Author: roovari

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪತ್ತಾನಜೆ ತಾಳಮದ್ದಳೆಯು ದಿನಾಂಕ 24 ಮೇ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಜಾಂಬವತಿ ಕಲ್ಯಾಣ’ದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದಸವಣೂರು, ಮುರಳೀಧರ ಕಲ್ಲೂರಾಯ, ಪರೀಕ್ಷಿತ್ ಹಂದ್ರಟ್ಟ, ಸಮರ್ಥ ವಿಷ್ಣು ಈಶ್ವರ ಮಂಗಲ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಭಾಸ್ಕರ್ ಬಾರ್ಯ ಮತ್ತು ಗುಡ್ಡಪ್ಪ ಬಲ್ಯ), ಬಲರಾಮ (ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಜಾಂಬವ (ಗುಂಡ್ಯಡ್ಕ ಈಶ್ವರ ಭಟ್), ನಾರದ (ಭಾರತೀ ರೈ ಅರಿಯಡ್ಕ), ಜಾಂಬವತಿ (ಪ್ರೇಮ ಲತಾ ರಾವ್) ಸಹಕರಿಸಿದರು. ಜೂನ್ ಒಂದರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ‘ಪಟ್ಲ ಸಂಭ್ರಮದ ದಶಮಾನೋತ್ಸವ’ದ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ಘಟಕದ ಪದಾಧಿಕಾರಿಗಳು ಸಂಘದ ಸದಸ್ಯರಿಗೆ ನೀಡಿ ಆಮಂತ್ರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿ, ಹರ್ಷ ಪುಣಚ ಪ್ರಾಯೋಜಿಸಿದ್ದರು.

Read More

ಮೈಸೂರು : ಮೈಸೂರಿನ ಸಮತಾ ಅಧ್ಯಯನ ಕೇಂದ್ರ (ರಿ.) ಇದರ ವತಿಯಿಂದ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕಾವ್ಯ ಮತ್ತು ಕಥಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ದಿನಾಂಕ 01 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಮೈಸೂರಿನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಯನ್ನು ಶಿವಮೊಗ್ಗದ ಹಿರಿಯ ಕವಯತ್ರಿ ಸವಿತಾ ನಾಗಭೂಷಣ ಇವರಿಗೆ ಪ್ರದಾನ ಮಾಡಲಾಗುವುದು. ‘ನೆನಪಿನಂಗಳದಲ್ಲಿ ವಿಜಯಾ ದಬ್ಬೆ’ ಎಂಬ ಕೃತಿಯನ್ನು ಖ್ಯಾತ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರಾದ ಡಾ. ಎಂ.ಎಸ್. ಆಶಾದೇವಿ ಇವರು ಲೋಕಾರ್ಪಣೆ ಮಾಡಲಿದ್ದು, ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಸಬಿಹಾ ಭೂಮಿಗೌಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕವನ ಸ್ಪರ್ಧೆ ವಿಜೇತರು : ಪ್ರಥಮ ಬಹುಮಾನ – ಆರ್. ಬಾಲಾಜಿ, ಕೆಜಿಎಫ್, ಆರ್.ವಿ. ಅಧ್ಯಾಪಕರ ಕಾಲೇಜು ಬೆಂಗಳೂರು ಕವನ : ‘ಎಂಟರ ಮನೆಯೊಳಗೆ ಕುಂಟೆ ಬಿಲ್ಲೆಯ ಆಟ’, ದ್ವಿತೀಯ ಬಹುಮಾನ (ಇಬ್ಬರಿಗೆ)…

Read More

ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸುವ ‘ಡಾ. ಡಿ.ಕೆ. ಚೌಟರ ನೆನಪಿನ ನಾಟಕೋತ್ಸವ -2025’ ಕಾರ್ಯಕ್ರಮವನ್ನು ದಿನಾಂಕ 01 ಜೂನ್ 2025ರಂದು ಸಂಜೆ 4-00 ಗಂಟೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕಲಾ ನಿರ್ದೇಶಕರಾದ ಸುದೇಶ್ ಮಹಾನ್, ಹಿರಿಯ ರಂಗಭೂಮಿ ಕಲಾವಿದರಾದ ಪ್ರೇಮ್ ದಾಸ್ ಅಡ್ಯಂತಾಯ, ರಂಗಭೂಮಿ ಕಲಾವಿದರಾದ ಗೀತಾ ಸುರತ್ಕಲ್, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀಮತಿ ರೇಣುಕ ರೆಡ್ಡಿ ಮತ್ತು ರಂಗಕರ್ಮಿ ಡಾ. ರಮ್ಯಾ ನವೀನ್ ಕೃಷಿ ಇವರುಗಳನ್ನು ರಂಗಗೌರವ ನೀಡಿ ಗೌರವಿಸಲಾಗವುದು. ಸಂಜೆ 4-00 ಗಂಟೆಗೆ ರೂಪಾಂತರ ತಂಡ ಪ್ರಸ್ತುತಪಡಿಸುವ ಜಯಲಕ್ಷ್ಮಿ ಪಾಟೀಲ್ ಹುಬ್ಬಳ್ಳಿ ರಚಿಸಿರುವ ಖ್ಯಾತ ಅಭಿನೇತ್ರಿ ಕಲ್ಪನಾ ಜೀವನಗಾಥೆ ಕುರಿತ ಏಕವ್ಯಕ್ತಿ ಪ್ರದರ್ಶನ ‘ಮಿನುಗುತಾರೆ’ ನಾಟಕ ಪ್ರದರ್ಶನಗೊಳ್ಳಲಿದೆ. ರಂಜಿತಾ ಸೂರ್ಯವಂಶಿ ಅಭಿನಯ ಮಾಡಲಿದ್ದು,…

Read More

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕುಟ್ಟಿ ಹಾಗೂ ತಿಮ್ಮಕ್ಕ ಇವರ ಮಗನಾಗಿ 29.03.1996 ರಂದು ಸುಜನ್ ಕುಮಾರ್ ಅಳಿಕೆ ಅವರ ಜನನ. ವಿದ್ಯಾಭ್ಯಾಸ: ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಆರ್ಲಪದವಿನಲ್ಲಿ ಪ್ರಾಥಮಿಕ ಶಿಕ್ಷಣ. ಸುಬೋಧ ಹೈ ಸ್ಕೂಲ್ ಆರ್ಲಪದವಿನಲ್ಲಿ ಪ್ರೌಢ ಶಿಕ್ಷಣ. ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿಯಲ್ಲಿ ಪಿಯುಸಿ ಶಿಕ್ಷಣ ಹಾಗೂ ಬಿ. ಕಾಮ್ ಪದವಿಯನ್ನು ಪಡೆದಿರುತ್ತಾರೆ. ವಿದ್ವಾನ್ ವಸಂತ್ ಕುಮಾರ್ ಗೋಸಾಡ ಸಂಗೀತ ಗುರುಗಳು. ಶ್ರೀಯುತ ಬಟ್ಟಮೂಲೆ ಲಕ್ಷ್ಮೀ ನಾರಾಯಣ ಭಟ್ ಇವರ ಯಕ್ಷಗಾನ ಗುರುಗಳು. ಕಳೆದ 5 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ ಸುಜನ್. ಯಕ್ಷಗಾನಕ್ಕೆ ಬರಲು ಪ್ರೇರಣೆ : ನನ್ನ ವಿದ್ಯಾಭ್ಯಾಸವೆಲ್ಲ ದೊಡ್ಡಮ್ಮನ ಊರಾದ ಪಾಣಾಜೆ ಆರ್ಲಪದವು ಎಂಬಲ್ಲಿ. ಅಲ್ಲಿಯ ಪರಿಸರವೇ ಯಕ್ಷಮಯವಾಗಿತ್ತು. ಅಲ್ಲಿಯ ಜನರು ಯಕ್ಷಗಾನ ಹವ್ಯಾಸಿ ಕಲಾವಿದರಾಗಿದ್ದು, ಸಂಘವನ್ನು ನಡೆಸುತ್ತಾ ಮಕ್ಕಳಿಗೆ ಉಚಿತ ನಾಟ್ಯವನ್ನು ಕಲಿಸಿಕೊಡುತ್ತಿದ್ದರು. ನನ್ನ ಸಂಬಂಧಿಕರ ಪೈಕಿ ಹಲವಾರು ಮಂದಿ ಯಕ್ಷಪ್ರಿಯರೇ. ಅವರ…

Read More

ಕರ್ನಾಟಕ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಮ್ ನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧರ ಸಾಲಿನಲ್ಲಿ ಒಬ್ಬರು. ತಂದೆ ಶ್ರೀ ಹನುಮಂತ ಹಳಿಬಂಡಿ ಹಾಗೂ ತಾಯಿ ಶ್ರೀಮತಿ ಬಸವೇಶ್ವರಿ. ಅಮ್ಮ ಹೇಳಿಕೊಳ್ಳುತ್ತಿದ್ದ ಹಾಡುಗಳನ್ನು ಕೇಳಿ ಕೇಳಿ ಎಳವೆಯಲ್ಲಿಯೇ ಯಶವಂತರ ಮನಸ್ಸಿನಲ್ಲಿ ಹಾಡುಗಾರರಾಗಬೇಕೆಂಬ ಅದಮ್ಯ ಬಯಕೆ ಉಂಟಾಯಿತು. ಬಾಳಪ್ಪ ಹುಕ್ಕೇರಿ ಅನುರಾಧಾ ಧಾರೇಶ್ವರ ಮುಂತಾದವರ ಹಾಡುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ ಇವರು ಸುಗಮ ಸಂಗೀತದ ಕಡೆಗೆ ಮನಸೋತರು. ಬಾಲ್ಯದಲ್ಲಿ ಧಾರವಾಡ ಪರಿಸರದಲ್ಲಿ ಬಹಳ ಪ್ರಸಿದ್ಧಿ ಪಡೆದು ಪ್ರಚಲಿತದಲ್ಲಿದ್ದ ಹಿಂದೂಸ್ತಾನಿ ಸಂಗೀತದ ಕಡೆಗೆ ಆಕರ್ಷಿತರಾಗಿ ಶ್ರೀ ಲಕ್ಷ್ಮಣರಾವ್ ದೇವಾಂಗರಲ್ಲಿ ಸಂಗೀತ ಅಭ್ಯಾಸಕ್ಕೆ ಸೇರಿಕೊಂಡರು. ಕೆಲವು ವರ್ಷಗಳ ಅಭ್ಯಾಸದ ನಂತರ ಹೆಚ್ಚಿನ ಜ್ಞಾನಕ್ಕಾಗಿ ಶ್ರೀ ನಾರಾಯಣ ರಾವ್ ಮುಜುಮ್ದಾರ್ ಇವರಲ್ಲಿ ಶಿಕ್ಷಣವನ್ನು ಮುಂದುವರಿಸಿದರು ಹೀಗೆ ಬಹಳಷ್ಟು ವರ್ಷ ಹಿಂದುಸ್ತಾನಿ ಗಾಯನದ ಅಭ್ಯಾಸವನ್ನು ಮಾಡಿ, ತಮ್ಮ ಪ್ರೀತಿಯ ಹಾಡುಗಾರಿಕೆಯ ಬೇರೆ ಬೇರೆ ಪ್ರಕಾರಗಳಾದ ಹಿಂದುಸ್ತಾನಿ, ಸುಗಮ ಸಂಗೀತ, ಜಾನಪದ ಇವುಗಳನ್ನೆಲ್ಲ ಅಭ್ಯಾಸ…

Read More

ಮಂಡ್ಯ : ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ದಿನಾಂಕ 25 ಮತ್ತು 26 ಮೇ 2025ರಂದು ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ದಿನಾಂಕ 25 ಮೇ 2025ರಂದು ರಾತ್ರಿ 10-00 ಗಂಟೆಗೆ ಸ್ಥಳೀಯ ಕಲಾವಿದರಿಂದ ಆರ್.ಟಿ. ಹೆಗಡೆ ತೀರ್ಥಗಾನ ಇವರ ನಿರ್ದೇಶನದಲ್ಲಿ ‘ವೃದ್ಧಾಶ್ರಮ’ ಕಿರು ನಾಟಕ ಪ್ರದರ್ಶನ ಹಾಗೂ ದಿನಾಂಕ 26 ಮೇ 2025ರಂದು ರಾತ್ರಿ 8-30 ಗಂಟೆಗೆ ವಿದುಷಿ ಜಯಶ್ರೀ ಹೆಗಡೆ, ವಿದುಷಿ ಅನುರಾಧಾ ಹೆಗಡೆ ಹಾಗೂ ವಿದ್ಯಾರ್ಥಿಗಳಿಂದ ‘ನೃತ್ಯ ನಮನ’ ಮತ್ತು 9-30 ಗಂಟೆಗೆ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More

ಭಾಷೆ, ಭಾಷಾ ಸಮಸ್ಯೆಗಳು, ದೇಶದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳ ಕುರಿತು ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿರುವ ಅಜಕ್ಕಳ ಗಿರೀಶ ಭಟ್ ಕನ್ನಡದ ಬಹು ಮುಖ್ಯ ಲೇಖಕರು. ಇವರು ಇತ್ತೀಚೆಗೆ ಹೊರತಂದಿರುವ ‘ವ್ಯಥೆ ಕಥೆ’ ಕನ್ನಡಕ್ಕೆ ವಿಶಿಷ್ಟವಾದ ಒಂದು ಕಿರು ಕಾದಂಬರಿ ‘Imagined Reality’ ಅನ್ನುವ ಪ್ರಕಾರದಡಿ ಬರುವಂತಹ ಒಂದು ಕೃತಿ ಎಂದು ಅವರೇ ಹೇಳಿಕೊಂಡಿದ್ದಾರೆ. ಕಟ್ಟುಕಥೆ ಮತ್ತು ಕಲ್ಪನೆಗಳ ಸಹಾಯದಿಂದ ನಿಜವಲ್ಲದೆ ಇರುವ ಒಂದು ಭೌತಿಕ ಜಗತ್ತನ್ನು ಕಟ್ಟುವ ಮತ್ತು ಹಾಗೆ ಕಟ್ಟಿದ ವಿಚಾರಗಳು ನಿಜವಾಗಬಹುದಾದ ಸಾಧ್ಯತೆ ಇರುವಂತಹ ಮತ್ತು ಕಥೆಯ ಸಂದರ್ಭದಲ್ಲಿ ವಿಶ್ವಸನೀಯವಾಗಿರಬಹುದಾಗಿದ್ದರೆ ಅದು ಈ ತಂತ್ರಕ್ಕೆ ಸರಿ ಹೊಂದುತ್ತದೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಲೋಪದೋಷಗಳ ಕುರಿತಾದ ಈ ಕೃತಿ ಓದುಗನ ಕಣ್ಣು ತೆರೆಸುತ್ತದೆ ಮಾತ್ರವಲ್ಲದೆ ಚಿಂತನೆಗೆ ಹಚ್ಚುತ್ತದೆ. ಎಲ್ಲಾ ಕಾದಂಬರಿಗಳಂತೆ ಸಾಮಾನ್ಯ ರೀತಿಯಲ್ಲಿ ಕಥಾನಾಯಕನ ಉತ್ತಮ ಪುರುಷ ನಿರೂಪಣೆಯೊಂದಿಗೆ ಆರಂಭವಾಗುವ ಕಾದಂಬರಿಯು ಆತನ ಪ್ರಸ್ತುತ ಪರಿಸ್ಥಿತಿಯ ಕುರಿತು ಒಂದಷ್ಟು ವಿಚಾರಗಳನ್ನು ಹೇಳುತ್ತದೆ. ಆತ ರೆವೆನ್ಯೂ ಇಲಾಖೆಯಲ್ಲಿ ಕೆಲಸ ಮಾಡಿ…

Read More

ಬೆಂಗಳೂರು : ಡ್ರಾವಿಡ ಭಾಷಾ ಅನುವಾದಕರ ಸಂಘದ ವತಿಯಿಂದ ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿ ತಮಿಳು, ಮಲಯಾಳಂ, ತೆಲುಗು ಅಥವಾ ತುಳು ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ ಮಾಡಿರುವ ಕಾದಂಬರಿಗೆ ನೀಡಲಾಗುವುದು. ಕೃತಿಗಳು 2023 ಅಥವಾ 2024ರಲ್ಲಿ ಪ್ರಕಟವಾಗಿರಬೇಕು. ಅರ್ಜಿದಾರರು ಮೂಲ ಕೃತಿಯ ಒಂದು ಪ್ರತಿ ಹಾಗೂ ಭಾಷಾಂತರಿತ ಕನ್ನಡ ಆವೃತ್ತಿಯ ಮೂರು ಪ್ರತಿಗಳನ್ನು ದಿನಾಂಕ 20 ಜೂನ್ 2025ರ ಒಳಗಾಗಿ ಅಧ್ಯಕ್ಷರು, ಡಿ.ಬಿ.ಟಿ.ಎ., ಶ್ರೀ ಭೈರವೇಶ್ವರ ನಿಲಯ, ಇಮ್ಮಡಿ ಹಳ್ಳಿ ಮುಖ್ಯ ರಸ್ತೆ, ಹಗದೂರು, ವೈಟ್ ಫೀಲ್ಡ್, ಬೆಂಗಳೂರು-560066 ಎಂಬ ವಿಳಾಸಕ್ಕೆ ಕಳುಹಿಸಬಹುದು. ಈ ಪ್ರಶಸ್ತಿಗೆ ರೂ.11,111/- ನಗದು ಪುರಸ್ಕಾರವಿದ್ದು, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಘದ ನಾಲ್ಕನೇ ವಾರ್ಷಿಕ ಮಹಾಸಭೆಯ ವೇಳೆ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಇವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು: 9901041889, ಕಾರ್ಯದರ್ಶಿ: 9731561354 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ‘ತಾಳಮದ್ದಳೆ ಜ್ಞಾನಯಜ್ಞ’ ಕಾರ್ಯಕ್ರಮವು ದಿನಾಂಕ 26 ಮೇ 2025ರಂದು ಬೆಳಿಗ್ಗೆ 9-30 ಗಂಟೆಗೆ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಪ್ರಸಂಗ ಸಾಹಿತ್ಯ ‘ಸುಧಾಮ ಚರಿತ್ರೆ’ಯಲ್ಲಿ ಭಾಗವತರಾಗಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಹಿಮ್ಮೇಳದಲ್ಲಿ ಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ, ಸ್ಕಂಧರಾಜ ಮಯ್ಯ ವರ್ಕಾಡಿ, ಕುಮಾರ ಮಯ್ಯ ವರ್ಕಾಡಿ ಹಾಗೂ ಅರ್ಥಗಾರಿಕೆಯಲ್ಲಿ ಡಾ. ವಾದಿರಾಜ ಕಲ್ಲೂರಾಯ, ಸುಬ್ರಹ್ಮಣ್ಯ ಬೈಪಾಡಿತ್ತಾಯ ಮತ್ತು ಶಾಂತಾ ಬೈಪಾಡಿತ್ತಾಯ ಸಹಕರಿಸಲಿದ್ದಾರೆ.

Read More

ಮೈಸೂರು : ಹಿರಿಯ ಸಾಹಿತಿ ಸವಿತಾ ನಾಗಭೂಷಣ ಇವರ ‘ದಿನದ ಪ್ರಾರ್ಥನೆ’ ಕವನ ಸಂಕಲನವು 2025ನೇ ಸಾಲಿನ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಸವಿತಾರವರೇ ಮುನ್ನಡೆಸುವ ಶಿವಮೊಗ್ಗದ ‘ನುಡಿ’ ಪ್ರಕಾಶನವು 2024ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. ರೂ.25,000/- ನಗದು ಮತ್ತು ಫಲಕವನ್ನು ಈ ಪ್ರಶಸ್ತಿಯು ಒಳಗೊಂಡಿದೆ. ದಿನಾಂಕ 01 ಜೂನ್ 2025ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ತಿಳಿಸಿದ್ದಾರೆ. ಮೈಸೂರಿನ ಸಮತಾ ಅಧ್ಯಯನ ಕೇಂದ್ರವು 2022ರಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಗೆ 2020-24 ಸಾಲಿಗೆ ಲೇಖಕಿಯರು ಪ್ರಕಟಿಸಿದ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ಲೇಖಕಿಯರು/ಪ್ರಕಾಶಕರಿಂದ ಒಟ್ಟು 110 ಸಂಕಲನಗಳು ಬಂದಿದ್ದವು. ತೀರ್ಪುಗಾರರಾಗಿ ಹಿರಿಯ ಕವಿಗಳಾದ ಪ್ರೊ. ಚ.ಸರ್ಮಮಂಗಳ, ಜಿ.ಪಿ. ಬಸವರಾಜು, ಡಾ. ಎಂ.ಎಸ್. ವೇದಾ ಇವರಿದ್ದ ಸಮಿತಿಯು, ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸವಿತಾ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಅಂಚೆ…

Read More