Author: roovari

ಬೆಂಗಳೂರು : ಕಾಜಾಣ ಅರ್ಪಿಸುವ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ಡಾ. ಬೇಲೂರು ರಘುನಂದನ್ ಇವರ ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಸಾಲು ಮರಗಳ ತಾಯಿ ತಿಮ್ಮಕ್ಕ’ ನಾಟಕ ಪ್ರದರ್ಶನವು ದಿನಾಂಕ 08-07-2024ರಂದು ಸಂಜೆ 6-00 ಗಂಟಗೆ ಬೆಂಗಳೂರಿನ ಮಲ್ಲತ್ತಹಳ್ಳಿ, ನಾಗರಭಾವಿ, 2ನೇ ಸ್ಟೇಜ್, ಎನ್.ಜಿ.ಇ.ಎಫ್. ಲೇಔಟ್ ಇಲ್ಲಿರುವ ಕಲಾಗ್ರಾಮದಲ್ಲಿ ನಡೆಯಲಿದೆ. ವೃಕ್ಷಮಾತೆ, ನಾಡೋಜ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಇವರ ಗೌರವ ಉಪಸ್ಥಿತಿಯಲ್ಲಿ ಸಮಾಜ ಸೇವಕರಾದ ಶ್ರೀಮತಿ ಕನ್ನಿಕಾಪರಮೇಶ್ವರಿ ಮತ್ತು ಡಾ. ಜಿ. ಪರಮೇಶ್ವರ್ ಇವರು ನಾಟಕಕ್ಕೆ ಚಾಲನೆ ನೀಡಲಿದ್ದಾರೆ. ಭಾರತೀಯ ರಾಷ್ಟ್ರೀಯ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಎಂ. ರಾಮಚಂದ್ರ (ಹೂಡಿ ತಿಮ್ಮಿ), ವೀರಲೋಕ ಪ್ರಕಾಶನದ ಶ್ರೀ ವೀರಕಪುತ್ರ ಶ್ರೀನಿವಾಸ್, ಸಾಲುಮರದ ತಿಮ್ಮಕ್ಕನವರ್ ದತ್ತು ಪುತ್ರ ಶ್ರೀ ಬಳ್ಳೂರು ಉಮೇಶ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಜೆ.ಪಿ.ಓ. ಚಂದ್ರು ಮತ್ತು ಖ್ಯಾತ ಜಾನಪದ ಗಾಯಕಿ ಶ್ರೀಮತಿ ಸವಿತಕ್ಕ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

Read More

ಮಂಗಳೂರು : ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಜುಲೈ ಕೊನೆಯ ವಾರ ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಉಳ್ಳಾಲ ತಾಲೂಕು ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ‘ಮಕ್ಕಳ ಅಬ್ಬಕ್ಕ’ ಕಾರ್ಯಕ್ರಮದ ಬಗ್ಗೆ ನಡೆಸುವ ಬಗ್ಗೆ ಚಿಂತನಾ ಸಭೆಯೊಂದು ತೊಕ್ಕೊಟ್ಟು ರತ್ನಂ ಸಭಾಂಗಣದಲ್ಲಿ ದಿನಾಂಕ 06-07-2024ರಂದು ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಮಾತನಾಡಿ “ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸ್ಥಳೀಯ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ಮಕ್ಕಳ ಅಬ್ಬಕ್ಕ’ ಎಂಬ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ನಡೆಸಲಾಗುವುದು. ಇದರಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪಠ್ಯಪುಸ್ತಕದಲ್ಲಿ ಅಬ್ಬಕ್ಕ’ ಎಂಬ ಪ್ರಬಂಧ ಸ್ಪರ್ಧೆ ಮತ್ತು ‘ನನ್ನ ಕಲ್ಪನೆಯಲ್ಲಿ ಅಬ್ಬಕ್ಕನ ಚಿತ್ರ’ ಎಂಬ ಚಿತ್ರಕಲಾ ಸ್ಪರ್ಧೆಯನ್ನು ಪೂರ್ವಭಾವಿಯಾಗಿ ಏರ್ಪಡಿಸಲಾಗಿದೆ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಉಲ್ಲಾಳ ಘಟಕದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ” ಎಂದು ತಿಳಿಸಿದರು. ಸಂಚಾಲಕ ರವೀಂದ್ರ ಶೆಟ್ಟಿ…

Read More

ಮನುಷ್ಯನಲ್ಲಿ ವೃತ್ತಿ ಬೇರೆ ಪ್ರವೃತ್ತಿ ಬೇರೆ. ವೃತ್ತಿಯಿಂದ ನಿವೃತ್ತಿಯಾದ ಮೇಲೆ ಪ್ರವೃತ್ತಿಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡು, ತಾನು ತನ್ನವರೊಂದಿಗೆ ನೆಮ್ಮದಿಯಿಂದ ಇರಬೇಕು ಎಂದು ವ್ಯಕ್ತಿ ಬಯಸುತ್ತಾನೆ.ಅದು ಜೀವನ. ಆದರೆ ಅದಕ್ಕೆ ಇಂದು ಅವಕಾಶಗಳು ಕಡಿಮೆ. ಈ ಜೀವ ನಿರಂತರ ಸುಖವನ್ನು ಬಯಸುತ್ತದೆ.ಸುಖ ಪಡೆಯುವುದಕ್ಕೆ ಹಲವು ಹವಣಿಕೆಗಳನ್ನು ಸದಾ ಮಾಡುತ್ತಲೆ ಇರುತ್ತದೆ. ಕುಟುಂಬದಲ್ಲಿ ಸ್ವಲ್ಪ ಏನಾದರೂ ಏರು ಪೇರುಗಳಾದರೆ ಜೀವನ ಸದಾಕಾಲ ಬೇಸರದ ಚೌಕಟ್ಟಿನಲ್ಲಿ ಜಾಗರಣೆ ಮಾಡುತ್ತಿರುತ್ತದೆ.ಬಂದ ಬೇಸರವನ್ನು ಕಳೆದುಕೊಳ್ಳಲು ಪಲಾಯನವಾದವನ್ನು ಮೈ ಮನದಲ್ಲಿ ಅಳವಡಿಸಿಕೊಳ್ಳುವದು ಇಂದು ಸ್ವಾಭಾವಿಕ ಗುಣ ಧರ್ಮವಾಗಿದೆ.ಆತ್ಮ ರತಿಗೆ ‘ಸುಳ್ಳು’ ಹೇಳುವದನ್ನು ಉಸಿರಾಟದಷ್ಟು ಸಹಜ ಮಾಡಿಕೊಂಡಿರುತ್ತಾರೆ. ಪೂರ್ವದಲ್ಲಿ ಭಾರತೀಯ ಅವಿಭಕ್ತ ಕುಟುಂಬದಲ್ಲಿ ಬೇಸರ ಎಂಬ ‘ಧ್ವನಿ’ ಇದ್ದಿದ್ದಿಲ್ಲ.ಇಂದಿನ ಜಾಗತಿಕರಣದ ವಿಭಕ್ತ ಕುಟುಂಬದಲ್ಲಿ ಬೇಸರದ ಧ್ವನಿ ಗಡಿಯಾರದ ಗಂಟೆಯಂತೆ ಸದಾ ಬಾರಿಸುತ್ತಲೇ ಇರುತ್ತದೆ. ಬಾಲ್ಯದಿಂದ ಕಟ್ಟು – ನಿಟ್ಟಿನ ಸಂಸ್ಕಾರದಲ್ಲಿ ಬೆಳೆದುಬಂದ ವ್ಯಕ್ತಿಗಳು ನಿವೃತ್ತಿಯ ನಂತರ ಆಧ್ಯಾತ್ಮ ಎಂಬ ಗುಹೆಯಲ್ಲಿ ಹೊಕ್ಕು,ನೆಮ್ಮದಿ ಹುಡುಕಲು ಪ್ರಯತ್ನಿಸುತ್ತಾರೆ. ಕೆಲವರು ಪಡೆಯುತ್ತಾರೆ. ಮತ್ತೆ…

Read More

ಉಡುಪಿ : ಬಾಲಕಿಯರ ಪ್ರೌಢಶಾಲೆಯಲ್ಲಿ 2024ನೇ ಸಾಲಿನ ಯಕ್ಷಶಿಕ್ಷಣ ತರಬೇತಿಯು ದಿನಾಂಕ 05-07-2024ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯದರ್ಶಿ ಮುರಲಿ ಕಡೆಕಾರ್ “ಹದಿನೇಳು ವರ್ಷಗಳ ಹಿಂದೆ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಉದ್ದೇಶದಿಂದ ಆರಂಭಗೊಂಡ ಯಕ್ಷ ಶಿಕ್ಷಣ ಇಂದು ಸನಿಹದ ಕಾಪು, ಕುಂದಾಪುರ, ಬೈಂದೂರು ಸೇರಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ವ್ಯಾಪಿಸಿದ್ದು,ಈ ಬಾರಿ 90 ಪ್ರೌಢಶಾಲೆಗಳಲ್ಲಿ 40 ಯಕ್ಷಗಾನ ಗುರುಗಳು ನಮ್ಮ ನೆಲದ ಅಪೂರ್ವಕಲೆಯ ಶಿಕ್ಷಣವನ್ನು ನೀಡುತ್ತಿದ್ದಾರೆ. ನಾಲ್ಕನೇ ಮೂರು ಭಾಗ ಹುಡುಗಿಯರೇ ಭಾಗವಹಿಸುತ್ತಿದ್ದು, ಈ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರತೀ ವರ್ಷ ಸುಂದರವಾದ ಪ್ರದರ್ಶನ ನೀಡುತ್ತಿರುವುದು ಅಭಿನಂದನೀಯ. ಈ ಶಾಲೆಗೆ, ಯಕ್ಷಶಿಕ್ಷಣದ ವಿದ್ಯಾರ್ಥಿಯಾಗಿ, ಪ್ರಕೃತ ಐ.ಟಿ. ಉದ್ಯೋಗಿಯಾಗಿರುವ, ಉಭಯತಿಟ್ಟುಗಳಲ್ಲೂ ಪ್ರಾವೀಣ್ಯತೆ ಹೊಂದಿದ, ಆದ್ಯತಾ ಭಟ್ ಶಿಕ್ಷಕಿಯಾಗಿ ದೊರೆತಿರುವುದು ನಮ್ಮ ಅಭಿಯಾನದ ಸಾರ್ಥಕತೆಯ ಸಂಕೇತ” ಎಂಬುದಾಗಿ ನುಡಿದರು. ಇದೇ ಸಂದರ್ಭದಲ್ಲಿ ಶಾಲಾ ಸಂಸತ್ತನ್ನೂ ಉದ್ಘಾಟಿಸಲಾಯಿತು. ಆರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಎಲ್ಲರನ್ನು ಸ್ವಾಗತಿಸಿದರು.…

Read More

ಬೆಂಗಳೂರು : ಶ್ರೀ ರಾಮ ಲಲಿತ ಕಲಾ ಮಂದಿರ ಪ್ರಸ್ತುತ ಪಡಿಸುವ ‘ಗಾಯನ ಗೋಷ್ಠಿ’ಯು ದಿನಾಂಕ 07-07-2024ರಂದು ಸಂಜೆ 5-30 ಗಂಟೆಗೆ ಎಸ್.ಆರ್.ಎಲ್.ಕೆ.ಎಂ. ಸಭಾಂಗಣದಲ್ಲಿ ನಡೆಯಲಿದೆ. ವಿದ್ವಾನ್ ನಿರಂಜನ ದಿಂಡೋಡಿ ಇವರ ಹಾಡುಗಾರಿಕೆಗೆ ವಿದ್ವಾನ್ ಮೈಸೂರು ಕೇಶವ್ ವಯೋಲಿನ್, ವಿದ್ವಾನ್ ಬಿ.ಎಸ್. ಪ್ರಶಾಂತ್ ಇವರು ಮೃದಂಗ ಮತ್ತು ವಿದ್ವಾನ್ ನಾರಾಯಣ ಮೂರ್ತಿಯವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಮಂಗಳೂರು : ಕಥಾಬಿಂದು ಪ್ರಕಾಶನ ಇದರ ಹದಿನೇಳನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಸಾಹಿತ್ಯೋತ್ಸವ 2024’ 101 ಕೃತಿಗಳ ದಾಖಲೆಯ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಲೇಖಕ-ಲೇಖಕಿಯರಿಂದ ಕವನ ಸಂಕಲನಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಕೃತಿಗಳ ಲೇಖಕ/ಲೇಖಕಿಯರನ್ನು ಗೌರವ ಸನ್ಮಾನದಿಂದ ಕೃತಿಯನ್ನು ಆನಾವರಣಗೊಳಿಸಲಾಗುವುದು. 101 ಕವನಗಳ ಸಂಕಲನ 101 ಪ್ರತಿಗಳನ್ನು ನೀಡಲಾಗುವುದು, 50 ಕವನಗಳ ಸಂಕಲನ 50 ಪ್ರತಿಗಳನ್ನು ನೀಡಲಾಗುವುದು, 30 ಕವನಗಳ ಸಂಕಲನ 30 ಪ್ರತಿಗಳನ್ನು ನೀಡಲಾಗುವುದು, ಆಯ್ಕೆಯಾದ ಕವನ ಸಂಕಲನದ ಹಕ್ಕುಗಳು ಲೇಖಕರದೇ ಆಗಿರುತ್ತದೆ. ಯುನಿಕ್ ಕೋಡಿನಲ್ಲಿ ಟೈಪ್ ಮಾಡಿ 9341410153 ನಂಬರ್‌ಗೆ ಮುನ್ನುಡಿ, ಬೆನ್ನುಡಿ ಮತ್ತು ನಿಮ್ಮ ಕವನಗಳನ್ನು ಕಳುಹಿಸಿ ನಿಮ್ಮ ಆಯ್ಕೆಯ ಸಂಕಲನ (ಉದಾ: 101, 50, 30) ಎಂದು ನಮೂದಿಸಿ 101 ಕವನಗಳ ಸಂಕಲನವಾದರೆ 10,000/-, 50 ಕವನಗಳ ಸಂಕಲನವಾದರೆ 6000/- ಮತ್ತು 30 ಕವನಗಳ ಸಂಕಲನವಾದರೆ 3500/- ಅನ್ನು ಗೂಗುಲ್ ಪೇ ಮಾಡಿ ಜುಲೈ 31ರ ಒಳಗೆ ಕಳುಹಿಸಿ ಕೊಡಬೇಕು.…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಮತ್ತು ಕಾಪು ತಾಲೂಕು ಘಟಕ ಹಾಗೂ ಮಣಿಪಾಲದ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಪೊಲಿಪು ನಮಸ್ತೇ ಹೋಂ ಸ್ಟೇ ರೆಸಾರ್ಟಿನಲ್ಲಿ ದಿನಾಂಕ 04-07-2024ರಂದು ಮನೆಯೇ ಗ್ರಂಥಾಲಯದ ನಲವತ್ತೈದನೇ ಸರಣಿ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ಜಿಲ್ಲಾ ಗವರ್ನರ್ ಸಿ.ಎ. ದೇವ್ ಆನಂದ್ ಇವರು ಮಾತನಾಡುತ್ತಾ “ಮಾತು ಕಡಿಮೆ‌ ಮಾಡಿ, ಕೃತಿಯ ಮೂಲಕವಾಗಿ ಜನರ ನಡುವೆ ಗುರುತಿಸಿಕೊಳ್ಳುವಲ್ಲಿ ರೋಟರಿ ಸಂಸ್ಥೆ ಹಾಗೂ ಕ.ಸಾ.ಪ. ಪ್ರಯತ್ನಶೀಲವಾಗಿದೆ. ಜನರಲ್ಲಿ ವಿಷಯ ಸಂಗ್ರಹಣೆ, ಪುಸ್ತಕ ಓದುವ ಹವ್ಯಾಸದೊಂದಿಗೆ ಜ್ಞಾನ ವೃದ್ಧಿಗೆ ಪೂರಕವಾಗಿ ಸ್ಪಂದಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ” ಎಂದರು. ಕಾರ್ಯಕ್ರಮದ ಸಂಚಾಲಕ ಸಾಹಿತಿ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ “ಜನರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮ ಸಹಕಾರಿಯಾಗಲಿದೆ. ಸಾಹಿತ್ಯ ಪ್ರೀತಿಯನ್ನು ಎಲ್ಲೆಡೆಗೆ ಪಸರಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಸಾಹಿತ್ಯ ಅಭಿರುಚಿ, ಆರೋಗ್ಯ ಮಾಹಿತಿ, ಒತ್ತಡ ನಿವಾರಣೆ,…

Read More

ಉಡುಪಿ : ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ದಿನಾಂಕ 05-07-2024ರ ಶುಕ್ರವಾರದಂದು ಹೃದಯಘಾತದಿಂದ ನಿಧನ ಹೊಂದಿದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ಲಿಂಗ ಮುಕಾರಿ ಮತ್ತು ಕಾವೇರಿ ದಂಪತಿಗಳಿಗೆ ಪುತ್ರನಾಗಿ 23-07-1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪುವಿನಲ್ಲಿ ಜನಿಸಿದ ಇವರು ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಗೊಂಡರು. ಇವರು ಇರಾ (ಕುಂಡಾವು), ಕೂಡ್ಲು, ಮೂಲ್ಕಿ, ಕರ್ನಾಟಕ ಮೇಳ ಮತ್ತು ಧರ್ಮಸ್ಥಳ ಮುಂತಾದ ಮೇಳಗಳಲ್ಲಿ ಯಕ್ಷ ವ್ಯವಸಾಯ ಮಾಡಿದ್ದಾರೆ. ತೆಂಕುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಮಾಡಿರುವ ಇವರ ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳಿ, ಲಕ್ಷ್ಮೀ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ ಮುಂತಾದ ಪಾತ್ರಗಳು ಅಪಾರ ಜನಮೆಚ್ಚುಗೆ ಗಳಿಸಿದ್ದವುಗಳು.

Read More

ಮೈಸೂರು: ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜ‌ರ್ ರಘುಪತಿ ತಾಮ್ಹನ್ ಕರ್ ಅವರ ಮೊದಲ ಕೃತಿ’ ನೋಟಿನ ನಂಟು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 07-07-2024 ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಜಿ. ಎಲ್. ಬಿ. ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆಯ ಎಸ್. ಪಿ. ಭಟ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕವಿತಾ ಪ್ರಕಾಶನದ ಗಣೇಶ ಅಮೀನಗಡ ತಿಳಿಸಿದ್ದಾರೆ. ಪ್ರಸಿದ್ಧ ಹಿರಿಯ ಲೇಖಕರಾದ ಡಾ. ಸಿ. ಪಿ. ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿದ್ವಾಂಸ ಹಾಗೂ ಲೇಖಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ವಿಭಾಗೀಯ ಪ್ರಬಂಧಕರಾದ ಕೆ. ಗೋಪಾಲ ಹಾಗೂ ಬ್ಯಾಂಕ್ ಉದ್ಯೋಗಿಯಾಗಿರುವ ಲೇಖಕಿ ಡಾ. ಶುಭಶ್ರೀ ಪ್ರಸಾದ್ ಭಾಗವಹಿಸಲಿದ್ದಾರೆ.

Read More

Bengaluru : ‘NATANA TARANGINI’ School of Music and Dance is celebrating its 20th year & 5th year from the inception of ‘NATANA TARANGINI ACADEMY’. A series of events is lined up this July 6th & 7th, 2024 to celebrate and commemorate this milestone. A cultural extravaganza which has to be witnessed by artists and art lovers. NATANA TARANGINI (School of Music & Dance) was founded in the year 2004 by Dr. Smt. Y. G. Parimala. The school has been training students in Carnatic Classical Vocal, Veena, Keyboard, Mridangam & Bharathanatyam. Students are given opportunities to perform & take up various…

Read More