Author: roovari

ಧಾರವಾಡ : ಮನೋಹರ ಗ್ರಂಥಮಾಲಾ ಧಾರವಾಡದ ಸಂಪಾದಕ, ವ್ಯವಸ್ಥಾಪಕರು, ನಿವೃತ್ತ ಆಂಗ್ಲ ಪ್ರಾಧ್ಯಾಪಕ ಮತ್ತು ಬರಹಗಾರ ಡಾ. ರಮಾಕಾಂತ ಜೋಶಿಯವರು ದಿನಾಂಕ 17 ಮೇ 2025ರಂದು ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮನೋಹರ ಗ್ರಂಥಮಾಲಾ ಸ್ಥಾಪಕರಾದ ಶ್ರೀ ಜಿ.ಬಿ. ಜೋಶಿಯವರ ಮಗನಾದ ಡಾ. ರಮಾಕಾಂತ ಜೋಶಿಯವರು ಗುಜರಾತಿನ ಆನಂದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿ.ಎಚ್.ಡಿ. ಪದವಿ ಪಡೆದ ರಮಾಕಾಂತ ಜೋಶಿಯವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. ಹಲವಾರು ಗ್ರಂಥಗಳ ಸಂಪಾದನೆ ಮಾಡಿದ್ದರು ಮತ್ತು ಅನುವಾದ ಕಾರ್ಯವನ್ನು ಸಹ ಮಾಡಿದ್ದರು. ದೀನಾನಾಥ ಮಲ್ಹೋತ್ರಾ ಅವರು ಇಂಗ್ಲೀಷಿನಲ್ಲಿ ಬರೆದ BOOK PUBLISHING ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ಅದೊಂದು ಅತ್ಯಂತ ಪ್ರಮುಖ ಕೃತಿ ಎನಿಸಿದೆ. 1993 ಡಿಸೆಂಬರ್ 26ರಂದು ಜಿ.ಬಿ. ಜೋಶಿಯವರು ನಿಧನರಾದ ನಂತರ ಮನೋಹರ ಗ್ರಂಥಮಾಲಾದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಡೆಸಿದರು. ಅನೇಕ ಪ್ರಶಸ್ತಿಗಳಿಗೆ, ಮಾನ ಸನ್ಮಾನಗಳಿಗೆ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯು ದಿನಾಂಕ 18 ಮೇ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ವಿದೂರಾತಿಥ್ಯ’ – ‘ಪ್ರಮೀಳಾರ್ಜುನ’ ಪ್ರಸಂಗದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಸತೀಶ್ ಇರ್ದೆ, ತನ್ವೀ‌ ಯಸ್. ಅನಂತಾಡಿ ಭಾಗವತರಾಗಿ ಚೆಂಡೆಮದ್ದಲೆಗಳಲ್ಲಿ ಹಿರಿಯ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಈಶ್ವರಮಂಗಳ, ಆದಿತ್ಯ ಕೃಷ್ಣ ದ್ವಾರಕ, ಅನೀಶ್ ಕೃಷ್ಣಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಭಾಸ್ಕರ್ ಬಾರ್ಯ ಮತ್ತು ವಿ.ಕೆ. ಶರ್ಮ ಅಳಿಕೆ), ವಿದುರ ಮತ್ತು ದೂತಿ (ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಅರ್ಜುನ (ಗುಡ್ಡಪ್ಪ ಬಲ್ಯ) ಮತ್ತು ಪ್ರಮೀಳ (ಶುಭಾ ಜೆ.ಸಿ. ಅಡಿಗ) ಸಹಕರಿಸಿದರು. ಪದ್ಮನಾಭ ಹಂದ್ರಟ್ಟ ಕಾರ್ಯಕ್ರಮ ಪ್ರಾಯೋಜಿಸಿದ್ದರು.

Read More

ಕಟಪಾಡಿ : ವಿಶ್ವಕರ್ಮ ಒಕ್ಕೂಟ (ರಿ.) ಇದರ ವತಿಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವಿಶ್ವಕರ್ಮ ಸಮುದಾಯದವರಿಗಾಗಿ ‘ಭಜನಾ ವೈಭವ 2025’ ಸಾಂಪ್ರದಾಯಿಕ ಭಜನಾ ಸ್ಪರ್ಧೆಯನ್ನು ದಿನಾಂಕ 22 ಜೂನ್ 2025ರಂದು ಬೆಳಗ್ಗೆ 8-30 ಗಂಟೆಗೆ ಕಟಪಾಡಿ ವೇಣುಗಿರಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ವಿಜೇತರಿಗೆ ಮತ್ತು ಶಿಸ್ತುಬದ್ಧ ತಂಡಕ್ಕೆ ವಿಶೇಷ ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೂ ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ತಂಡವನ್ನು ನೋಂದಾಯಿಸಲು 10 ಜೂನ್ 2025 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ತಂಡ ನೋಂದಾಯಿಸಲು 9845291301, 8277529269, 9880845643 ಮತ್ತು 9632287917 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಸರಯೂ ಬಾಲಯಕ್ಷ ವೃಂದ ಮಕ್ಕಳ ಮೇಳ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮದ 2025ನೇ ಸಾಲಿನ ‘ಯಕ್ಷ ಪಕ್ಷ’ ರಜತ ಸಂಭ್ರಮ ಅಷ್ಟಾಹ ಸಪ್ತಾಹವು ದಿನಾಂಕ 16 ಮೇ 2025ರಂದು ಕೊಂಚಾಡಿಯ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ತೋಟ ಮನೆಯಲ್ಲಿ ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ರವಿ ಅಲೆವೂರಾಯರು ವಿರಚಿತ ‘ಯಕ್ಷಾರ್ಯ’ ಅರ್ಥ ಸಹಿತ ಪ್ರಸಂಗಗಳ ಕೃತಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮಂತ್ರಿಗಳೂ ದೇವಳದ ಅಧ್ಯಕ್ಷರೂ ಆದ ಬಿ. ನಾಗರಾಜ ಶೆಟ್ಟರು “ಶ್ರೀದೇವಳದಲ್ಲಿ ಯಕ್ಷಗಾನದಂತಹಾ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಸರಯೂ ಸಂಸ್ಥೆಯ ಈ ಯಕ್ಷ ಪಕ್ಷವನ್ನು ನಡೆಸುತ್ತಿರುವುದು ಸಂತಸದ ವಿಷಯ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಸರಯೂ ರಜತ ಸಂಭ್ರಮವನ್ನು ಚೆನ್ನಾಗಿ ನಡೆಸಲಿ” ಎಂದರು. ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಯಕ್ಷಾಗಾನಕ್ಕೆ ದಾಖಲೀಕರಣದ ಅಗತ್ಯವಿದೆ. ಎಳೆಯ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ, ಹವ್ಯಾಸಿಗಳಿಗೆ ಸುಲಭಸಾಧ್ಯವಾಗಿ ಗ್ರಹಿಸಿ ಸಂಭಾಷಣೆಗೆ ಅನುಕೂಲವಾದ ಸಾಹಿತ್ಯಗಳನ್ನು ಬರೆದು…

Read More

ಬೆಳ್ತಂಗಡಿ : ಧರ್ಮಸ್ಥಳದ ನಿಡ್ಲೆ ಗ್ರಾಮದಲ್ಲಿ 2000ನೇ ವರ್ಷದಿಂದ ನಡೆಯುತ್ತಿರುವ ‘ಕರುಂಬಿತ್ತಿಲ್ ಶಿಬಿರ’ವನ್ನು ದಿನಾಂಕ 20 ಮೇ 2025ರಿಂದ 25 ಮೇ 2025ರವರೆಗೆ ಅಯೋಜಿಸಲಾಗಿದೆ. ವಿಶೇಷ ಕಛೇರಿಗಳು, ಶ್ರೇಷ್ಠ ಕಲಾವಿದರ ವಿಶೇಷ ಸಂದರ್ಶನಗಳು, ಪ್ರತಿ ಶಿಬಿರಾರ್ಥಿಗೂ ಮೃದಂಗ, ವಯೊಲಿನ್ ಜೊತೆ ಪ್ರದರ್ಶನ ನೀಡುವ ಅವಕಾಶ, ಸಂಗೀತ ಕ್ವಿಜ್, ಸಂಗೀತ ಪ್ರಾತ್ಯಕ್ಷಿಕೆ, ಯಕ್ಷಗಾನ ಹಾಗೂ ಇನ್ನಿತರ ನೂತನ ಚಟುವಟಿಕೆಗಳು ಈ ಸಲದ ಶಿಬಿರಾರ್ಥಿಗಳಿಗಾಗಿ ಕಾದಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಡಾ. ಎಂ. ಮೋಹನ್ ಆಳ್ವ, ಶಾಸಕ ಹರೀಶ್ ಪೂಂಜ, ಕ್ಲಿವ್ಲ್ಯಾಂಡ್ ವಿ.ವಿ. ಸುಂದರಂ, ವಿ.ವಿ. ರಮಣಮೂರ್ತಿ ಶಿಬಿರವನ್ನು ತಮ್ಮ ಗೌರವ ಉಪಸ್ಥಿತಿಯಿಂದ ಮೆರುಗು ಗೊಳಿಸಲಿದ್ದಾರೆ. ಶಿಬಿರದ ಕೊನೆಯ ದಿನ ಹೆಸರಾಂತ ವಿದ್ವಾಂಸರಾದ ವಿದ್ಯಾಭೂಷಣ ಇವರಿಂದ ಸಂಗೀತ ಕಛೇರಿ ನಡೆಯಲಿದೆ. ಕರುಂಬಿತ್ತಿಲ್ ಎಂಬ ಪ್ರಶಾಂತ ವಾತಾವರಣದಲ್ಲಿ ಪ್ರತೀ ಮೇ ತಿಂಗಳಲ್ಲಿ ಸಂಗೀತ ಶಿಬಿರದ ಮೂಲಕ ಒಂದು ಪುಟ್ಟ ಸಂಗೀತ ಲೋಕವೇ ಸೃಷ್ಟಿಯಾಗುತ್ತದೆ. ಕರುಂಬಿತ್ತಿಲ್ ಕುಟುಂಬವೇ…

Read More

ಮೈಸೂರು : ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಡಾ. ವಿಜಯಾ ದಬ್ಬೆಯವರ ಸ್ಮರಣಾರ್ಥ ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಮತ್ತು ಕಿರಿಯ ಲೇಖಕಿಯರಿಗೆ ಆಯೋಜಿಸಿದ್ದ ಸಣ್ಣಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಕವನ ಸ್ಪರ್ಧೆ ವಿಜೇತರು : ಕೆ.ಜಿ.ಎಫ್‌.ನ ಆರ್. ಬಾಲಾಜಿ ಇವರ ‘ಎಂಟರ ಮನೆಯೊಳಗೆ ಕುಂಟೆ ಬಿಲ್ಲೆಯ ಆಟ’ (ಪ್ರಥಮ), ಕೇರಳ ಕೇಂದ್ರೀಯ ವಿವಿಯ ಜೋತಿರ್ಲಕ್ಷ್ಮಿಯವರ ‘ಫಿಂಗರ್ ಪ್ರಿಂಟಿನಲ್ಲಿ ಅವಳ ವಿಶ್ವರೂಪ’ ಮತ್ತು ಬಂಟ್ವಾಳದ ಜಯಶ್ರೀ ಇಡ್ಕಿದು ಇವರ ‘ಬಾಡಿಗೆ ಕೋಣೆ’ (ಇಬ್ಬರಿಗೂ ದ್ವಿತೀಯ), ಕೊಳ್ಳೇಗಾಲ ಚಿನ್ನಪುರದ ರಶ್ಮಿ ಎಸ್. ನಾಯಕ್ ಇವರ ‘ಹೆಣ್ತನ ಶಾಪವೇ’ (ತೃತೀಯ) ಕವನಗಳು ಮೊದಲ ಮೂರು ಬಹುಮಾನ ಪಡೆದುಕೊಂಡಿವೆ. ಕಥಾ ಸ್ಪರ್ಧೆ ವಿಜೇತರು : ಸಣ್ಣಕಥಾ ಸ್ಪರ್ಧೆಯಲ್ಲಿ ಬೆಂಗಳೂರಿನ ಪಲ್ಲವಿ ಎಡೆಯೂರು ಇವರ ‘ಯುರೋಪ್ಲೊಮೆಟ್ರಿ’ (ಪ್ರಥಮ), ರಾಮನಗರದ ವಿನುತ ಕೆ.ಆರ್. ಇವರ ‘ತಾಯಿ ಅಂದರೆ’ (ದ್ವಿತೀಯ) ಮತ್ತು ಮಾಲೂರಿನ ಡಾ. ಎಸ್. ಶಿಲ್ಪರವರ ‘ಬಾಯಿ ಬಣ್ಣ’ (ತೃತೀಯ) ಮೊದಲ ಮೂರು ಬಹುಮಾನ…

Read More

ಬೆಂಗಳೂರು : ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿರುವ ‘ಮಕ್ಕಳ ರಂಗ ಹಬ್ಬ’ ದಿನಾಂಕ 20 ಮೇ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ನಾಟಕ, ರಂಗಗೀತೆ, ಕುಣಿತ ಹೀಗೆ ದಿನಪೂರ್ತಿ ಮಕ್ಕಳ ಕಲರವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ ನಾಟಕ ಪುಣ್ಯಕೋಟಿ, ಜಾನಪದ ಗೀತೆಗಳು. ಪರಿಸರ ಗೀತೆಗಳ ಗಾಯನ ನೃತ್ಯ ಮತ್ತು ಗೀತೆ ಗಾಯನ ಪ್ರಸ್ತುತಗೊಳ್ಳಲಿವೆ. ಈ ಸಮಾರಂಭವನ್ನು ಪ್ರಸಿದ್ಧ ನಟಿ ಡಾ. ಗಿರಿಜಾ ಲೋಕೇಶ್ ಇವರು ಉದ್ಘಾಟನೆಗೊಳಿಸಲಿರುವರು. ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರ ತಂಡದವರಿಂದ ಕೋಟಿಗಾನಹಳ್ಳಿ ಕಾಳಿದಾಸ ಕೆ.ವಿ. ರಂಗರೂಪ ಮತ್ತು ಭಾನುಪ್ರಕಾಶ್ ಎಸ್.ವಿ. ನಿರ್ದೇಶನದಲ್ಲಿ ‘ಹೊಸ್ಬಾಬು’ ನಾಟಕ, ಉತ್ತರ ಕನ್ನಡದ ದೇವರಕಲ್ಲಳ್ಳಿ ಸಿದ್ದಿ ಟ್ರಸ್ಟ್ (ರಿ.) ತಂಡದವರಿಂದ ಚನ್ನಕೇಶವ ಜಿ. ರಚನೆಯ ಗಿರಿಜಾ ಸಿದ್ದಿ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕಾಡಿನಲ್ಲಿ ಕಥೆ’ ನಾಟಕ, ಅಭಯಾಶ್ರಮ ವಾತ್ಸಲ್ಯ ಮಕ್ಕಳ ಮಂದಿರ ತಂಡದವರಿಂದ ಡಾ. ಮನು ಬಳಿಗಾರ್…

Read More

ಬೆಂಗಳೂರು : ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕೊಡಮಾಡುವ 2024ರ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ ಎಂಟು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಕಥಾ ವಿಭಾಗದಲ್ಲಿ ರವಿಕುಮಾರ್ ನೀಹ ಅವರ ‘ಅವು ಅಂಗೇ’, ಮಹಾಂತೇಶ್ ನವಲ್‌ಕರ್ ಅವರ ‘ಬುದ್ದ ಗಂಟೆಯ ಸದ್ದು’, ಕವನ ವಿಭಾಗದಲ್ಲಿ ಗೀತಾ ಮಂಜು ಬೆಣ್ಣೆಹಳ್ಳಿ ಅವರ ‘ಕಿರು ಬೆಳಕಿನ ಸೂಜಿ’, ಶಶಿ ತರೀಕೆರೆ ಅವರ ‘ಪ್ಯೂಷಾ’, ಪ್ರಬಂಧ ವಿಭಾಗದಲ್ಲಿ ಡಾ. ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ಕಥೆ’, ಡಾ. ಕರವೀರ ಪ್ರಭು ಕ್ಯಾಲಕೊಂಡ ಅವರ ‘ನೀವೂ ನೆಪೋಲಿಯನ್ ಆಗಿ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, ಡಾ. ಸಿ. ಸೋಮಶೇಖರ್ /ಸರ್ವಮಂಗಳಾ ದತ್ತಿ ಪ್ರಶಸ್ತಿಗೆ ಪ್ರೊ. ಧರಣೇಂದ್ರ ಕುರಕರಿ ಅವರ ‘ಜಾತ್ರಿ’ ಕಾದಂಬರಿ ಮತ್ತು ಮಹಾಂತೇಶ ಪಾಟೀಲರ ‘ಬೆಳಕು ಬೆಳೆಯುವ ಹೊತ್ತು’ ವಿಮರ್ಶೆ ಆಯ್ಕೆಯಾಗಿವೆ.

Read More

ಮಂಗಳೂರು : ಬ್ಯಾರಿ ಭಾಷೆಯಲ್ಲಿ ನಾಟಕಗಳನ್ನು ರೂಪಿಸಲು ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಕಿರುನಾಟಕ ತರಬೇತಿ ಕಾರ್ಯಾಗಾರ ಮತ್ತು ಪ್ರದರ್ಶನ ಯೋಜನೆ ಹಮ್ಮಿಕೊಂಡಿದೆ. ಮಂಗಳೂರಿನಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಬ್ಯಾರಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿನಿಮಾ ನಿರ್ದೇಶಕರು ಮತ್ತು ಹಿರಿಯ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಾಗಾರಕ್ಕೆ ಪ್ರವೇಶ ಉಚಿತವಾಗಿದ್ದು, ಆಯ್ಕೆಯಾದ ಕಲಾವಿದರಿಗೆ ತರಬೇತಿ ಸಮಯದಲ್ಲಿ ಊಟೋಪಚಾರ, ಬಸ್ ಪ್ರಯಾಣ ವೆಚ್ಚ ನೀಡಲಾಗುವುದು. ತರಬೇತಿ ಪಡೆದ ಆಯ್ದ ಕಲಾವಿದರ ತಂಡದಿಂದ ನಾಟಕ ಪ್ರದರ್ಶನ ಕಾರ್ಯಕ್ರಮವನ್ನೂ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗುವುದು. ಆಸಕ್ತರು ನೋಂದಾವಣೆಗಾಗಿ ತಮ್ಮ ಹೆಸರು, ಪೂರ್ಣ ಅಂಚೆ ವಿಳಾಸ, ವಿದ್ಯಾರ್ಹತೆ ಮತ್ತು ದೂರವಾಣಿ ಸಂಖ್ಯೆ ಸಹಿತ ಅರ್ಜಿಯನ್ನು ದಿನಾಂಕ 25 ಮೇ 2025ರ ಒಳಗಾಗಿ ತಲುಪುವಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, 2ನೇ ಮಹಡಿ, ಸಾಮರ್ಥ್ಯ ಸೌಧ, ಮಿನಿ ವಿಧಾನಸೌಧದ ಬಳಿ, ಮಂಗಳೂರು -575001 ಇಲ್ಲಿಗೆ ಅಥವಾ [email protected] ವಿಳಾಸಕ್ಕೆ ಇ-ಮೇಲ್ ಮಾಡಬಹುದು. ಮಾಹಿತಿಗೆ…

Read More

ನೀಲೇಶ್ವರಂ : ಕಲ್ಯಾಶೇರಿ ಕೃಷ್ಣನ್ ನಂಬ್ಯಾರ್ ಭಾಗವತರ್ ಸ್ಮಾರಕ ಸಂಗೀತ ಸಭೆಯ ಪ್ರಥಮ ‘ಸಂಗೀತ ಜ್ಯೋತಿಶ್ರೀ ಪ್ರಶಸ್ತಿ’ಯನ್ನು ಪ್ರಸಿದ್ಧ ಸಂಗೀತಜ್ಞ ಯೋಗೀಶ ಶರ್ಮಾ ಬಳ್ಳಪದವು ಇವರಿಗೆ ದಿನಾಂಕ 04 ಮೇ 2025ರಂದು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಸಮರ್ಪಣೆಯು ಸಂಘದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಶೇಷ ಸಮಾರಂಭದಲ್ಲಿ ಜರುಗಿತು. ಕಾರ್ಯಕ್ರಮವನ್ನು ಬೇಕಲ್ ಗೋಕುಲಂ ಗೋಶಾಲಾ ಟ್ರಸ್ಟಿನ ವಿಷ್ಣು ಪ್ರಸಾದ್ ಹೆಬ್ಬಾರ್ ಇವರು ಉದ್ಘಾಟಿಸಿ, ಪ್ರಶಸ್ತಿಯನ್ನು ಯೋಗೀಶ ಶರ್ಮಾರವರಿಗೆ ಪ್ರದಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ನರೇಂದ್ರನ್ ಕರಿಂಗಾಟ್ ವಹಿಸಿದ್ದರು ಹಾಗೂ ಪ್ರೊ. ಕೆ.ಪಿ. ಜಯರಾಜನ್ ಅವರು ಮುಖ್ಯ ಪ್ರಭಾಷಣ ನೀಡಿದರು. ಯೋಗೀಶ ಶರ್ಮಾ ಬಳ್ಳಪದವು ಇವರ ಸಾಧನೆಗಳ ಪರಿಚಯವನ್ನು ಶ್ರೀಮತಿ ನಿರಂಜಿನಿ ಜಯರಾಜ್ ನೀಡಿದರು. ಸಂಗೀತ ಕ್ಷೇತ್ರದಲ್ಲಿ ಸುದೀರ್ಘ ಕಾಲದ ನಿಷ್ಠೆಯಿಂದ ಮಾಡಿದ ಕೆಲಸಗಳು, ವೈಶಿಷ್ಟ್ಯಪೂರ್ಣ ಕಲಾಪ್ರದರ್ಶನ ಮತ್ತು ಗುರುವಾಗಿ ನೀಡಿದ ಕೊಡುಗೆಗಳಿಗೆ ಯೋಗೀಶ ಶರ್ಮಾರವರಿಗೆ ಈ ಪ್ರಶಸ್ತಿ ಲಭಿಸಿದೆ. ಎಂ.ಕೆ. ಗೋಪಕುಮಾರ್, ಕೆ.ಎಂ. ಗೋಪಾಲಕೃಷ್ಣನ್ ಮುಂತಾದ ಗಣ್ಯರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ…

Read More