Author: roovari

ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಅರ್ಪಿಸುವ ಶ್ರೀಮತಿ ವೀಣಾ ಟಿ. ಶೆಟ್ಟಿಯವರಿಂದ ಲೇಖನಗಳ ಸಂಗ್ರಹ ‘ಗೋಡೆಯ ಮೇಲಿನ ಚಿತ್ತಾರ’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 08-07-2024ರಂದು ಸಂಜೆ 5-00 ಗಂಟೆಗೆ ಕೆನರಾ ಪದವಿ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ರಂಗಸಂಗಾತಿಯ ಅಧ್ಯಕ್ಷರಾದ ಶ್ರೀ ಗೋಪಾಲ ಕೃಷ್ಣ ಶೆಟ್ಟಿ ಇವರು ವಹಿಸಲಿದ್ದು, ಖ್ಯಾತ ಬರಹಗಾರರು ಮತ್ತು ಅನುವಾದಕರಾದ ಡಾ. ಪಾರ್ವತಿ ಜಿ. ಐತಾಳ್ ಇವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಚಿಂತಕರು ಮತ್ತು ವಾಗ್ಮಿಗಳಾದ ಡಾ. ಅರುಣ್ ಉಳ್ಳಾಲ್ ಇವರು ಪುಸ್ತಕ ಪರಿಚಯ ಮಾಡಲಿದ್ದು, ಖ್ಯಾತ ಬರಹಗಾರರು ಮತ್ತು ರಂಗಕರ್ಮಿ ಶ್ರೀ ಶಶಿರಾಜ್ ರಾವ್ ಕಾವೂರು ಇವರು ಕಾರ್ಯಕ್ರಮ ನಿರ್ವಹಿಸಲಿರುವರು.

Read More

ಬಂಟ್ವಾಳ : ಭರತನಾಟ್ಯ, ಜಾನಪದ ಗಾಯನ, ರಂಗಭೂಮಿ, ಮೇಕಪ್, ಗೋಡೆ ವರ್ಣಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿರುವ ತ್ರಿಶಾ ಶೆಟ್ಟಿ ಕೊಟ್ಟಿಂಜ ಅವರು ಸಾಗರದ ನೀನಾಸಂ ರಂಗಶಿಕ್ಷಣ ಕೇಂದ್ರದ 2004-25 ಸಾಲಿನ ತರಬೇತಿಗೆ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಛಾಯಾಗ್ರಾಹಕರಾಗಿರುವ ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಚಂಚಲಾ ಶೆಟ್ಟಿಯವರ ಏಕೈಕ ಪುತ್ರಿಯಾದ ತ್ರಿಶಾ ಶೆಟ್ಟಿ ದ.ಕ. ಜಿಲ್ಲೆಯಿಂದ ನೀನಾಸಂ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾಗಿರುವ ಏಕೈಕ ಪ್ರತಿಭೆಯಾಗಿದ್ದಾರೆ. ಆರಂಭಿಕ ಶಾಲಾ ಶಿಕ್ಷಣವನ್ನು ಬಂಟ್ವಾಳದ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಪೂರೈಸಿರುವ ತ್ರಿಶಾ ಪ್ರಸ್ತುತ ಪದವಿ ಶಿಕ್ಷಣವನ್ನು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ (ಸ್ವಾಯತ್ತ) ಪಡೆಯುತ್ತಿದ್ದಾರೆ. ಬಾಲ್ಯದಿಂದಲೇ ಭರತನಾಟ್ಯ, ಸಂಗೀತ ಹೀಗೆ ಕಲಾ ಸರಸ್ವತಿಯನ್ನು ಆರಾಧಿಸಿಕೊಂಡು ಬಂದಿರುವ ತ್ರಿಶಾ ಭರತನಾಟ್ಯ, ಜಾನಪದ ಮತ್ತು ಭಾರತೀಯ ಸಮಕಾಲೀನ ನೃತ್ಯಗಾರ್ತಿ ಮಾತ್ರವಲ್ಲ, ಶ್ರೀಮಂತ ಕಲಾ ಪ್ರಕಾರವಾದ ಯಕ್ಷಗಾನದ ತರಬೇತಿಯನ್ನು ಪಡೆದಿದ್ದಾರೆ. ಕರ್ನಾಟಕದಾದ್ಯಂತ ರಾಷ್ಟ್ರೀಯ ರಂಗೋತ್ಸವಗಳಲ್ಲಿ ಪ್ರದರ್ಶನ ನೀಡಿರುವ ತ್ರಿಶಾ ರಂಗಾಯಣ ಮೈಸೂರು, ರಂಗಶಂಕರ ಬೆಂಗಳೂರು, ಶಂಕರನಾಗ್ ಉತ್ಸವ, ವಿದ್ಯಾವರ್ಧಕ ಸಂಘ…

Read More

ಮುಡಿಪು : ಇತ್ತೀಚೆಗೆ ಅಗಲಿದ ಕನ್ನಡ ಸಾಹಿತ್ಯ ಮತ್ತು ಸಂಶೋಧನ ಕ್ಷೇತ್ರದ ಮಹನೀಯರಾದ ಡಾ. ಕಮಲಾ ಹಂಪನಾ, ಜಾನಪದ ವಿದ್ವಾಂಸ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಹಾಗೂ ಸಂಘಟಕ ರಮಾನಾಥ ಕೋಟೆಕಾರ್ ಇವರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ವಿವಿಯ ಕನ್ನಡ ವಿಭಾಗದಲ್ಲಿ ದಿನಾಂಕ 03-07-2024ರಂದು ನಡೆದ ಸಮಾಲೋಚನಾ ಸಭೆಯಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಪ್ರಸ್ತುತ ವರ್ಷದ ಕಾರ್ಯಚಟುವಟಿಕೆಗಳ ರೂಪುರೇಷೆಯನ್ನು ಸಿದ್ಧಗೊಳಿಸಲಾಯಿತು. ಪರಿಷತ್ತಿನ ವತಿಯಿಂದ ಕರಾವಳಿಯ ಲೇಖಕರ ಕುರಿತ ಸರಣಿ ಕಾರ್ಯಕ್ರಮವನ್ನು ಶಾಲೆಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದಲ್ಲದೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಹಾಗೂ ಪರಿಷತ್ತಿನ ಸದಸ್ಯತ್ವ ಅಭಿಯಾನವನ್ನು ನಡೆಸಲು ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಉಳ್ಳಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಇವರು ವಹಿಸಿದ್ದರು. ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧ್ಯಕ್ಷರಾದ ಲ.ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಸಂಘಟನಾ ಕಾರ್ಯದರ್ಶಿಗಳಾದ ತ್ಯಾಗಂ ಹರೇಕಳ, ರಾಧಾಕೃಷ್ಣ ರಾವ್,…

Read More

ಕಾಸರಗೋಡು : ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಒಡಿಸ್ಸಾ ಶೈಲಿಯ ‘ಗೋಟಿಪುವ’ ಎಂಬ ಶಾಸ್ತ್ರೀಯ ನೃತ್ಯ ಕಲಾ ರೂಪವು ದಿನಾಂಕ 03-07-2024ರಂದು ಪ್ರದರ್ಶನಗೊಂಡಿತು. ಈ ಕಲಾ ರೂಪವನ್ನು ಗಂಡಸರು ಸ್ತ್ರೀ ವೇಷಧಾರಿಯಾಗಿ ಪ್ರದರ್ಶಿಸುವುದು ಇದರ ವಿಶೇಷತೆಯಾಗಿದೆ. 16ನೇ ಶತಮಾನದಿಂದಲೇ ಒಡಿಸ್ಸಾದಲ್ಲಿ ಪ್ರಚಲಿತವಾಗಿರುವ ಈ ಕಲಾ ಪ್ರದರ್ಶನವನ್ನು ಸ್ಪಿಕ್ ಮೆಕೆಯ ಸಹಯೋಗದಲ್ಲಿ ಆಯೋಜಿಸಲಾಯಿತು. ನಕ್ಷತ್ರ ಗುರುಕುಲ ಭುವನೇಶ್ವರ ಇಲ್ಲಿಯ ಕಲಾಗಾರರು ಶಾಸ್ತ್ರೀಯ ಕಲಾ ನೃತ್ಯ ಪ್ರದರ್ಶನವನ್ನು ನಡೆಸಿಕೊಟ್ಟರು. ಶ್ರೀ ಉಣ್ಣಿ ವಾರಿಯರ್ ಇದರ ನೇತೃತ್ವವನ್ನು ವಹಿಸಿದರು. ಕಾರ್ಯಕ್ರಮದಲ್ಲಿ ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥರು ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಸ್ವಾಮಿ ವಿವಿಕ್ತ ನಂದ ಸರಸ್ವತಿ, ಬ್ರಹ್ಮಚಾರಿಣಿ ದಿಶಾ ಚೈತನ್ಯ, ಪ್ರಾಂಶುಪಾಲರಾದ ಸುನಿಲ್ ಕುಮಾರ್ ಕೆ.ಸಿ., ಉಪ ಪ್ರಾಂಶುಪಾಲ ಪ್ರಶಾಂತ ಬಿ., ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪೂರ್ಣಿಮಾ ಎಸ್.ಆರ್., ಚಿನ್ಮಯ ಮಿಷನ್ ನ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಯ ಅಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.

Read More

ಮಂಗಳೂರು : ರೋಟರಿ ಕ್ಲಬ್ ಸುರತ್ಕಲ್ ಆಶ್ರಯದಲ್ಲಿ ಸುರತ್ಕಲ್ಲಿನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೈಂಡ್ ಮ್ಯಾಜಿಕ್ – ಜ್ಞಾಪಕ ಶಕ್ತಿ ವರ್ಧನಾ ವಿಶಿಷ್ಟ ಕಾರ್ಯಾಗಾರವು ದಿನಾಂಕ 29-06-2024ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ “ಅಂತರಂಗಿಕ ಶಕ್ತಿಯ ವರ್ಧನೆಗೆ ಏಕಾಗ್ರತೆ ಅಗತ್ಯವಿದ್ದು ದೃಢ ಪ್ರಯತ್ನದಿಂದ ಯಶಸ್ಸನ್ನು ಪಡೆಯಲು ಸಾಧ್ಯ. ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ, ನೆನಪುಗಳು, ಗ್ರಹಣ ಶಕ್ತಿಗಳ ಸಮೂಹವಾಗಿರುವ ಮನಸ್ಸಿನ ಶಕ್ತಿಯ ವರ್ಧನೆಯನ್ನು ಮಾಡಿಕೊಳ್ಳಬೇಕು. “ ಎಂದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಮಹಾಲಿಂಗೇಶ್ವರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ವೈ. ರಮಾನಂದ ರಾವ್ ಮಾತನಾಡಿ “ವಿದ್ಯಾರ್ಥಿಗಳ ಭೌದ್ಧಿಕ ಬೆಳವಣಿಗೆಗಳಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಸಂದೀಪ್ ರಾವ್ ಇಡ್ಯಾ ಮಾತನಾಡಿ “ಏಕಾಗ್ರತೆಯ ಕಲೆಯನ್ನು ರೂಢಿಸಿಕೊಂಡಾಗ ಪ್ರತಿಭಾವಂತರಾಗಲು ಸಾಧ್ಯ.” ಎಂದರು.ಶಾಲಾ ಸಂಚಾಲಕ ಹಾಗೂ ಕಾರ್ಯಾಗಾರದ ಪ್ರಾಯೋಜಕ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂತ ಶಿಶುನಾಳ ಶರೀಫರ ಜನ್ಮದಿನಾಚಾರಣೆ ಕಾರ್ಯಕ್ರಮವನ್ನು ದಿನಾಂಕ 03-07-2024ರಂದು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಬದುಕಿನ ಹಿರಿಮೆಯನ್ನು ಅರಿತು, ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಶ್ರಮಿಸಿ ಜಾತಿ ಮತಗಳ ಗಡಿದಾಟಿ ಸಂತಶ್ರೇಷ್ಟ ಎನ್ನಿಸಿಕೊಂಡವರು ಸಂತ ಶಿಶುನಾಳ ಶರೀಫರು. ಕಳಸದ ಗುರು ಗೋವಿಂದ ಭಟ್ಟರಿಂದ ಉಪದೇಶವನ್ನು ಪಡೆದುಕೊಂಡು ಎರಡೂ ಧರ್ಮದವರ ವಿರೋಧವನ್ನು ಎದುರಿಸಿ ಜಾತಿ, ಮತಗಳಿಗಿಂತ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ಬೋಧಿಸಿದವರು. ‘ಬೋಧ ಒಂದೇ, ಬ್ರಹ್ಮನಾದ ಒಂದೇ, ಸಾಧನೆ ಮಾಡುವ ಹಾದಿ ಒಂದೇ, ಆದಿ ಪದ ಒಂದೇ – ಶಿಶುನಾಳಧೀಶನ ಭಾಷೆ ಒಂದೇ’ ಎಂದು, `ಅನೇಕತೆಯಲ್ಲಿ ಏಕತೆ’ಯನ್ನು ಸಾರಿದರು. ಸಹೋದರತ್ವವನ್ನು ಎತ್ತಿ ಹಿಡಿದು ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕರು ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂಥ…

Read More

ಮಂಗಳೂರು : ಮಂಗಳೂರಿನ ಪುರಭವನದಲ್ಲಿ ‘ಯಕ್ಷನಂದನ’ ಪಿ.ವಿ. ಐತಾಳರ ಆಂಗ್ಲ ಭಾಷಾ ಯಕ್ಷಗಾನ ತಂಡದ 43ನೇ ವರ್ಷಾಚರಣೆಯು ದಿನಾಂಕ 02-07-2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಆಂಗ್ಲ ಭಾಷೆಯಲ್ಲಿ 43 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಆಯೋಜಿಸಲು ಯಕ್ಷನಂದನ ಸಂಸ್ಥೆಯಿಂದ ಮಾತ್ರ ಸಾಧ್ಯ. ಪಿ.ವಿ. ಐತಾಳರ ಕನಸಾಗಿರುವ ಈ ಯಕ್ಷಗಾನ ಪ್ರದರ್ಶನ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿ. ಯಕ್ಷನಂದನ ಭವಿಷ್ಯದಲ್ಲಿಯೂ ‘ನಂದನ’ವಾಗಿಯೇ ಇರಲಿ” ಎಂದು ಹೇಳಿದರು. ಎನ್.ಐ.ಟಿ.ಕೆ. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎ. ಚಿತ್ತರಂಜನ್ ಹೆಗ್ಡೆ ಇವರು “ಸಂಗೀತ, ಸಾಹಿತ್ಯ, ನೃತ್ಯ, ಯಕ್ಷಗಾನಗಳೆಲ್ಲವೂ ನಮ್ಮ ಜೀವನಕ್ಕೆ ಆನಂದವನ್ನು ನೀಡುವಂತಹುದು. ಯಕ್ಷಗಾನದಂತಹಾ ಕಲೆಗಳು ನಮ್ಮಲ್ಲಿನ ಲವಲವಿಕೆಯನ್ನು ಉಜ್ವಲಗೊಳಿಸಿ, ಬದುಕಿಗೆ ಅರ್ಥ ತುಂಬುತ್ತವೆ. ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವಂತೆ ಸಂಗೀತ ನೃತ್ಯಾದಿ ಪ್ರಕಾರಗಳು ಮಾನವನ ಬದುಕಿನ ಸಂಗಾತಿಗಳು. ಶಾಸಕರಾಗಿ, ನ್ಯಾಯವಾದಿಗಳಾಗಿ ಮೆರೆದ ಐತಾಳರು ಆಂಗ್ಲ ಭಾಷಾ ಯಕ್ಷಗಾನದ ಪ್ರಮುಖ…

Read More

ಪುತ್ತೂರು : ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಗುರುಕುಲ ಕಲಾ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಕಾರದೊಂದಿಗೆ, ಪುತ್ತೂರಿನ ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ, ಮುಂಗಾರು ಕವಿಗೋಷ್ಠಿ (ಕವಿತೆಗಳ ಪುಷ್ಪವೃಷ್ಠಿ) ದಿನಾಂಕ 17-07-2024ರಂದು ಐ.ಆರ್.ಸಿ.ಎಂ.ಡಿ. ಶಿಕ್ಷಣ ಸಂಸ್ಥೆಯ ಹೋಟೆಲ್ ಸ್ವಾಗತ್ ಒಂದನೇ ಮಹಡಿಯಲ್ಲಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲೆಯ ಸಾಹಿತಿಗಳಿಗೆ ಅವಕಾಶವಿದ್ದು, ಕವಿಗೋಷ್ಠಿ ಸಂಚಾಲಕಿ ಪ್ರಿಯಾ ಸುಳ್ಯ ಇವರ ವಾಟ್ಸಪ್ಪ್ ಸಂಖ್ಯೆ 9731470936 ಸಂಪರ್ಕಿಸಬಹುದು. ಕವಿಗೋಷ್ಠಿಯಲ್ಲಿ ಭಾಗವಹಿಸುವವರು ತಮ್ಮ ಸೂಕ್ಷ್ಮ ಪರಿಚಯದೊಂದಿಗೆ ಹೆಸರು ನೋಂದಾಯಿಸಬೇಕು. ಕವಿತೆಯ ವಿಷಯ ಕನ್ನಡ ನಾಡು, ನುಡಿ, ಸಂಸ್ಕೃತಿ, ಪ್ರಕೃತಿ ಕುರಿತಾಗಿರಬೇಕು. ಯಾವುದೇ ಜಾತಿ, ಧರ್ಮ, ದೇವರು ಮತ್ತು ರಾಜಕೀಯ ನಿಂದನೆಗೆ ಅವಕಾಶವಿಲ್ಲ. ನೋಂದಣಿಗೆ 10-07-2024 ಕೊನೆಯ ದಿನವಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ತಿಳಿಸಿದ್ದಾರೆ.

Read More

ಅಜೆಕಾರು : ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಸಭಾಂಗಣದಲ್ಲಿ ದಿನಾಂಕ 01-07-2024ರಂದು ಪುಸ್ತಕ ಮನೆ ಪ್ರಕಾಶನದ ವತಿಯಿಂದ ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್ ಇವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನರೇಂದ್ರ ಪೈರವರ ಆಯ್ದ ವಿಮರ್ಶೆಗಳನ್ನು ಒಳಗೊಂಡ ‘ಸಾವಿರದೊಂದು ಪುಸ್ತಕ’, ಯಶೋದಾ ಮೋಹನ್ ಇವರ ‘ಇಳಿ ಹಗಲಿನ ತೇವಗಳು’ ಎಂಬ ಕಥಾಸಂಕಲನ, ಸುಧಾ ನಾಗೇಶ್ರಒವರ ‘ಹೊಂಬೆಳಕು’ ಎಂಬ ಚಿಂತನ ಬರಹಗಳು, ವಾಣಿ ರಾಜ್ ರವರ ಕಥಾಸಂಕಲನ ‘ಸವಿನೆನಪುಗಳ ಹಂದರ’, ಡಾ. ಸುಬ್ರಹ್ಮಣ್ಯ ಸಿ. ಕುಂದೂರುರವರ ಮಲೆನಾಡಿನ ಕಥನವಾದ ‘ಜೀವನಯಾನ’, ರಾಜೇಂದ್ರ ಭಟ್ ಇವರ ‘ರಾಜಪಥ’ ಎಂಬ ಲೇಖನಗಳ ಪುಸ್ತಕ, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ‘ಸಾರ್ಥಕ ಜೀವನಕ್ಕೆ ಕಗ್ಗೋಪದೇಶ’ ಎಂಬ ಲೇಖನಗಳು, ದಿಗಂತ್ ಬಿಂಬೈಲ್ ಇವರ ‘ಕೊಂದ್ ಪಾಪ ತಿಂದ್ ಪರಿಹಾರ’ ಎಂಬ ಕಥಾ ಪ್ರಸಂಗಗಳು, ಡಾ. ರಾಜಶೇಖರ್ ಹಳೆ ಮನೆಯವರ ಕಾದಂಬರಿ ‘ಒಡಲುಗೊಂಡವರು’, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ…

Read More

ಧಾರವಾಡ : ಭಾರತೀಯ ಸಂಗೀತ್ ವಿದ್ಯಾಲಯ ಮತ್ತು ದಾಸ ಟ್ರಸ್ಟ್ ಪ್ರಸ್ತುತ ಪಡಿಸುವ ಶ್ರೀ ಅನಂತ ಹರಿಹರ ಇವರಿಗೆ ಶೃದ್ಧಾಂಜಲಿ ಪ್ರಯುಕ್ತ ‘ಅನಂತ ನಮನ’ ಕಾರ್ಯಕ್ರಮವನ್ನು ದಿನಾಂಕ 07-07-2024ರಂದು ಸಂಜೆ 5-30 ಗಂಟೆಗೆ ಧಾರವಾಡದ ಕೆ.ಸಿ.ಡಿ. ಕ್ಯಾಂಪಸ್, ಡಾ.ಅಣ್ಣಾಜಿ ರಾವ್ ಶೀರೂರ್ ರಂಗ ಮಂದಿರ, ‘ಸೃಜನ’ದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಶ್ರೀಧರ್ ಮಾಂಡ್ರೆ ತಬಲಾ ಮತ್ತು ಗುರುಪ್ರಸಾದ್ ಹೆಗ್ಡೆ ಇವರು ಹಾರ್ಮೋನಿಯಂ ಸಾಥ್ ನೀಡಲಿರುವರು. ಛೋಟೆ ರಹಿಮತ್ ಖಾನ್, ರಫೀಕ್ ಖಾನ್, ಶಫೀಕ್ ಖಾನ್, ರೈಸ್ ಖಾನ್, ಹಫೀಜ್ ಖಾನ್ ಮತ್ತು ಮೊಹಸಿನ್ ಖಾನ್ ಇವರ ಷಷ್ಠ ಸಿತಾರ್ ವಾದನಕ್ಕೆ ರಾಜೇಂದ್ರ ನಾಕೊಡ್ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ.

Read More