Author: roovari

ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ಅವಿರತವಾದ ಸಾಧನೆ, ಸತತ ಅಭ್ಯಾಸ, ಅರ್ಪಣಾಭಾವಗಳಿಂದ ಮಾತ್ರ ಸಾಧ್ಯ. ಕಲಾವಿದನು ಪಾತ್ರವಾಗಬೇಕಾದರೆ ಅದರ ಸ್ವಭಾವವೇನೆಂದು ಅರಿತು ಅಭ್ಯಸಿಸಬೇಕು. ಆಳವಾದ ಅಧ್ಯಯನ ಅತ್ಯಗತ್ಯ. ಒಂದರ್ಥದಲ್ಲಿ ‘ಪರಕಾಯ ಪ್ರವೇಶ’. ಇಲ್ಲವಾದರೆ ಪಾತ್ರವು ಪೇಲವವಾಗುವುದನ್ನು ನಾವು ಕಾಣಬಹುದು. ಹೀಗೆ ಸತತ ಪರಿಶ್ರಮದಿಂದ, ಅಧ್ಯಯನದಿಂದ ಉತ್ತಮ ವೇಷಧಾರಿಯಾಗಿ ಹೆಸರನ್ನು ಗಳಿಸಿಕೊಂಡವರು ವೈ ಎಲ್ ವಿಶ್ವರೂಪ ಮಧ್ಯಸ್ಥ. 07.04.1989ರಂದು ಶ್ರೀಯುತ ವೈ ಲಕ್ಷ್ನೀನಾರಾಯಣ ಮಧ್ಯಸ್ಥ ಹಾಗೂ ಶ್ರೀಮತಿ ಮಂಜುಳ ಇವರ ಮಗನಾಗಿ ಜನನ. ಬಿ ಕಾಂ ಇವರ ವಿದ್ಯಾಭ್ಯಾಸ. ತಂದೆ ವೈ ಲಕ್ಷ್ನೀನಾರಾಯಣ ಮಧ್ಯಸ್ಥ ಅವರ ಪ್ರೇರಣೆಯಿಂದ ವಿಶ್ವರೂಪ ಅವರು ಯಕ್ಷಗಾನ ರಂಗಕ್ಕೆ ಬಂದರು. ಶ್ರೀಯುತ ರಾಧಾಕೃಷ್ಣ ನಾಯ್ಕ ಚೇರ್ಕಾಡಿ, ಶ್ರೀಯುತ ಗಣೇಶ ನಾಯ್ಕ ಚೇರ್ಕಾಡಿ, ಶ್ರೀಯುತ ಹಿರಿಯಣ್ಣ ಶೆಟ್ಟಿಗಾರ್, ಮಂದಾರ್ತಿ ಇವರ ಬಡಗುತಿಟ್ಟು ಯಕ್ಷಗಾನ ಗುರುಗಳು. ಶ್ರೀಯುತ ಮಹೇಶ್ ಕುಮಾರ್…

Read More

06 ಏಪ್ರಿಲ್ 2023, ಮೈಸೂರು: ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಏಪ್ರಿಲ್ 08 ಮತ್ತು 09ರಂದು ಸಂಜೆ 06.3೦ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ 2022-23ನೇ ಸಾಲಿನ ರಂಗಾಭ್ಯಾಸಿಗಳ ಎರಡನೇ ಅಭ್ಯಾಸಿ ಪ್ರಯೋಗ ಆಂಟನ್ ಚೆಕಾವ್ ಅವರ ರಚನೆಯ ‘ಚೆರ್ರಿ ತೋಟ’ ಎಂಬ ನಾಟಕವು ಎನ್.ಎಸ್.ಡಿ. ಪದವೀಧರೆ ಯಶಸ್ವಿನಿ ರಾವ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ಅನುವಾದ ಶ್ರೀ ವೆಂಕಟೇಶ್ ಪ್ರಸಾದ್ ಹಾಗೂ ವಿನ್ಯಾಸ ಶ್ರೀ ಅರುಣ್ ಮೂರ್ತಿ…

Read More

06 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾಸಂಘಟನೆ ಇದರ 4ನೇ ದಿನದ ರಂಗೋತ್ಸವದಲ್ಲಿ ಕೂಡ್ಲಿ ಹೋಳಿ ತಂಡ ಬಾರ್ಕೂರು ಇವರಿಂದ ಹೋಳಿ ಕುಣಿತ ಕಲಾಪ್ರಕಾರ ಮಂಗಳವಾರ 04-04-2023ರಂದು ಪ್ರದರ್ಶನಗೊಂಡಿತು. ನಂತರ ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದೆ ಸುಧಾ ಮಣೂರು ಜೊತೆಯಾದರು. ಆ ವೇಳೆ ಮಾತನಾಡಿದ ಅವರು “ರಂಗಭೂಮಿಯನ್ನ ಸ್ಥಳೀಯವಾಗಿ ಯಾಕೆ ಕಟ್ಟೋಕಾಗಲ್ಲ, ರಂಗಭೂಮಿಯನ್ನ ಗ್ರಾಮೀಣ ಭಾಗದವರೆಗೂ ತಲುಪಿಸಬೇಕು” ಎಂದರು. ಇದೇ ವೇಳೆ ಸುಮನಸಾ ಕೊಡವೂರು (ರಿ.) ತಂಡ ಅಭಿನಯಿಸಿದ ನಿತೀಶ್ ಕೋಟ್ಯಾನ್ ಬಂಟ್ವಾಳ ನಿರ್ದೇಶನದ ‘ಅರುಂಧತಿ ಆಲಾಪ’ ನಾಟಕ ಪ್ರದರ್ಶನಗೊಂಡು ನಾಲ್ಕು ದಿನದ ಮಂದಾರದ ರಂಗೋತ್ಸವ ಸಮಾರೋಪಗೊಂಡಿತು.

Read More

06 ಏಪ್ರಿಲ್ 2023, ಬೆಂಗಳೂರು: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಅರ್ಪಿಸುವ ”ಮಂಜುನಾದ” ಸಂಗೀತ ಕಛೇರಿ ಮತ್ತು ”ಲಲಿತ ಕಲಾ ಪೋಷಕ ಮಣಿ -2022” ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 07-04-2023, ಶುಕ್ರವಾರ ಸಮಯ ಬೆಳಗ್ಗೆ ಗಂಟೆ 9:25ರಿಂದ 12:30ರವರೆಗೆ ಸೇವಾ ಸದನ ಸಭಾಂಗಣ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್‌ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರಚಿಸಿದ ಸುಮಾರು 25 ಕೃತಿಗಳನ್ನು ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಇದೇ ಕೃತಿಗಳನ್ನು ಆಧರಿಸಿ ನಡೆಯುತ್ತಿರುವ 11ನೆಯ ಸಂಗೀತ ಕಛೇರಿ ಇದಾಗಿದೆ. “ಮಂಜುನಾದ” ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಅದಿತಿ ಬಿ. ಪ್ರಹ್ಲಾದ್, ಬೆಂಗಳೂರು, ಶ್ರೇಯಾ ಕೊಳತ್ತಾಯ, ಸುರತ್ಕಲ್, ಉಷಾ ರಾಮಕೃಷ್ಣ ಭಟ್, ಮಣಿಪಾಲ, ದಿವ್ಯ…

Read More

06 ಏಪ್ರಿಲ್ 2023, ಮಂಗಳೂರು: ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಬರೆದ ಕರಾವಳಿ ಜನರ ತೀರ್ಪು (1952-2022) ಕುರಿತ ‘ಮತ ಪೆಟ್ಟಿಗೆ’ ಕೃತಿಯನ್ನು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ದಿನಾಂಕ 05-04-2023 ಬುಧವಾರ ಮಂಗಳೂರಿನ ಜಿ.ಆರ್‌. ಮಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಕರಾವಳಿ, ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಎಸ್. ಗಣೇಶ್ ರಾವ್ ಲೋಕಾರ್ಪಣೆಗೊಳಿಸಿದರು. ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್‌ ಶೆಟ್ಟಿಯವರು ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿದರು. ಕೃತಿಕಾರ ಪಿ.ಬಿ.ಹರೀಶ್ ರೈ ಪ್ರಾಸ್ತಾವಿಕ ಮಾತನಾಡಿ “ಕರಾವಳಿ ರಾಜಕೀಯದ ಚಿತ್ರಣವನ್ನೂ ಇದರಲ್ಲಿ ನೀಡಲಾಗಿದೆ” ಎಂದರು. ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಶಾಂತರಾಮ ಶೆಟ್ಟಿ ಮತ್ತು ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಪತ್ರಕರ್ತ ಬಿ.ಎನ್. ಪುಷ್ಪರಾಜ್ ನಿರೂಪಿಸಿ, ಆಕೃತಿ ಪ್ರಕಾಶನದ ಪ್ರಕಾಶಕ ಕಲ್ಲೂರು ನಾಗೇಶ್ ವಂದಿಸಿದರು.

Read More

ವಿಮರ್ಶಕರ ಬಗ್ಗೆ: ಡಾ. ರವಿಶಂಕರ ಜಿ.ಕೆ. ಡಾ.ರವಿಶಂಕರ ಜಿ.ಕೆ. ಪುತ್ತೂರು ತಾಲೂಕಿನ ಪಾಣಾಜೆಯವರಾಗಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ) ಇಲ್ಲಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ‘ಕನ್ನಡ ಸಾಹಿತ್ಯದಲ್ಲಿ ಪ್ರಾಣಿರೂಪಕಗಳು: ಅನ್ಯತೆಯ ಅನುಸಂಧಾನ’ ಎಂಬ ವಿಷಯದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದಿರುವ ಇವರು ‘ಹವಿಗನ್ನಡದ ಅನನ್ಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ’, ‘ಅಂತಾರಾಷ್ಟ್ರೀಯ ಕೃಷಿ-ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ’ ಕೃತಿಗಳನ್ನು ಬರೆದಿದ್ದಾರೆ. ಚಿಂತನ ಬಯಲು, ಅಭಿಜಾತ ಕನ್ನಡ, ವಿಶ್ವವಾಣಿ, ವಿಜಯಕರ್ನಾಟಕ, ಉದಯವಾಣಿ, ಸುಧಾ, ಮಂಗಳ, ಕಸ್ತೂರಿ, ಹಸಿರುವಾಸಿ, ಕಾರವಲ್‌ ಮುಂತಾದ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ವಾಸುದೇವ ನಾಡಿಗ್‌ ಕನ್ನಡ ಕಾವ್ಯ ಕ್ಷೇತ್ರಕ್ಕೆ ಚಿರಪರಿಚಿತವಾದ ಹೆಸರು. ʼವೃಷಭಾಚಲದ ಕನಸುʼ ಕವನ ಸಂಕಲನದ ಮೂಲಕ ಕಾವ್ಯ ಕೃಷಿ ಆರಂಭಿಸಿದ ವಾಸುದೇವ ನಾಡಿಗರು ʼಹೊಸ್ತಿಲು ಹಿಮಾಲಯದ ಮಧ್ಯೆʼ ʼಭವದ ಹಕ್ಕಿʼ ʼವಿರಕ್ತರ ಬಟ್ಟೆಗಳುʼ, ʼನಿನ್ನ ಧ್ಯಾನದ ಹಣತೆʼ, ʼಅಲೆ ತಾಕಿದರೆ ದಡʼ, ʼಅವನ ಕರವಸ್ತ್ರʼ ಮುಂತಾದ ಕವನಸಂಕಲನಗಳ ಮೂಲಕ ಗುರುತಿಸಿಕೊಂಡಿದ್ದಾರೆ.…

Read More

06 ಏಪ್ರಿಲ್ 2023, ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಆಸಕ್ತ ಕಥೆಗಾರರಿಗೆ ಸಣ್ಣ ಕತೆಗಳನ್ನು ಬರೆದು ಕಳಿಸಲು ಆಹ್ವಾನಿಸಿತ್ತು. ಸುಮಾರು 400ಕ್ಕೂ ಹೆಚ್ಚು ಸಣ್ಣ ಕಥೆಗಳು ಬಂದಿದ್ದು, ಇದರಲ್ಲಿ ಮೊದಲ ಹಂತದಲ್ಲಿ 117 ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ‘ನೂರಾರು ಲೇಖಕರ ನೂರಾರು ಕಥೆಗಳು’ ಎಂಬ ಕಥಾ ಸಂಕಲನ ಸಿದ್ಧವಾಗಿದೆ. ದಿನಾಂಕ 08-04-2023 ಶನಿವಾರ ಸಂಜೆ 5:00ಕ್ಕೆ ಸರಿಯಾಗಿ ಉಡುಪಿಯ ಪವನ್ ರೂಫ್ ಟಾಪ್ ಕಿದಿಯೂರು ಹೋಟೆಲ್ ನಲ್ಲಿ ಪ್ರಸಿದ್ಧ ಕಾದಂಬರಿಕಾರರು, ಸಾಹಿತಿಯಾದ ಗಿರೀಶ್ ರಾವ್ ಹತ್ತಾರ್ (ಜೋಗಿ) ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಗೌರವಾಧ್ಯಕ್ಷರಾದ ಉಡುಪಿ ವಿಶ್ವನಾಥ ಶೆಣೈಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ವಸಂತ ಗಿಳಿಯಾರುರವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರೇಂದ್ರ ನಾಯಕ್ ಲೆಕ್ಕ ಪರಿಶೋಧಕರು, ಉಡುಪಿ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಅಧ್ಯಕ್ಷರಾದ ಪ್ರೊ. ಶಂಕರ್ ಇವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಕಿರು ಪ್ರಹಸನವಿರುತ್ತದೆ.

Read More

06 ಏಪ್ರಿಲ್ 2023, ಪೆರ್ಲ: ಶಿವಾಂಜಲಿ ಕಲಾಕೇಂದ್ರ (ರಿ.) ಪೆರ್ಲ ಇದರ ನಿರ್ದೇಶಕಿ ವಿದುಷಿ ಕಾವ್ಯಾ ಭಟ್ ಇವರು ಏಪ್ರಿಲ್ 8 ಮತ್ತು 9ರಂದು ಎರಡು ದಿನಗಳ “ಭರತನಾಟ್ಯಂ ಕಾರ್ಯಾಗಾರ”ವನ್ನು ಅನ್ನಪೂರ್ಣ ಹಾಲ್, ಶ್ರೀ ದುರ್ಗಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರ, ಇಡಿಯಡ್ಕ, ಪೆರ್ಲದಲ್ಲಿ ಹಮ್ಮಿಕೊಂಡಿದ್ದಾರೆ. ನಾಟ್ಯಾರಾಧನಾ ಕಲಾಕೇಂದ್ರ ಉರ್ವದ ನಿರ್ದೇಶಕಿ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಲಿದ್ದಾರೆ. ಇವರದೇ ಪರಿಕಲ್ಪನೆ, ರಚನೆ, ನೃತ್ಯ ಸಂಯೋಜನೆ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ‘ಜತಿಸ್ವರ’, ‘ಪದ’ ಮತ್ತು ‘ಜಾವಳಿ’ಗಳ ತರಬೇತಿ ಪಡೆಯುತ್ತಿದ್ದಾರೆ. ವಿದುಷಿ ಸುಮಂಗಲಾ ರತ್ನಾಕರ್ ಇವರು ತಮ್ಮ ಏಳರ ಎಳವೆಯಿಂದಲೇ ಭರತನಾಟ್ಯಕ್ಕೆ ಪಾದಾರ್ಪಣೆ ಮಾಡಿ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ನಿರ್ದೇಶನದಲ್ಲಿ ನಡೆಯುವ ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾಕೇಂದ್ರ ಈಗ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿದೆ. ನೃತ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದ ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಯಕ್ಷಗಾನ, ತಾಳಮದ್ದಲೆಯಲ್ಲಿ ನುರಿತ ಇವರು…

Read More

06 ಏಪ್ರಿಲ್ 2023, ಪುತ್ತೂರು: ಸನಾತನ ಸಂಪ್ರದಾಯದಲ್ಲಿ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮನು ಅಯೋಧ್ಯೆಯಲ್ಲಿ ಜನಿಸಿದನು ಎಂಬುದು ಹಿಂದೂ ಧರ್ಮದ ನಂಬಿಕೆ. ಈ ದಿನ ಶ್ರೀರಾಮನಿಗೆ ವಿಶೇಷವಾದ ಪೂಜೆ ಮತ್ತು ವೃತಗಳು ನಡೆಯುತ್ತವೆ. ರಾಮನವಮಿಯಂದು ವಿಶೇಷವಾಗಿ ದ್ವಾರಕ ಪ್ರತಿಷ್ಠಾನದ ವತಿಯಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರೀತಿಕಲಾ ಅವರಿಂದ “ಸಂಪೂರ್ಣ ರಾಮಾಯಣ” ನೃತ್ಯ ರೂಪಕ ಕಾರ್ಯಕ್ರಮ ಮುಕ್ರಂಪಾಡಿ ಗೋಕುಲ ಬಡಾವಣೆಯ ‘ನಂದಗೋಕುಲ’ ವೇದಿಕೆಯಲ್ಲಿ ದಿನಾಂಕ 30-03-2023ರಂದು ನಡೆಯಿತು. ದ್ವಾರಕ ಪ್ರತಿಷ್ಠಾನದ ಶ್ರೀ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗೋಪಾಲಕೃಷ್ಣ ಭಟ್ ಇವರ ಮಾತೃಶ್ರೀ ಹಿರಿಯರಾದ ಲಕ್ಷ್ಮೀಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಷ್ಠಾನದಿಂದ ಅದ್ವಿತ್ ಕಲ್ಲೂರಾಯ ರಾಮನವಮಿಯ ಕುರಿತು ಮಾತನಾಡಿದರು. ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಹಿರಿಯ ವಿದ್ಯಾರ್ಥಿನಿ ಅಪೂರ್ವ ಗೌರಿ ನೃತ್ಯ ಗುರುಗಳನ್ನು ಪರಿಚಯಿಸಿದರು. ಡಾ. ಸದಾಶಿವ ಭಟ್ ಪೆರ್ಲ ಮತ್ತು ಡಾ.ಪ್ರತಿಭಾ ಕಲ್ಲೂರಾಯ ನೃತ್ಯ…

Read More

06 ಏಪ್ರಿಲ್ 2023, ಮಂಗಳೂರು: ಸುರತ್ಕಲ್ ಗೋವಿಂದದಾಸ ಕಾಲೇಜು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಯಾನ 2023’. ಕಾರ್ಯಕ್ರಮ ಏಪ್ರಿಲ್ 7ರಿಂದ 10ರವರೆಗೆ ಕಾಲೇಜಿನ ಎಚ್.ಜಿ.ಕೆ. ರಾವ್ ರಂಗ ಮಂದಿರದ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಕೃಷ್ಣಮೂರ್ತಿ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 7ರಂದು ಬೆಳಗ್ಗೆ 9ಕ್ಕೆ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಚ್‌. ಅಧ್ಯಕ್ಷತೆ ವಹಿಸಲಿದ್ದಾರೆ. ಸುರತ್ಕಲ್‌ನ ಇಡ್ಯಾ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಐ. ರಮಾನಂದ ಭಟ್‌ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಅಗರಿ ವೈ.ವಿ. ರತ್ನಾಕರ ರಾವ್, ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ, ಪ್ರಿನ್ಸಿಪಾಲ್ ಲಕ್ಷ್ಮೀ ಪಿ., ಕಾಲೇಜಿನ ಅಲ್ಯುಮ್ನಿ ಅಸೋಸಿಯೇಶನ್ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದರು. ಏಪ್ರಿಲ್ 10ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿಂದೂ…

Read More