Author: roovari

ಬೆಂಗಳೂರು : ದೃಶ್ಯ ರಂಗತಂಡ ಇದರ ವತಿಯಿಂದ ‘ದೃಶ್ಯ ನಾಟಕೋತ್ಸವ 2025’ವನ್ನು ದಿನಾಂಕ 09 ಮಾರ್ಚ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ನೋಂದಣಿದಳ ಮಹಾಪರಿವೀಕ್ಷಕರಾದ ಕೆ.ಎ. ದಯಾನಂದ್, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜ್ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ರಂಗಕರ್ಮಿ ಗಣೇಶ ಶೆಣೈ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಹಿರಿಯ ರಂಗಕರ್ಮಿ ಲೇಖಕರಾದ ಡಾ. ವಿಜಯಾ, ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ ಮತ್ತು ರಂಗ ನಿರ್ದೇಶಕರಾದ ಸುರೇಶ್ ಅನಗಳ್ಳಿ ಇವರಿಗೆ ರಂಗ ಗೌರವ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕಿರು ಚಿತ್ರ ಪ್ರದರ್ಶನ ಹಾಗೂ ದಾಕ್ಷಾಯಿಣಿ ಭಟ್ ಎ. ಇವರ ನಿರ್ದೇಶನದಲ್ಲಿ ‘ತಾಜ್ ಮಹಲಿನ ಟೆಂಡರ್’ ನಾಟಕ ಪ್ರದರ್ಶನ ನಡೆಯಲಿದೆ.

Read More

ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನೃತ್ಯದ ಮೂಲಕ ಕಥೆ ಹೇಳುವ ‘ಐಸಿರಿ ಅಧ್ಯಾಯ-2’ ಉತ್ಸವಗಳ ಪರಂಪರೆ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025 ರಂದು ವಿ. ವಿ ಇಲ್ಲಿನ ಎಲ್. ಸಿ.ಆರ್‌. ಐ. ಸಭಾಂಗಣದಲ್ಲಿ ನಡೆಯಿತು. ಸ್ಪರ್ಧೆ ಉದ್ಘಾಟಿಸಿದ ಖ್ಯಾತ ರಂಗ ಹಾಗೂ ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ “ಶಿಕ್ಷಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಯೋಜಿಸುವ ಮಹತ್ವ ಅರಿಯ ಬೇಕು. ಇಂತಹ ಉಪಕ್ರಮಗಳು ಕಲಿಕೆಯ ವಿಧಾನವನ್ನು ಯಾವ ರೀತಿ ಹೆಚ್ಚಿಸುತ್ತವೆ ಮತ್ತು ಮಹತ್ವಾಕಾಂಕ್ಷಿ ಯುವ ಕಲಾವಿದರಿಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತವೆ” ಎಂದರು. ವಿಶ್ವವಿದ್ಯಾಲಯದ ಉಪಕುಲಪತಿ ಫಾ.ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಮಾತನಾಡಿ, ‘ಕರಾವಳಿಯ ಸಾಂಪ್ರದಾಯಿಕ ಭಾಷೆಗಳು ಮತ್ತು ಕಲಾ ಪ್ರಕಾರಗಳನ್ನು ಸಂರಕ್ಷಿಸುವ ಹಾಗೂ ಅವುಗಳ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಬಲಪಡಿಸುವ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು,” ಎಂದರು. ಇದೇ ಸಂದರ್ಭದಲ್ಲಿ ತುಳುನಾಡಿನ ಶ್ರೀಮಂತ ಇತಿಹಾಸವನ್ನು ಸಂರಕ್ಷಿಸುವ ಅವಿರತ ಪ್ರಯತ್ನಗಳಿಗಾಗಿ ಬೆನೆಟ್ ಅಮ್ಮಣ್ಣ, ಹಬ್ಬಗಳು ಹಾಗೂ…

Read More

ಬೆಂಗಳೂರು : ಚೇತನ ಫೌಂಡೇಶನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಮತ್ತು ಕರ್ನಾಟಕ ಸೋಷಿಯಲ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ‘ಮಹಿಳಾ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಬೆಂಗಳೂರಿನ ಗಾಂಧೀ ಭವನದ ಬಾಪೂ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದ ಮಹಿಳೆಯರಿಗೆ ‘ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ’, ‘ಹೆಮ್ಮೆಯ ಕನ್ನಡತಿ ಪ್ರಶಸ್ತಿ’, ‘ಕದಳಿ ಅಕ್ಕಮಹಾದೇವಿ ಸಾಹಿತ್ಯ ಪ್ರಶಸ್ತಿ’, ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಗಳು ನಡೆಯಲಿದೆ. ಲೇಖಕಿ, ಚಿತ್ರಸಾಹಿತಿ, ಪತ್ರಕರ್ತರು, ನಾಡು ನುಡಿ ಚಿಂತಕರಾದ ಡಾ. ಜ್ಯೋತಿ ಜೀವನ್ ಸ್ವರೂಪ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಚೇತನ ಫೌಂಡೇಶನ್ ಸಂಸ್ಥೆಯ ಸಂಚಾಲಕರಿಂದ ಈ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಗೋಷ್ಠಿ 01ರಲ್ಲಿ ‘ಅವಳೆಂದರೆ ..?’ ವಿಶೇಷ ಕಾವ್ಯವಾಚನ ಶ್ರೀಮತಿ ವಿದ್ಯಾ ಆರ್. ದೇವಗಿರಿ, ಡಾ. ಲತಾ ಎಸ್. ಮುಳ್ಳೂರ ಮತ್ತು ಶ್ರೀಮತಿ ಹೇಮಾವತಿ ಇವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಶ್ರೀ ಸುರೇಶ ಕೋರಕೊಪ್ಪ,…

Read More

ಚನ್ನರಾಯಪಟ್ಟಣ : ಈ ನಾಡು ಕಂಡ ಹೆಸರಾಂತ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಇವರು ದಿನಾಂಕ 08 ಮಾರ್ಚ್ 2025ರಂದು ಬೆಳಗ್ಗೆ 9-00 ಗಂಟೆಗೆ ಪ್ರತಿಮಾ ಟ್ರಸ್ಟ್ (ರಿ.) ಇದರ ರಂಗ ಲೋಕಕ್ಕೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನರಾಯಪಟ್ಟಣ ಪ್ರತಿಮಾ ಟ್ರಸ್ಟಿನ ಅಧ್ಯಕ್ಷರಾದ ಉಮೇಶ್ ತೆಂಕನಹಳ್ಳಿ ಇವರು ವಹಿಸಲಿದ್ದು, ಕಲಾವಿದರಾದ ಶ್ರೀಮತಿ ಸುಶೀಲ ರಾವ್ ಮತ್ತು ಶ್ರೀಮತಿ ರಮ ಇವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ನಮ್ಮ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ ಕಲಾ ತಂಡದಿಂದ ಕೋಲಾಟ ಮತ್ತು ಜನಪದ ಸಮೂಹ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.

Read More

ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಪುತ್ತೂರು ಸಹಕಾರದೊಂದಿಗೆ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಸಂಯೋಜನೆಯಲ್ಲಿ ಕರ್ನಾಟಕ ಸಂಘ ಪುತ್ತೂರು ಆಶ್ರಯದಲ್ಲಿ ಕವನ ಸಂಕಲನ ಬಿಡುಗಡೆ ಸಮಾರಂಭ ಮತ್ತು ಕವಿಗೋಷ್ಠಿಯನ್ನು ದಿನಾಂಕ 08 ಮಾರ್ಚ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಪುತ್ತೂರಿನ ಅನುರಾಗ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಬಿ. ಪುರಂದರ ಭಟ್ ಇವರು ಈ ಸಮಾರಂಭವನ್ನು ಉದ್ಘಾಟನೆಗೊಳಿಸಲಿರುವರು. ನಾರಾಯಣ ಕುಂಬ್ರರವರ ‘ಹನಿದನಿ’ ಕೃತಿಯನ್ನು ಅಬುದಾಬಿಯ ಮಿತ್ರಂಪಾಡಿ ಜಯರಾಮ ರೈ ಇವರು ಲೋಕಾರ್ಪಣೆಗೊಳಿಸಲಿದ್ದು, ಮಂಗಳೂರು ಕೆನರಾ ಕಾಲೇಜಿನ ರಘು ಇಡ್ಕಿದು ಕೃತಿ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಿತ್ರಂಪಾಡಿ ಜಯರಾಮ ರೈ, ಕುಮಾರಿ ಧನ್ವಿತಾ ಕಾರಂತ್ ಅಳಿಕೆ, ಕುಮಾರಿ ಶಿರ್ಷಿತಾ ಕಾರಂತ್ ಅಳಿಕೆ, ಶ್ರೀ…

Read More

ಸಂಗೀತವೆಂದರೆ ಜಾತಿ ಮತ ಭೇದ ಭಾವವಿಲ್ಲದ ಒಂದು ಕಲೆ. ಇದು ವ್ಯಕ್ತಿಯ ಜೀವನದಲ್ಲಿ ಸಂತೋಷವನ್ನುಂಟುಮಾಡುತ್ತದೆ. ತಪಸ್ಸಿನಂತೆ ಸಾಧನೆ ಮಾಡಿ ಸಂಗೀತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪ್ರಸಿದ್ಧರಾದ ಭೀಮ್ ಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ್ ರಾಜಗುರು, ಮಾಧವ್ ಗುಡಿ, ರಾಜಶೇಖರ್ ಮನ್ಸೂರ್ ಇತ್ಯಾದಿ ಅಗ್ರರ ನಡುವೆ ಕೇಳಿ ಬರುವ ಮತ್ತೊಂದು ಅಗ್ರಸ್ಥಾನದಲ್ಲಿರುವ ಹೆಸರು ಗಂಗೂಬಾಯ್ ಹಾನಗಲ್. ಇವರ ಮೂಲ ಹೆಸರು ಗಾಂಧಾರಿ ಹಾನಗಲ್. ಸಂಗೀತದಲ್ಲಿ ಪ್ರಸಿದ್ಧರಾದ ಹಾಗೆ ಅವರ ಪರಿಚಯ ಗಂಗೂಬಾಯಿ ಹುಬ್ಳಿಕರ್ ಎಂದಾಯಿತು. ಆಕಾಶವಾಣಿಯಲ್ಲಿ ‘ಮಿಯಾ ಕಿ ಮಲ್ಹಾರ್’ ರಾಗವನ್ನು ಹಾಡಿದಾಗ ಅದನ್ನು ಪ್ರಸಾರ ಮಾಡುವ ಸಮಯದಲ್ಲಿ ಅವರ ಸೋದರ ಮಾವನವರ ಇಚ್ಛೆಯಂತೆ ಗಂಗೂಬಾಯಿ ಹಾನಗಲ್ ಎಂದು ಘೋಷಿಸಲಾಯಿತು. ತಮ್ಮ ಪೂರ್ವಜರ ಊರು ಹಾನಗಲ್ ಆದಕಾರಣ ಅದನ್ನು ಖ್ಯಾತಿಗೊಳಿಸುವ ಉದ್ದೇಶದಿಂದ ಗಂಗೂಬಾಯಿಯವರು ತಮ್ಮ ಅನುಮತಿಯನ್ನು ನೀಡಿದರು. ಗಂಗೂಬಾಯಿ ಹಾನಗಲ್ ಇವರು 1913 ಮಾರ್ಚ್ 5ರಂದು ಹಾನಗಲ್ ನಲ್ಲಿ ಜನಿಸಿದರು. ಇವರ ತಂದೆ ಚಿಕ್ಕೂರಾವ್ ನಾಡಗೀರ ಇವರ ತಾಯಿ ಅಂಬಾಬಾಯಿಯವರು ಕರ್ನಾಟಕ ಸಂಗೀತದ…

Read More

ಕೋಟ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಕೊಡಮಾಡುವ ನಾಲ್ಕನೇ ವರ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿದೆ. ವೀಣಾ ಆರ್. ಭಟ್ ವರಂಗ ಹೆಬ್ರಿ,ಪದ್ಮಿನಿ ಪೈ. ಬಿ ಕಾಸನಗುಂದು ಕೋಟ, ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ, ಶಾಂತಾ ವಾಸುದೇವ ಪೂಜಾರಿ ಮದ್ದುಗುಡ್ಡೆ, ಲಲಿತಾ ನಾಯಕ್ ಮದ್ದೂರು, ಅಶ್ವಿನಿ ಆರ್. ಕೊಂಚಾಡಿ ಮಂಗಳೂರು, ಮೂಕಾಂಬಿಕಾ ಮಯ್ಯ ಹರ್ತಟ್ಟು ಕೋಟ, ಗೀತಾ ಲಕ್ಷ್ಮೀಶ ಶೆಟ್ಟಿ ಮಂಗಳೂರು, ಪುಷ್ಪಾ ಪ್ರಸಾದ್ ಕಡಿಯಾಳಿ, ಸರಿತಾ ಕುತ್ಪಾಡಿ, ಶೋಭಾ ದಿನೇಶ್ ಉದ್ಯಾವರ, ಪ್ರಜ್ಞಾ ಜಿ. ಹಂದಟ್ಟು, ಬಿಂದು ನವೀನ್ ಕೋಟೇಶ್ವರ, ಶಾರದಾ ಅಂಪಾರು, ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್ ಸ್ವರೂಪ್) ಆಯ್ಕೆಯಾಗಿದ್ದಾರೆ. ಡಾ.…

Read More

ಕುಂದಾಪುರ: ಕುಂದಾಪುರದ ವಿಜಯಲಕ್ಷ್ಮೀ ಟ್ರೇಡರ್ಸ್ ಮಾಲಕಿ, ಗುರುಪ್ರಸಾದ ಮಹಿಳಾ ಮಂಡಳಿ ಅಧ್ಯಕ್ಷೆ, ಹಿರಿಯ ಕಲಾವಿದೆ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ದಿನಾಂಕ 02 ಮಾರ್ಚ್ 2025ರ ಆದಿತ್ಯವಾರದಂದು ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ತಮ್ಮ ವ್ಯವಹಾರ ಜ್ಞಾನ, ಕ್ರಿಯಾಶೀಲತೆ, ಸಂಘಟನಾ ಶಕ್ತಿ, ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕಂತಿ ಬಗ್ಗೆ ಆಸಕ್ತಿಯಿಂದ ಸದಾ ಕ್ರಿಯಾಶೀಲರಾಗಿರುತ್ತಿದ್ದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ತಮ್ಮ ಕೃತಿಗಳಾದ ‘ಜೀವನ ಚಕ್ರ’, ‘ವೇದ ಸಾರ’, ‘ಜೋ… ಜೋ’…. ಹಾಗೂ ‘ಜಾನಪದ ಜೋಗುಳ ಗೀತೆ’ ಕೃತಿಗಳಿಂದಲೂ ಜನಪ್ರಿಯರಾದವರು. ಕೊಂಕಣಿ ಶಿಶುಗೀತೆಗಳ ಧ್ವನಿ ಪೆಟ್ಟಿಗೆ ಪ್ರಣಾಳಿಕೆ ತಂದವರು. ತಾಲೂಕಿನ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆಯೂ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು. ‘ಕೊಂಕಣಿ ಕಲಾ ಸಮಾಜದ’ದ ಅಧ್ಯಕ್ಷರಾಗಿ ಹಲವು ಸಮ್ಮೇಳನ ನಡೆಸಿದ್ದ ಇವರು ಕೊಂಕಣಿ ಮಕ್ಕಳ ಸಂಘದ ಮೂಲಕ ಮಕ್ಕಳಿಗೆ ರಂಗ ಕಲೆ, ಯಕ್ಷಗಾನ, ಸಂಗೀತ ತರಬೇತಿ ವ್ಯವಸ್ಥೆ ಮಾಡುತ್ತಿದ್ದರು. ಮಂಗಳೂರಿನ ಚೆಂಬರ್ ಆಫ್ ಕಾಮರ್ಸ್, ಕೆ. ಎಸ್. ಎಸ್.…

Read More

ಧಾರವಾಡ: ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್ ನೀಡುವ ‘ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ’ಗೆ ಬೆಂಗಳೂರಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಪಂಡಿತ ಡಿ.ಕುಮಾರದಾಸ್ ಮತ್ತು ‘ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿ’ಗೆ ಶಿರಸಿ ತಾಲ್ಲೂಕು ಮುತ್ತಮುರ್ಡು ಗ್ರಾಮದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ವಿನಾಯಕ ಹೆಗಡೆ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯು ರೂಪಾಯಿ 1 ಲಕ್ಷ ನಗದು, ಫಲಕ ಹಾಗೂ ಯುವ ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು, ಫಲಕ ಒಳಗೊಂಡಿದೆ. 10 ಮಾರ್ಚ್ 2025ರಂದು ಜರುಗುವ ಮಲ್ಲಿಕಾರ್ಜುನ ಮನಸೂರ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More

ನೃತ್ಯಕ್ಕೆ ಹೇಳಿ ಮಾಡಿಸಿದ ತೆಳ್ಳನೆಯ ಮೈಕಟ್ಟು, ಭಾವಸ್ಫುರಣ ಮೊಗ, ಲವಲವಿಕೆಯ ಆಂಗಿಕಾಭಿನಯ ಉದಯೋನ್ಮುಖ ನೃತ್ಯಕಲಾವಿದೆ ಪ್ರೇರಣಾ ಬಾಲಾಜಿಯ ಧನಾತ್ಮಕ ಅಂಶಗಳು. ಹೆಸರಾಂತ ‘ನೃತ್ಯೋದಯ ಅಕಾಡೆಮಿ’ಯ ಪ್ರಾಮಾಣಿಕ- ಉತ್ತಮ ನೃತ್ಯಗುರು ದಿವ್ಯಶ್ರೀ ವಟಿಯವರ ನೆಚ್ಚಿನ ಶಿಷ್ಯೆ ಗುರುಗಳ ಮಾರ್ಗದರ್ಶನದಂತೆ ಬಹು ಸುಂದರವಾಗಿ, ಅಚ್ಚುಕಟ್ಟಾಗಿ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದಳು. ಈ ಭರವಸೆಯ ಕಲಾವಿದೆ ದಿನಾಂಕ 23 ಫೆಬ್ರವರಿ 2025ರಂದು ಯಲಹಂಕದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಲಾರಸಿಕರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು. ‘ಮಾರ್ಗಂ’ ಪದ್ಧತಿಯ ರೀತ್ಯ ನೃತ್ಯ ಕೃತಿಗಳನ್ನು ಪ್ರಸ್ತುತಪಡಿಸಿದ ಪ್ರೇರಣ, ಮೊದಲಿನಿಂದ ಕಡೆಯವರೆಗೂ ಗೆಲುವಿನಿಂದ, ದೈವೀಕ ಆಯಾಮದ ಕೃತಿಗಳನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದಳು. ಶುಭಾರಂಭದಲ್ಲಿ – ಪ್ರೇರಣಾ ಅತ್ಯಂತ ವಿನಯದಿಂದ ಗುರು-ಹಿರಿಯರು, ದೇವಾನುದೇವತೆಗಳು, ಸಮಸ್ತರಿಗೂ ಭಕ್ತಿಪೂರ್ವಕವಾಗಿ, ಮೆರುಗಿನ ನೃತ್ತಗಳ ಮೂಲಕ ವಿನೀತ ಪ್ರಾರ್ಥನೆಯನ್ನು ‘ಪುಷ್ಪಾಂಜಲಿ’ಯಾಗಿ ಸಲ್ಲಿಸಿದಳು. ಪ್ರಥಮ ಪೂಜಿತ ಶ್ರೀ ವಿಘ್ನರಾಜನನ್ನು ಭಜಿಸಿ ‘ಪೂಜ್ಯಾಯ ರಾಘವೇಂದ್ರಾಯ’ ಎಂದು ರಾಯರಿಗೆ ನಮಿಸಿ ತನ್ನ ಪ್ರಸ್ತುತಿಯನ್ನು ಆರಂಭಿಸಿದಳು. ಎಲ್ಲಕ್ಕಿಂತ ವಿಶೇಷ ಎನಿಸಿದ್ದು, ಅವಳ ‘ಅಲರಿಪು’ವಿನ…

Read More