Author: roovari

ಉಪ್ಪುಂದ : ಶ್ರೀ ಶ್ರೀನಿವಾಸ್ ಅಕ್ಕಿಅಂಗಡಿ ಸದ್ಭವನಾ ವೇದಿಕೆ ಚರ್ಚ್ ರೋಡ್ ಪಡುವರಿ ಬೈಂದೂರು ಮತ್ತು ಕುಂದ ಅಧ್ಯಯನ ಕೇಂದ್ರ (ರಿ.) ಶಂಕರ ಕಲಾ ಮಂದಿರ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ಸೀತಾ ಶ್ರೀನಿವಾಸ ಇವರ ಸ್ವರಚಿತ ಕವನ ಸಂಕಲನ ‘ಅಮ್ಮ ಹಚ್ಚಿದ ಹಣತೆ’ ಕೃತಿ ಅನಾವರಣವನ್ನು ದಿನಾಂಕ 21 ಫೆಬ್ರವರಿ 2025ರಂದು ಅಪರಾಹ್ನ 4-00 ಗಂಟೆಗೆ ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಪೂರ್ವಾಧ್ಯಕ್ಷರಾದ ಉಪ್ಪುಂದ ಚಂದ್ರಶೇಖರ ಹೊಳ್ಳ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಶ್ರೀಮತಿ ವರಮಹಾಲಕ್ಷ್ಮೀ ಹೊಳ್ಳ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀರಾಮ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಬಿಜೂರು ಇವರು ಕೃತಿ ಅನಾವರಣ ಮಾಡಲಿದ್ದು, ಕ.ಸಾ.ಪ. ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಅರುಣ ಕುಮಾರ್ ಇವರು ಶುಭಶಂಸನೆ ಮತ್ತು ಸಾಹಿತಿ ಮಂಜುನಾಥ ಮರವಂತೆ ಇವರು ಪುಸ್ತಕ ಪರಿಚಯ ಮಾಡಲಿದ್ದಾರೆ.

Read More

ಆತ್ಮವಿಶ್ವಾಸದ ದೃಢವಾದ ಹೆಜ್ಜೆಗಳಲ್ಲಿ ನಗುಮುಖದಿಂದ ವೇದಿಕೆ ಪ್ರವೇಶಿಸಿದ ನೃತ್ಯಗಾರ್ತಿ ಬಿದರಕೋಟಿಯ ಮೇಘಾಳ ನೃತ್ಯದ ಚೆಲುವು ಮೊದಲನೋಟದಲ್ಲೇ ಸೆಳೆಯಿತು. ಅಂದವಳ ವಿದ್ಯುಕ್ತ ರಂಗಪ್ರವೇಶ. ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಕಲಾಭಿಮಾನಿಗಳ ಸಮ್ಮುಖ ಅವಳು ನಿರೂಪಿಸಿದ ಎಲ್ಲ ದೈವೀಕ ಕೃತಿಗಳೂ ಕಣ್ಮನ ಸೆಳೆದವು, ಹೃದಯಸ್ಪರ್ಶಿಯಾಗಿದ್ದವು. ಹೆಸರಾಂತ ಅಂಜಲಿ ಇನ್ಸ್ಟಿಟ್ಯುಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಭರತನಾಟ್ಯ ಶಾಲೆಯ ನೃತ್ಯಗುರು ಡಾ. ಸ್ವರೂಪಲಕ್ಷ್ಮಿ ಕೃಷ್ಣಮೂರ್ತಿ ಇವರ ನುರಿತ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ಮೇಘಾ, ಗುರುಗಳ ಸುಮನೋಹರ ನೃತ್ಯ ಸಂಯೋಜನೆಯನ್ನು ಅಷ್ಟೇ ಮನಮೋಹಕವಾಗಿ ಸಾಕ್ಷಾತ್ಕರಿಸಿದಳು. ಶುಭಾರಂಭ- ಸಕಲ ದೇವಾನುದೇವತೆಗಳಿಗೆ, ಗುರು ಹಿರಿಯರಿಗೆ ಪುಷ್ಪಾಂಜಲಿ (ರಚನೆ- ಮಧುರೆ ಮುರಳೀಧರನ್, ರಾಗ- ಜೋಗ್, ಆದಿತಾಳ)ಯ ಮೂಲಕ ಸಲ್ಲಿಸಿದ ಹೊಸವಿನ್ಯಾಸದ ನೃತ್ತಗಳ ನಮನ ಸೊಗಸೆನಿಸಿತು. ತನ್ನ ಪದಾಘಾತವನ್ನು ಮನ್ನಿಸೆಂದು ಭೂದೇವಿಯನ್ನು ವಿನಮ್ರವಾಗಿ ಪ್ರಾರ್ಥಿಸಿದ ಕಲಾವಿದೆ, ನಂತರ ಆನಂದ ನರ್ತನ ಗಣಪತಿಯ ಆಶೀರ್ವಾದವನ್ನು ಬೇಡಿದ ವಿನಾಯಕ ಸ್ತುತಿ (ರಾಗ – ನಾಟೈ, ಆದಿತಾಳ) ಆತನ ಹಲವು ನಾಮಗಳ ಅರ್ಚನೆ ಮಾಡಿ, ಗುಣ-ಮಹಿಮೆಗಳನ್ನು ತನ್ನ ಸುಂದರ ಭಂಗಿ-ಅಭಿನಯಗಳಿಂದ,…

Read More

ಮಂಗಳೂರು : ಕೀರ್ತಿಶೇಷ ವರ್ಕಾಡಿ ಲಕ್ಷ್ಮೀನಾರಾಯಣ ಅಲೆವೂರಾಯರು ಯಕ್ಷರಂಗದಲ್ಲಿ ಸಂಘಟಕರಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ ಮೆರೆದವರು. ಈಗ ಅವರ ಹೆಸರಿನಲ್ಲಿ ಅಲೆವೂರಾಯ ಸಹೋದರರು ಅಲೆವೂರಾಯ ಪ್ರತಿಷ್ಠಾನದ ಹೆಸರಿನಲ್ಲಿ ‘ಯಕ್ಷತ್ರಿವೇಣಿ’ಯನ್ನು ನಡೆಸುತ್ತಾ ಬರುತ್ತಿದ್ದು, ಈ ಬಾರಿ ಎಂಟನೇ ವರ್ಷಾಚರಣೆಯನ್ನು ಶ್ರೀಕ್ಷೇತ್ರ ಮಂಗಳಾದೇವಿಯ ಅಮ್ಮನವರ ರಾಜಾಂಗಣದಲ್ಲಿ ದಿನಾಂಕ 22ರಿಂದ 24 ಫೆಬ್ರವರಿ 2025ರಂದು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರು ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆ, ಬೆಂಕಿನಾಥೇಶ್ವರ ಮೇಳದ ಸಂಚಾಲಕ ಗುರುಪುರ ಶ್ರೀ ಸುರೇಂದ್ರ ಮಲ್ಲಿ ಮತ್ತು ಕಟೀಲು ಮೇಳದ ಪ್ರಧಾನ ಮದ್ದಲೆಗಾರರಾದ ಶ್ರೀ ಸುದಾಸ್ ಕಾವೂರು ಇವರುಗಳನ್ನು ಸನ್ಮಾನಿಸಲಾಗುವುದು. ಸರಯೂ ಬಾಲಯಕ್ಷ ವೃಂದ (ರಿ.) ಮಕ್ಕಳ ಮೇಳ ಇವರಿಂದ ಅನುಕ್ರಮವಾಗಿ ‘ವರಾಹಾವಾತಾರ’, ‘ರಾಮಾವತಾರ’, ‘ಕೃಷ್ಣಾವತಾರ’ಗಳೆಂಬ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ಕೋಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಮಂಗಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 21 ಫೆಬ್ರವರಿ 2025ರಂದು ಬೆಳಿಗ್ಗೆ ಗಂಟೆ 8-45ಕ್ಕೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬನವರು ಕನ್ನಡ ಸಾಂಸ್ಕೃತಿಕ ದಿಬ್ಬಣದ ಮೆರವಣಿಗೆಯನ್ನು ಉದ್ಘಾಟನೆ ಮಾಡಲಿದ್ದು, ಬಳಿಕ ಭುವನೇಶ್ವರಿಗೆ ಪುಷ್ಪಾರ್ಚನೆ, ರಾಷ್ಟ್ರ, ಪರಿಷತ್ತಿನ ಹಾಗೂ ಸಮ್ಮೇಳನ ಧ್ವಜಾರೋಹಣ ನಡೆಯಲಿದೆ. 10-00 ಗಂಟೆಗೆ ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ. ಎಂ. ಮಹೇಶ್ ಜೋಶಿ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಪುಸ್ತಕ ಮತ್ತು ಇತರ ಮಳಿಗೆಗಳು ಉದ್ಘಾಟನೆಗೊಳ್ಳಲಿದೆ. ಕೊಳಲು ಸಂಗೀತ ವಿದ್ಯಾಲಯ (ರಿ.) ಇರಾ ಇದರ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರ ಸಂಯೋಜನೆಯಲ್ಲಿ ದಿನಾಂಕ 18 ಫೆಬ್ರವರಿ 2025ರ ಮಂಗಳವಾರ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ತಾಳಮದ್ದಲೆ ಕವಿ ದೇವಿದಾಸ ವಿರಚಿತ ‘ಭೀಷ್ಮ ಸೇನಾಧಿಪತ್ಯ’ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀ ನಾರಾಯಣ ಭಟ್, ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಟಿ.ಡಿ. ಗೋಪಾಲಕೃಷ್ಣ ಭಟ್ ಮತ್ತು ಮುರಲೀಧರ ಕಲ್ಲೂರಾಯ ಭಾಗವಹಿಸಿದರು. ಭೀಷ್ಮನಾಗಿ ಗುಡ್ಡಪ್ಪ ಬಲ್ಯ, ಕೌರವನಾಗಿ ವಿ.ಕೆ. ಶರ್ಮ ಅಳಿಕೆ, ದ್ರೋಣನಾಗಿ ಶಾರದಾ ಅರಸ್ ಹಾಗೂ ಕರ್ಣನಾಗಿ ಮಾಂಬಾಡಿ ವೇಣುಗೋಪಾಲ ಭಟ್ ಪಾತ್ರಗಳನ್ನು ಪೋಷಿಸಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಜಯಶ್ರೀ ಶಾಮಿಯಾನದ ಮಾಲಕರಾದ ಮಂಜುನಾಥ ಭಟ್ ಪ್ರಾಯೋಜಿಸಿದರು. ವೇಣುಗೋಪಾಲ ಭಟ್ ಸ್ವಾಗತಿಸಿ, ದೇವಳದ ಮೇನೇಜರ್ ಸುಬ್ರಹ್ಮಣ್ಯ ಭಟ್ ವಂದಿಸಿದರು.

Read More

ಸುರತ್ಕಲ್ : ಆರೋಹಣಂ ಸ್ಕೂಲ್ ಆಫ್ ಮ್ಯೂಜಿಕ್ ಇದರ 10ನೇ ವಾರ್ಷಿಕೋತ್ಸವ ಪ್ರಯುಕ್ತ ‘ದಶಕ ಸಮರ್ಪಣಂ’ ಎರಡನೇ ಸರಣಿಯು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ ಕೆನರಾ ಬ್ಯಾಂಕ್ ಕ್ರಾಸ್ ರೋಡ್, ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ. ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಸುರತ್ಕಲ್ ಇದರ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ‘ಕೊಳಲು ವಾದನ ಕಚೇರಿ’ ಪ್ರಸ್ತುತಗೊಳ್ಳಲಿದೆ. ಬೆಂಗಳೂರಿನ ಶ್ರೀ ದೀಪಕ್ ಹೆಬ್ಬಾರ್ ಇವರ ಕೊಳಲು ವಾದನಕ್ಕೆ ಶ್ರೀ ನವನೀತ ಕೃಷ್ಣನ್ ವಯೋಲಿನ್ ಮತ್ತು ಶ್ರೀ ಅವಿನಾಶ್ ಬಿ. ಮೃದಂಗಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನ ‘ತ್ವರಿತ’ ಮತ್ತು ‘ಬಿ. ಐ. ಸಿ.’ ಸಂಸ್ಥೆಗಳ ಸಹಕಾರದಲ್ಲಿ ಬೆಂಗಳೂರಿನ ‘ಯಕ್ಷದೇಗುಲ’ದ ಪರಿಕಲ್ಪನೆಯಲ್ಲಿ ಆಯೋಜಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 14 ಫೆಬ್ರವರಿ 2025 ರಂದು ಬೆಂಗಳೂರಿನ ದೊಂಬ್ಲೂರಿನಲ್ಲಿರುವ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆಯಿತು. ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಂಗದಲ್ಲಿ ಗಣಪತಿ ಪೂಜೆ ನಡೆಸುವ ಮೂಲಕ ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆ ಮತ್ತು ಯಕ್ಷಗುರುಗಳಾದ ಪ್ರಿಯಾಂಕ ಕೆ. ಮೋಹನ್‌ ಇವರು ನಡೆಸಿಕೊಟ್ಟರು. ಎರಡು ಗಂಟೆಗಳ ಕಾಲ ನಡೆದ ಈ ಪ್ರಾತ್ಯಕ್ಷಿಕೆಯಲ್ಲಿ ಯಕ್ಷಗಾನದ ಕ್ಯಾದಿಗೆ ಮುಂದಲೆಯ ಅಟ್ಟೆ ಕಟ್ಟುವ ಕ್ರಮ, ಬಣ್ಣದ ವೇಷದ ಮುಖವರ್ಣಿಕೆ, ವೇಷಭೂಷಣ ತೊಡುವ ಕ್ರಮ, ಹಸ್ತಾಭಿನಯ, ಯುದ್ಧ ಕುಣಿತ, ಪ್ರಯಾಣ ಕುಣಿತ, ಕೃಷ್ಣನ ಒಡ್ಡೋಲಗ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಎರಡು ಯಕ್ಷಗಾನದ ಪ್ರಸಂಗದ ಸನ್ನಿವೇಷ ನಡೆಸಲಾಯಿತು. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಚಿನ್ಮಯಿ, ಚಂಡೆಯಲ್ಲಿ ಪನ್ನಗ ಹಾಗೇ ಕಲಾವಿದರಾಗಿ ಸುಜಯೀಂದ್ರ ಹಂದೆ, ಪ್ರಿಯಾಂಕ ಕೆ. ಮೋಹನ್, ಕೃಷ್ಣಮೂರ್ತಿ…

Read More

ಗೊಂಗೊಳ್ಳಿ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮವಾಗಿ ಆಯೋಜಿಸಿದ ಬಡಗುತಿಟ್ಟಿನ ವೇಷಭೂಷಣಗಳ ಪರಿಚಯ ಕಾರ್ಯಕ್ರಮ ‘ಯಕ್ಷಲೋಕದೊಳಗೊಂದು ಪಯಣ’ ಕಾರ್ಯಕ್ರಮವು ದಿನಾಂಕ 17 ಫೆಬ್ರವರಿ 2025ರಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗಂಗೊಳ್ಳಿಯ ಉದ್ಯಮಿ ಹಾಗೂ ಜಿ. ಎಸ್. ವಿ. ಎಸ್. ಅಸೋಸಿಯೇಷನ್‌ ಇದರ ಸಂಚಾಲಕರಾದ ಗಣೇಶ್ ಕಾಮತ್ ಮಾತನಾಡಿ “ಬಾಲ್ಯದಿಂದಲೂ ನಮ್ಮನ್ನೆಲ್ಲ ಆಕರ್ಷಿಸಿದ ಕಲೆ ಯಕ್ಷಗಾನ. ಅಲ್ಲಿಯ ವೈವಿಧ್ಯಮಯವಾದ ವೇಷಭೂಷಣ ಮನಸ್ಸಿಗೆ ಬೆರಗು ಮತ್ತು ಅಚ್ಚರಿ ಹುಟ್ಟಿಸಿದ ಅಂಶ. ಯಾವುದೇ ಆಧುನಿಕ ಸೌಲಭ್ಯವಿಲ್ಲದ ಆ ಕಾಲದಲ್ಲಿ ಗ್ಯಾಸ್ ಲೈಟ್ ಗಳ ನೆರಳು ಬೆಳಕಿನಲ್ಲಿ ಕಲಾವಿದರು ಧರಿಸುತ್ತಿದ್ದ ಉಡುಗೆತೊಡುಗೆಗಳು, ಮುಖವರ್ಣಿಕೆ, ಕಿರೀಟ ಮೊದಲಾದವು ಪೌರಾಣಿಕ ಲೋಕವನ್ನೇ ಸೃಷ್ಟಿಸುತ್ತಿದ್ದವು. ಇಂದು ಕಾಲ ಬದಲಾಗಿದೆ. ಆದರೂ ಅಂದಿನ ಅದೇ ಆಕರ್ಷಣೆ ಯಕ್ಷಗಾನಕ್ಕಿದೆ. ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳವು ಶಾಲೆ ಶಾಲೆಗಳಲ್ಲಿ ಆಯೋಜಿಸಿರುವ ವೇಷಭೂಷಣಗಳ ಪರಿಚಯಾತ್ಮಕವಾದ ಕಮ್ಮಟವು ಅರ್ಥಪೂರ್ಣವೂ…

Read More

ಹೊಸಪೇಟೆ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ 15 ದಿನಗಳ ಕಾಲ ನಡೆದ ನಾಟಕ ರಚನೆ ನಟನೆ ಹಾಗೂ ನಿರ್ದೇಶನ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 15 ಫೆಬ್ರವರಿ 2025 ರಂದು ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ಹಾಗೂ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ಚಿಂದೋಡಿ ಬಂಗಾರೇಶ್ ಮಾತನಾಡಿ “ನಾಟಕ ಸಮಾಜವನ್ನು ತಿದ್ದುವ, ಎಚ್ಚರಿಸುವ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಅದ್ಭುತ ಶಕ್ತಿಯಾಗಿದೆ. ನಾಟಕ ಮತ್ತು ಸಂಗೀತಕ್ಕೆ ಮೂಲ ನೆಲೆಗಟ್ಟು ಶ್ರದ್ದೆ. ಪಾತ್ರ ಪರಕಾಯ ಪ್ರವೇಶ ಮಾಡಬೇಕು, ಗ್ರಹಿಸುವ ಶಕ್ತಿ ಬೇಕು. ಸಂಗೀತದಿಂದಲೇ ನಾಟಕ, ಸಂಗೀತವಿಲ್ಲದೆ ನಾಟಕವಿಲ್ಲ. ನಮ್ಮನ್ನು ಸ್ವರ ಚೇತನಗೊಳಿಸಿದರೆ ಅಕ್ಷರ ಜಾಗೃತಗೊಳಿಸುತ್ತದೆ. ನಾಟಕದಲ್ಲಿ ಸಂಭಾಷಣೆಗೆ ಶುದ್ಧ ಕನ್ನಡಬೇಕು. ನಾಟಕ, ಸಂಗೀತ, ಸಾಹಿತ್ಯವನ್ನು ಅರಿತು ನಟಿಸುವವನೇ ನಿಜವಾದ ನಟನಾಗುತ್ತಾನೆ. ಸಾಹಿತ್ಯದ ಸೊಗಡು ಬಿಡಬೇಡಿ” ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಿಬಿರಾರ್ಥಿಗಳಾದ ಮಂಜುನಾಥ ಕರಲಿಂಗಣ್ಣ, ಹೆಚ್. ಮಲ್ಲಿಕಾರ್ಜುನ, ಮುಮ್ತಾಜ್…

Read More

ಮಂಗಳೂರು : ಅವಿನಾಶ್ ಫೋಕ್ ಡಾನ್ಸ್ ಮಂಗಳೂರು (ರಿ.) ಅರ್ಪಿಸುವ 3ನೇ ವರ್ಷದ ‘ಕಲಾಯನ’ ಜಾನಪದ ಸಮೂಹ ನೃತ್ಯ ಸ್ಪರ್ಧೆಯನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಿಗ್ಗೆ 8-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980358774. ಸ್ಪರ್ಧೆಯ ನಿಯಮಗಳು : * ಹತ್ತು ಜನ ನೃತ್ಯಗಾರರು ಕಡ್ಡಾಯವಾಗಿ ವೇದಿಕೆಯಲ್ಲಿರತಕ್ಕದ್ದು. * ಐದು ಜನ ಹಿಮ್ಮೇಳದವರಿಗೆ ಮಾತ್ರ ಅವಕಾಶ. * ಸಮೂಹ ನೃತ್ಯ 10 ನಿಮಿಷದ್ದಾಗಿರುತ್ತದೆ. * ವಯಸ್ಸು ಮಿತಿ ಇರುವುದಿಲ್ಲ. * ಸಿ.ಡಿ. ಹಾಡಿಗೆ ಅವಕಾಶವಿದೆ. * ಕುಣಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. * ಹಿನ್ನಲೆಯನ್ನು ತೀರ್ಪುಗಾರರಿಗೆ ಮುಂಚಿತವಾಗಿ ನೀಡಬೇಕು. * ಸ್ಪರ್ಧೆಯಲ್ಲಿ ನೀರು, ಬೆಂಕಿ ಮತ್ತು ಸ್ಫೋಟಕ ಬಳಕೆ ನಿಷೇಧಿಸಲಾಗಿದೆ. * ಅಶ್ಲೀಲ ಅಸಂಬದ್ಧ ಅಥವಾ ಜಾತಿ ಧರ್ಮಗಳ ಅವಹೇಳನಕ್ಕೆ ಅವಕಾಶ ಇರುವುದಿಲ್ಲ. * ಕಡ್ಡಾಯವಾಗಿ ದೈವಗಳ ಪಾತ್ರಕ್ಕೆ ಅವಕಾಶವಿಲ್ಲ. * ಮುಕ್ತ ವಿಭಾಗದ ಸ್ಪರ್ಧೆ. * ತಂಡಗಳು ನಿಮಗೆ…

Read More