Author: roovari

ಬೆಂಗಳೂರು : ನಗರದ ಸಂಸ್ಕೃತ ಭಾರತಿ ಸಭಾಂಗಣದಲ್ಲಿ ದಿನಾಂಕ 28-10-2023ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಆಯೋಜಿಸಿದ್ದ ‘ಆದಿಕವಿ ಪುರಸ್ಕಾರ’ ಹಾಗೂ ‘ವಾಗ್ದೇವಿ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಮಾತನಾಡುತ್ತಾ “ಕೇವಲ ಪಂಡಿತ ವರ್ಗಕ್ಕೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ತಲುಪುವಂತಹ ಸಾಹಿತ್ಯ ರಚನೆ ಇಂದಿನ ಅಗತ್ಯ. ಸಾಹಿತಿಗಳು ಸಮಾಜದ ಬಗ್ಗೆ ಯೋಚನೆ ಮಾಡಬೇಕು. ಅತ್ಯಂತ ಸರಳವಾದ ಕನ್ನಡದಲ್ಲಿ ಕೃತಿಗಳನ್ನು ರಚಿಸಿ, ಅದನ್ನು ಸಮಾಜದ ತಳಮಟ್ಟದವರೆಗೂ ತಲುಪಿಸುವ ಕೆಲಸ ಆಗಬೇಕು. ಇದರಿಂದ ಭಾರತೀಯ ಪ್ರಜ್ಞೆಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಭಾರತೀಯತೆ, ರಾಮರಾಜ್ಯ, ಸಂಸ್ಕೃತಿ ಇತ್ಯಾದಿ ಪದ ಪ್ರಯೋಗವನ್ನು ಮಾಡುತ್ತೇವೆ. ಆದರೆ, ಅವುಗಳ ಅರ್ಥವೇ ಬಹುತೇಕರಿಗೆ ತಿಳಿದಿರುವುದಿಲ್ಲ. ಅಂತಹ ಪದಗಳ ಪರಿಚಯವನ್ನು ಜನಸಾಮಾನ್ಯರಿಗೂ ಮಾಡಿಕೊಟ್ಟರೆ ಭಾರತೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಸಾಧ್ಯ. ಅಂತಹ ಕಾರ್ಯವನ್ನು ಇವತ್ತಿನ ಸಾಹಿತಿಗಳು ಮತ್ತು ಅ.ಭಾ.ಸಾ.ಪ.ದಂತಹ ಸಂಘಟನೆಗಳು ಮಾಡಬೇಕಿದೆ. ಟಿವಿ, ಮೊಬೈಲ್, ಕಂಪ್ಯೂಟರ್ ಮೊದಲಾದ ಮಾಧ್ಯಮಗಳು ಆಧುನಿಕ ಜಗತ್ತನ್ನು ಆಳುತ್ತಿವೆ. ಅವುಗಳ ಬಳಕೆಯನ್ನು…

Read More

ಬೆಂಗಳೂರಿನ ‘ಸಾಧನಾ ಡ್ಯಾನ್ಸ್ ಸೆಂಟರ್’ ನೃತ್ಯ ಶಾಲೆಯ ಹೆಸರಾಂತ ನೃತ್ಯಗುರು ಭಾವನಾ ವೆಂಕಟೇಶ್ವರ ಬದ್ಧತೆ ಮತ್ತು ಪ್ರಯೋಗಶೀಲತೆಗಳಿಗೆ ಹೆಸರಾದವರು. ಸುಮಾರು ಎರಡು ದಶಕಗಳಿಗೂ ಹೆಚ್ಚಿನ ನೃತ್ಯಾನುಭಾವವುಳ್ಳ ಈಕೆ ನೃತ್ಯಾಕಾಂಕ್ಷಿಗಳಿಗೆ ಉತ್ತಮ ವಿದ್ಯೆಯನ್ನು ಧಾರೆಯೆರೆಯುತ್ತ ಭರವಸೆಯ ಕಲಾವಿದೆಯರನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಪ್ರಸ್ತುತ ಅವರ ಬಳಿ ಬಹು ಆಸಕ್ತಿಯಿಂದ ಭರತನಾಟ್ಯವನ್ನು ಕಲಿಯುತ್ತಿರುವ ಲಿಖಿತಾ ನಾರಾಯಣ ಶ್ರೀಮತಿ ನಾಗವೇಣಿ ಮತ್ತು ಶ್ರೀ ನಾರಾಯಣ ರೆಡ್ಡಿಯವರ ಪುತ್ರಿಯಾಗಿದ್ದು, ಕಳೆದ ಒಂಭತ್ತು ವರ್ಷಗಳಿಂದ ಸತತವಾಗಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ನೃತ್ಯದ ಹಲವು ಆಯಾಮಗಳನ್ನು ಕಲಿತಿರುವ ಲಿಖಿತಾ, ದಿನಾಂಕ 05-11-2023ರಂದು ಸಂಜೆ 5 ಗಂಟೆಗೆ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾಳೆ. ಅವಳ ಸೊಬಗಿನ ನೃತ್ಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಎಲ್ಲಾ ಕಲಾರಸಿಕರಿಗೂ ಆದರದ ಸ್ವಾಗತ. ನೃತ್ಯ ಲಿಖಿತಳ ಬಾಲ್ಯದ ಒಲವು. ಅವಳ ಪ್ರತಿಭೆಯನ್ನು ಗಮನಿಸಿದ ಹೆತ್ತವರು ಅವಳ ಏಳನೆಯ ವಯಸ್ಸಿಗೆ ‘ಸಾಧನಾ ಡ್ಯಾನ್ಸ್ ಸೆಂಟರ್’ನ ಗುರು ಭಾವನಾ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಬಹು ಆಸಕ್ತಿಯಿಂದ-ಪರಿಶ್ರಮದಿಂದ ನೃತ್ಯ…

Read More

ಬೆಂಗಳೂರು : ಪ್ರತಿಷ್ಠಿತ ರೇವಾ ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಅಧ್ಯಯನ ಕೇಂದ್ರವು ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರ ‘ನಟ್ಟುವಾಂಗಂ ಕಾರ್ಯಗಾರ’ವನ್ನು ದಿನಾಂಕ 03-11-2023ರಂದು ಹಮ್ಮಿಕೊಂಡಿದೆ. ಸ್ನಾತಕೋತ್ತರ ಪದವಿ, ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೋಸ್ಕರ ಹಮ್ಮಿಕೊಂಡ ಕಾರ್ಯಗಾರವು ಇದಾಗಿದೆ ಎಂದು ವಿಭಾಗದ ಮುಖ್ಯಸ್ಥರಾದ ಡಾ. ವಿದ್ಯಾ ಕುಮಾರಿ ಶಿಮ್ಲಡ್ಕ ಅವರು ತಿಳಿಸಿದರು.

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ‘ಉದಯರಾಗ – 46’ನೇ ಸಂಗೀತ ಕಛೇರಿಯು ಸುರತ್ಕಲ್ ನ ‘ಅನುಪಲ್ಲವಿ’ಯಲ್ಲಿ ದಿನಾಂಕ 05-11-2023 ಭಾನುವಾರ ಪೂರ್ವಾಹ್ನ ಗಂಟೆ 6ಕ್ಕೆ ನಡೆಯಲಿದೆ. ಉಡುಪಿಯ ಗಾರ್ಗಿ ಶಬರಾಯ ಇವರ ಹಾಡುಗಾರಿಕೆಗೆ ಮಂಗಳೂರಿನ ಧನಶ್ರೀ ಶಬರಾಯ ವಯಲಿನ್ ಮತ್ತು ಸುರತ್ಕಲ್ಲಿನ ಸುಮುಖ ಕಾರಂತ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಿರಿಯ ರಂಗ ಕಲಾವಿದೆ ಶ್ರೀಮತಿ ಗೀತಾ ಸುರತ್ಕಲ್ ಇವರು ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಬಂಟ್ವಾಳ : ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕವು ನಿರ್ವಹಿಸುವ ಬಂಟ್ವಾಳ ತಾಲೂಕು 17ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕಡೇಶಿವಾಲಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ದಿನಾಂಕ 06-12-2023ರಂದು ನಡೆಸಲಾಗುವುದು. ಈ ಸಮ್ಮೇಳನದಲ್ಲಿ ತಾಲೂಕಿನ 18 ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸಾನ್ವಿ ಸುವರ್ಣ ಆಯ್ಕೆಯಾಗಿರುತ್ತಾರೆ. ಸಾನ್ವಿ ಸುವರ್ಣ ಇವರು ಸುಂದರ ಪೂಜಾರಿ ಮತ್ತು ವಿಶಾಲಾಕ್ಷಿ ದಂಪತಿಗಳ ಸುಪುತ್ರಿ. ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬಾಲ ಪ್ರತಿಭೆ. ಎಳೆಯ ವಯಸ್ಸಿನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಇವರು ಭಾರತ ಸರಕಾರದ ಶಿಕ್ಷಣ ಸಚಿವಾಲಯದಿಂದ “ವೀರಗಾಥಾ” ಪ್ರಮಾಣ ಪತ್ರ ಪಡೆದಿರುವರು. ಶಶಸ್ತ್ರ ಪಡೆಗಳ ಶೂರರ ಸ್ಮರಣಾರ್ಥವಾಗಿ ಈ ಪ್ರಮಾಣ ಪತ್ರ ನೀಡಲಾಗಿದೆ. ಭಾರತೀಯ ಜೀವ ವಿಮಾ ನಿಗಮವು ನೀಡುವ ಸಾಧನಾ ಪ್ರಶಸ್ತಿಯನ್ನು ಪಡೆದ ಈಕೆ ಉತ್ತಮ ಮಾತುಗಾರರು. ಸ್ಪರ್ಧಾತ್ಮಕ…

Read More

ಕೊಡಗು : ಏಷ್ಯ ಇಂಟರ್‌ನ್ಯಾಷನಲ್ ಕಲ್ಟರ್ ಅಕಾಡಮಿಯ ವತಿಯಿಂದ ಪಂಚಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಇವರಿಗೆ ದಿನಾಂಕ 28-10-2023 ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪಂಚಭಾಷಾ ಸಾಹಿತಿ, ಬಹು ಭಾಷಾ ಕವಿ, ರಂಗ ಕಲಾವಿದೆ, ಸಮಾಜ ಸೇವಕಿ, ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರಿಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಐ.ಎನ್.ಟಿ.ಯು.ಸಿ ಇದರ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಕೆ.ಎ. ಮನೋಕರನ್, ಮಾಜಿ ಸಹಾಯಕ ನ್ಯಾಯಾಧೀಶರಾದ ಡಾ.ಜೆ. ಹರಿದೋಸ್ಸ್ ಎಂ.ಬಿ.ಎ, ಬಿ.ಎಲ್, ಆರ್.ವಿ ದೇವರಾಜ್ ಸೇವಾ ಪ್ರತಿಷ್ಠಾನ ಇದರ ಸ್ಥಾಪಕರು ಮತ್ತು ಆರ್. ವಿ.ಡಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಇನ್ಫಾರ್ಮೇಷನ್ ಇದರ ಉಪಾಧ್ಯಕ್ಷರಾದ ಶ್ರೀಮತಿ ಡಾ.ಮಮತಾ ದೇವರಾಜ್ ಆರ್. ವಿ, ಶ್ರೀ ಷ. ಬ್ರ. ಚೆನ್ನಬಸವಾರಾಧ್ಯ ಶಿವಾಚಾರ್ಯ ಹಾಗೂ ಶ್ರೀಮತಿ ಮಹದೇವಮ್ಮ ತಾಲ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಲಾಯಿತು. ಡಾ| ಉಳುವಂಗಡ ಕಾವೇರಿ ಉದಯ ಕೊಡಗಿನ ಟಿ.ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ ಮಾದಪ್ಪ…

Read More

ನಾಟಕ :  Hang-On ಹ್ಯಾಂಗ್ ಆನ್ ವಿನ್ಯಾಸ, ನಿರ್ದೇಶನ : ಕ್ಲ್ಯಾನ್ವಿನ್ ಫೆರ್ನಾಂಡೀಸ್ ಸಂಗೀತ : ಬಿಂದು, ಜೋಯೆಲ್, ಸುಪ್ರೀತ್, ಕೆವಿನ್ ಮತ್ತು ಮೇಘನ ತಾಂತ್ರಿಕ ಸಹಾಯ : ಅಸ್ತಿತ್ವ (ರಿ.) ಮಂಗಳೂರು ಬೆಳಕು ವಿನ್ಯಾಸ ಹಾಗೂ ನಿರ್ವಹಣೆ : ಕ್ರಿಸ್ಟಿ ಪ್ರಸ್ತುತಿ : ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು Passion & Profession ಪ್ರತಿಯೋಬ್ಬನ ಜೀವನದಲ್ಲಿ ಎದುರಾಗುವ ತುಮಲವಿದು. ತಾನು ಗಾಢವಾಗಿ ಪ್ರೀತಿಸುವ ಹವ್ಯಾಸ ಒಂದೆಡೆ – ಬೇರೆ ಬೇರೆ ಕಾರಣಗಳಿಂದ ಇನ್ನೊಂದು ಕೆಲಸವನ್ನು ವೃತ್ತಿಯಾಗಿ ಸ್ವೀಕರಿಸಬೇಕಾದ ಅನಿವಾರ್ಯತೆ ಮತ್ತೊಂದೆಡೆ. ಈ ಸಂಘರ್ಷ ಎಷ್ಟೋ ಸಾರಿ ಮಾನಸಿಕ ಅಸಮತೋಲನಕ್ಕೆ ಕಾರಣವಾಗಿ ಖಿನ್ನತೆ ಉಂಟುಮಾಡುತ್ತೆ. ಖಿನ್ನತೆ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೂ ದಾರಿ ಮಾಡಿಕೊಡುತ್ತೆ. ಯುವಕನೊಬ್ಬನ ಮನಸ್ಸಿನ ತುಮಲವನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತೆರೆದಿಟ್ಟ ನಾಟಕ ‘ಹ್ಯಾಂಗ್ ಆನ್’. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ವೃತ್ತಿಪರ ಕಲಾವಿದರನ್ನೂ ಮೀರಿಸಿ ಅಭಿಯಯಿಸಿದ, ಕನ್ನಡ -…

Read More

ಪುತ್ತೂರು : ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ (96) ದಿನಾಂಕ 31-10-2023ರಂದು ನಿಧನ ಹೊಂದಿದ್ದಾರೆ. ಬಾಲ್ಯದಲ್ಲಿ ಶಾಲಾ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತ ಪಾಠವನ್ನು ಕಲಿತಿದ್ದರು. ಪ್ರಸಿದ್ಧ ಪದ್ಯಾಣ ಮನೆತನದವರಾಗಿರುವ ಇವರು ಬಾಲ್ಯದಲ್ಲೇ ತಾಳಮದ್ದಳೆಯಲ್ಲಿ ಆಸಕ್ತಿ ಹೊಂದಿದ್ದರು. ಕುರಿಯ ವಿಠಲ ಶಾಸ್ತ್ರಿಯವರ ವೇಷದ ಅಂದಕ್ಕೆ ಮರುಹೋಗಿ ತಾನೂ ಕಲಾವಿದನಾಗಬೇಕೆಂಬ ಆಶಯ ಹೊಂದಿದ್ದರು. ಅಜ್ಜ ಸುಬ್ರಾಯ ಭಟ್ಟರ ಮೂಲಕ ಕುರಿಯರ ನೇತೃತ್ವದ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಬದುಕು ಆರಂಭಿಸಿದರು. ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಟ ಲಭ್ಯವಾಯಿತು. ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದರು. ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ವೆನಿಸಿಕೊಳ್ಳುತ್ತಿತ್ತು. ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೆ ಹೆಸರಾಗಿದ್ದರು. ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊಂದಿಗೆ ಒಂದು ದಶಕಕ್ಕಿಂತಲೂ ಅಧಿಕ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ರಂಗ ಚಿನ್ನಾರಿ ಸಂಗೀತ ಘಟಕವಾದ ಸ್ವರ ಚಿನ್ನಾರಿ ಏರ್ಪಡಿಸಿದ ಪ್ರಸಿದ್ಧ ಸಂಗೀತ ನಿರ್ದೇಶಕ, ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾಂಡೋಲಿನ್ ವಾದಕ, ಸಂಗೀತ ನಿರ್ದೇಶಕ ಎನ್.ಎಸ್.ಪ್ರಸಾದ್ ನೇತೃತ್ವದ ಸ್ವರ ಸಂಗೀತ ಶಿಬಿರವಾದ ‘ಸ್ವರ ಸಂಚಾರ’ ಕಾರ್ಯಕ್ರಮ ದಿನಾಂಕ 28.10.2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗಾನ ಪ್ರವೀಣ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮಾತನಾಡುತ್ತಾ “ಸಂಗೀತವು ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಹಿಂದೆಲ್ಲ ರಾಜಾಶ್ರಯದಲ್ಲಿ ಸಂಗೀತ ಬೆಳೆದು ಬಂದಿತ್ತು. ಇಂದು ರಾಜಾಶ್ರಯವಿಲ್ಲದಿದ್ದರೂ ಸಂಗೀತ ಪ್ರೇಮಿಗಳ ಹಾಗೂ ಕೆಲವು ಸಂಘಟನೆಗಳ ಮೂಲಕ ಸಂಗೀತ ಬೆಳೆದು ಬರುತ್ತಿದೆ. ಅಂತಹ ಕಾರ್ಯದಲ್ಲಿ ರಂಗಚಿನ್ನಾರಿಯ ಅಂಗವಾಗಿರುವ ‘ಸರ ಚಿನ್ನಾರಿ’ ಮಹತ್ವದ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವರ ಚಿನ್ನಾರಿ ಗೌರವಧ್ಯಕ್ಷ ಶ್ರೀ ಕೃಷ್ಣಯ್ಯ ಅನಂತಪುರ ಅವರು ಮಾತನಾಡಿ “ಸಂಗೀತ ಸಾಗರ.…

Read More

ಕಾಸರಗೋಡು : ರಂಗಚಿನ್ನಾರಿಯ ಅಂಗ ಸಂಸ್ಥೆ ನಾರಿಚಿನ್ನಾರಿಯ 10ನೆಯ ಸರಣಿ ಕಾರ್ಯಕ್ರಮ ‘ಶರದ್ವಿಲಾಸ’ವು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 29-10-2023ರಂದು ಸಾಧಕರಿಗೆ ಸನ್ಮಾನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪ್ರಸ್ತುತಿಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಖ್ಯಾತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಇವರು ದೀಪ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತೃ ಋಣವನ್ನು ತೀರಿಸಲು ಅಸಾಧ್ಯ ಎಂದು ಹೇಳಿ ಮಾತೃತ್ವದ ಮಹತ್ವವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದರು. ಮಾಬ೯ಲ್ ವ್ಯಾಪಾರದಲ್ಲಿ ಯಶಸ್ವೀ ಮಹಿಳಾ ಉದ್ಯಮಿಯಾಗಿ ಹೆಸರು ಪಡೆದ ಬಿಂದು ದಾಸ್ ಹಾಗೂ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಅವರನ್ನು ಈ ಸಂದರ್ಭದಲ್ಲಿ ಹಾರ, ಫಲಪುಷ್ಪ ಮತ್ತು ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಸರ್ವಮಂಗಳಾಜಯ್ ಪುಂಚಿತ್ತಾಯ ಹಾಗೂ ವನಜಾಕ್ಷಿ ಚಂಬ್ರಕಾನ ಇವರು ಸನ್ಮಾನಿತರ ಸಾಧನೆಗಳನ್ನು ಪರಿಚಯಿಸಿದರು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಬಿಂದು ದಾಸ್ ಅವರು ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆಯನ್ನು ಅಪಿ೯ಸಿದರು. ಮೀನಾಕ್ಷಿ ಬೊಡ್ಡೋಡಿಯವರು ಅಮ್ಮನ ಕುರಿತಾದ ಭಾವಪೂರ್ಣ ಕವನವನ್ನು ವಾಚಿಸುವುದರೊಂದಿಗೆ…

Read More