Author: roovari

ಮೂಡುಬಿದಿರೆ : ಮುದ್ದಣ ಕವಿಯ ಶ್ರೇಷ್ಠ ಯಕ್ಷಗಾನ ಪ್ರಸಂಗ ಕೃತಿಗಳಾದ ‘ಕುಮಾರ ವಿಜಯ’ ಹಾಗೂ ‘ರತ್ನಾವತಿ ಕಲ್ಯಾಣ’ದ ಎಲ್ಲಾ ಹಾಡುಗಳ ಧ್ವನಿಮುದ್ರಣವನ್ನು ದಿನಾಂಕ 17-02-2024ರ ಅಪರಾಹ್ನ 3 ಗಂಟೆಗೆ ಮೂಡುಬಿದಿರೆಯ ಆಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಈ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಸಂತ ಭಾರಧ್ವಾಜ್ ಕಬ್ಬಿನಾಲೆ ಇವರು ಧ್ವನಿಮುದ್ರಣ ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ನಂದಳಿಕೆ ಬಾಲಚಂದ್ರ ಹೆಬ್ಬಾರ್ ಮತ್ತು ಚಂದ್ರಶೇಖರ ಭಟ್ ಕೊಂಕಣಾಜೆ ಸಂಯೋಜಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಲಿಪ ಶಿವಶಂಕರ ಭಟ್ ಹಾಗೂ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಹಾಡುಗಾರಿಕೆಯಲ್ಲಿ ‘ಕುಮಾರ ವಿಜಯ’ ಪ್ರಸಂಗದ ಆಯ್ದ ಪದಗಳ ‘ಬಲಿಪ ಗಾನ ಯಾನ’ ಪ್ರಸ್ತುತಿಯಾಗಲಿದೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪ್ರಸಂಗದ ನಡೆ, ಪದ್ಯಗಳ ಹಾಡುವಿಕೆ, ಮಟ್ಟುಗಳ ಪ್ರಸ್ತುತಿ, ರಂಗ ನಡೆಗಳು, ಧಿತ್ತ ಧೀಂಗ್ಣ ಎಲ್ಲಿ ಯಾವಾಗ ಎಂಬೆಲ್ಲ ಮಾಹಿತಿ ಇದುವರೆಗೆ ದಾಖಲಾಗದೇ…

Read More

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 20-02-2024ರಂದು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ. ಅನನ್ಯ ರಂಗಕರ್ಮಿ, ಪುಸ್ತಕ ಪ್ರೇಮಿ, ಕಿರುತೆರೆ-ಹಿರಿತೆರೆ ಕಲಾವಿದ ಶ್ರೀಪತಿ ಮಂಜನಬೈಲ್ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ತಾಲೂಕಿನ ಪ್ರಥಮ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಅವರಿಗೆ ಸಲ್ಲುತ್ತಿದೆ. ವಿವಿಧ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ಸಮ್ಮೇಳನವು ಅರ್ಥಪೂರ್ಣವಾಗಿ ನಡೆಯಲಿರುವುದೆಂದು ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ತಿಳಿಸಿದ್ದಾರೆ.

Read More

ಉಪ್ಪಿನಂಗಡಿ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ‘ಸಾಹಿತ್ಯ ಸಂಜೆ’ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿನಿಧಿ ಉಪನ್ಯಾಸ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭವು ದಿನಾಂಕ 18-02-2024ರಂದು ಉಪ್ಪಿನಂಗಡಿಯ ಪಂಜಳದ ಸುಧಾಮ ಮನೆಯಂಗಳದ ಮಣಿಮಂಟಪ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ವಿದ್ವಾಂಸರಾದ ಡಾ. ತಾಳ್ತಜೆ ವಸಂತ ಕುಮಾರ ಕಾರ್ಯಕ್ರಮ ಉದ್ಘಾಟಿಸಲಿರುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ‘ಮಹಾಭಾರತದ ಅನುಸಂಧಾನ’ ಎಂಬ ವಿಷಯದಲ್ಲಿ ದತ್ತಿ ನಿಧಿ ಉಪನ್ಯಾಸ ನೀಡಲಿದ್ದು, ಡಾ. ವರದರಾಜ ಚಂದ್ರಗಿರಿ ಇವರು ಲಕ್ಷ್ಮೀಶ ತೋಳ್ಪಾಡಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಮಹಾಭಾರತದ ಅನುಸಂಧಾನ’ದ ಕೃತಿ ಪರಿಚಯ ನಡೆಸಿಕೊಡಲಿರುವರು. ಕಾರ್ಯಕ್ರಮದಲ್ಲಿ ಕಸಾಪ ಪುತ್ತೂರು ಇದರ ಅಧ್ಯಕ್ಷರಾದ ಪುತ್ತೂರು ಉಮೇಶ್…

Read More

ಉಡುಪಿ : ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ಕುರಾಡಿ ಸೀತಾರಾಮ ಅಡಿಗರ ಸ್ಮರಣಾರ್ಥ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಸಂಸ್ಥೆಯು 2023ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನವನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ಸ್ವರಚಿತ ಸ್ವತಂತ್ರ ಕವನ ಸಂಕಲನದ ಮೂರು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಅಂಶುಮನೆ, ಬುಡ್ನಾರ್ ರಸ್ತೆ ಕುಂಜಿಬೆಟ್ಟು ಉಡುಪಿ. ಕವನ ಸಂಕಲನಗಳ ಪ್ರತಿಗಳನ್ನು ಕಳುಹಿಸಲು ಕೊನೆಯ ದಿನಾಂಕ 20-03-2024. ಪ್ರಶಸ್ತಿಯು ರೂಪಾಯಿ 10,000 ಗೌರವ ನಗದಿನೊಂದಿಗೆ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ತಿಳಿಸಿರುತ್ತಾರೆ. ಕೃತಿಗಳು ಸ್ವರಚಿತ, ಸ್ವತಂತ್ರ ಕವನ ಸಂಕಲನಗಳಾಗಿರಬೇಕು. ಅನುವಾದ, ರೂಪಾಂತರ, ಶಿಶುಪ್ರಾಸ, ಹನಿಗವನ ಇತ್ಯಾದಿ ಕೃತಿಗಳನ್ನು ಸ್ಪರ್ಧಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. 98452 40309…

Read More

ಬೆಂಗಳೂರು : ಬಿ.ಇ.ಎಲ್. ಕುವೆಂಪು ಕಲಾ ಕ್ಷೇತ್ರದ ಆವರಣದಲ್ಲಿ ದಿನಾಂಕ 26-01-2024ರಂದು 75ನೇ ಗಣ ರಾಜ್ಯೋತ್ಸವದ ಅಂಗವಾಗಿ ನಡೆದ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಾಮಾಜಿಕ ಜಾಗೃತಿಯ ಕಾಳಜಿಯ ‘ಶಕ್ತಿ ಮಿತ್ರ’ ಎಂಬ ಏಕವ್ಯಕ್ತಿ ಪ್ರದರ್ಶನ ಜರಗಿತು. ಅಭಿನಯಿಸಿದವರು ಬೆಸ್ಕಾಂನ ಕಲಾವಿದ ಮಂಜುನಾಥ ಕಗ್ಗೆರೆ, ತಮ್ಮ ಅಭಿನಯದ ಮೂಲಕ ಸುಮಾರು 40 ನಿಮಿಷಗಳ ಕಾಲ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿ ಸೆರೆ ಹಿಡಿಯುವಲ್ಲಿ ಸಫಲರಾದರು. ‘ಶಕ್ತಿ ಮಿತ್ರ’ ಹೆಸರೇ ಸೂಚಿಸುವಂತೆ ವಿದ್ಯುತ್ ಶಕ್ತಿಯ ಬಳಕೆಗೆ ನಮಗೆಲ್ಲ ನೆರವಾಗುವ ಇಲಾಖೆಯ ಲೈನ್ ಮೆನ್ ಈ ನಾಟಕದ ನಾಯಕ ಮತ್ತು ನಮಗೆಲ್ಲ ಶಕ್ತಿ ಮಿತ್ರ. ಆರಂಭದಲ್ಲಿಯೇ ಎಚ್ಚರದಲ್ಲಿ ಕಾಯ್ದು ಒದಗಿದಕ್ಕೆ ಅಲ್ಲಿ ಕಸುವುಂಟು, ಎಚ್ಚರವಿಲ್ಲದಿರೆ ಸಾವುಂಟು ಪದ ಪುಂಜಗಳ ಎಚ್ಚರಿಕೆಯ ಘಂಟಾನಾದದೊಂದಿಗೆ ತೆರೆದುಕೊಳ್ಳುತ್ತ ಸಾಗುವ ನಾಟಕವು ವಿದ್ಯುತನ್ನು ಅನಿವಾರ್ಯವಾಗಿ ಅಪ್ಪಿಕೊಳ್ಳುತ್ತಿರುವ ಮನುಷ್ಯರು ಆದಕ್ಕಿರುವ ಆಗಾಧ ಶಕ್ತಿಯ ಮುಂದೆ ತೃಣಕ್ಕೆ ಸಮಾನವೆಂದು ಹೆಜ್ಜೆ ಹೆಜ್ಜೆಗೂ ಎಚ್ಚರಿಸುತ್ತಲೇ ಸಾಗುತ್ತದೆ. ಜನನ ಮರಣಗಳ ನಡುವಿನ ಸುಂದರ ಕ್ಷಣಗಳ ಬದುಕನ್ನು ಅನುಭವಿಸಬೇಕಾದರೆ ಎಚ್ಚರ…

Read More

ಸುಳ್ಯ : ಸುಳ್ಯದ ರಂಗ ಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನಡೆದ ‘ರಂಗ ಸಂಭ್ರಮ-2024’ದ ಸಮಾರೋಪದ ಸಮಾರಂಭವು ದಿನಾಂಕ 04-02-2024 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಎಸ್. ಅಂಗಾರ “ನಿರಂತರ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಂಗ ಮನೆಯು ಸದಭಿರುಚಿಯ ಉತ್ತಮ ಪ್ರೇಕ್ಷಕ ಬಳಗವನ್ನು ಸೃಷ್ಟಿಸಿದೆ. ಇದರ ಸ್ಥಾಪಕ ಜೀವನ್ ರಾಂ ಸುಳ್ಯ ಅವರು ಇದಕ್ಕಾಗಿ ಅಭಿನಂದನಾರ್ಹರು. ಅವರೆಂದೂ ಪ್ರಶಸ್ತಿಗಾಗಿ ಶಿಫಾರಸ್ಸು ಕೇಳಲು ಬಂದವರಲ್ಲ. ಸುಳ್ಯದಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಒಂದು ಕಲಾ ಗ್ರಾಮವನ್ನೇ ನಿರ್ಮಾಣ ಮಾಡಬೇಕೆನ್ನುವ ಯೋಜನೆ ನಮ್ಮಲ್ಲಿದೆ.” ಎಂದು ಹೇಳಿದರು. ಸಮಾರೋಪ ಭಾಷಣಗೈದ ಉಜಿರೆ ಎಸ್‌. ಡಿ. ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ “ಸೋಶಿಯಲ್‌ ಮೀಡಿಯಾದ ಅತಿ ಬಳಕೆ ಮಕ್ಕಳ ಶೈಕ್ಷಣಿಕ ಬದುಕಿಗೆ ಮಾರಕವಾಗಿದೆ. ಅದರ ಬದಲು ನಾಟಕ, ಯಕ್ಷಗಾನ, ಸಂಗೀತ, ನೃತ್ಯ ಜಾನಪದ ಮುಂತಾದವುಗಳು ನಮ್ಮ ಲೋಕಾನುಭವವನ್ನು ಹೆಚ್ಚಿಸಲು…

Read More

ಬಡಿಯಡ್ಕ : ‘ಸವಿ ಹೃದಯದ ಕವಿ ಮಿತ್ರರು’ ಎಂಬ ಕವಿ ಕೂಟದ ಪರವಾಗಿ ಸುಭಾಷ್ ಪೆರ್ಲ ಅವರ ಪ್ರೀತಿಯ ಆಮಂತ್ರಣ ಸಿಕ್ಕಿತ್ತು . ಹಾಗೆ ದಿನಾಂಕ 04-02-2024ರಂದು ಪೆರ್ಲಕ್ಕೆ ಹೋದೆ. ಕೂಟ ಕೂಡಿದ ಸ್ಥಳ ಒಂದು ಕಾಡು ಮರಗಳ ಹಿತ್ತಿಲು ಹರೀಶ ಶೆಣೈ ಅವರ ಕುಟುಂಬಕ್ಕೆ ಸೇರಿದ್ದು. ಅವರದೇ ಅಚ್ಚುಕಟ್ಟಾದ ಮನೆ. ಹಳೆತಾದರೂ ತಂಪಿನ, ಸಾಕಷ್ಟು ವಿಶಾಲ ವರಾಂಡದ, ಅದನ್ನೂ ಮಿಕ್ಕ ಸಜ್ಜನಿಕೆಯ ಮನೆಮಂದಿ ಇರುವ ತಾಣ. ಇಲ್ಲಿ ಕವಿ ಮತ್ತು ಕವಿತೆಗಳ ಕುರಿತ ನನ್ನ ಎರಡು ಅನಿಸಿಕೆ ಹೇಳಲೇ ಬೇಕು. ನನಗೆ ಎಂದೂ ಇತರರ ಕವಿತೆಗಳ ಶೈಲಿ, ಮುಗ್ಧ ಭಾವ, ಆರಿಸಿಕೊಂಡ ವಸ್ತುವಿಗೆ ಅವರು ಕೊಡುವ ನ್ಯಾಯ ಮುಂತಾದ್ದು ಇಷ್ಟ. ಕವಿಗೆ ಒಂದು ಬಗೆಯ ನಿಸ್ಪೃಹ ಭಾವ ಬೇಕು. ಯಾರನ್ನೊ ಮೆಚ್ಚಿಸುವುದಕ್ಕೆ ಬೇಕಾಗಿ ಬೌದ್ಧಿಕತೆ, ಪ್ರಾಸಕ್ಕಾಗಿ ಕಸರತ್ತುಗಳು ಇರಕೂಡದು. ಬಹುಶಃ ಇಂಥಾದ್ದನ್ನೆಲ್ಲ ಈ ಹಿಂದೆ ಮಾಡಿದ್ದರಿಂದ ಆದ ಪಶ್ಚಾತ್ತಾಪ ನನ್ನಿಂದ ಹೀಗೆ ಬರೆಸುತ್ತಿದೆಯೇನೊ. ಒಂದು ಭಾವದ ಎಳೆ ಜಿನುಗಿ ಅದೇ…

Read More

ಬದಿಯಡ್ಕ : ಸಂಗೀತ ಪ್ರತಿಷ್ಠಾನಮ್ (ರಿ) ಉಬ್ರಂಗಳ ಇದರ ಅಂಗ ಸಂಸ್ಥೆ ವೀಣಾವಾದಿನಿ ಸಂಗೀತ ವೇದಿಕ್ ತಾಂತ್ರಿಕ ಪ್ರತಿಷ್ಠಾನದ 25ನೇ ವರ್ಷದ ವಾರ್ಷಿಕ ಉತ್ಸವ ‘ವೇದ ನಾದ ಯೋಗ ತರಂಗಿಣಿ’ ಬಹಳ ವಿಜೃಂಭಣೆಯಿಂದ ದಿನಾಂಕ 01-02-2024ರಿಂದ 04-02-2024ರವರೆಗೆ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ ಜರಗಿತು. ದಿನಾಂಕ 01-02-2024ರಂದು ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಮತ್ತು ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಇವರು ಮಹಾ ಶ್ರೀ ಚಕ್ರ ನವಾವರಣ ಪೂಜೆ ಮತ್ತು ಲಕ್ಷಾರ್ಚನೆ ಸಮಾರಂಭವನ್ನು ನೆರವೇರಿಸಿದರು. ದಿನಾಂಕ 02-02-2024ರಂದು ಭದ್ರದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕೊಂಡೆಯೂರು ಸ್ವಾಮೀಜಿಯವರು ಉದ್ಘಾಟಿಸಿದರು. ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂತಿರಿ, ನಿಶ್ಚಲ ಯೋಗದ ಶ್ರೀ ಪ್ರವೀಣ್ ಕುಮಾರ್, ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಇವರು ಉಪಸ್ಥಿತರಿದ್ದರು. ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೆರಿ ಅವರಿಗೆ ಗೌರವಾರ್ಪಣೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಎಡನೀರು ಮಠಾಧಿಪತಿ ಸ್ವಾಮಿ ಸಚ್ಚಿದಾನಂದ ಭಾರತಿ ಪಾದಂಗಳವರ ಸಾನ್ನಿಧ್ಯದಲ್ಲಿ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂತಿರಿಯವರು ಮಹಾ ಶ್ರೀಚಕ್ರ ನವಾವರಣ ಪೂಜೆಯನ್ನು, ಜೊತೆಗೆ…

Read More

ಮಂಗಳೂರು : ಮಂಗಳೂರಿನ ಖ್ಯಾತ ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಭಾಗವತ, ಹಿಮ್ಮೇಳ ವಾದಕ, ಸಂಘಟಕ ಮುಂಡ್ಕೂರು ನಾಗೇಶ್ ಪ್ರಭುಗಳು ದಿನಾಂಕ 09-02-2024ರಂದು ಮಂಗಳೂರು ಕೊಡಿಯಾಲಬೈಲ್ ಸ್ವಗೃಹದಲ್ಲಿ ನಿಧನರಾದರು. 86 ವರ್ಷ ಸಾರ್ಥಕ ಜೀವನ ನಡೆಸಿದ್ದ ಪ್ರಭುಗಳು ಶ್ರೀ ರಾಮ ಯಕ್ಷಗಾನ ಸಂಘ, ಬಿ.ಸಿ. ರೋಡ್ ಇದರ ಸ್ಥಾಪಕ ಆಧ್ಯಕ್ಷರಾಗಿದ್ದರು. ಮಂಗಳೂರಿನ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು. ವಾಗೀಶ್ವರಿ ಸಂಘದ ಶತಮಾನೋತ್ಸವವು ಮಂಗಳೂರು ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ಪ್ರಭುಗಳ ಮಾರ್ಗದರ್ಶನದಲ್ಲಿ 50 ಸನ್ಮಾನ, 50 ಸಂಸ್ಮರಣೆ, 50 ತಾಳಮದ್ದಲೆ ಕಾರ್ಯಕ್ರಮದೊಂದಿಗೆ ಅಭೂತ ಪೂರ್ವ ಯಶಸ್ಸು ಕಂಡಿತ್ತು. ಶ್ರೀಯುತರು 50 ವರ್ಷಗಳ ಕಲಾ ಸೇವೆಯನ್ನು ಗೈದಿದ್ದಾರೆ. ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಮಾತುಗಾರಿಕೆಯ ಸೊಗಡು ಸ್ಮರಣೀಯ. ಮೃತರು ಈರ್ವರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಾಗೀಶ್ವರಿ ಸಂಘದ ಗೌರವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಕದ್ರಿ ನವನೀತ…

Read More

ಕೊಣಾಜೆ: ಮಂಗಳೂರು ವಿ. ವಿ. ಯ  ಕನಕದಾಸ ಸಂಶೋಧನಾ ಕೇಂದ್ರದ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆ ಗಳ, ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮವು ದಿನಾಂಕ 02-02-2024ರ ಶುಕ್ರವಾರದಂದು ಮಂಗಳೂರು ವಿ. ವಿ. ಯ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್‌ ಇದರ ಅಧ್ಯಕ್ಷರಾದ ಪ್ರೊ. ವಿ. ಅರವಿಂದ ಹೆಬ್ಬಾರ್ ಮಾತನಾಡಿ “ಕನಕದಾಸರು, ಪುರಂದರ ದಾಸರು, ವಾದಿರಾಜರು ಸಮಕಾಲೀನರು ಮತ್ತು ಭಕ್ತಿಪಂಥದ ವಕ್ತಾರರಾಗಿ ಗುರುತಿಸಿಕೊಂಡವರು. ಸಂಸ್ಕೃತ ಪಾಂಡಿತ್ಯವೇ ಅಧಿಕವಾಗಿದ್ದ ಕಾಲಘಟ್ಟದಲ್ಲಿ ವ್ಯಾಸಕೂಟದ ಬದಲಾಗಿ ದಾಸಕೂಟ ರಚನೆಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಮನ್ನಣೆ ದೊರೆಯಿತು. ದಾಸಕೂಟದ ಕನಕದಾಸರ ಆತ್ಮದ ಭಾಷೆ ಕನ್ನಡವಾಗಿತ್ತು. ಕನ್ನಡದಲ್ಲಿ ತನ್ಮಯರಾಗಿ ಅವರು ಭಕ್ತಿ ಮತ್ತು ವೈಚಾರಿಕತೆಯನ್ನು ಮಂಡಿಸಿದರು.” ಎಂದರು. ಜಾನಪದ ವಿದ್ವಾಂಸ ಪ್ರೊ. ಚಿನ್ನಪ್ಪಗೌಡ ಮಾತನಾಡಿ “ಸಾಹಿತ್ಯದ, ಸಂಗೀತದ ವಿದ್ಯಾರ್ಥಿಗಳಿಗೆ ಕನಕ ಬಹಳ ಮುಖ್ಯವಾಗುತ್ತಾನೆ. ಪ್ರಾಚೀನ ಕನ್ನಡ ಸಾಹಿತ್ಯ…

Read More