ಪರಿಸರ ವಿಜ್ಞಾನ)ಕ್ಕೆ ಸಂಬಂಧಿಸಿದ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದ್ದು, ಜನವರಿ 2024ರಿಂದ ಡಿಸೆಂಬರ್ 2024ರ ಅವಧಿಯಲ್ಲಿ ಪ್ರಕಟಗೊಂಡಿರಬೇಕು, ಕೃತಿಗಳು ಸ್ವತಂತ್ರವಾಗಿದ್ದು, ಅನುವಾದ ಕೃತಿಗಳನ್ನು ಪರಿಗಣಿಸುವುದಿಲ್ಲ. ಮೂರು ಪ್ರತಿಗಳನ್ನು, ಕರ್ನಾಟಕ ಲೇಖಕಿಯರ ಸಂಘ, ಫ್ಲಾಟ್ ನಂ, 206, ವಿಜಯ ಮಾನ್ಷನ್, 2ನೆಯ ಮಹಡಿ, 2ನೆಯ ಮುಖ್ಯರಸ್ತೆ, 2ನೆಯ ತಿರುವು, ಚಾಮರಾಜಪೇಟೆ, ಬೆಂಗಳೂರು – 560018 ಇಲ್ಲಿಗೆ…

Read More

ಸವಣೂರು : ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆಯು ದಿನಾಂಕ 25 ಮೇ 2025ರಂದು ಸವಣೂರಿನ ಪಿ. ಎಂ. ಶ್ರೀ ವೀರಮಂಗಲ ಶಾಲೆಯಲ್ಲಿ ನಡೆಯಿತು. ದಿ.ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ಹಾಗೂ ಸುಶ್ರಾವ್ಯ ಸ್ವರದ ಯಕ್ಷಗಾನ ಭಾಗವತರಾದ ಕು. ರಚನಾ ಚಿದ್ಗಲ್ ಇವರಿಗೆ ‘ಶ್ರವಣಸ್ವರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಯಾಗಿದ್ದುಕೊಂಡು ಯಕ್ಷಗಾನದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಸಮಾರಂಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ರವಿಚಂದ್ರ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಹರ್ಷಗುತ್ತು, ಎಸ್. ಡಿ. ಎಂ. ಸಿ. ಸದಸ್ಯರಾದ ರಮೇಶ್ ಗೌಡ, ಹರೀಶ್, ಆನಂದ ಗುತ್ತು, ಜಯಪ್ರಕಾಶ್, ಯಮುನಾ, ಶಿಕ್ಷಕಿ ಹೇಮಾವತಿ, ಯಕ್ಷಗಾನದ ವಿದ್ಯಾರ್ಥಿಗಳು, ಪೋಷಕರು, ಊರವರು ಪಾಲ್ಗೊಂಡರು. ಸಭಾ ಕಾರ್ಯಕ್ರಮದ ಬಳಿಕ ‘ಜಾಂಬವತಿ‌ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಕು. ರಚನಾ…

Read More

ಮಂಗಳೂರು: ಗಾನ ಗಂಧರ್ವ ಡಾ.ಎಸ್.ಪಿ. ಬಾಲ ಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ. ಜಿ. ಇವರಿಂದ 24 ಗಂಟೆಗಳ ಕಾಲ ನಿರರ್ಗಳವಾಗಿ ಗಾಯನ ಕಾರ್ಯಕ್ರಮ ‘ಬಾಲಗಾನ ಯಶೋಯಾನ’ ದಿನಾಂಕ 03 ಜೂನ್ 2025ರ ಮಧ್ಯಾಹ್ನ ಘಂಟೆ 3.00 ರಿಂದ 04 ಜೂನ್ 2025 ಮಧ್ಯಾಹ್ನ ಘಂಟೆ 3.00 ರವರೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ದಿನಾಂಕ 03 ಜೂನ್ 2025ರ ಮಧ್ಯಾಹ್ನ ಘಂಟೆ 1.30ಕ್ಕೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ವಿರಾಜಪೇಟೆಯ ಡಿವೈಎಸ್‌ಪಿ ಎಸ್‌. ಮಹೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಹಾಗೂ ನಾನಾ ಗಣ್ಯರು ಭಾಗವಹಿಸಲಿದ್ದಾರೆ. 04 ಜೂನ್ 2025ರಂದು ಮಧ್ಯಾಹ್ನ ಘಂಟೆ 3.00ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ನಾನಾ ಗಣ್ಯರು ಉಪಸ್ಥಿತರಿರುವರು ಎಂದು ಮನಪಾ ಮಾಜಿ ಸದಸ್ಯ ಹಾಗೂ ಗಾಯಕರಾದ ಜಗದೀಶ ಶೆಟ್ಟಿ ತಿಳಿಸಿದ್ದಾರೆ. ನಿರಂತರ ಗಾಯನದಲ್ಲಿ ಒಂದೊಂದು ಗಂಟೆಗೆ 5 ನಿಮಿಷಗಳ ವಿರಾಮ ಇರುತ್ತದೆ.…

Read More