Author: roovari

ಯಕ್ಷರಂಗದ ಶ್ರೇಷ್ಠ ಭಾಗವತರಾದ ಶ್ರೀ ಕುರಿಯ ಗಣಪತಿ ಶಾಸ್ತ್ರಿಯವರು 2025ನೇ ಸಾಲಿ‌ನ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ದಿನಾಂಕ 01 ಜೂನ್ 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ದಶಮಾನೋತ್ಸವ ಸಂಭ್ರಮದಲ್ಲಿ ಸ್ವಾಮೀಜಿಗಳ ಹಾಗೂ ಗಣ್ಯರ ಸಮಕ್ಷದಲ್ಲಿ, ಯಕ್ಷರಂಗಕ್ಕೆ ಸಂಬಂಧಪಟ್ಟ ಈ ಪ್ರಶಸ್ತಿಯನ್ನು ಕುರಿಯರಿಗೆ ಪ್ರದಾನ ಮಾಡಲಾಗುವುದು ಎಂದು ಪಟ್ಲ ಫೌಂಡೇಶನ್ನಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ ಶೆಟ್ಟಿಯವರು ತಿಳಿಸಿದ್ದಾರೆ. ಪಟ್ಲ ಪ್ರಶಸ್ತಿಯು ಒಂದು ಲಕ್ಷ ನಗದನ್ನು ಹೊಂದಿದ್ದು, ಸರಕಾರೇತರ ಮಟ್ಟದಲ್ಲಿ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಪ್ರಶಸ್ತಿ ಎನಿಸಿಕೊಂಡಿದೆ. ಹಿಮ್ಮೇಳದೊಂದಿಗೆ ಮುಮ್ಮೇಳದ ಅಂಗವನ್ನೂ ತಿಳಿದವರು ಮಾತ್ರ ‘ಭಾಗವತ’ ಎನಿಸಿಕೊಳ್ಳುತ್ತಾರೆ. ಕುರಿಯ ಗಣಪತಿ ಶಾಸ್ತ್ರಿಯವರು ಈ ನಿಟ್ಟಿನಲ್ಲಿ ‘ಭಾಗವತ ಶ್ರೇಷ್ಠ’ ಎಂಬುದು ಅತಿಶಯೋಕ್ತಿಯ ಮಾತಾಗಲಾರದು. ತಲೆಗೆ ರುಮಾಲು ಸುತ್ತಿ, ಹಣೆಗೆ ತಿಲಕವಿಟ್ಟು, ಶುಭ್ರವಾದ ವಸ್ತ್ರ ಧರಿಸಿ, ಜಾಗಟೆ ಹಿಡಿದು ರಂಗಸ್ಥಳದಲ್ಲಿ ಕುರಿಯ ಭಾಗವತರು ಕುಳಿತುಕೊಂಡರೆ, ಅಂದು ಅದ್ಭುತ ಯಕ್ಷಗಾನ ಪ್ರದರ್ಶನ ಕಾಣುವ ಸೌಭಾಗ್ಯ…

Read More

ಹಾಸನ : ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ಹಾಸನ ಇವರ ವತಿಯಿಂದ ಕವಯಿತ್ರಿ ಶ್ರೀಮತಿ ರೇಖಾ ಪ್ರಕಾಶ್ ಇವರ ಪ್ರಾಯೋಜಕತ್ವದಲ್ಲಿ ‘ಲಕ್ಷ್ಮೀ ನಿವಾಸ’, 6ನೇ ಕ್ರಾಸ್, ಎರಡನೇ ಹಂತ, ಆದಾಯ ತೆರಿಗೆ ಕಛೇರಿ ಹಿಂಭಾಗ, ವಿಜಯನಗರ, ಹಾಸನ ಇಲ್ಲಿ ದಿನಾಂಕ 01 ಜೂನ್ 2025ರ ಭಾನುವಾರದಂದು ಸಂಜೆ 3-30 ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲಿಗೆ ಕವಯಿತ್ರಿ ಶ್ರೀಮತಿ ಡಾ. ಶಾಂತ ಅತ್ನಿಯವರ ‘ಕಷ್ಟಗಳಿಗೂ ಸಾವಿದೆ’ ಕೃತಿ ಕುರಿತು ಸಾಹಿತಿಗಳಾದ ಶ್ರೀಮತಿ ವಾಣಿ ಮಹೇಶ್ ಇವರಿಂದ ವಿಶ್ಲೇಷಣೆ ಹಾಗೂ ಆಗಮಿಸಿದ ಕವಿಗಳಿಂದ ಕವನವಾಚನ ಮತ್ತು ವಿಮರ್ಶೆ ಹಾಗೂ ಎಂ. ಕುಸುಮರವರ ‘ಸಂವಾದಿ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು, ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಶ್ರೀಮತಿ ಸುಕನ್ಯಾ ಮುಕುಂದರವರು ಕೋರಿರುತ್ತಾರೆ. ಸಂಪರ್ಕಕ್ಕಾಗಿ ಸಂಖ್ಯೆಗಳು ಸುಕನ್ಯಾ ಮುಕುಂದ – 81238 27811, ರೇಖಾ ಪ್ರಕಾಶ್ – 8660468341, ಸಮುದ್ರವಳ್ಳಿ ವಾಸು -9449311298, ವಾಣಿ ಮಹೇಶ್…

Read More

ಬೆಂಗಳೂರು : ನ್ಯೂ ವೇವ್ ಬುಕ್ಸ್ ಮತ್ತು ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ಅರ್ಪಿಸುವ ರಾಜೇಂದ್ರ ಬಿ. ಶೆಟ್ಟಿ ರಚಿಸಿರುವ ‘ಮೊಗ್ಗರಳಿ ಹೂವಾಗಿ’, ‘ಗಣಿತ ಬಹಳ ಸುಲಭ’ ಮತ್ತು ‘ಮ್ಯಾಥ್ಸ್ ಈಸ್ ಈಸೀ’ ಎಂಬ ಪುಸ್ತಕಗಳ ಅನಾವರಣ ಸಮಾರಂಭವನ್ನು ದಿನಾಂಕ 01 ಜೂನ್ 2025 ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಅಶ್ವಥ್ ಕಲಾ ಭವನದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಪತ್ರಕರ್ತ ಸಾಹಿತಿ ಜೋಗಿ, ಕಥಾಗುಚ್ಛದ ಸಂಸ್ಥಾಪಕಿ ಲತಾ ಜೋಶಿ, ಕವಿ ಡಾ. ಎ. ಭಾನು, ರಂಗಕರ್ಮಿ ಶ್ರೀಪತಿ ಮಂಜನಬೈಲು, ಅಂಕಣಗಾರ ಎನ್. ರಾಮನಾಥ್, ಜನಪದ ತಜ್ಞರಾದ ಡಾ. ಎಂ. ಬೈರೇಗೌಡ, ಪರಂಪರಾ ಕಲ್ಚರಲ್ ಫೌಂಡೇಷನ್ (ರಿ.) ಇದರ ಅಧ್ಯಕ್ಷರಾದ ಜಿ.ಪಿ. ರಾಮಣ್ಣ ಮತ್ತು ಲೇಖಕರಾದ ರಾಜೇಂದ್ರ ಬಿ. ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.

Read More

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ವತಿಯಿಂದ ದಿನಾಂಕ 22 ಮೇ 2025ರಂದು ಮಂಗಳೂರು ಆಕಾಶವಾಣಿ ಕಚೇರಿಯಲ್ಲಿ ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೂರ್ಯ ನಾರಾಯಣ ಭಟ್ ಪಿ.ಎಸ್. “ಆಕಾಶವಾಣಿಯಲ್ಲಿ ಸುದೀರ್ಘ 36 ವರ್ಷ ಅತ್ಯಂತ ನಿಷ್ಠೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಿ ಇದೀಗ ಸಂತೃಪ್ತಿಯಿಂದ ಸೇವೆಯಿಂದ ನಿವೃತ್ತನಾಗಲಿದ್ದೇನೆ. ಮುಂದೆಯೂ ಸಾಹಿತ್ಯ ಸೇವೆ ಮಾಡುವ ಹಂಬಲವಿದೆ” ಎಂದು ಹೇಳಿದರು. ಕ.ಸಾ.ಪ. ಮಂಗಳೂರು ಅಧ್ಯಕ್ಷ ಡಾ. ಮಂಜುನಾಥ ರೇವಣ್ಕರ್, ಕೇಂದ್ರ ಸಮಿತಿಯ ಮಾರ್ಗದರ್ಶಿ ಸಮಿತಿಯ ಸದಸ್ಯ ಡಾ. ಮುರಲಿ ಮೋಹನ ಚೂಂತಾರು, ಕಾರ್ಯದರ್ಶಿ ಗಣೇಶ್ ಪ್ರಸಾದ್‌ಜೀ, ರಘು ಶೆಟ್ಟಿ, ಸನತ್ ಕುಮಾರ್ ಜೈನ್, ಸುಖಲಾಕ್ಷಿ ಆರ್. ಸುವರ್ಣ, ರತ್ನಾವತಿ ಜೆ. ಬೈಕಾಡಿ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕ.ಸಾ.ಪ.ದ ಸದಸ್ಯರಾದ ಕೃಷ್ಣಪ್ಪ ನಾಯ್ಕ, ನಿಜಗುಣ ದೊಡ್ಡಮನಿ, ಪ್ರತಾಪ್ ಕುಮಾರ್, ಮಂಗಳೂರು ಆಕಾಶವಾಣಿಯ ಚಂದ್ರಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Read More

ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ 9ನೇ ದಿನದ ಕಾರ್ಯಕ್ರಮ ದಿನಾಂಕ 26 ಮೇ 2025ರ ಸೋಮವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕದ್ರಿ ದೇವಸ್ಥಾನದ ಟ್ರಸ್ಟಿಗಳಲ್ಲಿ ಓರ್ವರಾದ ಶ್ರೀ ರಾಜೇಂದ್ರ ಮಾತನಾಡಿ “ಯಕ್ಷಗಾನದ ಬಗ್ಗೆ ಅಧ್ಯಯನ. ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ನಾವು ಜೀವನದಲ್ಲಿ ಎತ್ತರಕ್ಕೆ ಏರಬಹುದು. ಹಾಗೆಯೇ ಸರಯೂ ಸಂಸ್ಥೆಯ ಶಿಕ್ಷಣಾರ್ಥಿಗಳು ಕೂಡಾ ಪುರಾಣ ಕಥೆಗಳಲ್ಲಿ ಬರುವ ಆದರ್ಶ ಪಾತ್ರಗಳನ್ನು ಅಭ್ಯಸಿಸಿ ಉತ್ತಮ ಜೀವನ ನಡೆಸಬೇಕು. ರಜತ ವರ್ಷಗಳ ಇತಿಹಾಸವುಳ್ಳ ಈ ಸಂಸ್ಥೆ ಇನ್ನೂ ಬೆಳಗಲಿ” ಎ೦ದರು. ‘ಚಾರ್ಲಿ ಚಾಪ್ಲಿನ್’ ಖ್ಯಾತಿಯ ಹಾಸ್ಯಗಾರ ಸೀತಾರಾಂ ಕುಮಾರ್ ಕಟೀಲು ತಮ್ಮ ತಿರುಗಾಟದ ಅನುಭವವನ್ನು ವಿವರಿಸುತ್ತಾ ಸಂಸ್ಥೆಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಯೋಗಪಟು, ತುಳುಕೂಟದ ಉಪಾಧ್ಯಕ್ಷರಾದ ಜೆ. ವಿ. ಶೆಟ್ಟಿ ಇವರಿಗೆ ‘ಯಕ್ಷ ಸರಯೂ’ ಬಿರುದಿತ್ತು…

Read More

ಬೆಂಗಳೂರು : ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ವತಿಯಿಂದ ರಾಷ್ಟ್ರೀಯ ಗುಮ್ಮಟ ಉತ್ಸವವು ದಿನಾಂಕ 22 ಜೂನ್ 2025ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಆ ಪ್ರಯುಕ್ತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ನಾಡು ನುಡಿ ಸಾಹಿತ್ಯ, ಸಂಸ್ಕೃತಿ, ನೆಲ ಜಲ ಹಾಗೂ ಎಲ್ಲ ಪ್ರಕಾರದ ಕಲೆ, ಸಮಾಜ ಸೇವೆ, ಯುವ ಸಂಘಟನೆ, ಆರಕ್ಷಕ, ಕಾನೂನು, ವೈದ್ಯಕೀಯ, ಶಿಕ್ಷಣ, ರಾಜಕೀಯ, ಉದ್ಯಮಿ, ಮಹಿಳಾ ಶಕ್ತಿ, ಗುತ್ತಿಗೆದಾರ, ಮಾಧ್ಯಮ, ಆಡಳಿತ, ಸರ್ಕಾರಿ ಸೇವೆ, ಕಾರ್ಮಿಕ ಸೇವೆ, ಪ್ರತಿಭಾ ವಿದ್ಯಾರ್ಥಿಗಳು ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಆಸಕ್ತ ಸಾಧಕರು ತಮ್ಮ ಸ್ವ-ವಿವರವನ್ನು ದಿನಾಂಕ 10 ಜೂನ್ 2025ರೊಳಗಾಗಿ 9945161855 ವಾಟ್ಸಪ್ ನಂಬರಗೆ ಕಳುಹಿಸಲು ಕೋರಲಾಗಿದೆ.

Read More

ಮಡಿಕೇರಿ : ಕೊಡಗು ಜಿಲ್ಲೆಯ ವಕೀಲರಾದ ಪೇರಿಯಂಡ ಪಿ. ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ. ದೇವಕಿ ಪೆಮ್ಮಯ್ಯರವರು ಕೊಡಗಿನ ಲೇಖಕರಿಗಾಗಿ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದು, ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ಈ ಪ್ರಶಸ್ತಿಗಾಗಿ ಇವರು ಒಂದು ಲಕ್ಷ ರೂ.ಗಳ ದತ್ತಿಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಠೇವಣಿ ಇಟ್ಟಿರುತ್ತಾರೆ. ಕೊಡಗು ಜಿಲ್ಲೆಯ ಲೇಖಕರು ಪ್ರಕಟಿಸಿರುವ ಕಥೆ, ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ವೈಚಾರಿಕ ಲೇಖನಮಾಲೆ, ಲೇಖನಗಳ ಗುಚ್ಚಗಳಲ್ಲಿ ಹಿಂದಿನ ಐದು ವರ್ಷಗಳ ಒಳಗಾಗಿ ಪ್ರಕಟಗೊಂಡಿರುವ ಉತ್ತಮ ಕೃತಿ ಆಯ್ಕೆ ಮಾಡಿ ಪ್ರಶಸ್ತಿ ನೀಡುವುದು ಈ ಪ್ರಶಸ್ತಿಯ ಉದ್ದೇಶ. ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ದತ್ತಿ ಪ್ರಶಸ್ತಿ ಇದಾಗಿದೆ. ಈಗಾಗಲೇ ಕೊಡಗು ಜಿಲ್ಲೆಯ ಲೇಖಕರುಗಳಿಗಾಗಿ ಮೂರು ಪ್ರಶಸ್ತಿಗಳು ಇದ್ದು, ಇದು ನಾಲ್ಕನೇ ಪ್ರಶಸ್ತಿ ಆಗಿರುತ್ತದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರು ತಿಳಿಸಿದ್ದಾರೆ.

Read More

ಮಂಗಳೂರು : ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮದ 2025ನೇ ಸಾಲಿನ ‘ಯಕ್ಷ ಪಕ್ಷ’ ರಜತ ಸಂಭ್ರಮ ಅಷ್ಟಾಹ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 23 ಮೇ 2025ರಂದು ಕೊಂಚಾಡಿಯ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದಲ್ಲಿ ನಡೆಯಿತು. ಈ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಶಿಕ್ಷಕ ಶ್ರೀ ಸದಾಶಿವರು “ಯಕ್ಷಗಾನದಲ್ಲಿ ಇಂದು ಸ್ತ್ರೀ-ಪುರುಷ ಎಂಬ ಬೇಧವಿಲ್ಲದೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚಿಣ್ಣರೂ ಸಮ ಪ್ರಮಾಣದಲ್ಲಿ ಭಾಗವಹಿಸಿ ಕಲಾರಂಗವನ್ನು ಬೆಳಗುತ್ತಿದ್ದಾರೆ. ಪ್ರೇಕ್ಷಕರೂ ಅದನ್ನು ಅಷ್ಟೇ ಪ್ರಮಾಣದಲ್ಲಿ ಸ್ವೀಕರಿಸಿದ್ದಾರೆ. ಆ ಮೂಲಕವಾಗಿ ಮಕ್ಕಳೂ ಸಂಸ್ಕಾರಯುತರಾಗುತ್ತಾರೆ. ಸರಯೂ ತನ್ನ ರಜತ ಸಂಭ್ರಮದಲ್ಲಿ ವಿವಿಧ ಮಕ್ಕಳ ತಂಡಗಳನ್ನು ಆಹ್ವಾನಿಸಿ ಅವಕಾಶವಿತ್ತಿದ್ದು, ಉಳಿದ ತಂಡಗಳಿಗೆ ಮಾದರಿಯಾಗಿದೆ” ಎ೦ದು ಹೇಳಿದರು. ಯಕ್ಷ ಪೂರ್ಣಿಮಾ ಯಕ್ಷಕಲಾ ಕೇಂದ್ರ ತಂಡ ಸುರತ್ಕಲ್ ತಂಡವನ್ನು ಗೌರವಿಸಲಾಯಿತು. ತಂಡದ ನಿರ್ದೇಶಕಿ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಪೂರ್ಣಿಮಾ ಯತೀಶ್ ರೈಯವರನ್ನು ಕಲಾ ಗೌರವ ನೀಡಿ ಅಭಿನಂದಿಸಲಾಯಿತು. ಮುಖ್ಯ…

Read More

ಕಾಸರಗೋಡು : “ಕನ್ನಡ ನೆಲವಾಗಿದ್ದ ಕಾಸರಗೋಡಿನ ನಾಡು ನುಡಿ ಸಂಸ್ಕೃತಿಗಳನ್ನು ಉಳಿಸುವ, ಬೆಳೆಸುವಲ್ಲಿ ರಂಗ ಚಿನ್ನಾರಿ ಸಾಂಸ್ಕೃತಿಕವಾಗಿ ತನ್ನದೇ ಆದ ಕೊಡುಗೆಯನ್ನು ಕೊಡುತ್ತಲೇ ಇದೆ. ಇದೀಗ ಅಂತರ್ ಧ್ವನಿ ಕಾರ್ಯಕ್ರಮದ ಮೂಲಕ ಸ್ಥಳೀಯ ಗಾಯನ ಪ್ರತಿಭೆಗಳನ್ನು ಉತ್ತೇಜಿಸುವ ಕೆಲಸವನ್ನು ಸ್ವರಚಿನ್ನಾರಿಯ ಮೂಲಕ ರಂಗ ಚಿನ್ನಾರಿ ಮಾಡುತ್ತಿದೆ. ಕರೋಕೆ ಎಂದರೆ ಗಾಯನ ರಹಿತ ವಾದ್ಯ ಮೇಳ, ಗಾಯಕ ಗಾಯಕಿಯರ ಹಾಡಿಗೆ ಇದು ಹಿನ್ನೆಲೆಯನ್ನು ಕೊಡುತ್ತದೆ. ಸಾಂಕೇತಿಕವಾಗಿ ಇದು ಇಲ್ಲಿನ ಮೂಲಸೆಲೆಗೆ ಅಭಿಮಾನದ ದನಿಯನ್ನು ಸೇರಿಸುವ ಪ್ರಕ್ರಿಯೆ.” ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಪತ್ರಕರ್ತ ಬಾ. ನಾ. ಸುಬ್ರಮಣ್ಯ ಹೇಳಿದರು. ಅವರು ದಿನಾಂಕ 24 ಮೇ 2025ರ ಶನಿವಾರದಂದು ಪದ್ಮಗಿರಿ ಕಲಾ ಕುಟೀರದಲ್ಲಿ ಜರಗಿದ ಅಂತರ್ಧ್ವನಿ -4 ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. ತಂತ್ರಜ್ಞ, ಸಾಹಿತಿ ಮೈಸೂರಿನ ಉಮೇಶ್ ಇವರು ಮಾತನಾಡಿ “ಕನ್ನಡದ ಸಹೃದಯರನ್ನೆಲ್ಲಾ ಒಂದೆಡೆ ಸೇರಿಸಿ ಸಾಂಸ್ಕೃತಿಕ ಕಲರವಗಳ ಮೂಲಕ ಧ್ವನಿಯಾಗುವ ರಂಗಚಿನ್ನಾರಿಗೆ ಅಭಿನಂದನೆ, ಶುಭಾಶಯಗಳು. ಅಂತರಂಗದಲ್ಲಿರುವ ಪ್ರತಿಭೆ ಹೊರಹೊಮ್ಮಲು ವೇದಿಕೆಗಳ…

Read More

ಕುಂದಾಪುರ : “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 107ನೇ ತಿಂಗಳ ಕಾರ್ಯಕ್ರಮ ದಿನಾಂಕ 25 ಮೇ 2025ರಂದು ನಡೆಯಿತು. ಶ್ರೀಮತಿ ವಸಂತಿ ಆರ್. ಪಂಡಿತ್ ಮತ್ತು ಶ್ರೀಮತಿ ದೇವಕಿ ಸುರೇಶ್ ಪ್ರಭು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾಗಿ ಗೊಂಬೆಯಾಟ ಪ್ರೋತ್ಸಾಹಕರಾದ ರಾಧಾಕೃಷ್ಣ ಪ್ರಭು, ಮುಖ್ಯ ಅತಿಥಿಗಳಾಗಿ ಉಡುಪಿ ಯಕ್ಷಗಾನ ಕೇಂದ್ರದ ಗುರು ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಮಂಡಳಿಯ ಭಾಗವತರಾದ ಉಮೇಶ್ ಸುವರ್ಣ, ರಮೇಶ್ ಕಾಮತ್, ವಿ. ಶ್ರೀನಿವಾಸ ಪೈ, ಆಡಿಟರ್ ವಾಸುದೇವ ಶ್ಯಾನುಭಾಗ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2024-25ರ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಹಾಗೂ ಕಲಾವಿದೆ ಕುಮಾರಿ ಆಕಾಂಕ್ಷಾ ಎಸ್.ಪೈ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಆಕಾಂಕ್ಷಾ ಎಸ್. ಪೈ ಹಾಗೂ ಅವನಿ ಶ್ಯಾನುಭಾಗ್…

Read More