Subscribe to Updates
Get the latest creative news from FooBar about art, design and business.
Author: roovari
ಕಡಬ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಪಡುಬೆಟ್ಟು ಸರಕಾರಿ ಹಿ. ಪ್ರಾ. ಶಾಲೆಯ ಸಹಯೋಗದಲ್ಲಿ ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭ, ಗುರುವಂದನೆ ಮತ್ತು ಮಕ್ಕಳ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 10-02-2024ರಂದು ಪಡುಬೆಟ್ಟು ಸರಕಾರಿ ಹಿ.ಪ್ರಾ. ಶಾಲಾ ರಂಗಮಂದಿರದಲ್ಲಿ ನಡೆಯಿತು. ಮಕ್ಕಳ ಯಕ್ಷಗಾನ ಮಂಡಳಿಯನ್ನು ಉದ್ಘಾಟಿಸಿ ಮಾತನಾಡಿದ ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ “ಎಂಭತ್ತರ ದಶಕದಲ್ಲಿ ಈ ಮೇಳವನ್ನು ಸ್ಥಾಪಿಸಿ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳ ನೀಡಿ ಪ್ರಸಿದ್ದಿ ಪಡೆಯಲು ಕಾರಣೀಭೂತರಾದ ಇಲ್ಲಿನ ನಿವೃತ್ತ ಶಿಕ್ಷಕ ದಿ. ಶಾಂತಿಗೋಡು ಗೋಪಾಲ ಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಪ್ರತಿಷ್ಠಾನ ಮೂಲಕ ನಾಲ್ಕು ದಶಕಗಳ ಬಳಿಕ ಮತ್ತೆ ಅದೇ ಮಕ್ಕಳ ಮೇಳವನ್ನು ಲೋಕಾರ್ಪಣೆಗೊಳಿಸುವ ಕಾರ್ಯ ನನ್ನ ಪಾಲಿಗೊದಗಿದೆ. ಯಕ್ಷಗಾನವು ಭಾರತೀಯ ಸಂಸ್ಕೃತಿ ಬಿಂಬಿಸುವ ಕಲೆಯಾಗಿದ್ದು, ಮಕ್ಕಳ ತಂಡದ ಮೂಲಕ ನಿರಂತರ ಆ ಕೆಲಸ ನಡೆಯುವಂತಾಗಲಿ.” ಎಂದು ಶುಭ ಹಾರೈಸಿದರು. …
ಬೆಂಗಳೂರು : 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಡಾ. ರಾಜ್ ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿ’ಗೆ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ಉಮೇಶ್ ಅವರನ್ನು ಡಾ. ರಾಜ್ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ರಾಜ್ ಕುಮಾರ್ ಅವರು ತಮಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಬಂದಾಗ ನಗದು ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದರು. ನಂತರದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಈ ದತ್ತಿನಿಧಿಗೆ ಇನ್ನಷ್ಟು ಮೊತ್ತವನ್ನು ಸೇರಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಯನ್ನು ಪ್ರವೇಶಿಸಿದ ಎಂ.ಎಸ್. ಉಮೇಶ್ ಇವರು ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಾಲನಟರಾಗಿ ಹೆಸರು ಮಾಡುವ ಮೂಲಕ ಕಲಾರಂಗ ಪ್ರವೇಶಿಸಿದ್ದರು. ಗುಬ್ಬಿ ಕಂಪನಿಯಲ್ಲಿ ಕೂಡ ಬಾಲ ನಟನಾಗಿ ಪ್ರಸಿದ್ಧಿ ಪಡೆದ…
ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ನಾಗೇಶ ಪ್ರಭುಗಳ ಶೃದ್ಧಾಂಜಲಿ ಕಾರ್ಯಕ್ರಮ ಮೌರಿಷ್ಕ ಪಾರ್ಕ್ ನಲ್ಲಿ ದಿನಾಂಕ 21-02-2024ರಂದು ನಡೆಯಿತು. ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘವನ್ನು 30 ವರ್ಷಗಳ ಕಾಲ ಮುನ್ನಡೆಸಿದ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ವಿವರ ನೀಡಿದರು. ಯಾವುದೇ ಕಷ್ಟಗಳು ಎದುರಾದರೂ ಅವನ್ನೆಲ್ಲ ನಿವಾರಿಸಿಕೊಂಡು ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ನುಡಿ ನಮನ ಸಲ್ಲಿಸಿದರು. ಬಿ.ಸಿ. ರೋಡಿನಲ್ಲಿ ನಾಗೇಶ ಪ್ರಭುಗಳೇ ಸ್ಥಾಪಿಸಿದ್ದ ಶ್ರೀ ರಾಮ ಯಕ್ಷಗಾನ ಸಂಘದ ಸಂಜೀವ ಶೆಟ್ಟಿಯವರು ಮಾತನಾಡಿ ಪ್ರಭುಗಳು ಭಾಗವತರಾಗಿ, ಮದ್ದಳೆವಾದಕರಾಗಿ, ಅರ್ಥಧಾರಿಯಾಗಿ ಸಲ್ಲಿಸಿದ ಸೇವೆಯನ್ನು ನೆನಪಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು. ಇಸ್ಕಾನ್ ಕಾರ್ಯದರ್ಶಿ ಸನಂದನ ದಾಸ ಪ್ರಭುಗಳು ನಾಗೇಶ ಪ್ರಭುಗಳ ಅಪಾರವಾದ ಪುರಾಣ ಜ್ಞಾನದ ಬಗ್ಗೆ ಹೇಳಿ, ಧಾರ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದ ಕಾರಣ ನಾಗೇಶರಿಗೆ ಶ್ರೀ ಕೃಷ್ಣ ಸದ್ಗತಿಯನ್ನು ನೀಡಲಿ ಎಂದು ಹಾರೈಸಿದರು. ದೇರಾಜೆ ಸೀತಾರಾಮಯ್ಯರ ಒಡನಾಡಿಯಾಗಿದ್ದ, ಯಕ್ಷಗಾನ…
ಮಂಗಳೂರು : ಅಸ್ತಿತ್ವ (ರಿ.) ಮಂಗಳೂರು ಹಾಗೂ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇದರ ರಂಗ ತಿರುಗಾಟ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯಲಿದೆ. ಸುಮಾರು 8 ನಾಟಕಗಳ 40ಕ್ಕೂ ಹೆಚ್ಚು ಪ್ರದರ್ಶನಗಳು ಈ ಎರಡು ತಿಂಗಳುಗಳಲ್ಲಿ ನಡೆಯಲಿದೆ. ಅಸ್ತಿತ್ವ ತಂಡ ಕಳೆದ ಎಂಟು ವರ್ಷಗಳಿಂದ ‘ಸುವಾರ್ತೆ ಭೊಂವ್ಡಿ’ ಎಂಬ ಶೀರ್ಷಿಕೆಯಲ್ಲಿ ನಾಟಕಗಳನ್ನು ಪ್ರದರ್ಶನ ನೀಡುತ್ತಾ ಬಂದಿದೆ. ಈವರೆಗೆ ಸುಮಾರು 12 ನಾಟಕಗಳ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶ ವಿದೇಶದಲ್ಲಿ ಪ್ರದರ್ಶನ ಕಂಡಿವೆ. ಈ ವರ್ಷದ ತಿರುಗಾಟಕ್ಕೆ ಸಂತ ಅಲೋಶಿಯಸ್ ಕಾಲೇಜಿನ ರಂಗತಂಡದ ಸಹಭಾಗಿತ್ವ ಕೂಡ ಇದ್ದು, ಡಿಪ್ಲೋಮಾ ವಿಧ್ಯಾರ್ಥಿಗಳ ನಾಟಕ ‘ದಾದ್ಲ್ಯಾಂ ಮಧೆಂ ತುಂ ಸದೆಂವ್’ ಎಂಬ ನಾಟಕವೂ ಈ ತಿರುಗಾಟದಲ್ಲಿ ಪ್ರದರ್ಶನಗೊಳ್ಳುತ್ತಲಿದೆ. ಅಸ್ತಿತ್ವ ತಂಡದ ಮುಖ್ಯಸ್ಥರಾದ ವಂದನೀಯ ಡಾಕ್ಟರ್ ಆಲ್ವಿನ್ ಸೆರಾವೊರವರು ಬಹುತೇಕ ನಾಟಕಗಳನ್ನು ರಚಿಸಿದ್ದು, ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಕ್ರಿಸ್ಟಿ ಈ ತಿರುಗಾಟದ ಸಂಯೋಜಕರಾಗಿದ್ದಾರೆ. ಈ ತಿರುಗಾಟಕ್ಕೆ ಕನ್ನಡ…
ಗಾಯನ ಸಮಾಜದ ವೇದಿಕೆಯ ಮೇಲೆ ಅಂದು ಮಧುಮಿತ ರವೀಂದ್ರ ವೀರಾಂಜನೇಯನ ಪ್ರತಿರೂಪವಾಗಿ, ಕೆಚ್ಚೆದೆಯ ಕಲಿ ಆತ್ಮವಿಶ್ವಾಸದಿಂದ ಸಮುದ್ರಲಂಘನ ಮಾಡಿ ಸೀತಾಮಾತೆಯನ್ನು ದರ್ಶಿಸಿ, ರಾವಣನ ಸಮ್ಮುಖ ತನ್ನ ಬಾಲವನ್ನು ಸುತ್ತಿ ಸಿಂಬಿ ಹೆಣೆದು ತನ್ನದೇ ಆದ ಸಿಂಹಾಸನ ನಿರ್ಮಿಸಿಕೊಂಡು ಎದೆಯುಬ್ಬಿಸಿ, ಅವನಿಗೆ ಸರಿಮಿಗಿಲಾಗಿ ಕುಳಿತು, ರಾವಣನ ಹತ್ತುತಲೆಗಳನ್ನು ನೋಡಿ ಲೇವಡಿಮಾಡಿ, ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಇಡೀ ಲಂಕೆಯನ್ನು ಸುಟ್ಟು, ಚೈತನ್ಯಪೂರ್ಣವಾದ ತನ್ನ ವ್ಯಕ್ತಿತ್ವವನ್ನು ಸಾಬೀತುಪಡಿಸಿದ. ಶ್ರೀರಾಮನ ಭಕ್ತಿ ತಾದಾತ್ಮ್ಯತೆಯಿಂದ ಮೈಮರೆತು ಕುಣಿದು, ಮಂಡಿ ಅಡವುಗಳಿಂದ ರಂಗಾಕ್ರಮಣದಲ್ಲಿ ವಿಜ್ರುಂಭಿಸಿದ ವೀರಹನುಮನ ಯೋಗದ ಭಂಗಿಗಳಿಂದ ರೋಮಾಂಚಗೊಳಿಸಿ, ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ ಮಧುಮಿತಳ ನುರಿತ ನಾಟ್ಯಾಭಿನಯ ಕಲಾರಸಿಕರಲ್ಲಿ ವಿಸ್ಮಯವನ್ನುಂಟು ಮಾಡಿತು. ಕಣ್ಮನ ಸೆಳೆದ ಪ್ರಸ್ತುತಿ ಅವಳ ರಂಗಪ್ರವೇಶದ ಮೊದಲಹೆಜ್ಜೆಗಳು ಅನಿಸಲೇ ಇಲ್ಲ. ಕಿರುತೆರೆ ಅಭಿನೇತ್ರಿ ಹಾಗೂ ನೃತ್ಯಾಚಾರ್ಯ ವಿ. ನಮಿತಾ ದೇಸಾಯಿ ಅವರ ಮನೋಹರ ನೃತ್ಯ ಸಂಯೋಜನೆಯಲ್ಲಿ ರೂಪುಗೊಂಡ ಕೃತಿಗಳನ್ನು ಅಂಗಶುದ್ಧವಾಗಿ ಯಾವ ಅರೆಕೊರೆಯಿಲ್ಲದೆ, ಮಿಂಚಿನ ಸಂಚಾರದ ನೃತ್ತ-ಮನೋಹರ ‘ಕರಣ’ಗಳಿಂದ ಸಾಕ್ಷಾತ್ಕರಿಸಿ ಮಿಂಚಿದ್ದಳು. ನಗುಮೊಗ…
ಹೈದರಾಬಾದ್ : ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ತೆಲಂಗಾಣದ ಕ್ರಾಫ್ಟ್ ಕೌನ್ಸಿಲ್ ಸಂಸ್ಥೆಯು ಕೊಡ ಮಾಡುವ ‘ಶ್ರೀಮತಿ ಪಿಂಗಳೆ ಕಮಲಾರೆಡ್ಡಿ ಎಕ್ಸಲೆನ್ಸ್ ಇನ್ ಕ್ರಾಫ್ಟ’ ರಾಷ್ಟ್ರೀಯ ಪುರಸ್ಕಾರವು ಕೊಂಕಣ ತೀರ ಪ್ರದೇಶದ ಕಾವಿ ಕಲೆಯ ಉಳಿವು ಮತ್ತು ಬೆಳೆಸುವಿಕೆಗೆ ಸುಮಾರು 20 ವರ್ಷಗಳಿಂದಲೂ ಸತತವಾಗಿ ಶ್ರಮಿಸುತ್ತಿರುವ ಡಾ. ಜನಾರ್ದನ ಹಾವಂಜೆಯವರಿಗೆ ದಿನಾಂಕ 22-02-2024ರಂದು ಲಭಿಸಿದೆ. ಮಾಜಿ ಚಯರ್ಮೆನ್ ಉಷಾ ಸರ್ವರಾಯಲು, ಚಯರ್ಮೆನ್ ಅನುರಾಧಾ ಬಿಷನೊಯಿ, ಪಿಂಗಳೆ ನೀಲ ರೆಡ್ಡಿ ಹಾಗೂ ಕ್ರಾಫ್ಟ್ ಕೌನ್ಸಿಲ್ ನ ಅರ್ಜುನ್ ನಾರ್ಣೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ (ವಿಸಿಟಿಂಗ್) ಹಾವಂಜೆಯವರು ಇಂದಿಗೆ ಅಳಿದು ಹೋಗುತ್ತಿರುವ ಈ ದೇಶಿಯ ಕಾವಿ ಕಲೆಯ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾವಿ ಕಲೆಯ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಕಾರ್ಯವನ್ನು ನಡೆಸುತ್ತಾ ಹಲವಾರು ಕಾರ್ಯಾಗಾರಗಳು, ಶಿಬಿರಗಳು, ಕಲಾ ಪ್ರದರ್ಶನಗಳು…
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಹಾಗೂ ಸನ್ಮಾನ ಕಾರ್ಯಕ್ರಮವು ದಿನಾಂಕ 21-02-2024ರ ಬುಧವಾರದಂದು ಮಂಗಳೂರಿನ ಉರ್ವದಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ “ಮನರಂಜನೆ ಜತೆಗೆ ವಿಸ್ಮಯ ಮೂಡಿಸುವ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದೆ. ಕೇಂದ್ರದ ನಾಟಕ ಅಕಾಡೆಮಿ ಪಟ್ಟಿಯಲ್ಲಿ ಜಾದೂವಿಗೆ ಸ್ಥಾನ ನೀಡಿದ್ದು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಟ್ಟಿಯಲ್ಲಿಯೂ ಜಾದೂ ಸೇರ್ಪಡೆಯಾಗಬೇಕು. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು. ಸಂಗೀತ, ನೃತ್ಯ, ಯಕ್ಷಗಾನದಂತೆ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದೆ. ನಶಿಸಿ ಹೋಗುತ್ತಿರುವ ಈ ಕಲೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನೀನಾಸಂ, ರಂಗಾಯಣ ಮಾದರಿಯ ತರಬೇತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇತರ ಕಲೆಗಳಂತೆ ಜಾದೂವನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಒಟ್ಟಾಗಿ ಕಲಿಸಲು ಸಾಧ್ಯವಿಲ್ಲ. ಜಾದೂ ಕಲಿಯುವ ವಿದ್ಯಾರ್ಥಿಯಲ್ಲಿ ಮೆದುಳು ಮತ್ತು ಕೈಚಳಕದ ಜತೆಗೆ ಸಮರ್ಪಣಾ ಮನೋಭಾವ ಅಗತ್ಯ. ಜಾದೂ ಕಲೆ ಸಿದ್ಧಿಸಿಕೊಳ್ಳಬೇಕೆಂದರೆ ಕನಿಷ್ಠ ಆರೇಳು…
ಮಂಗಳೂರು : ಕೊಂಕಣಿ ಲೇಖಕ್ ಸಂಘ ಕರ್ನಾಟಕ ಇವರ 2024ನೇ ಸಾಲಿನ ‘ಕೊಂಕಣಿ ಲೇಖಕ್ ಸಂಘ್’ ಪ್ರಶಸ್ತಿಯನ್ನು ಕೊಂಕಣಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾ. ಜೆರಿ ನಿಡ್ಡೋಡಿಯವರಿಗೆ ದಿನಾಂಕ 17-02-2024 ರಂದು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ನಡೆದ ಸಮಾರಂಭದಲ್ಲಿ ನೀಡಲಾಯಿತು. ಪ್ರಶಸ್ತಿಯು ಸ್ಮರಣಿಕೆ, ಸಮ್ಮಾನಪತ್ರ ಹಾಗೂ 25 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಂಗಳೂರು ಧರ್ಮಪ್ರಾಂತದ ಸೆಮಿನರಿಯ ರೆಕ್ಟರ್ ವಂ. ಡಾ. ರೊನಾಲ್ಡ್ ಸೆರಾವೊ “ಪ್ರತಿಯೊಂದು ಸಮುದಾಯಕ್ಕೆ ಅವರದ್ದೇ ಆದ ಸಂಸ್ಕೃತಿ ಇರುವಂತೆ ಕೊಂಕಣಿ ಭಾಷಿಕರಿಗೂ ಒಂದು ಸಂಸ್ಕೃತಿ ಇದೆ. ಇದು ತಲೆತಲಾಂತರದಿಂದ ಬಂದಿದ್ದು ಪರಿವರ್ತನಾಶೀಲವಾಗಿದೆ. ಬದಲಾವಣೆ ಪ್ರಕೃತಿ ನಿಯಮ. ಹಾಗಿರುವಾಗ ಸಮಾಜದೊಡಗಿನ ಮಧುರ ಬಾಂಧವ್ಯಕ್ಕಾಗಿ ಸಮಾನತೆಯನ್ನು ಗುರುತಿಸಿ ಕೊಳ್ಳುವುದು ಅಗತ್ಯ. ಬದಲಾವಣೆಯ ಬಿರುಗಾಳಿಯಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಉತ್ತಮ ಅಂಶಗಳನ್ನು ಉಳಿಸಿಕೊಂಡು, ಭಾಷೆ ನಾಡು ನುಡಿಯ ಸಂಸ್ಕೃತಿಯ ಬೇರುಗಳೊಂದಿಗೆ ಉಳಿಯುವುದು ನಮ್ಮ ಜವಾಬ್ದಾರಿ. ಸಾಹಿತಿಗಳು ಇದಕ್ಕೆ ಮಹತ್ತರ ಕೊಡುಗೆ ನೀಡುತ್ತಾರೆ.…
ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ತ್ರಿಂಶತಿ ಸಂಭ್ರಮದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾ ಭವನ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 24-02-2024ರಂದು ಕೊಡಿಯಾಲ್ ಬೈಲ್ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ‘ಕರ್ನಾಟಕ ಸಂಗೀತ ಕಛೇರಿ’ಯನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಉಡುಪಿಯ ಮಾಸ್ಟರ್ ಪ್ರಣವ ಅಡಿಗ ಇವರ ಕೊಳಲು ವಾದನಕ್ಕೆ ಮಂಗಳೂರಿನ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಕಟೀಲಿನ ಶ್ರೀ ಶೈಲೇಶ್ ರಾವ್ ಇವರು ಮೃದಂಗ ಸಾಥ್ ನೀಡಲಿದ್ದಾರೆ. ಸಂಜೆ ಗಂಟೆ 5ರಿಂದ ಮೂಝಿಕುಳಂ ಶ್ರೀ ವಿವೇಕ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಶ್ರೀ ಕೇಶವ ಮೋಹನ್ ಕುಮಾರ್ ವಯೋಲಿನ್, ಮಂಗಳೂರಿನ ಶ್ರೀ ಸುನಾದಕೃಷ್ಣ ಅಮೈ ಮೃದಂಗ ಹಾಗೂ ಪುತ್ತೂರಿನ ಶ್ರೀ ಬಾಲಕೃಷ್ಣ ಹೊಸಮನೆ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ.
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಆಚರಿಸಿಕೊಂಡು ಬರುತ್ತಿರುವ ‘ರಾಗ ಸುಧಾ ರಸ ಸಂಗೀತೋತ್ಸವ’ವು ಮಂಗಳೂರಿನ ಪುರಭವನದಲ್ಲಿ ದಿನಾಂಕ 15-02-2024ರಿಂದ 17-02-2024ರವರೆಗೆ ನಡೆಯಿತು. ದಿನಾಂಕ 17-02-2024ರಂದು ಕರ್ನಾಟಕ ಸಂಗೀತ ಕಲಾವಿದೆ ಶ್ರುತಿ ಎಸ್. ಭಟ್ ಇವರಿಗೆ ಈ ಬಾರಿಯ ‘ಯುವ ಕಲಾಮಣಿ’ ಪ್ರಶಸ್ತಿ ನೀಡಲಾಯಿತು. ಶೋಭಿತ ಭಟ್ ಮತ್ತು ಆಶ್ವೀಜಾ ಉಡುಪ (ಸ್ವರಾಂಜಲಿ ಸಹೋದರಿಯರು) ಅವರಿಗೆ ಚೆನ್ನೈಯ ಮಣಿ ಕೃಷ್ಣಸ್ವಾಮಿ ಫೌಂಡೇಶನ್ ಕೊಡಮಾಡುವ ಮಣಿ ಮತ್ತು ಎಂ.ಕೆ. ವಾರ್ಷಿಕ ಪ್ರಶಸ್ತಿ’, ನಾದಸ್ವರ ವಾದಕ ವಿದ್ವಾನ್ ಲಿಂಗಪ್ಪ ಎಸ್. ಅವರಿಗೆ ‘ಎ ಈಶ್ವರಯ್ಯ ಸ್ಮರಣಾರ್ಥ ಪ್ರಶಸ್ತಿ’, ಚೆನ್ನೈಯ ಮಧುರಧ್ವನಿ ಸಂಸ್ಥೆಯ ಸ್ಥಾಪಕರು ಆರ್.ಕೆ. ರಾಮಕೃಷ್ಣನ್ ಅವರಿಗೆ ‘ಲಲಿತಕಲಾ ಪೋಷಕ ಮಣಿ ಪ್ರಶಸ್ತಿ’ ನೀಡಲಾಯಿತು. ಹಿರಿಯ ಮೃದಂಗ ಗುರು ವಿದ್ವಾನ್ ಕುಕ್ಕಿಲ ಶಂಕರ್ ಭಟ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ಸಂದರ್ಭ ಯುವ ಕಲಾಸಂಘಟಕ ವಿಶ್ವಾಸ್ ಕೃಷ್ಣ ಅವರನ್ನು ಅಭಿನಂದಿಸಲಾಯಿತು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ಅಧ್ಯಕ್ಷರಾದ ಕ್ಯಾ.…