Subscribe to Updates
Get the latest creative news from FooBar about art, design and business.
Author: roovari
11 ಏಪ್ರಿಲ್ 2023, ಮಂಗಳೂರು: ಮಕ್ಕಳ ಶಿಕ್ಷಣದಲ್ಲಿ 25 ವರ್ಷಗಳ ಸಂಶೋಧನಾಧಾರಿತವಾದ ತನ್ನದೇ ವಿನೂತನ ಪರಿಕಲ್ಪನೆಗಳನ್ನು ಹೊಂದಿರುವ ಮತ್ತು ಅವುಗಳನ್ನು ಅನೌಪಚಾರಿಕ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅಪೂರ್ವ ಫಲಿತಾಂಶವನ್ನು ದಾಖಲಿಸಿರುವ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದಿಂದ ನಗರದ ಕೋಡಿಯಾಲ್ ಬೈಲಿನಲ್ಲಿ ಎಪ್ರಿಲ್ 23ರಿಂದ ಮೇ 7ರವರೆಗೆ 15 ದಿನಗಳ ‘ವಿಶೇಷ ಮೆಮೊರಿ ಕ್ಯಾಂಪ’ನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕನೇ ತರಗತಿಯಿಂದ ಆರಂಭಿಸಿ ಯಾವುದೇ ತರಗತಿಯ, ಪಿಯುಸಿ, ಡಿಗ್ರಿ ಯಾವುದೇ ವಿಭಾಗದ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಶಿಕ್ಷಕರು ಭಾಗವಹಿಸಬಹುದು. ಶಿಬಿರದಲ್ಲಿ ಹತ್ತು ಚಟುವಟಿಕೆಗಳ ಮೂಲಕ ಹತ್ತು ಸ್ಮರಣ ತಂತ್ರಗಳಲ್ಲಿ ವಿದ್ಯಾರ್ಥಿಗಳ ಉನ್ನತ ಕಲಿಕೆಗೆ ಅನುಕೂಲವಾಗುವಂತೆ ತರಬೇತಿಯನ್ನು ನೀಡಲಾಗುವುದು. ಅವರ ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಒತ್ತು ಕೊಡುವುದರಿಂದ ಬೌದ್ಧಿಕ ಕಲಿಕೆಯು ಸುಲಲಿತವಾಗುವುದು. ಈ ಶಿಬಿರದಲ್ಲಿ ಏನು ಕಲಿತಿದ್ದೀರಿ ಎನ್ನುವುದಕ್ಕಿಂತ ಯಾವುದರಲ್ಲಿ ಬದಲಾಗಿದ್ದೀರಿ ಎನ್ನುವುದು ಹೆಚ್ಚು ಮಹತ್ವದ್ದಾಗಲಿದೆ. ದೂರದವರಿಗೆ ಪಿಜಿ ಅಥವಾ ಹಾಸ್ಟೆಲ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಗೋಪಾಡ್ಕರ್ 9845203472 ಮತ್ತು…
11 ಏಪ್ರಿಲ್ 2023, ಬೆಂಗಳೂರು: ದೃಶ್ಯ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಟಿ.ಪಿ.ಕೈಲಾಸಂರವರ ದಾಕ್ಷಾಯಿಣಿ ಭಟ್ ಎ. ವಿನ್ಯಾಸ ಹಾಗೂ ನಿರ್ದೇಶನದ ನಾಟಕ “ಪೋಲೀ ಕಿಟ್ಟೀ” ಇದೇ ಬರುವ ದಿನಾಂಕ 13-04-2023 ಗುರುವಾರದಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ. ನಾಟಕದ ಬಗ್ಗೆ: ಟಿ.ಪಿ. ಕೈಲಾಸಂರವರು ತಮ್ಮ ವಿನೋದಾತ್ಮಕ ನಾಟಕಗಳಿಗೆ ಹೆಸರುವಾಸಿ. ಕಂಪನಿ ನಾಟಕಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ ವಾಸ್ತವಿಕ ನಾಟಕಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ. ಪೋಲೀ ಕಿಟ್ಟೀಯು ಈ ರೀತಿಯ ವಿನೋದಾತ್ಮಕ ವಿಡಂಬನಾ ನಾಟಕಗಳಲ್ಲಿ ಒಂದು. ನಾಟಕದ ವಸ್ತುವು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಶಿಕ್ಷಣವನ್ನು ಲೇವಡಿ ಮಾಡುತ್ತದೆ. ಜ್ಞಾನವೆಂಬುದು ಬರೀ ಪುಸ್ತಕದಲ್ಲಿ ಇರೋದಲ್ಲ, ನಮ್ಮ ಸುತ್ತಮುತ್ತಲಿನ ವಾಸ್ತವ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕು ಅದೇ ನಿಜವಾದ ಶಿಕ್ಷಣ. ಶಿಸ್ತು ಒಳ್ಳೆಯದು, ಆದರೆ ಬಹಿರಂಗವಾದ ಹೇಳಿಕೆಗಳಿಂದ ಅದು ಬರುವುದಿಲ್ಲ, ಅದು ಅಂತರಂಗದಿಂದ ಒಡಮೂಡಬೇಕು ಎಂಬುದನ್ನು ಮನೋಜ್ಞವಾಗಿ ಈ ಪ್ರಯೋಗವು ನಮ್ಮೊಳಗಿನ ಸಾಮಾಜಿಕ ಕಳಕಳಿಯನ್ನು ಪ್ರಶ್ನಿಸುತ್ತದೆ. ನಿರ್ದೇಶಕರ ಬಗ್ಗೆ: 2013-2014ನೇ…
11 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ನಡೆದ ತುಳು ಹರಿಕಥೆ ಉಚ್ಚಯ-2023ರ ಮೂರನೇ ದಿನದ ಉದ್ಘಾಟನೆಯನ್ನು ಆಳ್ವಾಸ್ ಸ್ವೀಟ್ಸ್ ಇದರ ಮಾಲಕರಾದ ಶ್ರೀ ಗಿರೀಶ್ ಆಳ್ವ ಮೋರ್ಲ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವೇದಿಕೆಯಲ್ಲಿ, ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಕೊಟ್ಟಾರಿ, ಟ್ರಸ್ಟ್ ನ ಕೋಶಾಧಿಕಾರಿ ಕಲಾಸಾರಥಿ ಶ್ರೀ ತೋನ್ಸೆ ಪುಷ್ಕಳ್ ಕುಮಾರ್, ತುಳುವ ಸಿರಿ ಟ್ರಸ್ಟ್ ನ ಉಪಾಧ್ಯಕ್ಷರಾದ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ, ಸಂಚಾಲಕರಾದ ಸತೀಶ್ ದೀಪಂ, ಸುರೇಶ್ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಬಳಿಕ ಹರಿದಾಸರಾದ ದೇವಕೀತನಯ ಕೂಡ್ಲು…
11 ಏಪ್ರಿಲ್ 2023, ಬೆಂಗಳೂರು: ಬಾದಲ್ ಸರ್ಕಾರ್ ಅವರ ನಾಟಕವೆಂದರೆ ಹಾಗೆಯೇ…..ಮಾತಿನ ಬುಡಬುಡಿಕೆ…..ಮಾತು, ಮಾತು, ಮಾತು….ವಾಸನೆಯ ಬಾಯಿಯ ಮಾತುಗಳು.. ತಲೆ ಚಿಟ್ಟು ಹಿಡಿಸುವ ಮಾತು… ರಂಗಕ್ರಿಯೆಯೇ ನಡೆಯುವುದಿಲ್ಲವೇನೋ ಅನ್ನುವಷ್ಟು ಮಾತು.. ನಡೆದರೂ ಬಹಳ ನಿಧಾನಗತಿಯ, ನಿಂತಲ್ಲೇ ಕಾಲ ನಿಲ್ಲುವಷ್ಟು ನಿಧಾನದ ಕ್ರಿಯೆಗಳು… ಇಲ್ಲಿ, ಈ ರೂಪಾಂತರದ ನಾಟಕದಲ್ಲಿಯೂ ಹಾಗೆಯೇ….. ಮಾತಿನ ಧಾರಾಕಾರದ ಮಳೆಯನ್ನೇ ಸುರಿಸಿದ್ದಾರೆ ಲಕ್ಷ್ಮೀಪತಿ ಕೋಲಾರ ಅವರು. ಆದರೆ ಇಲ್ಲಿ ಮಾತು ಮತ್ತು ರಂಗಕ್ರಿಯೆ ಬಹಳ ವೇಗ ಪಡೆದುಕೊಂಡು ನಡೆಯುತ್ತದೆ…ಪ್ರೇಕ್ಷಕ ಒಂದು ಕ್ಷಣ ಮೈಮರೆತರ, ಒಂದು ಯುಗದಷ್ಟು ಮಾತುಗಳ ಅರ್ಥವನ್ನು ಕಳೆದುಕೊಂಡಿರುತ್ತಾನೆ.. ಯಾಕೆ ಇಷ್ಟು ವೇಗ? ಲಕ್ಷ್ಮೀಪತಿ ಅವರ ಆ ವೇಗದ ಮಾತುಗಾರಿಕೆಗೆ ಕಾರಣವಿದೆ…. ಮನುಷ್ಯ ಕುಲ ಆರಂಭದ – ಅಂದರೆ ಸುಮಾರು ಐದು ಸಾವಿರ ವರುಷಕ್ಕೂ ಹಿಂದಿನ ಇತಿಹಾಸದ, ಮತ, ಧರ್ಮ, ಸಂಸ್ಕೃತಿಯ ಇತಿಹಾಸವನ್ನು ನಿಗದಿತ ಅವಧಿಯಲ್ಲಿ ಹೇಳಬೇಕಾದ ಅವಸರವಿದೆ…. ಯಾವುದೂ ತಪ್ಪಬಾರದು, ಎಲ್ಲದರ ಕಾರಣ ಮತ್ತು ಅರ್ಥವನ್ನು ಎಲ್ಲರಿಗೂ ತಲುಪಿಸುವದಷ್ಟೇ ಅಲ್ಲ, ಅದರ ಅರ್ಥವನ್ನೂ ಮಾಡಿಸಬೇಕು ಎನ್ನುವ ಕಾತುರ…
11 ಏಪ್ರಿಲ್ 2023, ಮಂಗಳೂರು: ಗಾನ ನೃತ್ಯ ಅಕಾಡೆಮಿ ಹಾಗೂ ನೃತ್ಯಾಂಗನ್ ಸಂಸ್ಥೆಗಳ ಸಹ ಆಯೋಜನೆಯಲ್ಲಿ ‘ಪ್ರೇರಣಾ–ನೃತ್ಯ ಸರಣಿ’ ಕಾರ್ಯಕ್ರಮ ದಿನಾಂಕ 07-04-2023ರಂದು ಮಂಗಳೂರಿನ ಮಾಲೆಮಾರ್ ನ ಗಾನ-ನೃತ್ಯ ಅಕಾಡೆಮಿಯ ‘ಅಭ್ಯಾಸಾಂಗಣ’ದಲ್ಲಿ ನಡೆಯಿತು. ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಅತಿ ಸಮೀಪದಿಂದ ನೃತ್ಯ ಕಾರ್ಯಕ್ರಮ ನೋಡುವ ಅವಕಾಶ ಹಾಗೂ ಉದಯೋನ್ಮುಖ ನೃತ್ಯ ಕಲಾವಿದರಿಗೆ ವೇದಿಕೆಯ ಅವಕಾಶಗಳನ್ನು ಕಲ್ಪಿಸಿ ಪ್ರೇರಣೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ಈ ‘ಪ್ರೇರಣಾ ನೃತ್ಯ ಸರಣಿ’. ಬೆಂಗಳೂರಿನ ಖ್ಯಾತ ಕಲಾವಿದರಾದ ವಿ. ಪಾರ್ಶ್ವನಾಥ ಉಪಾಧ್ಯ, ವಿ. ಶ್ರುತಿ ಗೋಪಾಲ್ ಹಾಗೂ ವಿ. ಆದಿತ್ಯ ಪಿ.ವಿ. ಇವರ ವಿದ್ಯಾರ್ಥಿನಿ. ಕು. ವಿಭಾ ರಾಘವೇಂದ್ರ ಇವರು ಪ್ರೇರಣಾದ ಮೊದಲ ಕಾರ್ಯಕ್ರಮದ ಪ್ರಥಮ ಕಲಾವಿದೆ. ಈಕೆ ತನ್ನ ಚುರುಕಿನ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಕೇವಲ 12 ವರ್ಷದ ಈ ಪುಟ್ಟ ಬಾಲೆ ತುಳು ಭಾಷೆಯಲ್ಲಿ ಗಣಪತಿ ಸ್ತುತಿ “ಎಂಚಿತ್ತಿ ಮಗನ್”, ಶಿವ ಸ್ತುತಿ “ನಟನಂ ಆಡಿನಾರ್” ಹಾಗೂ ದೇವರ ನಾಮ “ಹನುಮಂತ…
11 ಏಪ್ರಿಲ್ 2023, ಬೆಂಗಳೂರು: ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ 7-04-2023 ರಂದು ಹಿರಿಯ ಗುರುಗಳಾದ ಸಂಗೀತ ಕಲಾಚಾರ್ಯ ನೀಲಾ ರಾಮ್ ಗೋಪಾಲ್ ಸಂಸ್ಮರಣಾ. ಕಾರ್ಯಕ್ರಮ, ಮಲ್ಲೇಶ್ವರ ಸೇವಾಸದನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ “ಮಂಜುನಾದ ‘ ಸಂಗೀತ ಕಛೇರಿ ಆಯೋಜಿಸಲಾಗಿತ್ತು. . ಹೆಸರಿಗೆ ತಕ್ಕಂತೆ ಮಂಜುನಾದ ನಾದಮಯವಾಗಿತ್ತು. ಶ್ರೀ ಧರ್ಮಸ್ಥಳ ಕ್ಷೇತ್ರದ ಕುರಿತು ರಚನೆಗಳನ್ನು ಶ್ರೀ ಶತಾವಧಾನಿ ಆರ್.ಗಣೇಶ್, ಶ್ರೀ ನಿತ್ಯಾನಂದ ರಾವ್, ಶ್ರೀ. ಎಂ.ನಾರಾಯಣ, ಶ್ರೀ ಕಡತೋಕ ಮಂಜುನಾಥ ಭಾಗವತರು ಹಾಗೂ ಶ್ರೀ ಮುರಳೀಧರ ಭಟ್ ಕಟೀಲು ರಚಿಸಿರುತ್ತಾರೆ. ಛಂದೋಬದ್ಧವಾಗಿರುವ ಸಾಹಿತ್ಯಕ್ಕೆ ಅಳವಡಿಸಿರುವ ರಾಗ ತಾಳಗಳು ಬಹಳ ಸೂಕ್ತವಾಗಿದ್ದು, ಡಾ ರಾಜಕುಮಾರ ಭಾರತಿ ಅವರ ಅದ್ಭುತ ಸಂಗೀತ ಸಂಯೋಜನೆಯಿಂದ ಕೂಡಿತ್ತು. ಕಲಾವಿದರ ಮನೋಧರ್ಮ, ರಚನೆಗಳಿಗೆ ಹೊಂದಿಸಿರುವ ಚಿಟ್ಟೆ ಸ್ವರಗಳು ಸಹ ಸಾಹಿತ್ಯ ಮತ್ತು ರಾಗ ಭಾವಕ್ಕೆ ಮೇಳೈಸಿ ಮತ್ತಷ್ಟು ಮೆರಗು ತಂದು ಸುಂದರವಾಗಿ ಮೂಡಿ ಬಂತು. ಉತ್ತಮ ಹೊಂದಾಣಿಕೆಯೊಂದಿಗೆ ಪ್ರದರ್ಶನ ನೀಡಿದ ಯುವ ಪ್ರತಿಭೆಗಳಾದ ಶ್ರೇಯ ಕೊಳತ್ತಾಯ, ಅದಿತಿ ಪ್ರಹ್ಲಾದ, ಉಷಾ ರಾಮಕೃಷ್ಣ, ನಮ್ರತ…
08 ಏಪ್ರಿಲ್ 2023, ಕಟೀಲು: ನಾಗಾರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆ. ನಾಗಬನದಲ್ಲಿರುವ ಹತ್ತಾರು ಜಾತಿಯ ವೃಕ್ಷಗಳು, ಅವುಗಳಲ್ಲಿ ವಾಸಮಾಡುವ ಪಕ್ಷಿ-ಜೀವ ವೈವಿಧ್ಯಗಳು, ಇವುಗಳ ಪರಿಣಾಮ ಅಲ್ಲಿ ಉಂಟಾಗುವ ನೀರಿನ ಒಸರು ಹೀಗೆ ಸುಂದರ ಪ್ರಕೃತಿಯನ್ನು ಉಳಿಸುವ ಕಾರ್ಯೀದಲ್ಲಿ ನಾಗಾರಾಧನೆಯ ಕೊಡುಗೆ ಅನನ್ಯವಾದುದು. ಅಭಿವೃದ್ಧಿ, ಜೀರ್ಣೋದ್ಧಾರದ ನೆಪದಲ್ಲಿ ಅರ್ಥಪೂರ್ಣವಾಗಿದ್ದ ನಾಗಬನಗಳು ತನ್ನ ವೈಶಿಷ್ಟ್ಯವನ್ನು ಅಗತ್ಯತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಜನಪದ ಸಂಶೋಧಕ, ಸಾಹಿತಿ ಕೆ.ಎಲ್. ಕುಂಡಂತಾಯ ಹೇಳಿದರು. ಅವರು ದಿನಾಂಕ 02-04-2023 ಭಾನುವಾರ ಕಟೀಲು ನಂದಿನಿ ನದಿಯ ಕುದ್ರುವಿನಲ್ಲಿ ಹುತ್ತದ ಎದುರಿನ ನಾಗಮಂಡಲ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ಘಟಕ, ಕಟೀಲು ದೇಗುಲ ಹಾಗೂ ಕಟೀಲು ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ಆರಾಧನಾ ಸಾಹಿತ್ಯ ಸಂವಾದದಲ್ಲಿ ನಾಗಾರಾಧನೆ ಕುರಿತು ಮಾತನಾಡಿದರು. ಭಯ ಭಕ್ತಿಗಳ, ನಂಬಿಕೆಯ ಆರಾಧನೆ, ಕುಟುಂಬದ ಮೂಲವನ್ನು ಹುಡುಕುವ ಆಶಯ ಹೀಗೆ ಬೆಳೆದು ಬಂದ ನಾಗಾರಾಧನೆ ಪ್ರಾಣಿ ಮನುಷ್ಯನ ಸಂಬಂಧಗಳನ್ನು ಸೂಚಿಸುವಂತಹದು. ಅವೈದಿಕ ಆಚರಣೆಯ ಕೆಲವು ನಾಗಬನಗಳಲ್ಲಿ ವರುಷಕ್ಕೊಂದು…
11 ಏಪ್ರಿಲ್ 2023, ಕಾಸರಗೋಡು: ರಂಗ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಸಹಬಾಗಿತ್ವದಲ್ಲಿ 3 ದಿನಗಳ ‘ಚಿತ್ತಾರ’ ರಂಗದ ರಂಗೋಲಿ ಸಹವಾಸ ಶಿಬಿರ ದಿನಾಂಕ 10-04-2023ರಂದು ಪೆರ್ಮುದೆ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲನಟಿ ಪೆನ್ಸಿಲ್ ಬಾಕ್ಸ್ ಚಲನಚಿತ್ರದಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿರುವ ಕು. ದೀಕ್ಷಾ ರೈ ಪುತ್ತೂರು ದೀಪ ಬೆಳಗಿಸಿ, ಚೆಂಡೆ ಬಡಿಯುವುದರ ಮೂಲಕ ನೆರವೇರಿಸಿದರು. ರಂಗ ಚೇತನದ ಗೌರವಾಧ್ಯಕ್ಷರಾದ ಯತೀಶ್ ಕುಮಾರ್ ರೈ ಮುಳ್ಳೇರಿಯ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಬ್ಬಣ್ಣ ಆಳ್ವ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕೇಂದ್ರ ಸಮಿತಿಯ ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಟೀಚರ್, ಪೈವಳಿಕೆ ಗ್ರಾಮ ಪಂಚಾಯತ್ ನ ವಾರ್ಡ್ ಸದಸ್ಯೆ ಇರ್ಶಾನ ಇಸ್ಮಾಯಿಲ್, ಸಾಹಿತಿ ರಂಗ ನಟ ದಿವಾಕರ ಬಲ್ಲಾಳ್ ಉಪಸ್ಥಿತರಿದ್ದರು. ರಂಗ ಚೇತನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಸದಸ್ಯರಾದ…
10 ಏಪ್ರಿಲ್ 2023, ಕಾರ್ಕಳ: ಕನ್ನಡ ಸಂಘ, ಕಾಂತಾವರ (ರಿ.) ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ‘ಅರಿವು ತಿಳಿವು’ 16ನೇ ಕಾರ್ಯಕ್ರಮವು 15-04-2023 ಶನಿವಾರ ಸಂಜೆ 5.00ಕ್ಕೆ ‘ಸಂಭ್ರಮ’ ಹೋಟೇಲ್ ಪ್ರಕಾಶ್, ಕಾರ್ಕಳ ಇಲ್ಲಿ ಡಾ. ಯೋಗೀಶ್ ಕೈರೋಡಿಯವರು ‘ಹೊಸಗನ್ನಡ ಕಾವ್ಯಶಕ್ತಿ ಮತ್ತು ಸೌಂದರ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಲು ಕನ್ನಡ ಸಂಘ, ಕಾಂತಾವರ (ರಿ.) ಮತ್ತು ಅ.ಭಾ.ಸಾ.ಪ. ಕಾರ್ಕಳದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತವನ್ನು ಕೋರಿದ್ದಾರೆ. ಉಪನ್ಯಾಸ ನೀಡಲಿರುವ ಡಾ. ಯೋಗೀಶ್ ಕೈರೋಡಿ ದಕ್ಷಿಣ ಕನ್ನಡ ಜಿಲ್ಲಾ ಬೆಳ್ತಂಗಡಿ ತಾಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, 2011ರಲ್ಲಿ ಮುಂಬಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ತಾಳ್ತಜೆ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿಯನ್ನೂ ಗಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ…
10 ಏಪ್ರಿಲ್ 2023, ಪುತ್ತೂರು: ಪುತ್ತೂರಿನ ದರ್ಬೆಯಲ್ಲಿರುವ ಶಶಿಶಂಕರ ಸಭಾಂಗಣದಲ್ಲಿ ದಿನಾಂಕ 05-04-2023ರಂದು ಸಂಜೆ 5-45ಕ್ಕೆ ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿ (ರಿ.) ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಇವರ ಓಂಕಾರ ಹಾಗೂ ಶಂಖನಾದದೊಂದಿಗೆ ಕಾರ್ಯಕ್ರಮ “ನೃತ್ಯಾಂತರಂಗ 96” ಆರಂಭವಾಯಿತು. ಕಾರ್ಯಕ್ರಮದ ಬಗ್ಗೆ ನಿರ್ದೇಶಕರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಭ್ಯಾಗತರಾಗಿ ಬಂದ ಶ್ರೀಮತಿ ಸಂಧ್ಯಾ ಕಜೆ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಇವರು ಖ್ಯಾತ ಆಯುರ್ವೇದಿಕ್ ವೈದ್ಯರಾದ ಶಶಿಧರ ಕಜೆಯವರ ಧರ್ಮಪತ್ನಿ. ಗೃಹಿಣಿಯಾಗಿದ್ದು ಪುತ್ತೂರಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹಳ ಮುತುವರ್ಜಿಯಿಂದ ಭಾಗವಹಿಸುವ ಇವರು ಎಲ್ಲರ ಗಮನ ಸೆಳೆಯುವಂತಹ ವ್ಯಕ್ತಿತ್ವದವರು. ರೋಟರಿ ಇನ್ನರ್ ವೀಲ್ ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಖ್ಯಾತ ಕಜೆ ಮನೆತನದ ಸೊಸೆಯಾಗಿ ಚಿರಪರಿಚಿತರಾಗಿದ್ದಾರೆ. ಮಗಳು ಕು. ಸನ್ನಿಧಿ ಕಜೆ ಎಂ.ಬಿ.ಬಿ.ಎಸ್. ಅಧ್ಯಯನ ಮಾಡುತ್ತಿದ್ದು, ಭರತನಾಟ್ಯದ ವಿದ್ಯಾರ್ಥಿಯೂ ಆಗಿದ್ದಾರೆ. ಕಲಾವಿದೆ ನವ್ಯಾ ಮೈತ್ರಿ ಕೊಂಡ ಇವರನ್ನು ಕು. ನಿನಾದ ಮತ್ತು ಸಂಧ್ಯಾ ಕಜೆಯವರನ್ನು ಕು.…