Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಇವರ ಆಶ್ರಯದಲ್ಲಿ ರಂಗಭೂಮಿ (ರಿ.) ಉಡುಪಿ ಆಯೋಜಿಸುತ್ತಿರುವ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ‘ರಂಗ ತರಬೇತಿ ಶಿಬಿರ 2025’ವನ್ನು ದಿನಾಂಕ 12 ಏಪ್ರಿಲ್ 2025ರಿಂದ 20 ಏಪ್ರಿಲ್ 2025ರವರೆಗೆ ಪ್ರತಿದಿನ ಬೆಳಗ್ಗೆ 8-45ರಿಂದ ಮಧ್ಯಾಹ್ನ 1-00 ಗಂಟೆ ತನಕ ಅಂಬಲಪಾಡಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೊದಲು ನೋಂದಾಯಿಸಿದ 50 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ನೋಂದಣಿ ಶುಲ್ಕ ರೂ.100/- ಆಗಿರುತ್ತದೆ. ನೋಂದಾವಣೆ ಶುಲ್ಕವನ್ನು 7795291485 ಸಂಖ್ಯೆಗೆ ಗೂಗಲ್ ಪೇ ಮಾಡಿ ಹಾಗೂ ಶಿಬಿರಾರ್ಥಿಯ ವಿವರ ಮತ್ತು ಪಾವತಿಯ ಮಾಹಿತಿಯನ್ನು ಅದೇ ಸಂಖ್ಯೆಗೆ ಕಳುಹಿಸಿ.
ಶಾಂತರಸರ ಜನ್ಮ ಶತಾಬ್ದಿ ಆಚರಿಸುವ ಹೊತ್ತಿನಲ್ಲಿಯೇ ‘ಸಂಗಾತ ಪುಸ್ತಕ’ವು ಎಚ್.ಎಸ್. ಮುಕ್ತಾಯಕ್ಕ ಇವರ ‘ಅಪ್ಪ ನಾನು ಕಂಡಂತೆ’ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯನ್ನು ನಾವೆಲ್ಲರೂ ಓದುವಂತಾಗಬೇಕು. ಇದು ಶಾಂತರಸರಿಗೆ ನಾವು ನಿಜವಾಗಿಯೂ ಸಲ್ಲಿಸುವ ಗೌರವದ ಬಗೆಯೂ ಆಗಿದೆ. ಈ ಕೃತಿಯಲ್ಲಿ ಮುಕ್ತಾಯಕ್ಕನವರು ಶಾಂತರಸರ ನೆನಪುಗಳನ್ನು ಮೊಗೆ ಮೊಗೆದು ಕೊಟ್ಟಿದ್ದಾರೆ. ನಾವು ಈವರೆಗೂ ಶಾಂತರಸರ ಕವಿತೆ, ಬರಹ, ಭಾಷಣಗಳ ಮೂಲಕ ಅವರ ವ್ಯಕ್ತಿತ್ವವನ್ನು ಗಮನಿಸಿದ್ದೇವೆ. ಆದರೆ ಮುಕ್ತಾಯಕ್ಕನವರು ಮಾತ್ರ ಬರೆಯಬಹುದಾದ, ನಮಗೆ ಅಪರಿಚಿತವಾದ ಅಪರೂಪದ ನೂರಾರು ಖಾಸಗಿ ನೆನಪುಗಳನ್ನು ಇದರಲ್ಲಿ ದಾಖಲಿಸಿದ್ದಾರೆ. ಅವು ಖಾಸಗಿ ನೆನಪುಗಳಾಗಿದ್ದರೂ ಶಾಂತರಸರ ಸಾಹಿತ್ಯಕ ವ್ಯಕ್ತಿತ್ವ ನಿರ್ಮಾಣಗೊಂಡ ಬಗೆ, ಆ ಕಾಲಘಟ್ಟದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಗಳ ಜನ ಜೀವನ, ಕುಟುಂಬ ಸಂರಚನೆ, ಸಾಮಾಜಿಕ ಚಿತ್ರಣಗಳ ಜೊತೆಗೆ ಆ ಕಾಲದ ಒಂದು ಮನೋಭಿತ್ತಿಯನ್ನು ನಮ್ಮ ಗ್ರಹಿಕೆಗೆ ನಿಲುಕುವ ಹಾಗೆ ಮಾಡುತ್ತವೆ. ಮುಕ್ತಾಯಕ್ಕನವರು ಗಜಲ್ ಗಳನ್ನು ಆರ್ಧವಾಗಿ, ತೀವ್ರವಾಗಿ ಬರೆಯುವದು ಅದನ್ನು ಓದಿದ ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 61’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 06 ಏಪ್ರಿಲ್ 2025ರಂದು ಬೆಳಗ್ಗೆ 6-00 ಗಂಟೆಗೆ ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಲಿದೆ. ಹೊಸಬೆಟ್ಟುವಿನ ಆತ್ರೇಯ ಗಂಗಾಧರ್ ಇವರ ಹಾಡುಗಾರಿಕೆಗೆ ಮೂಲ್ಕಿ ಹೇಮಂತ್ ಭಾಗವತ್ ಇವರು ಹಾರ್ಮೋನಿಯಂ, ಸುರತ್ಕಲ್ಲಿನ ಪ್ರಥಮ್ ಆಚಾರ್ಯ ಇವರು ತಬಲಾ, ಸುರತ್ಕಲ್ಲಿನ ಸುಜಾತಾ ಎಸ್. ಭಟ್ ಇವರು ತಂಬೂರ ಮತ್ತು ಮಂಗಳೂರಿನ ರಾಮನಾಥ್ ಕಿಣಿ ಇವರು ತಾಳದಲ್ಲಿ ಸಾಥ್ ನೀಡಲಿದ್ದಾರೆ. ಎ.ಕೆ. ಅಯ್ಯ ಇವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ.…
ಬೆಂಗಳೂರು : ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದವರಿಂದ ದಿನಾಂಕ 05 ಏಪ್ರಿಲ್ 2025ರಿಂದ 08 ಏಪ್ರಿಲ್ 2025ರವರೆಗೆ ಬೆಂಗಳೂರಿನ ವಿವಿಧೆಡೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ದಿನಾಂಕ 05 ಏಪ್ರಿಲ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ಯಕ್ಷಗಾನಾಭಿಮಾನಿ ವಕೀಲರು ಇವರ ವತಿಯಿಂದ ತರಳಬಾಳು ಕೇಂದ್ರದ ಸಭಾಂಗಣದಲ್ಲಿ ‘ಕಾಯಕಲ್ಪ ದ್ರೌಪದಿ ಪ್ರತಾಪ’, ದಿನಾಂಕ 06 ಏಪ್ರಿಲ್ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರಿನ ಹುಳಿಮಾವು ಸರಸ್ವತೀಪುರಂನ ತ್ರಿಗುಣಾತ್ಮಿಕಾ ಯಕ್ಷ ಬಳಗ ಇವರ ವತಿಯಿಂದ ತ್ರಿಗುಣಾತ್ಮಿಕಾ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ‘ನಮೋ ರಘುವಂಶ ದೀಪ’, ದಿನಾಂಕ 07 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು ಇವರ ವತಿಯಿಂದ ಮಲ್ಲೇಶ್ವರಂ ಸರ್ಕಾರಿ ಶಾಲಾ ಮೈದಾನದಲ್ಲಿ ‘ಶನೀಶ್ವರ ಮಹಾತ್ಮೆ’, ದಿನಾಂಕ 08 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು ಇವರ ವತಿಯಿಂದ ಮಲ್ಲೇಶ್ವರಂ ಸರ್ಕಾರಿ ಶಾಲಾ ಮೈದಾನದಲ್ಲಿ ‘ಸಾಕೇತ ಸಾಮ್ರಾಜ್ಞಿ’ ಎಂಬ…
ಬೆಂಗಳೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ, ಸ್ಟಾರ್ ಕನ್ನಡ, ಸಿನಿಮಾ ಸ್ಟಾರ್ಸ್ ವರ್ಲ್ಡ್, ಡಿಜಿಟಲ್ ಇ-ಪೇಪರ್ ಕರ್ನಾಟಕ, ಕರ್ನಾಟಕ ವಿಶ್ವಕರ್ಮ ಸಮಾಜ ಸೇವಾ ಪರಿಷತ್ತು (ರಿ.) ಬೆಂಗಳೂರು ಮತ್ತು ರಾಸಾ ಪಬ್ಲಿಕೇಷನ್ಸ್ ಬೆಂಗಳೂರು ಇವರ ವತಿಯಿಂದ ‘ಸೇವಾ ಸಾಧಕರ ಸಂಗಮೋತ್ಸವ 2025’ವನ್ನು ದಿನಾಂಕ 30-04-2024ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಮ್ಮೆಯ ನಾರಿರತ್ನ ಪ್ರಶಸ್ತಿ, ಸಾಧಕರಿಗೆ ಗೌರವ ಅಭಿನಂದನೆ, ಕನ್ನಡ ಕವಿ ಗೋಷ್ಠಿ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಚಿಲ್ಡ್ರನ್ ಚಾಂಪ್ಸ್ ಕರ್ನಾಟಕ, ಕರ್ನಾಟಕ ಬಾಲರತ್ನ ಪ್ರಶಸ್ತಿ, ವರ್ಷದ ಕನ್ನಡ ಸೇವಾರತ್ನ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಸಂಭ್ರಮ ನಡೆಯಲಿರುವುದು. ನೋಂದಣಿ ಮಾಡಿಕೊಳ್ಳಲು ಕಚೇರಿ ಸಂಖ್ಯೆ 7406401473 ಸಂಪರ್ಕಿಸಿರಿ.
ತೆಕ್ಕಟ್ಟೆ: ರಸರಂಗ ಕೋಟ ಇವರು ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಸಹಕಾರದಿಂದ ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ದಿ. ಗೋಪಾಲಕೃಷ್ಣ ನಾಯರಿಯವರ ಹೆಸರಿನಲ್ಲಿ ‘ಯುವ ರಂಗ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 30 ಮಾರ್ಚ್ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ನಟ, ನಿರ್ದೇಶಕ ಹಾಗೂ ಸಿನೆಮಾ ಕಲಾವಿದ ರಘು ಪಾಂಡೇಶ್ವರ ಮಾತನಾಡಿ “ಬದುಕಿಗೊಂದು ಶಿಸ್ತು ಮತ್ತು ಸಂಯಮವನ್ನು ಕಲಿಸುವುದು ರಂಗಭೂಮಿ. ಯಶಸ್ಸನ್ನು ತಲೆಗೇರಿಸಿಕೊಳ್ಳದೇ ನಿರಂತರ ಬದ್ಧತೆಯೊಂದಿಗೆ ಇದರಲ್ಲಿ ತೊಡಗಿಕೊಳ್ಳುವ ಕಲಾವಿದ ಹೆಚ್ಚಿನದನ್ನು ಕಲಿಯಲು ಸಾಧ್ಯವಿದೆ” ಎಂದುರು. ಮುಖ್ಯ ಶಿಕ್ಷಕಿ ಸುಲೋಚನ ನಾಯರಿ ಇವರು ಮಾತನಾಡಿ “ನೆಮ್ಮದಿ ಹಾಗೂ ಮನಃಶಾಂತಿಯನ್ನು ನೀಡುವ ಕಲೆಯ ಕುರಿತಾದ ಆಸಕ್ತಿಯನ್ನು ನಾನು ನನ್ನ ವಿದ್ಯಾರ್ಥಿಗಳಲ್ಲಿ ಸದಾ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೇನೆ. ಹದಿನಾರರ ವಸಂತದಲ್ಲಿರುವ ‘ರಸರಂಗ’ ಸಂಸ್ಥೆಗೆ ಶುಭವಾಗಲಿ” ಎಂದು ಹಾರೈಸಿದರು. ಕಲಾ ಪೋಷಕರಾದ ಶ್ರೀಧರ್ ಪುರಾಣಿಕ್ ಮಾತನಾಡಿ “ನಿರಂತರವಾಗಿ ರಂಗ ಚಟುವಟಿಕೆಗಳನ್ನು ರಂಗದಲ್ಲಿ ಜೀವಂತಗೊಳಿಸಿದ ಸಂಸ್ಥೆ ರಸರಂಗ”…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ, ನಾಟಕ ಬೆಂಗಳೂರು ಹಾಗೂ ರಂಗ ಸೌರಭ ಜಂಟಿಯಾಗಿ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 27 ಮಾರ್ಚ್ 2025ರ ಗುರುವಾರದಂದು ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಹಂ. ಪ. ನಾಗರಾಜಯ್ಯ ಮಾತನಾಡಿ “ರಂಗಭೂಮಿಯು ಮನೋರಂಜನೆಗೆ ಸೀಮಿತವಾಗಿರದೆ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮಾಧ್ಯಮವಾಗಿದೆ. ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ರಂಗಭೂಮಿ ತೊಡಗಿದ್ದು, ಪರಸ್ಪರ ಪ್ರೀತಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಿದೆ. ಮನೋರಂಜನೆ ಜತೆಗೆ ವೈವಿಧ್ಯಮಯ ಪ್ರಯೋಗಗಳು ಈ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿದೆ” ಎಂದರು. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಮಾತನಾಡಿ “ರಂಗಭೂಮಿ ಮೂಲಕ ಜನರು ಶಾಂತಿ, ಸಹಬಾಳ್ವೆ, ಸೌಹಾರ್ದವನ್ನು ಕಂಡುಕೊಳ್ಳಬಹುದಾಗಿದೆ. ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣವನ್ನು ರಂಗಭೂಮಿ ಹೊಂದಿದೆ. ಇತ್ತೀಚೆಗೆ ಕಲಾಗ್ರಾಮದಲ್ಲಿ ನಡೆದ ರಂಗ ಪರಿಷೆಗೆ 25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಇದರಿಂದಾಗಿ ರಂಗಭೂಮಿಗೆ ಭವಿಷ್ಯವಿದೆ ಎನ್ನುವುದು ಸ್ಪಷ್ಟ.” ಎಂದರು.…
ಬೆಂಗಳೂರು : ಆಟಮಾಟ ಧಾರವಾಡ ಅಭಿನಯಿಸುವ ಎರಡು ನಾಟಕಗಳ ಪ್ರದರ್ಶನವನ್ನು ದಿನಾಂಕ 05 ಏಪ್ರಿಲ್ 2025ರಂದು ಬೆಂಗಳೂರಿನ ಜೆ.ಪಿ. ನಗರ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3-30 ಗಂಟೆಗೆ ವಿಶ್ವರಾಜ ರಾಜಗುರು ಅಭಿನಯಿಸುವ ಪಂ. ಬಸವರಾಜ ರಾಜಗುರು ಬದುಕಿನ ವೃತ್ತಾಂತದ ಸಂಗೀತ ನಾಟಕ ‘ನಾ ರಾಜಗುರು’ ಮತ್ತು ಸಂಜೆ 7-30 ಗಂಟೆಗೆ ಮಹಾದೇವ ಹಡಪದ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಗುಡಿಯ ನೋಡಿರಣ್ಣ’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9663523904 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗಿಯಾಗಿ ಜನಮನ್ನಣೆ ಗಳಿಸಿದ ಅಸ್ತಿತ್ವ (ರಿ.) ಮಂಗಳೂರು ತಂಡದ ನಾಟಕ ‘ಮತ್ತಾಯ 22:39’ ಪ್ರದರ್ಶನವು ದಿನಾಂಕ 03 ಎಪ್ರಿಲ್ 2025ರಂದು ಸಂಜೆ 7-00 ಘಂಟೆಗೆ ಸರಿಯಾಗಿ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಈಗೀಗ ನಾಟಕವು ಗೋವಾದಲ್ಲಿ ನಡೆದ Serendipity Arts Festival, ಅಸ್ಸಾಂನಲ್ಲಿ ನಡೆದ MWIHUR ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ, ಭಾರತೀಯ ರಂಗ ಶಿಕ್ಷಣ ಕೇಂದ್ರ, ದೆಹಲಿ ಆಯೋಜಿಸಿದ ಅಂತರಾಷ್ಟ್ರೀಯ ರಂಗಮಹೋತ್ಸವದಲ್ಲಿ ಹಾಗೂ ದೇಶದ ಪ್ರತಿಷ್ಟಿತ ನಾಟಕ ಸ್ಪರ್ದೆ METAದಲ್ಲೂ ಆಯ್ಕೆಯಾಗಿ ಯಶಸ್ವಿ ಪ್ರದರ್ಶನಗಳನ್ನು ನೀಡಿತ್ತು. ಕಳೆದ ವರ್ಷ ಮಂಗಳೂರಿನಲ್ಲಿ ಮೊದಲ ಪ್ರದರ್ಶನ ಕಂಡ ಬಳಿಕ, ಹಲವು ರಾಜ್ಯಗಳನ್ನು ಸುತ್ತಿ ಇದೇ ಮೊದಲ ಬಾರಿಗೆ ಮತ್ತೊಮ್ಮೆ ಮಂಗಳೂರಿನಲ್ಲಿ, ವಿಶಿಷ್ಟವಾದ ರಂಗಮಂದಿರದ ವಿನ್ಯಾಸದಲ್ಲಿ ಈ ನಾಟಕದ ಪ್ರದರ್ಶನ ನಡೆಯಲಿದೆ. ನಾಟಕವನ್ನು ಕೇರಳದ ಪ್ರಖ್ಯಾತ ನಿರ್ದೇಶಕರಾದ ಅರುಣ್ ಲಾಲ್ ಇವರು ನಿರ್ದೇಶಿಸಿದ್ದು, ಕ್ಲ್ಯಾನ್ವಿನ್ ಹಾಗೂ ಕುಮಾರ್ ಲಾಲ್ ನಟಿಸಿ, ಅನುಶ್ ಶೆಟ್ಟಿ ಹಾಗೂ…
ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು 30 ವರ್ಷ ತುಂಬಿದ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡಿರುವ ‘ಕಿಂಕಿಣಿ ತ್ರಿಂಶತಿ’ ಕಾರ್ಯಕ್ರಮವು ದಿನಾಂಕ 29 ಮಾರ್ಚ್ 2025ರಂದು ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಇವರು “ಕಲಿಯುಗದಲ್ಲಿ ಕಲಾ ಸೇವೆಯು ಸಹ ದೇವತಾ ಸೇವೆಯಾಗಿದ್ದು, ಇದರಿಂದ ಬದುಕು ಸಾರ್ಥಕವಾಗುವುದು. ಭರತಾಂಜಲಿ ಸಂಸ್ಥೆಯು ಕಲಾ ಶಿಕ್ಷಣದ ಜೊತೆಗೆ ಸಮಾಜಮುಖಿಯಾಗಿ ಬದುಕುವ ರೀತಿ ನೀತಿಯನ್ನು ಅಲ್ಲದೆ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸುತ್ತಿರುವುದು, ಅಲ್ಲದೆ ಸಾರ್ವಜನಿಕವಾಗಿಯೂ ಸ್ಪಂದಿಸುತ್ತಿರುವ ಹೊಳ್ಳ ದಂಪತಿಗಳು ಅಭಿನಂದನಾರ್ಹರು” ಎಂದು ಹರಸಿದರು. “ಪಂದನಲ್ಲೂರು ಶೈಲಿಯ ಶಾಸ್ತ್ರೀಯ ಚೌಕಟ್ಟಿನಲ್ಲಿ ಕಲಾ ಶಿಕ್ಷಣವನ್ನು ಶದ್ದೆಯಿಂದ ಕಳೆದ ಮೂರು ದಶಕಗಳಿಂದ ನೀಡುತ್ತಾ ಬಂದಿರುವ ಪ್ರತಿಮಾ ದಂಪತಿಗಳ ಸೇವೆ ಮೆಚ್ಚುವಂತದ್ದು” ಎಂದು ಗುರುಗಳಾದ ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್ ಹೇಳಿದರು. ವಿದ್ವಾನ್ ಕಶೆಕೊಡಿ ಸೂರ್ಯನಾರಾಯಣ ಭಟ್, ಉದ್ಯಮಿಗಳಾದ…