Subscribe to Updates
Get the latest creative news from FooBar about art, design and business.
Author: roovari
ಮಹಾರಾಷ್ಟ್ರ : ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ ದೀರ್ಘಕಾಲದಿಂದ ಉದ್ಯಮದೊಂದಿಗೆ ತುಳುಭಾಷೆ ಸಂಸ್ಕೃತಿ ಅಭಿವೃದ್ಧಿ ನೆಲೆಯಲ್ಲಿ ತುಳುನಾಡ ಸಂಘ ಸ್ಥಾಪಿಸಿ ತುಳು ಸಾಂಸ್ಕೃತಿಕ ಭವನದ ರೂವಾರಿಯಲ್ಲಿ ಒಬ್ಬರಾದ ಶ್ರೀನಿವಾಸ ಮಂಕುಡೆ ಅವರಿಗೆ ‘ಪೆರ್ಮೆದ ತುಳುವೆ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಹಾರಾಷ್ಟ್ರದ ಮೀರಜ್ನಲ್ಲಿ ದಿನಾಂಕ 22-01-2024ರಂದು ನಡೆಯಿತು. ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಈ ಸಂದರ್ಭದಲ್ಲಿ ಮಾತನಾಡಿ “ಬಹಳ ವರ್ಷಗಳಿಂದ ಹೊರರಾಜ್ಯದಲ್ಲಿ ತುಳು ಭಾಷೆಗಾಗಿ ಶ್ಲಾಘನೀಯ ಕೆಲಸ ಮಾಡಿ, ತುಳುವರ ಅಭಿಮಾನ, ಪ್ರೀತಿಗೆ ಪಾತ್ರರಾದ ಮಂಕುಡೆಯವರಿಗೆ ಈ ಗೌರವ ಸಲ್ಲಲೇಬೇಕಿತ್ತು” ಎಂದರು. ಪ್ರಧಾನ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ ಮಾತನಾಡಿ, “ಶ್ರೀನಿವಾಸ ಮಂಕುಡೆ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಷ್ಠ ಕನ್ನಡಿಗ, ಕರ್ನಾಟಕ ದೇವಾಡಿಗ ಸಂಘದಿಂದ ಸಂಘಟನೆಗೊಬ್ಬ ಸರದಾರ ಹಾಗೂ ಮುಂಬೈ, ಸಂಘಟನೆಯಿಂದ ವರ್ಷದ ವ್ಯಕ್ತಿ ಮತ್ತಿತರ ಗೌರವ ಪ್ರಶಸ್ತಿ ಪಡೆದಿದ್ದಾರೆ” ಎಂದರು. ಸಮ್ಮಾನ ಸ್ವೀಕರಿಸಿದ ಮಂಕುಡೆ ಅವರು “ಪ್ರಾಮಾಣಿಕ ಸೇವೆಯನ್ನು…
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ನೇತೃತ್ವದಲ್ಲಿ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಬನ್ನೂರು ಸಹಕಾರದಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ 12 ಕಾರ್ಯಕ್ರಮವು ದ.ಕ.ಜಿ.ಹಿ.ಪ್ರಾ. ಶಾಲೆ ಚಿಕ್ಕಮುಡ್ನೂರಲ್ಲಿ ದಿನಾಂಕ 27-01-2024ರಂದು ನಡೆಯಿತು. ಸಭಾ ಕಾರ್ಯಕ್ರಮವನ್ನು ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸ್ಮಿತಾ ಎನ್. ಉದ್ಘಾಟಿಸಿ “ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಒಲವು ಹೆಚ್ಚು ಇರುವುದರಿಂದ ಇಂದು ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತಿದೆ. ಅಲ್ಲದೇ ಸಾಹಿತ್ಯ ಪರಿಷತ್ತಿನ ಈ ಗ್ರಾಮ ಸಾಹಿತ್ಯ ಸಂಭ್ರಮ ಅದಕ್ಕೆ ಪೂರಕವಾಗಿದೆ” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯ ಎ. ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ನಳಿನಿ ಕೆ. ಸಂದರ್ಭೋಚಿತವಾಗಿ ಮಾತನಾಡಿದರು. ಸರ್ವಾಧ್ಯಕ್ಷತೆ ವಹಿಸಿದ ಮಾ.…
ಕಾಸರಗೋಡು : ಹಿರಿಯ ಸಾಹಿತಿ, ಸಂಘಟಕ ಪ್ರೊ. ಪಿ.ಎನ್. ಮೂಡಿತ್ತಾಯ ಮತ್ತು ಶಕುಂತಲಾ ದಂಪತಿಯನ್ನು ಬೆಂಗಳೂರಿನ ಶಂಪಾ ಪ್ರತಿಷ್ಠಾನದ ವತಿಯಿಂದ ಬಾಯಿಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ದಿನಾಂಕ 26-01-2024ರಂದು ಸನ್ಮಾನಿಸಿ ಗೌರವಿಸಲಾಯಿತು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ವಸಂತ ಕುಮಾರ್ ಪೆರ್ಲ ಅಭಿನಂದನ ಭಾಷಣವನ್ನು ಮಾಡಿದರು. ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾ ಶುಭ ಹಾರೈಸಿದರು. ಶಂಪಾ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಸ್.ಎಲ್. ಮಂಜುನಾಥ್ ಪ್ರಮಾಣ ಪತ್ರವನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳ ಮಾಧವ ಸ್ವಾಗತಿಸಿ, ಡಾ. ರಾಧಾಕೃಷ್ಣ ಬೆಳ್ಳೂರು ವಂದಿಸಿದರು. ಇದೇ ಸಂದರ್ಭದಲ್ಲಿ ಗುರುಗಳಾದ ಪ್ರೊ. ಪಿ.ಎನ್. ಮೂಡಿತ್ತಾಯಾರ ಬಗ್ಗೆ ಡಾ. ಪ್ರಮೀಳ ಮಾಧವ ಬರೆದ ‘ಸದ್ದಿಲ್ಲದ ಸಾಧಕ’ ಎಂಬ ಪುಸ್ತಕವನ್ನು ನಿವೃತ್ತ…
ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಹಿರಿಯ ಮಾರ್ಗದರ್ಶಕರು, ಯುವ ಕಾರ್ಯಕರ್ತರು, ಕನ್ನಡ ಪರ ಸಂಘಟಕರು, ಪತ್ರಕರ್ತರ ಸ್ನೇಹ ಸೇತುವೆಯಾಗಿ ‘ಕನ್ನಡ ಮೈತ್ರಿ ಸಂಗಮ’ ಕಾರ್ಯಕ್ರಮವು ಕಾಸರಗೋಡಿನ ಉಡುಪಿ ಗಾರ್ಡನ್ ಸಭಾಂಗಣ ‘ಮಥುರಾ’ದಲ್ಲಿ ದಿನಾಂಕ 30-01-2024ರಂದು ನಡೆಯಿತು. ಕೇಂದ್ರ ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿ ಸದಸ್ಯ ಡಾ. ಮುರಲೀ ಮೋಹನ ಚೂಂತಾರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್. ಮೋಹನದಾಸ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಕ.ಸಾ.ಪ. ಗಡಿನಾಡ ಘಟಕದ ಪೂರ್ವಾಧ್ಯಕ್ಷ ನ್ಯಾಯವಾದಿ ಐ.ವಿ. ಭಟ್, ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆ.ಜಿ. ಕುಂದಣಗಾರ ಗಡಿನಾಡ ಪ್ರಶಸ್ತಿ ಪುರಸ್ಕೃತ ಡಾ. ರಮಾನಂದ ಬನಾರಿ ಅವರನ್ನುಅಭಿನಂದಿಸಲಾಯಿತು. ಪತ್ರಕರ್ತ ಎಂ.ನಾ. ಚಂಬಲ್ತಿಮಾರ್, ಉಪನ್ಯಾಸಕ ರತ್ನಾಕರ ಮಲ್ಲಮೂಲೆ, ಅಧ್ಯಾಪಕ…
ಮಂಗಳೂರು : ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಯ ‘ನೃತ್ಯೋತ್ಸವ 2023-24’ ಕಾರ್ಯಕ್ರಮವು ಖಂಡಿಗೆ ಚೇಳ್ಳಾರು ನಾಟ್ಯಾಂಜಲಿ ಕಲಾ ಮಂದಿರದಲ್ಲಿ ದಿನಾಂಕ 28-01-2024ರಂದು ಜರಗಿತು. ಹಿರಿಯ ನೃತ್ಯ ಗುರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನಕುಮಾರ್ ಚಾಲನೆ ನೀಡಿದರು. ಉದ್ಯಮಿ ಕೆ. ಶ್ರೀಪತಿ ಭಟ್, ಖ್ಯಾತ ಉದ್ಯಮಿಗಳಾದ ಕೆ. ಪಾಂಡುರಂಗ ಪ್ರಭು, ಸಂಗೀತ ನೃತ್ಯ ನಿರ್ದೇಶಕರಾದ ವಿದುಷಿ ರಾಧಿಕಾ ಎಸ್. ಕಾರಂತ್ ಬೆಂಗಳೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದುಬೈಯ ಖ್ಯಾತ ಉದ್ಯಮಿಗಳಾದ ಪುತ್ತಿಗೆ ವಾಸುದೇವ ಭಟ್ ಮತ್ತು ವಾಣಿ ವಾಸುದೇವ ಭಟ್ ಇವರನ್ನು ಸಮ್ಮಾನಿಸಲಾಯಿತು. 2023ರಲ್ಲಿ ಭರತನಾಟ್ಯ ಪರೀಕ್ಷೆಗಳ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಅಕ್ಷತಾ ಶೆಟ್ಟಿ ಹಾಗೂ ರಾಜಶ್ರೀ ಶ್ರೀಕಾಂತ್ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕರಾದ ಕರ್ನಾಟಕ ಕಲಾ ವಿದ್ವಾನ್ ಕೆ. ಚಂದ್ರಶೇಖರ ನಾವಡ ಸ್ವಾಗತಿಸಿ, ವಂದಿಸಿದರು. ಬಳಿಕ ಸಂಸ್ಥೆಯ ಕಿರಿಯ ಹಾಗೂ ಹಿರಿಯ ಕಲಾವಿದರಿಂದ ‘ಭರತನಾಟ್ಯ’ ಕಾರ್ಯಕ್ರಮ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ದತ್ತಿ ಕಾರ್ಯಕ್ರಮದಂತೆ ಕೊಡಗು ಜಿಲ್ಲಾ ಮಟ್ಟದ ಮುಕ್ತ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಜಿಲ್ಲೆಯ ಹಿರಿಯ ಸಾಹಿತಿಗಳು ಪತ್ರಕರ್ತರು ಶಕ್ತಿ ದಿನ ಪತ್ರಿಕೆಯ ಸಂಸ್ಥಾಪಕರು ಆಗಿದ್ದ ಬಿ.ಎಸ್. ಗೋಪಾಲಕೃಷ್ಣ ಅವರ ನೆನಪಿನಲ್ಲಿ ಅವರ ಪುತ್ರ ಬಿ.ಜಿ. ಅನಂತಶಯನ ಈ ದತ್ತಿ ಸ್ಥಾಪಿಸಿದ್ದು, ಕೊಡಗು ಜಿಲ್ಲೆಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಕಥೆಯನ್ನು ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ರಚಿಸತಕ್ಕದ್ದು. ತೀರ್ಪುಗಾರರ ಮೂಲಕ ಪ್ರಥಮ, ದ್ವಿತೀಯ ಮತ್ತು ತೃತೀಯ ಬರಹಗಳನ್ನು ಆರಿಸಿ ಬಹುಮಾನ ನೀಡಲಾಗುವುದು. ಕಥೆ ಬರೆದು ಸಲ್ಲಿಸಲು ದಿನಾಂಕ 15-02-2024 ಕೊನೆಯ ದಿನವಾಗಿದ್ದು ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ನ್ನಡ ಸಾಹಿತ್ಯ ಪರಿಷತ್, ಬಾಳೆಲೆ ಹೋಬಳಿ ಘಟಕ, ಅಂಚೆ ಪೆಟ್ಟಿಗೆ ಸಂಖ್ಯೆ 63, ಬಾಳೆಲೆ, ಪೊನ್ನಂಪೇಟೆ ತಾಲೂಕು, ಕೊಡಗು ಜಿಲ್ಲೆ 571219. ಸಂಪರ್ಕಿಸಲು ದೂರವಾಣಿ ಸಂಖ್ಯೆ:…
ಉರ್ವಸ್ಟೋರ್ : ಅವಿನಾಶ್ ಫೋಕ್ ಡಾನ್ಸ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ವಿವಿಧ ವಿನೋದಾವಳಿ ಸ್ಪರ್ಧೆ ಕರ್ಣಾಟಕದ ಜಾನಪದ ಕಲೆ, ಸಾಂಸ್ಕೃತಿಕ ಜೀವನಾಧಾರಿತ ‘ಕರುನಾಡ ವೈಭವ 2024’ ದಿನಾಂಕ 26-01-2024ರಂದು ನಡೆಯಿತು. ಈ ಕಾರ್ಯಕಾಮವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿ ಮಾತನಾಡಿ “ಕರುನಾಡ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ಚಟುವಟಿಕೆಗಳು ದೇಶದಲ್ಲೇ ಅದ್ವಿತೀಯ ಸ್ವರೂಪದ್ದಾಗಿದೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ಪ್ರಕಾರದ ಕಲಾ ಚಟುವಟಿಕೆಗಳು ಪ್ರಚಲಿತದಲ್ಲಿವೆ. ಯಕ್ಷಗಾನ ಸಹಿತ ಕರಾವಳಿ ಭಾಗದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿ ಸಮಾಜದ ಹಾಸುಹೊಕ್ಕಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಕಾಪಿಡುವ ಮಹತ್ವದ ಕಾರ್ಯ ನಡೆಯಬೇಕು” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿದರು. ‘ಅವಿನಾಶ್ ಫೋಕ್ ಡಾನ್ಸ್’ ಮಂಗಳೂರು ಇದರ ಅಧ್ಯಕ್ಷ ಅವಿನಾಶ್ ಪ್ರಸ್ತಾವಿಸಿದರು. ಮುಖ್ಯ ಅತಿಥಿಗಾಳಾಗಿ ಹಿರಿಯ ರಂಗಭೂಮಿ ನಟ ಹಾಗೂ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲು, ಸುಧಾಕರ…
ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನಗರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಮತ್ತು ಸಂಗೀತ ವಿದುಷಿ ಶೀಲಾ ದಿವಾಕರ್ ನುಡಿನಮನ, ನೃತ್ಯಾಂಜಲಿ ಮತ್ತು ನೃತ್ಯ ರೂಪಕ ಪ್ರಸ್ತುತಿ ಕಾರ್ಯಕ್ರಮವು ದಿನಾಂಕ 28-01-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ನುಡಿನಮನ ಅರ್ಪಿಸಿದ ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಷಿ “ಸಾಹಿತ್ಯ ಕ್ಷೇತ್ರದಲ್ಲಿ ಅಮೃತ ಸೋಮೇಶ್ವರರು ಮಾಡಿದ ಸಂಶೋಧನೆಗಳು ಅಪೂರ್ವವಾದುದು. ಯಕ್ಷಗಾನ ಕ್ಷೇತ್ರದಲ್ಲಿ ಅವರು ತಮ್ಮ ಹೊಸ ದೃಷ್ಟಿಕೋನದಿಂದ ಸಂಶೋಧಾನತ್ಮಕ ಕೃತಿಗಳನ್ನು ಬರೆದಿದ್ದಾರೆ. ಅವರು ಸಾಗಿದ ಹಾದಿ ಕಿರಿಯರಿಗೆ ಮಾದರಿ. ವಿದ್ವಾಂಸರು, ಮಾರ್ಗದರ್ಶಕರು ಆಗಿದ್ದ ಅಮೃತ ಸೋಮೇಶ್ವರ ಅವರು ಪೌರಾಣಿಕ ಕಥೆಗಳಿಗೆ ಹೊಸ ಅರ್ಥವನ್ನು ಹುಡುಕುತ್ತ, ಯಕ್ಷಗಾನದ ಪ್ರಸಂಗಗಳಿಗೆ ಹೊಸ ಆಯಾಮವನ್ನು ನೀಡಿದವರು. ಅವರಿದ್ದ ಎಂಭತ್ತರ ಮತ್ತು ತೊಂಭತ್ತರ ದಶಕದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಸಂಶೋಧನಾತ್ಮಕ ಕೆಲಸಗಳು ನಡೆದವು. ವಿದುಷಿ ಶೀಲಾ ದಿವಾಕರ್ ಅವರು ನಮ್ಮೊಡನೆ ಇನ್ನಷ್ಟು ದಿನ ಇರಬೇಕಿತ್ತು ಎಂಬುದು ಎಲ್ಲರ ಆಶಯ. ಅವರು…
ದಾವಣಗೆರೆ : ರಾಯಚೂರಿನ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ ಮತ್ತು ಹೂವಿನಹಡಗಲಿಯ ಗ್ಲೋಬಲ್ ಗೋರ್ ಬಂಜಾರ್ ಆರ್ಗನೈಜೇಷನ್ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ 04-02-2024ರಂದು ಭಾನುವಾರ ಬೆಳಿಗ್ಗೆ 10-30ಕ್ಕೆ ಗದುಗಿನ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಪುಸ್ತಕಗಳ ಲೋಕಾರ್ಪಣೆ, ಜಿಲ್ಲಾ ಘಟಕದ ಉದ್ಘಾಟನೆ, ರಾಜ್ಯ ಮಟ್ಟದ ಕವಿಗೋಷ್ಠಿ ಸಮಾರಂಭದಲ್ಲಿ ದಾವಣಗೆರೆಯ ಕನ್ನಡಪರ ಶೈಕ್ಷಣಿಕ ಕಾಳಜಿಯ ಸಾಂಸ್ಕೃತಿಕ ಸಂಘಟಕ ನಿರಂತರ ನಾಲ್ಕು ದಶಕಗಳಿಂದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಯಕ್ಷಗಾನ, ಅಧ್ಯಾತ್ಮ ಹೀಗೆ ಲಲಿತ ಕಲೆಗಳ ಎಲ್ಲಾ ಪ್ರಕಾರಗಳಲ್ಲಿ ಸಾಧನೆ ಮಾಡುತ್ತಿರುವ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ‘ಕರುನಾಡ ಕಣ್ಮಣಿ’ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ರಮೇಶ್ ನಾಯ್ಕ ತಿಳಿಸಿದ್ದಾರೆ. ವರ್ಷ ಪೂರ್ತಿ ಕಲಾಕುಂಚ, ಯಕ್ಷರಂಗ ಸಂಸ್ಥೆಗಳಿಂದ ಅವಕಾಶ ವಂಚಿತ ಪ್ರತಿಭಾವಂತ ಮಹಿಳೆಯರಿಗೆ, ಮಕ್ಕಳಿಗೆ ಮುಕ್ತವಾದ, ಸೂಕ್ತವಾದ ವೇದಿಕೆ ಕಲ್ಪಿಸುತ್ತಾ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಸಾಧನೆಗಳನ್ನು ಗುರುತಿಸಿ ಸಂಸ್ಥೆಯ…
ಕುಮಟಾ : ಖ್ಯಾತ ಚಲನಚಿತ್ರ ನಟ ನಿರ್ದೇಶಕ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಹಿಂದಿನ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರ ಸಾರಥ್ಯದಲ್ಲಿ ದಿನಾಂಕ 04-02-2024ರಂದು ಸಹ 150ನೇ ‘ಘರ್ ಘರ್ ಕೊಂಕಣಿ’ ಕಾರ್ಯಕ್ರಮವು ಕುಮಟಾದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಅವರ ಆತಿಥ್ಯದಲ್ಲಿ ನೆರವೇರಲಿದೆ. ಇಲ್ಲಿನ ಕೊಂಕಣ ಎಜ್ಯಕೇಶನ್ ಟ್ರಸ್ಟಿನ ಸಭಾಭವನದಲ್ಲಿ ಈ ನಿಮಿತ್ತ ವಿಶೇಷ ಕೊಂಕಣಿ ಮನೋರಂಜನಾ ಕಾರ್ಯಕ್ರಮ ಜರುಗಲಿದ್ದು, ಅಪರಾಹ್ನ 3.30 ಗಂಟೆಗೆ ತಾಲೂಕಿನ ಕಲ್ಪತರು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹನುಮಂತ ಕೆ. ಶಾನಭಾಗ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಡಿ. ಶೇಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಕೊಂಕಣಿ ಭಾಷಿಕ ವಿವಿಧ ಮತ್ಯ ಸಮುದಾಯದ ವತಿಯಿಂದ ಮನೋರಂಜನಾ ಕಾರ್ಯಕ್ರಮ ನೆರವೇರಲಿದೆ. ಇದೇ ವೇದಿಕೆಯಲ್ಲಿ ಸಂಜೆ 5.30 ಗಂಟೆಗೆ ಸಭಾಕಾರ್ಯಕ್ರಮ ಜರುಗಲಿದ್ದು, ಅಧ್ಯಕ್ಷತೆಯನ್ನು ತಾಲೂಕಿನ ಕೊಂಕಣಿ ಪರಿಷತ್ ಇದರ ಉಪಾಧ್ಯಕ್ಷ ಮುರಳೀಧರ ಪ್ರಭು ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ…