Author: roovari

ಮಂಗಳೂರು : ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ತನ್ನ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಮಂಗಳೂರಿನ ಶ್ರೀ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ (ರಿ.), ಉರ್ವಾ ಇದರ ಸಹಯೋಗದಲ್ಲಿ ಮಂಗಳೂರು ಉರ್ವಾದ ಕಾ. ವಾ. ಆಚಾರ್ಯ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿದ್ದ ಗ್ರಂಥ ಲೋಕಾರ್ಪಣಾ ಸಮಾರಂಭವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ “ಸಾಹಿತ್ಯಿಕ ಹಾಗೂ ಕಲಾ ಚಟುವಟಿಕೆಗಳು ಸಮಾಜದಲ್ಲಿ ಸುಸಂಸ್ಕೃತಿಯು ಆಳವಾಗಿ ಬೇರೂರಲು ಸಹಾಯಕವಾಗಿವೆ‌. ಈ ಚಟುವಟಿಕೆಗಳ ಪರಿಣಾಮವು ಮೇಲ್ನೋಟಕ್ಕೆ ಕಾಣದೇ ಇದ್ದರೂ ಈ ಚಟುವಟಿಕೆಗಳು ದೂರಗಾಮಿ ಫಲನೀಡುವುದು ದಿಟ. ಆ ನಿಟ್ಟಿನಲ್ಲಿ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯು ಅದ್ಭುತವಾದ ಕಾರ್ಯ ಮಾಡುತ್ತಿದೆ” ಎಂದು ನುಡಿದರು. ‘ಬೆಳ್ಳಿ ಬೆಳಕು’ ಹಾಗೂ ‘ವಿ.ಜಿ. ದೀಕ್ಷಿತ್ ಸಮಗ್ರ ಕೃತಿ ಸಂಪುಟ’ ಭಾಗ 1 ಎಂಬ ಗ್ರಂಥಗಳನ್ನು ಲೋಕಾರ್ಪಣೆ ಗೈದು ಮಾತನಾಡಿದ ಮಂಗಳೂರು ವಿವಿಯ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ಪ್ರಪ್ರಥಮ ಹಾಗೂ ಪ್ರತಿಷ್ಠಿತ ದತ್ತಿ ‘ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’ಗೆ ಜಿಲ್ಲೆಯ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ಇವರು ರಚಿಸಿದ ‘ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ ಚರಿತೆ’ ಕೃತಿಯು ಪುರಸ್ಕೃತಗೊಂಡಿದೆ. ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣರವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ಮೊದಲ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ ಹತ್ತು ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಸ್ತುತಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಹತ್ತು ಜನ ಲೇಖಕರಲ್ಲಿ ಅತಿ ಹೆಚ್ಚು ಅಂಕ ಪಡೆದ ‘ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ ಚರಿತೆ’ ಕೃತಿ ಈ ಪ್ರಶಸ್ತಿ ಪಡೆದುಕೊಂಡಿದೆ. ಮುಂದೆ ನಡೆಯುವ ಪ್ರಶಸ್ತಿ…

Read More

ಶನಿವಾರಸಂತೆ : ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುಪ್ರಜ ಗುರುಕುಲದ ಸಂಯುಕ್ತಾಶ್ರಯದಲ್ಲಿ ದಾವಣಗೆರೆಯ ಸುನಂದಾದೇವಿ-ಸಂಗಮೇಶ್ವರ ಗೌಡ ದಂಪತಿಯ ಪ್ರಾಯೋಜಕತ್ವದಲ್ಲಿ ಆರೋಡ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂಗೈಕ ಮಾಗನೂರು ಬಸಪ್ಪ ದತ್ತಿ ಶರಣ ಸಂಸ್ಕೃತಿ ದತ್ತಿ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2025ರಂದು ಸುಪ್ರಜ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರು ಮಾತನಾಡಿ “ಜಗತ್ತಿನ ಮೊದಲ ಸಮಾಜವಾದಿ ಬಸವಣ್ಣನವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ಶರಣ ಸಾಹಿತ್ಯದ ತಿರುಳನ್ನು ಪ್ರಸ್ತುತ ಸಮಾಜಕ್ಕೆ ಅಳವಡಿಸಬೇಕು. ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಶರಣರ ಕೊಡುಗೆ ಅಪಾರ. ಶರಣ ಎಂದರೆ ಸಜ್ಜನ, ಸದ್ಭಕ್ತಿ, ಅನುಭಾವಿ ಎಂಬ ವ್ಯಕ್ತಿತ್ವ. ದತ್ತಿನಿದಿಯ ಶರಣ ಮಾಗನೂರು ಬಸಪ್ಪನವರು ಹುಟ್ಟಿನಿಂದ ದೊಡ್ಡವರಾಗಿ ಹುಟ್ಟಿದವರಲ್ಲ; ಹುಟ್ಟಿ ದೊಡ್ಡವರಾಗಿ ಬದುಕಿ, ಬಾಳಿ ಶಿಸ್ತನ್ನು ರೂಢಿಸಿಕೊಂಡವರು.…

Read More

ಮುಳಿಯ ತಿಮ್ಮಪ್ಪಯ್ಯನವರು ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸಾವಿರದ 1888 ಮಾರ್ಚ್ 3 ರಂದು ಜನಿಸಿದರು. ಇವರ ತಂದೆ ಮುಳಿಯ ಕೇಶವ ಭಟ್ಟ ಹಾಗೂ ತಾಯಿ ಮೂಕಾಂಬಿಕ ಅಮ್ಮ. ವಿಟ್ಲ ಸೀಮೆಯಲ್ಲಿ ವಿಟ್ಲದರಸರಿಗೆ ಸರಿಸಾಟಿಯಾಗಿ ಮುಳಿಯರ ಕುಟುಂಬದ ಶ್ರೀಮಂತಿಕೆ, ಪ್ರಭಾವಾಗಳಿದ್ದು, ‘ಮುಳಿಯದರಸು’ಗಳು ಎಂದೇ ಹೆಸರಾಗಿದ್ದ ಶ್ರೀಮಂತ ಕುಟುಂಬ ಇವರದ್ದಾಗಿತ್ತು. ಕಾಲ ಕ್ರಮೇಣ ಆಸ್ತಿ ಪಾಸ್ತಿಗಳೆಲ್ಲ ಕರಗಿಹೋಗಿ ಇವರು ಹುಟ್ಟುವಾಗ ಕುಟುಂಬ ಕಡು ಬಡತನಕ್ಕೆ ತುತ್ತಾಗಿತ್ತು. ಆದ್ದರಿಂದ ಇವರ ವಿದ್ಯಾಭ್ಯಾಸ ನಾಲ್ಕನೇ ತರಗತಿಗೆ ನಿಂತು ಹೋಯಿತು. ಕನ್ನಡವನ್ನು ಸ್ವತಂತ್ರವಾಗಿ ಓದುತಿದ್ದ ತಿಮ್ಮಪ್ಪಯ್ಯನವರು ಆಗ ವಿಟ್ಲಸೀಮೆಯಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಕಲ್ಲಜೆ ಕೃಷ್ಣ ಶಾಸ್ತ್ರಿಗಳಲ್ಲಿ ಸಂಸ್ಕೃತದ ಅಧ್ಯಯನ ಮಾಡಿದರು. 1906ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಯಾರಿಗೂ ಹೇಳದೆ ಮನೆಯನ್ನು ತೊರೆದು ಕೇರಳದ ತಿರುವನಂತಪುರಕ್ಕೆ ಹೋಗಿ ಸಂಸ್ಕೃತದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು. ಅಲ್ಲಿಂದ ಮತ್ತೆ ಮೈಸೂರಿಗೆ ಹೋಗಿ ವಾರಾನ್ನದ ಮೂಲಕವೇ ಜೀವನ ನಡೆಸಿದರು. ಆ ಮೊದಲೇ ಅಲ್ಪಸ್ವಲ್ಪ ಸಂಗೀತ ಅಭ್ಯಾಸ ಮಾಡಿದ್ದ ಮುಳಿಯರು ಮೈಸೂರು ವಾಸುದೇವ ಆಚಾರ್ಯರ ಶಿಷ್ಯರಾಗಿ…

Read More

ಬನಾರಿ : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕ ಮತ್ತು ಬನಾರಿ ಕೀರಿಕ್ಕಾಡು ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು- ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2025ರ ಭಾನುವಾರದಂದು ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದ ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ತರ್ ಮಾತನಾಡಿ “ಯಕ್ಷಗಾನದಲ್ಲಿ ಪ್ರಸಂಗದ ಜತೆಗೆ ಪ್ರಸಂಗಕರ್ತರ ಹೆಸರನ್ನೂ ಹೇಳಬೇಕು. ಇದು ಕೃತಿಕಾರರರಿಗೆ ಹಾಗೂ ಅವರ ಪರಿಶ್ರಮಕ್ಕೆ ನೀಡುವ ಗೌರವ. ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಂಗ ಕರ್ತರಾಗಿ, ಕಲಾವಿದರಾಗಿ ಕೀರಿಕ್ಕಾಡು ಮಾಸ್ತರರ ಕೊಡುಗೆ ಅಪಾರವಾದುದು. ಯಕ್ಷಗಾನದ ಪುನಶ್ಚೇತನಕ್ಕೆ ವಿಷ್ಣು ಭಟ್ಟರು ಮಹತ್ವದ ಕೊಡುಗೆ ನೀಡಿದ್ದಾರೆ. ಊರಿನ ಜನರ ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಗೆ ನಾಂದಿ ಹಾಡಿದವರು ಶ್ರೀಯುತರು. ಅವರು ಸ್ಥಾಪಿಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘಕ್ಕೆ ಇತಿಹಾಸವಿದೆ” ಎಂದರು. ಕೀರಿಕ್ಕಾಡು…

Read More

ಈಶ್ವರಮಂಗಲ : ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯೆಯರಿಂದ ‘ಇಂದ್ರಜಿತು’ ಯಕ್ಷಗಾನ ತಾಳಮದ್ದಳೆ ದಿನಾಂಕ 01 -ಮಾರ್ಚ್ -2025ರಂದು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಪ್ರಯುಕ್ತ ದೇವಾಲಯದ ಸಭಾಭವನದಲ್ಲಿ ಜರಗಿತು. ಯಕ್ಷಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆಯೊಂದಿಗೆ ನಾರಾಯಣ ದೇಲಂಪಾಡಿ ಅವರ ಅರ್ಥಸಾಹಿತ್ಯ ಕೃತಿಯನ್ನೊಳಗೊಂಡ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಕುಮಾರಿ ರಚನಾ ಚಿದ್ಗಲ್‌ ಹಾಗೂ ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ ಅವರು ಹಾಡಿ ರಂಜಿಸಿದರು. ಚೆಂಡೆ, ಮದ್ದಳೆ ವಾದನದಲ್ಲಿ ವಿಷ್ಣು ಶರಣ ಬನಾರಿ, ಶ್ರೀಧರ ಆಚಾರ್ಯ ಈಶ್ವರ ಮಂಗಲ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಮತ್ತು ಚಕ್ರತಾಳದಲ್ಲಿ ಮಾಷ್ಟರ್‌ ಶ್ರೀದೇವ್‌ ಆಚಾರ್ಯ ಸಹಕರಿಸಿದರು. ಅರ್ಥಧಾರಿಗಳಾಗಿ ಶ್ರೀಮತಿಯರಾದ ಸರಿತಾ ರಮಾನಂದ ರೈ ದೇಲಂಪಾಡಿ, ಶೀಲಾ ಹೇಮನಾಥ ಕೇದೆಗಡಿ, ಪವಿತ್ರಾ ದಿವಾಕರ ಗೌಡ ಮುದಿಯಾರು, ಪ್ರೇಮಾ ಮನೋಹರ ಬಂದ್ಯಡ್ಕ, ಜಲಜಾಕ್ಷಿ, ಸತೀಶ್‌ ರೈ ಬೆಳ್ಳಿಪ್ಪಾಡಿ, ಸುಮಲತಾ ಉದಯಕುಮಾರ್‌ ದೇಲಂಪಾಡಿ, ಸುಜಾತ…

Read More

ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸುವ ‘ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ 2025’ ದಿನಾಂಕ 11 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ 5.00ರ ವರೆಗೆ ಮೈಸೂರಿನ ದಟ್ಟಗಳ್ಳಿಯ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ. ಈ ಶಿಬಿರವು ಕಡ್ಡಾಯವಾಗಿ 08 ರಿಂದ 14ವರ್ಷದ ಮಕ್ಕಳಿಗಾಗಿದ್ದು, ಪ್ರವೇಶ ಪ್ರಕ್ರಿಯೆ 30 ಮಾರ್ಚ್ 2025ರಂದು ಬೆಳಿಗ್ಗೆ ಘಂಟೆ 10.00 ರಿಂದ ಮಧ್ಯಾಹ್ನ 1.30ರ ವರೆಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಆಸಕ್ತ ಪೋಷಕರು ಅರ್ಜಿ ಪಡೆದು ತಕ್ಷಣ ಅಲ್ಲಿಯೇ ಪ್ರವೇಶ ಪ್ರಕ್ರಿಯೆ ಪೂರೈಸಬೇಕು. ಅಭ್ಯರ್ಥಿಯ ಆಧಾರ್ ಕಾರ್ಡ್ ಪ್ರತಿ ಮತ್ತು ಭಾವಚಿತ್ರ ಲಗತ್ತಿಸುವುದು ಕಡ್ಡಾಯ. ಮೊದಲು ಬಂದವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327, 9845595505.

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಜಿಲ್ಲಾ ಗಮಕ ಕಲಾ ಪರಿಷತ್ತು, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ‘ಗಮಕ-ವಾಚನ-ವ್ಯಾಖ್ಯಾನ’ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2025ರ ಶನಿವಾರದಂದು ವಿಜಯಪುರದ ಗುಮಾಸ್ತೆ ಕಾಲನಿ, ಆಶ್ರಮ ರಸ್ತೆ, ಸ್ಟಾರ್ ಲೈಟ್ ಪಿಲ್ಲರ ಹತ್ತಿರವಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ-37 ಇಲ್ಲಿ ಬೆಳಿಗ್ಗೆ ಘಂಟೆ 10.00 ರಿಂದ ನಡೆಯಲಿಯಿದೆ. ಸ.ಕ.ಗ.ಮ.ಹಿ.ಪ್ರಾ.ಶಾಲೆ ನಂ-37 ಇದರ ಮುಖ್ಯಾಧ್ಯಾಪಕಿಯಾದ ಶ್ರೀಮತಿ ಶೋಭಾ.ಎಸ್.ನಾಯಿಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕುಮಾರ ವಾಲ್ಮೀಕಿ ಕೃತ ತೊರವೆ ರಾಮಾಯಣ’ದ ‘ಭರತನ ಬಂಧುಪ್ರೇಮ’ ಪ್ರಸಂಗವನ್ನು ಶ್ರೀಮತಿ ಪುಷ್ಪಾ ಕುಲಕರ್ಣಿ ಗಮಕ ವಾಚನ ಮಾಡಲಿದ್ದು, ಗಮಕ ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಶ್ರೀ ಕಲ್ಯಾಣರಾವ ದೇಶಪಾಂಡೆ ಗಮಕ ವ್ಯಾಖ್ಯಾನ ಗೈಯ್ಯಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರು ಹಾಗೂ ಮಕ್ಕಳ ಸಾಹಿತಿಗಳಾ ಶ್ರೀ ಜಂಬುನಾಥ ಕಂಚ್ಯಾಣಿ…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ರಿ. ಕೊಮೆ ತಕ್ಕಟ್ಟೆ ಆಶ್ರಯದಲ್ಲಿ ಯಕ್ಷದೇಗುಲ (ರಿ.) ಬೆಂಗಳೂರು ಹಾಗೂ ಸ್ಕ್ಯಾಚ್ ಸಂಸ್ಥೆಯ ಸಹಯೋಗದಲ್ಲಿ ‘ಯಕ್ಷತಂತ್ರ ನೃತ್ಯ ಜ್ಞಾನ’ ಎನ್ನುವ ಕಾರ್ಯಕ್ರಮ ದಿನಾಂಕ 01 ಮಾರ್ಚ್ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಅಧುನಿಕ ತಂತ್ರಜ್ಞಾನ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡ ಹಾಗೆಯೇ ಕಲೆಯಲ್ಲಿಯೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಕಾಲಕ್ಕಿದೆ. ಬದಲಾಗುತ್ತಿರುವಂತಹ ಈ ಕಾಲಘಟ್ಟದಲ್ಲಿ ಅನೇಕ ತಂತ್ರಜ್ಞಾನಗಳ ಜೊತೆ ಕಲೆ ಬೆಳೆಯಬೇಕಾಗಿದೆ, ಉಳಿಯಬೇಕಾಗಿದೆ. ಬಯಲಿನಲ್ಲೇ ಯಕ್ಷಗಾನ ಕಲಿಯುವಂತಹ ಕಾಲಘಟ್ಟದಿಂದ ಗುರುಗಳ ಮುಖೇನ ಅಭ್ಯಾಸ ಮಾಡುವಂತಹ ಸ್ಥಿತಿಗೆ ಒಳಗಾದಂತಹ ಸಂದರ್ಭದಲ್ಲಿ ಇದೀಗ ಸ್ಕ್ಯಾಚ್ ಸಂಸ್ಥೆಗಳ ಮೂಲಕ ತಂತ್ರಜ್ಞಾನವನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಯಕ್ಷದೇಗುಲದಂತಹ ಪ್ರಸಿದ್ಧ ಸಂಸ್ಥೆಯು ಸ್ಕ್ಯಾಚ್ ಸಂಸ್ಥೆಯನ್ನು ಪರಿಚಯಿಸುತ್ತಾ ಯಶಸ್ವೀ ಕಲಾವೃಂದದ ಕಲಾವಿದರುಗಳಿಗೆ ಗುರುವಿಲ್ಲದೇ ಹೇಗೆ ಕಲಿಕೆ ಸಾಧ್ಯ ಎನ್ನುವುದನ್ನು ತೋರಿಸುವ ಪ್ರಿಯಾಂಕ ಕೆ. ಮೋಹನ್ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.”…

Read More

ಮಂಜೇಶ್ವರದ ಕೋಳ್ಯೂರಿನಲ್ಲಿ ಹುಟ್ಟಿ, ಕಾರ್ಕಳದ ಕಾಂತಾವರದಲ್ಲಿ ಜನಪ್ರಿಯ ವೈದ್ಯರಾಗಿ ಇಪ್ಪತ್ತೈದಕ್ಕೂ ಹೆಚ್ಚು ಕಾದಂಬರಿಗಳು, ಹಲವಾರು ಕತೆ ಮತ್ತು ಕವನ ಸಂಕಲನಗಳನ್ನು ಪ್ರಕಟಿಸುವುದರೊಂದಿಗೆ ಸಾಹಿತ್ಯ ಸಂಘಟಕರಾಗಿಯೂ ಹೆಸರುವಾಸಿಯಾಗಿರುವ ಡಾ. ನಾ. ಮೊಗಸಾಲೆಯವರ ಇತ್ತೀಚಿನ ಕೃತಿ ‘ಕೊಪ್ಪರಿಗೆ ಮನೆ’. ಇದರಲ್ಲಿ 1870ರಿಂದ 1930ನೇ ಇಸವಿಯೊಳಗಿನ ಮಂಜೇಶ್ವರ ಪರಿಸರವನ್ನು ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಚರಿತ್ರೆ ಮುಚ್ಚಿಹಾಕಿದ ನಮ್ಮ ಹಿರೀಕರ ಸಚ್ಚರಿತ್ರೆಗಳು ಇಲ್ಲಿ ಅಡಗಿವೆ. ನಮ್ಮ ಪೂರ್ವಜರು ದುಷ್ಟರೆಂದೂ, ಹಿಂಸಕರೆಂದೂ ಹೇಳುವ ಸುಳ್ಳು ಸುದ್ದಿಗೆ ಈ ಕೃತಿ ಸಡ್ಡು ಹೊಡೆದಿದೆ. ಹಿಂದಿನ ಕಾಲದಲ್ಲಿ ಪಟೇಲಿಕೆ ನೋಡುವ ಹತ್ತಾರು ಮನೆತನಗಳಿದ್ದುವು. ಮಣ್ಣಿನ ಸಂಸ್ಕೃತಿಯಾದ ಅಳಿಯಕಟ್ಟು ಹಾಗೂ ಮಕ್ಕಳ ಕಟ್ಟು ರೂಢಿಯಲ್ಲಿತ್ತು. ಎಲ್ಲೆಲ್ಲೂ ಕಾಡು. ಅಲ್ಲಲ್ಲಿ ಸಾಹಸದಿಂದ ನಿರ್ಮಿಸಿದ ಕೃಷಿ ಭೂಮಿ. ಅಂಥ ಪರಿಸರದಲ್ಲಿ ಹೆಸರಾಂತ ಕೊಪ್ಪರಿಗೆ ಮನೆ. ಕ್ರೂರ ಪ್ರಾಣಿಗಳಿಂದ ರಕ್ಷಣೆಗಾಗಿಯೇ ಮನೆಗಳಿಗೆ ಆ ಗಾತ್ರವಿತ್ತು. ಪುಟ್ಟ ತಗ್ಗಾದ ದಿಡ್ಡಿ ಬಾಗಿಲು, ಒಳಮುಖಿ ಕೋಣೆಗಳು, ಹತ್ತಿರ ಹರಿಯುವ ನೀರ ಸೆಲೆ. ಅಂಥ ಮನೆತನದ ಶಂಕರಭಟ್ಟ ಮತ್ತು ಮಡದಿ ಗಂಗಮ್ಮ.…

Read More