Subscribe to Updates
Get the latest creative news from FooBar about art, design and business.
Author: roovari
ಕುಮಾರಸ್ವಾಮಿ ತೆಕ್ಕುಂಜ ಇವರು ಈಗಾಗಲೇ ತಮ್ಮ ಕಥೆ-ಕಾದಂಬರಿ-ಪ್ರಬಂಧ ಸಂಕಲನಗಳ ಮೂಲಕ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಈಗ ಅವರ ‘ಬದುಕು ಮಾಯೆಯ ಮಾಟ’ ಎಂಬ ಒಂದು ಕಾದಂಬರಿ ಪ್ರಕಟವಾಗಿದೆ. ಮುಂಬಯಿ ಬದುಕಿನ ಅನುಭವವುಳ್ಳ ಇವರು ತಮ್ಮ ಈ ಹಿಂದಿನ ಕಥಾಸಂಕಲನ ‘ವಡಾಪಾವ್’ನಲ್ಲಿ ಮಾಡಿದಂತೆ ಇಲ್ಲಿಯೂ ನಮ್ಮನ್ನು ಮುಂಬಯಿಯ ಗಲ್ಲಿಗಳಲ್ಲಿ ಸುತ್ತಿಸುತ್ತಾರೆ. ಇದು ಒಂದು ಸಾಮಾಜಿಕ ಕಾದಂಬರಿ. ಕಥಾನಾಯಕಿ ಪುಷ್ಪಾ ಕರಾವಳಿ ಜಿಲ್ಲೆಯ ಮುಂಡಕ್ಕೂರು ಎಂಬ ಹಳ್ಳಿಯಲ್ಲಿ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದವಳು. ಇಬ್ಬರು ತಮ್ಮಂದಿರಿದ್ದರೂ ಅಪ್ಪನಿಗೆ ಮಗಳೇ ಅಚ್ಚುಮೆಚ್ಚು. ಮಗಳ ಕಡೆಗೆ ಅಪ್ಪನ ಗಮನ ಕಡಿಮೆಯಾದದ್ದಕ್ಕೋ ಏನೋ ಪುಷ್ಪಾ ಓದಿನಲ್ಲಿ ಬುದ್ಧಿವಂತಳಾಗಿದ್ದರೂ ಹದಿವಯಸ್ಸಿನಲ್ಲೇ ಸಿಕ್ಕ ಸಿಕ್ಕ ಗಂಡು ಮಕ್ಕಳ ಹಿಂದೆ ಹೋಗಿ ಯೌವನದ ತೀಟೆಯನ್ನು ತೀರಿಸಿಕೊಳ್ಳುತ್ತ ಜಾರುತ್ತ ಹೋಗುತ್ತಾಳೆ. ಅವಳು ಗರ್ಭ ತೆಗೆಸಿಕೊಂಡ ಸುದ್ದಿ ಊರಲ್ಲಿ ಹರಡುವ ಮುನ್ನವೇ ಎಚ್ಚರಗೊಂಡ ಅಮ್ಮ ಅವಳ ಕೈಗೆ ಒಂದಷ್ಟು ಹಣ ಕೊಟ್ಟು ‘ಮನೆ ಬಿಟ್ಟು ಎಲ್ಲಾದರೂ ಹೋಗು’ ಎಂದು ಸಿಟ್ಟಿನಿಂದ ಹೇಳುತ್ತಾಳೆ. ಸ್ವಾಭಿಮಾನಿ ಪುಷ್ಪಾ ಮರುದಿನವೇ…
ಮಂಗಳೂರು : ತಬ್ಲಾ ಸೋಲೋ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆ ಹಾಗೂ ರಾಗ, ತಾಳಗಳ ಕುರಿತು ಮಾಹಿತಿ ನೀಡುವ ರಿಮ್ಜಿಮ್ ಬೈಠಕ್ ನ್ನು ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನವು ದಿನಾಂಕ 24 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲ್ನಲ್ಲಿರುವ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದ ಪೂರ್ವಾರ್ಧದಲ್ಲಿ ತಲ್ಲಾ ಸೋಲೋ ಕಾರ್ಯಕ್ರಮವನ್ನು ಧಾರವಾಡದ ಯುವ ಕಲಾವಿದ ಹೇಮಂತ್ ಜೋಶಿ ನಡೆಸಿಕೊಡಲಿದ್ದಾರೆ. ಉತ್ತರಾರ್ಧದಲ್ಲಿ ಬೆಂಗಳೂರಿನ ಯುವ ಗಾಯಕ ಅನಿರುದ್ಧ ಐತಾಳ್ ಹಾಡಲಿದ್ದಾರೆ. ಹಾರ್ಮೋನಿಯಂನಲ್ಲಿ ಗೋವಾದ ದತ್ತರಾಜ್ ಮಾಲ್ಶಿ ಸಹಕರಿಸಲಿದ್ದಾರೆ. ಪ್ರಸ್ತುತಪಡಿಸುವ ರಾಗಗಳ ಕುರಿತು ಸಂಪೂರ್ಣ ಮಾಹಿಸಿ, ರಾಗದ ಶ್ರೀಮಂತಿಕೆ, ಏರಿಳಿತ ಹಾಗೂ ಶೈಲಿಗಳ ಕುರಿತು ಮಾಹಿತಿಯನ್ನು ಯುವ ಗಾಯಕ ಅನಿರುದ್ಧ ಐತಾಳ್ ನೀಡಲಿದ್ದಾರೆ. ಬಳಿಕ ಸಂಗೀತಾಸಕ್ತರ ಪ್ರಶ್ನೆಗಳಿದ್ದಲ್ಲಿ ಸಂಗೀತಗಾರರು ಉತ್ತರಿಸಲಿದ್ದಾರೆ. ಬೆಂಗಳೂರಿನ ಖ್ಯಾತ ಉದ್ಯಮಿ ಡಾ. ಪಿ. ದಯಾನಂದ ಪೈ ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಂಗೀತಾಕ್ತರೆಲ್ಲರಿಗೂ…
ಸುಳ್ಯ : ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಆಯೋಜಿಸುವ ‘ಭೀಮರಾವ್ ವಾಷ್ಠರ್ ಉತ್ಸವ’ ಸಮಾರಂಭವು ದಿನಾಂಕ 24 ಆಗಸ್ಟ್ 2025ರಂದು ಬೆಳಿಗ್ಗೆ 9-30ಕ್ಕೆ ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಭಿನಂದನಾ ಸಮಾರಂಭ, ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ರಸಮಂಜರಿ ನಡೆಯಲಿವೆ. ಕಾರ್ಯಕ್ರಮದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಇವರನ್ನು ಅಭಿನಂದನಾ ಗೌರವದಿಂದ ಸನ್ಮಾನಿಸಲಾಗುವುದು. ಉತ್ಸವವನ್ನು ಸುಳ್ಯದ ಅಚ್ಚಾವರ ದೇವರಕಳಿಯ ಚೈತನ್ಯ ಸೇವಾಶ್ರಮ ಸಂಚಾಲಕರಾದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಇವರು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಪ್ರಭಾಕರ ಶಿಶಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಏಳು ಮಂದಿ ಸನ್ಮಾನಿತರ ಪರವಾಗಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ನುಡಿಗಟ್ಟು ನೀಡಲಿದ್ದು, ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷ ಇಕ್ಬಾಲ್ ಬಾಳಿಲ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಹೃದಯದ ಮಾತು ಕಾರ್ಯಕ್ರಮದಲ್ಲಿ ಬೆಳಕು ಟ್ರಸ್ಟ್ ಅಧ್ಯಕ್ಷ ಹಾಗೂ ಸಂಜೆವಾಹಿನಿ ಪತ್ರಿಕೆಯ ಪ್ರಧಾನ…
ಬೆಂಗಳೂರು : ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಇವರ ಸ್ಮರಣಾರ್ಥ ಕಥೆಕೂಟ ಸಂಸ್ಥೆಯು ಸ್ಥಾಪಿಸಿರುವ ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ’ಕ್ಕೆ 2024ನೇ ಸಾಲಿನಲ್ಲಿ ಅನುವಾದಕ ಪ್ರೊ. ಎಸ್.ಎನ್. ಶ್ರೀಧರ್ ಹಾಗೂ 2025ನೇ ಸಾಲಿನ ಪ್ರಶಸ್ತಿಗೆ ಅನುವಾದಕಿ ಭಾಷಾ ಸಂಶೋಧಕಿ ತಮಿಳ್ ಸೆಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ.10,000/- ನಗದು ಮತ್ತು ಫಲಕವನ್ನು ಒಳಗೊಂಡಿದೆ. ದಿನಾಂಕ 01 ನವೆಂಬರ್ 2025ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಸಾಹಿತಿಗಳಾದ ಗಿರೀಶ್ ರಾವ್ ಹತ್ತಾರ್ (ಜೋಗಿ), ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ, ಜಿ.ವಿ. ಅರುಣ ಇದ್ದರು. ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಸ್ಮರಣಾರ್ಥ ಇವರ ಹೆಸರಿನಲ್ಲಿ ‘ಕಥಕೂಟ’ ಸಂಸ್ಥೆಯು ಪ್ರಶಸ್ತಿ ಆರಂಭಿಸಿದ್ದು, ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿ ವರ್ಷ ‘ಪ್ರೊ. ಜಿ.…
ಮಂಗಳೂರು : ಚಕ್ರಪಾಣಿ ನೃತ್ಯ ಕಲಾಕೇಂದ್ರ ಅತ್ತಾವರ ಮಂಗಳೂರು ಇವರ ವತಿಯಿಂದ 170 ಘಂಟೆ ನಿರಂತರ ಭರತನಾಟ್ಯ ಮಾಡಿ ಮ್ಯಾರಥಾನ್ ಗೋಲ್ಡನ್ ಬುಕ್ ದಾಖಲೆ ಮಾಡಿದ ರೆಮೋನಾ ಎವೆಟ್ ಪಿರೇರಾ ಇವರಿಗೆ ‘ಅಭಿನಂದನಾ ಕಾರ್ಯಕ್ರಮ’ವನ್ನು ದಿನಾಂಕ 24 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ಆಯೋಜಿಸಲಾಗಿದೆ. ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಎಂಬತ್ತು ತೊಂಬತ್ತು ಮತ್ತು ಅದರ ಆಸುಪಾಸಿನ ಸದಭಿರುಚಿಯ ಕನ್ನಡದ ಕಂಪನಿ ನಾಟಕಗಳನ್ನು ನೋಡಿದವರಿಗೆ ನೆನಪಿರಬಹುದು. ಹೆಚ್ಚಿನ ನಾಟಕಗಳಲ್ಲಿ ಪರದೆ ಎತ್ತಿದಾಕ್ಷಣ ಮನೆಯ ಮಗಳು ದೇವರಿಗೆ ನಮಿಸುತ್ತ ಒಂದು ಹಾಡು ಹೇಳುತ್ತಾಳೆ. ಪಕ್ಕದಲ್ಲೇ ನಿಂತಿರುವ ಹಿರಿಯರು ಆರತಿ ತೆಗೆದುಕೊಳ್ಳುತ್ತಾರೆ. ಹಿಂದೆಯೇ ಆ ಮನೆಯ ಹಿರಿಯ ಮಗ ಟ್ರಂಕು ಹಿಡಿದು ಪ್ರವೇಶಿಸುತ್ತಾನೆ. ಹಿರಿಯರಿಗೆ ಕೈ ಮುಗಿಯುತ್ತಾ “ಅಪ್ಪಾ, ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಹೊರಟಿದ್ದೇನೆ. ರೈಲಿಗೆ ತಡವಾಗುತ್ತದೆ ನಾನು ಹೊರಡುವೆ” ಎಂದು ಟ್ರಂಕ್ ಎತ್ತಿಕೊಂಡು ಹೊರಡುತ್ತಾನೆ. ಕನ್ನಡದ ರಂಗಭೂಮಿಯೂ ರೈಲು ಪ್ರಯಾಣವೂ ಟ್ರಂಕೂ ಕನೆಕ್ಟ್ ಆಗುವದು ಹೀಗೆ. ಇಂಥ ಟ್ರಂಕ್ ನ್ನು ರೂಪಕವಾಗಿಯೂ ಪರಿಕರವಾಗಿಯೂ, ವಾದ್ಯವಾಗಿಯೂ ಇಟ್ಟುಕೊಂಡು ‘ಕುಹೂ’ ಎನ್ನುವ ಕಥಾನಕವೊಂದನ್ನು ಕಟ್ಟುತ್ತಾರೆ ಅರುಣಲಾಲ್. ಈ ಕಟ್ಟುವಿಕೆಯ ಹಿಂದೆ ವಿಸ್ತರವಾದ ರಿಸರ್ಚ್ ಇದೆ. ರೈಲಿನ ಬೋಗಿಗಳಲ್ಲಿ ಘಟನೆಗಳನ್ನ ಪ್ರಭಾವಶಾಲಿಯಾಗಿ ತುಂಬಿ ತುಂಬಿ ಕಳಿಸುವ ಜಾಣತನವಿದೆ. ‘ಕುಹೂ’ನ ಜೊತೆಗಿನ ನಮ್ಮ ಪ್ರಯಾಣ ಮುಂದುವರಿದಂತೆ ನಾವು ಇತಿಹಾಸಕ್ಕೂ ವರ್ತಮಾನಕ್ಕೂ ನಡುವೆ ಜೀಕುತ್ತ ಘಟನೆಗಳಿಗೆಲ್ಲ ಸಾಕ್ಷಿಗಳಗುತ್ತ ಹೋಗುತ್ತೇವೆ. ಪ್ರಾರಂಭದಲ್ಲೇ…
ಹಾರೂಗೇರಿ : ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ಮತ್ತು ಪ್ರೇರಣ ಸಾಹಿತ್ಯ ಪರಿಷತ್ತು ಇವುಗಳ ವತಿಯಿಂದ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಸಂಗಮೇಶ ನಾಯಿಕರವರ ಚೊಚ್ಚಲ ಕವನ ಸಂಕಲನ ‘ಮೌನ ಮಧುರ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 24 ಆಗಸ್ಟ್ 20255ರಂದು ಮುಂಜಾನೆ 10-00 ಗಂಟೆಗೆ ಹಾರೂಗೇರಿ ಎಸ್.ಪಿ.ಎಮ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಕವಿ ಎ.ಎನ್. ರಮೇಶ ಗುಬ್ಬಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ಪ್ರೇರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಾದ ಡಾ. ಡಿ. ಪ್ರಾನ್ಸಿಸ್ ಕ್ಸೇವಿಯರ್ ಇವರು ಉದ್ಘಾಟನೆ ಮಾಡಲಿದ್ದಾರೆ. ಡಾ. ವಿ.ಎಸ್. ಮಾಳಿ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಸಹಾಯಕ ಪ್ರಾಧ್ಯಾಪಕರಾದ ಡಾ. ರಮೇಶ ಕಮತಗಿ ಇವರು ಕೃತಿ ಪರಿಚಯ ಮಾಡಲಿದ್ದಾರೆ.
ಮಂಗಳೂರು : ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಅಪರೇಟಿವ್ ಸೊಸೈಟಿ ಲಿ., ಇದರ ವಜ್ರಮಹೋತ್ಸವ ಮತ್ತು ಸ್ಥಾಪಕರ ದಿನಾಚರಣೆ ಪ್ರಯುಕ್ತ ‘ಚಿತ್ರ ಸಿಂಚನ -2025’ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. 8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಕಿರಿಯರ ವಿಭಾಗ ಮತ್ತು ಹಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 0824 2451320, 9972644237 ಮತ್ತು 9845220198 ಸಂಖ್ಯೆಯನ್ನು ಸಂಪರ್ಕಿಸಿರಿ. ಸೂಚನೆಗಳು: • A3 ಸೈಜ್ ಡ್ರಾಯಿಂಗ್ ಶೀಟ್. • ವಾಟರ್ ಕಲರ್ ಅಥವಾ ಅಕ್ರಿಲಿಕ್ ಕಲರ್ ಬಳಸಬಹುದು. • ನೈಜವಾಗಿ ಬಿಡಿಸಿದ ಬಹುವರ್ಣದ ಚಿತ್ರಗಳಾಗಿರಬೇಕು. • ಸೃಜನಶೀಲತೆ, ಬಣ್ಣ ಸಂಯೋಜನೆ, ಅಚ್ಚುಕಟ್ಟಾಗಿರುವಿಕೆಗೆ ಆದ್ಯತೆ ನೀಡಲಾಗುವುದು. • ದಿನಾಂಕ 31-08-2025ರೊಳಗೆ ತಾವು ಬಿಡಿಸಿದ ಚಿತ್ರದಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿಭಾಗ ನಮೂದಿಸಿ ಈ ಮೇಲೆ ನೀಡಿರುವ ವಿಳಾಸಕ್ಕೆ ಕಳುಹಿಸಿಕೊಡಬೇಕು. • ದಿನಾಂಕ 08-09-2025ರಂದು ಸೋಮವಾರಿ ಸಂಸ್ಥಾಪಕರ ಜನ್ಮದಿನದಂದು ಅಂತಿಮ ಸುತ್ತಿಗೆ ಆಯ್ಕೆಯಾದ ಎರಡು ವಿಭಾಗದ ತಲಾ 5 ಮಂದಿಗೆ LIVE…
ಬೆಂಗಳೂರು : ಮಂದಾರ ಗಾಯನ ಚೇತನ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ಡಾ. ಕಾ. ವೆಂ. ಶ್ರೀನಿವಾಸ ಮೂರ್ತಿ ವಿರಚಿತ ಭಾವಗೀತೆ, ಕನ್ನಡಪರ ಗೀತೆ ಹಾಗೂ ಜನಪದ ಗೀತೆಗಳ ‘ಕಾರ್ಯಾಗಾರ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 24 ಆಗಸ್ಟ್ 2025ರಂದು ಬೆಂಗಳೂರು ಜೆ.ಸಿ. ರಸ್ತೆ, ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 2-00 ಗಂಟೆಗೆ ಕಾರ್ಯಾಗಾರ ಮತ್ತು 5-30 ಗಂಟೆಗೆ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಗಾಯಕರು ಸಂಸ್ಥೆಯ ಅಧ್ಯಕ್ಷರೂ ಸಂಘಟಕರೂ ಆದ ಎರ್ರಿಸ್ವಾಮಿ ಎಚ್. ಇವರನ್ನು 9743060285 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಉಡುಪಿ : ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ. ಇವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಮಣಿಪಾಲದ ರತ್ನ ಸಂಜೀವ ಕಲಾಮಂಡಲ ವತಿಯಿಂದ ‘ನವರಸ ದೀಕ್ಷಾ ವೈಭವಂ’ ಎಂಬ ಶಿರೋನಾಮೆಯಲ್ಲಿ ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ದಿನಾಂಕ 21 ಆಗಸ್ಟ್ 2025ರ ಗುರುವಾರ ಚಾಲನೆ ನೀಡಿದರು. ದಿನಾಂಕ 21 ಆಗಸ್ಟ್ 2025ರಿಂದ 30 ಆಗಸ್ಟ್ 2025ರವರೆಗೆ 216 ಗಂಟೆಗಳ ಒಟ್ಟು ಒಂಬತ್ತು ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ. ರಘುಪತಿ ಭಟ್, “ಯಾವುದೇ ಸಾಧನೆ ಮಾಡುವುದಕ್ಕೆ ಧೈರ್ಯ ಮತ್ತು ಸಂಕಲ್ಪ ಬೇಕು. ಉಡುಪಿಯ ಕುವರಿ ತಾನು ಕಲಿತ ಕಾಲೇಜಿನಲ್ಲಿಯೇ ಈ ವಿನೂತನ ಸಾಧನೆಯತ್ತ ಮುನ್ನುಗ್ಗಿರುವುದು ವಿಶೇಷ. ಅವರ ಸಂಕಲ್ಪಕ್ಕೆ ಯಶಸ್ಸು ಸಿಗಲಿ” ಎಂದು ಶುಭ ಹಾರೈಸಿದರು. ಕಲಾಗುರು ಶ್ರೀಧರ ರಾವ್ ಬನ್ನಂಜೆ…