Author: roovari

ಮಂಗಳೂರು : ನಮ್ಮ ಕುಡ್ಲದವರು ಪ್ರಸ್ತುತ ಪಡಿಸುವ ವಿದ್ಯಾರ್ಥಿಗಳಿಗೆ ‘ನೃತ್ಯ ಭಜನೆ -2023’ ಸೀಸನ್ -2 ಮೊದಲ ಸುತ್ತಿನ ಸ್ಪರ್ಧೆ ದಿನಾಂಕ :01-07-2023 ಹಾಗೂ 02-07-2023ರಂದು ಮಂಗಳೂರಿನ ಡೊಂಗರಕೇರಿ, ಕೆನರಾ ಗರ್ಲ್ಸ್ ಹೈಸ್ಕೂಲ್, ಸುಧೀಂದ್ರ ಅಡಿಟೋರಿಯಂನಲ್ಲಿ ನಡೆಯಲಿದೆ. ಸ್ಪರ್ಧಾ ನಿಯಮಗಳು: * ನೃತ್ಯ ಮಾಡುತ್ತಾ ಭಜನೆ ಮಾಡಬೇಕು – ಭಾಷೆಗೆ ನಿರ್ಬಂಧವಿಲ್ಲ. * ಶಾಲಾ-ಕಾಲೇಜಿನ ಹಾಗೂ ಸಂಘ ಸಂಸ್ಥೆಗಳ ತಂಡಗಳಿಗೆ ಅವಕಾಶ. (ವಿದ್ಯಾರ್ಥಿಗಳೇ ಆಗಿರಬೇಕು) *18 ವರ್ಷದೊಳಗಿನವರಿಗೆ ಮಾತ್ರ ಅವಕಾಶ. (ಡಿಸೆಂಬರ್ 2023ರಲ್ಲಿ ವಯೋಮಿತಿ 18 ವರ್ಷ ದಾಟಿರಬಾರದು) * ಧ್ವನಿ ಮುದ್ರಿತ ಸಂಗೀತಕ್ಕೆ ಅವಕಾಶವಿಲ್ಲ. * ಮೊದಲ ಸುತ್ತಿನಲ್ಲಿ 10 ನಿಮಿಷಗಳ ಕಾಲಾವಕಾಶ. * ತಂಡದಲ್ಲಿ ಕನಿಷ್ಠ 8, ಗರಿಷ್ಠ 12 ಮಂದಿ ಇರಬೇಕು. * ಹಿಮ್ಮೇಳ, ಮುಮ್ಮೇಳ ಸೇರಿ ಗರಿಷ್ಠ 17 ಮಂದಿ ಇರಬಹುದು. * ಯಾವುದೇ ವಾದ್ಯ – ವಾದನ ಪರಿಕರಗಳನ್ನು ಬಳಸಬಹುದು. * ಬಾಲಕ, ಬಾಲಕಿಯರಿಗೆ ಪ್ರತ್ಯೇಕ ವಿಭಾಗವಿರುವುದಿಲ್ಲ. * ಆಧಾರ್ ಹಾಗೂ ಶಾಲಾ –…

Read More

ಮಂಗಳೂರು : ಶಾಂತಿ ಪ್ರಕಾಶನ ಏರ್ಪಡಿಸುವ ರಾಜ್ಯ ಮಟ್ಟದ ‘ಮಕ್ಕಳ ಕಥಾ ಸ್ಪರ್ಧೆ’ – ಬರವಣಿಗೆ ನಿಮ್ಮದು. ಪ್ರೋತ್ಸಾಹ ನಮ್ಮದು. ಕಥಾ ಸ್ಪರ್ಧೆ ನಿಯಮಗಳು : 1. ಕಥೆಯು ಸ್ವಂತ ರಚನೆಯಾಗಿರಬೇಕು. ಕೃತಿಚೌರ್ಯ ಮತ್ತು ಅನುವಾದಿತ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ. 2. ಕಥೆಯು ಕನ್ನಡದಲ್ಲೇ ಬರೆಯಬೇಕು. 3. ಒಬ್ಬರಿಗೆ ಒಂದೇ ಕಥೆ ಕಳುಹಿಸಲು ಅವಕಾಶ ಹಾಗೂ ಯಾವುದೇ ಕಾವ್ಯನಾಮದಿಂದ (Pen Name) ಕಥೆಯನ್ನು ಬರೆದಿರಬಾರದು. 4. ಕಥೆಯು 600-800 ಪದಗಳ ಮಿತಿಯಲ್ಲಿರಬೇಕು. 5. ಕಥೆಯಲ್ಲಿ ಮಕ್ಕಳಿಗೆ ಅನುಕೂಲವಾಗುವ ಭಾಷೆ, ಶೈಲಿ ಮತ್ತು ಮೌಲ್ಯಗಳಿಗೆ ಆದ್ಯತೆ ಪ್ರಾಶಸ್ತ್ಯ ನೀಡಬೇಕು. 6. ಕಥೆಗಾರರಿಗೆ ಯಾವುದೇ ವಯೋಮಿತಿಯ ನಿರ್ಬಂಧ ಇರುವುದಿಲ್ಲ. 7. ಕಥೆಯು ಹೊಸದಾಗಿರಬೇಕು. ಮಕ್ಕಳ ಕಥೆಯಾಗಿರಬೇಕು. ಯಾವುದೇ ಪತ್ರಿಕೆ, ಪುಸ್ತಕ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರಬಾರದು. 8. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುವುದು. 9. ಕಳುಹಿಸಿಕೊಟ್ಟಿರುವ ಕಥೆಗಳ ಪೂರ್ತಿ ಹಕ್ಕು ಸ್ವಾಮ್ಯ ಆಯೋಜಕರಿಗೆ ಇರುವುದು. 10. ಕಥೆ ಕಳುಹಿಸಲು ಕೊನೆಯ ದಿನಾಂಕ : 2023 ಜೂನ್ 30,…

Read More

ಬದಿಯಡ್ಕ : ನೀರ್ಚಾಲು ಎಂಎಸ್‌ಸಿ ಎಎಲ್‌ಪಿ ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ದಿನಾಂಕ :11-06-2023 ಭಾನುವಾರ ನಡೆದ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ ‘ಸಾಮಾಜಿಕ ನೆಲೆಯಲ್ಲಿ ಕನ್ನಡ’ ಎಂಬ ವಿಚಾರದಲ್ಲಿ ಶಿಕ್ಷಕ ಪ್ರದೀಪ್‌ ಕುಮಾರ್ ಶೆಟ್ಟಿ ಬೇಳ ಉಪನ್ಯಾಸ ನೀಡಿದರು. ಅವರು ಮಾತನಾಡುತ್ತಾ “ಕನ್ನಡವನ್ನು ಬೆಳೆಸಬೇಕಾದ ಈ ಪ್ರದೇಶದಲ್ಲಿ ಉಳಿಸಬೇಕಾದ ಪರಿಸ್ಥಿತಿಯಿದೆ. ನಮ್ಮ ಭಾಷೆಯ ಮೇಲೆ ಅನ್ಯ ಭಾಷೆ ಪ್ರಭಾವ ಬಹಳವಾಗಿ ಬೀರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರಿಗೆ ಕೂಡಾ ಕನ್ನಡದ ಭಾಷಾ ಶುದ್ಧತೆ ಉಳಿಸಬೇಕಾದ ಅನಿವಾರ್ಯತೆಯಿದೆ. ಕನ್ನಡ ಮಾಧ್ಯಮದಲ್ಲಿ 1ರಿಂದ 10ನೇ ತರಗತಿಯ ತನಕ ಕಲಿತ ಮಕ್ಕಳಿಗೆ ಕೇರಳ ಹಾಗೂ ಕರ್ನಾಟಕದಲ್ಲಿ ಗರಿಷ್ಠ ಸೌಲಭ್ಯ ದೊರೆಯುತ್ತದೆ. ಭಾಷೆ ಉಳಿದಾಗ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ. ಕನ್ನಡ ಭಾಷಾ ರಕ್ಷಣೆಯು ಕನ್ನಡಿಗರ ಕರ್ತವ್ಯ, ಭಾಷೆಯ ಕಡಿಮೆ ಬಳಕೆಯಿಂದ ಸಂಸ್ಕೃತಿಯೂ ನಾಶವಾಗುತ್ತದೆ” ಎಂದು…

Read More

ಬೆಂಗಳೂರು : ಶಂಕರ್ ಗಣೇಶ್ ರಚನೆ ಮತ್ತು ನಿರ್ದೇಶನದ ರಂಗಸೌರಭ ಪರಿಕಲ್ಪನೆಯ ‘ಮಾವಿನಗುಡಿ ಕಾಲೋನಿ’ ನಾಟಕವು ದಿನಾಂಕ 20-06-2023ರ ಸಂಜೆ ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ಬಗ್ಗೆ : ಜಾಗತೀಕರಣ ಮತ್ತು ಪ್ರಗತಿಯ ಹೆಸರಿನಲ್ಲಿ ನಾಶವಾಗಿ ಹೋದ ಕಾಡುಗಳೆಷ್ಟು, ಹಳ್ಳಿಗಳೆಷ್ಟೋ, ಅಂತೆಯೇ ಎಷ್ಟೋ ನಗರಗಳೂ ಕೂಡ ಈ ಪ್ರಗತಿಯ ಅಬ್ಬರಕ್ಕೆ ಸಿಲುಕಿ ತಮ್ಮ ಸೊಬಗು, ವೈಭವಗಳನ್ನು ಕಳೆದುಕೊಂಡಿವೆ. ಲಗಾಮಿಲ್ಲದ ಹುಚ್ಚು ಕುದುರೆಯಂತೆ ಉದ್ದಗಲಕ್ಕು ಹರಡುತ್ತಿರುವ ವೃದ್ಧಿಯೆಂಬ ಈ ಕುರುಡುತನ, ಒಂದು ರೀತಿಯ ಸಾಂಕ್ರಮಿಕ ಖಾಯಿಲೆಯಂತೆ ಕಾಣುವುದರಲ್ಲಿ ಅನುಮಾನವೇ ಇಲ್ಲ. ಪ್ರಗತಿಯ ಪತಾಕೆ ಹಿಡಿದು ಓಡಾಡುತ್ತಿರುವ ನಗರವಾಸಿಗಳು ತಿರುಗಿ ನೋಡಿದಾಗ, ಹಿಂದೊಂದು ದಿನ ತಾವಿದ್ದ ಜಾಗ ಬದಲಾಗಿರುವುದನ್ನು ಕಂಡಾಗ, ಆಗುವ ಆಶ್ಚರ್ಯ ಒಂದು ಕಡೆಯಾದರೆ ಮತ್ತೊಂದೆಡೆ ಅಘಾತವೂ ಉಂಟಾಗುತ್ತದೆ. ಬದಲಾವಣೆಯೆಂಬುವುದು ನಮ್ಮನ್ನು ಯಾವ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ ಎಂಬ ಗೊಂದಲಗಳು ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಹೇಗೆ ಕಾಡುಗಳನ್ನು ಮತ್ತು ಹಳ್ಳಿಗಳನ್ನು ಉಳಿಸುವುದು ಅನಿವಾರ್ಯವೋ ಅಂತೆಯೇ ನಗರಗಳನ್ನು ಬೆಳೆಸದೆ ಉಳಿಸಿಕೊಳ್ಳುವುದು ಅನಿವಾರ್ಯ.…

Read More

ಯಕ್ಷಗಾನ ಗಂಡು ಮೆಟ್ಟಿದ ಕಲೆ ಎಂದ ಲಾಗಾಯ್ತಿನಿಂದಲೂ ಕರೆಸಿಕೊಂಡು ಮೆರೆದ ಕಮನೀಯ ಕಲೆ. ಇದರಲ್ಲಿ ಹೆಂಗಳೆಯರು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದಿದ್ದಾರೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಸರ್ವಾಂಗ ಸುಂದರವಾದ ಸಮಷ್ಟಿ ಕಲೆ, ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಅದು ಚೆಂಡೆ, ಮದ್ದಳೆಯಿರಲಿ, ನಾಟ್ಯ, ಗಾಯನವಿರಲಿ, ಅರ್ಥಗಾರಿಕೆಯೇ ಇರಲಿ; ಇಲ್ಲಿ ಮಹಿಳಾ ಸ್ವಾತಂತ್ರ್ಯವಿದೆ ಮತ್ತು ಪ್ರೋತ್ಸಾಹವೂ ಇದೆ. ಲಿಂಗ ಸಮಾನತೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಸಾಧಿಸಿದ ಕಲಾಪ್ರಕಾರ ಯಕ್ಷಗಾನವೆಂದರೂ ತಪ್ಪಲ್ಲ. ಇಂತಹ ಸುಂದರ ಹಾಗೂ ಶ್ರೇಷ್ಠ ಕಲೆಯಲ್ಲಿ ಮಿಂಚುತ್ತಿರುವ ಕಲಾವಿದೆ ಮಲ್ಲಿಕಾ ರಾಘವೇಂದ್ರ ಭಟ್ . 18.06.1980ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶಿವರಾಮ ಭಟ್ಟ ಕೆ.ಎನ್ ಹಾಗೂ ಸುಂದರಮ್ಮ ಇವರ ಮಗಳಾಗಿ ಜನನ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯಲ್ಲಿ ವಾಸ. ಎಂ.ಎ(ಅರ್ಥಶಾಸ್ತ್ರ) ಇವರ ವಿದ್ಯಾಭ್ಯಾಸ. ಪತಿ ರಾಘವೇಂದ್ರ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಹಾಗೂ ಪರಮೇಶ್ವರ ಹೆಗಡೆ ಐನಬೈಲ್ ಇವರ ಯಕ್ಷಗಾನದ ಗುರುಗಳು. ಪ್ರಸಂಗ ಕಥೆ ನೋಡಿಕೊಂಡು…

Read More

ಮೈಸೂರು : ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ಎಲ್ಲಾ ಮುನ್ನೆಚರಿಕೆಯ ಕ್ರಮಗಳೊಂದಿಗೆ ನಡೆಸುತ್ತಿದ್ದು, ಇದೇ ಜೂನ್ 18ರಂದು ಸಂಜೆ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಖ್ಯಾತ ನಾಟಕಕಾರ, ರಾಷ್ಟ್ರ ಪ್ರಶಸ್ತಿ ವಿಜೇತ, ನಿರ್ದೇಶಕ, ನಿರ್ಮಾಪಕ, ನಟ ಶ್ರೀ ಬಿ. ಸುರೇಶ ಅವರ ‘ಅಡುಗೆ ಮನೆಯಲ್ಲೊಂದು ಹುಲಿ’ ಎಂಬ ನಾಟಕವು ನಟನ ರಂಗಶಾಲೆಯ ಪ್ರಾಂಶುಪಾಲರೂ, ಯುವ ರಂಗ ನಿರ್ದೇಶಕರೂ ಆದ ಶ್ರೀ ಮೇಘ ಸಮೀರ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ‘ಅಡುಗೆ ಮನೆಯಲ್ಲೊಂದು ಹುಲಿ’.. ಇದೊಂದು ಸುಳ್ಳಿನ ಪಯಣದ ಕಥಾನಕವನ್ನು ಹೇಳುವ ನಾಟಕ. ಹಾಗೆ…

Read More

ಬದಿಯಡ್ಕ : ನೀರ್ಚಾಲಿನ ಎಂ.ಎಸ್.ಸಿ. ಎ.ಎಲ್.ಪಿ. ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಬಣ್ಣಗಾರಿಕಾ ಶಿಬಿರ ದಿನಾಂಕ : 11-06-2023ರಂದು ನಡೆಯಿತು. ಈ ಶಿಬಿರದ ನೇತೃತ್ವ ವಹಿಸಿದ ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳ ಶಿಕ್ಷಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಅವರು ಮಾತನಾಡುತ್ತಾ “ಯಕ್ಷಗಾನದ ಬಣ್ಣಗಾರಿಕೆಯು ಅತ್ಯಂತ ಆಳ ಹಾಗೂ ವಿಸ್ತಾರವಾಗಿದ್ದು, ಪ್ರತಿಯೊಂದು ಪಾತ್ರದ ಚಿತ್ರಣಕ್ಕೂ ವಿಶೇಷ ಅರ್ಥವಿದೆ. ಮುಖದ ಬಣ್ಣಗಾರಿಕೆಯ ಮೂಲಕ ಪಾತ್ರದ ಸ್ವಭಾವವನ್ನು ತಿಳಿಯಬಹುದು. ಆದ್ದರಿಂದ ಬಣ್ಣಗಾರಿಕೆಯು ಸಣ್ಣ ಅವಧಿಯಲ್ಲಿ ಕಲಿಯುವಷ್ಟು ಸಣ್ಣ ವಿಷಯವಲ್ಲ. ಅದು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷವಾದ ಬೃಹತ್ ಮಾಹಿತಿ ಕೋಶ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪ್ರಸಾದನಾ ಕಲಾವಿದ ಕೇಶವ ಕಿನ್ಯ ಮಾತನಾಡಿ, “ಕಲಾವಿದರು ತಮ್ಮ ಕಲೋಪಾಸನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ತಮ್ಮ ಕಲಾ…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನಾ ಕೇಂದ್ರ ಮತ್ತು ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ : 14-06-2023ರಂದು ನಡೆದ ಒಂದು ದಿನದ ‘ಕನಕ ಕೀರ್ತನ ಗಾಯನ ಕಮ್ಮಟ’ವನ್ನು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ತಮಿಳುನಾಡಿನಿಂದ ಮೊದಲ್ಗೊಂಡು ಕನ್ನಡ ನಾಡಿನ ಮೂಲಕ ಉತ್ತರ ಭಾರತ ಕಡೆಗೆ ವ್ಯಾಪಿಸಿದ ಭಕ್ತಿಲತೆ ಭಾರತದ ಬದುಕನ್ನು ಪೋಷಿಸಿದೆ. ಈ ಭಕ್ತಿ ಪರಂಪರೆಯ ವಿಶಿಷ್ಟ ಕವಿ ಕನಕ. ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಕನಕದಾಸರು ಚಿಕಿತ್ಸಕ ಗುಣದ ಕವಿಯಾಗಿ ಮೂಡಿಬಂದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪಾಳೆಯಗಾರ, ಶುದ್ಧಾಂಗ ಸೈನಿಕನಾಗಿದ್ದ ಕನಕ, ತಿರುಪತಿ ತಿಮ್ಮಪ್ಪ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತದ ಮೂಲಕ ಕಂಡುಕೊಂಡ ದಿವ್ಯಾನುಭವ ಅವರ ಕೀರ್ತನೆಗಳಲ್ಲಿ ಅಭಿವ್ಯಕ್ತಗೊಂಡಿದೆ” ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ…

Read More

ಬೆಂಗಳೂರು: ದಿನಾಂಕ 18-06-2023ರಂದು ಬೆಂಗಳೂರಿನ ಜೆ. ಪಿ. ನಗರದ ರಂಗಶಂಕರದಲ್ಲಿ ಸಂಚಯ ಪ್ರಸ್ತುತ ಪಡಿಸುವ ‘ ಕಾಮ ರೂಪಿಗಳ್ ‘ನಾಟಕವು ಪ್ರದರ್ಶನಗೊಳ್ಳಲಿದೆ. ಹಲವು ರಾಮಾಯಣ ಕೃತಿಗಳನ್ನು ಆಧರಿಸಿರುವ ಈ ನಾಟಕವನ್ನು ಖ್ಯಾತ ರಂಗನಿರ್ದೇಶಕ ಗಣೇಶ್ ಮಂದಾರ್ತಿಯವರು ರಂಗರೂಪಕ್ಕೆ ತರುವುದರೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಾಟಕದ ಬಗ್ಗೆ: ರಾಮಾಯಣದ ಪಂಚವಟಿಯ ಭಾಗದ ಕಥೆಯನ್ನೊಳಗೊಂಡ ನಾಟಕ ಇದು. ಶೂರ್ಪನಖಿಯ ಮಾನಭಂಗದಿಂದ ಹಿಡಿದು ಜಟಾಯು ಮೋಕ್ಷದವರೆಗಿನ ಕಥೆಯನ್ನು ಆರಿಸಿ ಕಟ್ಟಲಾಗಿದೆ. ರಾಮಾಯಣದಲ್ಲೇ ಬಹು ರಂಜಕವೂ ನಾಟಕೀಯವೂ ಆದ ಈ ಭಾಗವನ್ನು ತುಸು ಆಧುನೀಕರಣಗೊಳಿಸಿ ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಬದುಕಿಗೊಂದು ಚೌಕಟ್ಟಿದೆ, ಕಾಮಕ್ಕೊಂದು ಎಲ್ಲೆ ಇದೆ. ಮಿತಿಮೀರಿದರೆ ಏನೆಲ್ಲ ಆಪತ್ತು ಘಟಿಸಬಹುದೆಂಬುದಕ್ಕೆ ಈ ಪಂಚವಟಿಯ ಕಥೆಯು ನಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ

Read More

“ಮಾತಾ” ಇದು ಕೇವಲ ನಾಟಕವಲ್ಲ ಸಮಾಜದ ಅವಮಾನಕ್ಕೆ ಬೆಂದು ಬಳಲಿದ ಆಂತರಾತ್ಮದ ಕಿಡಿ ಜಗತ್ತನ್ನೇ ತನ್ನ ಸಾಧನೆಯ ಮೂಲಕ ಬೆಳಗಿದ ಪ್ರಜ್ವಲತೆಯ ಛಲದ ದಿವ್ಯ ಬೆಳಕಿನ ಸತ್ಯ ಕಥೆ… “ಮಾತಾ” ಇಡೀ ನಾಟಕದ ಅವಧಿ 1 ಗಂಟೆ 20 ನಿಮಿಷಗಳು. ನಾಟಕ ಪ್ರಾರಂಭದಿಂದ ಕೊನೆಯವರೆಗೂ ನಿಮ್ಮತನ ಮರೆತು ಮಾತೆಯ ಸಾಧನೆಯ ಹೆಜ್ಜೆ ಗುರುತುಗಳ ನಡೆಯಲ್ಲಿ ನೀವು ನಿಂತು ನೋಡುತ್ತಿರುವಿರಿ ಎಂಬ ಅನುಭವ ಮೂಡುತ್ತೆ… ಪಾತ್ರ ಪರಕಾಯ ಪ್ರವೇಶ ಆದ ಗಳಿಗೆಯಿಂದ ಅದೆಷ್ಟು ಬಾರಿ ನಗುತ್ತೇವೆ ಅದಕ್ಕಿಂತ ಹೆಚ್ಚು ಬಾರಿ ನಮ್ಮ ಕಣ್ಣುಗಳು ತೇವಗೊಳ್ಳುತ್ತವೆ. ಅಷ್ಟೊಂದು ವಾಸ್ತವ ಸತ್ಯ ಚಿತ್ರ ನಮ್ಮನ್ನು ಇಡೀ ನಾಟಕದಲ್ಲಿ ಹಿಡಿದಿಟ್ಟುಕೊಳ್ಳುತ್ತೆ. ಒಬ್ಬ ಪದ್ಮಶ್ರೀ ಪುರಸ್ಕೃತೆಯ ಜೀವನ ಚರಿತ್ರೆಯನ್ನು ಒಂದಿಡೀ ನಾಟಕದಲ್ಲಿ ಎಲ್ಲಿಯೂ ಮೂಲ ಆಶಯ ಮತ್ತು ಸತ್ಯಕ್ಕೆ ಚ್ಯುತಿ ಬಾರದಂತೆ ಕಟ್ಟಿಕೊಡುವುದು ಸುಲಭದ ಮಾತಲ್ಲ. ಅದರಲ್ಲೂ ಇಡೀ ಸಮಾಜವೇ ಗೇಲಿಯಲ್ಲಿ ನೋಡುವ ಪರಶಿವಪಾರ್ವತಿಯ ಪರಮ ಅವತಾರಿ ಅರ್ಧನಾರೇಶ್ವರಿಯ ಸ್ವರೂಪಿ ತೃತೀಯ ಲಿಂಗಿ ಮಾತೆಯ ಬಗ್ಗೆ ಒಂದು ನಾಟಕ…

Read More