Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸುಂದರ ಪ್ರಕಾಶನವು ಆಯೋಜಿಸಿದ್ದ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 11 ಮೇ 2025ರಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೌರಿ ಸುಂದರ್ ಪ್ರಶಸ್ತಿ ಸಮಿತಿ ಅಧ್ಯಕ್ಷ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿ “ಯಾವುದೇ ವ್ಯಕ್ತಿಗೆ ಪ್ರಶಸ್ತಿ ದೊರೆಯುವುದು ಅವರು ಮಾಡಿದ ಕೆಲಸಕ್ಕೇ ಹೊರತು ಅವರು ನಮ್ಮ ಬಂಧು-ಬಳಗ ಅಥವಾ ಗೆಳೆಯರೆಂದಲ್ಲ. ಕಲಾವಿದರಿಗೆ ಅವರ ಕಲೆ ಜೀವನೋತ್ಸಾಹ ನೀಡುತ್ತದೆ. ಕಲೆ ಇದ್ದವರಿಗೆ ಎಂದಿಗೂ ಜೀವನ ಸಾಕಾಯಿತು ಎಂದು ಅನ್ನಿಸುವುದಿಲ್ಲ. ಅಂತೆಯೇ ಗೌರಿಸುಂದರ್ ಅವರು ಕೂಡ ಸದಾ ಜೀವನೋತ್ಸಾಹಿಯಾಗಿರುತ್ತಿದ್ದರು. ಅದಕ್ಕೆ ಅವರು ಕರಗತ ಮಾಡಿಕೊಂಡಿದ್ದ ಕಲೆಯೇ ಕಾರಣ. ಅಂತಹ ಕಲೆಯ ಸೇವೆ ಮಾಡುತ್ತಿರುವ ಡಾ. ಸುಷ್ಮಾ ಎಸ್.ವಿ.ಯವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ” ಎಂದು ಹೇಳಿದರು. ಸಾಹಿತಿ ಎಚ್. ಗೋಪಾಲಕೃಷ್ಣ, ರಂಗಕರ್ಮಿ ಗುಂಡಣ್ಣ ಮಾತನಾಡಿದರು. ನಟಿ ಡಾ. ಸುಷ್ಮಾ ಎಸ್.ವಿ.ಯವರಿಗೆ ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ…
ವಿಜಯಪುರ : ವಿದ್ಯಾಚೇತನ ಪ್ರಕಾಶನ ಇದರ ವತಿಯಿಂದ 2024ರಲ್ಲಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳಿಗೆ ಕೊಡಮಾಡುವ ‘ಬಾಲ ಸಾಹಿತ್ಯ ಚಿಗುರು ಪುರಸ್ಕಾರ’ಕ್ಕಾಗಿ ಕವನ ವಿಭಾಗದಲ್ಲಿ ಕುಮಾರಿ ಎಚ್. ವಿಧಾತ್ರೀ ರವಿಶಂಕರ್ ಇವರ ಕೃತಿ ‘ನಕ್ಷತ್ರ ಪಟಲ’ ಆಯ್ಕೆಯಾಗಿದೆ. ಇದರ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ತಿಂಗಳಲ್ಲಿ ನಡೆಯಲಿದ್ದು, ಎರಡು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು. ಶ್ರೀಯುತ ರವಿಶಂಕರ್ ಎಚ್. ಆರ್. ಹಾಗೂ ವಸಂತಿ ರವಿಶಂಕರ್ ಇವರ ಪುತ್ರಿಯಾಗಿರುವ ವಿಧಾತ್ರೀ ರವಿಶಂಕರ್, ಸರಸ್ವತಿ ವಿದ್ಯಾಲಯ ಸಿದ್ದಾಪುರದ ಆರನೇ ತರಗತಿಯ ವಿದ್ಯಾರ್ಥಿನಿ. ಎರಡು ವರ್ಷದವಳಿದ್ದಾಗಲೇ ನೂರಾ ಒಂದು ಕೌರವರ ಹೆಸರು, ಅರವತ್ತು ಸಂವತ್ಸರಗಳು, ಮಳೆ ನಕ್ಷತ್ರಗಳು, ಸಂಸ್ಕೃತದ ಸುಭಾಷಿತಗಳು, 118 ಮೂಲವಸ್ತುಗಳು, 224 ವಿಧಾನಸಭಾ ಕ್ಷೇತ್ರಗಳು, ಶ್ರೀರಾಮನ ವಂಶವೃಕ್ಷ, ಹಿಂದೂಸ್ಥಾನದ ಪ್ರಾಚೀನ 56 ದೇಶಗಳು ಮತ್ತು ಭಗವದ್ಗೀತೆ ಶ್ಲೋಕಗಳನ್ನು ನಿರರ್ಗಳವಾಗಿ ಹೇಳಿ ಹಲವಾರು ಸಭೆ ಸಮಾರಂಭಗಳಲ್ಲಿ ಭೇಷ್ ಎನಿಸಿಕೊಂಡಿದ್ದಾಳೆ. ಏಕಪಾತ್ರಾಭಿನಯ, ಭಾಷಣ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ…
ಬೆಂಗಳೂರು : ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಬೆಂಗಳೂರಿನ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ರಿಜಿಸ್ಟರ್ ಇದರ ‘ರಂಗವೈಭವ 2025’ದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 09 ಮೇ 2025ರಂದು ನಗರಬಾವಿ ಮಲ್ಲತಳ್ಳಿ ಕಲಾಗ್ರಾಮ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಿತು. ಗೀತ ರಚನೆಗಾರರು ಹಾಗೂ ಸಂಗೀತ ಸಂಯೋಜಕರು, ನಿರ್ದೇಶಕರಾದ ಡಾ. ನಾಗೇಂದ್ರ ಪ್ರಸಾದ್ ಇವರು ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಸಾಹಿತಿ, ಸಂಘಟಕಿ, ಸಮಾಜ ಸೇವಕಿ, ಡಾ. ಮಾಲತಿ ಶೆಟ್ಟಿ ಮಾಣೂರು ಮತ್ತು ಉಗ್ರವತಾರ ಚಲನಚಿತ್ರದ ನಿರ್ದೇಶಕರಾದ ಶ್ರೀ ಗುರುಮೂರ್ತಿ ಇವರುಗಳಿಗೆ ‘ಕರುನಾಡ ಕಾಯಕ ಯೋಗಿ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು. ಸಭಾ ಕಾರ್ಯಕ್ರಮವನ್ನು ಡಾ. ಮಂಜುನಾಥ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ತಾರೆ ಡಾ. ಭವ್ಯ ಪಾಟೀಲ್, ಉದ್ಯಮಿ ಸಂಜಯ್ ಕುಮಾರ್, ಬಸವರಾಜ್ ಸದ್ಲಾಪುರ, ಡಾ. ಮಂಜುಳ ಮಹಾದೇವ್, ಡಾ. ಶ್ರೀನಿವಾಸ್ ಬಾಬು, ಡಾ. ಮುನಿರಾಜು, ಡಾ. ಮಹೋನಿ ಶೋಭಾ ವೇದಿಕೆಯಲ್ಲಿದ್ದರು.…
ಬೆಳಗಾವಿ : ರಂಗಸಂಪದ ಬೆಳಗಾವಿಯ ತಂಡದ ಹೊಸ ವರ್ಷದ ರಂಗ ಚಟುವಟಿಕೆಗಳನ್ನು ದಿನಾಂಕ 17 ಮತ್ತು 18 ಮೇ 2025ರಂದು ಸಂಜೆ 6-30 ಗಂಟೆಗೆ ಪ್ರಾರಂಭ ಮಾಡುತ್ತಿದ್ದು, ವಿಶ್ವಾವಸು ನಾಟಕ ಪ್ರಾರಂಭೋತ್ಸವವನ್ನು ಪರಮಪೂಜ್ಯ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿಯವರ ಅಮೃತ ಹಸ್ತದಿಂದ ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ. ದಿನಾಂಕ 17 ಮೇ 2025ರಂದು ಧಾತ್ರಿ ರಂಗಸಂಸ್ಥೆ ಸಿರಿಗೆರೆ ತಂಡದ ‘ಶ್ರೀ ಕೃಷ್ಣ ಸಂಧಾನ’ ನಗೆ ನಾಟಕವು ಭೀಮೇಶ ಎಚ್.ಎನ್. ದಾವಣಗೆರೆ ಇವರ ನಿರ್ದೇಶನದಲ್ಲಿ ಹಾಗೂ ದಿನಾಂಕ 18 ಮೇ 2025ರಂದು ಜಗದೀಶ ಆರ್. ಜಾಣೆ ಇವರ ನಿರ್ದೇಶನದಲ್ಲಿ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ಮೇಲಿನ ಪ್ರವೇಶ ಪತ್ರವನ್ನು ಕಳೆದ ವರ್ಷದ ಎಲ್ಲಾ ಸದಸ್ಯರಿಗೆ ಮತ್ತು ಈ ವರ್ಷ ಸದಸ್ಯತ್ವ ಪಡೆದವರಿಗೆ ಕಳಿಸುತ್ತಿದ್ದೇವೆ. ಈ ವರ್ಷ ಸದಸ್ಯತ್ವ ನವೀಕರಣ ಮಾಡದೇ ಇದ್ದವರಿಗೆ ಕೂಡ ಇದೊಂದು ಸಲ ಮಾತ್ರ ಕಳಿಸುತ್ತಿದ್ದೇವೆ. ನೀವು ಈ 2025-26ರ ಸದಸ್ಯತ್ವ ಇನ್ನೂ ನವೀಕರಣ ಮಾಡಿರದೇ ಇದ್ದಲ್ಲಿ ದಯವಿಟ್ಟು…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯ ಪ್ರಯುಕ್ತ ದಿನಾಂಕ 10 ಮೇ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಭಕ್ತ ಸುಧನ್ವ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್.ಭಟ್, ಸತೀಶ್ ಇರ್ದೆ, ಪದ್ಯಾಣ ಶಂಕರನಾರಾಯಣ ಭಟ್, ಮಾಸ್ಟರ್ ಪರೀಕ್ಷಿತ್ ಹಂದ್ರಟ್ಟ, ಕುಮಾರಿ ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಸುಧನ್ವ), ಗುಡ್ಡಪ್ಪ ಬಲ್ಯ (ಅರ್ಜುನ), ಭಾಸ್ಕರ್ ಬಾರ್ಯ (ಪ್ರಭಾವತಿ), ಮಾಂಬಾಡಿ ವೇಣುಗೋಪಾಲ ಭಟ್ (ಶ್ರೀ ಕೃಷ್ಣ), ಅಚ್ಯುತ ಪಾಂಗಣ್ಣಾಯ ಕೋಡಿಬೈಲು (ಸುಗರ್ಭೆ) ಸಹಕರಿಸಿದರು. ಆನಂದ ಸವಣೂರು ಸ್ವಾಗತಿಸಿ, ರಂಗನಾಥ ರಾವ್ ವಂದಿಸಿದರು. ಅಚ್ಯುತ ಪಾಂಗಣ್ಣಾಯ ಪ್ರಾಯೋಜಿಸಿದ್ದರು.
ಬದಿಯಡ್ಕ : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ‘ಆರಿವು’ ಶೈಕ್ಷಣಿಕ ಮಾರ್ಗದರ್ಶಿ ಯೋಜನೆಯ ಕಾರ್ಯಕ್ರಮವು ದಿನಾಂಕ 10 ಮೇ 2025 ಶನಿವಾರದಂದು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ “ಶೈಕ್ಷಣಿಕ ಯಶಸ್ವಿಗಾಗಿ ವಿದ್ಯಾರ್ಥಿಗಳು ಯೋಜನೆಗಳನ್ನು ಸಿದ್ಧ ಪಡಿಸಿಕೊಳ್ಳಬೇಕು. ಗುರುಗಳ ಸಹಕಾರದಲ್ಲಿ ಉದ್ದೇಶ ಹಾಗೂ ಗುರಿಯ ಕಡೆಗೆ ನಿಖರ ಸಾಧನೆ ಮಾಡಬೇಕು. ಯುವಪ್ರತಿಭೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆ, ಅರಿವು ಮೂಡಿಸುವುದೇ ಈ ಪರಿಷತ್ತಿನ ಗುರಿ” ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ವಹಿಸಿದ್ದರು. ಡಾ. ಕೆ. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿಯವರು, ಎಸ್.ಎಸ್.ಎಲ್.ಸಿ. ನಂತರದ ಶಿಕ್ಷಣದ…
ಸುರತ್ಕಲ್ : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -11’ ಸರಣಿ ಕಾರ್ಯಕ್ರಮವನ್ನು ದಿನಾಂಕ 13 ಮೇ 2025ರಂದು ಸಂಜೆ 6-00 ಗಂಟೆಗೆ ಶ್ರೀ ನಾಟ್ಯಾಂಜಲಿ ಕಲಾ ಮಂದಿರ ಪಾರ್ವತಿ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ಗೌರವಾಧ್ಯಕ್ಷರಾದ ಕರ್ಮಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಗುರು ಶುಭಾ ಧನಂಜಯ್ ಇವರು ಉದ್ಘಾಟನೆ ಮಾಡಲಿದ್ದಾರೆ. ‘ಭರತನಾಟ್ಯ ಕಾರ್ಯಕ್ರಮದಲ್ಲಿ ಹೆಚ್ಚು ನೃತ್ಯಗಳು (ಲಯ ಪ್ರಧಾನದ್ದೇ / ಭಾವ ಪ್ರಧಾನದ್ದೇ) ಇದ್ದರೆ ಚಂದ’ ಎಂಬ ವಿಷಯದ ಬಗ್ಗೆ ನಡೆಯಲಿರುವ ಮಾತಿನ ಮಂಟಪದಲ್ಲಿ ವಿದುಷಿಯರಾದ ಸುಮಂಗಲಾ ರತ್ನಾಕರ ರಾವ್, ವಿದ್ಯಾಶ್ರೀ ರಾಧಾಕೃಷ್ಣ, ಭ್ರಮರಿ ಶಿವಪ್ರಕಾಶ್, ರಶ್ಮಿ ಉಡುಪ ಮತ್ತು ವಿದ್ಯಾ ಚಂದ್ರಶೇಖರ್ ಇವರುಗಳು ಭಾಗವಹಿಸಲಿದ್ದಾರೆ.
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ರಂಗ ಸುದರ್ಶನ (ರಿ.) ಸಸಿಹಿತ್ಲು ಪರಮ ಪದ್ಮ ಕಲಾವಿದರು ಸಾದರ ಪಡಿಸುವ ‘ಶಿವ ಪುರ್ಸಾದ ಬಬ್ಬರ್ಯ’ ನಾಟಕಕ್ಕೆ ಬಂಗಾರ ಸಡಗರ ಮತ್ತು ತುಳು ನಾಟಕ : ಬೆಳವಣಿಗೆ ಪರಿವರ್ತನೆ ವಿಚಾರ ಮಂಥನ ಕಾರ್ಯಕ್ರಮವನ್ನು ದಿನಾಂಕ 11 ಮೇ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 5-00 ಗಂಟೆಗೆ ವಾಮಂಜೂರಿನ ಅಮೃತೇಶ್ವರ ನಾಟ್ಯಾಲಯದವರಿಂದ ವಿದುಷಿ ಚಿತ್ರಾಕ್ಷಿ ಅಜಿತ್ ಕುಮಾರ್ ಇವರ ನಿರ್ದೇಶನಅಲ್ಲಿ ‘ತುಳು ನೃತ್ಯ ಸಿರಿ’ ಮತ್ತು ಮತ್ತು ‘ತುಳು ಪದ ರಂಗಿತ’ ಪ್ರಸ್ತುತಗೊಳ್ಳಲಿದೆ. 6-00 ಗಂಟೆಗೆ ಬಬ್ಬರ್ಯ ಜಾನಪದ ಐತಿಹಾಸಿಕ ನಾಟಕದ ಬಂಗಾರ ಸಡಗರ ಮತ್ತು ತುಳು ನಾಟಕ : ಬೆಳವಣಿಗೆ ಪರಿವರ್ತನೆ ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯನ್ನು ತಾರಾನಾಥ ಗಟ್ಟಿ ಕಾಪಿಕಾಡ್ ಇವರು ವಹಿಸಲಿದ್ದು, ಹೊಟೇಲ್ ರಂಗೋಲಿಯ ಮಾಲಕರಾದ ಚಂದ್ರಹಾಸ ಶೆಟ್ಟಿ…
ಬೆಂಗಳೂರು : ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಜಾಲಹಳ್ಳಿ ಬೆಂಗಳೂರು ಇವರಿಂದ ಪೌರಾಣಿಕ ಯಕ್ಷಗಾನ ಕಥಾ ಪ್ರಸಂಗ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನವನ್ನು ದಿನಾಂಕ 17 ಮೇ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಆರ್.ಟಿ. ನಗರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಭಾಗವತರು – ಶ್ರೀ ಸುಬ್ರಾಯ ಹೆಬ್ಬಾರ್, ಮದ್ದಳೆ – ಶ್ರೀ ಸಂಪತ್ ಆಚಾರ್ಯ, ಚೆಂಡೆ – ಶ್ರೀ ಮನೋಜ್ ಆಚಾರ್ಯ ಹಾಗೂ ಮುಮ್ಮೇಳದಲ್ಲಿ ಬಾಲ ಗೋಪಾಲ – ಗಾನವಿ ಡಿ., ಬಾಲ ಗೋಪಾಲ/ಕುಬೇರ – ಐಸಿರಿ ಯು., ಸುದರ್ಶನ – ಪ್ರಶ್ಚಿಲ್ ಪಿ., ವಿಷ್ಣು – ಬಿ.ಕೆ. ವಿನುತಾ, ಲಕ್ಷ್ಮೀ – ಅನನ್ಯ ಕಿಣಿ, ದೇವೇಂದ್ರ – ವಿದ್ಯಾ ನಾಯ್ಕ್, ಅಗ್ನಿ – ದಿವ್ಯಾ ಎಂ.ಎನ್., ವರುಣ – ದಿಪ್ತಿ ಎಂ.ಎನ್., ಶತ್ರುಪ್ರಸೂದನನ ಮಂತ್ರಿ – ಶಶಿಕಲಾ ದಯಾನಂದ್, ಕುಶ – ಅಮೃತ್ ಎಂ. ಆಚಾಯ, ಲವ – ಕೌಸ್ತುಭ್ ಜಿ.…
ಕಟೀಲು : ತುಳು ವರ್ಲ್ಡ್ ಫೌಂಡೇಷನ್ ಇದರ ವತಿಯಿಂದ ತುಳುವೆರೆ ಆಯನೊ ಕೂಟ ಕುಡ್ಲ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪದವಿ ಕಾಲೇಜು ಕಟೀಲು ಇವರ ಸಹಯೋಗದಲ್ಲಿ ದಿನಾಂಕ 24 ಮೇ 2025ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಡಿಗ್ರಿ ಕಾಲೇಜಿನಲ್ಲಿ ಬೆಳಗ್ಗೆ 10-00 ಗಂಟೆಯಿಂದ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ ನಡೆಯಲಿದೆ. ಜಗತ್ತಿನ ಅತ್ಯಂತ ಪ್ರಾಚೀನ ಯುದ್ಧಕಲೆ ಎಂದು ಖ್ಯಾತಿ ಪಡೆದ ‘ಕಳರಿ’ ಪೈಟ್ ತುಳುನಾಡಿನಿಂದಲೇ ಉದ್ಭವವಾಗಿದೆ ಎಂಬುದು ಹೆಮ್ಮೆಯ ವಿಷಯ. ಹಿಂದೆ ದಕ್ಷಿಣ ಕನ್ನಡ, ಕಣ್ಣೂರು, ವಯನಾಡು ಮತ್ತು ಕೊಝೀಕೋಡ್ ಭಾಗಗಳನ್ನೊಳಗೊಂಡ ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವು ಯುದ್ಧಕಲೆ ಅಭ್ಯಾಸದ ಪ್ರಬಲ ಕೇಂದ್ರವಾಗಿತ್ತು. ಕೇರಳದಲ್ಲೂ ಇದನ್ನು ‘ತುಳುನಾಡನ್ ಕಳರಿ’ ಎಂದೇ ಕರೆಯುತ್ತಾರೆ. ಪುರಾವೆಗಳ ಪ್ರಕಾರ, ಹಲವಾರು ರಾಜರು ಹಾಗೂ ಸೇನಾ ನಾಯಕರು ತುಳುನಾಡಿಗೆ ಬಂದು ಕಲರಿ ಪೈಟ್ ಕಲಿತಿದ್ದರು. ಕೋಟಿ ಚೆನ್ನಯರು ಗರಡಿಗಳ ಮೂಲಕ ಈ ಕಲೆಯ ಉಳಿವಿಗೆ ಶ್ರಮಿಸಿದರು. ಅವರ…