Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ದೇಶದ ವಿವಿಧ ಭಾಷೆಗಳ ಸಮಗ್ರ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗ ಸಾಹಿತಿಗಳಿಗೆ ಕೊಡಮಾಡುವ 2022 ಹಾಗೂ 2023ನೇ ಸಾಲಿನ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು ರೂಪಾಯಿ 10,000/-(ಹತ್ತು ಸಾವಿರ) ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್(ರಿ) ನವರು ಈ ದತ್ತಿ ನಿಧಿಯನ್ನು ಕನ್ನಡಿಗರ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. 2022ನೆಯ ಸಾಲಿನ ಈ ಪ್ರಶಸ್ತಿಯನ್ನು ಮಂಡ್ಯದ ಶ್ರೀಮತಿ ಗುಣಸಾಗರಿ ನಾಗರಾಜ್ ಹಾಗೂ 2023ನೆಯ ಸಾಲಿನ ಪುರಸ್ಕಾರಕ್ಕೆ ಚಿಕ್ಕಮಗಳೂರಿನ ಶ್ರೀಮತಿ ಡಿ.ಎನ್.ಗೀತಾ ಇವರನ್ನು ಆಯ್ಕೆ ಸಮಿತಿ ಆಯ್ಕೆಮಾಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಈ ದತ್ತಿ ಪ್ರಶಸ್ತಿಯುನ್ನು ಕಳೆದ 13 ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದೆ. ದಾನಿಗಳ ಮೂಲ ಉದ್ದೇಶದಂತೆ ದೇಶದ ವಿವಿಧ ಭಾಷೆಗಳ ಸಮಗ್ರ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗ ಸಾಹಿತಿಯೊಬ್ಬರನ್ನು ಗುರುತಿಸಿ ಈ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದುವರೆಗೆ ರಾಜ್ಯದ 13…
ಉಡುಪಿ : ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎ.ವಿ. ನಾವಡ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ 2023ನೇ ಸಾಲಿನ ‘ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ ಕಥನ ಕಾವ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ 10,000/- ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. 1980ರಿಂದ ವಿವಿಧ ಸಂಶೋಧನಾ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸಂಶೋಧನ ಅನುಭವ ಹೊಂದಿರುವ ಪ್ರೊಫೆಸರ್ ನಾವಡರು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಮತ್ತು ಹಂಪಿ ಕನ್ನಡ ವಿ.ವಿ.ಯಲ್ಲಿ ಒಟ್ಟು 38 ವರ್ಷಗಳ ಬೋಧನಾನುಭವ ಹೊಂದಿದ್ದಾರೆ. ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ, ಪ್ರಸಾರಾಂಗ ನಿರ್ದೇಶಕ, ಡೀನ್, ಸಿಂಡಿಕೇಟ್ ಸದಸ್ಯರಾಗಿ ಹಾಗೂ ಸೆನೆಟ್ ಸದಸ್ಯರಾಗಿ…
ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು 2010ರಿಂದೀಚೆಗೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗಮನಾರ್ಹ ಸಾಧನೆಗೈದು ನಾಡಿನಾದ್ಯಂತ ಹೆಸರು ಪಡೆದಿದೆ. ಯಕ್ಷಗಾನ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಜನ್ ಸಂಗೀತ ತರಗತಿಗಳನ್ನೂ ನಡೆಸುತ್ತಾ ಬಂದಿದೆ. ಇಲ್ಲಿ ತರಬೇತಿ ಪಡೆದ ಹಲವು ಪ್ರತಿಭೆಗಳು ರಾಜ್ಯ, ಅಂತರಾಜ್ಯದ ಹಲವಾರು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ . ಇದೀಗ ಯಕ್ಷಗಾನ ತರಬೇತಿ ಆರಂಭಗೊಳ್ಳಲಿದ್ದು ಯಾವುದೇ ಜಾತಿ, ಮತ, ವಯೋಮಾನದ ಯಕ್ಷಗಾನ ಕಲಿಕಾಸಕ್ತರೂ ತರಗತಿಗೆ ಸೇರಬಹುದು. ಪ್ರತೀ ಆದಿತ್ಯವಾರ ಸಂಜೆ 4.30ರಿಂದ ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ (ಶ್ರೀಮೂಕಾಂಬಿಕಾ ಸರ್ವೀಸ್ ಸ್ಟೇಶನ್ ಎದುರು) ತರಗತಿ ನಡೆಯುತ್ತದೆ. ಯಕ್ಷಗಾನ ನಾಟ್ಯ, ಭಾಗವತಿಕೆ, ಚೆಂಡೆ, ಮದ್ದಳೆಗಳ ತರಗತಿಗಳೂ ನಡೆಯಲಿವೆ. ಆಸಕ್ತರು 18-6-2023 ಆದಿತ್ಯವಾರ ಸಂಜೆ 4.30ಕ್ಕೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ 9633876833ನ್ನು ಸಂಪರ್ಕಿಸಿರಿ.
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಹಮ್ಮಿಕೊಂಡಿರುವ ‘ಮನೆ-ಮನೆ ಹರಿಕಥೆ’ ಯೋಜನೆಯ ಆರನೇ ಕಾರ್ಯಕ್ರಮವು ಮಂಗಳಾದೇವಿಯ ಶ್ರೀ ಎ.ಜಿ. ಸದಾಶಿವ ದಂಪತಿಗಳ ನಿವಾಸ ‘ಶ್ರೀ ಅಮೃತಾ’ದಲ್ಲಿ ದಿನಾಂಕ 08-06-2023ರಂದು ಜರಗಿತು. ಕೀರ್ತನಕಾರರಾದ ಡಾ. ಎಸ್.ಪಿ. ಗುರುದಾಸ್ ‘ಶ್ರೀ ಕೃಷ್ಣ ಲೀಲೆ’ ಎಂಬ ವಿಷಯದಲ್ಲಿ ಹರಿಕಥೆಯನ್ನು ನಡೆಸಿಕೊಟ್ಟರು. ಶ್ರೀಮತಿ ಶಶಿರೇಖಾ ಹಾಗೂ ಶ್ರೀ ಎ.ಜಿ. ಸದಾಶಿವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಲವು ಕಲಾವಿದರು ಹಾಗೂ ಕಲಾಸಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಿಮ್ಮೇಳದಲ್ಲಿ ಮಂಗಲ್ ದಾಸ್ ಗುಲ್ವಾಡಿ ತಬ್ಲಾ ಹಾಗೂ ಎಂ. ರಮೇಶ್ ಹೆಬ್ಬಾರ್ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಹರಿಕಥಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಬೆಂಗಳೂರು: ನಗರದ ಸಾಲಿಗ್ರಾಮ ಜೈನ ಮಿತ್ರ ಮಂಡಲಿಯವರು ನೀಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼಯನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪ್ರೊ. ಬಿ.ಪಿ. ನ್ಯಾಮಗೌಡ ಇವರಿಗೆ ಮತ್ತು ʻಶ್ರೇಯೋಭದ್ರʼ ಪ್ರಶಸ್ತಿಯನ್ನು ಮಂಚೇನಹಳ್ಳಿ ಭಗವಾನ್ ಬಾಹುಬಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ.ಬಿ. ಅಶೋಕ ಕುಮಾರ ಇವರಿಗೆ ಇದೇ ಭಾನುವಾರ 18ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾ ಮಂದಿರದಲ್ಲಿ ಪ್ರದಾನ ಮಾಡಲಾಗುವುದು. ಜೈನ ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸಿದ ಸಾಹಿತಿಗಳಿಗೆ ಕೊಡಮಾಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼ ಹಾಗೂ ಉತ್ತಮ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ ನೀಡುವ ‘ಶ್ರೇಯೋಭದ್ರ’ ಪ್ರಶಸ್ತಿಯು ತಲಾ ರೂಪಾಯಿ10,000/-(ಹತ್ತು ಸಾವಿರ) ನಗದು, ಪ್ರಶಸ್ತಿ ಫಲಕ ಮತ್ತು ಫಲ ತಾಂಬೂಲಗಳನ್ನು ಒಳಗೊಂಡಿದೆ. ಸಾಲಿಗ್ರಾಮ ಜೈನ ಮಿತ್ರ ಮಂಡಲಿಯ 22ನೇ ವಾರ್ಷಿಕೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ…
ಬೆಂಗಳೂರು : ಕಪ್ಪಣ್ಣ ಅಂಗಳ ಪ್ರಸ್ತುತ ಪಡಿಸುವ ಪ್ರತೀ ತಿಂಗಳ ಎರಡನೇ ಶನಿವಾರದಂದು ನಡೆಯುವ ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮ ‘ಆಲಾಪ್’ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ದಿನಾಂಕ 10-06-2023 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ್ ಸಾಗರ್ ರವರ ಸುಪುತ್ರರಾದ 9ನೇ ತರಗತಿಯ ವಿದ್ಯಾರ್ಥಿ ತ್ರಿಧಾತ್ ಸಾಗರ್ ಮತ್ತು ಸಂಗಡಿಗರಿಂದ ಕರ್ನಾಟಕ ಶೈಲಿಯ ಶಾಸ್ತ್ರೀಯ ಸಂಗೀತ ಸ್ಯಾಕ್ಸೊಫೋನ್ ವಾದನ ನಡೆಯಿತು. ಪಕ್ಕವಾದ್ಯ ಮೃದಂಗದಲ್ಲಿ ಅಮೋಘ ಕೈಪ, ವಯಲಿನ್ ನಲ್ಲಿ ಅರ್ಚನಾ ಮರಾಠೆ ಹಾಗೂ ಖಂಜೀರದಲ್ಲಿ ಅಶುತೋಷ್ ವಿಶ್ವೇಶ್ವರ ಸಹಕರಿಸಿದರು. ಯುವ ಪ್ರತಿಭೆ ತ್ರಿಧಾತ್ ಸಾಗರ್ ತನ್ನ ಪ್ರಾಥಮಿಕ ಅಭ್ಯಾಸವನ್ನು ತಂದೆಯವರಾದ ಶ್ರೀಧರ್ ಸಾಗರ್ ಹಾಗೂ ಮುಂದೆ ಪದ್ಮಭೂಷಣ ವಿದ್ವಾನ್ ಡಾ. ಕದ್ರಿ ಗೋಪಾಲನಾಥ್ ಬಳಿ ಅಭ್ಯಾಸ ಮಾಡಿದ್ದು ಪ್ರಸ್ತುತ ಕರ್ನಾಟಕ ಶಾಸ್ತ್ರೀಯ ಗಾಯನವನ್ನು ವಿದುಷಿ ಆರ್. ಎ. ರಮಾಮಣಿಯವರಲ್ಲಿ ಅಭ್ಯಾಸ ಮಾಡುತ್ತಿದ್ದಾನೆ , ಹಲವಾರು ಕಛೇರಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ವಯಲಿನ್ ನಲ್ಲಿ ಬಿ. ಇ. ಪದವೀಧರೆ ಹಾಗೂ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾಷಾ ಶಾಸ್ತ್ರಜ್ಞರಿಗಾಗಿ ಮೀಸಲಿಟ್ಟಿರುವ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿʼಯನ್ನು ಪ್ರಕಟಿಸಲಾಗಿದ್ದು. 2022 ಹಾಗೂ 2023ನೆಯ ಸಾಲಿನ ಪ್ರಶಸ್ತಿಗಾಗಿ ಭಾಷಾಶಾಸ್ತ್ರದ ಮೂಲಕ ನಾಡಿನಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿಯು ಹಿರಿಯ ಭಾಷಾಶಾಸ್ತ್ರಜ್ಞರಿಗೆ ನೀಡುವ ಅತೀ ಮಹತ್ವವಾದ ಪುರಸ್ಕಾರವಾಗಿದ್ದು ಇದಕ್ಕೆ ಅವರ ಅಭಿಮಾನಿಗಳು ಹಾಗೂ ಬಂಧುಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದ್ದಾರೆ. ಪ್ರಶಸ್ತಿಯು 10,000/-(ಹತ್ತು ಸಾವಿರ)ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಹಳೆಗನ್ನಡ ಸಾಹಿತ್ಯ, ಛಂದಸ್ಸು, ವ್ಯಾಕರಣ, ನಿಘಂಟು ರಚನೆ, ಗ್ರಂಥ ಸಂಪಾದನೆ, ಅನುವಾದ, ಭಾಷಾ ಶಾಸ್ತ್ರ ಶಾಸ್ತ್ರಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮೀಸಲಿಟ್ಟಿದ್ದು ಅದರಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧಕರಿಗೆ ನೀಡುತ್ತಾ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತಲೋಕದಲ್ಲಿ ಮಹತ್ವದ ಕೊಡುಗೆಗಳನ್ನು…
ಮಂಗಳೂರು : ದಿನಾಂಕ 03-06-2023ರಂದು ತಲಪಾಡಿಯ ದೇವಿಪುರದ ನಿವಾಸಿಯಾದ ರಾಜಾರಾಂ ಹೊಳ್ಳರ ಮನೆಯಲ್ಲಿ ಮನೆ ಮನೆ ಗಮಕ ಕಾರ್ಯಕ್ರಮ ನಡೆಯಿತು. ಅಲ್ಲಿ ‘ರುಕ್ಮಿಣಿ ವಿಜಯ’ ಎಂಬ ಕಥಾ ಭಾಗಕ್ಕೆ ಸುರೇಶ್ ರಾವ್ ಅತ್ತೂರು ಅವರು ವಾಚನ ಮತ್ತು ಎಂ.ಎಸ್. ವಿನಾಯಕ್ ಶಿವಮೊಗ್ಗ ಅವರು ಬಹಳ ಉತ್ತಮ ವ್ಯಾಖ್ಯಾನ ನೀಡಿದರು. ಈ ಕಾರ್ಯಕ್ರಮವು ಅಲ್ಲಿ ನೆರೆದ ಗಮಕ ಸಾಹಿತ್ಯಾಸಕ್ತರಿಂದ ಮೆಚ್ಚುಗೆ ಪಡೆಯಿತು. ಶ್ರೀ ಶುಭಕರ ಅವರು ನಿರೂಪಣೆ ಮಾಡಿ, ರಾಜರಾಂ ಹೊಳ್ಳರು ಸ್ವಾಗತ ಮತ್ತು ಧನ್ಯವಾದ ಸಮರ್ಪಣೆ ಮಾಡಿದರು.
ಉಡುಪಿ : ಭಾಷಾ ಉಪನ್ಯಾಸಕಿ, ಜಾನಪದ ಸಾಹಿತಿ, ಸಂಶೋಧಕಿ ಡಾ. ಸಾಯಿಗೀತಾ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕೊಡಲ್ಪಡುವ ‘ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಬಹುಭಾಷಾ ವಿದ್ವಾಂಸರು, ತುಳು ನಿಘಂಟು ರಚನೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ರೂ.10,000/- ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಡಾ. ಸಾಯಿಗೀತಾ ಅವರು ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾಗಿ, ಸಹಾಯಕ ಭಾಷಾ ಪ್ರಾಧ್ಯಾಪಿಕೆಯಾಗಿ, ನಿಟ್ಟೆ ವಿವಿ ತುಳು ಅಧ್ಯಯನ ಕೇಂದ್ರದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ತುಳುವ ಪರಿಪುಡು ಪೊಣ್ಣ ಮೂಲಕಟ್’ ವಿಷಯದ ಕುರಿತು ಕುಪ್ಪಂನ ದ್ರಾವಿಡಿಯನ್ ವಿ.ವಿ.ಯಿಂದ ಪಿ.ಎಚ್.ಡಿ. ಪಡೆದಿದ್ದಾರೆ. ಗೋವಿಂದ ಪೈ ಸಂಶೋಧನಾ ಕೇಂದ್ರದ ‘ಹಿಸ್ಟರಿ ಆಫ್ ಬಂಟ್ಸ್’ ಸಂಶೋಧನಾ ಯೋಜನೆಯಲ್ಲಿ ಸಂಶೋಧನಾ…
ಮಂಗಳೂರು : ರಾಮಕೃಷ್ಣ ಮಠ ಮಂಗಳೂರು ಇದರ ಸಹಯೋಗದೊಂದಿಗೆ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ, ಮಂಗಳೂರು ಪ್ರಸ್ತುತ ಪಡಿಸುವ ಹರಿದಾಸರ ಕೃತಿ ಕೀರ್ತನೆಗಳ ಗಾಯನ ‘ದಾಸ ಗಾನಾಮೃತ’ ದಿನಾಂಕ 16-06-2023ರಂದು ಸಂಜೆ 5-15ಕ್ಕೆ ಮಂಗಳಾದೇವಿ, ರಾಮಕೃಷ್ಣ ಮಠ, ಸ್ವಾಮಿ ವಿವೇಕಾನ೦ದ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪುರಂದರ ಪ್ರಶಸ್ತಿ ವಿಜೇತ ಶ್ರೀ ಪುತ್ತೂರು ನರಸಿಂಹ ನಾಯಕ್ ಇವರು ಈ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆ.