Author: roovari

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಯುವ ಸಂಗೀತೋತ್ಸವ 2025’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 25 ಮೇ 2025ರಂದು ಆಯೋಜಿಸಲಾಗಿದೆ. ಬೆಳಗ್ಗೆ ಗಂಟೆ 10-00ರಿಂದ ಕಾಸರಗೋಡಿನ ಕುಮಾರಿ ಅನ್ವಿತಾ ತಲ್ಪನಾಜೆ ಹಾಗೂ 11-45 ಗಂಟೆಗೆ ಸುರತ್ಕಲ್ಲಿನ ಕುಮಾರಿ ಸುಧೀಕ್ಷಾ ಆರ್. ಇವರ ಹಾಡುಗಾರಿಕೆಗೆ ಮಂಗಳೂರಿನ ಕುಮಾರಿ ಧನಶ್ರೀ ಶಬರಾಯ ವಯೋಲಿನ್ ಮತ್ತು ಕಾಸರಗೋಡಿನ ಕೌಶಿಕ್ ರಾಮಕೃಷ್ಣನ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ ಶೃಂಗೇರಿಯ ಸುಧನ್ವ ಆರ್. ಮತ್ತು ಸತ್ಯಪ್ರಮೋದ ಎಚ್.ವಿ. ಇವರ ಹಾಡುಗಾರಿಕೆಗೆ ಮಂಗಳೂರಿನ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಮಂಗಳೂರಿನ ಜಿ.ಎನ್. ಕೃಷ್ಣಪವನ್ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. 4-30 ಗಂಟೆಗೆ ತಿರುವನಂತಪುರಂ ಎಸ್. ಮಹಾದೇವನ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಎಂ. ವಿಶ್ವಜಿತ್ ವಯೋಲಿನ್ ಮತ್ತು ಕೊಚ್ಚಿಯ…

Read More

ಕುಂದಾಪುರ : ಖ್ಯಾತ ವಾಗ್ಮಿಗಳೂ ಸಾಹಿತಿಗಳೂ ಆದ ಕುಂದಾಪುರದ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಇವರ ಮನೆ ‘ನುಡಿ’ಯಲ್ಲಿ ದಿನಾಂಕ 22 ಮೇ 2025ರಂದು ಸರಳವಾಗಿ ನಡೆದ ಸಮಾರಂಭದಲ್ಲಿ ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಕೃತಿಯು ಲೋಕಾರ್ಪಣೆಗೊಂಡಿತು. ಈ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕಿ ವಿಮಲಾ ನಾವಡ “ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ದೇಶ-ದೇಶಗಳ ನಡುವೆ ಮತ್ತು ಭಾಷೆ-ಭಾಷೆಗಳ ನಡುವಿನ ಸಂಪರ್ಕ ಹೆಚ್ಚಾಗಿದೆ. ಆದ್ದರಿಂದ ಅನುವಾದದ ಮಹತ್ವವು ಹೆಚ್ಚಾಗಿದೆ. ಇವತ್ತು ಮಲೆಯಾಳ ಎನೂ ಗೊತ್ತಿಲ್ಲದೆ ಮಲೆಯಾಳದ ಮಹತ್ವದ ಸಾಹಿತ್ಯ ಕೃತಿಗಳು ನಮಗೆ ಸವಿಯಲು ಸಿಗುತ್ತಿವೆ ಎಂದಾದರೆ ಅದಕ್ಕೆ ಕಾರಣ ನಮ್ಮ ಅನುವಾದಕರೇ ಆಗಿದ್ದಾರೆ” ಎಂದು ಹೇಳಿದರು. ಎ.ಎಸ್.ಎನ್. ಹೆಬ್ಬಾರ್ ಶುಭಾಶಂಸನೆ ಗೈದರು. ಕೃತಿಯ ಲೇಖಕಿ ಪಾರ್ವತಿ ಜಿ. ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ-ಮಲೆಯಾಳ ಅನುವಾದಕಿ ಜೆಸ್ಸಿ ಎಲಿಜಬೆತ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

ಬೆಂಗಳೂರು : ಕ್ರಾನಿಕಲ್ಸ್ ಆಫ್ ಇಂಡಿಯಾ ಪ್ರಸ್ತುತ ಪಡಿಸುವ ಗಣೇಶ್ ಮಂದಾರ್ತಿ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನವನ್ನು ದಿನಾಂಕ 31 ಮೇ 2025ರಂದು ಮಧ್ಯಾಹ್ನ 3-30 ಮತ್ತು ಸಂಜೆ 7-30 ಗಂಟೆಗೆ ಬೆಂಗಳೂರು ಜೆ.ಪಿ. ನಗರದ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8867419347, 9845384528 ಮತ್ತು 9740145042 ಸಂಖ್ಯೆಯನ್ನು ಸಂಪರ್ಕಿಸಿರಿ. ನಾಟಕದ ಬಗ್ಗೆ : ಏಕ ಕಾಲಕ್ಕೆ ಇದೊಂದು ಪೌರಾಣಿಕ ಮತ್ತು ಸಾಮಾಜಿಕ ನಾಟಕ. ಇಲ್ಲಿ ಎರಡು ಕಥಾಹಂದರವಿದೆ. ಒಂದು ಶಿವನ ಪುರಾಣ ಕತೆಗಳದ್ದು ; ಇನ್ನೊಂದು – ಶಿವನ ಪಾತ್ರಧಾರಿಯ, ಊರಿನ ಕತೆ. ಶಿವ ನಮ್ಮ ನಾಡಿನ ಪುರಾತನ ಪ್ರತಿಮೆ, ಆತ ತಳಸಮುದಾಯದವರ ದೇವರು. ಶಿವನಿಗೆ ನಟಶೇಖರನೆಂಬ ಹೆಸರಿದೆ ಹಾಗೂ ಕಾಮನನ್ನೇ ಸುಡುವ ಯೋಗಿ – ಶಿವ ದಾಕ್ಷಾಯಿಣಿಯ ಹೆಣ ಹೊತ್ತು ತಿರುಗುವ ಕಡುಮೋಹಿ ಕೂಡ. ಆತ ಎರಡು extreme (ಭವ-ಪರ)ಗಳಲ್ಲಿ ತೀವ್ರವಾಗಿ ಬದುಕುವವ. ಅವನ ಭವದ ಪರಿಪಾಟಲುಗಳ, ಪ್ರೇಮದ, ಕುಟುಂಬದ ಕತೆಗಳನ್ನಷ್ಟೇ ನಾವಿಲ್ಲಿ…

Read More

ಮಂಗಳೂರು : ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ಈ ಮಾಸಾಂತ್ಯದಲ್ಲಿ ನಿವೃತ್ತರಾಗಲಿರುವ ಪಿ.ಎಸ್. ಸೂರ್ಯನಾರಾಯಣ ಭಟ್ಟರಿಗೆ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇದರ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮವು ದಿನಾಂಕ 19 ಮೇ 2025ರಂದು ನಡೆಯಿತು. ಈ ಕಾರ್ಯಕ್ರಮ ಭಾಗವಹಿಸಿದ ಕರ್ನಾಟಕ ಯಕ್ಷ ಭಾರತಿ ಸಂಚಾಲಕರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಕರಾವಳಿಯ ಜನ ಜೀವನದೊಂದಿಗೆ ಹಾಸು ಹೊಕ್ಕಾಗಿರುವ ಮಂಗಳೂರು ಆಕಾಶವಾಣಿಯಲ್ಲಿ ಸುದೀರ್ಘಕಾಲ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಶ್ರೋತೃಗಳೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಸೂರ್ಯನಾರಾಯಣ ಭಟ್ಟರದು ತುಂಬಾ ಕ್ರಿಯಾಶೀಲ ವ್ಯಕ್ತಿತ್ವ. ಯಕ್ಷಗಾನ, ಕೃಷಿ ರಂಗ, ತುಳು – ಕನ್ನಡ ಮತ್ತು ಕೌಟುಂಬಿಕ ಕಾರ್ಯಕ್ರಮಗಳ ಮೂಲಕ ಅವರು ಆಕಾಶವಾಣಿಯನ್ನು ಜನರ ಹತ್ತಿರ ತಂದಿದ್ದಾರೆ. ಪ್ರಸ್ತುತ ಪ್ರಸಾರವಾಗುವ ಕಥಾಮೃತ, ಕೃತಿ ಸಂಪದ, ಯಕ್ಷಸಿರಿ, ಸ್ಮೃತಿ – ದ್ವನಿ, ಕಾವ್ಯ ಯಾನ ಇತ್ಯಾದಿ ಬಾನುಲಿ ಕಾರ್ಯಕ್ರಮಗಳ ಹಿಂದೆ ಸೂರ್ಯ ಭಟ್ಟರ ಪರಿಶ್ರಮ ಇದೆ” ಎಂದು ಹೇಳಿದರು. ಕರ್ನಾಟಕ ಯಕ್ಷ ಭಾರತಿ ತಂಡದ ಎಂ.ಕೆ.…

Read More

ಉಡುಪಿ : ಸಾಂಸ್ಕೃತಿಕ ಸಾಮಾಜಿಕ ಸಾಹಿತ್ಯಿಕ ಸಂಸ್ಥೆ ಅಮೋಘ (ರಿ.) ಉಡುಪಿ ಇದರ ವತಿಯಿಂದ ‘ಸಾಮರಸ್ಯ ಪ್ರಶಸ್ತಿ ಪುರಸ್ಕಾರ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 24 ಮೇ 2025ರಂದು ಸಂಜೆ 4-00 ಗಂಟೆಗೆ ಉಡುಪಿ ಎಂ.ಜಿ.ಎಂ. ಕಾಲೇಜು ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಿದ್ವಾಂಸರಾದ ಡಾ. ಪಾದೆಕಲ್ಲು ವಿಷ್ಣು ಭಟ್ ಇವರು ವಹಿಸಲಿದ್ದು, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠ ಇದರ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಇವರಿಗೆ ಮಾಹೆ, ಮಣಿಪಾಲದ ಮಾನ್ಯ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಾದಿರಾಜ, ಕ.ಸಾ.ಪ. ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ, ಉಡುಪಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ನಿವೃತ್ತ ಮುಖ್ಯಸ್ಥರಾದ ಶ್ರೀ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಹಿರಿಯ ಲೇಖಕಿ ಶ್ರೀಮತಿ ಪಾರ್ವತಿ ಜಿ. ಐತಾಳ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.…

Read More

ಪ್ರಸಿದ್ಧ ಕಾದಂಬರಿಗಾರ್ತಿ ಮತ್ತು ಸಂಗೀತ ತಜ್ಞೆಯಾದ ದೇವಕಿ ಮೂರ್ತಿಯವರು 1931 ಮೇ 22ರಂದು ಮೈಸೂರಿನಲ್ಲಿ ಜನಿಸಿದರು. ಇವರು ಕಮಲಮ್ಮ ಮತ್ತು ಆನಂದರಾಯರ ಸುಪುತ್ರಿ. ಇವರ ಆರಂಭದ ಶಿಕ್ಷಣ ಹಾಗೂ ಪ್ರೌಢ ವಿದ್ಯಾಭ್ಯಾಸ ಒಂದೇ ಕಡೆಯಲ್ಲಿ ಆಗಲಿಲ್ಲ. ಕಾರಣ ತಂದೆ ಆನಂದರಾಯರು ಮೈಸೂರು ರಾಜ್ಯದ ರೆವಿನ್ಯೂ ಇಲಾಖೆಯಲ್ಲಿ ಅಮಲ್ದಾರರಾಗಿದ್ದು ವರ್ಗವಾಗಿ ಬೇರೆ ಬೇರೆ ಕಡೆಗೆ ಹೋಗುತ್ತಿದ್ದರು. ಚಿಕ್ಕಮಗಳೂರಿನ ಇಂಟರ್ಮೀಡಿಯಟ್ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಯಾಗಿರುವಾಗ ಗುರುಗಳಾದ ಪ್ರೊ. ವಿ. ಸೀತಾರಾಮಯ್ಯನವರ ವಿಶಿಷ್ಟವಾದ ಬೋಧನಾ ಕ್ರಮ, ಗುರುಗಳು ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕಗಳ ಮತ್ತು ಪ್ರಸಿದ್ಧ ಲೇಖಕರ ಶ್ರೇಷ್ಠ ಕೃತಿಗಳನ್ನು ಓದಲು ಪ್ರೋತ್ಸಾಹಿಸುತ್ತಿದ್ದುದ್ದು ಇವರ ಮೇಲೆ ವಿಶೇಷ ಪ್ರಭಾವ ಬೀರಿತ್ತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪಡೆಯುವುದರೊಂದಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಕಾರಣ ವಯಲಿನ್ ಶಿಕ್ಷಣವನ್ನೂ ಪಡೆದರು. ಬಾಲ್ಯದಿಂದಲೇ ಎಲ್ಲಾ ಮಕ್ಕಳಿಗೂ ಇರುವಂತೆ ಕಥೆ ಕೇಳುವ ವಿಪರೀತವಾದ ಹುಚ್ಚು ಇವರಿಗೂ ಇತ್ತು. ಅವರ ಮನೆಯ ಪಕ್ಕದಲ್ಲಿದ್ದ ರಾಮಮಂದಿರದಲ್ಲಿ ಗೆಜ್ಜೆಯನಾದ ಮತ್ತು ಚಿಟಿಕೆಯ ತಾಳದೊಂದಿಗೆ ದಾಸರು…

Read More

ಕಾಸರಗೋಡು : “ಭಜನೆಯಿಂದ ಮನಶಾಂತಿ ಮತ್ತು ಏಕಾಗ್ರತೆಯನ್ನು ಗಳಿಸಬಹುದು. ಕೋಟಿ ಹಣವಿದ್ದರೂ ಒಂದು ಕ್ಷಣದ ಆಯುಷ್ಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಆಯುಷ್ಯವನ್ನು ನಿರರ್ಥಕವಾಗಿ ಕಳೆಯುವುದರಿಂದ ಏನೇನೂ ಲಾಭವಿಲ್ಲ. ಮಾತೆಯವರು ಮಾತ್ರವೇ ಮುಂದಿನ ಜನಾಂಗಕ್ಕೆ ಸಂಸ್ಕಾರ ಕಲಿಸುವ ಶಕ್ತಿ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಶ್ರೀ ಪ್ರಭಾಕರ್ ಜೀ ಅವರು ಹೇಳಿದರು. ಅವರು ಕಾಸರಗೋಡಿನ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯವರ ನೇತ್ರತ್ವದಲ್ಲಿ ಕಾಸರಗೋಡಿನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ‘ಸಂಕೀರ್ತನಾ’ ಸಭಾಂಗಣದಲ್ಲಿ ದಿನಾಂಕ 17 ಮೇ 2025ರಂದು ಜರಗಿದ ‘ಭಜನಾ ಸಂಪದ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಖ್ಯಾತ ವೈದ್ಯರೂ, ಧಾರ್ಮಿಕ ಮುಂದಾಳುಗಳು ಆಗಿದ್ದ ಡಾ. ಅನಂತ ಕಾಮತ್ ರವರು ಮಾತನಾಡಿ “ಅಂತರಂಗ ಶುದ್ಧಿ, ಆತ್ಮ ಶುದ್ಧಿ ಮಾಡಲು, ಜತೆಗೆ ದೇವರ ಪ್ರೀತಿಗೆ ಪಾತ್ರಾರಾಗಲು ಭಜನೆಯೇ ಸರಿಯಾದ ಆಯುಧ” ಎಂದರು. ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಪುರೋಹಿತರಾದ ವೇದಮೂರ್ತಿ ವೇದವ್ಯಾಸರವರು “ರಂಗಚಿನ್ನಾರಿ…

Read More

ಬೆಂಗಳೂರಿನ ಚೌಡಯ್ಯ ವಿಶಾಲಾಂಗಣದ ದಿವ್ಯವೇದಿಕೆಯ ಮೇಲೆ ಕೋಲ್ಮಿಂಚಿನ ಪುಟ್ಟ ನಾಟ್ಯಪುತ್ಥಳಿಯೊಂದು ಚಿಗರೆಯಂತೆ ಕುಪ್ಪಳಿಸುತ್ತ, ಕಣ್ಮನ ತಣಿಸಿದ ನೃತ್ಯನೈವೇದ್ಯ ದೈವೀಕವಾಗಿತ್ತು. ವಯಸ್ಸಿಗೇ ಮೀರಿದ ಪ್ರತಿಭೆ ಸಂವೃತ ಕಿಶೋರ್, ತುಂಬಿ ತುಳುಕಿದ ಚೈತನ್ಯದಿಂದ ಪ್ರಸ್ತುತಪಡಿಸಿದ ವರ್ಚಸ್ವೀ ನೃತ್ಯ, ಕಣ್ಣೆವೆ ಮಿಟುಕಿಸದೆ ನೋಡುವಂತೆ ಮಾಡಿದ್ದು, ಆ ಬಾಲ ಕಲಾವಿದೆಯ ಅಸ್ಮಿತೆ. ಅಕ್ಷಯ ತೃತೀಯದ ಪ್ರಶಸ್ತ ಸಂದರ್ಭದಲ್ಲಿ ಸಂವೃತ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ತುಂಬಿದ ಸಭಾಂಗಣದ ಕಲಾರಸಿಕರೆದುರು ನೆರವೇರಿಸಿಕೊಂಡಳು. ಇದು ಕಲಾವಿದೆಯ ಮೊದಲ ಹೆಜ್ಜೆಯ ರಂಗಪ್ರವೇಶ ಎನಿಸಲಿಲ್ಲ. ಲೀಲಾಜಾಲವಾಗಿ ಸಂವೃತ ನಿರಾಯಾಸವಾಗಿ ಸುಮಾರು ಎರಡೂವರೆ ಗಂಟೆಗಳ ಕಾಲ ಅದಮ್ಯ ಉತ್ಸಾಹದಿಂದ ಚೇತೋಹಾರಿಯಾಗಿ ನರ್ತಿಸಿದ್ದು ನಿಜಕ್ಕೂ ಅಪೂರ್ವ ನೋಟವಾಗಿತ್ತು. ಪ್ರಸ್ತುತಿಯ ಪ್ರಾರಂಭದಿಂದ ಕಡೆಯವರೆಗೂ ಒಂದೇ ಚೈತನ್ಯ- ನಗುಮೊಗದ ಭಾವಪೂರ. ಅರಳಿದ ಬೊಗಸೆಗಂಗಳ ಕಾಂತಿ, ನೀಳ ಕಣ್ಣೆವೆಗಳು ಪ್ರತಿಚಲನೆಗೂ ಪ್ರತಿಸ್ಪಂದಿಸುತ್ತಿದ್ದುದು ಅವಳ ನಾಟ್ಯ ವೈಖರಿಗೊಂದು ವಿಶಿಷ್ಟ ಮೆರುಗು ನೀಡಿತ್ತು. ಸಾಂಪ್ರದಾಯಿಕ ‘ಮಾರ್ಗಂ’ ಕೃತಿಗಳಾದರೂ ಕಲಾವಿದೆಯ ನವ ನವೋನ್ವೇಷಣ ಮಿಂಚಿನಸಂಚಾರದ ನೃತ್ತಗಳು, ನುರಿತ ಅಭಿನಯ ಚಮತ್ಕಾರ ನೋಡುಗರಿಗೆ ಮೋಡಿ ಮಾಡಿತು. ಗುರು…

Read More

ಸಿದ್ಧಕಟ್ಟೆ : ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರಸಿದ್ಧ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಇವರಿಗೆ ಗೃಹ ಸಮ್ಮಾನದೊಂದಿಗೆ ಅಳಿಕೆ ರಾಮಯ್ಯ ರೈ ಯಕ್ಷ ಸಹಾಯನಿಧಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 21 ಮೇ 2025ರಂದು ನಡೆಯಿತು. ಟ್ರಸ್ಟಿನ ಮುಖ್ಯ ಸಲಹೆಗಾರರಾದ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ “ತೆಂಕು ತಿಟ್ಟಿನ ಬಣ್ಣದ ವೇಷಗಾರಿಕೆ ಯಕ್ಷಗಾನ ರಂಗದ ವಿಸ್ಮಯಗಳಲ್ಲೊಂದು. ಅನುಭವೀ ಹಿರಿಯ ಕಲಾವಿದರು ಈ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅದೇ ಪರಂಪರೆಯ ಜಾಡಿನಲ್ಲಿ ಹೊಸ ಆವಿಷ್ಕಾರದೊಂದಿಗೆ ಜನಮನ ಗೆದ್ದ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್. ಅವರು ಓರ್ವ ಪ್ರಯೋಗಶೀಲ ಬಣ್ಣದ ವೇಷಧಾರಿ” ಎಂದು ಹೇಳಿದರು. ಇನ್ನೋರ್ವ ಸಲಹೆಗಾರ ಹಾಗೂ ಸದಾಶಿವ ಶೆಟ್ಟಿಗಾರ್ ಅವರ ಒಡನಾಡಿ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ “ಬಣ್ಣದ…

Read More

ಮಂಗಳೂರು : ನಾಡಿನ ಬೇರೆ ಬೇರೆ ಲೇಖಕ-ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ ಜಾನಪದ ಕತೆಗಳ ಸಂಕಲನ ‘ಚನ್ನನ’ದ ಇಂಗ್ಲೀಷ್ ಅನುವಾದಿತ ‘ದಿ ಫಕೀರ್ಸ್ ಡಾಟರ್ ಆ್ಯಂಡ್ ಅದಾರ್ ಬ್ಯಾರಿ ಫೋಕ್ ಟೆಲ್ಸ್’ ಕೃತಿಯನ್ನು ನಗರದ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಅಡ್ಮಿನ್ ಬ್ಲಾಕ್‌ನ ಸಭಾಂಗಣದಲ್ಲಿ ದಿನಾಂಕ 21 ಮೇ 2025ರಂದು ಬಿಡುಗಡೆಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿದ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಉಪಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮಾತನಾಡಿ “ಭಾಷೆ ಮತ್ತು ಸಾಂಸ್ಕ್ರತಿಕ ಅಧ್ಯಯನ ನಿಕಾಯವು ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಸಂಸ್ಕೃತಿ ನೆಲೆನಿಲ್ಲಲು ಇಂತಹ ವೌಲಿಕ ಕೃತಿಗಳ ಪ್ರಕಟನೆಯ ಅಗತ್ಯವೂ ಇದೆ. ಇವುಗಳನ್ನು ಓದುವ ಮೂಲಕ ಸಂಸ್ಕೃತಿ – ಬದುಕಿನ ಬಗ್ಗೆ ಅರಿಯಲು ಸಾಧ್ಯವಿದೆ” ಎಂದರು. ಕೃತಿಯ ಸಂಪಾದಕ, ಪತ್ರಕರ್ತ ಹಂಝ ಮಲಾರ್ ಮಾತನಾಡಿ “ಬ್ಯಾರಿ ಕ್ಷೇತ್ರಕ್ಕೆ ಸಂಬಂಧಿಸಿ ಈವರೆಗೆ ಬ್ಯಾರಿ, ಕನ್ನಡ, ಇಂಗ್ಲೀಷ್‌ನಲ್ಲಿ 125 ಕೃತಿಗಳು ಪ್ರಕಟಗೊಂಡಿವೆ. ಆದರೆ ಬ್ಯಾರಿ ಭಾಷೆಯಲ್ಲಿ…

Read More