Author: roovari

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬ್ರಹ್ಮಾವರ ತಾಲೂಕು ಘಟಕ ಇದರ ವತಿಯಿಂದ ಸಾಹಿತ್ಯ ಸಂಚಾರ -48ನೇ ಸರಣಿಯ ‘ಸಾಹಿತ್ಯ ಪ್ರೇರಣೆ’ ಕಾರ್ಯಕ್ರಮವನ್ನು ದಿನಾಂಕ 06 ಆಗಸ್ಟ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಬ್ರಹ್ಮಾವರದ ಜಿ.ಎಮ್. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕ.ಸಾ.ಪ. ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ ಗುಂಡ್ಮಿ, ಕ.ಸಾ.ಪ. ಕೋಟ ಹೋಬಳಿಯ ಅಧ್ಯಕ್ಷರಾದ ಅಚ್ಚುತ ಪೂಜಾರಿ ಕಾರ್ಕಡ, ಕಲಾವಿದೆ ಸುಪ್ರೀತಾ ಪುರಾಣಿಕ್ ಮತ್ತು ಸಂಗೀತ ಶಿಕ್ಷಕಿ ಶ್ರೀಮತಿ ಭಾಗ್ಯೇಶ್ವರಿ ಮಯ್ಯ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

Read More

ಮಂಗಳೂರು : ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕವಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತನ್ನ ಫಲಪ್ರದ ಆಸ್ತಿತ್ವದ 25ನೇ ವರ್ಷದ ಬೆಳ್ಳಿ ಹಬ್ಬ ‘ರಜತ ರಂಗು’ ಸಂಭ್ರಮದಲ್ಲಿರುವ ಮಂಗಳೂರಿನ ‘ಕಲ್ಲಚ್ಚು ಪ್ರಕಾಶನ’ ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠಿತ ‘ಕಲ್ಲಚ್ಚು ಪ್ರಶಸ್ತಿ’ಯ 16ನೇ ಆವೃತ್ತಿಗೆ ಕರ್ನಾಟಕದ ಪಂಚ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ದಿನಾಂಕ 31 ಆಗಸ್ಟ್ 2025ರ ಭಾನುವಾರ ಸಂಜೆ 4-00 ಗಂಟೆಗೆ ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ವಿವಿಧ ಅತಿಥಿ ಗಣ್ಯರ ಉಪಸ್ಥಿತಿಯ ಅದ್ದೂರಿ ಸಮಾರಂಭದಲ್ಲಿ ಇದನ್ನು ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಮುಖ್ಯಸ್ಥ ಸಾಹಿತಿ, ಮಹೇಶ ಆರ್. ನಾಯಕ್ ತಿಳಿಸಿದ್ದಾರೆ. ಈ ಬಾರಿಯ ಪ್ರಶಸ್ತಿ ಪುರಸ್ಕೃತರಾಗಿ ಜಬೀವುಲ್ಲಾ ಎಂ. ಅಸದ್ : ಕವಿ – ಕಲಾವಿದ ಮೊಳಕಾಲ್ಮೂರು, ‘ಗೋಕಾವಿ ಗೆಳೆಯರ ಬಳಗ’ ಬೆಳಗಾವಿ (ಪ್ರಾ. ಜಯಾನಂದ ಮಾದರ – ಸಂಸ್ಥಾಪಕ ಅಧ್ಯಕ್ಷ), ರೆಮೊನಾ ಎವೆಟ್ ಪೆರೇರಾ ಭರತನಾಟ್ಯ ಕಲಾವಿದೆ ಮಂಗಳೂರು, ಡಾ. ಎಸ್.ಎಮ್. ಶಿವಪ್ರಕಾಶ್ – ಬಹುಮುಖ…

Read More

ಎಡನೀರು ಮಠ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಶ್ರೀ ಸಂಪುಟ ನರಸಿಂಹ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಮಠ, ಶ್ರೀ ಶ್ರೀ ವಿದ್ಯಾಪ್ರಸನ್ನ ಶ್ರೀ ಪಾದಂಗಳವರ 29ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವದ ಪ್ರಯುಕ್ತ ತಾಳಮದ್ದಳೆ ಕಾರ್ಯಕ್ರಮ ‘ವೀರಮಣಿ ಕಾಳಗ’ ಎಂಬ ಆಖ್ಯಾನದೊಂದಿಗೆ ದಿನಾಂಕ 01 ಆಗಸ್ಟ್ 2025ರಂದು ಶ್ರೀ ಸುಬ್ರಹ್ಮಣ್ಯ ಮಠದ ಅನಿರುದ್ಧ ತೀರ್ಥ ವೇದಿಕೆಯಲ್ಲಿ ಭಾಸ್ಕರ ಬಾರ್ಯ ನಿರ್ದೇಶನದಲ್ಲಿ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಪ್ರೇಮಲತಾ ರಾವ್ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಈಶ್ವರ), ಶುಭಾ ಅಡಿಗ (ಹನೂಮಂತ), ಶುಭಾ ಗಣೇಶ್ (ಶತ್ರುಘ್ನ), ಹರಿಣಾಕ್ಷಿ ಜೆ. ಶೆಟ್ಟಿ (ವೀರಮಣಿ) ಸಹಕರಿಸಿದರು. ಭವ್ಯ ಶ್ರೀ ಕುಲ್ಕುಂದ ಸಂಯೋಜಿಸಿ, ಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು. ಯಜ್ಞೇಶ್ ಆಚಾರ್ಯ ಸಹಕರಿಸಿದರು. ಶ್ರೀ ಶ್ರೀ ವಿದ್ಯಾಪ್ರಸನ್ನ ಶ್ರೀ…

Read More

ದೇವರಂತೆ ಶಕ್ತವೂ, ಅಂತರ್ಯಾಮಿಯೂ ಆಗಿರುವ ಪ್ರೀತಿಯು ಅಳಿದಷ್ಟು ಬೆಳೆಯುವ ಅಮೂಲ್ಯ ನಿಧಿಯಾಗಿದೆ. ಯಾವ ಭೇದಭಾವವಿಲ್ಲದೆ ಕೊಟ್ಟು ಪಡೆಯುವ, ಕೊಟ್ಟಷ್ಟೂ ಮುಗಿಯದ ಸಂಪತ್ತು ಪ್ರೀತಿ. ಆದ್ದರಿಂದ ‘ಕೊಡುವುದೇನು? ಕೊಂಬುದೇನು?’ ಎಂಬ ವ್ಯಕ್ತಿ ಚಿತ್ರ- ಪ್ರಬಂಧಗಳ ಶೀರ್ಷಿಕೆಯು ಪ್ರೀತಿಯನ್ನು ಧ್ವನಿಸುತ್ತದೆ. ಪ್ರೀತಿಯ ಮೂರ್ತರೂಪವೆನಿಸಿರುವ ಇಲ್ಲಿನ ವ್ಯಕ್ತಿಗಳು ಚರಿತ್ರೆಯಲ್ಲಿ ಸ್ಥಾನವನ್ನು ಪಡೆಯದ ಜನಸಾಮಾನ್ಯರಾದರೂ ಗುಣದಲ್ಲಿ ಹಿರಿಯರು ಮತ್ತು ಎದೆ ತುಂಬಾ ಪ್ರೀತಿಯನ್ನು ಮೊಗೆದು ಕೊಟ್ಟವರು. ಹೃದಯ ಶ್ರೀಮಂತಿಕೆ ಇರುವ ವಿವೇಕಿಯು ಇನ್ನೊಬ್ಬನನ್ನು ಸಣ್ಣವ, ಅಲ್ಪನೆಂದು ತಿಳಿಯದೆ ಅವನಲ್ಲಿದ್ದ ಒಳ್ಳೆಯ ಗುಣಗಳಿಗೆ ಗುರುತಿಸುತ್ತಾನೆ. ಹೊಟ್ಟೆಕಿಚ್ಚು, ಸೊಕ್ಕು, ತಿರಸ್ಕಾರಗಳನ್ನು ಬೆಳೆಸಿಕೊಳ್ಳುವದಿಲ್ಲ. ಅವರ ಕಣ್ಣಿಗೆ ಚಾರಿತ್ರಿಕ ವ್ಯಕ್ತಿಗಳು ಮಾತ್ರವಲ್ಲ, ಜನಸಾಮಾನ್ಯರೂ ದೊಡ್ಡವರೇ ಆಗಿರುತ್ತಾರೆ. ಇಂಥ ಜನಸಾಮಾನ್ಯರು ‘ಕೊಡುವುದೇನು? ಕೊಂಬುದೇನು’ ಎಂಬ ಕೃತಿಯ ಕೇಂದ್ರವಾಗಿದ್ದಾರೆ. ಬದುಕು ಎಂಬ ಹೋರಾಟದಲ್ಲಿ ಪ್ರತಿಯೊಬ್ಬನೂ ಅಡೆತಡೆಯನ್ನು ಲೆಕ್ಕಿಸದೆ ಮುಂದುವರಿಯಬೇಕು. ಇಲ್ಲಿರುವವರು ಬದುಕಿನ ಹೋರಾಟದಲ್ಲಿ ಬಿದ್ದು ಗೆದ್ದವರು. ಅನುಭವದಿಂದ, ಪ್ರೀತಿಯಿಂದ ಇತರರನ್ನು ಎಬ್ಬಿಸಿ ನಿಲ್ಲಿಸಿದವರು. ಹೃದಯವೇ ಅವರ ಗುರು. ಅದರೊಳಗಿನ ಪ್ರೀತಿ ಮಾನವೀಯತೆಗಳು ಬತ್ತದ ಸೆಲೆ. ಎದೆಯಾಳದ…

Read More

ಉಪ್ಪಿನಂಗಡಿ : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ವಸುಧಾ ಪ್ರತಿಷ್ಠಾನ ಉಪ್ಪಿನಂಗಡಿ ಇದರ ವತಿಯಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ಹಮ್ಮಿಕೊಂಡ ‘ಕನ್ನಡ ಕಲರವ -2’ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷರಾದ ಕರುಣಾಕರ ಸುವರ್ಣ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್‌ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಮಾರ್ಗದರ್ಶಕರಾದ ಡಾ. ತಾಳ್ತಜೆ ವಸಂತ ಕುಮಾರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ ಪಾತಾಳ ವೆಂಕಟರಮಣ ಭಟ್, ವೈದ್ಯ ಕೆ. ಶೀನಪ್ಪ ಶೆಟ್ಟಿ ಮತ್ತು ಡಾ. ಮುದ್ರಜೆ ರಾಮಚಂದ್ರ ಭಟ್ ಇವರಿಗೆ ನುಡಿ ನಮನ ಸಲ್ಲಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ನಡೆಸಲಾದ ಸ್ಪರ್ಧೆಗಳ…

Read More

ಹಂಪಿ : ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಸಹಯೋಗದಲ್ಲಿ ‘ದಕ್ಷಿಣ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ವಿಮರ್ಶೆ’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಯನ್ನು ದಿನಾಂಕ 05 ಆಗಸ್ಟ್ 2025, ಮಂಗಳವಾರ ಬೆಳಗ್ಗೆ 10-00 ಗಂಟೆಗೆ ಹಂಪಿ ವಿದ್ಯಾರಣ್ಯ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಿ.ವಿ. ಪರಮಶಿವಮೂರ್ತಿ ಇವರು ಉದ್ಘಾಟನೆ ಮಾಡಲಿದ್ದು, ಪ್ರಸಿದ್ಧ ಲೇಖಕರು ವಿಮರ್ಶಕರಾದ ಎಸ್. ಸಿರಾಜ್ ಅಹಮದ್ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ಬೆಳಗ್ಗೆ 11-00 ಗಂಟೆಗೆ ಮೊದಲನೆಯ ಗೋಷ್ಠಿಯಲ್ಲಿ ‘ತಮಿಳು ವಿಮರ್ಶೆ – ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ಆರ್. ಮೊರಿಸ್ ಜಾಯ್ ಮತ್ತು ಎನ್. ಗೋವಿಂದರಾಜನ್, ಮಧ್ಯಾಹ್ನ 12-00 ಗಂಟೆಗೆ ಎರಡನೆಯ ಗೋಷ್ಠಿಯಲ್ಲಿ ‘ತೆಲುಗು ವಿಮರ್ಶೆ – ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ಸಿ. ಮೃಣಾಳಿನಿ ಮತ್ತು ಕಾಸುಲ ಪ್ರತಾಪ ರೆಡ್ಡಿ, ಮಧ್ಯಾಹ್ನ 02-00 ಗಂಟೆಗೆ ಮೂರನೆಯ ಗೋಷ್ಠಿಯಲ್ಲಿ…

Read More

ಪುತ್ತೂರು : ಪುತ್ತೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಉಪವಿಭಾಗ, ಡಾ. ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು ಇದರ ವತಿಯಿಂದ, ನಡೆದಾಡುವ ವಿಶ್ವಕೋಶ’ ಎಂದೇ ಪ್ರಖ್ಯಾತರಾದ ಕಡಲತಡಿಯ ಭಾರ್ಗವ’ ಡಾ. ಕೋಟ ಶಿವರಾಮ ಕಾರಂತರ 124ನೇ ಜನ್ಮದಿನಾಚರಣೆ ಮತ್ತು 2024 ಹಾಗೂ 2025ನೇ ಸಾಲಿನ ಡಾ. ಶಿವರಾಮ ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ 10 ಅಕ್ಟೋಬರ್ 2025 ರಂದು ಪೂರ್ವಾಹ್ನ 9:30ರಿಂದ ರಾತ್ರಿ 8:30ರ ತನಕ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುತ್ತೂರು ಬಾಲವನ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. 2024ನೇ ಸಾಲಿನ ಡಾ. ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಶ್ರಾಂತ ಉಪಕುಲಪತಿ, ಹಿರಿಯ ಸಾಹಿತಿಯೂ ಆಗಿರುವ ಡಾ. ಬಿ.ಎ.ವಿವೇಕ ರೈರವರಿಗೆ ಹಾಗೂ 2025ನೇ ಸಾಲಿನ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಿರಿಯ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಸಾಹಿತಿಯೂ ಆಗಿರುವ ಡಾ. ಎನ್.ಸುಕುಮಾರ್…

Read More

ಬೆಳಗಾವಿ : ಶಿವಾ ಆಫ್ ಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಹಾಗೂ ಗುರುದೇವ ಪ್ರಕಾಶನ ವತಿಯಿಂದ ದಿನಾಂಕ 03 ಆಗಸ್ಟ್ 2025ರಂದು ಮಂಗಳೂರಿನ ಕಣಚ್ಚೂರು ನಾಟೆಕಲ್ ನ ವೈದ್ಯಕೀಯ ಮುಖ್ಯ ನಿರ್ದೇಶಕ, ಸಲಹೆಗಾರ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರಿಗೆ ‘ನಮ್ಮ ವೈದ್ಯೋ ನಾರಾಯಣ’ ಎಂಬ ಪ್ರಶಸ್ತಿಯನ್ನು ಬೆಳಗಾವಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡುವುದಾಗಿ ನಮ್ಮ‌ ವೈದ್ಯೋ ನಾರಾಯಣ ಸಂಪಾದಕರಾದ ಶ್ರೀ ಸುನಿಲ್ ಪರೀಟ ಇವರು ತಿಳಿಸಿದ್ದಾರೆ. ಸದ್ರಿ ಪ್ರಕಾಶನದ ವೈದ್ಯರ ಕುರಿತಾದ ಕವನ ಸಂಕಲನ ಲೋಕಾರ್ಪಣೆಯ ನೆನಪಿನಲ್ಲಿ ಕವನ ಬರೆದ ಇವರನ್ನು ಆ ವೇಳೆ ಶಾಲು ಹಾರ ಸ್ಮರಣಿಕೆ ಸಹಿತ ಸನ್ಮಾನಿಸಲಾಗುವುದು. ಇವರು ಬರವಣಿಗೆಯಲ್ಲಿ ಐವತ್ತು ವರ್ಷಗಳ ಅನುಭವಿಯಾಗಿದ್ದು ಮುಕ್ತಕ, ಗಜಲ್, ಭಾವಗೀತೆ ಸಹಿತ 14 ಸಂಕಲನಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಗೂ ಬದಲಾಗದವರು ಎಂಬ ಚಲನಚಿತ್ರದಲ್ಲಿ ನಟರಾಗಿಯೂ ಅಭಿನಯಿಸಿದ್ದು, ಹಲವಾರು ಟಿ.ವಿ., ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುತ್ತಾರೆ.

Read More

ವಿಜಯಪುರ : ಕುಮಾರವ್ಯಾಸ ಭಾರತ ವೇದಿಕೆ ಇದರ ವತಿಯಿಂದ ಶ್ರಾವಣ ಮಾಸದ ದಂಪತ್ ಪೂಜೆ ಕಾರ್ಯಕ್ರಮದಲ್ಲಿ ಗಮಕ ವಾಚನ ವ್ಯಾಖ್ಯಾನವು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 11-00 ಗಂಟೆಗೆ ವಿಜಯಪುರದ ರಾಘವೇಂದ್ರ ಕಾಲನಿಯಲ್ಲಿರುವ ಕುಮಾರವ್ಯಾಸ ಭಾರತ ಭವನದಲ್ಲಿ ನಡೆಯಲಿದೆ. ಕುಮಾರ ವಾಲ್ಮೀಕಿ ಕವಿಗಳ ತೊರವೆ ರಾಮಾಯಣದ ‘ಸೀತಾರಾಮ ಕಲ್ಯಾಣ ಪ್ರಸಂಗ’ದ ವಾಚನ ಶ್ರೀಮತಿ ಶಾಂತಾ ಕೌತಾಳ್ ಮತ್ತು ವ್ಯಾಖ್ಯಾನ ಕಲ್ಯಾಣರಾವ್ ದೇಶಪಾಂಡೆ ಇವರುಗಳು ನಡೆಸಿಕೊಡಲಿದ್ದಾರೆ.

Read More

ಕೊಪ್ಪಳ : ಮೇಘನಾ ಪ್ರಕಾಶನ ಕೊಪ್ಪಳ ಹಾಗೂ ಕೊಪಣನಾಡು ಸಂಶೋಧನಾ ಸಂಸ್ಥೆ ಗಂಗಾವತಿ ಇವರ ಸಹಯೋಗದಲ್ಲಿ ಡಾ. ಶರಣಬಸಪ್ಪ ಕೋಲ್ಕಾರ ಇವರ ‘ಕೃಷ್ಣದೇವರಾಯನ ಸಮಾಧಿ ಹಾಗೂ ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ’ ಕಿರು ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ 11-00 ಗಂಟೆಗೆ ಕೊಪ್ಪಳ ಕುಷ್ಟಗಿ ರಸ್ತೆಯಲ್ಲಿರುವ ‘ಸಪ್ತಗಿರಿ ಸಹ್ಯಾದ್ರಿ’ಯಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ್ ಇವರು ವಹಿಸಲಿದ್ದು, ಸಾಹಿತಿ ಡಾ. ಬಸವರಾಜ ಪೂಜಾರ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಉಪನ್ಯಾಸಕರಾದ ಪ್ರೊ. ಶರಣಬಸಪ್ಪ ಬಿಳಿಯಲಿ ಇವರು ಕೃತಿ ಕುರಿತು ಮಾತನಾಡಲಿದ್ದು, ಉಪನ್ಯಾಸಕರಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಮತ್ತು ಡಾ. ಶರಣಬಸಪ್ಪ ಕೋಲ್ಕಾರ ಇವರುಗಳು ಭಾಗವಹಿಸಲಿದ್ದಾರೆ.

Read More