Subscribe to Updates
Get the latest creative news from FooBar about art, design and business.
Author: roovari
05 ಏಪ್ರಿಲ್ 2023, ಕೋಲಾರ: ಆದಿಮ ಸಾಂಸ್ಕೃತಿಕ ಕೇಂದ್ರ, ಶಿವಗಂಗೆ, ತೇರಹಳ್ಳಿ ಬೆಟ್ಟ, ಮಡೇರ ಹಳ್ಳಿ ಅಂಚೆ, ಕೋಲಾರ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಹುಣ್ಣಿಮೆ ಹಾಡು 191 ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 06-04-2023 ಗುರುವಾರ ಸಂಜೆ 7-00ಕ್ಕೆ ರಂಗ ಪ್ರದರ್ಶನ ಕಲಾ ಕೇಂದ್ರ, ಬೆಂಗಳೂರು ಇವರಿಂದ ವಿಲಿಯಮ್ ಶೇಕ್ಸ್ ಪಿಯರ್ ರಚನೆಯ “ಮ್ಯಾಕ್ ಬೆತ್” ನಾಟಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಂಗ ನಿರ್ದೇಶಕರಾದ ಮೈಕೊ ಶಿವಶಂಕರ್, ಶಿಕ್ಷಕರ ಗೆಳೆಯರ ಬಳಗ ಕೋಲಾರ ಇದರ ಅಧ್ಯಕ್ಷರಾದ ಎಸ್. ನಾರಾಯಣ ಸ್ವಾಮಿ ಹಾಗೂ ರಂಗ ಇಂಚರ ಟ್ರಸ್ಟ್, ಕೋಲಾರ ಇದರ ಅಧ್ಯಕ್ಷರಾದ ಡಾ. ಇಂಚರ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಈ ನಾಟಕವನ್ನು ರಾಮಚಂದ್ರ ದೇವ ಕನ್ನಡಕ್ಕೆ ಅನುವಾದಿಸಿದ್ದು, ಮೈಕೊ ಶಿವಶಂಕರ್ ನಿರ್ದೇಶಿಸಿ, ವೆಂಕಟೇಶ್ ಜೋಶಿ ಮತ್ತು ಸುಮುಖ್ ಭಾರದ್ವಾಜ್ ರವರ ಸಂಗೀತ ಈ ನಾಟಕಕ್ಕಿದೆ. ರಾಮಕೃಷ್ಣ ಬೆಳ್ತೂರು ವಸ್ತ್ರ ವಿನ್ಯಾಸ/ ಪ್ರಸಾಧನದಲ್ಲಿ ಸಹಕರಿಸಲಿದ್ದು, ರವಿಶಂಕರ್ ಮತ್ತು…
04 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇದರ 2ನೇ ದಿನದ ರಂಗೋತ್ಸವದಲ್ಲಿ ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರಿಂದ “ಹೂವಿನಕೋಲು” ಕಲಾಪ್ರಕಾರ ಭಾನುವಾರ 02-04-2023ರಂದು ಪ್ರದರ್ಶನಗೊಂಡಿತು. ನಂತರ ಅತಿಥಿಯಾಗಿ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಜೊತೆಗಿದ್ದು, ಸಾಂಸ್ಕೃತಿಕ ಮತ್ತು ಆಧ್ಯಾತ್ಮದ ಆಯಾಮದ ಕೊರತೆಯಿದೆ. ಅದೇ ಒಂದು ದೊಡ್ಡ ಸೇವೆ. ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಎರಡನ್ನೂ ಮಾಡ್ತಾ ಇರೊ ಮಂದಾರದ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ವೇಳೆ ಮಂದಾರ (ರಿ.)ದ ತಂಡಕ್ಕೆ ಲೋಗೋವನ್ನು ರೂಪಿಸಿದ ಶ್ರೀ ಉದಯ ಗಾಂವ್ಕರ್ ಇವರಿಗೆ ಮಂದಾರದ ಪರವಾಗಿ ರಂಗ ಗೌರವ ಸಲ್ಲಿಸಲಾಯಿತು. ತದನಂತರ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪೆನಿ (ರಿ.) ಬಿಜಾಪುರ ಇವರಿಂದ ಶಕೀಲ್ ಅಹಮದ್ ನಿರ್ದೇಶನದ “ಅನಾಮಿಕನ ಸಾವು” ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
4 ಏಪ್ರಿಲ್ 2023, ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ”ಪಾರ್ಥ ಸಾರಥ್ಯ” ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ರಾಜಗೋಪುರದಲ್ಲಿ ದಿನಾಂಕ 03-04-2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ, ಗುರುಮೂರ್ತಿ ಅಮ್ಮಣ್ಣಾಯ, ಅಚ್ಯು ತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ) ಗುಂಡ್ಯಡ್ಕ ಈಶ್ವರ ಭಟ್ (ಕೌರವ) ಕು೦ಬ್ಳೆ ಶ್ರೀಧರ್ ರಾವ್ (ಅರ್ಜುನ) ಗುಡ್ಡಪ್ಪ ಬಲ್ಯ (ಬಲರಾಮ) ಸಹಕರಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು.
04 ಏಪ್ರಿಲ್ 2023, ಮಂಗಳೂರು: ದಿನಾಂಕ 01-04-23ರಂದು ಕರಾವಳಿ ಲೇಖಕಿಯರ-ವಾಚಕಿಯರ ಸಂಘದಲ್ಲಿ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್ ರವರ ‘ಗೃಹಾವರಣ’ ಎಂಬ ಕೃತಿಯ ಲೋಕಾರ್ಪಣೆಯ ಕಾರ್ಯಕ್ರಮ ನಡೆಯಿತು. ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿಯನ್ನು ಬಿಡುಗಡೆಗೊಳಿಸಿ, “ಗೃಹದೊಳಗಿನ ಹಲವು ಮುಖಗಳು ಕೃತಿಯಲ್ಲಿ ಅನಾವರಣಗೊಂಡಿವೆ. ಮನೆ ಎಂದರೆ ಅದು ಕಲ್ಲು ಕಟ್ಟಡದ ಭೌತಿಕ ಸ್ವರೂಪವಲ್ಲ. ಮನಸ್ಸುಗಳನ್ನು ಬೆಸೆಯುವ ಮೂಲಕ ಸಂಬಂಧಗಳನ್ನು ಹೆಣೆಯುವ ಆಶ್ರಯ ತಾಣ. ‘ಗೃಹಾವರಣ’ ಮನಸ್ಸುಗಳನ್ನು ಬೆಸೆಯುವ ಕಾಯಕ ಗೈದ ಪ್ರೀತಿಯ ಕೃತಿ” ಎಂದರು. ಸೈಂಟ್ ಆಗ್ನೆಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜ ಕೆ. ಇವರು ಕೃತಿಯನ್ನು ಪರಿಚಯ ಮಾಡಿ “ಇವರ ಬರಹಗಳ ಲಾಲಿತ್ಯಮಯ ಶೈಲಿ ಓದುಗರನ್ನು ಸೆಳೆಯುತ್ತದೆ. ಗೃಹಿಣಿ ಗೃಹ ಮುಚ್ಯೆತೆ ಎಂದ ಪ್ರಾಜ್ಞರ ಮಾತನ್ನು ನೆನಪಿಸಿಕೊಂಡು ಗೃಹ ನಿರ್ವಹಣೆಯಲ್ಲಿ ಗೃಹಣಿಯ ಪಾತ್ರ ಮಹತ್ವದ್ದು. ಆಕೆಯ ಸಮಯ, ಶ್ರಮ, ಪ್ರೇಮ, ಮನೆಯೊಳಗಿನ ಭಾವಜಗತ್ತನ್ನು ಅವರಿಸಿಕೊಳ್ಳುತ್ತದೆ” ಎಂದರು. ಕೃತಿಯ ಲೇಖಕಿ ವಿಜಯಲಕ್ಷ್ಮಿ ಶಾನುಭಾಗ್…
03-04-2023,ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಗಳು ನಡೆಸಿಕೊಂಡು ಬರುತ್ತಿರುವ ಉದಯರಾಗದ 42ನೇ ಸಂಗೀತ ಕಚೇರಿಯು ಸುರತ್ಕಲ್ ನ ಅನುಪಲ್ಲವಿಯಲ್ಲಿ ದಿನಾಂಕ 02-04- 2022ರಂದು ನಡೆಯಿತು. ಪುತ್ತೂರಿನ ತನ್ಮಯಿ ಉಪ್ಪಂಗಳ ಸುಶ್ರಾವ್ಯವಾದ ಹಾಡುಗಾರಿಕೆ ಕಚೇರಿ ನಡೆಸಿಕೊಟ್ಟರು. ಇವರಿಗೆ ಗೌತಮ್ ಭಟ್ ಪಿ.ಜಿ ವಯಲಿನ್ ನಲ್ಲಿ ಮತ್ತು ಅಜಯ ಕೃಷ್ಣ ಉಪ್ಪಂಗಳ ಮೃದಂಗದಲ್ಲಿ ಸಹಕರಿಸಿದರು.ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಲಾವಿದರನ್ನು ಪರಿಚಯಿಸಿ ಕೃತಜ್ಞತೆ ಸಲ್ಲಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ ರಾಜಮೋಹನ್ ರಾವ್, ಸಚ್ಚಿದಾನಂದ ಕೆ, ರಘುರಾಮ್ ರಾವ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು .ರಘುರಾಮ ಮತ್ತು ಸುಮನ ಉಪ್ಪಂಗಳ ಇವರ ಪುತ್ರಿಯದ ಕು. ತನ್ಮಯ ಉಪ್ಪಂಗಳ ಇವರು ವಿದುಷಿ ಶ್ರೀಮತಿ ವೀಣಾ ರಾಘವೇಂದ್ರ ಮತ್ತು ವಿದುಷಿ ಶ್ರೀಮತಿ ಶೈಲಜಾ ಶ್ರೀರಾಮ್ ಇವರಿಂದ ಸಂಗೀತಾಭ್ಯಾಸವನ್ನು ಮತ್ತು ವಿದ್ವಾನ್ ವೇಣುಗೋಪಾಲ ಶಾನುಭಾಗ್ ಮತ್ತು ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಇವರುಗಳಿಂದ ವಾಯ್ಲಿನ್ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 97…
ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ಯಕ್ಷಗಾನ ಮಹಿಳಾ ಪ್ರಸಂಗಕರ್ತರು ಕಾಣ ಸಿಗುವುದು ಅಪರೂಪ. ಇಂತಹ ಪ್ರಸಂಗಕರ್ತೆ ಪೈಕಿ ಮಿಂಚುತ್ತಿರುವವರು ಶ್ರೀಮತಿ ಶಾಂತಾ ವಾಸುದೇವ ಪೂಜಾರಿ. ಮಹಾಬಲ ಪೂಜಾರಿ, ದೇವಲ್ಕುಂದ ಹಾಗೂ ನೀಲು ಪೂಜಾರ್ತಿ,ಆನಗಳ್ಳಿ ಇವರ ಮಗಳಾಗಿ 11.07.1976ರಂದು ಜನನ. ಶ್ರೀ ಶಾರದ ಕಾಲೇಜು, ಬಸ್ರೂರುನಲ್ಲಿ ಬಿ.ಎ.ಪದವಿ ಹಾಗೂ ಕಂಪ್ಯೂಟರ್ ಶಿಕ್ಷಣ ಇವರ ವಿದ್ಯಾಭ್ಯಾಸ. ತವರುಮನೆ, ಅಜ್ಜ ಬಳ್ಕೂರು ನಂದಿ ಪೂಜಾರಿ ಮತ್ತು ಅಜ್ಜಿ ರುಕ್ಮಿಣಿ ಪೂಜಾರ್ತಿ ಯವರಿಂದ ರಕ್ತಗತವಾಗಿ ಹರಿದು ತಾಯಿಯಿಂದ ವರಪ್ರಸಾದವಾಗಿ ಪಡೆದ ಯಕ್ಷಗಾನದ ಮೇಲಿನ ಅದಮ್ಯ ಪ್ರೇಮ ಬರವಣಿಗೆಯಲ್ಲಿ ಚಿರಂತನವಾಯಿತು. ತಂದೆ ಮಹಾಬಲ ಪೂಜಾರಿಯವರ ಕಲಾಸೇವೆ, ಸೋದರಮಾವ ಕೃಷ್ಣ ಪೂಜಾರಿಯವರು ಮತ್ತು ಅಣ್ಣ ರವಿಕುಮಾರ್, ಹಾಗೂ ತಮ್ಮ ಸಂತೋಷ ಕುಮಾರ್ ರವರು ಶ್ರೀ ಲಕ್ಷ್ಮೀ ಚೆನ್ನಕೇಶವ ಯಕ್ಷಗಾನ ಕಲಾ ಮಂಡಳಿ, ಆನಗಳ್ಳಿ ಯಲ್ಲಿ ಹವ್ಯಾಸಿ ಕಲಾವಿದರಾಗಿ ಸಲ್ಲಿಸಿದ ಸೇವೆ ಇವರ ಬರವಣಿಗೆಗೆ ಪ್ರೇರಣೆ. ಶ್ರೀಮತಿ ಶಾಂತಾ ವಾಸುದೇವ ಪೂಜಾರಿ ಅವರು ಬರೆದಿರುವ…
3 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ-ಬೈಕಾಡಿ ಪ್ರಸ್ತುತ ಪಡಿಸುವ ‘ರಂಗೋತ್ಸವ-2023’ ಕಾರ್ಯಕ್ರಮವು ಶನಿವಾರ 01-04-2023ರಂದು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಸದಾಶಯದ ರಂಗಗೀತೆಗಳಿಂದ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ರಂಗಭೂಮಿ ಭಾವನೆಗಳ ಸಮುದ್ರ, ಮಾನವನ ಅಂತಃಕರಣ ಕಲಕಿ ಅಂತರಂಗ ಅವಿಭಾವಗೊಳಿಸಿ ವೈಶಾಲ್ಯತೆ ಮೂಡಿಸಲು ಸಶಕ್ತವಾದ ಮಾಧ್ಯಮ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದು” ಅಂತಾ ಹೇಳುತ್ತಾ “ನಮ್ಮ ಜಿಲ್ಲೆಯ ಈ ಮಂದಾರ ಸಂಘಟನೆ ಕಲಾ ಚಟುವಟಿಕೆಯಲ್ಲಿ ಇನ್ನಷ್ಟು ತಮ್ಮನ್ನು ತಾವು ತೊಡಗಿಸಿಕೊಳ್ಳಲಿ” ಅಂತಾ ಹಾರೈಸಿದರು. ಈ ವೇಳೆ ರಂಗಭೂಮಿ ಕಲಾವಿದರಾದ ಆಲ್ವಿನ್ ಅಂದ್ರಾದೆ, ಉದ್ಯಮಿಗಳಾದ ಎಸ್. ನಾರಾಯಣ್, ಎಸ್.ಎಮ್.ಎಸ್.ಪ.ಪೂ. ಕಾಲೇಜು ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಂತರ ಅಗಲಿದ ಸಹಕಲಾವಿದ ಕನಸು ಕಾರ್ತಿಕ್ ಗೆ ರಂಗಗೀತೆಗಳ ಮೂಲಕ ರಂಗನಮನ ಸಲ್ಲಿಸಲಾಯಿತು. ಇದೇ ಸಂಧರ್ಭದಲ್ಲಿ ಮನು…
1 ಏಪ್ರಿಲ್ 2023, ಬೆಂಗಳೂರು: ದಿನಾಂಕ 29-03-2023 ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಿರಿಯ ಸಾಹಿತಿ ಡಾ. ವೈದೇಹಿಯವರಿಗೆ “ನೃಪತುಂಗ ಸಾಹಿತ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಜಾನಕಿ ಶ್ರೀನಿವಾಸಮೂರ್ತಿ ಎಂಬ ನಿಜ ನಾಮದೇಯದ, ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಯನ್ನು ನೀಡಿದ ಲೇಖಕಿ ಡಾ. ವೈದೇಹಿಯವರು ದ.ಕ.ಜಿಲ್ಲೆಯ ಕುಂದಾಪುರದವರು. ಕನ್ನಡ ಕಾವ್ಯ ಲೋಕಕ್ಕೆ ಹೊಸ ತಿರುವನ್ನು ಕೊಟ್ಟವರು ಇವರು. ಅವರ ಕವಿತೆಗಳು ಸೂಕ್ಷ್ಮ ಸಂವೇದನೆಗಳ ಜೊತೆಗೆ ಮಾನವತಾವಾದದ ವಿಸ್ತಾರವನ್ನು ಕನ್ನಡ ಕಾವ್ಯ ಪ್ರಪಂಚಕ್ಕೆ ನೀಡಿದವು. ಇದರೊಂದಿಗೆ ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ನೃಪತುಂಗ ಅತ್ಯಂತ ಶ್ರೇಷ್ಟ ಹಾಗೂ ಮೌಲಿಕ ಸಾಹಿತ್ಯ ಪ್ರಶಸ್ತಿ. ಕನ್ನಡದ ಪ್ರಥಮ ಉಪಲಬ್ದ ಗ್ರಂಥ “ಕವಿರಾಜ ಮಾರ್ಗ”ದ ಕರ್ತೃ ನೃಪತುಂಗನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಕನ್ನಡದಲ್ಲಿ ಮೌಲಿಕ ಸಾಹಿತ್ಯ ರಚನೆ ಮಾಡಿರುವ ಹಿರಿಯ ಸಾಹಿತಿಯೊಬ್ಬರಿಗೆ ಪ್ರತೀ ವರ್ಷ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ.…
1 ಏಪ್ರಿಲ್ 2023, ಬೆಂಗಳೂರು: ದಿನಾಂಕ 29-03-2023 ಬುಧವಾರ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಹಾಗೂ ವಸಂತ ಪ್ರಕಾಶನ ಬೆಂಗಳೂರು ಸಹಯೋಗದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೈದೇಹಿಯವರನ್ನು ಅಭಿನಂದಿಸಲಾಯಿತು. “ಸ್ತ್ರೀವಾದಕ್ಕೆ ಹೊಸ ಆಯಾಮ ನೀಡಿದವರು ಲೇಖಕಿ ವೈದೇಹಿ. ಅವರು ‘ಅಕ್ಕು’ ಪಾತ್ರದ ಮೂಲಕ ಸ್ತ್ರೀಯ ತಾಳ್ಮೆ, ಹುದುಗಿದ ಶಕ್ತಿ ಅನಾವರಣಗೊಳಿಸಿದ್ದಾರೆ” ಎಂದು ಹಿರಿಯ ವಿಮರ್ಶಕ ಪ್ರೊ. ಸಿ.ಎನ್. ರಾಮಚಂದ್ರನ್ ಹೇಳಿದರು. ಇದೇ ಸಂದರ್ಭದಲ್ಲಿ ಸಾಹಿತಿ ಲಲಿತಮ್ಮ ಚಂದ್ರಶೇಖರ್ ಇವರ “ನೆನಪಿನ ಉಗ್ರಾಣ” ಕೃತಿ ಬಿಡುಗಡೆ ಮಾಡಲಾಯಿತು. ಡಾ. ವೈದೇಹಿಯವರಿಗೆ ಅಭಿನಂದನೆ
ಕಾಸರಗೋಡು ಜಿಲ್ಲೆಯ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿರುವ ಡಾ. ಸುಭಾಷ್ ಪಟ್ಟಾಜೆ ಅವರ ‘ಕಥನ ಕಾರಣ- ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳ ಅಧ್ಯಯನ’ ಎಂಬ ಅಧ್ಯಯನ ಕೃತಿಯನ್ನು ಓದುವಾಗ ಎಂ. ಗೋವಿಂದ ಪೈಗಳು 1947ರಲ್ಲಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚಿತ್ತಾಯರ ‘ಸ್ವರಾಜ್ಯ ಗೀತಾ ಲೋಕ’ಕ್ಕೆ ಬರೆದ ಮುನ್ನುಡಿಯ ಸಾಲುಗಳು ನೆನಪಾದವು. “ಇವುಗಳಲ್ಲಿ ಒಂದೊಂದೇನೋ ಕುಂದು ಇರಲೂಬಹುದು. ಇಲ್ಲದಿರಲೂಬಹುದು. ಯಾರಲ್ಲಿ ಇಲ್ಲ? ಎಷ್ಟೆಂದರೂ ಮನುಷ್ಯರು ಸರ್ವಥಾ ಅಪೂರ್ಣ. ಅಥವಾ ಮನುಷ್ಯರೇ ಏಕೆ? ಸೃಷ್ಟಿಯೇ ಅಪರ್ಯಾಪ್ತ. ಪ್ರಕೃತಿಯೇ ವಿಕಲ. ಆದರೆ ಅಂಥಾ ಕೊರತೆಗಳನ್ನು ಮುಟ್ಟಿ ತೋರಿಸುವುದು ಮುನ್ನುಡಿಗಾರನ ಕೆಲಸವಲ್ಲ. ಸರ್ವಥಾ ಅಲ್ಲ. ಅದಕ್ಕೆ ಸಹಸ್ರಾಕ್ಷನಾದ ವಿಮರ್ಶಕನಿದ್ದಾನೆ. ಭಾಪು ಭಾಪು ಎಂದು ತನ್ನ ಲೇಖಕನ ಬೆನ್ನು ಚಪ್ಪರಿಸುವುದು, ಜಾಗು ಜಾಗು ಎಂದು ಆತನನ್ನು ಹುರಿದುಂಬಿಸುವುದು ಇದಷ್ಟೇ ಮುನ್ನುಡಿಗಾರನ ಕೆಲಸ. ಮುನ್ನುಡಿಗಾರನು ಪುರೋಹಿತನಂತೆ ತನ್ನ ಬಳಿಗೆ ಬಂದಾತನ ಪೌರೋಹಿತ್ಯವನ್ನು ನಡೆಸಿ, ಅವನಿಗೆ ಶ್ರೇಯಸ್ಸನ್ನು ಕೋರಿ ಆಶೀರ್ವದಿಸಬೇಕು. ಆತನ ಊಣಿಗಳ…