Author: roovari

ಬೆಂಗಳೂರು : ರಂಗಪಯಣ (ರಿ.) 16ನೇ ವರ್ಷದ ಸಂಭ್ರಮದ ಪ್ರಯುಕ್ತ ಅರ್ಪಿಸುವ ‘ಫೂಲನ್ ದೇವಿ’ ನಾಟಕ ಪ್ರದರ್ಶನವನ್ನು ದಿನಾಂಕ 31 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ರಾಜಗುರು ಹೊಸಕೋಟೆ ಇವರು ರಂಗವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 99641 40723 ಮತ್ತು 88847 64509 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಆಟಿ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ಬಲ್ಲಾಳ್ ಭಾಗ್ ನಲ್ಲಿರುವ ‘ಪತ್ತುಮುಡಿ’ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಗಡಿಕಾರ ಗೋಳಿದಡಿ ಗುತ್ತು ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರು “ತುಳುವನ್ನು ಆಡುಭಾಷೆಯನ್ನಾಗಿಸಿಕೊಂಡು, ಬಳಕೆ ಮಾಡಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ತುಳುವಿನ ಅಂದ ಚೆಂದ ಅರ್ಥವಾಗಲು ಸಾಧ್ಯ. ಅಳಿದೇ ಹೋಗುವ ಬಳಕೆಯಾಗದೆ ಇರುವ ಶಬ್ದಗಳಿಗೆ ಬೆಲೆ ಬಂದು ಪ್ರಭೆಯಿಂದ ಬೆಳಗಬೇಕಾದರೆ ಇಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ. ದಿ. ದಾಮೋದರ ನಿಸರ್ಗರ ಕನಸ್ಸನ್ನು ನಿಜವಾಗಿಸುವ ಪ್ರಯತ್ನದಲ್ಲಿ ಈ ತುಳುಕೂಟ ಹೋರಾಡುತ್ತಿದೆ. ತುಳುವಿನ ವಿಷಯಕ್ಕೆ ಬಂದಾಗ ನಾವೆಲ್ಲರೂ ಕೈಜೋಡಿಸೋಣ. ಈ ವಿಷಯದಲ್ಲಿ ನನ್ನ ಸಹಿತ ಪ್ರತೀಯೋರ್ವನೂ ಹೋರಾಡಲೇಬೇಕು” ಎಂದು ತುಳುವರಿಗೆ ಕರೆಯಿತ್ತರು. ಸುಮನಾ ರೆಸಿಡೆನ್ಸಿಯ ಮ್ಹಾಲಕಿ ಹಾಗೂ ಮಹಿಳಾ ಮುಂದಾಳು ಶ್ರೀಮತಿ ಸುಮಲತಾ ಎನ್. ಸುವರ್ಣರು “ಇಂದು ತುಳುಕೂಟವನ್ನು ಮುನ್ನಡೆಸುವಲ್ಲಿ ಹೇಮಾ ದಾಮೋದರ ನಿಸರ್ಗರು ಹೊಣೆ…

Read More

ಬೆಂಗಳೂರು : ಅಭಿನಯ ತರಂಗ ನಾಟಕ ಶಾಲೆ ಇದರ ವತಿಯಿಂದ ಒಡನಾಡಿ ಬಂಧು ಸಿ.ಜಿ.ಕೆ. -75 ಮಾಸದ ನೆನಪು ಸರಣಿ ನಾಟಕೋತ್ಸವ ಕಾರ್ಯಕ್ರಮವನ್ನು ದಿನಾಂಕ 30 ಜುಲೈ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ ನಯನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಎರಡು ಕತೆಗಳು .. ಮತ್ತೊಂದು’ ವೀಣಾ ಶಾಂತೇಶ್ವರರ ‘ಕೊನೆಯ ದಾರಿ’ ಹಾಗೂ ವೈದೇಹಿಯವರ ‘ಸಲ್ಮಾ ಮತ್ತು ಸುರಭಿ’ ಮಂಜು ಬಡಿಗೇರ್ ಇವರ ನಿರ್ದೇಶನದಲ್ಲಿ ಹಾಗೂ ಕೊರಡ್ಕಲ್ ಶ್ರೀ ನಿವಾಸರಾವ್ ರವರ ‘ಧನಿಯರ ಸತ್ಯನಾರಾಯಣ’ ಸಚಿನ್ ಭದ್ರಾವತಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಸಿ.ಜಿ.ಕೆ. -75 ಕಿರು ನಾಟಕಗಳ ಉತ್ಸವ ಸಮಿತಿ, ನಾಟಕ ಬೆಂಗ್ಳೂರು ಮತ್ತು ಹವ್ಯಾಸಿ ರಂಗ ತಂಡಗಳು ಈ ಕಾರ್ಯಕ್ರಮದಲ್ಲಿ ಸಹಕರಿಸಲಿದ್ದಾರೆ.

Read More

ಬ್ರಹ್ಮಾವರ : ಯಕ್ಷಶಿಕ್ಷಣ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಬ್ರಹ್ಮಾವರದ ನಿರ್ಮಲ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯ ಉದ್ಘಾಟನೆಯು ದಿನಾಂಕ 26 ಜುಲೈ 2025ರಂದು ನೆರವೇರಿತು. ಶಾಲೆಯ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಮಥಿಯಾಸ್ ಡಯಾಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್, ಹಿರಿಯ ಪತ್ರಕರ್ತರಾದ ಚಿತ್ತೂರು ಪ್ರಭಾಕರ್ ಆಚಾರ್ಯ, ಯಕ್ಷಗಾನ ಗುರುಗಳಾದ ಶರತ್ ರಾಜ್ ಆರೂರು ಹಾಗೂ ಯಕ್ಷಗಾನ ಉಸ್ತುವಾರಿ ಶಿಕ್ಷಕಿ ಶ್ರೀಮತಿ ಅನುರಾಧ ಉಪಸ್ಥಿತರಿದ್ದರು.

Read More

ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಕುಕ್ಕುದಕಟ್ಟೆ, ಪರ್ಕಳ ಇದರ ವೇದಿಕೆಯಲ್ಲಿ ದಿನಾಂಕ 01 ಆಗಸ್ಟ್ 2025ರ ಶುಕ್ರವಾರದಂದು ಸಂಜೆ 4-00 ಗಂಟೆಗೆ ಗಡಿನಾಡಿನ ಧೀರೆ ದಿ. ಪ್ರೇಮ ಕೆ. ಭಟ್ ತೊಟ್ಟೆತ್ತೋಡಿ ಇವರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಮಂಗಳಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ಗಣಪತಿ ಭಟ್, ಶ್ರೀ ರಾಜಾರಾಮ ರಾವ್ ಮೀಯಪದವು, ಕ.ಸಾ.ಪ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶನಾರಾಯಣ ಭಾಗವಹಿಸಲಿದ್ದಾರೆ. ಕವಯತ್ರಿ ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನ ‘ಅಮ್ಮ ಕವನ ವಾಚನ’ ಹಾಗೂ ಮಕ್ಕಳ ತಜ್ಞರಾದ ಡಾ. ಮಹೇಶ್ ಎಂ.ಎಸ್. ಕವನ ಗಾಯನ ನಡೆಸಿಕೊಡಲಿದ್ದಾರೆ. ನಂತರ ಸಂಸ್ಮರಣಾ ಸಂಗೀತ ಕಛೇರಿಯನ್ನು 5-00 ಗಂಟೆಗೆ ಮೈಸೂರಿನ ವಿದ್ವಾನ್ ಎನ್.ಆರ್. ಪ್ರಶಾಂತ್ ನಡೆಸಿಕೊಡಲಿದ್ದು, ಇವರಿಗೆ ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಉಮಾಶಂಕರಿ ತಿಳಿಸಿರುತ್ತಾರೆ.

Read More

ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯರ ಅನುಭವಗಳು ಕಿರಿಯರ ಪಾಲಿಗೆ ದಾರಿದೀಪಗಳಾಗಿವೆ. ಅವುಗಳು ಬರಹದ ರೂಪಕ್ಕೆ ಇಳಿದರೆ ಅಮೂಲ್ಯ ನಿಧಿಗಳಾಗುತ್ತವೆ ಎಂಬುದಕ್ಕೆ ಸುನಂದಾ ಬೆಳಗಾಂವಕರರ ‘ಕೈತುತ್ತು’ ಎಂಬ ಲಲಿತಪ್ರಬಂಧಗಳ ಸಂಕಲನವು ಸಾಕ್ಷಿಯಾಗಿದೆ. ಈ ಶೀರ್ಷಿಕೆಯು ಅಜ್ಜಿಯ ಜೀವನಾನುಭವಗಳ ಪಾಠದ ಸವಿಯನ್ನು ಉಣಿಸುತ್ತದೆ. ಇಲ್ಲಿನ ಪ್ರಬಂಧಗಳು ಲೇಖಕಿಯ ಕುಟುಂಬದ ಇತಿಹಾಸವಾಗಿದೆ. ಅಜ್ಜಿಯನ್ನು ಕೇಂದ್ರವಾಗಿಟ್ಟುಕೊಂಡ ಪ್ರಬಂಧಗಳು ಕಾವ್ಯದ ಭಾವತೀವ್ರತೆ, ಪ್ರಬಂಧದ ಲಾಲಿತ್ಯಗಳನ್ನು ಮೈಗೂಡಿಸಿಕೊಂಡು ಸಣ್ಣಕತೆಗಳಂತೆ ಓದಿಸಿಕೊಂಡು ಹೋಗುತ್ತವೆ. ಅಜ್ಜಿ ಎನ್ನುವ ಪದವು ಪ್ರೀತಿ ವಾತ್ಸಲ್ಯಗಳ ಸಂಕೇತವಾಗಿದೆ. ಅವರು ಮೊಮ್ಮಕ್ಕಳನ್ನು ವಿಪರೀತ ಪ್ರೀತಿಸುತ್ತಾರೆ. ಆದರೆ ‘ಅಂತಿಂಥವಳಲ್ಲ ಈ ಅಜ್ಜಿ’ ಎಂಬ ಪ್ರಬಂಧವು ರೂಢಿಗೆ ವಿರುದ್ಧವಾಗಿದೆ. ಹೆಣ್ಣನ್ನು ಗಂಡಿನ ಅಧೀನವಾಗಿ ನೋಡುತ್ತಿದ್ದ ಕಾಲದಲ್ಲಿ, ಗಂಡನನ್ನು ದೇವರೆಂದುಕೊಂಡು ಭಯಭಕ್ತಿಯಿಂದ ಬಾಳಬೇಕಾಗಿದ್ದ ಪುರುಷ ಪ್ರಧಾನ ವ್ಯವಸ್ಥೆಯ ಆ ದಿನಗಳಲ್ಲಿ ಅಜ್ಜನ ಅಧೀನವಾಗಿ ಬಾಳದೆ ಅಜ್ಜನಿಂದ ‘ಸರಕಾರ’, ‘ಬಾಯವರ’, ‘ವಿಕ್ಟೋರಿಯ ಮಹಾರಾಣಿ’ ಎಂದು ಕರೆಸಿಕೊಂಡು ಸರಸಮಯ ದಾಂಪತ್ಯವನ್ನು ನಡೆಸುತ್ತಿದ್ದ ಅಜ್ಜಿಯು ಎಲ್ಲ ಅರ್ಥದಲ್ಲೂ ಅಜ್ಜನ ಸಹಧರ್ಮಿಣಿಯಾಗಿ ಬಾಳುತ್ತಿದ್ದರು. “ನುಡಿದರೆ ಅನುಭವ ಅರಳಿದಂತೆ. ಕೆರಳಿದರೆ…

Read More

ಚಿತ್ರದುರ್ಗ : ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ಚಿತ್ರದುರ್ಗದ ಪಿಳ್ಳೇಕಾರನ ಹಳ್ಳಿಯ ಬಾಪೂಜಿ ಸಮೂಹ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ. ರಾಜ್ಯ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ. ಎಂ. ಕೆ. ವೀರೇಶ ಚಿತ್ರದುರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಬಿ. ಟಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಎಲ್ಲ ತಾಲೂಕುಗಳಿಂದ ತಲಾ ಒಬ್ಬರು ಕವಿ ಮತ್ತು ಕವಯತ್ರಿಯರು ಭಾಗವಹಿಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ “ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷರೊಂದಿಗೆ ಚರ್ಚಿಸಿ ಪ್ರತೀ ತಾಲೂಕಿನಿಂದ ತಲಾ ಒಬ್ಬರು ಕವಿ, ಒಬ್ಬರು ಕವಯಿತ್ರಿ ಸೇರಿದಂತೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ದಾವಣಗೆರೆ ತಾಲೂಕಿನಿಂದ ಸನಾವುಲ್ಲಾ ನವಿಲೇಹಾಳ್‌…

Read More

ಕುರುಡಪದವು : ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಔಚಿತ್ಯ ಪೂರ್ಣ ಉದ್ಘಾಟನೆಯೊಂದಿಗೆ ಸಾಹಿತ್ಯ ಕಮ್ಮಟ ಕಾರ್ಯಕ್ರಮವು ದಿನಾಂಕ 17 ಜುಲೈ 2025ರಂದು ಕುರುಡಪದವಿನ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತವಾಗಿ ಜರಗಿತು. ಶಾಲಾ ಶಿಕ್ಷಕಿ ಅರ್ಚನಾ ಟೀಚರ್ ಪ್ರಾರ್ಥನೆ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಬಷೀರ್ ಸಾಪ್ಕೋ ಇವರು ಅಧ್ಯಕ್ಷೀಯ ಭಾಷಣದ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಪದ್ಮನಾಭ ಬರ್ಲಾಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರಾದ ಶ್ರೀಪತಿ ಭಟ್ ಪದ್ಯಾಣ ಮತ್ತು ಸಾಹಿತಿ, ಶಿಕ್ಷಕಿಯೂ ಆದ ಶ್ರೀಮತಿ ನಯನ ಗೌರಿ ಸೇರಾಜೆ ಕಾರ್ಯಕ್ರಮವನ್ನು ಜಾನಪದ ಹಾಡಿನೊಂದಿಗೆ ಸಂಯುಕ್ತವಾಗಿ ಉದ್ಘಾಟಿಸಿದರು. ತದನಂತರ ಸಂಪನ್ಮೂಲ ವ್ಯಕ್ತಿಗಳಿಬ್ಬರನ್ನು ಶಾಲಾ ವತಿಯಿಂದ ಆದರಪೂರ್ವಕವಾಗಿ ಗೌರವಿಸಲಾಯಿತು. ಶಾಲಾ ಹಿರಿಯ ಶಿಕ್ಷಕರಾದ ಗಿರೀಶ್ ಸರ್ ಎಲ್ಲರನ್ನು ಸ್ವಾಗತಿಸಿ, ಶಿಕ್ಷಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ ವಂದಿಸಿದರು. ಹಿಂದಿ ಶಿಕ್ಷಕರು, ವಿದ್ಯಾರಂಗ…

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ದ.ಕ. ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ ಜಂಟಿ ಆಶ್ರಯದಲ್ಲಿ 110ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ದಿನಾಂಕ 26 ಜುಲೈ 2025ರಂದು ಮಂಗಳೂರಿನ ಪಾಂಡೇಶ್ವರ ಸರಕಾರಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ. ಕ. ಜಿ. ಪ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ ಇಲ್ಲಿನ ಮುಖ್ಯೋಪಾಧ್ಯಾಯರಾದ ಹೆಚ್. ಕೆ. ಶಾಲಿನಿ ಅವರು ವಹಿಸಿದರು. ಮುಖ್ಯಸಂಪನ್ಮೂಲ ಅತಿಥಿಗಳಾಗಿ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ಕೋಶಾಧಿಕಾರಿ ಹಾಗೂ ವಾರ್ತಾಭಾರತಿ ದೈನಿಕ ಪತ್ರಿಕೆಯ ಚೀಪ್ ಬ್ಯೂರೋ ಆಗಿರುವ ಪುಷ್ಪರಾಜ್ ಬಿ. ಎನ್., ಶಿಕ್ಷಕಿ ಮತ್ತು ಲೇಖಕಿಯಾದ ಶ್ರೀಮತಿ ರೇಖಾ ಸುದೇಶ್ ರಾವ್, ನಿವೃತ್ತ ಶಿಕ್ಷಕಿ ಹಾಗೂ ಲೇಖಕಿಯಾದ ಸುಧಾ ನಾಗೇಶ ಭಾಗವಹಿಸಿದರು . ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಹಾಗೂ ಲೇಖಕಿ ಸುರೇಖಾ ಯಾಳವಾರ ವೇದಿಕೆಯಲ್ಲ ಉಪಸ್ಥಿತರಿದರು.

Read More

ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿರುವ ರಾಮಕೃಷ್ಣ ಕಾಲೇಜಿನಲ್ಲಿ ಯಕ್ಷ ಶರತ್ ತಂಡ ಪ್ರದರ್ಶಿಸಿದ ‘ಜಾಂಬವತಿ ಕಲ್ಯಾಣ’ ಯಕ್ಷಗಾನದ ಪ್ರದರ್ಶನವು ದಿನಾಂಕ 25 ಜುಲೈ 2025ರಂದು ಕಾಲೇಜಿನ ಯಕ್ಷವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನಸೂಯಾ ರೈ ಮಾತನಾಡಿ “ಯಕ್ಷಗಾನವು ವಿವಿಧ ಮಾಧ್ಯಮಗಳಿಂದ ವಿಶ್ವದ ಎಲ್ಲೆಡೆಯ ಕಲಾರಸಿಕರನ್ನು ತನ್ನಡೆಗೆ ಸೆಳೆಯುತ್ತದೆ. ದೃಶ್ಯ-ಶ್ರಾವ್ಯ ಕಲೆಯಾದ ಈ ಶ್ರೀಮಂತ ಕಲೆಯನ್ನು ಆರಾಧಿಸುವ ಒಂದು ವರ್ಗವೇ ಬೆಳೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕೂಡಾ ಅದನ್ನು ವಿದ್ಯಾರ್ಥಿಗಳಿಗೆ ಕಲಿಸುವ ವ್ಯವಸ್ಥೆ ಈಗಿದೆ ಇನ್ನು ಅದನ್ನು ಕಲಿಯುವ ಯುವ ಜನಾಂಗವೂ ಅಧಿಕವಾಗಿದೆ. ಗಂಡು- ಹೆಣ್ಣುಗಳೆಂಬ ಪ್ರಬೇಧವಿಲ್ಲದೇ ಇಂದು ಯಕ್ಷಗಾನ ಎಲ್ಲರಿಗೂ ಬೇಕಾಗಿರುವ ಅಂತೆಯೇ ಜೀವನ ಮೌಲ್ಯಗಳನ್ನು ವಿವರಿಸುವ ಕಲೆಯೂ ಹೌದು” ಎಂದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಶ್ರೀ ಧನರಾಜ್, ಉಪಪ್ರಾಂಶುಪಾಲೆ ಶೀಮತಿ ಪ್ರತಿಮಾ ಶೆಟ್ಟಿ, ಪದವಿಪೂರ್ವ ಕಾಲೇಜಿನ ಶ್ರೀಮತಿ ಯಶೋದಾ ಶೆಟ್ಟಿ, ಪ್ರೌಢಶಾಲಾ ಪ್ರಾಂಶುಪಾಲೆ ಪ್ರೆಸಿಲ್ಲಾ ಮೇಡಂ ಉಪಸ್ಥಿತರಿದ್ದರು. ಶ್ರೀರಾಮಕೃಷ್ಣ ವಿದ್ಯಾಸಂಸ್ಥೆಗಳ…

Read More