Author: roovari

ಕಲಬುರಗಿ : ರಂಗಸಂಗಮ ಕಲಾವೇದಿಕೆ ನೀಡುವ ಎಸ್.ಬಿ. ಜಂಗಮ ಶೆಟ್ಟಿ ಮತ್ತು ಸುಭದ್ರಾ ದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆಗೈದ ರಂಗಕರ್ಮಿಗಳ ಹೆಸರುಗಳನ್ನು ರಂಗಾಸಕ್ತರು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಅಥವಾ ಅರ್ಜಿ ಹಾಕಬಹುದು ಎಂದು ರಂಗ ಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ. ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯು ತಲಾ 10,000 ರೂ.ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನೊಳಗೊಂಡಿದ್ದು, ಜುಲೈ 18ರಂದು ಹಮ್ಮಿಕೊಳ್ಳಲಾಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಾಗಿ ಅರ್ಜಿಗಳನ್ನಾಗಲಿ ಅಥವಾ ನಾಮ ನಿರ್ದೇಶನಗಳನ್ನಾಗಲಿ ಕಳಿಸುವ ಕೊನೆಯ ದಿನಾಂಕ 20-06-2023. ಕಳಿಸಬೇಕಾದ ವಿಳಾಸ: ಡಾ.ಸುಜಾತಾ ಜಂಗಮಶೆಟ್ಟಿ, ಓಂ ರೆಸಿಡೆನ್ಸಿ, ಗೋಕುಲ ಸೂಪರ್ ಬಜಾರಿನ ಎರಡನೇ ಮಹಡಿ, ಶ್ರೀನಿವಾಸ ಕಣ್ಣಿನ ಆಸ್ಪತ್ರೆ ಪಕ್ಕ. ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೆಯ ಜೇವರ್ಗಿ ರಸ್ತೆ, ಕಲಬುರಗಿ 585102.

Read More

ಬೆಂಗಳೂರು : ‘ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ’ ಮತ್ತು ಕಲಾ ಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ‘ಮೋಹನ ತರಂಗಿಣಿ ಸಂಗೀತ ಸಭಾ’ ಇದರ ಅಮೃತ ಮಹೋತ್ಸವ ಸಾಂಸ್ಕೃತಿಕ ಸಂಗೀತ ಸಂಭ್ರಮವು ದಿನಾಂಕ 18-02-2023ರಿಂದ 07-05-2023ರವರೆಗೆ ಕರ್ನಾಟಕ ಸಂಗೀತ ತ್ರಿಮೂರ್ತಿಗಳ ಹಾಗೂ ಕನಕ ಪುರಂದರ ಸಂಗೀತೋತ್ಸವ ಅಂಗವಾಗಿ ನಡೆಯುತ್ತಿರುವ 75ನೇ ವಾರ್ಷಿಕೋತ್ಸವಕ್ಕೆ 75 ಕಾರ್ಯಕ್ರಮಗಳ ‘ಮಂಗಳ ಸಂಗೀತ ನೃತ್ಯ ಧಾರೆ’ ಎಂಬ ಕಾರ್ಯಕ್ರಮವು ಕಲಾಗ್ರಾಮ ಸಮುಚ್ಛಯ ಭವನ, ಮಲ್ಲತ್ತ ಹಳ್ಳಿ, ಬೆಂಗಳೂರಿನಲ್ಲಿ ನಡೆಯಿತು.  ವೇದಿಕೆಯಲ್ಲಿ ಉಪಸ್ಥಿತರಿದ್ದ ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀದೇವಿ ಮೋಹನ ಕುಮಾರ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರರೊಂದಿಗೆ ರಾಜ್ಯದ ಎಲ್ಲಾ ಸಂಗೀತ ಸಭಾದ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಸೇರಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟಿನ ಪ್ರೊ. ವಿ ಅರವಿಂದ ಹೆಬ್ಬಾರ್ ಮಾತನಾಡಿ, “ವಿದ್ವಾನ್ ಮೋಹನ…

Read More

ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳವಾಗಿದೆ. ಕದ್ರಿ ದೇವಳದ ಸಂಪೂರ್ಣ ಸಹಕಾರದೊಂದಿಗೆ ತನ್ನ 23ನೇ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಸರಯೂ ಸಪ್ತಾಹ -2023’ವು ಮೇ 25ರಿಂದ 31ರವರೆಗೆ ಕದ್ರಿ ದೇವಳದ ರಾಜಾಂಗಣದಲ್ಲಿ ಬಹಳ ವೈಭವದಿಂದ ನೆರವೇರಿತು. ಈ ಕಾರ್ಯಕ್ರಮವನ್ನು ದಿನಾಂಕ 25-05-2023ರಂದು ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ನರಸಿಂಹ ತಂತ್ರಿಗಳು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.  ದಿನಾಂಕ 26-05-2023ರಂದು 2ನೇ ದಿನದ ಕಾರ್ಯಕ್ರಮದಲ್ಲಿ ಶ್ರೇಷ್ಠ ಆರ್ಥಿಕ ತಜ್ಞ, ಕಲಾಪೋಷಕ ಎಸ್.ಎಸ್.ನಾಯಕ್ ಮಾತನಾಡುತ್ತಾ “ಭಾರತೀಯ ಲಲಿತಕಲೆಗಳೇ ಶ್ರೇಷ್ಠ. ಅದರಲ್ಲೂ ಇಂದು ಯಕ್ಷಗಾನ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ತೆಂಕು ಮತ್ತು ಬಡಗುಗಳ ಬೇಧವಿಲ್ಲದೇ ಜನ ಅದನ್ನು ಸ್ವೀಕರಿಸಿದ್ದಾರೆ. ಅದರಲ್ಲೂ ಸರಯೂ ತಂಡ ಬೇರೆ ಬೇರೆ ಭಾಷೆಗಳಲ್ಲೂ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಸಂಸ್ಕೃತದಲ್ಲೂ ಯಶಸ್ವಿಯಾಗಿ ಕಾರ್ಯಕ್ರಮ ನೀಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತಲುಪುವಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕಾಗಿ ನಮ್ಮ ಬೆಂಬಲ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಾರಥ್ಯದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2023ರ ಸಮಾರೋಪ ದಿನಾಂಕ 28-05-2023 ಭಾನುವಾರ ಸಂಜೆ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿ, “ಪಟ್ಲರು ಈ ತಮ್ಮ ಕಂಠಸಿರಿಯ ಮೂಲಕ ಮಾತ್ರ ಸಮಾಜವನ್ನು ರಂಜಿಸಿದ್ದಲ್ಲ. ಸಾಮಾಜಿಕ ಸಂಘಟನೆ ಸ್ಥಾಪಿಸಿ ಆ ಮೂಲಕ ಸಮಾಜದಲ್ಲಿನ ನೊಂದವರ ಕಣ್ಣೀರು ಒರೆಸುತ್ತಿದ್ದಾರೆ. ಕೆಲವರಿಗೆ ದಾನ ಮಾಡುವ ಸಾಮರ್ಥ್ಯ ಇರುತ್ತದೆ. ಇನ್ನು ಕೆಲವರಿಗೆ ತಮಗೆ ದಾನ ಮಾಡುವ ಸಾಮರ್ಥ್ಯ ಇಲ್ಲದಿದ್ದರೂ ಹತ್ತು ಮಂದಿಯಿಂದ ದಾನ ಕೂಡಿಸುತ್ತಾರೆ. ಕೆಲವರು ತಾವೂ ದಾನ ಮಾಡುತ್ತಾರೆ. ಇತರರಿಂದಲೂ ಕೊಡಿಸುತ್ತಾರೆ. ಕೆಲವರಿಗೆ ಈ ಎಲ್ಲ ಸಾಮರ್ಥ್ಯವಿರುತ್ತದೆ. ಅಂತಹ ವಿಶೇಷ ಗುಣ ಪಟ್ಲ ಸತೀಶ್ ಶೆಟ್ಟಿ ಅವರಲ್ಲಿದೆ. ಅವರ ಸಮಾಜಮುಖಿ ಕಾರ್ಯ ನಿರಂತರ ಮುಂದುವರಿಯಲಿ,” ಎಂದರು. ಯಕ್ಷಗಾನ ರಂಗದ ಐದು ದಶಕಗಳ ಹಿರಿಯ ಸಾಧಕ ಪ್ರೊ. ಎಂ.ಎಲ್. ಸಾಮಗ-ಪ್ರತಿಭಾ ಸಾಮಗ ದಂಪತಿಗೆ ‘ಪಟ್ಟ ಪ್ರಶಸ್ತಿ -2023’ ನೀಡಿ ಗೌರವಿಸಲಾಯಿತು. ಪ್ರೊ. ಎಂ.ಎಲ್. ಸಾಮಗರವರು…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಯಕ್ಷಧ್ರುವ ಪಟ್ಲ ಸಂಭ್ರಮ-2023 ಕಾರ್ಯಕ್ರಮದ ಅಂಗವಾಗಿ ಅಡ್ಯಾರ್ ಗಾರ್ಡನ್‌ನಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯು ದಿನಾಂಕ 27-05-2023ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ್ ಜೋಷಿ “ಯಕ್ಷಗಾನದಲ್ಲಿ ಎಲ್ಲರೂ ಗೆಲ್ಲುವವರೇ ಇಲ್ಲಿ ಸೋಲುವವರು ಯಾರು ಇಲ್ಲ. ಸ್ಪರ್ಧೆಗಳಲ್ಲಿ ಗೆಲ್ಲುವ ಜತೆಗೆ ನಮ್ಮ ಸಂಸ್ಕೃತಿಯನ್ನು ಪಸರಿಸುವ, ಸಂಸ್ಕಾರವನ್ನು ಉಳಿಸುವ ಕೆಲಸವಾಗುತ್ತದೆ ಎಂಬುದು ಖುಷಿಯ ವಿಚಾರ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನಲ್ಲಿ ನಾನು ಒಂದು ಭಾಗ ಎಂದು ಹೆಮ್ಮೆಯಿದೆ. ಹೆಸರಿಗೆ ತಕ್ಕಂತೆ ಇಲ್ಲಿ ಸಂಭ್ರಮವೇ ನಡೆಯುತ್ತಿದೆ. ಮಹಿಳೆಯರು ಮತ್ತು ಪುರುಷರು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಭಾಗವಹಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, “ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಬರುವಂತೆ ಉತ್ತೇಜನ ನೀಡಬೇಕು, ಪಾರಂಪರಿಕ ಸೊಗಡನ್ನು ಉಳಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ” ಎಂದರು. ಕಲ್ಕೂರ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ, ವಂಡಾರು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಇವುಗಳ ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಿನಾಂಕ 01-06-2023ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ತುಳು ವೆಬಿನಾರ್ಗಳ ಸಂಗ್ರಹ ‘ಗೇನದ ಗೆಜ್ಜೆ – ನೂದನೆ ಪಜ್ಜೆ’, ಶ್ರೀ ಮಂಜುನಾಥೇಶ್ವರ ತುಳು ಪೀಠದ ಮೂವತ್ತನೇ ವರ್ಷದ ನೆನಪಿನ ಸಂಚಿಕೆ ‘ತ್ರಿಂಶತಿ ತಿರುಳು’ ಮತ್ತು ಶುಭಾಶಯ ಜೈನ್ ಬರೆದ ಕೃತಿ ‘ಅಪ್ಪೆ ಅಂಜನೆ’ ಈ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡುತ್ತಾ “ತುಳು ಸುಲಲಿತ ಭಾಷೆ, ಅದಕ್ಕೆ ಮತ ಮತ್ತು ಧರ್ಮದ ಹಂಗಿಲ್ಲ, ಯಾರೂ ಕೂಡ ಮಾತನಾಡಬಹದು. ಬೇರೆ ಭಾಷೆಗಳಿಗಿಂತ ಸುಲಲಿತ ಅನ್ನುವ ಕಾರಣಕ್ಕೆ ತುಳುವನ್ನು ಸುಲಭವಾಗಿ ಕಲಿತು ಮಾತನಾಡುತ್ತಾರೆ. ಇಂತಹ ತುಳು…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಸಹಭಾಗಿತ್ವದಲ್ಲಿ ಅನುಪಲ್ಲವಿಯಲ್ಲಿ ಶಾಸ್ತ್ರೀಯ ಸಂಗೀತ ಸರಣಿಯ ಉದಯರಾಗ-44ನೇ ಕಾರ್ಯಕ್ರಮವು ದಿನಾಂಕ 04-06-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೈಕಂಪಾಡಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಘಟಕ ಮುಖ್ಯಸ್ಥರಾದ ಶ್ರೀ ಕುಮಾರಸ್ವಾಮಿ ಬಿ.ಎಸ್. ಮಾತನಾಡುತ್ತಾ “ಇತ್ತೀಚೆಗೆ ಉದಯೋನ್ಮುಖ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಲಭ್ಯವಾಗುತ್ತಿದೆ” ಎಂದು ನುಡಿದರು. ಬಹುವಚನ ಸಂಸ್ಥೆಯ ಸಂಯೋಜಕ ಡಾ. ಶ್ರೀಶಕುಮಾರ್ ಪುತ್ತೂರು ಮಾತನಾಡಿ, “ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಸಾತ್ವಿಕ ಪ್ರತಿರೋಧವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಗೆ ಮೂಲ ಪ್ರೇರಣೆಯಾಗಿರುತ್ತದೆ” ಎಂದರು. ಶ್ರೀಯುತ ಸುನಾದ ಪಿ.ಎಸ್. ಇವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್ ನಲ್ಲಿ ಸುಪ್ರಿತಾ ಪಿ.ಎಸ್., ಮೃದಂಗದಲ್ಲಿ ಕೃಷ್ಣ ಪವನ್‌ ಕುಮಾರ್ ಸಹಕರಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್ ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ…

Read More

ಉಡುಪಿ : ತುಳು ಕೂಟ ಉಡುಪಿ ಮತ್ತು ಕ್ಷಿಪ್ರ ಪದ್ಮ ಪ್ರಕಾಶನ ದೊಡ್ಡಣಗುಡ್ಡೆ ಆಶ್ರಯದಲ್ಲಿ ದಿನಾಂಕ 03-06-2023ರಂದು ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ‘ಕವಿಗೋಷ್ಟಿ ಮತ್ತು ಪುಸ್ತಕ ಬಿಡುಗಡೆ’ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉಪ್ಪುಂದ ಸ.ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ಯಾದವ ಕರ್ಕೇರಾ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಡಾ. ಪಿ. ಕೃಷ್ಣ ಪ್ರಸಾದ್, ಯಶೋದಾ ಕೇಶವ್, ದಯಾನಂದ ಶೆಟ್ಟಿ ದೆಂದೂರ್ ಕಟ್ಟೆ, ಪ್ರಕಾಶ್ ಸುವರ್ಣ ಕಟಪಾಡಿ, ಅಮಿತಾಂಜಲಿ ಕಿರಣ್, ಉಮೇಶ್ ಆಚಾರ್ಯ, ಅಮೃತಾ ಸಂದೀಪ್, ಮಲ್ಲಿಕಾ ಎಚ್. ಶೆಟ್ಟಿ, ಜ್ಯೋತಿ ಎಸ್. ದೇವಾಡಿಗ, ಪೂರ್ಣಿಮಾ ಶೆಟ್ಟಿ ಮತ್ತು ಸುಷ್ಮಾ ಎ. ಎಸ್. ಕವಿಗೋಷ್ಠಿಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ವಿದ್ಯಾ ಸರಸ್ವತಿ ನಿರೂಪಿಸಿದರು. ವಾಸಂತಿ ಅಂಬಲಪಾಡಿ ಬರೆದ ‘ಪಿಜಿನ್‌ದ ಬಾಸೆ ನಿಗಲೆಗ್ ತೆರಿಯುಂಡಾ’ ತುಳು ಕವನ ಸಂಕಲನ ಬಿಡುಗಡೆಗೊಳಿಸಿದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ.ನಿ.ಬೀ.ವಿಜಯ ಬಲ್ಲಾಳ್ “ತುಳು ಭಾಷೆಗೆ ಮಹತ್ವರವಾದ ಸ್ಥಾನವಿದೆ. ಮುಂದಿನ…

Read More

ಉಡುಪಿ : ಉಡುಪಿಯ ಪ್ರತಿಷ್ಠಿತ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 12-05-2023ರಂದು ‘ರಾಗರತ್ನ ಮಾಲಿಕೆ -12’ ಶೀರ್ಷಿಕೆಯಡಿಯಲ್ಲಿ ಉತ್ತಮ ಸಂಗೀತ ಕಾರ್ಯಕ್ರಮವೊಂದು ಸಂಪನ್ನಗೊಂಡಿತು. ಮೈಸೂರು ಎ. ಚಂದನ್ ಕುಮಾರ್ ಅವರ ಕೊಳಲು ವಾದನ ಕಛೇರಿಯು ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ ಇವರ ಆತಿಥ್ಯ ಹಾಗೂ ಪ್ರಾಯೋಜಕತ್ವದಲ್ಲಿ ಉಡುಪಿಯ ‘ಉಷಾ ನಿಲಯ’ದಲ್ಲಿ ನಡೆಯಿತು. ಆರಂಭದಲ್ಲಿ ಪುಟಾಣಿ ಕು. ಸ್ತುತಿ ಧೀಮಹಿ ಇವಳಿಂದ ಶ್ರುತಿ ಶುದ್ಧವಾಗಿ ಆತ್ಮವಿಶ್ವಾಸದಿಂದ ಮಾಡಿದ ದೇವರ ಸುತ್ತಿಯ ಬಳಿಕ ರಾಗ ಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀ ಕಿರಣ್ ಹೆಬ್ಬಾರ್ ಶ್ರೀಮತಿ ಮತ್ತು ಶ್ರೀ ದಿನೇಶ್ ಅಮ್ಮಣ್ಣಾಯ, ಶ್ರೀ ನಿತೀಶ್ ಅಮ್ಮಣ್ಣಾಯ, ಕಲಾವಿದರಾದ ಮೈಸೂರು ಎ. ಚಂದನ್ ಕುಮಾರ್ ಡಾ. ಉದಯ ಶಂಕರ್ ಎಲ್ಲರೂ ಜತೆಗೂಡಿಕೊಂಡು ದೀಪ ಪ್ರಜ್ವಲನೆ ಮಾಡಿದರು. ವಿದ್ವಾನ್ ಮೈಸೂರು ಎ.ಚಂದನ್ ಕುಮಾರ್ _ಕೊಳಲುವಾದನ, ವಯೊಲಿನ್ _ವಿದ್ವಾನ್ ಮತ್ತೂರು ಆರ್.ಶ್ರೀನಿಧಿ ಬೆಂಗಳೂರು, ಮೃದಂಗ _ಶ್ರೀ ಅನಿರುದ್ಧ್ ಯಸ್.ಭಟ್ ಬೆಂಗಳೂರು, ಖಂಜೀರ _ಶ್ರೀ ಸುನಾದ ಆನೂರು…

Read More

ಮುಂಬಯಿ : 2016ರಿಂದ ಜಾಗತಿಕ ಮಟ್ಟದಲ್ಲಿ ಕನ್ನಡ ಕವನ ಸ್ಪರ್ಧೆ, ಕಥಾ ಸ್ಪರ್ಧೆ ಹಾಗೂ ಏಕಾಂಕ ನಾಟಕ ರಚನಾ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಖ್ಯಾತಿ ಮುಂಬಯಿ ಮೈಸೂರು ಅಸೋಸಿಯೇಷನ್ನಿನದು. 2023ರಲ್ಲಿ ನಡೆಸಿದ ಏಕಾಂಕ ನಾಟಕ ರಚನಾ ಸ್ಪರ್ಧೆಗೆ 39 ನಾಟಕಗಳು ಬಂದಿದ್ದು, ಅದರಲ್ಲಿ ಬಹುಮಾನ ವಿಜೇತರಿಗೆ ಮೇ 28ರಂದು ಮುಂಬಯಿಯ ಮೈಸೂರು ಅಸೋಸಿಯೇಷನ್‌ ಸಭಾಗೃಹದಲ್ಲಿ ‘ಬಹುಮಾನ ವಿತರಣಾ ಸಮಾರಂಭ’ ಯಶಸ್ವಿಯಾಗಿ ಸಂಪನ್ನಗೊಂಡಿತು. ನಾಟಕ ರಚನಾ ಸ್ಪರ್ಧೆಯ ತೀರ್ಪು ಎರಡು ಸುತ್ತಿನಲ್ಲಿ ನಡೆದಿದ್ದು, ಮೊದಲ ಸುತ್ತಿನ ತೀರ್ಪುಗಾರರಾಗಿ ಖ್ಯಾತ ರಂಗ ಕರ್ಮಿ ಶ್ರೀಮತಿ ಅಹಲ್ಯಾ ಬಳ್ಳಾಲ್ ಇವರು ಮೈಸೂರು ಅಸೋಸಿಯೇಷನ್ನಿನ ಕೇಳಿಕೆಯಂತೆ 39 ನಾಟಕಗಳಲ್ಲಿ 10 ನಾಟಕಗಳನ್ನು ಆಯ್ಕೆ ಮಾಡಿದರು. ಎರಡನೆಯ ಸುತ್ತಿನ ತೀರ್ಪುಗಾರರಾಗಿ ಖ್ಯಾತ ಚಲನಚಿತ್ರ ನಟರಾದ ಶ್ರೀ ಶ್ರೀನಿವಾಸ ಪ್ರಭು ಅವರು ಅಸೋಸಿಯೇಷನ್ನಿನ ಕೇಳಿಕೆಯಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ನಾಟಕಗಳನ್ನು ಆಯ್ಕೆ ಮಾಡಿರುತ್ತಾರೆ. ಅದರಂತೆ ಡಾ. ಶ್ರೀ ಬೇಲೂರು ರಘುನಂದನ್ ಬೆಂಗಳೂರು ಇವರ ‘ಶರ್ಮಿಷ್ಠೆ’ ನಾಟಕಕ್ಕೆ…

Read More