Subscribe to Updates
Get the latest creative news from FooBar about art, design and business.
Author: roovari
29.07.2002ರಂದು ಮಂಜುನಾಥ್ ಹಾಗೂ ಪ್ರಮೀಳಾ ಶೆಟ್ಟಿ ಅವರ ಮಗನಾಗಿ ಅಜಿತ್ ಪುತ್ತಿಗೆ ಅವರ ಜನನ. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಸಬ್ಬಣಕೋಡಿ ರಾಮ ಭಟ್ ಇವರ ಯಕ್ಷಗಾನದ ಗುರುಗಳು. ಅಣ್ಣ ಯಕ್ಷಗಾನ ವೇಷ ಮಾಡುವುದನ್ನು ನೋಡಿ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಿ ಯಕ್ಷಗಾನ ರಂಗಕ್ಕೆ ಬಂದು ಇಂದು ಒಬ್ಬ ಪ್ರಬುದ್ಧ ಕಲಾವಿದನಾಗಿ ಯಕ್ಷಗಾನ ರಂಗದಲ್ಲಿ ರೂಪುಗೊಳ್ಳುತ್ತಿದ್ದಾರೆ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಹಿರಿಯ ಕಲಾವಿದರ ಜೊತೆಗೆ ಯಕ್ಷಗಾನ ಪ್ರಸಂಗದ ಬಗ್ಗೆ ಕೇಳಿ ಹಾಗೂ ಪ್ರಸಂಗದ ನಡೆ ತಿಳಿಯಲು ಯಕ್ಷಗಾನದ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಅಜಿತ್ ಅವರು ಹೇಳುತ್ತಾರೆ. ದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಶುಕ್ರನಂದನೆ, ಕೃಷ ಲೀಲೆ ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ಷಣ್ಮುಖ, ಅಭಿಮನ್ಯು ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಯಕ್ಷಗಾನ ಬಹಳ ಉನ್ನತ ಮಟ್ಟದಲ್ಲಿ…
ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರ, ‘ಹಳ್ಳ ಬಂತು ಹಳ್ಳ’ ಖ್ಯಾತಿಯ ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರು ಬೆಂಗಳೂರಿನಲ್ಲಿ ದಿನಾಂಕ 21-04-2023 ಶುಕ್ರವಾರ ನಿಧನರಾದರು. ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣಗೊಳಿಸಿದರು. ಮುಂಬೈ ಕೆನರಾ ಬ್ಯಾಂಕ್ ಅಧಿಕಾರಿಯಾಗಿ ಸೇರಿ 1996ರಲ್ಲಿ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ‘ಹಳ್ಳ ಬಂತು ಹಳ್ಳ’ ಕಾದಂಬರಿ ಕನ್ನಡ ಸಾಹಿತ್ಯದ ಮಹತ್ವದ ಕೃತಿ. ನಿವೃತ್ತಿಯ ನಂತರ ಬರೆಯಲು ಕುಳಿತ ಬ್ಯಾಂಕ್ ನ ಅಧಿಕಾರಿಯೊಬ್ಬರ ಈ ಬರವಣಿಗೆಯನ್ನು ಕನ್ನಡ ಲೋಕ ಅಚ್ಚರಿಯಿಂದ ಆಹ್ವಾನಿಸಿತ್ತು. ನಾನು ‘ಹರಿವ ನೀರು’ ಎಂದು ಅವರು ತನ್ನನ್ನು ಹೇಳಿಕೊಳ್ಳುತ್ತಿದ್ದರು. ‘ಅಪರಂಜಿ’ಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಶ್ರೀನಿವಾಸ ವೈದ್ಯರು ಲಲಿತ ಪ್ರಬಂಧ, ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ‘ಮನಸುಖರಾಯನ ಮನಸು’,’ ತಲೆಗೊಂದು ತರತರ’, ‘ರುಚಿಗೆ ಹುಳಿಯೊಗರು’, ‘ಕರ್ನಲ್ ಗೆ ಯಾರೂ ಬರೆಯುವುದಿಲ್ಲ’ ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ…
ಮಂಗಳೂರು: ನಗರದ ಅಂಬೇಡ್ಕರ್ ಭವನದಲ್ಲಿ 22-04-2023 ಶನಿವಾರ ಜರಗಿದ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಏಕಾಂತದಿಂದ ಲೋಕಾಂತರಕೆ’ ಗ್ರಂಥ ಲೋಕಾರ್ಪಣೆಯಾಯಿತು. ಕೃತಿ ಬಿಡುಗಡೆ ಮಾಡಿದ ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಮಾತನಾಡುತ್ತಾ ‘ನಮ್ಮಲ್ಲಿ ವಿವಿಧ ಜಾತಿ – ಧರ್ಮಗಳನ್ನು ಪ್ರತಿನಿಧಿಸುವ ಸಮುದಾಯಗಳಿವೆ. ಆದರೆ ಸಾಹಿತ್ಯ ಜಾತ್ಯತೀತವಾದುದು. ಸಾರ್ವಕಾಲಿಕ ಮೌಲ್ಯಗಳ ದಾಖಲಾತಿಯೊಂದಿಗೆ ಸಮಾಜದ ಕಣ್ತೆರೆಸುವ ಸಾಹಿತ್ಯ ಕೃತಿಗಳು ಬರಬೇಕು. ಆಧುನಿಕ ಯುವ ಸಮುದಾಯದಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸುವ ಸಲುವಾಗಿ ಉತ್ತಮ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ಏಕಾಂತದಿಂದ ಲೋಕಾಂತರಕೆ’ ಕೃತಿಯ ಇಂಗ್ಲಿಷ್ ರೂಪಾತರವು ಬರುವಂತಾಗಲಿ” ಎಂದು ಅವರು ಹಾರೈಸಿದರು. ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಹಿರಿಯ ವಿದ್ವಾಂಸ ಪ್ರೊ.ಬಿ.ಎ. ವಿವೇಕ ರೈ ಮುನ್ನುಡಿಯಲ್ಲಿ ಹೇಳಿರುವಂತೆ ಕನ್ನಡಾಂತರ್ಗತವಾದ ತುಳುನಾಡಿನ ಬಹುರೂಪೀ ಚಿತ್ರಣಗಳನ್ನು ಅನಾವರಣಗೊಳಿಸಲು ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಒಟ್ಟು 100…
ಮಂಗಳೂರು : ಭಗವದ್ಗೀತೆ, ಸಂಗೀತ, ನೃತ್ಯ, ಸಂಸ್ಕೃತಿ, ನಾಟಕ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನವಾಗಿರುವ ನಾಟ್ಯಾಯನ ಯುಗಳ ನೃತ್ಯ ಕಾರ್ಯಕ್ರಮ ಏಪ್ರಿಲ್ 17ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಿತು. ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೋತ್ಸವದ ಹಿನ್ನಲೆಯಲ್ಲಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆದ ಕಾರ್ಯಕ್ರಮವನ್ನು ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ವೆಂಕಟರಮಣ ಅಸ್ರಣ್ಣರ ಶುಭಾಶೀರ್ವಾದಗಳೊಂದಿಗೆ ಉದ್ಘಾಟಿಸಲಾಯಿತು. ಆಲಂಗಾರು ಶ್ರೀಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಮಣ್ಯ ಭಟ್ , ಉದ್ಯಮಿ ಶ್ರೀಪತಿ ಭಟ್, ನಾದಸ್ವರ ವಿದ್ವಾನ್ ಶ್ರೀ ನಾಗೇಶ್ ಎ. ಬಪ್ಪನಾಡು, ಹಿರಿಯ ನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ , ನಿವೃತ್ತ ಕನ್ನಡ ಅಧ್ಯಾಪಕ ನರಸಿಂಹ ಭಟ್ ಮತ್ತಿತರರು ದೀಪ ಬೆಳಗಿದರು. ಕೆ.ವಿ. ರಮಣ್, ಮಂಗಳೂರು ಅವರ ಪರಿಕಲ್ಪನೆ ಮತ್ತು ನಿರೂಪಣೆಯೊಂದಿಗೆ ವಿದುಷಿ ಅಯನಾ ವಿ. ರಮಣ್ ಮೂಡುಬಿದಿರೆ ಮತ್ತು ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ನಾಟ್ಯಾಯನ-ಯುಗಳ ನೃತ್ಯ ಪ್ರದರ್ಶನ ನೀಡಿದರು. ಮೈಸೂರಿನ ಶ್ರೀ ದುರ್ಗಾ ನೃತ್ಯ ಚಾರಿಟೇಬಲ್ ಟ್ರಸ್ಟಿನ ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್ ನಟುವಾಂಗದಲ್ಲಿ…
ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ವಿವೇಕಾನಂದ ಸಂಶೋಧನ ಕೇಂದ್ರ ಹಾಗೂ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಂಘ ಇದರ ಸಹಯೋಗದಲ್ಲಿ ದಿನಾಂಕ 16-04-2023ರಂದು ನಡೆದ ‘ನಿರಂಜನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಹಾಗೂ ಪುತ್ತೂರಿನ ಸಾಹಿತಿಯಾದ ಪ್ರೊ. ವಿ.ಬಿ. ಅರ್ತಿಕಜೆ ಇವರು ಭಾಗವಹಿಸಿ ಮಾತನಾಡುತ್ತಾ “ಸಾಹಿತ್ಯವನ್ನು ನಾವು ಅಪ್ಪಿಕೊಳ್ಳಬೇಕು, ಹಾಗೆಯೇ ನಮ್ಮದು ಎಂದು ಒಪ್ಪಿಕೊಳ್ಳಬೇಕು. ಅದೆಷ್ಟೋ ಏರು ಪೇರುಗಳನ್ನು ಎದುರಿಸಿದರೂ, ಮನಸ್ಸು ಮುದುಡಿ ಹೋದರೂ, ಜೀವನವೇ ಬೇಡ ಎಂದು ನಿರ್ಧಾರವಾದರೂ ನಾವು ನಮ್ಮ ಮನಸನ್ನು ಗಟ್ಟಿಮಾಡಿಕೊಳ್ಳಬೇಕು” ಎಂದು ಹೇಳಿದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲುರಾಯ ಮಾತನಾಡಿ “ಮಾನವ ಸಂಬಂಧ ರೂಪಿಸಿಕೊಳ್ಳುವ ಮತ್ತು ಸಮಾಜದಲ್ಲಿ ಬದುಕುವ ಬಗ್ಗೆ” ತಿಳಿಸಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಎಚ್.ಜಿ. “ಕಥೆಗಳನ್ನು ಹುಡುಕಿ, ಆರಿಸಿ…
ಬ್ರಹ್ಮಾವರ: “ಮನದ ಜಾಡ್ಯವನ್ನು ದೂರಮಾಡಬಲ್ಲ, ಆಂಗಿಕ, ಆಹಾರ್ಯ, ವಾಚಿಕ ಮತ್ತು ಸಾತ್ವಿಕ ಎಂಬ ಚತುರ್ವಿಧವಾದ ಅಭಿನಯಗಳಿಂದ ಕೂಡಿದ ಶ್ರೀಮಂತ ಕಲೆ ಯಕ್ಷಗಾನ. ಇಲ್ಲಿ ಕಣ್ಣಿಗೆ ಆಹ್ಲಾದ ನೀಡುವ ವೇಷಗಳಿವೆ, ಬುದ್ಧಿಗೆ ಆಹಾರ ಕೊಡುವ ಮೌಲಿಕವಾದ ಸಾಹಿತ್ಯವಿದೆ, ಕಿವಿಗೆ ರಸಾಸ್ವಾದವನ್ನು ನೀಡುವ ಸಂಗೀತವಿದೆ. ಹೃದಯವನ್ನು ಬೆಳಗುವ ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಒಬ್ಬ ಕಲಾವಿದರಾಗುವುದರ ಜೊತೆಗೆ ರುಚಿಶುದ್ಧಿಯುಳ್ಳ ಪ್ರಜ್ಞಾವಂತ ಪ್ರೇಕ್ಷರಾಗುವುದು ಮುಖ್ಯ” ಏಂದು ಕನ್ನಡ ಉಪನ್ಯಾಸಕ, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರಾದ ಸುಜಯೀಂದ್ರ ಹಂದೆ ಹೇಳಿದರು. ಸಾಲಿಕೇರಿಯ ದಶಾವತಾರ ಯಕ್ಷಶಿಕ್ಷಣ ಕೇಂದ್ರ (ರಿ). ಬ್ರಹ್ಮಾವರದ ರೋಟರಿ ಸಮಾಜ ಭವನದಲ್ಲಿ ಆಯೋಜಿಸಿದ ಎರಡು ದಿನದ ಯಕ್ಷಗಾನ ಕಾರ್ಯಾಗಾರದಲ್ಲಿ ಏರ್ಪಡಿಸಿದ್ದ ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಹಂದೆಯವರು ಮಾತನಾಡಿದರು. ಯಕ್ಷಗಾನದ ಇತಿಹಾಸ, ಬೆಳೆದು ಬಂದ ರೀತಿ, ಯಕ್ಷಗಾನದ ಒಳಹೊರಗು ಕುರಿತಂತೆ ಮಾತನಾಡಿದ ಹಂದೆಯವರು ಬಡಗು ತಿಟ್ಟಿನ ಬಾಲಗೋಪಾಲ, ಪೀಠಿಕಾ ಸ್ರೀವೇಷಗಳ ಕುಣಿತ ಸಹಿತ ಆಂಗಿಕಾಭಿನಯದ ವಿವಿಧ ತಾಳಗಳ ಪರಿಚಯ ಮಾಡಿಸಿದರು. ಪಾದ ಮತ್ತು ಹಸ್ತಗಳ ಸ್ಥಾನ…
ಬೆಂಗಳೂರು: ದಿನಾಂಕ 15-04-2023ರಂದು ವಿಶ್ವ ಕಲಾ ದಿನ ಪ್ರಯುಕ್ತ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ “ದಾಕಹವಿಸ” ಎರ್ಪಡಿಸಿದ ಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಶ್ರೀ ವಿ. ಹರಿರಾಮ ಅವರು ಮಾತನಾಡುತ್ತಾ “ನಭದ ನೀಲಿ ಅನಂತವನ್ನು ಸೂಚಿಸಿದರೆ, ಎಲ್ಲವನ್ನೂ ಮೀರಿ ಭಗವಂತ ಅಪ್ರಮೇಯನಾದ. ಹಾಗೆಯೇ ಎಲ್ಲ ಚೌಕಟ್ಟುಗಳನ್ನು ಮೀರಿ ರಚಿಸುವ ಕಲೆಯೇ ಅಮೂರ್ತ ಕಲೆ.” ಎಂದು ತಮ್ಮ ನಿರರ್ಗಳವಾದ ಮಾತಿನಿಂದ ಕಲೆಯ ಬಗ್ಗೆ ತಮಗಿರುವ ಆಳವಾದ ಅಧ್ಯಯನ, ಜ್ಞಾನವನ್ನು ತೆರೆದಿಟ್ಟರು. ಸೃಷ್ಟಿಯ ಜೊತೆ ಸದಾ ಸ್ಪಂದಿಸುತ್ತ ಜ್ಞಾನವನ್ನು ಬೆಳೆಸಿಕೊಂಡು ಸೃಜನಶೀಲತೆಯೊಂದಿಗೆ ಮನೋವಿಕಾಸದ ಹಾದಿಯೇ ಕಲೆ. ಮೊದಲು ಕ್ಯಾನ್ವಾಸಿನ ಮೇಲೆ ವಿವಿಧ ಬಣ್ಣಗಳನ್ನು ಹರಡಿ ನಂತರ, ನಿರಂತರ, ಅಂತ್ಯವಿಲ್ಲದ ಭಾವನೆಗಳನ್ನು ನೀಡುವ ನೀಲಿ Cobalt ಬಣ್ಣವನ್ನು ಹೆಚ್ಚಿನ ಭಾಗದಲ್ಲಿ ಹರಡಿದ್ದು ನಮ್ಮನ್ನು ವಿಶಾಲದೆಡೆಗೆ ಕರೆದೊಯ್ಯುವಂತೆ ಭಾಸವಾಗತ್ತಿತ್ತು. ಇಂತಹ ಚಿತ್ರಗಳೇ ಮನುಕುಲಕ್ಕೆ ಭಗವಂತನು ಕರುಣಿಸಿದ ಸಂಜೀವಿನಿ ಎಂಬಂತೆ ಗೋಚರವಾಗುತ್ತಿತ್ತು. ಲೌಕಿಕದ ಅನುಭವ ಮತ್ತು ಪಾರಮಾರ್ಥಿಕದಲ್ಲಿ ಅವರಿಗಿರುವ ಆಸಕ್ತಿ ಅವರ ಮಾತು ಮತ್ತು ಕಲೆಯಲ್ಲಿ ಪ್ರತಿಧ್ವನಿಸುತ್ತಿತ್ತು. ಕೇಳುಗರ…
ಬಂಟ್ವಾಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಸರಪಾಡಿ ಘಟಕ ಸಮಿತಿ ವತಿಯಿಂದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ದಿನಾಂಕ 18-04-2023 ಮಂಗಳವಾರದಂದು ಬಂಟ್ವಾಳ ತಾಲೂಕಿನ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಿತು. ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಭಾಗವತ ಸತೀಶ್ ಶೆಟ್ಟಿ ಪಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಯಕ್ಷಗಾನ ಕಲಾವಿದರ ಬೆಳವಣಿಗೆಗೆ ಸರಪಾಡಿಯ ಕೊಡುಗೆ ಮಹತ್ತರವಾಗಿದೆ. ಕಲಾಭಿಮಾನಿಗಳ ಪ್ರೀತಿ, ಪ್ರೋತ್ಸಾಹದಿಂದ ಯಕ್ಷಗಾನ ಬೆಳೆಯಲು ಸಾಧ್ಯವಾಗಿದೆ” ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, “ಸತೀಶ್ ಶೆಟ್ಟಿ ಪಟ್ಲ ಅವರ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಿಗೆ ಭರವಸೆಯ ಬೆಳಕು ನೀಡಿ ಮುನ್ನಡೆಸುವ ಕಾರ್ಯ ಮಾಡುತ್ತಿರುವ ಯಕ್ಷಧ್ರುವ ಪಟ್ಟ ಫೌಂಡೇಶನ್ ಕಾರ್ಯ ಮಾದರಿಯಾಗಿದೆ” ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಸಾಧಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಶ್ರೀ ಅಶೋಕ್ ಶೆಟ್ಟಿ ಸರಪಾಡಿ, ಯಕ್ಷಗಾನ ಕಲಾವಿದ ಶ್ರೀ ದಿನೇಶ ಶೆಟ್ಟಿ ಕಾವಳಕಟ್ಟೆ ಮತ್ತು ಯಕ್ಷಾಭಿಮಾನಿ ಶ್ರೀಮತಿ…
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಗಳಾದ ಪಾರ್ವತಿ ನೃತ್ಯ ವಿಹಂಗಮ (ರಿ.) ಇದರ ನೃತ್ಯ ನಿರ್ದೇಶಕರಾದ ಗುರು ನಿರ್ಮಲಾ ಜಗದೀಶ್ ಹಾಗೂ ನೃತ್ಯ ಕುಟೀರ (ರಿ.) ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ದೀಪಾ ಭಟ್ ಇವರುಗಳು ಜಂಟಿಯಾಗಿ 2023 ಏಪ್ರಿಲ್ ತಿಂಗಳ 15 ಮತ್ತು 16ರಂದು ಎರಡು ದಿನಗಳ ಕಾಲ ಹಮ್ಮಿಕೊಂಡ ತಾಳ ಕಾರ್ಯಾಗಾರದಲ್ಲಿ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಈ ತಾಳ ಕಾರ್ಯಾಗಾರವನ್ನು ಪಾರ್ವತಿ ನೃತ್ಯ ವಿಹಂಗಮ ಮತ್ತು ನೃತ್ಯ ಕುಟೀರ ಸಂಸ್ಥೆಯ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದು, ಸುಮಾರು 56 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ತಮ್ಮ 6ನೇ ವಯಸ್ಸಿನಲ್ಲಿಯೇ ಭರತನಾಟ್ಯದ ಅಭ್ಯಾಸವನ್ನು ಆರಂಭಿಸಿದ್ದು, ನೃತ್ಯಕ್ಕಾಗಿಯೇ ತಮ್ಮನ್ನು ತೊಡಗಿಸಿಕೊಂಡವರು. 2013ರಲ್ಲಿ ವಿದ್ವಾನ್ ಸುದರ್ಶನ ಎಂ.ಎಲ್. ಭಟ್ ಅವರ ಮಾರ್ಗದರ್ಶನದಲ್ಲಿ ವಿದ್ವತ್ ಪರೀಕ್ಷೆ ತೇರ್ಗಡೆಗೊಂಡಿದ್ದಾರೆ. ಉಪ್ಪಿನಂಗಡಿ ಮತ್ತು ಕಲಬುರುಗಿಯ ಶ್ರೀ ಮಂಜುನಾಥ ನೃತ್ಯ…
ಬದಿಯಡ್ಕ : ನಿವೃತ್ತ ಅಧ್ಯಾಪಕ ಭಸ್ಮಾಜೆ ಗೋಪಾಲಕೃಷ್ಣ ಭಟ್ಟರ 3ನೇ ಕೃತಿ ‘ಗುರು ಪಿತಾಮಹರ ಆದರ್ಶ ಸ್ಮರಣೆ’ ಬಿಡುಗಡೆ ಸಮಾರಂಭ ದಿನಾಂಕ 18-04-2023 ಮಂಗಳವಾರದಂದು ಉಪ್ಪಂಗಳ ಭಸ್ಮಾಜೆಯಲ್ಲಿ ಜರಗಿತು. ಜಿ. ರಾಮ ಪ್ರಸನ್ನ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಪತ್ರಕರ್ತ, ಕವಿ ಬಾಲಕೃಷ್ಣ ಕೋಳಾರಿಯವರು ಅಧ್ಯಕ್ಷತೆ ವಹಿಸಿ ಕೃತಿಯನ್ನು ಬಿಡುಗಡೆಗೊಳಿಸಿದರು. ಮುಂಡುಗಾರು ಸುಬ್ರಹ್ಮಣ್ಯ ಭಟ್ ಕೃತಿ ಪರಿಚಯ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಅತುಲ್ ಯು. ಮತ್ತು ಐಶಾನಿ ಯು. ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃತಿಕರ್ತೃ ಭಸ್ಮಾಜೆ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ನಿವೃತ್ತ ಅದ್ಯಾಪಕ ಉಪ್ಪಂಗಳ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ರಾಜೇಶ್ ಯು. ಧನ್ಯವಾದವಿತ್ತರು. ವಿಶ್ವಾಸ್ ನೀರ್ಪಜೆ ಕಾರ್ಯಕ್ರಮ ನಿರೂಪಿಸಿದರು.